ಉಪ್ಪಿಗಿಂತ ರುಚಿ ಬೇರೆ ಇಲ್ಲ.......

Monday, November 26, 2007


ಈ ಹಾಡನ್ನ ಎಲ್ಲರೂ!!!! ಕೇಳಿರಬಹುದು..ಅದರ ಮುಂದಿನ ಸಾಲುಗಳು ಹೀಗಿವೆ...."ಉಪ್ಪಿಗಿಂತ ರುಚಿ ಬೇರೆ ಇಲ್ಲ...ಒಪ್ಪಿಕೊಂಡೋರು ದಡ್ಡರಲ್ಲ...".....dha dha dha...dha...

ನನ್ನೆಡೆಗೆ ಹಲವಾರು ಟೀಕೆಗಳಿವೆ..ನಾನು ಉಪೇಂದ್ರನ ಅಭಿಮಾನಿ ಎಂದು...."ಥೂ ನಿನ್ನ..ಯಾವನೋ ನೀನು..ಹೋಗಿ ಹೋಗಿ ಉಪೇಂದ್ರನ ಅಭಿಮಾನಿ ಅಂತೀಯಲ್ಲ...ನಾಚಿಕೆ ಆಗಲ್ಲ್ವ..." ಹಲವಾರು ಮಂದಿ ಹಲವಾರು ರೀತಿ ಬೈದಿದ್ದಾರೆ, ಆಡಿಕೊಂಡಿದ್ದಾರೆ..ಆದರೆ ಅಷ್ಟೆಲ್ಲ ಮಾಡಿದರೂ ನನಗೆ ಆತನ ಬಗ್ಗೆ ಕಿಂಚಿತ್ತೂ ಅಭಿಮಾನ ಕಮ್ಮಿ ಆಗಿಲ್ಲ ಎಂದು ಹೇಳಲು ನನ್ನವರಿಗೆ ನನ್ನ ಉಪೇಂದ್ರನ ವಿರೋಧಿಗಳಿಗೆ ಸ್ಪಷ್ಟಪಡಿಸಲು ಇಚ್ಚಿಸುತ್ತೇನೆ..."Uppi simply rocks" :-)

ಉಪೇಂದ್ರನ ಹೆಸರು ಹೇಳಿದರೆ ಹಲವಾರು ಮಂದಿ ಮೂಗು ಮುರಿಯುವವರು ಇದ್ದಾರೆ..ಮುರಿಯಲಿ ಅವರ ಮೂಗುಗಳೇ ತಾನೆ...ನನಗೇನು??... ನನಗೆ ಆತನನ್ನು ಅಭಿಮಾನಿಸಲು ಸ್ಪಷ್ಟವಾಗಿ ಕಾರಣಗಳು ಹೇಳಲಾರೆ...ಉಪೇಂದ್ರನ ಚಿತ್ರಗಳು ಇತರ ಹೀರೋ ಚಿತ್ರಗಳಿಗಿಂತ ಚೆನ್ನಾಗಿ ಓಡಬೇಕೆಂಬ ಹಂಬಲ ನನ್ನಲ್ಲಿ ಸದಾ ಇರತ್ತದೆ...ಹಾಗೆ ಆದರೆ ಬಹಳ ಸಂತೋಷವಾಗುತ್ತದೆ.... ನಿಜಕ್ಕೂ ಆತ ರಿಯಲ್ ಸ್ಟಾರ್... ಉಪೇಂದ್ರನ ಸಾಧನೆಗಳ ಬಗ್ಗೆ ನನಗೆ ತಿಳಿದಿರುವ ಮತ್ತಿಗೆ ಒಂದು ಸಣ್ಣ ಕಿರುಪರಿಚಯ...


ಯಾವುದೇ God Father ಗಳ ನೆರವಿಲ್ಲದೆಯೆ ಮೇಲೆ ಬೆಳೆದು ಬಂದಾತ...ಆರಂಭದ ದಿನಗಳಲ್ಲಿ ಕಾಶಿನಾಥ್ ಸಾಥ್ ನೀಡಿದ್ದರು ಅಷ್ಟೆ...ಆತನ ಪ್ರತಿಭೆಗೆ ಮನ್ನಣೆ ಸಿಕ್ಕಿದ್ದು ಹಲವಾರು ವರ್ಷಗಳು ಕಾಲು ಸವೆಸಿದ ನಂತರ...

ಭಾರತ ಚಿತ್ರರಂಗ ಕಂಡ, ವಿಭಿನ್ನವಾಗಿ ಆಲೋಚಿಸುವ ಅತ್ಯಂತ ಕಿರಿಯ ನಿರ್ದೇಶಕ...ಆತನ ಕಿರಿತನ ಕೇವಲ ವಯಸ್ಸಿಗಷ್ಟೆ ಸೀಮಿತ....ಆದರೂ ಈ ವಿಷಯ ಇಲ್ಲಿ ಉಲ್ಲೇಖಾರ್ಹ...

ಇಂದು ಕನ್ನಡ ಚಿತ್ರರಂಗದಲ್ಲಿ ಬಂದಂತಹ ಅಷ್ಟೂ ರೌಡಿ ಚಿತ್ರಗಳಿಗೆ ನಾಂದಿ ಹಾಡಿದ್ದು ಇದೇ ಉಪೇಂದ್ರನ "ಓಂ" ಚಿತ್ರ...ಅದರ ಬಗ್ಗೆ ಎಷ್ಟೆ controversy ಗಳಿರಬಹುದು ..ಆದರೆ ಅದು trend setting cinema ಅಂತೂ ಹೌದು...
ಉಪೇಂದ್ರ ಒಬ್ಬ trend setter -e ಸರಿ..

ಉಪೇಂದ್ರ ಚಿತ್ರ ನಿರ್ಮಿಸುತ್ತಿದ್ದ ರೀತಿಗಳಲ್ಲಿ ಹಲವಾರು ಪ್ರಯೋಗಗಳನ್ನು ಮಾಡುತ್ತಿದ್ದ..ಅದರಿಂದ ಕನ್ನಡ ಚಿತ್ರಕ್ಕೆ ಮನ್ನಣೆ ಸಿಕ್ಕಿದೆ ಎಂಬುದು ಒಪ್ಪಿಕೊಳ್ಳಬೇಕಾದ ವಿಷಯ..ಚಿತ್ರದ ಹೆಸರಿನಿಂದ ಹಿಡಿದು ಚಿತ್ರದ ಅಂತ್ಯದವರೆಗೂ...ಹಾಗೆ ಚಿತ್ರದ ಪ್ರಚಾರದ ವಿಷಯಗಳಲ್ಲಿ ಕೂಡ...ಅದನ್ನ ತೆರೆಯ ಮೇಲೆ ತೋರಿಸುವ ಯತ್ನದಲ್ಲೂ ಸಹ....

ಇಂದೂ ಎಲ್ಲ ಚಿಳ್ಳೆ ಪಿಳ್ಳೆಗಳು ಬಾಯಿ ತೆರೆದರೆ ತಮ್ಮ ಚಿತ್ರ ವಿಭಿನ್ನವಾಗಿದೆ ಎಂದೇ ಬಡಿದುಕೊಳ್ಳುತ್ತಾರೆ...ಅದೇನೊ ವಿಭಿನ್ನತೆಯೋ ಭಗವಂತನಿಗೇ ಗೊತ್ತು..!!!

ಇಂದು ಕನ್ನಡ ಚಿತ್ರರಂಗದ ಗಮನೀಯ ವ್ಯಕ್ತಿಗಳ ಪಟ್ಟಿಗೆ ಸೇರಿರುವ ಗುರುಕಿರಣ್,ಸಾಧುಕೋಕಿಲ, ವಿ.ಮನೋಹರ್, ಕವಿರಾಜ್, ಎಲ್ಲರೂ ಉಪೇಂದ್ರನ ನೆರಳಿನಲ್ಲಿ ಬೆಳೆದವರು..ಒಟ್ಟೊಟ್ಟಿಗೆ ಮೇಲೆ ಬಂದವರು....


ಉಪೇಂದ್ರನಲ್ಲಿ ಮೆಚ್ಚಬೇಕಾದ ಅಂಶವೆಂದರೆ ಕಲಾವಿದರಲ್ಲಿ, ತಂತ್ರಜ್ಞಾನ ಕಲೆಯನ್ನು ಹುಡುಕಿ ಕೆದಕಿ ಹೊರತರುವ ಗುಣ....ಅವನ ಬಳಿ ಬೆಳೆದ ಮಂದಿ ಸಾಕಷ್ಟಿದ್ದಾರೆ...ಇನ್ನು ಬೆಳೆಯುತ್ತಲೇ ಇದ್ದಾರೆ...ಇಷ್ಟೆಲ್ಲ ಮಾಡಿರುವ ಉಪೇಂದ್ರನ ವಯಸ್ಸು ಕೇವಲ 35ರ ಆಸುಪಾಸು...ಅಚ್ಚರಿಯಾಗುವುದಿಲ್ಲವೇ??... :-)

ನಾನು ಇಷ್ಟನ್ನು ಹೇಳುತ್ತಿರುವುದು ಆತನ ನಿರ್ದೇಶಿಸಿ-ನಟಿಸಿರುವ ಚಿತ್ರಗಳ ಬಗ್ಗೆ..ಆತ ಬರೆದಿರುವ ಕಥೆ, ಸಂಭಾಷಣೆಗಳ ಇರುವ ಚಿತ್ರಗಳ ಬಗ್ಗೆ...ಮಿಕ್ಕ ಚಿತ್ರಗಳ ಬಗ್ಗೆ ನನ್ನ ಕಡೆಯಿಂದ "No Comments......"

ಆತನ ಚಿತ್ರಗಳಿಗೆ ಆರಂಭದ ದಿನಗಳಲ್ಲಿ ಬಂದು ವಿರೋಧ, ತಿರಸ್ಕಾರ ಬೇರಾವ ನಟನಿಗೆ ಬಂದದ್ದೇ ಆಗಿದ್ದಲ್ಲಿ ಆತನ ಸದ್ದಡಗಿ ಹೋಗುತ್ತಿತ್ತು...ಉಪೇಂದ್ರ ಜನರ ಸದ್ದಡಿಗಿಸಿದ!!...ಎಲ್ಲ ನಿರ್ದೇಶಕರ, ನಿರ್ಮಾಪಕರು ಒಪ್ಪಿ ಕೊಳ್ಳುವಂತೆ ಮಾಡಿದ..

