ಹೀಗೊಂದು ನಿದ್ದೆ ಪ್ರಹಸನ

Thursday, June 28, 2007

ನಾನು ಅರುಣ ಮೈಸೂರಿಗೆ ಹೋಗಿ ಶ್ರೀನಿವಾಸನ ಜೊತೆಗೂಡಿ ಮೈಸೂರನ್ನು ಸುತ್ತಿ ಬರೋಣವೆಂದು ನಿರ್ಧರಿಸಿದೆವು. ಅರುಣ್ ಮೈಸೂರಿಗೆ ಟ್ರೈನ್ ನಲ್ಲಿ ಹೋಗೋಣವೆಂದ..ನಾನು ಟ್ರೈನ್ ನಲ್ಲಿ ಪಯಣಿಸಿ ಬಹಳ ಕಾಲವಾಗಿತ್ತು ಸರಿಸುಮಾರು ೬ ವರ್ಷ.. ಸರಿಯೆಂದು ಹೊರಟೆವು.....ಮಾರ್ಗಮಧ್ಯಲ್ಲಿ ಸಾಕಷ್ಟು ಫೋಟೋಗಳನ್ನು ಕ್ಲಿಕ್ಕಿಸಿದೆವು. ನಾವು ಮನೆ ಬಿಟ್ಟಾಗ ಒಂದು ಗಂಟೆ....ಮೈಸೂರನ್ನು ತಲುಪಿದಾಗ 7 ಗಂಟೆ .ಇದೆಲ್ಲ ಒತ್ತಟ್ಟಿಗಿರಲಿ.....ಹೀಗೆ ತೆವಳಿಕೊಂಡು ಮೈಸೂರಿನ ಶ್ರೀನಿವಾಸನ ಮನೆಯನ್ನು ಸೇರಿದೆವು.. ವಿವೇಕನು ಸಹ ನಮ್ಮ ಜೊತೆಗೂಡಿದ, ನನಗೆ ಆಗಲೇ ನಿದ್ದೆ ಹತ್ತುತ್ತಿತ್ತು..

ನಾನು ದಿಂಬಿಗೆ ತಲೆ ಇಟ್ಟೆನೋ ಇಲ್ಲವೊ ಎಲ್ಲಾರೂ ಶುರು ಮಾಡಿದರು.."ಏ ಥೂ!!ನಿನ್ನ ನಾಚಿಕೆ ಆಗಲ್ವ..ಇಷ್ಟ್ ಬೇಗ ನಿದ್ದೆ ಮಾಡ್ತ್ಯ?? ಇಲ್ಲಿಗೆ ಬಂದದ್ದು ನಿದ್ದೆ ಮಾಡಕ್ಕಾ??".....ಹೀಗೆ ಸಾಗುತ್ತಿತ್ತು ಅರುಣನ ಹಾಗೂ ಶ್ರೀನಿವಾಸನ ಪ್ರಶ್ನಾವಳಿ. ಶ್ರೀನಿವಾಸ ನಾನು ನಿದ್ದೆ ಗೆ ಶರಣಾಗಬಾರದೆಂದು.. ನನ್ನ ಕಾಲು ಹಿಡಿದೆಳೆಯುತ್ತಿದ್ದ... ಕೊನೆಗೆ ಹೇಳಿದೆ "ಕಾಫಿ ಮಾಡ್ಕೊಂಡ್ ಬಾ ಮಾರಯ"..ಎದ್ದೇಳ್ತೀನಿ.... ಅದಕ್ಕೆ ಮನೆಯಲ್ಲಿ ಹಾಲಿಲ್ಲವೆಂದೊ ಕಾಫಿ ಸಾಧ್ಯವಿಲ್ಲವೆಂದೊ....ಬೇಕಿದ್ದರೆ black tea ಮಾಡ್ಕೊಡ್ತೀನಿ ಅಂದ...ಎನೋ ಒಂದು ಮಾಡ್ಕೊಂಡ್ ಬಾಪ್ಪ... ಆಂದು ಎದ್ದು ಕೂರಲು ಪ್ರಯತ್ನಿಸಿದೆ.

ಮನಸ್ಸಿನ್ನಲ್ಲೇ ಅರುಣನಿಗೆ ಹಾಗು ಶ್ರೀನಿವಾಸನಿಗೆ ಶಪಿಸುತ್ತಿದ್ದೆ...." ಚೆ ಚೆ ಸರಿಯಾಗಿ ನಿದ್ದೆ ಮಾಡಕ್ಕೂ ಬಿಡ್ತಿಲ್ಲ, ಅದೇನು ನಿದ್ದೆ ಕೆಡ್ತಾರೋ ಪಾ ಜನ". ನನ್ನ ಸ್ತಿತಿಯನ್ನು ಕಂಡು ನಾನೇ ಹಲುಬಿಕೊಳ್ಳುತ್ತಿದ್ದೆ.....
ನನಗೆ ನಿದ್ದೆ ಹೋದ ಕೂಡಲೇ...ಯಾರದರೂ ಕರೆದರೂ ಸಾಕು ಎಚ್ಚರವಾಗಿಬಿಡುತ್ತದೆ.. ಎಲ್ಲರೂ ನನ್ನ ಹಾಗೆಯೇ ಇರುತ್ತಾರೆಂಬ ಭಾವನೆಯಲ್ಲಿದ್ದೆ, ಆದರೆ ಅದರ ಮಾರನೆಯ ದಿನದ ಸಂಜೆಯ ಬೆಳವಣಿಗೆಗಳನ್ನು ನೋಡಿ ಆ ನನ್ನ ಅರಿವಿಕೆಯನ್ನು ಕಿತ್ತೆಸೆದೆ....

ಅಂದು ರಾತ್ರಿ ಬಹಳಷ್ಟು ಹರಟಿದೆವು....ಎಲ್ಲರೂ ಮಲಗಿದಾಗ ಸುಮಾರು 3:30 ಇರಬಹುದು

ಮತ್ತೆ ಬೆಳಿಗ್ಗೆ ಶ್ರೀನಿವಾಸ ಬೇಗನೆ ಎದ್ದು ತನ್ನ ಸ್ನಾನಾದಿ ಕಾರ್ಯಗಳನ್ನು ಮುಗಿಸಿ ಮತ್ತೆ ನನ್ನ ಎಬ್ಬಿಸುವುದಕ್ಕೆ ಶುರು ಮಾಡಿದ್ದ..ಜಗ್ಗಾಡೋದು, ಎಳೆದಾಡೋದು ಹೀಗೆ........ಸಾಕಪ್ಪಾ ಇವನ ಹಿಂಸೆ ಯೆಂದು ಎದ್ದು ದೇಹವನ್ನು ಶುಚಿ ಮಾಡಿಕೊಂಡು ಬಂದೆ.........

ನಾ ಬರುವ ಹೊತ್ತಿಗೆ..ಶ್ರೀನಿವಾಸ ಕುರ್ಚಿ ಮೇಲೆ ಕುಳಿತಲ್ಲಿಯೇ ನಿದ್ರಿಸಲು ಶುರು ಮಾಡಿದ್ದ....ಪಾಪ ರಾತ್ರಿ ತುಂಬಾ ಹೊತ್ತು ಎದ್ದಿದ್ದ ಬೆಳಿಗ್ಗೇನೆ ಬೇಗ ಎದ್ದಿದ್ದಾನೆ ಅಂದು ಕೊಳ್ಳುತ್ತಿದ್ದೆ..

ಅವನು ನಿದ್ರಿಸುವ ಭಂಗಿ ಬಹಳ ವಿನೋದದಾಯಕವಾಗಿತ್ತು, comedy ;-)

ನಾನು ಮೆಲ್ಲನೆ ಅವನ ಬಳಿ ಹೋಗಿ ನನ್ನ ಮೊಬೈಲ್ ಅನ್ನು silent mode ಗೆ ಹಾಕಿ ಸರಿಯಾಗಿ zoom focus ಮಾಡಿ ಫೊಟೊ ಒಂದನ್ನು ಕ್ಲಿಕ್ಕಿಸಿದೆ ,ಇಷ್ಟೆಲ್ಲ ಜಾಗರೂಕನಾಗಿ ತೆಗೆದುದ್ದರ ಉದ್ದೇಶ..ಅವನಿಗೆ ಎಲ್ಲಿ ಎಚ್ಚರವಾಗಿಬಿಡುತ್ತದೋ ಎಂಬ ನನ್ನ ಅಳುಕು.... :-)

ಅಂದು ಚಾಮುಂಡಿ ಬೆಟ್ಟ, ನಂಜನಗೂಡು ಎಲ್ಲವನ್ನು ಸುತ್ತಿ ಹೈರಾಣಗಿ ದಣಿದು ಮನೆಗೆ ವಾಪಸ್ಸದೆವು. ಶ್ರೇಯಸ್ ಕೂಡ ನಮ್ಮ ಜೊತೆಗೂಡಿದ್ದ , ಸುಮಾರು ಒಂದುಗಂಟೆ ಹರಟಿ ಅವನು ಬೆಂಗಳೂರಿನ ಹಾದಿಯನ್ನು ಹಿಡಿದ ತನ್ನ ಹೊಸ Bajaj Pulsar 200cc ಯನ್ನು ಹತ್ತಿ..............................

ಅವನು ಹೊರಟ ನಂತರ ಒಬ್ಬಬ್ಬರಾಗಿ ನಿದ್ದೆಗೆ ಜಾರಿದರು....ಶ್ರೀನಿವಾಸ ಒಂದು ಕಡೆ, ಅರುಣ ಒಂದು ಕಡೆ... ನಾನು ಅಲ್ಲೇ ಬಿದ್ಕೊಂಡೆ.....ಮುಂದೆ ನಡೆಯುವ ಘಟನಾವಳಿಗಳ ಅರಿವಿಲ್ಲದೆಯೇ!!.. ನಿದ್ದೆಗೆ ಜಾರಿದ್ದೆ. ಅದೇಕೂ ಏನೋ ನಿದಿರಾದೇವಿಯು ನನಗೆ ಒಲಿಯಲಿಲ್ಲ..ಸುಮಾರು ಒಂದು ಗಂಟೆ ಆಗಿರಬಹುದು..ಎಚ್ಚೆತ್ತುಬಿಟ್ಟೆ. ನನಗೆ ಸಾಧಾರಣವಾಗಿ ಮಧ್ಯಾಹ್ನ ಸಂಜೆಗಳಂದು ನಿದ್ರೆ ಬರುವುದಿಲ್ಲ.. ಈವರೀರ್ವರೊ ಲೋಕದ ಪರಿವೆ ಮರೆತು "ಬಸೋ" ಎಂದು ನಿದ್ದೆ ಹೊಡೀತಿದ್ರು.............

