ಎಲ್ಲೋ ಕೇಳಿದ ನೆನಪು..
ಮನುಷ್ಯನಾಗಿ ಹುಟ್ಟಿದ ಮನುಷ್ಯ ಗುಣಗಳನ್ನು ರೂಢಿಸಿಕೊಂಡವನು ಜೀವನದ ಉದ್ದಗಲಕ್ಕೂ ಈ ಮೂರು ಹಂತಗಳಲ್ಲಿ ತೊಯ್ದಾಡುತ್ತಿರುತ್ತಾನೆ...ನನಗೆ ಹೌದೆನ್ನಿಸಿತು...ಓದಿಕೊಳ್ಳಿ..
೧) ನಾನು ಮಾಡುತ್ತಿರುವುದು ಸರಿ, ಪ್ರಪಂಚ ಸರಿಯಿಲ್ಲ..
೨) ನನ್ನಲ್ಲೇ ಏನೋ ತಪ್ಪಿದೆ, ಪ್ರಪಂಚ ಸರಿಯಾಗೆ ಇದೆ...
೩) ನಾನು ಸರಿಯಾಗಿದ್ದೀನಿ, ಪ್ರಪಂಚ ಕೂಡ ಸರಿಯಾಗೆ ಇದೆ...
ಓದಿ ನಿಮಗೆ ಏನೆನ್ನಿಸಿತು??
ನೂತನ ಸಂವತ್ಸರದ ಹಾರ್ದಿಕ ಶುಭಾಶಯಗಳು......
Three Stages -u
Wednesday, January 2, 2008Posted by Sridhar Raju at 9:25 AM 9 comments
ನೆಮ್ಮದಿ....
Tuesday, January 1, 2008
ಇವತ್ತು ಎರಡನೆ ಬಾರಿ "ರಂಗಶಂಕರ" ದಲ್ಲಿ "ಮೈಸೂರ ಮಲ್ಲಿಗೆ" ನಾಟಕ ನೋಡಿದೆ.. ಬಹಳ ಬಹಳ ಹಿಡಿಸಿತು..ಬಹಳ ಸೊಗಸಾಗಿದೆ, ಅಚ್ಚುಕಟ್ಟಾಗಿದೆ...
ಅದರಲ್ಲಿ ಒಂದು ಕಡೆ ಕೆ.ಎಸ್.ನರಸಿಂಹಸ್ವಾಮಿಯವರ ಪತ್ನಿ ಹೀಗೆ ಕೇಳುತ್ತಾರೆ...."ನೀವು ಸಂತಸ ದಿಂದ ಬರೆದ್ರಿ, ನೋವಲ್ಲಿ ಬರೆದ್ರಿ, ನಲಿವಲ್ಲಿ ಬರೆದ್ರಿ, ಕಷ್ಟ ಇದ್ದಾಗ ಬರೆದ್ರಿ, ಸುಖ ಇದ್ದಾಗ ಬರೆದ್ರಿ, ಆದ್ರೆ ನೆಮ್ಮದಿಯಾಗಿ ಒಂದೂ ಪದ್ಯ ಬರೆದಿಲ್ಲವೆಂದೆನಿಸುತ್ತೆ ನಂಗೆ" ಎಂದು..
ಅದಕ್ಕೆ ಪ್ರತ್ಯುತ್ತರವಾಗಿ ನರಸಿಂಹಸ್ವಾಮಿಯವರು " ’ನೆಮ್ಮದಿ’ ಇದ್ದರೆ ಕವಿ ಯಾಗುವುದಕ್ಕೆ ಹೇಗೆ ಸಾಧ್ಯ..." ಎಂದರು..
ಯಾಕೋ ಏನೋ ಬಹಳ ಮನ ಮುಟ್ಟಿತು ಅವರ ಮಾತು...ಅದಕ್ಕಾಗಿ ಬ್ಲಾಗಿಸಿದೆ..
ಓದಿದುದಕ್ಕಾಗಿ ವಂದನೆಗಳು...
Posted by Sridhar Raju at 11:55 PM 11 comments
ಗೋವೆ ಪ್ರವಾಸ.. ಭಾಗ-1
ಮೊದಲ ಬಾರಿಗೆ ಅಂತರರಾಜ್ಯ ಪ್ರವಾಸಕ್ಕೆ ಅಣಿಯಾಗುತ್ತಲಿದ್ದೆ..ನಮ್ಮ ಗಮ್ಯ ಗೋವೆಯೆಂದು ನಿರ್ಧರಿಸಿದ್ದೆವು..ಪಶ್ಚಿಮ ಘಟ್ಟಗಳ ನಡುವೆ ಹಾದು ನುಸುಳುವ ರುದ್ರ ರಮಣೀಯ ಕೊಂಕಣ ರೈಲ್ವೆ ನಲ್ಲಿ ಪಯಣಿಸುವ ಬಯಕೆ ನಮ್ಮೆಲ್ಲರದಾಗಿತ್ತು...ರಂಜನ್ ಇದರ ರೂಪುರೇಶೆಯನ್ನು ಇತರರ ಮುಂದಿಟ್ಟಿದ್ದ...ಹಾ ಮರೆತಿದ್ದೆ ಈ ಪ್ರವಾಸದ ಪಾತ್ರಧಾರಿಗಳ ನಾಮಾಂಕಿತಗಳು ಹೀಗಿವೆ.. ಅಜಿತ್, ಶ್ರೀರಾಮ್, ಸಂದೀಪ್, ರಂಜನ್, ಉಜ್ವಲ್, ಸುನೀಲ್, ಶ್ರೀಧರ್..ಒಟ್ಟು ಏಳು ಜನ.. ಬೆಂಗಳೂರಿನಿಂದ ಮಂಗಳೂರಿಗೆ ಹೊರಟು ಅಲ್ಲಿಂದ ಕೊಂಕಣ ರೈಲ್ವೆ ನಲ್ಲಿ ಸಾಗಿ ಗೋವೆಯನ್ನು ತಲುಪಬೇಕೆಂದು ನಿರ್ಧರಿಸಿದ್ದೆವು.. ಸರಿ ಸುಮಾರು 15 ವರ್ಷಗಳ ತರುವಾಯ ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗ ಮತ್ತೆ ತನ್ನ ಸಂಚಾರ ಆರಂಭಿಸಿತ್ತು...ಅದನ್ನು ನೋಡುವ ಬಯಕೆ ಕೂಡ ನಮ್ಮೆಲ್ಲರದಾಗಿತ್ತು..ಅನೇಕ ರಾಜಕೀಯ ಕುಯುಕ್ತಿ ಹುನ್ನಾರ ಗಳಿಗೆ ಒಳಗಾಗಿ ಸುದೀರ್ಘ ೧೫ ವರ್ಷಗಳ ನಂತರ ರೈಲ್ವೆ ಮಾರ್ಗ ಏರ್ಪಟ್ಟಿತ್ತು ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗ...


Posted by Sridhar Raju at 10:43 AM 5 comments
ನಿನ್ನಿಂದಲೇ ನಿನ್ನಿಂದಲೇ.......
Thursday, December 13, 2007ನ(ಮ್ಮ)ನ್ನ ಕನಸುಗಳಿಗೆ ನಿಮ್ಮ ತುಂಬು ಹೃದಯದ ಆಶೀರ್ವಾದವಿರಲಿ.....
Posted by Sridhar Raju at 8:51 AM 9 comments
ಉಪ್ಪಿಗಿಂತ ರುಚಿ ಬೇರೆ ಇಲ್ಲ.......
