ಬೆಂಗಳೂರು ಈಗ ಬೃಹತ್ ಆಗಿ ಬೆಳೆದಿದೆ..ಬೆಳೆಯುತ್ತಲೇ ಇದೆ, "ಬೃಹತ್ ಬೆಂಗಳೂರು" ಎಂದು ಕರೆದು ಏನೇನೋ ಅಭಿವೃದ್ದಿ!! ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ,ಮಾಡಲಿ, ಅವರಿಗೆ ಜಯವಾಗಲಿ... ಈ ಬೃಹತ್ ಬೆಂಗಳೂರಿನಲ್ಲಿ ನನ್ನದೊಂದಷ್ಟು ಪುಟ್ಟ ಆಸೆಗಳಿವೆ, ನನ್ನ ಜೊತೆಗೂಡುತ್ತೀರಾ ?? ಪಟ್ಟಿ ಹೀಗಿದೆ...
1) ಸದಾ ಜನಭರಿತವಾಗಿರುವ J C ರೋಡಿನಲ್ಲಿ Townhall ಕಡೆ ಇಂದ Lalbagh ಕಡೆಗೆ ಬೈಕಿನಲ್ಲಿ ವೇಗವಾಗಿ ಸಾಗಬೇಕು ರಾತ್ರಿ 10ರ ಸಮಯದಲ್ಲಿ, ಅಲ್ಲಿ ಏಕಮುಖ ಸಂಚಾರ ಇದೆ ಎಂದು ನಿಮಗೆ ಗೊತ್ತಲ್ಲವೆ? ಹಾಗೆ ಒಮ್ಮೆ ವಿರುದ್ದ ದಿಕ್ಕಿನಲ್ಲಿ ಓಡಿಸಿಕೊಂಡು ಹೋಗಬೇಕು..
2) 501,201, ಈ ಸರಣಿಯ ಬಸ್ಸುಗಳನ್ನು ನೋಡಿದರೆ ಏನೋ ಪುಳಕ, ಕಾರಣ ಅದು ring ರೋಡಿನಲ್ಲಿ ಪ್ರದಕ್ಷಿಣೆಹಾಕುತ್ತದೆ, ಒಂದು ಟ್ರಿಪ್ಪಿಗೆ ಏನಿಲ್ಲವೆಂದರೂ 4-5ಗಂಟೆ ಸಮಯ ಹಿಡಿಯುತ್ತದೆ, ಆ ಬಸ್ಸುಗಳಲ್ಲಿ ಕಿಟಕಿಯ ಪಕ್ಕ ಕೂತು ನಗರವನ್ನು ನೋಡಬೇಕು, ಆದರೆ ಹಾಗೆ ಕೂತರೆ ಕಂಡಕ್ಟರ್ ಮಹಾಶಯನ ಬಯ್ಗುಳಕ್ಕೆ ಬಲಿಯಾಗಬೇಕಾಗುತ್ತದೆ ಎಂದು ಅರುಣ ಹೇಳಿದ, ಆದಷ್ಟು ಬೇಗ ಸಮಯ ಮಾಡಿಕೊಂದು ಬನಶಂಕರಿ ಬಸ್ ನಿಲ್ದಾಣಕ್ಕೆ ಪೋಗುವೇನ್!!.. ನನ್ನೀ ಪ್ರಯಾಣದ ಬಗ್ಗೆ ಒಂದು ಲೇಖನವನ್ನು ಬರೆಯಬೇಕು...
3) ರವಿ ಬೆಳಗೆರೆಯವರ "ಪಾಪಿಗಳ ಲೋಕದಲ್ಲಿ" ಒದಿದಾಗಲಿಂದಲೂ ಶ್ರೀರಾಂಪುರದ ಬಗ್ಗೆ ವಿಶೇಷ ಒಲವು, ರೌಡಿಗಳ ತವರು ಎಂದು, ಆ ಏರಿಯಾಕ್ಕೆ ಹೋಗಿ ಒಬ್ಬ ರೌಡಿ ಇನ್ನೊಬ್ಬ ರೌಡಿಯನ್ನು ಅಟ್ಟಾಡಿಸಿಕೊಂಡು ಹೋಗುವುದೋ, ಕತ್ತರಿಸಿ ಹಾಕುವುದೋ, ಅಥವಾ "ಡೀಲ್" ಗಳನ್ನು ರೌಡಿಗಳು ಕುದುರಿಸುವುದನ್ನು ಕಣ್ತುಂಬಿಕೊಳ್ಳಬೇಕು.
4) ಮೈಸೂರು ರಸ್ತೆಯಲ್ಲಿ 24hrs ತೆರೆದಿರುವ ಕಾಫಿ ಡೆ ಇದೆಯಂತೆ, ಅಲ್ಲಿ ಮಧ್ಯರಾತ್ರಿ 3ರ ಹೊತ್ತಿಗೆ ಹೋಗಿ ಕಾಫಿ ಕುಡಿಯಬೇಕು....
5) N R ಕಾಲೊನಿಯಲ್ಲಿ "ಕಟ್ಟೆ ಬಳಗ" ಎಂಬ ಒಂದು ಜಾಗವಿದೆ, ಮಧ್ಯ ಸಣ್ಣ ಜಾಗ, ಅದರ ಇಕ್ಕೆಲಗಳಲ್ಲಿ ರಸ್ತೆ, ದಟ್ಟ ಮರಗಳ ಆಶ್ರಯವಿದೆ, ಅಲ್ಲಿ ಕೂತು ಆಪ್ತ ಗೆಳೆಯರೊಡನೆ ಹರಟೆ ಹೊಡೆಯಬೇಕು....
ಪುಟ್ಟ ಪುಟ್ಟ ಆಸೆಗಳನ್ನು ಈಡೇರಿಸಿಕೊಳ್ಳುವಲ್ಲಿ ದೊಡ್ಡ ಮಟ್ಟದ ಸಂತೋಷವಿರುತ್ತದೆ, ಪುಟ್ಟ ಪುಟ್ಟ ಆಸೆಗಳೂ...... ಚಿಕ್ಕ ಚಿಕ್ಕ ಆಸೆಗಳೂ.....