ಎದ್ದು ಕುಳಿತು ಟೀವಿ ನೋಡಲು ಆರಂಭಿಸಿದೆ.. ಒಂದಷ್ಟು ಹಾಡುಗಳು ನೋಡುತ್ತ timepass ಮಾಡುತ್ತಲಿದ್ದೆ, Bore ಆಗಕ್ಕೆ ಶುರು ಆಯಿತು, ಒಂದುಸಲ ಕೂಗಿದೆ....ಶ್ರೀನಿವಾಸ 5:30 ಆಯ್ತು ಎದ್ದೇಳೊ...ಅಂತ..ಉಹುಂ!! sound -e ಇಲ್ಲಾ.. ಅರುಣನಿಗೆ ಹೇಳಿದೆ , ಅವನು 10ನಿಮಿಷ ರಾಜ..ಎದ್ಬಿಡ್ತೀನಿ..ಸರಿ ಸರಿ..ಅಂದುಕೊಂಡು ಸುಮ್ಮನಾದೆ...

System ON ಮಾಡಿದೆ....ಪಾಪಿಷ್ಟ ಶ್ರೀನಿವಾಸ System ಗೆ password ಇಟ್ಟಿದ್ದ, ಒಂದಷ್ಟು try ಮಾಡಿದೆ, work ಆಗ್ಲಿಲ್ಲ.... ಎಬ್ಬಿಸಲು ಮನಸಾಗಲಿಲ್ಲ!!!....ನನಗೆ ಮನಸಿದ್ದರೂ ಅವನು ಎಳುತ್ತಿರಲಿಲ್ಲ..!!!. ಅಂದು ನನ್ನ ಗ್ರಹಗತಿ ಸಂಪೂರ್ಣವಾಗಿ ಕೆಟ್ಟಿತ್ತೆಂದು ತೋರಿ ಬರುತ್ತದೆ, current ಹೋಯಿತು.. ಪೇಚಿಗೆ ಬಿದ್ದು ಮತ್ತೆ ಎಬ್ಬಿಸಲು ಅನುವಾದೆ. ಅರುಣ್ ೧೦ ನಿಮಿಷ ೧೦ ನಿಮಿಷ ಅನ್ನುತ್ತಲೇ ಇದ್ದ....ಶ್ರೀನಿವಾಸನ ಕಡೆ ಇಂದ ಮಾತ್ರ sound ಇಲ್ಲ, ಅಯ್ಯೊ ಕರ್ಮವೇ ಎಂದು ನನ್ನನ್ನು ನಾನೆ ಹಳಿದುಕೊಳ್ಳುತ್ತ.. ಗೆಳೆಯರಿಗೆ SMS ಮಾಡಲು ಶುರುಮಾಡಿದೆ. ಸೋಮ ನನ್ನು ಬಿಟ್ಟು ಬೆರೆ ಯಾರೂ reply ಅತ್ತಲಿಂದ ಇತ್ಲಾಗೆ ಇತ್ತಲಿಂದ ಅತ್ಲಾಗೆ ಒಡಾಡುತ್ತಿದ್ದೆ. ನನಗೆ ಅನ್ನಿಸುತಿತ್ತು ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದು..ಏನಾದರೊಂದು ಮಾಡಲೇಬೇಕು ಎಂದು , ಹಸಿವಾಗುತಿತ್ತು..ಕಾಫಿ ಮಾಡೋಣವೆಂದರೆ ಹಾಲಿಲ್ಲ ಪಕ್ಕನೆ ಒಂದು idea ಹೊಳೀತು ನನ್ನ ಮೊಬೈಲ್ ನಲ್ಲಿ alarm set ಮಾಡಿ ಹೊರಟೆ....ಇಬ್ಬರಿಗೂ ಎಚ್ಚರ ಆಗುತ್ತೆ ಅಂತ ಭಾವಿಸಿ set ಮಾಡಿ ನಾನು ಮಹಡಿ ಮೇಲೆ ಹೋಗಿಬಿಟ್ಟೆ. ಮೇಲೆ ಹೋಗಿ ನನಗೆ ನಾನೆ "ಶಬ್ಬಾಸ್ ಗಿರಿ " ಕೊಟ್ಟುಕೊಳ್ಳುತ್ತಲಿದ್ದೆ .ಈ ಪ್ಲಾನ್ 100% successful ಅಂತ.............

5 ನಿಮಿಷದ ತರುವಾಯ ಇಳಿದು ಬಂದೆ ನೋಡಿದರೆ ಎನೊಂದು ಆಗಿಲ್ಲವೆಂಬಂತೆ ಇಬ್ಬರು ಇನ್ನು ಮಲಗಿದ್ದಾರೆ. ನನಗೆ ಆಶ್ಚರ್ಯ.. ಅರುಣ್ ಅಂದ ಕೂಗಿದರೆ..ಆತ "ನೀನು alarm ಇಟ್ಟಿದ್ದು, ಅದಾಗದೆ ನಿಂತು ಹೋಯಿತು ಅನ್ಸುತ್ತೆ" ಅಂದ..

ನನಗೆ ಕಣ್ಣಾಲಿಗಳು ತುಂಬಿ ಬರುವುದೊಂದು ಬಾಕಿ ಇತ್ತು..... ನನ್ನ ತಾಳ್ಮೆ ಹಾರಿ ಹೋಗಿತ್ತು..

"ಲೋ ಏದ್ದೇಳೊ ಹೋಗೋಣ..ನನಗೆ ಹಸಿವಾಗುತ್ತಿದೆ.." ಸರಿ ಸರಿ ಹೋಗೋಣವಂತೆ....ಶ್ರೀನಿವಾಸನನ್ನು ಎಬ್ಬಿಸು ಅಂದ,
ಮೈಮೇಲೆ ಜಿರಲೆ ಬಿದ್ದವನಂತಾಗಿ....ಲೋ ಆಗಲ್ಲಪ್ಪಾ ನೀನೇ ನೋಡ್ಕೋ ಅವ್ನನ್ನ ಅಂದುಬಿಟ್ಟೆ, ನೋಡು ನೀನು ಹೂ! ಅಂದರೆ ಒಂದು ಚೆಂಬಿನಲ್ಲಿ ನೀರು ತಂದು ಸುರಿತೀನಿ....ಆಗ ಅವನು ಏಳಬಹುದು ಎನನ್ನುತ್ತೀಯ???" ಎಂದೆ..
ಅದಕ್ಕೆ ಅರುಣ ಹಾಗೆಲ್ಲಾ ಮಾಡಬೇಡ..ಇರು ನಾನು try ಮಾಡ್ತೀನಿ ಅಂದ
"ಶ್ರೀನಿವಾಸ..ಏಳಪ್ಪಾ ರಾಜ....ಹೋಗೋಣ time ಆಯ್ತು" ಇಷ್ಟು ಅಂದದ್ದೇ ತಡ ಶ್ರೀನಿವಾಸ ಎದ್ಬಿಟ್ಟ.. ನನಗೆ ಆ ಕ್ಷಣದಲ್ಲಿ ಉಂಟಾದ ಭಾವವನ್ನು ವಿವರಿಸಲು ಸಾಧ್ಯವಿಲ್ಲ ಬಿಡಿ...

ಅರುಣ ಹಲ್ಲು ಕಿರಿಯುತಿದ್ದ.."ನೋಡೋ ನಿನಗೆ ಎಬ್ಬಿಸುವುದಕ್ಕೆ ಬರಲ್ಲ" ಅಂತ

"ಲೋ ನಾನು ಅವಾಗಲಿಂದ time time ಗೆ ಅವ್ನನ್ನ ಎಬ್ಬಿಸಿ ಎಬ್ಬಿಸಿ set ಮಾಡಿದ್ದೀನಿ ಅದು ನಿನಗೆ work ಆಯ್ತು ಅಷ್ಟೆ"..ಸುಮ್ನಿರಪ್ಪಾ ಅಂದೆ...

ಅವನು ಸಹ ready ಆಗಿ ಊಟ ಮಾಡಲು ಮನೆಯಿಂದ ಮೂವರೂ ಹೊರಬಿದ್ದೆವು .

ಆಗ ಹೇಳಿದೆ......"ಲೋ ಶ್ರೀನಿವಾಸ ನೀನು ಹೀಗೆ ಅಂತ ನನಗೆ ಮುಂಚೇನೆ ಗೊತ್ತಿದ್ದಿದ್ದರೆ...ಬೆಳಿಗ್ಗೆ ನೀನು ನಿದ್ದೆ ಮಾಡ್ತಿರೋ pose ನ ನಾನು ರಾಜಾರೋಷವಾಗಿ ತೆಗೆಯುತ್ತಿದ್ದನಲ್ಲೋ.. ಥೂ ನಿನ್ನ!!!
ಹಾಗಾ ಮಲಗೋದು ಕುಂಭಕರ್ಣನ ಅಪರಾವತಾರ ನೀನು" ಮನಸ್ಸಿನಲ್ಲಿ ಮಡುಗಟ್ಟಿದ್ದ ದುಖವನ್ನೆಲ್ಲ ಹೊರಹಾಕುತ್ತಿದ್ದೆ ಅರುಣ ಮತ್ತು ಶ್ರೀನಿವಾಸ ಮನಸಾರೆ ನಗುತ್ತಿದ್ದರು.



ಹೀಗೆ ನಮ್ಮ ಪ್ರವಾಸವನ್ನು ಮುಗಿಸಿ..ಮೈಸೂರಿನಿಂದ ಹೊರಡಲುನುವಾದೆವು....ಶ್ರೀನಿವಾಸನು ನಮ್ಮನ್ನು ಬಸ್ ನಿಲ್ದಾಣಕ್ಕೆ ಬಂದು ಬೀಳ್ಕೊಟ್ಟ...

ಹೀಗೊಂದು ಮರೆಯಲಾರದ ಅನುಭವ ಮಂಟಪ ನೀಡಿದ್ದಕೆ ನಿನಗೆ ಶರಣು....ಮತ್ತೆ ನಿನ್ನ ನಾನು ಎಬ್ಬಿಸುವ ದುಸ್ಸಾಹಸಕ್ಕೆ ಕೈಹಾಕುವುದಿಲ್ಲ...

ಆ ಮಹಿಷಾಸುರನ ಮೇಲಾಣೆ!!!!!!!!