Monday, November 26, 2007ನನ್ನೆಡೆಗೆ ಹಲವಾರು ಟೀಕೆಗಳಿವೆ..ನಾನು ಉಪೇಂದ್ರನ ಅಭಿಮಾನಿ ಎಂದು...."ಥೂ ನಿನ್ನ..ಯಾವನೋ ನೀನು..ಹೋಗಿ ಹೋಗಿ ಉಪೇಂದ್ರನ ಅಭಿಮಾನಿ ಅಂತೀಯಲ್ಲ...ನಾಚಿಕೆ ಆಗಲ್ಲ್ವ..." ಹಲವಾರು ಮಂದಿ ಹಲವಾರು ರೀತಿ ಬೈದಿದ್ದಾರೆ, ಆಡಿಕೊಂಡಿದ್ದಾರೆ..ಆದರೆ ಅಷ್ಟೆಲ್ಲ ಮಾಡಿದರೂ ನನಗೆ ಆತನ ಬಗ್ಗೆ ಕಿಂಚಿತ್ತೂ ಅಭಿಮಾನ ಕಮ್ಮಿ ಆಗಿಲ್ಲ ಎಂದು ಹೇಳಲು ನನ್ನವರಿಗೆ ನನ್ನ ಉಪೇಂದ್ರನ ವಿರೋಧಿಗಳಿಗೆ ಸ್ಪಷ್ಟಪಡಿಸಲು ಇಚ್ಚಿಸುತ್ತೇನೆ..."Uppi simply rocks" :-)
ಉಪೇಂದ್ರನ ಹೆಸರು ಹೇಳಿದರೆ ಹಲವಾರು ಮಂದಿ ಮೂಗು ಮುರಿಯುವವರು ಇದ್ದಾರೆ..ಮುರಿಯಲಿ ಅವರ ಮೂಗುಗಳೇ ತಾನೆ...ನನಗೇನು??... ನನಗೆ ಆತನನ್ನು ಅಭಿಮಾನಿಸಲು ಸ್ಪಷ್ಟವಾಗಿ ಕಾರಣಗಳು ಹೇಳಲಾರೆ...ಉಪೇಂದ್ರನ ಚಿತ್ರಗಳು ಇತರ ಹೀರೋ ಚಿತ್ರಗಳಿಗಿಂತ ಚೆನ್ನಾಗಿ ಓಡಬೇಕೆಂಬ ಹಂಬಲ ನನ್ನಲ್ಲಿ ಸದಾ ಇರತ್ತದೆ...ಹಾಗೆ ಆದರೆ ಬಹಳ ಸಂತೋಷವಾಗುತ್ತದೆ.... ನಿಜಕ್ಕೂ ಆತ ರಿಯಲ್ ಸ್ಟಾರ್... ಉಪೇಂದ್ರನ ಸಾಧನೆಗಳ ಬಗ್ಗೆ ನನಗೆ ತಿಳಿದಿರುವ ಮತ್ತಿಗೆ ಒಂದು ಸಣ್ಣ ಕಿರುಪರಿಚಯ...

ಯಾವುದೇ God Father ಗಳ ನೆರವಿಲ್ಲದೆಯೆ ಮೇಲೆ ಬೆಳೆದು ಬಂದಾತ...ಆರಂಭದ ದಿನಗಳಲ್ಲಿ ಕಾಶಿನಾಥ್ ಸಾಥ್ ನೀಡಿದ್ದರು ಅಷ್ಟೆ...ಆತನ ಪ್ರತಿಭೆಗೆ ಮನ್ನಣೆ ಸಿಕ್ಕಿದ್ದು ಹಲವಾರು ವರ್ಷಗಳು ಕಾಲು ಸವೆಸಿದ ನಂತರ...
ಭಾರತ ಚಿತ್ರರಂಗ ಕಂಡ, ವಿಭಿನ್ನವಾಗಿ ಆಲೋಚಿಸುವ ಅತ್ಯಂತ ಕಿರಿಯ ನಿರ್ದೇಶಕ...ಆತನ ಕಿರಿತನ ಕೇವಲ ವಯಸ್ಸಿಗಷ್ಟೆ ಸೀಮಿತ....ಆದರೂ ಈ ವಿಷಯ ಇಲ್ಲಿ ಉಲ್ಲೇಖಾರ್ಹ...