ಸದ್ಯಕ್ಕಿಷ್ಟೆ!!! ...
ಪುಟ್ಟ ಪುಟ್ಟ ಆಸೆಗಳೂ....
Wednesday, May 21, 2008Posted by Sridhar Raju at 8:26 AM 18 comments
ಅರಮನೆ...
Sunday, April 27, 2008’ನಗು ನಗು ನಗು’ ಹಾಡಿನ ಬಹಳ ಅಚ್ಚು ಮೆಚ್ಚಿನ ಸಾಲು ಇದು ನನಗೆ....
ಜಯಂತ್ ಕಾಯ್ಕಿಣಿ ಒಂದೇ ರೀತಿಯ ಹಾಡುಗಳಿಗೆ ಬ್ರಾಂಡ್ ಆಗುತ್ತಿದ್ದಾರೆ ಎಂಬ ಕಳವಳವಿದೆ......
’ನನಗು ನಿನಗೂ ಕಣ್ಣಲ್ಲೇ ಪರಿಚಯ..ಸನಿಹ ಸುಳಿವ ಮನದಾಸೆ ಅತಿಶಯ....’ ಅದ್ಭುತವಾದ ಹಾಡು..
ಕವಿರಾಜರಿಗೆ ಕವಿರಾಜರೇ ಸಾಟಿ.. ’ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ, ಹೇಗೆ ಹೇಳಲಿ ನನ್ನ ಮನದ ಹಂಬಲಾ.....’
ಬಹಳ ಬಹಳ ಸಿಂಪಲ್ ಕತೆ...ನಿರೂಪಣೆಯಲ್ಲಿ ನಿರ್ದೇಶಕರ ಕುಸುರಿ ಕೆಲಸ ಕಾಣುತ್ತದೆ, ಅತಿರೇಕದ ಸಂಭಾಷಣೆಗಳಿಲ್ಲ, ಗಣೇಶ್ ಎಷ್ಟು ಬೇಕೋ ಅಷ್ಟು ಮಾತನಾಡುತ್ತಾರೆ, ಅನಂತನಾಗ್ ರವರದ್ದು ಮಾಗಿದ ಅಭಿನಯ.. ಚಿತ್ರ ನಿಂತಿರಿರುವುದು ಇವರಿಬ್ಬರ ಮೇಲೆಯೇ. ನಮ್ಮ ಅಕ್ಕ ಪಕ್ಕದಲ್ಲೇ ಇರುವ ಹುಡುಗನಂತಿದೆ ಗಣೇಶ್ ಅಭಿನಯ, ಅದಕ್ಕೆ ಇಷ್ಟವಾಗುತ್ತಾರೆ.
ಒಟ್ಟಾರೆಯಾಗಿ ನಾಗಶೇಖರ್ ಒಂದು ಒಳ್ಳೆಯ ಚಿತ್ರ ಮಾಡಿದ್ದಾರೆ. ಗಣೇಶ್ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ಹೊಸ ಪ್ರಯೋಗಗಳು ಹೀಗೆ ಸಾಗಲಿ. ಗಣೇಶ್, ಅನಂತ್ ನಾಗ್ ಮತ್ತು ನಾಗಶೇಖರ್ ರವರಿಗೆ Congratulations......
ವಯಸ್ಸಿನ ಅಂತರವಿಲ್ಲದೆ ಎಲ್ಲರೂ ನೋಡಬಹುದಂತಹದಾದ ಚಿತ್ರ... "ಅರಮನೆ"
ಒಮ್ಮೆ ನೋಡಿಬನ್ನಿ....
Posted by Sridhar Raju at 7:12 PM 8 comments
ದೇವ್ರು ದೇವ್ರು ಅಂತ ಹೇಳ್ತಾರೆಲ್ಲ ಜನ್ರು....
Friday, April 18, 2008"ದೇವರು" ಎನ್ನುವುದು ಬಹಳ ಸುಂದರವಾದ concept, ಆ concept ನಿಂದ ಮನುಷ್ಯದ ತನ್ನ ದಿನನಿತ್ಯದ ಜಂಜಡಗಳಿಂದ,ಕಷ್ಟಗಳಿಂದ, ತನ್ನ ಗೋಳು ಪರದಾಟಗಳಿಂದ ಸ್ವಲ್ಪ ಮಟ್ಟಿಗಾದರೂ ನೆಮ್ಮದಿಯನ್ನು ಪಡೆಯುತ್ತಾನೆ, ನನ್ನ ಮಟ್ಟಿಗೆ ಅದರ ಸಲುವಾಗೆ "ದೇವರು" ಇರುವುದು. ಕೆಲವು ಸಮಯಗಳಲ್ಲಿ ಮನುಷ್ಯ ತನ್ನ ಕೈಲಾದ ಕೆಲಸವನ್ನು ಮಾಡಿ ಬಸವಳಿದಾಗ ಮುಂದೆ ದಾರಿ ಕಾಣದಾದಾಗ, ತೋಚದಾದಾಗ ಕೈಚೆಲ್ಲಿ ಕೂರುವಾಗ ದೇವರು ನೆರವಿಗೆ ಬರುತ್ತಾನೆ, "ಭಗವಂತಾ ನನ್ನ ರಕ್ಷಿಸಪ್ಪಾ" ಎಂದು ಉದ್ಗರಿಸಿ ಸುಮ್ಮನಾಗುತ್ತಾರೆ, ಹಾಗೆ ದೇವರ ಮೇಲೆ ಭಾರ ಹಾಕಿ ತಮ್ಮ ಕೆಲಸವನ್ನ ಮುಂದುವರೆಸುತ್ತಾರೆ. ಆ ಕ್ಷಣಕ್ಕೆ "ದೇವರು" ಎನ್ನುವ concept ಆತನಿಗೆ releif ಕೊಡುತ್ತದೆ, ಆತನ ಮನಸ್ಸು ಎಷ್ಟೋ ನಿರಾಳವಾಗುತ್ತದೆ. ಕಾರಿನಲ್ಲಿ ಕುಳಿತ ಚಾಲಕ ಬ್ರೇಕ್ brake fail ಆಗಿ control ತಪ್ಪಿದಾಗ ತನ್ನ ಕೈಲಾದುದನ್ನು ಮಾಡಿ "ಭಗವಂತಾ ಕಾಪಾಡಪ್ಪಾ" ಎಂದು ಉದ್ಗರಿಸುತ್ತಾನೆ, ಬದುಕುಳಿದರೆ "ದೇವರು" ರಕ್ಷಿಸಿದ ಎಂದು ಸಂತಸ ಪಡುವನು, ಇಲ್ಲದಿದ್ದರೆ "ಗೊತ್ತಿಲ್ಲ". ಅವನ ಆಯುಷ್ಯ ಮುಗಿದಿತ್ತು ಎಂದಲೋ ಅಥವಾ ಆತನ time ಸರಿಯಾಗಿರಲಿಲ್ಲ ಎಂದಲೋ ಸುಮ್ಮನಾಗುವರು, ಈ ರೀತಿಯ ಮಾತುಗಳೆಲ್ಲ ಅವರವರ ಮನಗಳಿಗೆ ಗೊತ್ತಗದೆ ಇರುವ ಪ್ರಶ್ನೆಗಳಿಗೆ ಕೊಟ್ಟುಕೊಳ್ಳುವ releif ಗಳು, ಸಮಾಧಾನಕರ ಮಾತುಗಳು..ನನ್ನ ಮಟ್ಟಿಗೆ ದೇವರು ಅಷ್ಟೆ, ನನಗೆ ದೇವರು "ಸಕಲ"ನೂ ಅಲ್ಲ "ಕೇವಲ"ನೂ ಅಲ್ಲ...
ದೇವಸ್ಥಾನಗಳಿಗೆ ಕಾಲಿಟ್ಟರೆ ಮನಸ್ಸು ಪ್ರಫುಲ್ಲವಾಗುವುದು, ವೇದಘೋಷಗಳು, ಹಿತವಾಗಿ ಬೀಸುವ ಗಾಳಿ, ಧೂಪದಾರತಿಗಳು, ಘಂಟಾನಾದಗಳು ಇವೆಲ್ಲ ಒಂದು ರೀತಿಯ ನೆಮ್ಮದಿ ಕೊಡುತ್ತದೆ, relax ಆಗುತ್ತಾರೆ. ಎಲ್ಲಾ ದೇವಸ್ಥಾನಗಳು ಈ ರೀತಿಯಿರುವುದಿಲ್ಲ ಬಿಡಿ..ಅದು ಬೇರೆಯ ಸಂಗತಿ..ಅದಕ್ಕೆ ಜನ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಗಳಿಗೆ ಹೋಗುತ್ತಾರೆ..
ನಮಗೆ ಕಾಣದ ಶಕ್ತಿಯೊಂದು ನಮ್ಮ ಮೇಲೆ ಸದಾ ಇದೆ, ನಮ್ಮನ್ನು ನಿಯಂತ್ರಿಸುತ್ತದೆ, ಆ ಶಕ್ತಿಗೆ ನಾನು "ದೇವರು" ಎನ್ನುತ್ತೇನೆ, ಅದಕ್ಕೆ ಜನರು ಅವರಿಗೆ ಬೇಕಾದ ರೀತಿಯಲ್ಲಿ ಆ ಶಕ್ತಿಯನ್ನು ಆರಾಧಿಸುತ್ತಾರೆ, ಅದಕ್ಕೆಂದೇ ಹಲವು ಮತಗಳು, ಕುಲಗಳು, ಹಲವು ವೇಷಗಳು, ಇದಕ್ಕೆ ಪುಷ್ಟಿ ಕೊಡುವ ಉಕ್ತಿ.."ದೇವನೊಬ್ಬ ನಾಮ ಹಲವು..."


ಎಲ್ಲವನ್ನು ನಾನೇ ಮಾಡುತ್ತೇನೆ, ಎಲ್ಲವೂ ನನ್ನ ಮೇಲೆ ನಿಂತಿದೆ, ನಾನು ನಡೆದಂತೆ ಆಗುತ್ತದೆ ಎಂದರೆ ಜೀವನವನ್ನು ನಿಭಾಯಿಸುವುದು ಕಷ್ಟ, ಬಹಳ ಹೊರೆ ಬೀಳುತ್ತದೆ. ಎಲ್ಲದಕ್ಕೂ ನನ್ನಲ್ಲೇ ಉತ್ತರ ಕಂಡುಕೊಳ್ಳಬೇಕಾಗುತ್ತದೆ..ಒಳ್ಳೆಯವನಾಗಿ ಇರುವುದು ಮತ್ತು ಒಳ್ಳೆಯದನ್ನು ಮಾಡುವುದು ಇಷ್ಟೆ ನನ್ನ ಕೆಲಸ..ಅದಕ್ಕಾಗಿ ನನ್ನ ದೇವರು...
ನನಗೆ ತಿಳಿದಿರುವಷ್ಟು ದೇವರನ್ನು ಅರ್ಥೈಸಿಕೊಂಡಿದ್ದೇನೆ, ನನಗಿಷ್ಟು ಸಾಕು. ಸದ್ಯಕ್ಕೆ ಇಷ್ಟು ಸಾಕು....
ನಿಮಗೆ ದೇವರು ಒಳ್ಳೇದು ಮಾಡಲಿ.... :-)
(ವಿ.ಸೂ : ಈ ನನ್ನ ದೇವರ ನಿಲುವಿನ ಬಗ್ಗೆ ವಾದಗಳು-ಚರ್ಚೆಗಳು ಅನಾವಶ್ಯಕ...not interested)
Posted by Sridhar Raju at 4:20 PM 13 comments
ಎರಡು ಮುಖಗಳು..