ಶಿವಾಜಿ - The Boss

Sunday, June 24, 2007




ಬಹುನಿರೀಕ್ಷಿತ ರಜನಿಕಾಂತ್ ಅಭಿನಯದ "ಶಿವಾಜಿ" ಬಿಡುಗಡೆಯಾಗಿದೆ, ಅದೇಕೊ ಏನೋ ಗೊತ್ತಿಲ್ಲ, ಬಹುನಿರೀಕ್ಷಿತ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿಬಿಡುವ ಚಿತ್ರಗಳು ಜನರನ್ನು ಮುಟ್ಟುವುದೆಇಲ್ಲ, ಬಿಡುಗಡೆಗೆ ಮುನ್ನವೆ ಸಾಕಷ್ಟು ಕುತೂಹಲ ಕೆರಳಿಸಿದ್ದ, ತಮಿಳು ಚಿತ್ರರಂಗದ ಘಟಾನುಘಟಿಗಳನ್ನೊಳಗೊಂಡ, 70 ಕೋಟಿ project ನ ಚಿತ್ರ "ಶಿವಾಜಿ", ಇಡೀ ಭಾರತೀಯ ಚಿತ್ರರಂಗ ತಮಿಳುನಾಡಿನೆಡೆಗೆ ಬೆರಗುಗಣ್ಣಿನಿಂದ ನೋಡುತ್ತಲಿತ್ತು... ರಜನೀಕಾಂತ್ ಇಡೀ ಏಷಿಯ ಖಂಡದಲ್ಲೆ ಎರಡನೆಯ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ, ಆತನ ಅಭಿಮಾನಿಗಳು ಪ್ರಪಂಚದ ಉದ್ದಗಲಕ್ಕೂ ಇದ್ದಾರೆ.. ಒಟ್ಟಾರೆ "ರಜನೀಕಾಂತ್" ತಮಿಳು ಚಿತ್ರರಂಗದ ಚುಂಬಕ ಶಕ್ತಿ ಎನ್ನಲಡ್ಡಿಯಿಲ್ಲ...

ಒಟ್ಟಾರೆ ಸಾಕಷ್ಟು ಅಂತೆ ಕಂತೆ ಗಳನ್ನೊಳಗೊಂಡು, ಸಾಕಷ್ಟು ನಿರೀಕ್ಷೆಗಳನ್ನು ಹೊತ್ತು ಪೋಲಿಸ್ ಬಿಗಿ ಬಂದೋಬಸ್ತಿನಲ್ಲಿ ಚಿತ್ರ ಸಾಕಷ್ಟು ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.. ಬಿಡುಗಡೆಗೆ ಮುನ್ನ ಕೆಲವು ದಿನಗಳು ಮುಂಚಿತವಾಗಿ ಪ್ರಮುಖ ಟೀವಿ ವಾಹಿನಿಗಳಲ್ಲಿ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಲಿತ್ತು.. "ಬಿಗ್ ಬಿ" ಎಂದೇ ಖ್ಯಾತಿವೆತ್ತ ಅಮಿತಾಭ್ "ಶಿವಾಜಿ" ಚಿತ್ರದಲ್ಲಿ guest appearance ಅಂತೆ... ತೆಲುಗಿನ "ಮೆಗಾಸ್ಟಾರ್" ಎಂದು ಕರೆಯಲ್ಪಡುವ "ಚಿರಂಜೀವಿ" ಕೂಡ ಇದ್ದಾರಂತೆ... ಹೀಗೆ ಸಾಕಷ್ಟು ಪ್ರಚಾರಪಡೆದಿತ್ತು.. ಪಡೆಯುತ್ತಲಿತ್ತು..

ನನ್ನ ಸ್ನೇಹಿತ ನೊಬ್ಬ ಶತಾಯಗತಾಯ ಮೊದಲವಾರದಲ್ಲೆ ಚಿತ್ರ ನೋಡಬೇಕೆಂದು ತುದಿಗಾಲಲ್ಲಿ ನಿಂತಿದ್ದ.. ನಾನು ಪರಿಪರಿಯಾಗಿ ಹೇಳಿದರೂ ಕೇಳದೆ "ಊರ್ವಶಿ" ಚಿತ್ರಮಂದಿರದ ಬಳಿ ಕರೆತಂದಿದ್ದ... ಅಲ್ಲಿ ಮುಂದಿನ 3 ದಿನಗಳಗೆ ಚಿತ್ರ ಮಂದಿರ housefull ಎಂಬ ಬೋರ್ಡ್ ರಾರಜಿಸುತ್ತಿತ್ತು..ಅದನ್ನು ಲೆಕ್ಕಿಸದೆ ಆತ ಒಳನುಗ್ಗಿದ.. ಅಲ್ಲಿ ಇಲ್ಲಿ ಅಲ್ಲಿ ನಡೆದಾಡುವವರನ್ನು ವಿಚಾರಿಸುತ್ತಿದ್ದ... ಇದ್ಯಾವ ಪರಿಯ ಹುಚ್ಚು ಎಂದು ನಾನು ಒಂದು ಕಡೆ ನಿಂತು ಸುಮ್ಮನೆ ನೋಡುತ್ತಿದ್ದೆ.... ಅಲ್ಲೆ ಸನಿಹದಲ್ಲಿ ಚಿತ್ರದ poster ಅನ್ನು ಕಂಡು.... ನಮ್ಮ ಕನ್ನಡ ಚಿತ್ರರಂಗದ ಯಾವೊಬ್ಬ star ಕೂಡ ಈ ರೀತಿಯ ಜನರಿಗೆ craze ಹುಟ್ಟಿಸಲಿಲ್ಲವಲ್ಲ ಎಂದು ಹಲಬುತ್ತಿದ್ದೆ..ನಮ್ಮದು ಸೀಮಿತ ಮಾರುಕಟ್ಟೆ ಎಂದು ಸುಮ್ಮನಾದೆ..ಅಷ್ಟರಲ್ಲಿ ನನ್ನ ಗೆಳೆಯ ಬಂದು ನನಗೆ ಒಂದು ನಂ. ಸಿಕ್ತು...ನಡಿ ಹೊರಡುವ "try" ಮಾಡ್ತೀನಿ.. ಎಂದು ಮುಖವರಳಿಸಿಕೊಂಡು ಹೇಳಿದ.... ಅಂದು ರಾತ್ರಿ ನನಗೆ ಕರೆ ಮಾಡಿ... "ನನಗೆ ೧೦ ಟಿಕೆಟ್ ಸಿಕ್ಕಿತು..ನೀನು ಬರ್ತಿದ್ಯ ಸುಮ್ನೆ kui kui ಅನ್ನಬೇಡ...ಈ ಭಾನುವಾರ first show ಉರ್ವಶಿ.. ಒಕೆ" ಎಂದು ಪೋನಿಟ್ಟ... ನಾನು ಆತನಿಗೆ ಮುಂಚೆಯೆ ಹೇಳಿದ್ದೆ.. ನನಗೆ ತಮಿಳು ಅಷ್ಟಾಗಿ ಬರುವುದಿಲ್ಲವೆಂದು... ನನಗೆ ಮೊದಲ ವಾರದಲ್ಲೆ ನೋಡಬೇಕೆನ್ನುವ craze ಇಲ್ಲವೆಂದು...ಆದರೂ... ಸಮಯಕ್ಕೆ ಸರಿಯಾಗಿ ಚಿತ್ರಮಂದಿರ ತಲುಪಿ ನನ್ನ ಆಸನದಲ್ಲಿ ಸ್ಥಿತನಾದೆ.. ನನ್ನ ಪಕ್ಕ ಕುಳಿತ ಗೆಳೆಯನಿಗೆ ಹೇಳಿದೆ..." ಲೊ ನನಗೆ ಅಷ್ಟಾಗಿ ತಮಿಳು ಅರ್ಥವಾಗುದಿಲ್ಲ.. ನೀನೇ ಹೇಳಬೇಕು..ಒಕೆ " ಎಂದೆ..ಆತ ತನ್ನ ಗೋಣನಲ್ಲಾಡಿಸಿದ...

ಚಿತ್ರ ಶುರುವಾಯಿತು...ಬೆಳ್ಳಿತೆರೆಯ ಮೇಲೆ "ಸೂಪರ್ ಸ್ಟಾರ್" ರಜನಿ ಎಂದು ಬಂದ ಕೂಡಲೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು... ನನ್ನ ರೋಮಗಳು ಸೆಟೆದು ನಿಂತವು.... ಮೈಯಲೆಲ್ಲ ಮಿಂಚಿನ ಸಂಚಾರ.. ಅಬ್ಬಬ್ಬಾ..ಎಂದು ಸುಮ್ಮನಾದೆ.... ಚಿತ್ರದ ಒಟ್ಟೂ ಕತೆ ಇಷ್ಟು.. ಅಮೆರಿಕೆಯಲ್ಲಿ software architect ಆಗಿರುವ ಶಿವಾಜಿ ಭಾರತಕ್ಕೆ ಬಂದು ತನ್ನ ಹೆಸರಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವ ಆಸೆಯನ್ನು ವ್ಯಕ್ತಪಡಿಸುತ್ತಾನೆ..ಅದನ್ನು ಆರಂಭಿಸಲು ಹೊರಡಿ ಸಾಕಷ್ಟು ರಾಜಕೀಯ ಕುಯುಕ್ತಿಗಳಿಗೆ ಒಳಗಾಗಿ ಲಂಚದ ವಿಶ್ವರೂಪ ಕಂಡು ಕಂಗೆಟ್ಟು ಒಂದು ಹಂತದಲ್ಲಿ ಬರಿಗೈ ಭಿಕಾರಿಯಾಗುತ್ತಾನೆ.. ತದನಂತರ ಕೇವಲ ಒಂದು ರೂಪಾಯಿನಿಂದ ಮತ್ತೆ ಕಳೆದುಕೊಂಡ ಹಣವನ್ನೆಲ್ಲ ಪಡೆದು ಸಮಾಜದ ದುರುಳರಿಂದ "black money" ಯನ್ನು ವಿನಿಯೋಗಿಸಿ ತನ್ನ ಶಿಕ್ಷಣ ಸಂಸ್ಥೆಗಳನ್ನು ಪೂರ್ಣಗೊಳಿಸುತ್ತಾನೆ.. ಈ ಚಿತ್ರದ ನಿರ್ದೇಶಕ "ಅನ್ನಿಯನ್" ಖ್ಯಾತಿಯ ಶಂಕರ್... ಅದು ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಹಣವನ್ನು ದೋಚಿದ ಯಶಸ್ವಿ ಚಿತ್ರ... ಹಾಗಾಗಿ ಸಾಕಷ್ಟು ಭರವಸೆಗಳಿತ್ತು.. ನನಗೆ ಕಂಡ ಹಾಗೆ ಚಿತ್ರದುದ್ದಕ್ಕು ಸರಿಯಾದ ಕಥಾ ಚೌಕಾಟ್ಟೇ ಇಲ್ಲ... "ಲಂಚ" ದಂತಹ ಘನ ಗಂಭೀರ ವಿಷಯವನ್ನು ಹೇಗೆ ಬಗ್ಗುಬಡಿಯುವುದೆಂದು ರಜನಿನ ಮೂಲಕ ಸರಿಯಾಗಿ ಕಟ್ಟುವುದೇ ಇಲ್ಲ... ಪ್ರತಿ frame ನಲ್ಲು ರಜನಿ ಮೆರೆಯುತ್ತಾರೆ..