ಇಂದು ಕನ್ನಡ ಚಿತ್ರರಂಗದಲ್ಲಿ ಬಂದಂತಹ ಅಷ್ಟೂ ರೌಡಿ ಚಿತ್ರಗಳಿಗೆ ನಾಂದಿ ಹಾಡಿದ್ದು ಇದೇ ಉಪೇಂದ್ರನ "ಓಂ" ಚಿತ್ರ...ಅದರ ಬಗ್ಗೆ ಎಷ್ಟೆ controversy ಗಳಿರಬಹುದು ..ಆದರೆ ಅದು trend setting cinema ಅಂತೂ ಹೌದು...
ಉಪೇಂದ್ರ ಒಬ್ಬ trend setter -e ಸರಿ..
ಉಪೇಂದ್ರ ಚಿತ್ರ ನಿರ್ಮಿಸುತ್ತಿದ್ದ ರೀತಿಗಳಲ್ಲಿ ಹಲವಾರು ಪ್ರಯೋಗಗಳನ್ನು ಮಾಡುತ್ತಿದ್ದ..ಅದರಿಂದ ಕನ್ನಡ ಚಿತ್ರಕ್ಕೆ ಮನ್ನಣೆ ಸಿಕ್ಕಿದೆ ಎಂಬುದು ಒಪ್ಪಿಕೊಳ್ಳಬೇಕಾದ ವಿಷಯ..ಚಿತ್ರದ ಹೆಸರಿನಿಂದ ಹಿಡಿದು ಚಿತ್ರದ ಅಂತ್ಯದವರೆಗೂ...ಹಾಗೆ ಚಿತ್ರದ ಪ್ರಚಾರದ ವಿಷಯಗಳಲ್ಲಿ ಕೂಡ...ಅದನ್ನ ತೆರೆಯ ಮೇಲೆ ತೋರಿಸುವ ಯತ್ನದಲ್ಲೂ ಸಹ....
ಇಂದೂ ಎಲ್ಲ ಚಿಳ್ಳೆ ಪಿಳ್ಳೆಗಳು ಬಾಯಿ ತೆರೆದರೆ ತಮ್ಮ ಚಿತ್ರ ವಿಭಿನ್ನವಾಗಿದೆ ಎಂದೇ ಬಡಿದುಕೊಳ್ಳುತ್ತಾರೆ...ಅದೇನೊ ವಿಭಿನ್ನತೆಯೋ ಭಗವಂತನಿಗೇ ಗೊತ್ತು..!!!
ಇಂದು ಕನ್ನಡ ಚಿತ್ರರಂಗದ ಗಮನೀಯ ವ್ಯಕ್ತಿಗಳ ಪಟ್ಟಿಗೆ ಸೇರಿರುವ ಗುರುಕಿರಣ್,ಸಾಧುಕೋಕಿಲ, ವಿ.ಮನೋಹರ್, ಕವಿರಾಜ್, ಎಲ್ಲರೂ ಉಪೇಂದ್ರನ ನೆರಳಿನಲ್ಲಿ ಬೆಳೆದವರು..ಒಟ್ಟೊಟ್ಟಿಗೆ ಮೇಲೆ ಬಂದವರು....

ಉಪೇಂದ್ರನಲ್ಲಿ ಮೆಚ್ಚಬೇಕಾದ ಅಂಶವೆಂದರೆ ಕಲಾವಿದರಲ್ಲಿ, ತಂತ್ರಜ್ಞಾನ ಕಲೆಯನ್ನು ಹುಡುಕಿ ಕೆದಕಿ ಹೊರತರುವ ಗುಣ....ಅವನ ಬಳಿ ಬೆಳೆದ ಮಂದಿ ಸಾಕಷ್ಟಿದ್ದಾರೆ...ಇನ್ನು ಬೆಳೆಯುತ್ತಲೇ ಇದ್ದಾರೆ...ಇಷ್ಟೆಲ್ಲ ಮಾಡಿರುವ ಉಪೇಂದ್ರನ ವಯಸ್ಸು ಕೇವಲ 35ರ ಆಸುಪಾಸು...ಅಚ್ಚರಿಯಾಗುವುದಿಲ್ಲವೇ??... :-)
ನಾನು ಇಷ್ಟನ್ನು ಹೇಳುತ್ತಿರುವುದು ಆತನ ನಿರ್ದೇಶಿಸಿ-ನಟಿಸಿರುವ ಚಿತ್ರಗಳ ಬಗ್ಗೆ..ಆತ ಬರೆದಿರುವ ಕಥೆ, ಸಂಭಾಷಣೆಗಳ ಇರುವ ಚಿತ್ರಗಳ ಬಗ್ಗೆ...ಮಿಕ್ಕ ಚಿತ್ರಗಳ ಬಗ್ಗೆ ನನ್ನ ಕಡೆಯಿಂದ "No Comments......"