Thursday, April 10, 2008ಸನ್ನಿವೇಶ 2: ಕಷ್ಟದಲ್ಲಿರುವ ವೃದ್ಧರು, ಹಸಿದಿರುವ ಮುಖಗಳು ಕಂಡರೆ ಕೈಲಿದ್ದ ಹಣವನ್ನು ಎಷ್ಟಿದೆಯೆಂದೂ ಸಹ ನೋಡದೆ ಅವರಿಗೆ ಕೊಟ್ಟುಬಿಡುತ್ತಿದ್ದ, ತನಗೆ ತಿನ್ನಲಿಕ್ಕೆ ಇಲ್ಲದಿದ್ದರೂ ಹಸಿದಿರುವವರಿಗೆ ತಿನ್ನಲು ಕೊಟ್ಟು ಅವರನ್ನೇ ದಿಟ್ಟಿಸುತ್ತಾ ಕಣ್ಣುತುಂಬಿಕೊಳ್ಳುತ್ತಿದ್ದ, ಅವರ ಕೈಮುಗಿತದಲ್ಲಿ ಕೊನೆಗಾಣುತ್ತಿತ್ತು..ಎಷ್ಟು ಜನರಿಗೆ ಅನ್ನ ನೀಡಿದನೋ ಗೊತ್ತಿಲ್ಲ .... ಈ ಯಜಮಾನ ಏನಾಗಿರಬಹುದು??
ಎರಡೂ ಸಹ ಸತ್ಯ, ಎರಡೂ ಸಹ ಶುದ್ಧ ಸುಳ್ಳು... ಯಾವುದನ್ನು ನಂಬುವುದು, ಯಾವುದನ್ನು ಬಿಡುವುದು....
ಬಹಳಷ್ಟು ಪ್ರಶ್ನೆಗಳು ಉಳಿದಿವೆ....!!!!
Posted by Sridhar Raju at 1:35 PM 11 comments
Race....
Wednesday, April 9, 2008Askhaye Khanna : OK!!
Anil Kapoor : Timepass
Bipasha Basu : Censored!!!
Katrina Kaif : Cute..
Sameera Reddy : ಯಾಕಿದ್ದಳೊ ಕೊನೆವರೆಗೂ ಗೊತ್ತಾಗಲೇ ಇಲ್ಲ..
Cars -u : ಉನ್ನತ ದರ್ಜೆಯ ಮಸ್ತ್ ಮಸ್ತ್ ಕಾರುಗಳು...ಒಂದಕ್ಕಿಂತ ಒಂದು ಚೆನ್ನಾಗಿದೆ.
ಕತೆ : Full confuse -u...ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಬಿಡುವ ಯತ್ನದಲ್ಲಿ super ಆಗಿ ಎಡವಿದ್ದಾರೆ..ಆದರೆ ಒಂದಂತು ಖರೆ, ಒಂದು ದೃಶ್ಯವನ್ನು ನೀವು miss ಮಾಡಿದರೆ ತಲೆ ಕುಲಗೆಡುತ್ತದೆ...ಮೋಸ, ಧಗಾ, ವಂಚನೆ ಚಿತ್ರದ ಜೀವಾಳ....
ದುಡ್ಡು ಜಾಸ್ತಿ ಇದ್ದರೆ ಒಮ್ಮೆ ಚಿತ್ರವನ್ನ ವೀಕ್ಷಿಸಿ............
Posted by Sridhar Raju at 10:56 AM 5 comments
ಅರಮನೆ ...
Tuesday, March 25, 2008ಹೇಗೆ ಹೇಳಲಿ ನನ್ನ ಮನದ ಹಂಬಲ......
ಮಾತನಾಡಲಾ ಇಲ್ಲ ಹಾಡು ಹಾಡಲಾ
ಹೇಗೆ ತಿಳಿಸಲಿ ನನ್ನ ಎದೆಯ ತಳಮಳ.....
Posted by Sridhar Raju at 8:22 AM 13 comments
ನಾನು ಬ್ರಹ್ಮ ಮತ್ತು ಮುಖ್ಯಮಂತ್ರಿ - ಭಾಗ 5
Friday, March 7, 2008Brahma is back... 5 ತಿಂಗಳ ಹಿಂದೆ ಬಂದಿದ್ದ ಬ್ರಹ್ಮನನ್ನು ದಸರೆಯ ರಜೆಗೆಂದು ಕಳಿಸಿದ್ದೆ, ಆಗಲೇ ಸಾಕಷ್ಟು ವರಗಳ ಪಟ್ಟಿ ಇಟ್ಟಿದ್ದೆ, ಇನ್ನಷ್ಟು ಹೇಳುವ ಹಂಬಲದಲ್ಲಿದ್ದೆ, ಸಮಯಾವಕಾಶ ಅಭಾವದಲ್ಲಿದ್ದ ಬ್ರಹ್ಮನನ್ನು ದಸರೆಯ ರಜೆಗಾಗಿ ಕಳುಹಿಸಿಕೊಟ್ಟಿದ್ದೆ, ಇದೀಗ ಮರಳಿ ಬಂದು ನಿನ್ನ ವರಪಟ್ಟಿಯನ್ನು ಮುಗಿಸು ಎಂದು ಕಾಡುತ್ತಿದ್ದಾನೆ, ಇನ್ನಿಲ್ಲದಂತೆ, ನಿನ್ನ ವರಪಟ್ಟಿಯನ್ನು ಮುಗಿಸಿದರೆ ನನಗೆ ವರಮುಕ್ತಿಯಾಗುವುದಯ್ಯ ಎಂದು ಹೇಳಿದುದಕ್ಕಾಗಿ ಮತ್ತೆ ಬ್ರಹ್ಮನ ಸರಣಿಯ ಕೊನೆಯ ಭಾಗವನ್ನು ನಿಮ್ಮ ಮುಂದಿಡುತ್ತಿದೇನೆ, ಓದಿಕೊಳ್ಳಿ...