ರಜನಿಯ image ಗೆ ಕಟ್ಟುಬಿದ್ದು ಸಾಕಷ್ಟು ಅನಾವಶ್ಯಕ ಎಳೆಗಳನ್ನು ಮಧ್ಯ ಬೆಸೆಯಲಾಗಿದೆ... ಹಾಗೆ ನೋಡಿದರೆ ಪ್ರತಿ ರಜನಿ ಚಿತ್ರದಲ್ಲಿ ರಜನಿಯ ಸಾಕಷ್ಟು punch ಡೈಲಾಗ್ಸ್ ಇರುತ್ತದೆ... ಈ ಚಿತ್ರದಲ್ಲಿ ಒಂದು ಡೈಲಾಗ್ ಬಿಟ್ಟರೆ ಹಾಸ್ಯನಟ ವಿವೇಕ್ ಹೆಚ್ಚು ಮಿಂಚುತ್ತಾರೆ...ತನ್ನ ಡೈಲಾಗ್ಸ್ ಇಂದ ಹಾಗು timings ಇಂದ...ಒಂದುಕಾಲದಲ್ಲಿ ತೆಲುಗಿನ ನಾಯಕನಟನಾಗಿದ್ದ "ಸುಮನ್" ಇದರಲ್ಲಿ ಖಳನಾಯಕ... ಅದ್ಭುತವಾಗಿ ನಟಿಸಿದ್ದಾರೆ... ರಜನಿ ಅಭಿನಯದ ವಿಷಯದಲ್ಲಿ ಎರಡು ಮಾತಿಲ್ಲ... ನೋಡಿದರೆ ಆತನಿಗೆ 57 ವಯಸ್ಸಾಗಿದೆಯೆಂದು ಅನಿಸುವುದೆ ಇಲ್ಲ.. ಪ್ರತಿ frame ನಲ್ಲಿ ಮಿಂಚುತ್ತಾರೆ.. ಹಾಗು ಜನರನ್ನು ರಂಜಿಸಲು ಸಾಕಷ್ಟು ಪ್ರಯತ್ನ ಪಡುತ್ತಾರೆ...!!!!

ನಾಯಕಿ ಶ್ರೇಯ ಗೆ ನಟನೆಗೆ ಹೆಚ್ಚು ಅವಕಾಶವಿಲ್ಲ... ಆಕೆಯ ಸ್ನಿಗ್ಧ ಸೌಂದರ್ಯವನ್ನು ಬರುವ ಪ್ರತಿ ಹಾಡಿನಲ್ಲು ಬಿಚ್ಚಿ ತೋರಿಸುತ್ತಾರೆ!!!!....ಕಲಾತ್ಮಕತೆ ಮೆರೆದಿದ್ದಾರೆ!!! ... ಚಿತ್ರದ ಪ್ರತಿ ಹಾಡಿನ ಸೆಟ್ ಗಳಂತು ಅದ್ಬುತ..ಸಾಕಷ್ಟು ಹಣ ವ್ಯಯಿಸಿದ್ದಾರೆ..ಹಾಡುಗಳ ಚಿತ್ರೀಕರಣಕ್ಕೆ... ಹಾಗೆ ರಜನಿ ತನ್ನ ವಿಭಿನ್ನ getup ಗಳಲ್ಲಿ ಮಿಂಚುತ್ತಾರೆ... ತೆರೆಯ ಮೆಲೆ ನಾಯಕರು ಸಿಗರೆಟ್ ಹಚ್ಚಿ ವಿರಾಜಿಸಬಾರದೆಂಬ ಕಟ್ಟಳೆಯಿದೆ... ಅದಕ್ಕಾಗಿ ರಜನಿ bubble gum ವಿಭಿನ್ನವಾಗಿ ಬಾಯಿಗೆ ಹಾಕಿಕೊಳ್ಳುತ್ತಾರೆ...ಹಾಗು ಒಂದು ರೂಪಾಯಿ coin ನ soooooper ಆಗಿ ತಿರುಗಿಸಿ ಜೇಬಿಗಿಳಿಸುತ್ತಾರೆ.... ಹಲವು serious ಆದ scene ದ್ರುಶ್ಯಗಳಿಗೆ ವಿನೋದದ ಲೇಪ ನೀಡಿ ಹಾಸ್ಯಾಸ್ಪದ ವಾಗಿ ಮಾಡಿಬಿಡುತ್ತಾರೆ ನಿರ್ದೇಶಕ ಮಹಾಪ್ರಭುಗಳು.. ಮೊದಲೆ ಗುಲ್ಲೆಬ್ಬಿಸಿದಂತೆ ಚಿತ್ರದಲ್ಲಿ ಅಮಿತಾಭ್ ಕೂಡ ಬರುವುದಿಲ್ಲ..ಚಿರಂಜೀವಿ ಯು ಸಹ..ನಾನು ಕಡೆಯತನಕ ಕಾದೆ..ಎಲ್ಲಿ ಬರುವರೊ ಎಂದು.... ಒಟ್ಟಾರೆಯಾಗಿ ಹೇಳಿದರೆ ಈ ಚಿತ್ರ ಹಿಂದಿನ ರಜನಿಯ ಚಿತ್ರಗಳಂತೆ ರಂಜಿಸಲು ವಿಫಲವಾಗುತ್ತೆ.... ನಾನು ರಜನಿಯ ಪಕ್ಕಾ ಅಭಿಮಾನಿಯು ಅಲ್ಲ ಹಾಗು ಆತನ ದ್ವೇಷಿಯು ಅಲ್ಲ... ಒಬ್ಬ ಶ್ರೀಸಾಮನ್ಯ ಪ್ರೇಕ್ಷಕನಾಗಿ ಕುಳಿತು ಚಿತ್ರವನ್ನು ಪರಾಂಬರಿಸಿದ್ದೇನೆ.. ಹಾಗೆ ನೋಡಿದರೆ ರಜನಿ ಅಭಿನಯದ "ಪಡೆಯಪ್ಪ" ಚಿತ್ರದ ಅಭಿಮಾನಿ ನಾನು...ಆ ಚಿತ್ರವನ್ನು ಅದೆಷ್ಟು ಸಲ ನೋಡಿದ್ದೀನೊ.. ಲೆಕ್ಕವಿಟ್ಟವರ್ಯಾರು... ಹಾಗೆ "ಬಾಷ" ಚಿತ್ರ.... ನಾನು ಕೇಳುವ ಪ್ರಶ್ನೆಯೆಂದರೆ ರಜನಿಯಂತಹ ನಟನಿಗೆ ಒಂದು ಸರಿಯಾದ ಕಥಾಚೌಕಟ್ಟಿರುವ ಚಿತ್ರಕತೆ ಬರೆಯಲು ಆಗಲಿಲ್ಲವೆ???... ರೆಹಮಾನ್ ಸಂಗೀತ ದೇವರಿಗೆ ಪ್ರೀತಿ...ಆತನ ಸರಕು ಮುಗಿದಂತೆ ತೋರಿಬರುತ್ತದೆ... ಒಂದೆ ಒಂದು ಹಾಡು ಕೂಡ ಮನದಲ್ಲಿ ಚಿತ್ರಮಂದಿರದ ಹೊರಗಡೆ ಬಂದ ಮೇಲೆ ಉಳಿಯುವುದಿಲ್ಲ... ಏಕೆ ಹೀಗೆ?? ನನಗೆನ್ನಿಸುವ ಪ್ರಕಾರ ಒಬ್ಬ ಪ್ರಖ್ಯಾತ ನಟನ image ಗೆ ಸರಿಯಾದ ಚಿತ್ರಕತೆ ಕಟ್ಟಿಕೊಡುವುದರಲ್ಲಿ ಶಂಕರ್ ಸೋತಿದ್ದಾರೆ.. ಚಿತ್ರದ ಸಂಗೀತವು ಪ್ರತಿಒಂದು ಚಿತ್ರವನ್ನು promote ಮಾಡಲು ಒಂದು ಪ್ರಬಲವಾದ ಅಂಶ.... ಆ ವಲಯದಲ್ಲೂ ಕೂಡ ಸೋತಿದೆ ಎಂದೆ ಅನ್ನಬಹುದು...

ಚಿತ್ರ ಸಾಕಷ್ಟು ಹಣ ಗಳಿಸಬಹುದು..ಹಾಕಿದ ದುಡ್ಡೆಲ್ಲ ಇದಾಗಲೆ ಮರಳಿ ಬಂದಿರಬಹುದು...ಆದರೆ ಒಟ್ಟಾರೆಯಾಗಿ ರಜನಿ ಮತ್ತೊಮ್ಮೆ ತಮ್ಮ ಅಭಿಮಾನಿಗಳನ್ನು ನಿರಾಶೆಗೊಳಿಸಿದ್ದಾರೆ... ರಜನಿಯ ಅಭಿಮಾನಿಗಳಗಿದ್ದಲ್ಲಿ ಅಥವಾ ಚಿತ್ರದಲ್ಲಿ ಏನಿರಬಹುದೆಂಬ ಕೂತೂಹಲವಿರುವವರು ಒಮ್ಮೆ ನೋಡಬಹುದು..

ಒಮ್ಮೆ ನೋಡಿ ಚಿತ್ರಮಂದಿರದ ಹೊರಗಡೆ ಬಂದು ಸುಲಭವಾಗಿ ಮರೆಯಬಹುದಂತಾದ ಚಿತ್ರ "ಶಿವಾಜಿ"...

ಅದೇ ವೆಂಕ - ಸೀನ - ನೊಣ

Saturday, May 26, 2007

ಸಮಯ ರಾತ್ರಿ ೧೦:೩೦ ಅಥವಾ ೧೦:೪೫... ಎಲ್ಲೇ ಇದ್ದರೂ ಬಂದು ಸಿಸ್ಟೆಮ್ ಶುರುವಿಕ್ಕಿ ಯಾಹೂ! ಧೂತವಾಹಕದಲ್ಲಿ ಲಾಗಿನ್ ಆಗುತ್ತೇನೆ.. ಅದು ನಮ್ಮ ಅಂದರೆ ವೆಂಕ,ಸೀನ,ನೊಣರ ಅಲಿಖಿತ ಒಪ್ಪಂದ... ಯಾರೊಬ್ಬರು ಇಲ್ಲದಿದ್ದರೂ ಮೆಸೆಜ್ ಮಾಡಿ ಬರಮಾಡುತ್ತೇವೆ....

ಅಲ್ಲಿ conference ಶುರು ಮಾಡಿ ಮಾತಾಡಲು ಶುರುಮಾಡಿದರೆ ಲೋಕದ ಪರಿವೆಯೆ ಇರುವುದಿಲ್ಲ... ದಿನವೂ ಮಾತಡಲು ವಿಷಯಗಳು ಅದೆಲ್ಲಿಂದ ಬರುವುದೋ ಆ ಭಗವಂತನಿಗೇ ಗೊತ್ತು..!!