ಉಪೇಂದ್ರನ ಚಿತ್ರಗಳ ಬಗ್ಗೆ ಒಂದು ಅಪವಾದವಿದೆ...ಆತನ ಸಂಭಾಷಣೆ vulgar, ಅಸಭ್ಯವಾಗಿರುತ್ತದೆಂದೂ...ಹೇಳುವುದನ್ನು ಮರ್ಮಕ್ಕೆ ತಾಗುವಂತಹ ಸಂಭಾಷಣೆ ಸ್ವಲ್ಪ ಢಾಳಗಿ ಕಾಣುತ್ತದೆ...ನನ್ನಂತಹ ಹುಡುಗರಿಗೆ ಇಷ್ಟವಾಗುತ್ತದೆ :-)...vulgar ನಲ್ಲೂ ವಿಧಗಳಿವೆ....ಅದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿಲ್ಲ......ತೀರ ಅಸಹ್ಯಕರವಂತೂ ಇರುವುದಿಲ್ಲ. ... ಮಡಿವಂತರಿಗೆ ಇಷ್ಟವಾಗದಿರಬಹುದು... ಹಾಗೆಂದ ಮಾತ್ರಕ್ಕೆ "ಸಂಸ್ಕೃತ" ;-) ಪದ ಬಳಕೆ ಮಾಡುವರ ಚಿತ್ರಗಳ ಬಗ್ಗೆ ಅಸಡ್ಡೆಯಿಂದಿರಬೇಕಿಲ್ಲ..ಜನ ಶ್ರೀಸಾಮಾನ್ಯರು ಮಾತಾಡುವ ಭಾಷೆಯ ಬಳಕೆ ಆಗಿರುತ್ತದೆ ಉಪೇಂದ್ರನ ಚಿತ್ರಗಳಲ್ಲಿ...ಅಸಭ್ಯತೆಯಂತೂ ಅಲ್ಲ...ಅದರಿಂದ ಸಮಾಜಕ್ಕೆ ಯಾವ ಹಾನಿಯೂ ಇಲ್ಲ...

ನಾನು ಉಪೇಂದ್ರನ ವಿಪರೀತ ಅಭಿಮಾನಿಯೇನು ಅಲ್ಲ, ಆತನ ಚಿತ್ರ ಬಿಡುಗಡೆಯಾದರೆ ಮೊದಲ show ನಲ್ಲೇ ನೋಡಬೇಕೆಂಬ ಹಂಬಲವೂ ನನ್ನಲ್ಲಿ ಎಂದೂ ಬಂದಿಲ್ಲ, ಅಕಸ್ಮಾತ್ ಎರಡು ಅಕ್ಕ-ಪಕ್ಕ ಇರುವ ಚಿತ್ರಮಂದಿರಗಳ ಎದುರುಗಡೆ ನಿಂತಾಗ, ಒಂದರಲ್ಲಿ ಉಪೇಂದ್ರನ ಚಿತ್ರ ಮತ್ತೊಂದರಲ್ಲಿ ಬೇರೊಬ್ಬ ನಟನ ಚಿತ್ರವಿದ್ದಲ್ಲಿ, ಖಂಡಿತವಾಗಿ ಉಪೇಂದ್ರನ ಚಿತ್ರಕ್ಕೆ ಹೋಗುವೆ... :-) :-)

ಉಪೇಂದ್ರ ಆದಷ್ಟೂ ಬೇಗ ಚಿತ್ರಗಳನ್ನು ನಿರ್ದೇಶಿಸುವಂತಾಗಲಿ...ಮತ್ತಷ್ಟು ಒಳ್ಳೆಯ ಚಿತ್ರಗಳು ಹೊರಹೊಮ್ಮಲಿ...ಇದೇ ನನ್ನ ಅಭಿಲಾಷೆ..

ವಿ.ಸೂ : ಉಪೇಂದ್ರನ ಬಗ್ಗೆ ಉಪೇಂದ್ರನ ಚಿತ್ರಗಳ ಬಗ್ಗೆ ವಿರೋಧವಿದ್ದಲ್ಲಿ ಅದನ್ನ ಈ ಬ್ಲಾಗಿನ comments ನ ಮುಖಾಂತರ ತೀರಿಸಿಕೊಳ್ಳಬೇಡಿ ಎಂದು ಹೇಳಲು ಇಚ್ಚಿಸುತ್ತೇನೆ.. ನನ್ನ ಲೇಖನದ ವೈಖರಿಯ ;-) ಬಗೆಗಿನ comments ಎಂದೆಂದಿಗೂ ಸ್ವಾಗತಾರ್ಹ...


ವೈರುಧ್ಯ - ವೈವಿಧ್ಯ

Sunday, November 18, 2007


ಜೀವನ ಯಾರಿಗೆ ತಾನೆ ವೈವಿಧ್ಯ ಪೂರ್ಣವಾಗಿ ಇರಬೇಕೆಂದು ಅನ್ನಿಸುವುದಿಲ್ಲ..ದಿನವೂ ಮಾಡಿದ್ದನ್ನೇ ಮಾಡುತ್ತಿದ್ದರೆ ಬೋರ್ ಆಗುತ್ತದೆ...ನನಗೆ ವೈವಿಧ್ಯತೆಯು ಬೇಕು ವೈರುಧ್ಯವೂ ಬೇಕು...ನನ್ನ ಒಂದು ಸಣ್ಣ ಪಟ್ಟಿ..ಹಾಗೆ ಒಮ್ಮೆ ಕಣ್ಣಾಡಿಸಿಬಿಡಿ..ವೈವಿಧ್ಯತೆ - ವೈರುಧ್ಯತೆ ಇದ್ದರೆ ಜೀವನ ಮಜವಾಗಿರುತ್ತದೆ ಎಂಬುದು ಖಚಿತ...

1) ಒಂದು ದಿನ ಕಲಾಸಿಪಾಳ್ಯದಲ್ಲಿ ಕೂಲಿ ಕೆಲಸ ಮಾಡಬೇಕು....ತಳ್ಳು ಗಾಡಿಯಲ್ಲಿ ಮೂಟೆಗಳನ್ನು ಹಾಕಿಕೊಂಡು ಆ ಜನಭರಿತ ಗಲ್ಲಿಗಳಲ್ಲಿ ಆ ಗಾಡಿಯನ್ನು ಎಳೆದಾಡುತ್ತಿರಬೇಕು....ದಿನದ ಕೂಲಿ ತೆಗೆದು ಕೊಂಡು ರಾತ್ರಿ ಹೊತ್ತಿಗೆ ಅಲ್ಲೆ ಸಿಕ್ಕಿದ್ದನ್ನು ತಿಂದು ಲೈಟಾಗಿ ಸಾರಾಯಿ ಕುಡಿದು ಅಲ್ಲೆ fly over ಕೆಳಗೆ ಮಲಗಬೇಕು...

ಅದರ ಮರುದಿನವೇ ಲೀಲಾ - ಪ್ಯಾಲೇಸಿನಲ್ಲಿ ಬೆಳಗಿನ ಕಾಫಿ ಕುಡಿದು swimming pool ಪಕ್ಕ ಅಂಗಾತ ಮಲಗಿರಬೇಕು...ನನ್ನ ದಿನವೆಲ್ಲ ಲೀಲಾ - ಪ್ಯಾಲೆಸಿನಲ್ಲಿ ವಿಧ ವಿಧವಾದ just chill ಆಗುವಂತಹ ಕೆಲಸಗಳಲ್ಲಿ ತೊಡಗಿಕೊಂಡಿರಬೇಕು.

2)ಒಂದು ಇಳಿಸಂಜೆಯ ಹೊತ್ತಿನಲ್ಲಿ ಲಾಲ್ ಬಾಗ್ ಕೆರೆದಂಡೆಯಲ್ಲಿ ನನ್ನವಳೊಂದಿಗೆ ;-) "ಚೀ ಕಳ್ಳ...ಎಂದು ಕೆನ್ನೆ ಗಿಲ್ಲಿಸಿಕೊಳ್ಳಬೇಕು..." ಅದರ ಮರುದಿನವೇ ಅದೇ ಕೆರೆದಂಡೆಯಲ್ಲಿ ಅದೇ ನನ್ನವಳೊಂದಿಗೆ "ಚೀ ಕಳ್ ನನ್ ಮಗನೆ...ಎಂದು ಆಕೆಯಿಂದ ಕಪಾಳಮೋಕ್ಷ ಆಗಬೇಕು.."

3) ಒಂದು ದಿನ ಇಪ್ಪತ್ತನಾಲ್ಕು ಗಂಟೆಗಳೂ ಪ್ರಪಂಚದ ಅರಿವಿಲ್ಲದೇ ನನಗಿಷ್ಟವಾದ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು.... ಹಾಗೆ ಇಪ್ಪತ್ತನಾಲ್ಕು ಗಂಟೆಗಳೂ ಮೈಮೇಲೆ ಅರಿವಿಲ್ಲದೆಯೇ ನಿದ್ರಾಲೋಲ ನಾಗಬೇಕು..ಕುಂಬಕರ್ಣನ ಅಪರಾವತಾರ ನಾಗಬೇಕು...

4)ನನ್ನ ಜನರಿಂದ, ಇತರರಿಂದ ಹಾಡಿ ಹೊಗಳಿಸಿಕೊಳ್ಳಬೇಕು.....ಮತ್ತೊಂದು ದಿನ ಅದೇ ಜನಗಳ ಬಳಿ ಮೂರು ಜನ್ಮಕ್ಕಾಗುವಷ್ಟು ಕುಳಿತು ಉಗಿಸಿಕೊಳ್ಳಬೇಕು...ವಾಚಮಗೋಚರವಾಗಿ..

5)ಬೈಕನ್ನೇರಿ ಕರಾವಳಿಯ ಉದ್ದಕ್ಕೂ ಓಡಿಸಿಕೊಂಡು ಹೋಗಬೇಕು...ಗೊತ್ತು ಗುರಿಯಿಲ್ಲದೆಯೇ..ದಿನಗಳ ಪರಿವಿಲ್ಲದೆಯೇ...ಮತ್ತೊಂದು ದಿನ ಬೈಕನ್ನು kick start ಮಾಡಲು ಸಹಾ ಶಕ್ತಿಯಿರಬಾರದು...