ಈ ’ನಾನು, ಬ್ರಹ್ಮ ಮತ್ತು ಮುಖ್ಯಮಂತ್ರಿ’ ಸರಣಿಯನ್ನು ನಾಲ್ಕು ಭಾಗಗಳಲ್ಲಿ ಕುಯ್ದಿದ್ದೆ ;-), ಮಾನವರ ನೆನಪಿನ, ಮೆದುಳಿನ ಕಾರ್ಯಕ್ಷಮತೆಯ ಅರಿವು ನನಗಿರುವುದರಿಂದ, ಒಮ್ಮೆ ಆ ನಾಲ್ಕು ಭಾಗಗಳ ಮೇಲೆ ಒಂದು ಸಿಂಹಾವಲೋಕನ ಮಾಡಿಬಿಡಿ...ಪ್ಲೀಸ್, ಇಲ್ಲವೆಂದರೆ ನಿಮ್ಮ ಲಹರಿಗೆ ತೊಡಕುಂಟಾಗುತ್ತದೆ, ಅದರ ಕೊಂಡಿಗಳು ಹೀಗಿವೆ, ಒಂದು ಧೀರ್ಘವಾದ ನಿಟ್ಟಿಸಿರು ಬಿಟ್ಟು ಓದಲನುವಾಗಿ, ನಿಮಗೆ ಶುಭವಾಗಲಿ.....
ಭಾಗ 1
ಭಾಗ 2
ಭಾಗ 3
ಭಾಗ 4
----------------
ಬ್ರಹ್ಮನ ಮುಂದೆ ನಾನು ಮುಖ್ಯಮಂತ್ರಿಯಾಗುವ ಹಾಗೂ ಆ ಸ್ಥಾನದ ಅಧಿಕಾರದ ವ್ಯಾಪ್ತಿ ವಿಸ್ತರಿಸುವ ಬಗ್ಗೆ ನನಗಿದ್ದ ಕನಸುಗಳನ್ನ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದೆ..
ಬ್ರಹ್ಮ ಬಂದ ಕೂಡಲೆ ಕೈಕುಲುಕಿ "ಎಲ್ಲಾ ಕ್ಷೇಮವೋ?"
"Everything is fine Mr.Brahma"..ಎಂದು ಹೇಳಿ ಮುಗಿಸಿ ಮತ್ತೆ..
"I missed you a lotttttttt..." ಎಂದು ಭಾವಭರಿತವಾಗಿ ಉದ್ಗರಿಸಿದೆ..
ಅದಕ್ಕೆ ಆತ "OK" ಎಂದು "ಮುಂದುವರೆಸು ಇನ್ನ ಪ್ರಣಾಳಿಕೆಯನ್ನು" ಎಂದುಬಿಟ್ಟ..
Hmmm.. "OK" ಪದಬಳಕೆ ತಟ್ಟಬೇಕಾದ ಸ್ಥಳಗಳನ್ನೆಲ್ಲ ತಟ್ಟಿದೆ ಎಂದು ನನ್ನ ಆಶಯಗಳನ್ನ ಮುಂದುವರೆಸಲು ಸನ್ನದ್ಧನಾದೆ..
ಬ್ರಹ್ಮ ನನ್ನ ರಾಜಕೀಯ ಆಶಯಗಳನ್ನೆಲ್ಲ ಅದಾಗಲೇ ನಿನ್ನ ಮುಂದಿಟ್ಟಿಯಾಗಿದೆ, ಮತ್ತೊಮ್ಮೆ clear picture ಬೇಕಾದರೆ ಮತ್ತೊಮ್ಮೆ ಓದಿಕೊಂಡು ಬಿಡು..
"ಹಾಗದರೆ ನಿನ್ನ ವರಪಟ್ಟಿ ಮುಗಿಯಿತೋ" ಎಂದು ಕೇಳಿದ.
"ಇಲ್ಲ ಬ್ರಹ್ಮ ಇನ್ನೂ ಮುಗಿದಿಲ್ಲ, ನಾನು ಬೆಂಗಳೂರಿಗ ನಾದುದರಿಂದ "ನಮ್ಮ ಬೆಂಗಳೂರು" ಬಗ್ಗೆ ಒಂದಷ್ಟು ಬೇಡಿಕೆಗಳು, ಸುಧಾರಣೆಯ ಹಾದಿಯಲ್ಲಿ...
"ಸರಿ..."