ಆತನ ಚಿತ್ರಗಳಿಗೆ ಆರಂಭದ ದಿನಗಳಲ್ಲಿ ಬಂದು ವಿರೋಧ, ತಿರಸ್ಕಾರ ಬೇರಾವ ನಟನಿಗೆ ಬಂದದ್ದೇ ಆಗಿದ್ದಲ್ಲಿ ಆತನ ಸದ್ದಡಗಿ ಹೋಗುತ್ತಿತ್ತು...ಉಪೇಂದ್ರ ಜನರ ಸದ್ದಡಿಗಿಸಿದ!!...ಎಲ್ಲ ನಿರ್ದೇಶಕರ, ನಿರ್ಮಾಪಕರು ಒಪ್ಪಿ ಕೊಳ್ಳುವಂತೆ ಮಾಡಿದ..
ಉಪೇಂದ್ರನ ಚಿತ್ರಗಳ ಬಗ್ಗೆ ಒಂದು ಅಪವಾದವಿದೆ...ಆತನ ಸಂಭಾಷಣೆ vulgar, ಅಸಭ್ಯವಾಗಿರುತ್ತದೆಂದೂ...ಹೇಳುವುದನ್ನು ಮರ್ಮಕ್ಕೆ ತಾಗುವಂತಹ ಸಂಭಾಷಣೆ ಸ್ವಲ್ಪ ಢಾಳಗಿ ಕಾಣುತ್ತದೆ...ನನ್ನಂತಹ ಹುಡುಗರಿಗೆ ಇಷ್ಟವಾಗುತ್ತದೆ :-)...vulgar ನಲ್ಲೂ ವಿಧಗಳಿವೆ....ಅದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿಲ್ಲ......ತೀರ ಅಸಹ್ಯಕರವಂತೂ ಇರುವುದಿಲ್ಲ. ... ಮಡಿವಂತರಿಗೆ ಇಷ್ಟವಾಗದಿರಬಹುದು... ಹಾಗೆಂದ ಮಾತ್ರಕ್ಕೆ "ಸಂಸ್ಕೃತ" ;-) ಪದ ಬಳಕೆ ಮಾಡುವರ ಚಿತ್ರಗಳ ಬಗ್ಗೆ ಅಸಡ್ಡೆಯಿಂದಿರಬೇಕಿಲ್ಲ..ಜನ ಶ್ರೀಸಾಮಾನ್ಯರು ಮಾತಾಡುವ ಭಾಷೆಯ ಬಳಕೆ ಆಗಿರುತ್ತದೆ ಉಪೇಂದ್ರನ ಚಿತ್ರಗಳಲ್ಲಿ...ಅಸಭ್ಯತೆಯಂತೂ ಅಲ್ಲ...ಅದರಿಂದ ಸಮಾಜಕ್ಕೆ ಯಾವ ಹಾನಿಯೂ ಇಲ್ಲ...ನಾನು ಉಪೇಂದ್ರನ ವಿಪರೀತ ಅಭಿಮಾನಿಯೇನು ಅಲ್ಲ, ಆತನ ಚಿತ್ರ ಬಿಡುಗಡೆಯಾದರೆ ಮೊದಲ show ನಲ್ಲೇ ನೋಡಬೇಕೆಂಬ ಹಂಬಲವೂ ನನ್ನಲ್ಲಿ ಎಂದೂ ಬಂದಿಲ್ಲ, ಅಕಸ್ಮಾತ್ ಎರಡು ಅಕ್ಕ-ಪಕ್ಕ ಇರುವ ಚಿತ್ರಮಂದಿರಗಳ ಎದುರುಗಡೆ ನಿಂತಾಗ, ಒಂದರಲ್ಲಿ ಉಪೇಂದ್ರನ ಚಿತ್ರ ಮತ್ತೊಂದರಲ್ಲಿ ಬೇರೊಬ್ಬ ನಟನ ಚಿತ್ರವಿದ್ದಲ್ಲಿ, ಖಂಡಿತವಾಗಿ ಉಪೇಂದ್ರನ ಚಿತ್ರಕ್ಕೆ ಹೋಗುವೆ... :-) :-)
ಉಪೇಂದ್ರ ಆದಷ್ಟೂ ಬೇಗ ಚಿತ್ರಗಳನ್ನು ನಿರ್ದೇಶಿಸುವಂತಾಗಲಿ...ಮತ್ತಷ್ಟು ಒಳ್ಳೆಯ ಚಿತ್ರಗಳು ಹೊರಹೊಮ್ಮಲಿ...ಇದೇ ನನ್ನ ಅಭಿಲಾಷೆ..