6)ಮನೆಯವರಿಂದ..."ಅಹಾ ಹೆತ್ತರೆ ಇಂತಹ ಮಗನನ್ನು ಹೆರಬೇಕು.... ಕುಲತಿಲಕ ಇವನು " ಎಂದು ಒಂದು ದಿನ ಅನ್ನಿಸಿಕೊಂಡರೆ...ಮತ್ತೊಂದು ದಿನ ಅವರಿಂದಲೇ "ಯಾಕಾದರೂ ಹುಟ್ಟಿದನೋ....ಕುಲಕ್ಕೇ ಕಳಂಕ, ಹುಟ್ಟದಿದ್ದರೇ ಚೆನ್ನಾಗಿತ್ತೇನೋ ಇವನು" ಎಂದು ಕೇಳಬೇಕು..

7)ಜೇಬು ತುಂಬ ದುಡ್ಡು ಇಟ್ಟುಕೊಂಡು ಬೇಕಾದ ರೀತಿಯಲ್ಲಿ ಖರ್ಚು ಮಾಡಬೇಕು...ನೀರಿಗಿಂತ ಕೇವಲವಾಗಿ...
ಮತ್ತೊಂದು ದಿನ ಬಿಡಿಗಾಸು ಸಹಾ ನನ್ನ ಬಳಿಯಿರಬಾರದು...ಬೀದಿಗೆ ಬಿದ್ದಿರಬೇಕು...

8) ಇನ್ನೇನು ಪ್ರಾಣವೇ ಹೋಗಿಬಿಡುತ್ತದೇನೊ ಎಂಬಂತೆ ಒಂದು ಹಾಸ್ಪಿಟಲ್ ನಲ್ಲಿ ಮಲಗಿರಬೇಕು..ಅದರ ಮರುದಿನವೇ foot ball ಆಡುತ್ತಿರಬೇಕು..

9)ನನ್ನ ಜೀವನ settle ಆಯಿತೆನ್ನುವ ಭಾವ ನನ್ನನ್ನ ಆವರಿಸಬೇಕು ಒಂದು ದಿನ...ಮತ್ತೊಂದು ದಿನ.. ಮುಂದೆ ಜೀವನ ಹೇಗೆ ನಡೆಯುತ್ತದೆ ಎಂದು ಕಳವಳ ಪಡುತ್ತಿರಬೇಕು...ದಿಕ್ಕುಗಾಣದೆ ಒಬ್ಬನೇ ಒಂದು ಮೂಲೆಯಲ್ಲಿ ಕಾಲು ಕೊಸರಿಕೊಂಡು ಕುಳಿತು ಗಾಢ ಕತ್ತಲಿರುವ ಕೋಣೆಯಲ್ಲಿ ದೀರ್ಘವಾಗಿ ಯೋಚಿಸುತ್ತಿರಬೇಕು..

10) ಒಂದು ದಿನವಿಡೀ ನನ್ನ ಆತ್ಮೀಯ ಗೆಳೆಯರೊಡನೆ ಕಾಲ ಕಳೆಯಬೇಕು.ಇಪ್ಪತ್ತನಾಲ್ಕು ಗಂಟೆಗಳೂ ಎಗ್ಗಿಲ್ಲದೆ ಹೊತ್ತಿಲ್ಲದೆ.. ಗೊತ್ತಿಲ್ಲದೆ...ಮತ್ತೊಂದು ದಿನ ನನ್ನ ಬದ್ದ ವೈರಿಗಳೊಡನೆ ಒಂದು ದಿನವಿಡೀ ಕಳೆಯಬೇಕು...ಆ ರೀತಿಯ ಪರಿಸ್ಥಿತಿ ಬಂದೊದಗಬೇಕು..

11)ಜ್ಯೋತಿಷಿಗಳಿಂದ "ಹೋಗಯ್ಯ ನೀನು 80+ ವರ್ಷ ಬದುಕುತ್ತೀಯ"..ಎಂದು ಅನ್ನಿಸಿಕೊಂಡು ಜ್ಯೋತಿಷಾಲಯದಿಂದ ಹೊರಬರುತ್ತಲೇ..ಹೃದಯಾಘಾತವಾಗಿ ಅಲ್ಲೆ ಕುಸಿದು ಬಿದ್ದು ಕೊನೆಯುಸಿರೆಳೆಯಬೇಕು.. :-)


12)ಸತ್ತಾಗ ನಾಲ್ಕು ಜನರು ಕಣ್ಣೀರಿಟ್ಟರೆ ಇನ್ನೊಂದು ಕಡೆ ನಾಲ್ಕು ಜನ ಖುಶಿಯಿಂದ ಸಂತಸ ಪಡಬೇಕು...

ಸದ್ಯಕ್ಕೆ ನನ್ನ ಪಟ್ಟಿ ಇಷ್ಟೆ...ಇನ್ನು ಬೇಕಾದಷ್ಟಿವೆ..ಬರೆಯುತ್ತಾ ಹೋದರೆ ಮೊದಲಿರುವುದಿಲ್ಲ ಕೊನೆಯಿರುವುದಿಲ್ಲ..
ನಿಮ್ಮ ಜೀವನ ವೈವಿಧ್ಯ ಪೂರ್ಣವಾಗಿರಲಿ....

ಕಿವಿಮಾತು..........

Friday, November 2, 2007

ಏಕೋ ಏನೋ ಈ ಹಾಡು ಬಹಳ ಇಷ್ಟ ಆಯ್ತು .... ನಿಮ್ಮೊಂದಿಗೆ ಹಂಚಿಕೊಳ್ಳುವ ಉಮೇದಿನೊಂದಿಗೆ ಇಲ್ಲಿ ಪ್ರಕಟಿಸುತ್ತಿರುವೆ..ಹಾಡನ್ನು ಓದಿಕೊಂಡು, ಹಾಡನ್ನು ಕೇಳುವ ಗುನುಗುವ , ಹಾಡುಗಾರನ ಜೊತೆ ಹಾಡುವ ಮಜವೇ ಬೇರೆ ... ಸಿಕ್ಕಾಪಟ್ಟೆ ಎಂಜಾಯ್ ಮಾಡಿದೆ .... :-) ಇದನ್ನ ಬರೆದ ಜಯಂತ್ ಕಾಯ್ಕಿಣಿ ರವರಿಗೆ ಮತ್ತು ಮನೋಮುರ್ತಿ ಸಂಗೀತ ಸಂಯೋಜನೆಗೆ ಹೃತ್ಪೂರ್ವಕವಾದ ನಮನಗಳು...ಓದಿಕೊಳ್ಳಿ , ಹಾಡಿಕೊಳ್ಳಿ.......

ಕಿವಿಮಾತೊಂದು ಹೇಳಲೆ ನಾನಿಂದು
ದಾರಿನಿಂತಾಗ ಸಾಗಲೆ ಬೇಕೆಂದು
ನಿನ್ನೆ ಈಗಿಲ್ಲ ನಾಳೆಯು ತಿಳಿದಿಲ್ಲ
ನೀನು ನೀನಾಗೆ ಬಾಳಲೆಬೇಕೆಂದು .....

ಹಸಿರಾಗಿದೆ ದೀಪವು ನಿನಗಾಗಿ...
ನಸು ನಗುತಲೆ ಸಾಗು ನೀ ಗೆಲುವಾಗಿ
ಹೊಸ ತಂಗಾಳಿ ಹೇಳಿದೆ ಮೆಲುವಾಗಿ
ಈ ಬಾಳುಂಟು ಬಾಳುವ ಸಲುವಾಗಿ...............

ಬಾಗಿಲಿನಾಚೆಗೆ ತಾ ಬಂದು
ಗೂವಿಗೆ ಬಾಳು ಬಾ ಎಂದು
ಸಂತಸದಿಂದ ಓ ಎಂದು
ಓಡಲೆ ಬೇಕು ನೀನಿಂದು.........................

ಸಾವಿರ ಕಣ್ಣಿನ ನವಿಲಾಗಿ
ನಿಂತಿದೆ ಸಮಯ ನಿನಗಿಂದು
ಕಣ್ಣನು ತೆರೆದು ಹಗುರಾಗಿ
ನೋಡಲೇಬೇಕು ನೀಬಂದು......................

ಬೆಳ್ಳಿಯ ಅಂಚಿನ ಈ ಮೋಡ
ನಗುವ ಬೀರಿದೆ ಬಾನಲ್ಲಿ
ನಿನ್ನಯ ಬಾಳಿನ ಸಂಗೀತ
ಹಾಡಲೇಬೇಕು ನೀನಿಲ್ಲಿ...........................

ಮಿಂಚುವ ಅಲೆಗಳ ನದಿಯಾಗಿ
ಮುಂದಕೆ ಚಲಿಸು ನೀ ಬೇಗ
ನಿನ್ನಯ ಪಾಲಿನ ಈ ಆಟ
ಆಡಲೇಬೇಕು ನೀನೀಗ........................

ಈ ಹಾಡನ್ನು ನೀವು ಕೇಳಬೇಕೆನಿಸಿದರೆ ಇಲ್ಲಿ ಕ್ಲಿಕ್ಕಿಸಿ ...
http://www.kannadaaudio.com/Songs/Moviewise/M/Milana/Kivi.ram

ನಾನು ಬ್ರಹ್ಮ ಮತ್ತು ಮುಖ್ಯಮಂತ್ರಿ - ಭಾಗ 4

Monday, October 8, 2007

"ಬ್ರಹ್ಮ..... ಕೇಳಿಸಿಕೋ..ನನ್ನ ಪ್ರಣಾಳಿಕೆಯನ್ನು..ಬಹಳ ಸುಧೀರ್ಘವಾಗಿರುತ್ತದೆ ಎಂದನಿಸುತ್ತಿದೆ ನನಗೆ.."

ರಾಮರಾಜ್ಯವನ್ನು ಕಟ್ಟುವ ಕನಸು ನನ್ನದು...ನೀ ಕೊಡುವ ವರವನ್ನು ಜನೋಪಯೋಗಿ ಕಾರ್ಯಗಳಿಗೆ ಉಪಯೋಗಿಸುವ ಹಂಬಲ ನನ್ನದು..ನಿನ್ನ ಆಶೀರ್ವಾದವಿರಲಿ.... ಎಂದಿನಂತೆ ತಪ್ಪಿದರೆ ಎಚ್ಚರಿಸು ಬ್ರಹ್ಮ...Thanks for the Coffee."