"ಬೆಂಗಳೂರು ಎಗ್ಗಿಲ್ಲದೆ ಬೆಳೆದಿದೆ, ಬೆಳೆಯುತ್ತಲಿದೆ, ಇದಕ್ಕೆ ಕಡಿವಾಣ ಅಗತ್ಯ, ದೇಶದ ಮೂಲೆ ಮೂಲೆಗಳಿಂದ ಜನರು ಈ ಊರಿಗೆ ಧಾವಿಸಿ ಬರುತ್ತಿದ್ದಾರೆ, ಇದಕ್ಕೆಲ್ಲ ಕಾರಣ ಇಲ್ಲಿರುವ ಮಾನವ ಸಂಪನ್ಮೂಲ, ಇಷ್ಟೊಂದು ಸಂಪನ್ಮೂಲ ಇರುವುದಕ್ಕೆ ಕಾರಣ ನಗರದಲ್ಲಿ ಹೆಚ್ಚಿದ ಇಂಜಿನಿಯರಿಂಗ್ ಕಾಲೇಜುಗಳು, ರಾಜಕಾರಣಿಗಳು ತಮ್ಮ ಕಪ್ಪು ಹಣ ಹುದುಗಿಸಿಡಲು ಇಂಜಿನಿಯರಿಂಗ್ ಕಾಲೇಜುಗಳನ್ನು ನಾಯಿಕೊಡೆಗಳಂತೆ ತೆರೆಯುತ್ತ ಹೋದರು, ಇಂದು ನಾವು ಏನೆಲ್ಲಾ traffic ಕಿರಿಕಿರಿ, ಹೆಚ್ಚಿದ ಜನಸಂದಣಿ , ಗಗನ ಮುಟ್ಟಿರುವ ಸೈಟುಗಳ ರೇಟು ಇವೆಲ್ಲದಕ್ಕೂ ಹೊರ ರಾಜ್ಯಗಳಿಂದ ವಲಸೆ ಬಂದಿರುವುದರಿಂದಲೇ ಉಂಟಾಗಿರುವುದು, ಬಂದವರು ಬಂದು ವಿದ್ಯೆ ಕಲಿತು ಹೋಗಿದ್ದರೆ ಚೆನ್ನಾಗಿತ್ತೇನೋ, ಇಲ್ಲೆ ತಳವೂರಿದರು, ಆಸ್ತಿ ಮನೆ ಮಠ ಮಾಡಿಕೊಂಡರು, ಇಷ್ಟೆಲ್ಲ ಸಾಲದೆಂಬಂತೆ ಇಲ್ಲಿನ ಭಾಷೆ, ಜನರನ್ನ ಜರಿದರು, ಜರಿಯುತ್ತಲೇ ಇದ್ದಾರೆ( ಹಾ! ಬಂದವರೆಲ್ಲರೂ ಹೀಗೆ ಅಲ್ಲ, ಆದರ ಬಹಳ ಮಂದಿ ಇದೇ ನಿಲುವನ್ನು ಹೊಂದಿರುವವರು..hmmm) ಇರಬರುವ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳಿಂದ ವಿಧ್ಯಾರ್ಥಿಗಳನ್ನು ಕೋಳಿ ಎಗರಿಸಿಕೊಂಡು ಹೋಗುವಂತೆ ಎಗರಿಸಿಕೊಂಡು ಕೆಲಸ ಕೊಟ್ಟವರು IT ಕಂಪೆನಿಗಳು, ಇದರಿಂದ ಆರ್ಥಿಕವಾಗಿ ಬೆಂಗಳೂರು ಸುಧಾರಿಸಿರಬಹುದು, ಅದರಿಂದ ಲಾಭವೂ ಇದೆ, ಆದರೆ ಅದಕ್ಕೆ ತೆರುತ್ತಿರುವ ಕಂದಾಯ ಬಹಳವೇ ಆಗಿದೆ. ಎಲ್ಲಾ ಈಟ್ ಕಂಪೆನಿಗಳು ಬೆಂಗಳೂರಿನಲ್ಲಿ ಟಿಕಾಣಿ ಹೂಡಿ, ಎಲ್ಲರಿಗೂ ಇಲ್ಲೇ ಕೆಲಸ ಕೊಟ್ಟರೆ ಜನರು ಹೆಚ್ಚಗುವುದಿಲ್ಲವೇ ?, ಕೆಲಸದ ನೆಪದಲ್ಲಿ ದೂರ ದೂರ ಊರುಗಳಿಂದ ಜನರು ಬಂದರು, ಬೆಂಗಳೂರು ಬೆಳೆಯಿತು, ಜೊತೆ ಜೊತೆಗೆ ಸಮಸ್ಯೆಗಳು ಕೂಡ.. IT ಕಂಪೆನಿಗಳಿಂದ ಲಾಭವಾಗಿರಬಹುದು, ಅದರ ಬಗ್ಗೆ ನಾನು ಚರ್ಚಿಸುವುದಿಲ್ಲ, ಅದರ ಬಗ್ಗೆ ಪುಂಖಾನುಪುಂಖವಾದ ವ್ಯಾಖ್ಯಾನಗಳು, ಊಹಪೋಹಗಳು ಚಾಲ್ತಿಯಲ್ಲಿ ಇದ್ದೇ ಇರುತ್ತವೆ...ಇರಲಿ ಜನರು ಭ್ರಮೆಯಲ್ಲೇ ಇರಲಿ..."
ಬ್ರಹ್ಮ ಕಣ್ಣರಳಿಸಿಕೊಂಡು ನನ್ನನ್ನೇ ನೋಡುತ್ತಲಿದ್ದ....
ನಾನು ಇನ್ನೂ ಮುಂದುವರೆದು..."ಬ್ರಹ್ಮ ಇದಕ್ಕೆಲ್ಲ ನನಗೆ ತೋಚಿದ ಪರಿಹಾರ ನೀಡುತ್ತೇನೆ, ಇದಕ್ಕೆ ಕೂದ ಅಧಿಕಾರ ಬೇಕು, ನಿನ್ನ ಆಶೀರ್ವಾದವೂ ಕೂಡ..."
"ಅದು ಯಾವಗಲೂ ಇರುತ್ತದೆ ಮಗೂ... ಮುಂದುವರೆಸು.."
ನನ್ನ ಪಟ್ಟಿ ಹೀಗಿದೆ...
1) ನಗರದಲ್ಲಿ ಇರುವ 120+ ಕಾಲೇಜುಗಳಲ್ಲಿ ಒಂದಷ್ಟಕ್ಕೆ ಬಾಗಿಲು ಜಡಿಯಬೇಕು, 40 ಕಾಲೇಜುಗಳಿಗೆ ಮಾತ್ರ ಅವಕಾಶ ನೀಡುತ್ತೇನೆ.
2) ಮಿಕ್ಕ ಕಾಲೇಜುಗಳನ್ನು ರಾಜ್ಯಾದ್ಯಂತ ಸರಿಯಾಗಿ ವಿಂಗಡನೆಯಾಗುವಂತೆ ನಾನು ನೋಡಿಕೊಳ್ಳುತ್ತೇನೆ.
3) ಇಂಜಿನಿಯರಿಂಗ್ ಒಂದೇ ಅಲ್ಲದೇ ಇತರೆ ಎಲ್ಲಾ ವಿಭಾಗಗಳಿಗೂ ಸಮಾನ ಪ್ರಾಮುಖ್ಯತೆ ಸಿಗುವಂತೆ ಮಾಡುತ್ತೇನೆ, ಅದಕ್ಕೆ ರೂಪುರೇಶೆಯನ್ನು ಸಿದ್ದಪಡಿಸುವೆ.