ನಾವು ಶುರು ಮಾಡಿದ conference ನಲ್ಲಿ ಜನರು ಬರುತ್ತಿರುತ್ತಾರೆ..ಹೋಗುತ್ತಿರುತ್ತಾರೆ..but ನಾವ್ಗಳು ಮಾತ್ರ ಬರುವವರಿಗೆ "ಹಾಯ್!" ಹೇಳುತ್ತ ಹೋಗುವವರಿಗೆ "ಬ್ಯೆ ಬ್ಯೆ" ಹೇಳುತ್ತ ಅಲ್ಲೇ ಇರುತ್ತೇವೆ.. ಸುಮಾರು ಪ್ರತಿನಿತ್ಯ ೧ ಗಂಟೆವರೆಗೂ...
ದಿನಂಪ್ರತಿ ನಡೆಯುವ ವಿಷಯಗಳು, ವಿನೋದಮಯ ಪ್ರಸಂಗಗಳು, ಆ ದಿನದ ಅನುಭವಗಳು.. ಒಂದೇ ಎರಡೇ..ನಾವು ಹರಟೆಮಲ್ಲರೇ ಸರಿ...

ಹಾ! ಮರೆತಿದ್ದೆ..ಇಲ್ಲಿ ಪಾತ್ರ ಪರಿಚಯ ಮಾಡುವುದನ್ನೇ ಮರೆತಿದ್ದೆ..

ಮೊದಲಿಗೆ ವೆಂಕ ಅಂದರೆ - ಶ್ರೀಧರ

ಸೀನ ಅಂದರೆ - ಶ್ರೀನಿವಾಸ (ಪ್ರೇಮ ಕವಿ) (ಬಹುಮುಖ ಪ್ರತಿಭೆ).. the list goes on..

ನೊಣ ಅಂದರೆ - ಅರುಣ(ಪರಿಸರಪ್ರೇಮಿ) (ಸಹಜ ಕವಿ)...the list goes on...

ಒಂದಷ್ಟು ದಿನ ಸೀನ ಮತ್ತೆ ನೊಣ voice conference ಮಾಡಲು ಶುರುವಿಕ್ಕಿದರು..... ನನ್ನ headphone ಸರಿ ಇಲ್ಲದುದರ ಕಾರಣ ಇವರಿಗೆ ಪಟಾಕಿ ರೀತಿಯ ಕೇಳಿಸುತ್ತಿತಂತೆ.....ಹೆ ಹೆ ಹೆ... ನಿಲ್ಲಿಸಿಬಿಟ್ಟರು... ನನಗೊಂತರಾ ಖುಷಿಯಾಯಿತು.... ನನಗೆ ಮಾತಡುವುದಕ್ಕಿಂತ type ಮಾಡಿ ನನ್ನ ಭಾವ!! ಗಳನ್ನ ವ್ಯಕ್ತಪಡಿಸುವುದು ಸುಲಭವೆಂದು..

ಎಲ್ಲರನ್ನು ನಗಿಸುತ್ತ..ಕೆಲವೊಮ್ಮೆ ಛೇಡಿಸುತ್ತಾ, ಅರುಣನ/ಶ್ರೀನಿವಾಸನ lecture/ಹಾಡು ಗಳನ್ನ ಕೇಳುತ್ತ...
ವಿಚಾರ ವಿನಿಮಯಮಾಡಿಕೊಳ್ಳುತ್ತ ನಡೆಸುವ ಹರಟೆಯ ಮಜವೆ ಬೇರೆ ಬಿಡಿ..!!

ಹೀಗೆ ನಮ್ಮ conference ಸಾಧ್ಯವಾದಷ್ಟು ದಿನಗಳ ಕಾಲ ನಡೆಯಲಿ ಎಂದು ಆಶಿಸುತ್ತ ನನ್ನೀ ಲೇಖನವನ್ನ ಮುಗಿಸುತ್ತೇನೆ... ಈ ಸ್ನೇಹ ಸದಾ ಕಾಲ ಹೀಗೆ ಇರಲಿ...

ಹೀಗೆ ಕೆಳಕೊಟ್ಟ ಕೊಂಡಿಗಳನ್ನ ಹಾಗೆ ಓದಿಬಿಡಿ...ಚೆನ್ನಾಗಿವೆ
http://gandabherunda.blogspot.com/2007/05/blog-post_26.html

http://speaktonature.blogspot.com/2007/05/blog-post_25.html

ಅಂದ ಹಾಗೆ ನಿಮಗಾರಿಗಾದರು ನಮ್ಮ ಹರಟೆಯಲ್ಲಿ ಪಾಲ್ಗೊಳ್ಳುವ ಆಸಕ್ತಿಯಿದ್ದಲ್ಲಿ ೧೦:೩೦ ಗೆ ಧೂತವಾಹಕದಲ್ಲಿ ಲಾಗಿನ್ ಆಗ್ಬಿಡಿ..ಸಿಗೋಣ ಅಲ್ಲಿ... ಬರ್ತೀರಾ ತಾನೆ??????

ಉಪಹಾರ ಕೇಂದ್ರದ ಮಸಾಲೆ ದೋಸೆ

Saturday, May 19, 2007

ನಾನು ನ್ಯಾಷನಲ್ ಹೈಸ್ಕೂಲಿನ ವಿದ್ಯಾರ್ಥಿ, ಶನಿವಾರ ಬಂತೆಂದರೆ ನನಗೊಂತರ ಖುಷಿ.. ಅಂದು ಉಪಹಾರ ಕೇಂದ್ರದ ಮಸಾಲೆ ದೋಸೆ ಯನ್ನು ಮೆಲ್ಲಬಹುದು ಎಂದು.. ಶನಿವಾರದಂದು ನಮಗೆ ತರಗತಿಗಳು 7:30 ಗೆಲ್ಲ ಶುರುವಾಗಿಬಿಡುತಿತ್ತು..
ಬೆಳ್ಳಂಬೆಳಗ್ಗೇನೆ ಎದ್ದು ಅಮ್ಮನ ಬಳಿ 10ರೂಪಾಯಿಇಸಿದುಕೊಳ್ಳುತ್ತಿದ್ದೆ... ಶನಿವಾರದಂದು 5 periodಗಳು ಇರುತ್ತಿದ್ದವು.. ಮೊದಲು 3 periods ಅಮೆಲೆ ಮಿಕ್ಕವು.. 10ಗಂಟೆಗೆ ತಿಂಡಿಗೆಂದು ಬಿಡುತ್ತಿದ್ದರು.. ಆಗ ನಮ್ಮದೊಂದು ಗುಂಪು ಇತ್ತು.. ಬಿಟ್ಟೊಡನೆಯೆ ನಾನು,ರಂಜನ್,ಪವನ್,ಸುಧನ್ವ,ಶ್ರೀರಾಮ್,ಸಂದೀಪ್,ನಿರಂಜನ್,ಜಯಂತ್.. ಉಪಹಾರ ಕೇಂದ್ರದೆಡೆಗೆ ಧಾವಿಸುತ್ತಿದ್ದೆವು.. ಬೇಗ ಹೋದರೆ ಬೇಗ ತಿಂದು ವಾಪಸು ಬರಬಹುದು ಎಂದು.... ಬಹಳ ಸಾರಿ ನಾವು ಹೋಗುವ ಹೊತ್ತಿಗೆ rush ಆಗಿಬಿಡುತಿತ್ತು..ಅಲ್ಲೆ ಜೈನ್ ಕಾಲೇಜ್ ಸಹ ಇದೆ... ಅವರೊಂದಷ್ಟು ಜನ ಸೇರಿಬಿಡುತ್ತಿದ್ದರು..

ಆ ಕಾಲೇಜಿನ ಮಂದಿಯನ್ನು ಕಂಡರೆ ನಮಗೊಂದು ರೀತಿಯ ದಿಗಿಲು ಹಾಗೆ ಅಸಡ್ಡೆಯು ಸಹ ಇತ್ತು.ಕಾರಣ ಅವರ ಥಳುಕು ಬಳುಕು ವೇಷಗಳು... ಹಾಗು ಅವರಾಡುತ್ತಿದ್ದ ಮಾತುಗಳು.. ಅವರ tussa pussa ಆಂಗ್ಲ ಭಾಷೆಯನ್ನು ಕೇಳಿ ನನಗಂತು ಒಮ್ಮೊಮ್ಮೆ ದಿಗಿಲಾಗುತ್ತಿತ್ತು...

ಎಲ್ಲರು 10ರೂಪಾಯಿಗಳನ್ನು ತಂದಿರುತ್ತಿದ್ದರು... ಅದನ್ನು ಒಬ್ಬನ ಕೈಗೆ ಕೊಟ್ಟು... "ಹೋಗು.. token ತಗೊ" ಎಂದುಬಿಡುತ್ತಿದ್ದೆವು... ಆ rush ನಲ್ಲಿ ನುಗ್ಗಿ ಟೋಕನ್ ಸಂಪಾದಿಸುವುದೆ ಒಂದು ಸಾಹಸ.. ಮಗದೊಬ್ಬನನ್ನು ಕಳಿಸಿ "ಹೋಗು order ಕೊಡು" ಎನ್ನುವುದು... ಆ ದೋಸೆ ಮಾಡುವವನನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದೆವು.. ಅಹಾ ಆತ ದೋಸೆಯನ್ನು ಹುಯ್ಯುವುದೇನು....ತುಪ್ಪ! ಸುರಿಯುವುದೇನು.... ಕೆಂಪು ಚಟ್ನಿಯನ್ನು ಅದಕ್ಕೆ ಸವರಿ... ಆಲೂಗಡ್ಡೆ ಪಲ್ಯವನ್ನು ಎತ್ತಿ ದೋಸೆಯ ಮದ್ಯಕ್ಕೆ ಒಗೆದು..ದೋಸೆ ಯನ್ನು ಸುತ್ತಿಕೊಡುತ್ತಿದ್ದ ರೀತಿ.. ಚಮತ್ಕಾರವೆ ಸರಿ..
ಗರಿಗರಿ ಮಸಾಲೆ ದೋಸೆ ready...

ನಮ್ಮ ಮನೆಗಳಲ್ಲಿ ಹೀಗೇಕೆ ಮಾಡುವುದಿಲ್ಲವೆಂದು..ಹಾಗು ಇಲ್ಲಿನ ಬರುವಷ್ಟು ವಾಸನೆ ಏಕೆ ಬರುವುದಿಲ್ಲವೆಂದು ಹಲವಾರು ಬಾರಿ ಯೋಚಿಸುತ್ತಿದ್ದೆ..


ಅಷ್ಟರೊಳಗೆ ಮಿಕ್ಕವರು ಸ್ಥಳ ಹಿಡಿದು ಕೊಳ್ಳುತ್ತಿದ್ದರು... ಹೋಗಿ ನಿಂತು ಎಲ್ಲರೊಡನೆ ಹರಟುತ್ತ ತಿನ್ನುವ ಮಜವೆ ಬೇರೆ..