ಬ್ರಹ್ಮ ನಸುನಗುತ್ತಾ..." ಶುರುಮಾಡು ನಿನ್ನ ಪ್ರಣಾಳಿಕೆಯನ್ನು....ಕೇಳುವ ಕಾತರ ನನ್ನದು..."

ಬ್ರಹ್ಮ ವ್ಯಕ್ತಿಯೊಬ್ಬ ಸಮಾಜದಲ್ಲಿ ಗುರುತರವಾದ ಬದಲಾವಣೆಗಳನ್ನು ತರಬೇಕಾದರೆ....ಬುದ್ದಿಶಕ್ತಿ, ಹಣ, ಅಧಿಕಾರವಿರಬೇಕು...ವಿಪರ್ಯಾಸವೆಂದರೆ ನಮ್ಮ ರಾಜ್ಯದ ದೊಡ್ಡ ದೊಡ್ಡ ಸ್ಥಾನಗಳ್ಳಿರುವ ಅಂದರೆ ನಮ್ಮ ಮಂತ್ರಿ ಮಹೋದಯರು ಅನಕ್ಷರಸ್ತರು.. ಹಾ! ಹಾಗೆಂದ ಮಾತ್ರಕ್ಕೆ ಅನಕ್ಷರಸ್ತರೆಲ್ಲರು ಬುದ್ದಿ ಇಲ್ಲದಿರುವರಲ್ಲ....ಆದರೆ ನಮ್ಮ ಮಂತ್ರಿಗಳಿಗೆ ಇನ್ನೊಬ್ಬರನ್ನು ಕುರ್ಚಿಯಿಂದ ಕೆಳಗಿಳಿಸುವ ಹುನ್ನಾರದಲ್ಲೆ ತಮ್ಮೆಲ್ಲ ಬುದ್ದಿಶಕ್ತಿಗಳನ್ನು ವಿನಿಯೊಗಿಸುತ್ತಾರೆ,,,,ಭ್ರಷ್ಟಾಚಾರದಲ್ಲಿ ಕೈಗೂಡಿ ಹಣಗಳಿಸುತ್ತಾರೆ..... ಬರಿ ರೌಡಿ ಶೀಟರ್ಗಳು, ದುರಹಂಕಾರಿಗಳೇ, ಬುದ್ದಿ ಮಂಕು ಬಡಿದಿರುವ ತರಲೆಗಳೆ ತುಂಬಿಕೊಂಡಿದೆ ನಮ್ಮ ಇಂದಿನ ರಾಜ ಕಾರಣ...."

ಬ್ರಹ್ಮ ನಾನು ಯುವಜನತೆ ಯಲ್ಲಿ ಭರವಸೆಯನ್ನು ಹೊಂದಿದ್ದೀನೆ....ಯುವಜನತೆ ಏನು ಬೇಕಾದರು ಮಾಡಬಲ್ಲರು...
ಯಾವುದೇ ಕಾಲೇಜಿನ ತಡೆದು ಕೇಳಿದರೆ "ಏನಪ್ಪಾ...ಎನಾಗಬೇಕೆಂದಿರುವೀ ನೀ..." ಎಂದರೆ...

"ಡಾಕ್ಟರ್, ಎಂಜಿನಿಯರ್...ಇತ್ಯಾದಿ ಇತ್ಯಾದಿ...ಯಾವೊಬ್ಬನು ನಾನು ರಾಜಕಾರಣಿಯಾಗುವೆ ಎನ್ನುವುದಿಲ್ಲ...ನಾನು ಮಂತ್ರಿಯಾಗುವೆ..ಎನ್ನುವುದಿಲ್ಲ...ನಾನು ಸೈನ್ಯಕ್ಕೆ ಸೇರುತ್ತೇನೆ ಎನ್ನುವುದಿಲ್ಲ...ಎಲ್ಲರು ಅವರವರ ಅನೂಕೂಲಗಳನ್ನೆ ನೋಡಿಕೊಳ್ಳುವವರೆ..."

"ಬ್ರಹ್ಮ....ನಾನು ಅಧಿಕಾರಕ್ಕೆ ಬಂದಕೂಡಲೇ...ಈ ಕೆಳಕಂಡ ಸೂತ್ರಗಳನ್ನು ಅಳವಡಿಸಲು ಇಷ್ಟ ಪಡುತ್ತೇನೆ.."

1)ಯಾವುದೇ ಮಂತ್ರಿಯಾಗುವವನ ವಯಸ್ಸು 30 ದಾಟಿರಬಾರದು.....ಮುಖ್ಯಮಂತ್ರಿಯಾಗುವವನ ವಯಸ್ಸು 35 ದಾಟಿರಬಾರದು..
2)ಮಂತ್ರಿಯಾಗಬಯಸುವವನು ಕನಿಷ್ಟಪಕ್ಷ double graduate ಆಗಿರಬೇಕು..."
3)ಆತ ಪ್ರತಿಭಾವಂತನಾಗಿರಬೇಕು...
4)ರೌಡಿ ಲಿಸ್ಟ್ನಲ್ಲಿರಬಾರದು, ಅವನ ಚಾರಿತ್ರವಂತನಾಗಿರಬೇಕು...
5)ಆ ಕ್ಷೇತ್ರದ ಜನರು ಆತನ ಬಗ್ಗೆ ಒಳ್ಳೆ ಅಭಿಪ್ರಾಯವನ್ನು ಹೊಂದಿರಬೇಕು....
6)ಅವನಿಗೆ ನಾಯಕತ್ವದ ಗುಣಗಳಿರಬೇಕು...
7)ಎಲ್ಲಕಿಂತ ಹೆಚ್ಚಾಗಿ ಆತನಲ್ಲಿ ಜನರಿಗೆ ಒಳ್ಳೆಯದು ಮಾಡುವ ತುಡಿತ, ಹಂಬಲವಿರಬೇಕು...

ವಯಸ್ಸಾದವರನ್ನು Jury ವಿಭಾಗಕ್ಕೆ ಹಾಕಬೇಕು...50 ದಾಟಿದ ಮಂತ್ರಿಗಳೆಲ್ಲ.. ತಮ್ಮ ಅನುಭವಗಳನ್ನು
ಯುವತೆಗೆ ಮಾರ್ಗದರ್ಶನವೀಯುವುದಲ್ಲಿ ವಿನಿಯೋಗಿಸಬೇಕು.. ಅಂದರೆ ಯಾವೊಬ್ಬನು ಮಂತ್ರಿಯಾಗಳು ಇಚ್ಚಿಸುವವನ ವಯಸ್ಸು 50ಕ್ಕೆ ಮೆಲೆ ದಾಟಿರಬಾರದು... ಮಂತ್ರಿಯಾಗಳು ಅರ್ಹತೆಯುಳ್ಳವವನಿಗೆ ಕೇವಲ ಜನಬಲವೊಂದಿದ್ದರೆ ಸಾಲದು...
IAS,IPS ಮಟ್ಟದ ಪರೀಕ್ಷೆಗಳಿರಬೇಕು... ರಾಜಧರ್ಮ, Political, ಕ್ಲಿಷ್ಟ ಪರಿಸ್ಥಿಗಳನ್ನು ಎದುರಿಸುವ
ತಂತ್ರಗಾರಿಕೆಯನ್ನು, ಸ್ಥೈರ್ಯವನ್ನು ಪರೀಕ್ಷಿಸುವಂತಾಗಿರಬೇಕು.... ಪಾರದರ್ಶಕ ವ್ಯವಸ್ಥೆ ನನ್ನ ಗುರಿ....

ಮುಖ್ಯಮಂತ್ರಿಯಾಗುವವನಿಗೆ ಇದೆಲ್ಲಾ ಬದಲಾವಣೆಗಳು ಮಾಡುವ ಅಧಿಕಾರವಿರುತ್ತದೋ ಇಲ್ಲವೋ, ನನಗಂತೂ ಬೇಕು..

ಇನ್ನು ಮಂತ್ರಿಗಳನ್ನು ಆರಿಸುವ ಜನತೆ...ಮತದಾನ ಮಾಡುವ ಮಹಾಜನಗಳು....ಮತದಾನಕ್ಕೊಂದು ಒಂದಷ್ಟು ಕಟ್ಟಳೆಗಳನ್ನು ವಿಧಿಸುತ್ತೇನೆ... ನಾವು ಹಲವಾರು ಬಾರಿ ವೃತ್ತಪತ್ರಿಕೆಗಳಲ್ಲಿ ನೋಡುತ್ತಿರುತ್ತೇವೆ.. ಕೇವಲ ಶೇಕಡ.. 45% 65% ಮತದಾನವೆಂದು..... ಮುಂದೆ ಹೀಗೆ ಆಗಬಾರದು...ಕನಿಷ್ಟ ಪಕ್ಷ 9೦% ಇರಬೇಕು...ವಿಪರ್ಯಾಸವೆಂದರೆ ಹಳ್ಳಿಗಳಲ್ಲಿ ದುಡ್ಡಿಗೆ ಮತವನ್ನು ಮಾರಿಕೊಂಡುಬಿಟ್ಟಿರುತ್ತಾರೆ..ಹಳ್ಳಿ ಮುಗ್ದರಿಗೆ ಅವರ ಮತವು ಎಷ್ಟು ಮೌಲ್ಯವುಳ್ಳದ್ದು ಎಂದು... ಇನ್ನೊಂದು ಅಂಶವೆಂದರೆ ಇದರಲ್ಲಿ ಹೆಚ್ಚಾಗಿ ಯುವಕರು ಯುವತಿಯರು ಪಾಳ್ಗೊಳ್ಳದಿರುವುದು.....ಇದೊಂದು ವಿಪರ್ಯಾಸವೇ ಸರಿ... ಎಲ್ಲ ಯುವಜನತೆ ಪಾಳ್ಗೊಳ್ಳಲೇಬೇಕೆಂಬ ಕಟ್ಟಳೆ ವಿಧಿಸುತ್ತೇನೆ... ಇನ್ನೊಂದು ವಿಚಾರವೆಂದರೆ ಮತದಾನಕ್ಕಿಂತ ಮುಂಚೆ ಆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ತಿಗಳ ಪೂರ್ವಾಪರವನ್ನು ತಿಳಿಕೊಂಡಿರುವಂತಾಗಿರಬೇಕು..ಇದಕ್ಕಾಗಿ ಆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ತಿಗಳು ತಮ್ಮ ಕಲ್ಯಾಣಗುಣಗಳನ್ನು ಮುಂಚೆಯೇ ಜನರ ಮುಂದೆ ವಿವರಿಸಬೇಕಾಗಿರತ್ತದೆ..... ಇದೆಲ್ಲ ಕಡ್ಡಾಯವಾಗಿ ಪಾಲಿಸುವಂತೆ ಆದೇಶವನ್ನು ಹೊರಡಿಸುತ್ತೇನೆ...ಆರಂಭದಲ್ಲಿ ಕಷ್ಟವಾಗಬಹುದು..... ಆದರೆ ಅಸಾಧ್ಯವಂತು ಅಲ್ಲ.... ದೇಶದ ಅಭಿವೃದ್ದಿಯ ಕನಸು ಇದು...ಆಗಲೇಬೇಕು... ಆಬ್ದುಲ್ ಕಲಾಂ ಹೇಳುವಂತೆ ನಾವು 2020 ಹೊತ್ತಿಗೆ ಖಂಡಿತಾ ಅಭಿವೃದ್ದಿಹೊಂದಿದ ದೇಶವಾಗಿರುತ್ತದೆ ಎನ್ನುವ ಭರವಸೆ ನನ್ನದು.....