ವಿ.ಸೂ : ಉಪೇಂದ್ರನ ಬಗ್ಗೆ ಉಪೇಂದ್ರನ ಚಿತ್ರಗಳ ಬಗ್ಗೆ ವಿರೋಧವಿದ್ದಲ್ಲಿ ಅದನ್ನ ಈ ಬ್ಲಾಗಿನ comments ನ ಮುಖಾಂತರ ತೀರಿಸಿಕೊಳ್ಳಬೇಡಿ ಎಂದು ಹೇಳಲು ಇಚ್ಚಿಸುತ್ತೇನೆ.. ನನ್ನ ಲೇಖನದ ವೈಖರಿಯ ;-) ಬಗೆಗಿನ comments ಎಂದೆಂದಿಗೂ ಸ್ವಾಗತಾರ್ಹ...
Posted by Sridhar Raju at 11:13 PM 32 comments
ವೈರುಧ್ಯ - ವೈವಿಧ್ಯ
Sunday, November 18, 20071) ಒಂದು ದಿನ ಕಲಾಸಿಪಾಳ್ಯದಲ್ಲಿ ಕೂಲಿ ಕೆಲಸ ಮಾಡಬೇಕು....ತಳ್ಳು ಗಾಡಿಯಲ್ಲಿ ಮೂಟೆಗಳನ್ನು ಹಾಕಿಕೊಂಡು ಆ ಜನಭರಿತ ಗಲ್ಲಿಗಳಲ್ಲಿ ಆ ಗಾಡಿಯನ್ನು ಎಳೆದಾಡುತ್ತಿರಬೇಕು....ದಿನದ ಕೂಲಿ ತೆಗೆದು ಕೊಂಡು ರಾತ್ರಿ ಹೊತ್ತಿಗೆ ಅಲ್ಲೆ ಸಿಕ್ಕಿದ್ದನ್ನು ತಿಂದು ಲೈಟಾಗಿ ಸಾರಾಯಿ ಕುಡಿದು ಅಲ್ಲೆ fly over ಕೆಳಗೆ ಮಲಗಬೇಕು...
ಅದರ ಮರುದಿನವೇ ಲೀಲಾ - ಪ್ಯಾಲೇಸಿನಲ್ಲಿ ಬೆಳಗಿನ ಕಾಫಿ ಕುಡಿದು swimming pool ಪಕ್ಕ ಅಂಗಾತ ಮಲಗಿರಬೇಕು...ನನ್ನ ದಿನವೆಲ್ಲ ಲೀಲಾ - ಪ್ಯಾಲೆಸಿನಲ್ಲಿ ವಿಧ ವಿಧವಾದ just chill ಆಗುವಂತಹ ಕೆಲಸಗಳಲ್ಲಿ ತೊಡಗಿಕೊಂಡಿರಬೇಕು.