4) ನಗರದ ಒಳಗೆ ಇರುವ ಹಲವಾರು IT ಕಂಪೆನಿಗಳನ್ನು ನಗರದ ಆಚೆಗೆ ಉಚ್ಚಾಟಿಸುತ್ತೇನೆ, ಊರ ಸುತ್ತಲೂ IT park ಗಳನ್ನು ನಿರ್ಮಿಸಲನುವಾಗುವಂತೆ ನೋಡಿಕೊಳ್ಳುತ್ತೇನೆ.. ಇದರಿಂದ ನಗರದ ಒಳಗೆ traffic ಒತ್ತಡ ಸ್ವಲ್ಪ ಮಟ್ಟಿಗಾದರೂ ಕಮ್ಮಿಯಾಗುತ್ತದೆ
5) ಹೊರ ರಾಜ್ಯ ವಿದ್ಯಾರ್ಥಿಗಳಿಗೆ ಇನ್ನು ನಮ್ಮ ರಾಜ್ಯದಲ್ಲಿ ಇಂಜಿನಿಯರಿಂಗ್ ಸೀಟುಗಳು ದೊರೆಯದಂತೆ ಮಾಡುತ್ತೇನೆ..!!
6) "ಕನ್ನಡ" ಭಾಷೆಯನ್ನು ಹೆಚ್ಚು ವ್ಯಾಪಕವಾಗಿ ಉಪಯೋಗಿಸುವಂತೆ ಆದೇಶ ಹೊರಡಿಸುತ್ತೇನೆ, ಉಲ್ಲಂಘಿಸಿದರು ದಂಡನೆಗೆ ಅರ್ಹರು...!!
ಹೀಗೆ ಪಟ್ಟಿ ಸಾಗುತ್ತಲೇ ಇರುತ್ತದೆ ಬ್ರಹ್ಮ, ನನ್ನ ಕಳಕಳಿ ನಿನಗೆ ಅರ್ಥವಾಯಿತಲ್ಲವೆ?, ನನಗೆ ಇದನ್ನೆಲ್ಲವ ಮಾಡುವ ಅಧಿಕಾರ ಬೇಕು, ಹಣ ಬೇಕು, ನಾನು ಇದನೆಲ್ಲವನ್ನು ಹಣ, ಅಧಿಕಾರ, ಒಂದಷ್ಟು ಸಮಚಿತ್ತರೊಡನೊಡಗೂಡಿ ಸಾಧಿಸುವೆ..ಏನೆನ್ನುವಿ ಬ್ರಹ್ಮ??
ಬ್ರಹ್ಮ ನನ್ನನ್ನೇ ದಿಟ್ಟಿಸುತ್ತಿದ್ದ, ನನಗೂ ಒಂದೇ ಸಮನೇ ಭಾಷಣ ಬಿಗಿದು ದಣಿವಾಗಿತ್ತು.
ಮೌನ ಮುರಿದು ಬ್ರಹ್ಮ.."ನಿನ್ನ ಜನಪರ ಕಾಳಜಿ ನನಗೆ ಹಿಡಿಸಿತು, ಆದರೆ ಇದೆಲ್ಲವನ್ನು ನಿನ್ನೊಬ್ಬನಿಂದಲೆ ಸಾಧಿಸಲು ಸಾಧ್ಯವೇ??"
"ನನ್ನಿಂದಲಾದರೂ ಶುರುವಾಗಲಿ ಬ್ರಹ್ಮ, ಒಳ್ಳೇ ಕೆಲಸ ಎಂದಿಗೂ ಮುಂದುವರೆಯುತ್ತದೆ..."
"ಹಿಂದೆ ಯಾರೂ ಸಹ ಈ ಪರಿಯ ವರವನ್ನು ಕೇಳಿರಲಿಲ್ಲ, ಮುಂದೆಯು ಕೇಳುವುದಿಲ್ಲವೆಂದೆನಿಸುತ್ತೆ, ನ ಭೂತೋ ನ ಭವಿಷ್ಯತಿ, ಇದೋ ನಿನಗೆ ವರವೀಯುತ್ತಿದ್ದೇನೆ, ನೀನೆಂದುಕೊಂಡಿರುವ ಈ ಏಲ್ಲಾ ಕನಸುಗಳು ಕೈಗೂಡಲಿ, ಅದಕ್ಕೆ ಬೇಕಾದ ಹಣ, ಅಧಿಕಾರವನ್ನು ನಾನು ನಿನಗೆ ನೀಡುತ್ತಿದ್ದೇನೆ, ಇಂದಿನಿಂದ ನೀನು ಈ ರಾಜ್ಯದ ಮುಖ್ಯಮಂತ್ರಿ....ಮುಖ್ಯಮಂತ್ರಿ..." ಎಂದು ನನ್ನ ತಲೆ ಮೇಲೆ ತನ್ನ ಹಸ್ತವನ್ನಿಟ್ಟು ಉದ್ಗರಿಸಿದ...
ಮೈರೋಮಗಳೆಲ್ಲ ಸೆಟೆದು ನಿಂತು, ನರನಾಡಿಗಳಲ್ಲಿ ಮಿಂಚಿನ ಸಂಚಾರವುಂಟಾಗಿತ್ತು, ಒಂದು ತೆರನಾದ ಭಾವ ನನ್ನಲ್ಲಿ ಉಂಟಾಗಿತ್ತು, ಶಬ್ಧಾತೀತ ಭಾವ!! ಮಾಡಿಕೊಂಡ ರೂಪುರೇಷೆಗಳೆಲ್ಲ ಸಾಧಿಸುವಷ್ಟು ಶಕ್ತಿ ನನ್ನಲ್ಲಿ ಉಂಟಾಗಿತ್ತು ಬ್ರಹ್ಮನ ಸ್ಪರ್ಶಮಾತ್ರದಿಂದ...ಅದೇ ಭಾವದಲ್ಲಿ ಒಂದತ್ತು ನಿಮಿಷಗಳು ಕಳೆದೆ ಎಂದೆನಿಸುತ್ತೆ...