ಇನ್ನು ಪಕ್ಷಗಳ ವಿಚಾರ....ನಮ್ಮ ದೇಶದಲ್ಲಿ ಕಾಲಿಗೊಂದು ಕೊಸರಿಗೊಂದು ಎನ್ನುವಂತೆ ರಾಜಕೀಯ ಪಕ್ಷಗಳಿವೆ...
ಈ ಪಕ್ಷಗಳ ಸದ್ಯದ ಕೆಲಸವೆಂದರೆ ಅಧಿಕಾರದಲ್ಲಿರುವವರನ್ನು ಕೆಳಗಿಳಿಸುವುದು...ವಿರೋಧಪಕ್ಷವೆಂದರೆ ಅದರ ಕೆಲಸವೆಂದರೆ ಕುರ್ಚಿಯಲ್ಲಿರುವವರನ್ನು ಕೆಳಗಿಳಿಸುವುದು...ಇಲ್ಲಸಲ್ಲದ ಆರೊಪಗಳನ್ನು ಮಾಡಿಕೊಂಡು...

ನಾನು ಅಧಿಕಾರಕ್ಕೆ ಬಂದ ಕೂಡಲೆ ಎರಡು ಪಕ್ಷಗಳ ಹೊರತಾಗಿ ಬೇರೆಲ್ಲ ಪಕ್ಷಗಳನ್ನು ನಿರ್ನಾಮಮಾಡಲು ಆದೇಶ ಹೊರಡಿಸುತ್ತೇನೆ.... ಒಂದು ಆಡಳಿತ ಪಕ್ಷ ಇನ್ನೊಂದು ವಿರೋಧ ಪಕ್ಷ ....ಬೇರಾವ ಪಕ್ಷವು ಅಸ್ಥಿತ್ವದಲ್ಲಿರಬಾರದು...ಮಂತ್ರಿಗಳಾದವರು ಆಡಳಿತಪಕ್ಷದಲ್ಲಿರಬೇಕು ಅಥವಾ ವಿರೋಧಪಕ್ಷದಲ್ಲಿರಬೇಕು...

ನಾನು ಮಧ್ಯ ತಡೆದು..."ಬ್ರಹ್ಮ ಏನು ತುಂಬಾ silent ಆಗಿದ್ದೀಯ... ಎನನ್ನಿಸುತ್ತಿದೆ ನಿನಗೆ"..

"ನಾನು ಹುಚ್ಚನಿಗೆ ವರ ನೀಡುತ್ತಿದ್ದೀನೆ ಎಂದನಿಸುತ್ತಿದೆ ನನಗೆ..ಇಷ್ಟೊಂದು ಬದಲಾವಣೆಗಳು ಸಾಧ್ಯವೆ ಮಗೂ..ನಿನ್ನ ಕನಸು ಬಹಳ ದೊಡ್ಡದಿದೆ...ಆದರೆ ಒಂದಂತೂ ಹೆಳಬಲ್ಲೆ ನಾನು ದಾಸ್ ಗುಪ್ತನ ಮೇಲೆ ವಿಜಯವನ್ನು ಸಾಧಿಸಬಹುದು....ನಿನ್ನ ಪ್ರಣಾಳಿಕೆ ಮುಗಿಯಿತೋ..." ಎಂದ..

"ಇಲ್ಲ ಬ್ರಹ್ಮ..ಕನಸುಗಳು ಬೆಟ್ಟದಷ್ಟಿವೆ....ಇದಕ್ಕೆ ನನಗೆ ನಿನ್ನ ವರ ಬೇಕೇ ಬೇಕು...ಹೇಗಿದ್ದರೂ ನೀನೆ ಹುಡುಕಿಕೊಂಡು ಬಂದಿರುವೆ...ಇದನ್ನು ವೃಥಾ ವ್ಯರ್ಥ ಮಾಡಲು ನನಗಿಷ್ಟವಿಲ್ಲ...ಇದಕ್ಕೆ ನನಗೆ ಅಪಾರ ಹಣ
ಮತ್ತು ಇಷ್ಟು ಬದಲಾವಣೆಗಳನ್ನು ಸಾಧ್ಯವಾಗಿಸುವ ಅಧಿಕಾರ ಬೇಕು..., ಕೊಡುವೆಯಾ??"

ಬ್ರಹ್ಮ...."ಖಂಡಿತವಾಗಿ...ಬೇಗ ಮುಗಿಸು ನಿನ್ನ ಪ್ರಣಾಳಿಕೆಯನ್ನು.....ಬಹಳ ಹೊತ್ತಾಯಿತು ನಾನು ಬಂದು..."

ಬ್ರಹ್ಮ ಎಲ್ಲಿಂದ ಬಂದ...ಮತ್ತೆ ಎಲ್ಲಿಗೆ ಹೋಗುವ...ನಾನು ಎಲ್ಲಿದ್ದೇನೆ....ಎನ್ನುವ ಭಾವ ಮತ್ತೆ ಕಾಡತೊಡಗಿತು...

-----(ಮುಗಿದಿಲ್ಲ)

ನನ್ನ ಶತ್ರು.......

Thursday, October 4, 2007

ದಿವ್ಯಾ : ಹೂ! ಶ್ರೀಧರ್ ನನ್ನ ಪಾಡು ನನ್ನ ಶತ್ರುವಿಗೆ ಮಾತ್ರ ಬರ್ಬೇಕು....

ನಾನು : ಹೋ! ನಿಂಗೆ ಶತ್ರುಗಳು ಇದ್ದಾರ??

ದಿವ್ಯಾ : ನನಗೆ ಗೊತ್ತಿರೋ ಮಟ್ಟಿಗೆ ಯಾರು ಇಲ್ಲ..ಇದ್ರೆ ಅವ್ರಿಗೆ ಬರ್ಬೇಕು ಈ ಪಾಡು...

ನಾನು : ನನಗೊಬ್ಬ ಶತ್ರು ಬೇಕು....

ದಿವ್ಯಾ : ನನಗೂ ಕೂಡ!...



ಒಳ್ಳೇ ಚಾಕೋಲೇಟ್ ಕೇಳಿದ ಹಾಗೆ ಇಬ್ಬರು ಸಮ್ಮತಿಸಿದೆವು..ಶತ್ರುವಿಗಾಗಿ..ಆ ಕ್ಷಣದಲ್ಲಿ ನನಗೊಬ್ಬ ಶತ್ರು ಬೇಕಾಗಿತ್ತು...ನನ್ನ ಶತ್ರುವಿಗೆ ಇರಬೇಕಾದ ಗುಣಲಕ್ಷಣಗಳನ್ನು ಆಕೆಯ ಮುಂದೆ ವಿವರಿಸುತ್ತಾ ಹೋದೆ..ನಿಮಗೂ ನನ್ನ ಶತ್ರುವಾಗುವ ಅರ್ಹತೆಯಿದ್ದಲ್ಲಿ ಅರ್ಜಿ ಗುಜರಾಯಿಸಬಹುದು...ತುಂಬು ಹೃದಯದ ಸ್ವಾಗತವೀಯುತ್ತೇನೆ..ಅದಕ್ಕಾಗಿ ಈ ಲೇಖನ....


"ಶ್ರೀಧರ್, ಅವನಾ ತುಂಬಾ soft -u, silent -u, innocent -u, ;-).ತುಂಬ helpful!! ಕಣಪ್ಪಾ ಅವನು..."(ಯಾರು ಹೇಳಿದ್ದು??)

"ಮಚ್ಚಿ, ನೀನು ನಂಗೆ ಹೆಲ್ಪ್ ಮಾಡ್ತೀಯ ಅಂದುಕೊಂಡಿದ್ದೆ..ನೀನು ಹಿಂಗಂದ್ಬಿಟ್ರೆ ಹೇಗೆ?? "(ಯಾಕ್ ಅನ್ಬಾರ್ದು??)

"ಶ್ರೀಧರ್, ನಿನ್ನ ನೋಡಿದ್ರೆ ನನ್ನ ತಮ್ಮನ ನೆನಪಾಗುತ್ತದೆ, ಅವನೂ ಸಹ ನಿನ್ನ ಹಾಗೆ silent, soft(ಅದಿಕ್ಕೆ??)

ನನಗೆ ಬದಲಾವಣೆ ಬೇಕಾಗಿದೆ....ಸಾಕಾಗಿದೆ..... ಅದಕ್ಕಾಗಿ ನನಗೊಬ್ಬ ಶತ್ರು ಬೇಕು :-) :-).. ಇಲ್ಲಿಂದಲೇ ಬದಲಾವಣೆ ಶುರುವಾಗಲಿ...ನಾನೂ ಸಹ ಜನರನ್ನು ದ್ವೇಷಿಸಬಲ್ಲೆ ಎಂದು ತೋರಿಸಬೇಕು... ;-) ನನ್ನ ಶತ್ರುವಿಗೆ ಬೇಕಾದ ಗುಣಲಕ್ಷಣಗಳನ್ನು ಕೆಳಗೆ ನಮೂದಿಸಿದ್ದೇನೆ..ನೋಡಿ...