ಎಲ್ಲರನ್ನು ರೇಗಿಸುತ್ತ.."ಲೊ ಎಷ್ಟೊತ್ ಮಾಡ್ತ್ಯ ತಿನ್ನಕ್ಕೆ..ತಿನ್ನೋ ಬೇಗ....ಸಾಕು ಅವ್ಳನ್ನ ನೋಡಿದ್ದು...ತಿನ್ನು"..

ಹೀಗೆ ತಿಂದು ಮುಗಿಸಿ....ಕೈತೊಳೆದು ಬರುತ್ತಿದ್ದೆವು..ನಾನಂತು ಸರಿಯಾಗಿ ಕೈತೊಳೆಯಿತ್ತಿರಲಿಲ್ಲ..ಕಾರಣ ದೋಸೆಯ ವಾಸನೆ ಮತ್ತೆ ಮತ್ತೆ ಮೂಸಿ ಮೂಸಿ ಆನಂದಿಸಿವುದಾಗಿತ್ತು..ಹೆ ಹೆ ಹೆ....

ಅದರ ವಾಸನೆ ಇರುವವರೆಗು ಮೂಸುವುದು.... ಆಗ ಉಪಹಾರ ಕೇಂದ್ರದಲ್ಲಿ ದೋಸೆಗೆ 9/- ರೂ ಇತ್ತು..ಮಿಕ್ಕ ಒಂದು ರೂಪಾಯ್ನಲ್ಲಿ "bambaiya" ತಿನ್ನುವುದು... ಮತ್ತೆ ಎಲ್ಲರು 1 ರೂಪಾಯಿ ಕೂಡಿಸಿ ಕೊಳ್ಳುವುದು.. ಕೆಲವರು ಅದು ಕೆಟ್ಟದು ಎಂದು.. "ಗುಟ್ಕ" ತರದ್ದು...ಅದಕ್ಕೆಲ್ಲ ದಾಸರಾಅಗಬಾರದು ಎಂದು..ತಿನ್ನುತ್ತಿರಲಿಲ್ಲ... ನಾವುಗಳು 2 packet ಕೊಂಡು ತಿಂದು....ಅಲ್ಲಿಂದ ಕಾಲ್ತೆಗೆಯುತ್ತಿದ್ದೆವು....ತರಗತಿಗೆ... ಮುಂದಿನ ಶನಿವಾರ ಮತ್ತದೇ ಕಾರ್ಯಕ್ರಮ...

ನಾನಂತು ಕಾಯುತ್ತಿದ್ದೆ...ಎಂದು ಶನಿವಾರ ಬರುವುದೊ..ಎಂದು ಮಸಾಲೆ ದೋಸೆ ತಿನ್ನುವುದೊ..ಎಂದು... ನನಗೆ ಆಗ ಹೆಚ್ಚಾಗಿ ಹಣ ಸಿಗುತ್ತಿರಲಿಲ್ಲ...
ಪ್ರತಿ ದಿನವು ಹೀಗೆ ಹೊರಗಡೆ ತಿನ್ನುವುದಾಗಿದ್ದರೆ ಎಷ್ಟು ಚೆನ್ನಾಗಿರುವುದೆಂದು ಭಾವಿಸಿಕೊಳ್ಳುತ್ತಿದ್ದೆ.. ಹೀಗೆ ಬೇಕಾದಾಗಲೆಲ್ಲ ಹೊರಗಡೆ ಹೋಗಿ ತಿನ್ನಲು... 10 ರೂಪಯಿಗಳನ್ನು ಖರ್ಚು ಮಾಡಲು ಹಿಂದು ಮುಂದೆ ನೋಡುತ್ತಲಿದ್ದೆ... ಶನಿವಾರ ನನಗೆ ಆ 10ರೂಪಾಯಿ ಸಿಗುತ್ತಿದ್ದುರ ಕಾರಣ ತರಗತಿಗಳು ಬೇಗ ಶುರುವಾಗುವುದರಿಂದ.. ನಮ್ಮ ತಾಯಿಗೆ ತಿಂಡಿ ತಯಾರಿಸಲು ಸಾಧ್ಯವಿರುತ್ತಿರಲಿಲ್ಲ..ಹಾಗಾಗಿ ಹೊರಗಡೆ ತಿಂದುಕೊ ಎಂದು..10 ರೂಪಾಯಿ ಕೊಡುತ್ತಿದ್ದರು...

ಇಂದು ಖರ್ಚು ಮಾಡುವ ಚೈತೈನ್ಯ ಇದೆ..10 ರೂಪಯಿಗಳಿಗೆಲ್ಲ ಲೆಕ್ಕ ಇಡುವುದಿಲ್ಲ... ಹೊರಗಡೆ ಹೋದರೆ ಹಣ ಖರ್ಚು ಮಾಡಲು ಹಿಂದು ಮುಂದು ನೋಡುವುದಿಲ್ಲ.. ತಿಂಗಳ ಕೊನೆಗೆ ಒಂದಷ್ಟು ಐದಂಕೆಯ ಸಂಬಳ ನನ್ನ ಖಾತೆಗೆ ಜಮೆ ಆಗುತ್ತದೆ... ಆದರೆ ೧೦ ರೂಪಯಿಗಳನ್ನು ಜತನವಾಗಿ ಕಾಪಿಟ್ಟುಕೊಂಡು ಬಂದು ತಿನ್ನುತ್ತಿದ್ದ ರೀತಿಗೂ. ಅದರಲ್ಲಿ ನನಗೆ ಸಿಗುತ್ತಿದ್ದ ಸುಖಕ್ಕೂ.. ಇಂದು ಕೆಲ ನೂರುಗಳು..ಜೇಬಿನಲ್ಲಿ ಇದ್ದರೂ ಅದನ್ನು ಯಥೇಚ್ಚವಾಗಿ ಖರ್ಚು ಮಾಡಿದರೂ
ಅಂದಿನ ೧೦ರೂಪಯಿಗಳನ್ನ ಖರ್ಚು ಮಾಡಿ ಉಂಟಾಗುತ್ತಿದ್ದ ಸಂತೋಷ ಇಂದು ನನ್ನಲಾಗುವುದಿಲ್ಲ..

ಇಂದು ಪ್ರತಿದಿನ ಹೋಗಿ ತಿನ್ನುವ ಸಾಮರ್ಥ್ಯವಿದ್ದರೂ.. ಅಂದಿನಷ್ಟು ಕಾತರತೆ,ಉತ್ಸುಕತೆ, ಇಂದು ನನ್ನಲ್ಲಿಲ್ಲ..
ಕಾರಣ ಗೊತ್ತಿಲ್ಲ ಎಂದಷ್ಟೆ ಹೇಳಬಹುದು...

ಗೊಂದಲಮಯ "ಉಭಯಕುಶಲೋಪರಿ"...

Monday, May 7, 2007

ಇದೊಂದು ಗೊಂದಲ...ಬಹಳ ವರ್ಷಗಳಿಂದ ಕಾಡುತ್ತಿರುವ ಗೊಂದಲವಿದು... ನಿಮ್ಮ ಬಳಿ ಹಂಚಿಕೊಳ್ಳುವ ಉದ್ದೇಶದಿಂದ ನನ್ನೀ ಲೇಖನ..... ಯಾರದರು ಪರಿಚಯಸ್ಥರು ಎದುರು ಸಿಕ್ಕಾಗ ಅಥವ ಯಾವುದಾದರು ಕಾರ್ಯಕ್ರಮಗಳಿಗೆ ಹೋದಾಗ ಸಂಭಾಷಣೆಯನ್ನು ಹೇಗೆ ಶುರುಮಾಡುವೆದೆಂದು??... ಅದಕ್ಕೆ "ಉಭಯಕುಶಲೋಪರಿ" ಎಂದು ಹೆಸರು...

ಸಾಮನ್ಯವಾಗಿ ನಾನು ಹೆಚ್ಚು ಮದುವೆ-ಮುಂಜಿ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ..... ಹೋದರೂ ಯಾವುದಾದರು ಮೂಲೆಯೊಂದರಲ್ಲಿ ಕುಳಿತಿರುತ್ತೇನೆ.... ಕರ್ಮಕ್ಕೆ ನಮ್ಮ ಸಮುದಾಯದಲ್ಲಿ ನನ್ನ ವಯೋಮಾನದವರು ಕಮ್ಮಿ... ಎಲ್ಲಾ ಕಾರ್ಯಕ್ರಮಗಳಲ್ಲೂ ಅವರು ಸಿಗುವುದಿಲ್ಲ... ಸಿಕ್ಕರೆ ಅವರೊಂದಿಗೆ ಅಂಡಲೆಯಬಹುದು...ಇಲ್ಲವಾದರೆ ಯಾವುದಾದರೊಂದು ಮೂಲೆಯಲ್ಲಿ ಒಂಟಿ ಪಿಶಾಚಿಯ ಹಾಗೆ ಬಿದ್ದಿರುತ್ತೇನೆ.... :-( ಎಷ್ಟೊ ಸಲ ತೀರ ಹತ್ತಿರದ ಸಂಬಂಧಿಗಳ "ನಾಮಕರಣಕ್ಕೆ" ಹೋಗಿರುತ್ತೇನೆ.. ಮತ್ತೆ ಯಾವಗಲಾದರೊಮ್ಮೆ ಮತ್ತೆ ಅದೇ ಮನೆಗೆ ಹೋದಾಗ..ಆ ಮಗು ಬೆಳೆದು ದೊಡ್ಡದಾಗಿರುತ್ತದೆ,ಅಲ್ಲೇ ಆಟವಾಡುತ್ತಿರುತ್ತದೆ,ಯಾರ ಮಗುವೆಂದೆ ತಿಳಿಯುವುದಿಲ್ಲ... ಹೆಸರು ಕೂಡ ನೆನಪಿರುವುದಿಲ್ಲ..ಅದೊಂದು ಫಜೀತಿ...

ಮದುವೆಗಳಿಗೆ ಹೋದಾಗ...ಯಾರಾದರು ಹಿರಿಯರು ಎದುರು ಸಿಕ್ಕಾಗ.."ಚೆನ್ನಾಗಿದ್ದೀರ??"...ಹೀಗೆ ಕೇಳುವುದು ವಾಡಿಕೆ..ಅಲ್ಲವೆ..?? ನನಗೇಕೊ ಹಾಗೆ ಕೇಳಲು ಮನಸೇ ಬರುವುದಿಲ್ಲ.. ಕೇಳಿದರೂ...ಅದೊಂದು ಸಿದ್ದ ಉತ್ತರವಿರುತ್ತದೆ..
"ಚೆನ್ನಾಗಿದ್ದೀನಿ..ನೀನು"??..ಅದಕ್ಕೆ ನಾನು ಕೂಡ."ಚೆನ್ನಾಗಿದ್ದೀನಿ" ಎನ್ನುತ್ತೇನೆ... ಇದ್ಯಾವ ಪರಿಯ ಸಂಭಾಷಣೆ...??? ನನಗಂತೂ ಅರ್ಥವಾಗುವುದಿಲ್ಲ....