ನನಗೆ ನಾನು ಅಂದುಕೊಳ್ಳುತ್ತಲ್ಲಿದ್ದೆ..."ನಾನೀಗ ಮುಖ್ಯಮಂತ್ರಿ..ರಾಜ್ಯವನ್ನಾಳುವ ಮುಖ್ಯಮಂತ್ರಿ..."
ತಲೆ ನೇವರಿಸುತ್ತ ಬ್ರಹ್ಮ ಕೇಳಿದ.."ಮಗೂ ಇದುವರೆಗೂ ನಿನಗೆ ಅಂತ ಏನು ಕೇಳಿಕೊಳ್ಳಲಿಲ್ಲವಲ್ಲ, ಏನಾದರೂ ಕೇಳು"
"ನನಗೆ ಕೇಳಬೇಕೆಂದೆನಿಸಲ್ಲಿಲ್ಲ ಬ್ರಹ್ಮ..." ಹಾಕಿರುವ ಯೋಜನಾಪಟ್ಟಿಗಳನ್ನು ಪೂರೈಸುವ ಶಕ್ತಿ ಕೊಡು ಸಾಕು ನನಗೆ".
"ಶಕ್ತಿಯೆಲ್ಲವನ್ನು ಕೊಟ್ಟಾಯಿತು, ವಯುಕ್ತಿಕವಾಗಿ ನೀನು ಏನೊಂದನ್ನೂ ಕೇಳಲಿಲ್ಲವಲ್ಲ, ಏನಾದರೂ ಇದ್ದರೆ ಕೇಳು, ಇದು ನನ್ನ ಆದೇಶ.." ಎಂದು ನನ್ನ ಮೇಲೆ ಹುಸಿಕೋಪವನ್ನು ಹೊರಸೂಸಿದ..
"ಸರಿ ಹಾಗಿದ್ದಲ್ಲಿ, ನನ್ನವರನ್ನೆಲ್ಲಾ ಚೆನ್ನಾಗಿಡು..." ಎಂದೆ..
"ಮುಂದೆ" ಎಂದ ಬ್ರಹ್ಮ..
ಮತ್ತೆ ಮತ್ತೆ ಯೋಚಿಸಿದೆ, ಮನದಾಳದಲ್ಲಿ ಒಂದು ಆಸೆ ಕೂತಿತ್ತು, ನನ್ನ ವಯುಕ್ತಿಕ ಕನಸಾಗಿತ್ತು ಅದು, ಅದಕ್ಕೆ ನೀರೆರೆದು ಪಾಲಿಸಿ ಪೋಷಿಸಿ ಜತನವಾಗಿ ಕಾಪಿಟ್ಟುಕೊಂಡು ಬಂದಿದ್ದೆ, ಈ ಗಡಿಬಿಡಿಯಲ್ಲಿ ಮರೆತಿದ್ದೆ, ಕೇಳೋಣವೆಂದೆನಿಸಿತು, ಒಂದು ರೀತಿಯ ಅಳುಕಿತ್ತು,ರಾಜನ ಮುಂದೆ ಬದನೆಕಾಯಿ ಕೇಳಿದ ಹಾಗಿರುತ್ತದೆ ಎಂದು.
ಗಂಟಲು ಸರಿ ಮಾಡಿಕೊಂಡು "ಬ್ರಹ್ಮಾ.................." ಎಂದೆ..
"ಏನು ಮಗೂ, ಏನದು ನಿಸ್ಸಂಕೋಚವಾಗಿ ಕೇಳುವವನಂತಾಗು...."
"ಅ...ಅದು...ನನಗೆ.." ಎಂದು ತಡವರಿಸುತ್ತಿದ್ದೆ...
ಅಷ್ಟರಲ್ಲಿ.....
ನನ್ನ ಮೊಬೈಲು ರಿಂಗುಣಿಸುತ್ತಿತ್ತು, ಮುಸುಕು ಹಾಕಿ ಮಲಗಿದ್ದ ನಾನು ಧಡಾರನೆ ಎದ್ದು ನೋಡಿದೆ, ಸಮಯ ಅದಾಗಲೇ ಬೆಳಿಗ್ಗೆ 5:45 ಆಗಿತ್ತು, ನನ್ನನ್ನು ಆಫೀಸಿಗೆ ಹೊತ್ತುಕೊಂಡು ಹೋಗಲು ಬಂದಿದ್ದ ನನಗಾಗಿ ಕಾದು ಕುಳಿತಿದ್ದ ಕ್ಯಾಬ್ ಡ್ರೈವರ್ ನ ಕರೆಯಾಗಿತ್ತು ಅದು...
ಎದ್ದೆನೋ ಬಿದ್ದೆನೋ ಎಂದು ಕೆಳಗೋಡಿದೆ, ಮಧ್ಯ ಮಧ್ಯ ಕಣ್ಣುಜ್ಜಿ ನೋಡಿಕೊಳ್ಳುತ್ತಿದ್ದೆ, ಬ್ರಹ್ಮ ನಿದ್ದಾನೋ ಇಲ್ಲವೋ ಎಂದು, ಬ್ರಹ್ಮನೂ ಇಲ್ಲ ಯಾವನೂ ಇಲ್ಲ..ಅದಾಗಲೆ 5 ಬಾರಿ missed calls ಕೊಟ್ಟಿದ ಡ್ರೈವರನಿಗೆ 10ನಿಮಿಷದಲ್ಲಿ ಬರುವುದಾಗಿ ತಿಳಿಸಿ ಸ್ನಾನಾದಿಕಾರ್ಯಗಳಿಗೋಸ್ಕರ ಕರ್ಮಭೂಮಿಯೆಡೆಗೆ ನುಗ್ಗಿದೆ....
-(ಮುಗಿಯಿತು)
Posted by Sridhar Raju at 3:51 PM 11 comments