1) ಅವನನ್ನು ನಾನು ಪ್ರತಿದಿನವೂ ನೋಡಬೇಕು...

2) ಅವನ ಪ್ರತಿ ಚಲನವಲನಗಳ ಮಾಹಿತಿ ನನಗೆ ಸಿಗುವಂತಾಗಿರಬೇಕು..

3) ಅವನು ನನ್ನೆದುರಿಗೆ ನಡೆದು ಹೋಗುತ್ತಿದ್ದರೆ ಮನಸಾರೆ ಬೈಯ್ಯಬೇಕು..

4) ಅವನೇನಾದರು ಸಣ್ಣದೋ ದೊಡ್ಡದೋ ಸಾಧನೆ ಅಂತೇನಾದರು ಮಾಡಿದರೆ ನಾನು ಇತರರೊಂದಿಗೆ " ಅದೇನು ಮಹಾ! ನಾನೂ ಸಹಾ ಮಾಡಬಲ್ಲೆ...ಎನ್ ಅವನೊಬ್ಬನಿಗೆ ನಾ ಆಗೋದು" ಎಂದು ಕೊಚ್ಚಿಕೊಳ್ಳಬೇಕು...

5) ಅವನ ಏಳು ಬೀಳುಗಳಿಗೆ ನಾನು ಜವಾಬ್ದಾರನಾಗಿರಬಾರದು...

6) ಅವನ ದಾರಿಯಲ್ಲಿ ಬಿದ್ದರೆ ಹುಚ್ಚಾಪಟ್ಟೆ ನಗಬೇಕು.... ಕಚಡ ನನ್ಮಗ ಆಯ್ಕೊಂಡ...ಹಹ್ಹಹ್ಹಾ... ಎಂದು

7) ನನ್ನ ಪ್ರತಿ ಏಳಿಗೆಗು ಅವನು ಹೊಟ್ಟೆ ಉರಿದುಕೊಳ್ಳಬೇಕು....

8) ಅವನು ಬರಗೆಟ್ಟು ಹೋಗಿ ನನ್ನ ಬಳಿ ಸಹಾಯ ಕೇಳಲು ಬಂದರೆ "ನನ್ಮಗನೆ ಎದ್ದ್ ಹೋಗೋಲೋ....ಅನ್ನಬೇಕು"..ಆಗ ಅವನ ಪೆಚ್ಚು ಮುಖವನ್ನು ನಾನು ನೋಡಬೇಕು...

9) ನಾನು ಅವನಿಗಿಂತ ಮುಂಚೆ ಸಾಯಬೇಕು..

10) ಮೇಲ್ಕಂಡ 9 ಸೂತ್ರಗಳಂತೆ ಆತನೂ ಸಹ ನನ್ನ ಬಗ್ಗೆ ಇದೇ ಭಾವವನ್ನು ಹೊಂದಿರಬೇಕು....

ಮೇಲೆಲ್ಲಾ ಬರೀ "ಅವನು ಅವನು" ಅಂತ ಸಂಭೋದಿಸಿದ್ದೇನೆ....ಅವಳೂ ಸಹ ಆಗಬಹುದು..ಮಹಿಳಾಮಣಿಗಳಿಗು ಸಹ ಅವಕಾಶವಿದೆ... :-)

ಇಂತಹ ವಿಶೇಷ ಗುಣಗಳೊಂದಿರುವ ವ್ಯಕ್ತಿ ನನಗೆ ದೊರೆಯುತ್ತಾನೋ ಇಲ್ಲವೋ ಗೊತ್ತಿಲ್ಲ.... ಅಂತಹವರು ಸಿಕ್ಕರೆ ಜೀವನ ಮಜಾವಾಗಿರುತ್ತದೆ..

10ಕ್ಕೆ 10 ಬರಬೇಕೆಂದಿಲ್ಲ....those who will manage to get more than 6 will be eligible to become my enemy.... ಆಗುವಿರಾ??

ನನ್ನವಳೊಂದಿಗೆ ಹಾಡು-ಪಾಡು......

Thursday, September 20, 2007

ನನ್ನವಳೊಂದಿಗೆ ;-) ಒಂದಷ್ಟು ಹಾಡುಗಳ ಜುಗಲ್ ಬಂದಿ..ನನ್ನ ಪ್ರತಿ ಹಾಡಿಗೂ ಅವಳ ಬಳಿ ಅದಕ್ಕೆ ಮತ್ತೊಂದು ಹಾಡನ್ನು ಪೋಣಿಸುತ್ತ ಹೋದಳು ಒಂದು ಸುಂದರ ಸಂಜೆಯಲ್ಲಿ...ನಾನು ಕೇಳುತ್ತ ಹೋದೆ... ನಿಮಗೂ ಕೇಳಿಸುವ ಮನಸಾಯಿತು..... ಅದಕ್ಕಾಗಿ ಬ್ಲಾಗಿಸುತ್ತಿದ್ದೇನೆ....ಅರ್ಥವಾದರೆ ಸಂತೋಷ.. ಇಲ್ಲದಿದ್ದರು ಸಂತೋಷ... ಅವರವರ ಭಾವಕ್ಕೆ ಬಿಟ್ಟದ್ದು..

ನಾನು : ಇದು ನನ್ನ ನಿನ್ನ ಪ್ರೇಮ ಗೀತೆ ಚಿನ್ನ...ಇದು ಎಷ್ಟು ಸಾರಿ ಹಾಡಿದರು ಚೆನ್ನ..ಇದು ನಿಲ್ಲಲಾರದೆಂದು, ಕೊನೆಯಾಗಲಾರದೆಂದು ಈ ಪ್ರೇಮ ಗೀತೆಯೆ ಹೀಗೆಯೊ..
ಅವಳು : ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ ಪಯಣಿಗ ನಾನಪ್ಪಾ...ಪ್ರೀತಿಯ ತೀರವ ಸೇರುವುದೊಂದೆ ಬಾಳಿನ ಗುರಿಯಪ್ಪಾ...(ಸ್ವಲ್ಪ modify ಮಾಡಿಬಿಟ್ಳು...) ನಿಮ್ಗೆ ಗೊತ್ತಾಯ್ತಲ್ಲ್ವ??


ನಾನು : ಯಾವುದೋ ಈ ಬೊಂಬೆ ಯಾವುದೋ...ಊರ್ವಶಿಯ ಕುಲವೋ ಮೇನಕೆಯ ಚೆಲುವೋ...
ಅವಳು : ಕೃಷ್ಣ ನೀ ಬೇಗನೆ ಬಾರೊ...ಶ್ರೀಕೃಷ್ಣ ನೀ ಬೇಗನೆ ಬಾರೊ...ಈ ರಾಧೆಯ ಕೂಗು ನೀ ಕೇಳಿಲ್ಲವೇನು..ವಾಸುದೇವ..ವೇಣುಗೋಪಾಲಾ...


ನಾನು : ತ್ರಿಪುರಾ ಸುಂದರಿ ಬಾರೆ ನೀ ಹಸೆಮಣೆಗೆ ಮದುವೆ ಮುಗಿದರೆ ರಾತ್ರಿಯೇ ಮೆರವಣಿಗೆ..ನಡೆ ನಡೆ ಮೆಲ್ಲಗೆ ದುಂಡು ದುಂಡು ಮಲ್ಲಿಗೆ...ಅಂಜದ ಗಂಡಿಗೆ ಜೋಡಿ ಆಗೆ ಮೆಲ್ಲಗೆ...
ಅವಳು : ಎಲ್ಲಾ ಒಕೆ ಮದುವೆ ಯಾಕೆ...ಎಲ್ಲಾ ಒಕೆ ಮದುವೆ ಯಾಕೆ... ಮದುವೆ ಅಂದ್ರೆ ಸೆಂಟ್ರಲ್ ಜೈಲು ಜೀವಕ್ಕಿಲ್ಲ ರಕ್ಷೆ.. ಏಳು ಹೆಜ್ಜೆ ಇಟ್ಟ ಮೇಲೆ ಏಳು ಜನ್ಮ ಶಿಕ್ಷೆ...


ನಾನು : ಸ್ವಾಭಿಮಾನದ ನಲ್ಲೆ ..tin tin tin tin ಸಾಕು ನಿನ್ನಯ ಬಲ್ಲೆ...tin tin tinಹೊರಗೆ ಸಾಧನೆ ಒಳಗೆ ವೇದನೆ..ಇಳಿದು ಬಾ ಬಾಲೆ.. tin tin tin


ಅವಳು : ಈ ಶತಮಾನದ ಹೆಣ್ಣು, ಸ್ವಾಭಿಮಾನದ ಹೆಣ್ಣು..


ನಾನು : ಯಾರೇ ನೀನು ಚೆಲುವೆ..ಯಾರೇ ನೀನು ಚೆಲುವೆ...ನಿನ್ನಷ್ಟಕ್ಕೆ ನೀನೇ ಏಕೆ ನಗುವೆ...ನಿನ್ನಷ್ಟಕ್ಕೆ ನೀನೇ ಏಕೆ ನಗುವೆ.....
ಅವಳು : ಪುಟಗಳ ನಡುವಿನ ಗರಿಯೇ ನೀನೊಮ್ಮೆ ಹಾರಿ ನೋಡು..ಪುಟಾಣಿ ದೋಣಿಯ ಮರಿಯೇ...ಮಳೆ ನೀರಿನಲ್ಲಿ ಓಡು.. ನಲುಮೆಗಿಲ್ಲಿ ಎಂದು ಬರದೆ ಇರಲಿ ಬಡತನ..ನಮ್ಮ ಗೆಳೆತನ ಇರಲಿ ಕಡೆತನ.... ಕಡೆತನ...


ನಾನು : ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ..ಹೂ ಅಂತೀಯಾ..ಉಹೂ ಅಂತೀಯಾ..
ಅವಳು : ಪ್ರೇಮ ಗೀಮ ಜಾನೆ ದೋ....ನಂಬಬಾರದೋ.... ಪ್ರೇಮಮ್ ಶರಣಮ್ ಗಚ್ಚಾಮಿ ಅನ್ನಬಾರದೋ...