ಅಲ್ಲ ಅವರು ಚೆನ್ನಾಗಿದ್ದರೆಷ್ಟು ಬಿಟ್ಟರೆಷ್ಟು??..... ಅವರು ಚೆನ್ನಾಗಿದ್ದರೆ ನಾವೇನೊ ಸಂತೋಷ ಪಡುವಹಾಗೆ...ಇಲ್ಲವಾದರೆ ನಾವೇನು ಮರುಗುತ್ತೆವೆಯೆ?? ಇಲ್ಲ... ಸುಮ್ಮನೆ ಬೂಟಾಟಿಕೆ ಮಾತುಗಳವು ಎಂದು ನನ್ನ ಅಭಿಪ್ರಾಯ... ತೀರ ಹತ್ತಿರವಾದವರ ಬಳಿ ಈ ರೀತಿಯ ಪ್ರಶ್ನೆಗಳು ಕೇಳುವುದರಲ್ಲಿ ಅರ್ಥವಿದೆ...

ನಮ್ಮ ತಾಯಿ ನನಗೆ ಆಗಾಗ ಬಯ್ಯುತಿರುತ್ತಾರೆ....ಮನೆಗೆ ಬಂದ ಅತಿಥಿಗಳನ್ನು ಸರಿಯಾಗಿ ವಿಚಾರಿಸುವುದಿಲ್ಲವೆಂದು..
ಯಾರೊ ಮದುವೆಗೊ ಮತ್ಯಾವುದಕ್ಕೊ ಕರೆಯಲು ಬಂದಿರುತ್ತಾರೆ...ಅವರನ್ನು ಹೋಗಿ ಕೇಳಳೆ..."ನೀವು ಚೆನ್ನಾಗಿದ್ದೀರ" ಎಂದು..

ನಮ್ಮ ದೊಡ್ಡಮ್ಮ ಒಮ್ಮೆ ನನ್ನ ತಾಯಿಯ ಬಳಿ ಹೇಳಿದ್ದರಂತೆ..." ನಿನ್ನ ಮಗ... ನಾನು ಮನೆಗೆ ಬಂದರೆ.... ಹೇಗಿದ್ದೀರ?? ಅಂತ ಕೂಡ ವಿಚಾರಿಸುವುದಿಲ್ಲ ಎಂದು..... ಅದೇನು ಅಂತ ಬೆಳೆಸಿದ್ದೀರೊ ನಿಮ್ಮ ಮಕ್ಕಳನ್ನ"!!!

ಅಲ್ಲ ನಮ್ಮ ದೊಡ್ಡಮ್ಮನ ಪರಿಸ್ಥಿತಿ ನನಗೆ ಗೊತ್ತು..ಅವರಿಗೆ ಮಧುಮೇಹ ಇದೆ..ಮೇಲಾಗಿ ಮಂಡಿಚಿಪ್ಪಿನ ಶಸ್ತ್ರಚಿಕಿತ್ಸೆ ಬೇರೆ ಮಾಡಬೇಕಿದೆ... ಎಲ್ಲದಕ್ಕಿಂತ ಹೆಚ್ಚಾಗಿ ಅವರಿಗೆ ವಯಸ್ಸಾಗಿದೆ... ಅವರ ಬಳಿ ಹೋಗಿ ಕೇಳಲೆ
"ದೊಡ್ಡಮ್ಮ ನೀವು ಚೆನ್ನಾಗಿದ್ದೀರ??" ಎಂದು....

ನನ್ನ ಬುದ್ದಿ ತಿಳಿದೆ ನನ್ನ ತಂಗಿ ನನ್ನನ್ನು ಛೇಡಿಸುತ್ತಿರುತ್ತಾಳೆ..ಯಾವುದಾದರು ಕಾರ್ಯಗಳಿಗೆ ಹೋದರೆ..
"ಆ ಮಗುವಿನ ಹೆಸರೇನು?? ಹೇಳು ನೋಡುವ??..."

"ಅಲ್ಲಿ ಒಡಾಡುತ್ತಿದ್ದಾರಲ್ಲ ಅವರು ಯಾರು?" ಹೀಗೆ....

ಅವಳಿಗೆ ತಮಾಷೆ... ನನಗೆ ಸಂಕಟ...

ಅದಕ್ಕೆ ಈನಡುವೆ.. ಬೇರೆ ರೀತಿಯ ಪ್ರಶ್ನೆಗಳನ್ನ ಕೇಳುತ್ತೇನೆ...

"ಎನಪ್ಪಾ ಏನು ಸಮಾಚಾರ?"

"ನಿಮ್ಮ ಕೆಲಸ ಹೇಗೆ ನಡೆಯುತ್ತಿದೆ?"...

"ದೊಡ್ಡಮ್ಮ ನಿಮ್ಮ ಆರೋಗ್ಯ ಹೇಗಿದೆ"? ;-) ಹೀಗೆ....

ಎನಾದರೊಂದು ಮಾತಾಡಲೆಬೇಕಲ್ಲವೆ..ಅದಕ್ಕೆ ಹೀಗೆ...

ಈ ಪ್ರಶ್ನೆಗಳ ಸಾಲಿಗೆ ನಿಮ್ಮ ಸಲಹೆಗಳೇನಾದರು ಇವೆಯೆ??..ಇದ್ದರೆ ಹೇಳಿ.. ಖಂಡಿತ ಸೇರಿಸಿಕೊಳ್ಳುವೆ...

'ಕುಡುಕ-DRUNKARD' ಎನ್ನುವ ಮುಂಚೆ ಒಮ್ಮೆ ಯೋಚಿಸಿ...!!!

Tuesday, May 1, 2007

ಕೆಲ ವರ್ಷಗಳ ಹಿಂದೆ ಮಾ ಹಿರಣ್ಣಯ್ಯನವರು ನಡೆಸಿಕೊಡುತ್ತಿದ್ದ "ಮಾಸ್ಟರ್" ಎಂಬ ಕಾರ್ಯಕ್ರಮ ಈಟೀವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು....ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರವಿರುತ್ತಿತ್ತು....ಅದರಲ್ಲಿ ಒಬ್ಬಾತ ಹೀಗೆ ಪ್ರಶ್ನೆಯನ್ನು ಕೇಳಿದ್ದ....
"ಪ್ರತಿದಿನ ಕುಡಿದು ತೂರಾಡಿ..ಗಲಾಟೆ ಮಾಡಿಕೊಂಡು..ಹೆಂಡತಿಯನ್ನು ಹೊಡೆಯುವವನನ್ನು ’ಕುಡುಕ’ ಎನ್ನುತ್ತಾರೆ..
ಯಾರಿಗು ತೊಂದರೆ ಕೊಡದೆ,ಗಲಾಟೆ ಮಾಡದೆ ತಮ್ಮ ಮನೆಯಲ್ಲಿ ಕುಡಿದು silent ಆಗಿ ಮಲಗುವವರನ್ನು ಕೂಡ ’ಕುಡುಕ’ ಎನ್ನುತ್ತದೆ ಸಮಾಜ... ಯಾಕೆ ಹೀಗೆ??"... ಹೀಗೆ ಸಾಗಿತ್ತು ಪ್ರಶ್ನೆ.... ಪ್ರತ್ಯುತ್ತರವಾಗಿ ಮಾ ಹಿರಣ್ಣಯ್ಯನವರು ಏನು ಉತ್ತರಿಸಿದರೆಂದು ನನಗೆ ಮರೆತುಹೋಗಿದೆ...but that question was selected as 'the' best question of that episode...

ಈ ವಿಷಯವಾಗಿ ನನ್ನ ಅಭಿಪ್ರಾಯವನ್ನು ನಿಮ್ಮ ಮುಂದೆ ನಮೂದಿಸಿದ್ದೇನೆ...

ಕುಡಿಯುವವರೆಲ್ಲರನ್ನು ’ಕುಡುಕ’ ಎನ್ನುವುದಾದರೆ.... ಕೆಲಸ ಮಾಡುವವರೆಲ್ಲರು ’ಕಾರ್ಮಿಕ’ರು... ಕೆಟ್ಟ ಮಾತುಗಳನ್ನಾಡುವವರೆಲ್ಲರು ’ಪೋಲಿಗಳು’.... ಹೀಗೆ ಸಾಗುತ್ತದೆ ಪಟ್ಟಿ....

ಕಳ್ಳತನವು ಕೆಲಸವೆ...ಹಾಗೆ ನೋಡಿದರೆ ಬಹಳ ಶ್ರಮವಹಿಸಿ ಮಾಡಬೇಕಾದ ಕೆಲಸವದು...ಅವನನ್ನು ’ಶ್ರಮಿಕ’,’ಕಾರ್ಮಿಕ’..ಎನ್ನಲಾಗುವುದೆ??....ಯೋಚಿಸಿ ನೋಡಿ... ನಾ ಹೇಳಬಯಸುವುದು ಇಷ್ಟೆ... "ಕುಡಿಯುವವರೆಲ್ಲ ಕುಡುಕರಲ್ಲ".....

ಆದರೆ ಕುಡಿತ ಚಟವಾಗಬಾರದಷ್ಟೆ... ಅದು ನನ್ನ ಕಳಕಳಿಯ ಪ್ರಾರ್ಥನೆ... :-)

ನಮ್ಮ ಸಮಾಜವೆ ವಿಚಿತ್ರ.... ಮದುವೆಗೆ ಗಂಡು ಗೊತ್ತು ಮಾಡುವಾಗ.. ಹುಡುಗ ಕುಡಿಯುತ್ತಾನೆಯೆ..ಸಿಗರೆಟ್ ಸೇದುತ್ತಾನೆಯೆ.. ಎಂದೆಲ್ಲ ಕೇಳಿ ತಿಳಿದುಕೊಳ್ಳುತ್ತಾರೆ.... ಅವನು ಕುಡಿತ..ಇತ್ಯಾದಿ ಇತ್ಯಾದಿ ಗಳೆಲ್ಲವನ್ನು ಮಾಡದಿದ್ದರೆ..ಅವನು ಸಕಲ ಸದ್ಗುಣ ಸಂಪನ್ನ... ಇಲ್ಲವಾದರೆ ನೀಚ..ದೂರ್ತ... ಹೀಗೆ...

ಕುಡಿತವನ್ನು ಮಾನದಂಡವನ್ನಾಗಿ ಇಟ್ಟು ನೋಡುತ್ತದೆ ಸಮಾಜ..... ಅದು ತಪ್ಪೆಂದು ನನ್ನ ಭಾವನೆ...

ಯಾವುದೆ ಚಟವಿಲ್ಲದೆ...ಜೀವನದ ಅಧೋಗತಿಗೆ ಇಳಿದಿರುವವರನ್ನು ನಾ ಕಂಡಿದ್ದೇನೆ...