ನಾನು : ನನ್ನವಳು ನನ್ನವಳು ಮುಟ್ಟಿದರೆ ನಲುಗುವಳು..ಮುಟ್ಟದಯೇ ಮುದ್ದಾಡಲೇ... ನೋಡಿದರೆ ಕರಗುವಳು... ಮನದ ಜೊತೆ ಮಾತಾಡಲೇ...ಮುಟ್ಟದಯೇ ಮುದ್ದಾಡಲೇ....
ಅವಳು : one foot distance...very very decent ....ಹೆಣ್ಣು ಗಂಡು ಇರೋವಾಗ..


ನಾನು : excuse me excuse me excuse me excuse me ನಾ ಪ್ರೇಮಿ... u loook me..u catch me...u use me....u love me.....ಬಾರಮ್ಮಿ..
ಅವಳು : ಲೋ ಚಪ್ಪರ್..ಎದ್ದ್ ಹೋಗೋ....


ನಾನು : ಅನಿಸುತಿದೆ ಯಾಕೋ ಇಂದು ನೀನೇನೇ ನನ್ನವಳೆಂದು... ಮಾಯದ ಲೋಕದಿಂದ ನನಗಾಗೇ ಬಂದವಳೆಂದು...ಅಹಾ ಎಂತ ಮಧುರ ಯಾತನೆ...ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೆ..
ಅವಳು : ಅರಳುತಿರು ಜೀವದ ಗೆಳೆಯ ಸ್ನೇಹದ ಸಿಂಚನದಲ್ಲಿ.. ಬಾಡದಿರು ಸ್ನೇಹದ ಹೂವೆ..ಪ್ರೇಮದ ಬಂಧನದಲ್ಲಿ...ಮನಸಲ್ಲೇ ಇರಲಿ ಭಾವನೆ.. ಮಿಡಿಯುತಿರಲಿ ಮೌನ ವೀಣೆ ಹೀಗೆ ಸುಮ್ಮನೆ....

ನಾನು ಸುಮ್ಮನಾದೆ.... ಆದರೆ ಮನವು ಮಾತ್ರ ಕೆ.ಎಸ್.ನರಸಿಂಹಸ್ವಾಮಿಯವರ ಹಾಡು ಗುನುಗುತ್ತಲೆ ಇತ್ತು..

"ನಿನ್ನೊಲುಮೆ ಇಂದಲೆ ಬಾಳು ಬೆಳಕಾಗಿರಲು..ಚಂದ್ರಮುಖಿ ನೀನೆನಲು ತಪ್ಪೇನೆ... ನಿನ್ನ ಸೌಜನ್ಯವೇ ದಾರಿ ನೆರಳಾಗಿರಲು.........."

ನಾನು ಬ್ರಹ್ಮ ಮತ್ತು ಮುಖ್ಯಮಂತ್ರಿ - ಭಾಗ 3

ಹಾಗೆ ತನ್ನ ಉದ್ದಿಶ್ಯ ಹಾಗು ಪೂರ್ವಾಪರವನ್ನು ನನಗೆ ವರದಿ ಒಪ್ಪಿಸಿದ ನಂತರ ಬ್ರಹ್ಮ ನನ್ನ ಪ್ರತ್ಯುತ್ತರಕ್ಕಾಗಿ ಕಾಯುತ್ತಿದ್ದ.. ನಾನು ಮಂಕುಬಡಿದವಂತೆ ಸುಮ್ಮನಿದ್ದೆ ..."ಬ್ರಹ್ಮಲೋಕದಲ್ಲಿ Orkutte...ಶಿವ ಶಿವಾ... ದೇವಾನು ದೇವತೆಗಳು ಸಹ ಈಗ update ಆಗ್ಬಿಟ್ಟಿದಾರೆ... ಕೇಳಬೇಕು... ರಂಭೆ, ಊರ್ವಶಿ, ಮೇನಕೆ ಅವರ profiles Orkut ನಲ್ಲಿ ಇದ್ದೀಯ ಅಂತ..ಇದ್ದರೆ add ಮಾಡಿಕೊಳ್ಳೋಣ... ತ್ರಿಪುರ ಸುಂದರಿಗಳು ಹೇಗೆ ಇದ್ದಾರೆಂಬ ಕುತೂಹಲ ಕೂಡ ಇದೆ ನನಗೆ... Hmmm

ಬ್ರಹ್ಮ ನನ್ನ ಯೋಚನಾ ಲಹರಿಯನ್ನು ತಡೆದು "ಈಗ ವರ ಕೇಳುವ ಸರದಿ ನಿನ್ನದು..ಕೇಳು ನೀನು ಕೇಳುವ ವರ ಇಡೀ ಭೂಲೋಕದ ಮನುಷ್ಯರ ಮನೋಭಾವವನ್ನು ದೇವತೆಗಳಿಗೆ ಸೂಚಿಸುತ್ತದೆ..ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯರಲ್ಲೂ ಒಳ್ಳೆತನ ಇರುತ್ತದೆ ಎಂಬುದು ನಾನು ದಾಸ್ ಗುಪ್ತನಿಗೆ ತೋರಿಸಬೇಕಾಗಿದೆ. so ಎಚ್ಚರವಿರಲಿ.."

ಬ್ರಹ್ಮ ಸ್ವಲ್ಪ ಸಮಯ ನೀಡುವೆಯಾ..ಕಾಫಿ ಕುಡ್ಯೋಣವೆ...ನಾನು ಸ್ವಲ್ಪ ಚೇತರಿಸಿಕೊಳ್ಳಬೇಕು..

ಮುಗುಳ್ನಗುತ್ತ ಬ್ರಹ್ಮ Ice Thunder ಕಾಫಿ ಆಗಬಹುದೋ... ಎಂದ.

ನನಗೆ ಆಶ್ಚರ್ಯ, ಸಂತೋಷ ಒಟ್ಟೊಟ್ಟಿಗೆ ಬಂತು.. ಇದೇನು ಹೊಸತಲ್ಲ..ಬ್ರಹ್ಮನ introduction ಇಂದ ಹಿಡಿದು ಇಲ್ಲಿ ತನಕ ಬರೀ ಆಶ್ಚರ್ಯಗಳೇ.. !!

ಕಣ್ಣು ಪಿಳುಕಿಸುವುದರಲ್ಲಿ Ice Thunder ನ ಬಿಸಿ ಬಿಸಿ ಹಬೆಯಾಡುವ ಕಾಪಿ ನಮ್ಮ ಮುಂದಿತ್ತು...ವ್ಯತ್ಯಾಸವೊಂದೇ ಅರುಣ ನನ್ನ ಜೊತೆ ಇರಲಿಲ್ಲ...

ಕಾಫಿ ಹೀರುವ ಅಷ್ಟೊತ್ತು ಯೋಚಿಸುತ್ತಿದ್ದೆ ಏನು ಕೇಳುವುದು ಎಂದು...

ಕಾಫಿ ಮುಗಿದೊಡನೆಯೆ ಕಪ್ಪನ್ನು ಪಕ್ಕಕ್ಕಿಡುತ್ತಾ.."ಸರಿ ಬ್ರಹ್ಮ ನನ್ನನ್ನು ಹಿಟ್ಲರ್ ಮಾಡಿಬಿಡು... ಅಂದು ಹಿಟ್ಲರ್ ಯಹೂದಿಗಳನ್ನು ಜೀವಂತವಾಗಿ ಸುಡುತ್ತಿದ್ದ...ನಾನು ಅದನ್ನೇ ಮಾಡುತ್ತೇನೆ..ಯಹೂದಿಗಳ ಬದಲಾಗಿ ಮುಸಲ್ಮಾನರನ್ನು ...ಅವರ ಉಪಟಳ ಹೆಚ್ಚಾಗಿ ಹೋಗಿದೆ...ಎಲ್ಲೆಲ್ಲೂ ಭಯೋತ್ಪಾದನೆ.... ಸಾಕು ಮುಗಿಸಿಬಿಡುತ್ತೇನೆ... ನನ್ನನ್ನು ಹಿಟ್ಲರ್ ಮಾಡು.." ಎಂದೆ..

ಅಷ್ಟೊತ್ತು ಶಾಂತ ಮೂರ್ತಿಯ ಅಪರಾವತಾರವಾಗಿದ್ದ ಬ್ರಹ್ಮ ಇದ್ದಕ್ಕಿದಂತೆ ಕುಪಿತನಾಗಿ ಖಾರವಾಗಿ "ನಿನ್ನ ತಿಳಿಗೇಡಿ ತನಕ್ಕೆ ನಾ ಏನೆಂದು ಹೇಳಲಿ... ಎಲ್ಲ ಮುಸಲ್ಮಾನರನ್ನು ಸಾಯಿಸುತ್ತೀಯ.. ನಿನ್ನ ಹೆಸರು ಮಾನವ ಸಂಕುಲ ವಿರುವವರೆಗು ಇರುತ್ತದೆ.."ಮಹಾರಾಕ್ಷಸ" ನೆಂಬ ಬರಹದಡಿಯಲ್ಲಿ.. ನೆನಪಿಟ್ಟುಕೊ.. ನಿನ್ನ ಮಾನವ ಸಹಜ ರಾಗ ದ್ವೇಷಗಳನ್ನ ನನ್ನ ಮುಂದಿಡಬೇಡ... ನಿನ್ನ ಹೆಸರು ಹಾಳದರೆ ಹಾಳಗಲಿ.. ನನಗೆ ಕೆಟ್ಟ ಹೆಸರು ತಗಲಿಕೊಳ್ಳುತ್ತದೆ..ಒಬ್ಬ ಹುಚ್ಚನಿಗೆ ವರ ನೀಡಿದೆ ಎಂದು.. ಉದ್ದಾರ ವಾಗುವಂತಹ ಕೆಲಸಗಳನ್ನು ಮಾಡುವೆಯಾದರೆ ಕೇಳು ಇಲ್ಲವಾದರೆ ನಾ ಹೊರಡುತ್ತೇನೆ...ದಾಸ್ ಗುಪ್ತನೇ ಜಯಶಾಲಿ ಎಂದು ನನ್ನ ಸೋಲೊಪ್ಪಿಕೊಳ್ಳುತ್ತೇನೆ.."

ನಾನು ಕೇಳಿದ್ದು ತಪ್ಪೆನೆಸಿ.."ಸ್ಸಾರಿ..ಬ್ರಹ್ಮ...ಏನೋ ತಿಳಿಯದೆ ಕೇಳಿಬಿಟ್ಟೆ... ಕ್ಷಮಿಸಿಬಿಡು.. "

"ನೋಡು ನಿನಗೆ ಕ್ರೈಸ್ತ, ಮುಸಲ್ಮಾನ, ಹಿಂದೂ ಎಂದು ಜನರನ್ನು ವರ್ಗೀಕರಿಸುತ್ತೀಯ...ನನಗೆ ಹಾಗಿಲ್ಲ.. ಭೂಲೋಕದ ಮಾನವರೆಲ್ಲರೂ ನನಗೊಂದೇ...ತಿಳಿದುಕೋ..."

"ಸರಿ ಹಾಗದರೆ ನನ್ನ ಅಲೆಗ್ಸ್ಯಾಂಡರ್ ಮಾಡು.."

"ಇಡೀ ಭೂಲೋಕ ನಿನ್ನದಾಗುವ ಆಸೆಯನ್ನು ಬಿಟ್ಟುಬಿಡು...ನಿನ್ನ ಸಾಮರ್ಥ್ಯಕ್ಕೆ ಹೊಂದುವಂತಹ ವರ ಕೇಳಿದರೊಳಿತು..."

"ಹಾಗದರೆ ನೆಪೋಲಿಯನ್ ನಂತೆ ಧೈರ್ಯಶಾಲಿ ಮಾಡುವೆಯಾ.." ಎಂದೆ..

"ನಿನಗೆ ನಿನ್ನ ಸ್ವಾರ್ಥಸಾಧನೆಯೆ ಹೆಚ್ಚಾಗಿದೆ, ಮಾನವರೆಲ್ಲಾ ಒಂದೇ...ದಾಸ್ ಗುಪ್ತನೇ ಸರಿ..ನನಗೆಲ್ಲೊ ಭ್ರಾಂತು.., ಒಂದು ನೆನಪಿನಲ್ಲಿಟ್ಟುಕೊ.ನೀನು ಇತರರಂತೆ ಆಗಬಾರದು ನಿನ್ನತನವನ್ನು ನೀನು ಬೆಳೆಸಿಕೋಬೇಕು, ಹಾಗೆ ಅದನ್ನು ಉಳಿಸಿಕೋಬೇಕು.. ಅರ್ಥವಾಯಿತೆ?? "..

"ನಿನಗೆ ಹಿಟ್ಲರ್, ಮುಸ್ಸೊಲೊನಿ, ಅಲೆಗ್ಯಾಸಂಡರ್ ಆದರ್ಶಪ್ರಾಯವಾಗಿದ್ದಾರೆ ಅದೊಂದು ದೊಡ್ಡ ವಿಪರ್ಯಾಸ..ನೀನು ಇತಿಹಾಸದಿಂದ ಪಾಟ ಕಲಿತಿಲ್ಲ"... ಎಂದು ಬ್ರಹ್ಮ ತನ್ನ ಮುಖವನ್ನು ಸಪ್ಪೆ ಮಾಡಿಕೊಂಡ..

ಪಟ್ಟನೆ ನನಗೆ ಏನೋ ಹೊಳೆದಂತಾಗಿ..."ಸರಿ ಬ್ರಹ್ಮ ನಾನು ಜನರಿಗೆ ಒಂದಷ್ಟು ಕಲ್ಯಾಣ ಕೆಲಸಗಳನ್ನು ಮಾಡಬೇಕೆಂದಿದ್ದೆ, ಅದಕ್ಕಾಗಿ ದೊಡ್ಡ ಅಧಿಕಾರವನ್ನು ಬಯಸಿದೆ..ಅಷ್ಟೆ.. ನನ್ನನ್ನು ಈ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡು..." ಎಂದೆ ಒಂದೇ ಉಸಿರಿನಲ್ಲಿ..

ಬ್ರಹ್ಮ ಮತ್ತೆ ಪೇಚಿಗೆ ಸಿಕ್ಕಿ ಹತಾಶ ಮುಖದಿಂದ... "ಏನಪ್ಪಾ ಮಾಡುವೆ ನೀನು ಮುಖ್ಯಮಂತ್ರಿಯಾಗಿ...ನೀನು ಆರಿಸಿಕೊಂಡ ವ್ಯಾಪ್ತಿಯೇನೋ ಚೆನ್ನಾಗಿದೆ...ಆದರೆ ಅಧಿಕಾರಕ್ಕೆ, ಕುರ್ಚಿಗಾಗಿ ಗುದ್ದಾಟ ನಡೆಸುವೆಯಾ.. ಏನು ಮಾಡುವೆ ನೀನು ಮುಖ್ಯಮಂತ್ರಿಯಾಗಿ ??? ಮತ್ತೆ ನಿನ್ನ ಸ್ವಾರ್ಥವೆ ಇಣುಕಾಡುತ್ತಿದೆ ಎಂದನಿಸುತ್ತಿದೆ ನನಗೆ ..ಸರಿಯಾಗಿ ಹೇಳು ಏನು ಮಾಡುವೆ ಮುಖ್ಯಮಂತ್ರಿಯಾಗಿ?? "

"ನಾನು ಏನು ಮಾಡ್ತೀನಿ ಅಂತ ಹೇಳಿದಮೇಲೆ ವರ ಕೊಡುವೆಯೋ...ಇರಲಿ ಇರಲಿ... ಇಗೋ ನನ್ನ ಪ್ರಣಾಳಿಕೆಯನ್ನು ನಿನ್ನ ಮುಂದಿಡುತ್ತೇನೆ... ನನಗೆ ಇಂದಿನ ಯುಗದಲ್ಲಿ ಜಗತ್ತಿಗೆ ಕಲ್ಯಾಣ ;-) ಮಾಡಬೇಕಾದರೆ.. ಒಂದು ಅಧಿಕಾರ ಅಥವ ಹಣ ಇರಬೇಕು..ಇವೆರರೊಡನೆ.. ಹಣವನ್ನು ಅಧಿಕಾರವನ್ನು ಉಪಯೋಗಿಸುವ ವಿವೇಕ.., ಅದು ನನ್ನಲ್ಲಿದೆ ಎಂಭ ಭಾವ ನನ್ನದು
:-) ಅಧಿಕಾರ ಕೊಡುವ ಕೆಲಸ ನಿನ್ನದು..ವರ ಕೊಡ್ತೀನಿ ಅಂತ ನೀನೇ ಹುಡುಕಿಕೊಂಡು ಬಂದಿರುವೆ...ಇನ್ನು ಹಣ
ಅದನ್ನು ನೀನು ಕುಬೇರನಿಂದ ನನಗೆ ಕೊಡಿಸಬೇಕು.. ಆಗುವುದೆ??"


"ಒಹ್!..... ಹಣ ಅಧಿಕಾರ ಕೊಡುವ ವಿಷಯ ತಕ್ಶಣಕ್ಕೆ ಪಕ್ಕಕ್ಕಿಡು...ನೀನು ಮುಖ್ಯಮಂತ್ರಿಯೆಂದ ಅಧಿಕಾರವನ್ನು ಹೇಗೆ ಉಪಯೋಗಿಸುತ್ತೀಯ..?? "

"ಬ್ರಹ್ಮ....ಹೇಳುವೆ...ಇನ್ನೊಂದು ಕಾಫಿ ತರ್ಸಿದ್ರೆ ಚೆನ್ನಾಗಿರುತ್ತಿತ್ತು..." ಎಂದೆ ಹಲ್ಲುಕಿರಿಯುತ್ತ..

ಬ್ರಹ್ಮ ಪ್ರಸನ್ನವದನನಾಗಿ ಮತ್ತೆ ಎರಡು ಕಪ್ ಕಾಫಿ ತರಿಸಿದ.. ನನ್ನ ಮುಂದೆ ಕಾಫಿ ಲೋಟದಿಂದ ಭುಗಿಲೇಳುತ್ತಿದ್ದ ಹಬೆಯು ನನ್ನ ಮೂಗಿಗೆ ಬಡಿದು ಕಾಫಿ ಕಂಪನ್ನು ನನ್ನ ಮೂಗಿಗೆ ಸಿಂಪಡಿಸುತ್ತಿದ್ದವು... ಇಳಿಸಂಜೆಯ ಗಾಂಧಿ ಬಜ಼ಾರ್ ನನ್ನ ಮನದಾಳದಲ್ಲಿ ಮೂಡುತ್ತಿತ್ತು... ಕಾಫಿ ಹಬೆಯಂತೆ ನನ್ನ ಮುಖ್ಯಮಂತ್ರಿಯ ಪ್ರಣಾಳಿಕೆಯಲ್ಲಿ ಮೂಡ ಬೇಕಾದ ವಿವರಗಳು ನನ್ನ ಮನ:ಪಟಲದಲ್ಲಿ ಕ್ಷಣ ಕ್ಷಣಕ್ಕೂ ವಿವಿಧ ರೂಪಗಳನ್ನು ಪಡೆಯುತ್ತಿದವು...ಅದನ್ನು ಬ್ರಹ್ಮನಿಗೆ ಒಪ್ಪಿಗೆಯಾಗುವಂತೆ ತಿಳಿಸಬೇಕಾಗಿತ್ತು..ಹೀಗೆ ಯೋಚಿಸುತ್ತ ಕಾಪಿ ಕಪ್ಪನ್ನು ನನ್ನ ತುಟಿಗೆ ಹಿಡಿದು ಹೀರಲನುವಾದೆ.... ಕಾಫಿ ಗುಟುಕುಗಳು ಇಳಿದೊಡನೆಯೆ ನನ್ನ ವಿಚಾರಗಳು, ಅದಕ್ಕೆ ಬೇಕಾದ ರೂಪು ರೇಷೆಗಳು ಅಚ್ಚುಕಟ್ಟಾಗಿ ಮೂಡತೊಡಗಿದವು... ನಿಜಕ್ಕೊ ಕಾಫಿ ಒಂದು ದಿವ್ಯ ಅಮೃತವೇ ಸರಿ ಎಂದು ಮತ್ತೆ ಮತ್ತೆ ಹೀರಿದೆ... :-)




....(ಸಶೇಷ)