ನನ್ನ ಪ್ರಕಾರ ಕುಡಿಯುವವರು ಮೂರು ವಿಧ.
೧)ತಮ್ಮ ತೆವಲಿಗಾಗಿ ಕುಡಿಯುವವರು... ಕೂತೂಹಲಿಗಳು.. ;-)
೨)ಜೀವನದ ಕಷ್ಟ ಕೋಟಲೆಗಳನ್ನು ಕ್ಷಣವಾದರೂ ಮರೆಯಲೋಸುಗ ಕುಡಿಯುವವರು...
೩)ಕೊನೆಯವವರು ಅದನ್ನೆ ಚಟವಾಗಿಸಿಕೊಂಡವರು..ಇವರಿಗೆ ಕುಡೀಲಿಕ್ಕೆ ಕಾರಣವೇನು ಬೇಕಾಗಿರುವುದಿಲ್ಲ....

ನಾ ಹೇಳಬಯಸುವುದೆನೆಂದರೆ.. ’ಕುಡಿಯುವವರೆಲ್ಲ ಕುಡುಕರಲ್ಲ’... ಹಾಗೆಂದು ಅವರನ್ನು ’ಕುಡುಕರೆಂದು’ ಕರೆಯುವುದು ಸಲ್ಲ.. :-)

ಕುಡಿತವನ್ನೆ ಚಟವಾಗಿಸಿಕೊಂಡು... ತನಗೂ ತನ್ನನ್ನು ನಂಬಿಕೊಂದವರನ್ನು ತೊಂದರೆಗೀಡು ಮಾಡುವವರನ್ನು ’ಕುಡುಕರೆಂದು’ ಕರೆಯಿರಿ...ಸಾಧ್ಯವಾದರೆ ನಾಲ್ಕು ಬುದ್ದಿ ಮಾತು ಹೇಳಿ.. ಕೇಳಲಿಲ್ಲವೆಂದರೆ ನಾಲ್ಕು ವದೆಗಳು ಕೊಟ್ಟರೂ ಸರಿಯೆ...ತಪ್ಪಿಲ್ಲ....

"ಜಾಣನಿಗೆ ಮಾತಿನ ಪೆಟ್ಟು..ದಡ್ಡನಿಗೆ ದೊಣ್ಣೆ ಪೆಟ್ಟು" ಎಂದು ಕೇಳಿಲ್ಲವೆ..???
ನೀವು ಕೇಳದಿದ್ದರೇನು..ನಾನಂತೂ ಕೇಳಿದ್ದೇನೆ.. ;-)

ಯಾರಿಗೂ ತೊಂದರೆ ಕೊಡದೆ.. ಹಿರಿಯರಿಗೆ ತಿಳಿಸದೆ ;-)... ಅದನ್ನು ಚಟವಾಗಿಸಿಕೊಳ್ಳದೆ ಕುಡಿಯಲು ಮನಸಿದ್ದರೆ ಕುಡಿಯಿರಿ... ಎಷ್ಟೆ ಮಾಡಿದರೂ..ಏನೇ ಆಟವಾಡಿದರೂ..ನಿಮ್ಮ ಪರಿಧಿಯನ್ನು ಅರಿಯುವುದು ಉತ್ತಮ..

ಮೇಲೆ ಹೇಳಿದ ವಿಷಯಗಳು ನಿಮಗೆ ಒಪ್ಪಿಗೆಯಾಗದಿದ್ದಲ್ಲಿ...ನನ್ನ ನಿಲುವು ತಪ್ಪಾಗಿದ್ದಲ್ಲಿ... ಮುಕ್ತ ಚರ್ಚೆಗೆ ಆಹ್ವಾನವೀಯುತ್ತೇನೆ... with or without drinks ;-)

ವಿಶಾಲಮನೋಭಾವದವರಾಗಿ ಚರ್ಚೆಯಲ್ಲಿ ಪಾಳ್ಗೊಳ್ಳುತ್ತೀರೊ...ಅಥವಾ.."ಥೂ..!! ಕಚಡ ನನ್ಮಗ ಎನೇನೊ ಗೀಚಿದ್ದಾನೆ"..ಎಂದು ಮೂಗು ಮುಚ್ಚಿ.. ನನ್ನ ನಿಲುವಿಗೆ ವಿರುದ್ದವಾಗಿ ಮಕಾಡೆ ಮಲಗುತ್ತೀರೊ??

ನಿರ್ಣಯ ನಿಮಗೆ ಬಿಟ್ಟದ್ದು... :-)

EXCUSE ME

Saturday, April 28, 2007

ಸನ್ನಿವೇಶ ೧: ಬಸ್ಸಿನಲ್ಲಿ ವಿಪರೀತ ನೂಕುನುಗ್ಗಲು ಇವನಿಗೆ ತನ್ನ ನಿಲ್ದಾಣ ಹತ್ತಿರವಾಗುತಿತ್ತು..ಆತ ಬಸ್ಸಿನ ಮಧ್ಯದಲ್ಲಿದ್ದ........
ಹಾಗಾಗಿ ಎಲ್ಲರನ್ನು ದೂಡಿ ದೂಡಿ ಬಸ್ಸಿನ ಹಿಂಬದಿಗೆ ತೆವಳುತ್ತ ಸಾಗುತ್ತಿದ್ದ....ಜನರನ್ನು ಸರಿಸಲು ಆತ ಉಪಯೋಗಿಸುತ್ತಿದ್ದ ಶಬ್ದ.. "excuse me "..."excuse me"...

ಸನ್ನಿವೇಶ ೨: ಅಡ್ಡಲಾಗಿ ೪ ಜನ ಹರಟುತ್ತಿರುತ್ತಾರೆ...ಒಬ್ಬ ಅವರು ನಿಂತಿರುವ ಜಾಗದ ಮೂಲಕ ಹಾದು ಹೋಗಬೇಕು...ಹತ್ತಿರ ಹೋಗಿ ಆತ ಉಸುರುತ್ತಾನೆ.."excuse me".. ಅವರು ದಾರಿ ಬಿಡುತ್ತಾರೆ...

ಸನ್ನಿವೇಶ ೩: class ಗೆ ೫ ನಿಮಿಷ ಮುಂಚೆ ಅಧ್ಯಾಪಕರು ತರಗತಿಲಿರುತ್ತಾರೆ. (ಹಾ!...ನಿಗದಿತ ವೇಳೆಗಿಂತ ಮುಂಚೆ ತರಗತಿ ತೆಗೆದುಕೊಳ್ಳುವುವರನ್ನು ನಾನು ನೋಡಿದ್ದೇನೆ..ಅನುಭವಿಸಿದ್ದೇನೆ).. :-)
ಓಬ್ಬ ಹುಡುಗ/ಹುಡುಗಿ ಒಡೋಡಿ ಬಾಗಿಲ ಬಳಿ ಬಂದು ಹೇಳುತ್ತಾನೆ........."excuse me".........


ಈ ಮೇಲ್ಕಂಡ ೩ ಸನ್ನಿವೇಶಗಳಲ್ಲಿ "excuse me" ಅಂದರೆ "ನನ್ನನು ಕ್ಷಮಿಸಿ" ಪದಬಳಕೆ ಸಾಮನ್ಯವಾಗಿ ಮಾಡುತ್ತಾರೆ... ಅದರ ಅವಶ್ಯಕತೆ ಇಲ್ಲವೆಂದು ನನ್ನ ಅಭಿಪ್ರಾಯ.. ಹಾ!..ಎಲ್ಲರೂ "excuse me" ಯೆಂದೆ ಸಂಬೋಧಿಸುವುದಿಲ್ಲ.... ಬಳಸುವ ಕೆಲ ಮಂದಿ ಗೆ ಮಾತ್ರ ನಾನು ಹೇಳಬಯಸುವುದು..


ಬಸ್ಸಿನಲ್ಲಿ footboard ಕಡೆಗೆ ಬರಲು .."ನನ್ನನ್ನು ಕ್ಷಮಿಸಿ".. ಎಕೆ ಉಪಯೋಗಿಸಬೇಕು..ಅಂಥ ಅಪರಾಧಾವಾದರೂಆತ ಎನು ಮಾಡಿರುತ್ತಾನೆ!!
ತನ್ನ ನಿಲ್ದಾಣದಲ್ಲಿ ಇಳಿಯುವುದು ಆತನ ತಪ್ಪೆ..?? "ಸ್ವಲ್ಪ ದಾರಿ ಬಿಡಿ ಸಾರ್" ಎಂದು ಸಂಬೋಧಿಸಬಹುದಲ್ಲವೆ??

ಈಲ್ಲಿ ಸುಮ್ಮ ಸುಮ್ಮನೆ "ನನ್ನನ್ನು ಕ್ಷಮಿಸಿ ಕ್ಷಮಿಸಿ" ಅಂತ ಎಕೆ ಹೊಡ್ಕೋಬೇಕು ಅಂತ.....??

ಇನ್ನು ಕೆಲವರು ಸೀನಿದ ನಂತರ "excuse me" ಅಂತ ಮೆಲ್ಲಗೆ ಉಸುರುತ್ತಾರೆ.. ಎನು ಸೀನೋದು ತಪ್ಪೆ??.... ಸೀನ್ಲಿ...ಅದಕ್ಕೆ "excuse me" ಅಂತ ಬೇರೆ..!!! ಅವರು ಹೇಳುವುದು ಯಾವನೊಬ್ಬನಿಗೂ ಕೇಳಿಸಿವುದಿಲ್ಲ...ಹತ್ತಿರದಲ್ಲಿ ಕುಳಿತಿರುವವನೊಬ್ಬನಿಗೆ ಬಿಟ್ಟು.....

ಹಲವು ಸಮಯದಲ್ಲಿ ನಾವು ಕೆಲ ಅಂಗ್ಲ ಪದಗಳ ಭಾವ(!!) ತಿಳಿಯದೆ ಉಪಯೋಗಿಸುತ್ತಿರುತ್ತೇವೆ....ಉದಾಹರಣೆಗೆ.. "sorry".."thanks" ಹೀಗೆ....

ಮಾಡಿದ್ದು ಎಂತಹ ದೊಡ್ಡ ತಪ್ಪಾದರೂ..ಅಥವಾ ಯಾವನೂಬ್ಬನಿಗು hurt ಮಾಡಿದರೂ ಸರ್ವೇಸಾಮನ್ಯವಾದ ಪದ "sorry" ..ಅಥವಾ ಸಣ್ಣಪುಟ್ಟ ಸಹಾಯಗಳಿಗೆ "thanks"

ಈಚೆಗೆ ಇದರ ಸಾಲಿಗೆ ಸೇರುತ್ತಿರುವ ಮತ್ತೊಂದು..ಪದವೆ "excuse me"..

ಸನ್ನಿವೇಶಕ್ಕೆ ತಕ್ಕಂತೆ ಪದಬಳಕೆ ಮಾಡುವುದು ಸೂಕ್ತವಲ್ಲವೆ... :-)

ಎನಂತೀರಿ?????????