2)ಒಂದು ಇಳಿಸಂಜೆಯ ಹೊತ್ತಿನಲ್ಲಿ ಲಾಲ್ ಬಾಗ್ ಕೆರೆದಂಡೆಯಲ್ಲಿ ನನ್ನವಳೊಂದಿಗೆ ;-) "ಚೀ ಕಳ್ಳ...ಎಂದು ಕೆನ್ನೆ ಗಿಲ್ಲಿಸಿಕೊಳ್ಳಬೇಕು..." ಅದರ ಮರುದಿನವೇ ಅದೇ ಕೆರೆದಂಡೆಯಲ್ಲಿ ಅದೇ ನನ್ನವಳೊಂದಿಗೆ "ಚೀ ಕಳ್ ನನ್ ಮಗನೆ...ಎಂದು ಆಕೆಯಿಂದ ಕಪಾಳಮೋಕ್ಷ ಆಗಬೇಕು.."
3) ಒಂದು ದಿನ ಇಪ್ಪತ್ತನಾಲ್ಕು ಗಂಟೆಗಳೂ ಪ್ರಪಂಚದ ಅರಿವಿಲ್ಲದೇ ನನಗಿಷ್ಟವಾದ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು.... ಹಾಗೆ ಇಪ್ಪತ್ತನಾಲ್ಕು ಗಂಟೆಗಳೂ ಮೈಮೇಲೆ ಅರಿವಿಲ್ಲದೆಯೇ ನಿದ್ರಾಲೋಲ ನಾಗಬೇಕು..ಕುಂಬಕರ್ಣನ ಅಪರಾವತಾರ ನಾಗಬೇಕು...
4)ನನ್ನ ಜನರಿಂದ, ಇತರರಿಂದ ಹಾಡಿ ಹೊಗಳಿಸಿಕೊಳ್ಳಬೇಕು.....ಮತ್ತೊಂದು ದಿನ ಅದೇ ಜನಗಳ ಬಳಿ ಮೂರು ಜನ್ಮಕ್ಕಾಗುವಷ್ಟು ಕುಳಿತು ಉಗಿಸಿಕೊಳ್ಳಬೇಕು...ವಾಚಮಗೋಚರವಾಗಿ..
5)ಬೈಕನ್ನೇರಿ ಕರಾವಳಿಯ ಉದ್ದಕ್ಕೂ ಓಡಿಸಿಕೊಂಡು ಹೋಗಬೇಕು...ಗೊತ್ತು ಗುರಿಯಿಲ್ಲದೆಯೇ..ದಿನಗಳ ಪರಿವಿಲ್ಲದೆಯೇ...ಮತ್ತೊಂದು ದಿನ ಬೈಕನ್ನು kick start ಮಾಡಲು ಸಹಾ ಶಕ್ತಿಯಿರಬಾರದು...
6)ಮನೆಯವರಿಂದ..."ಅಹಾ ಹೆತ್ತರೆ ಇಂತಹ ಮಗನನ್ನು ಹೆರಬೇಕು.... ಕುಲತಿಲಕ ಇವನು " ಎಂದು ಒಂದು ದಿನ ಅನ್ನಿಸಿಕೊಂಡರೆ...ಮತ್ತೊಂದು ದಿನ ಅವರಿಂದಲೇ "ಯಾಕಾದರೂ ಹುಟ್ಟಿದನೋ....ಕುಲಕ್ಕೇ ಕಳಂಕ, ಹುಟ್ಟದಿದ್ದರೇ ಚೆನ್ನಾಗಿತ್ತೇನೋ ಇವನು" ಎಂದು ಕೇಳಬೇಕು..
7)ಜೇಬು ತುಂಬ ದುಡ್ಡು ಇಟ್ಟುಕೊಂಡು ಬೇಕಾದ ರೀತಿಯಲ್ಲಿ ಖರ್ಚು ಮಾಡಬೇಕು...ನೀರಿಗಿಂತ ಕೇವಲವಾಗಿ...
ಮತ್ತೊಂದು ದಿನ ಬಿಡಿಗಾಸು ಸಹಾ ನನ್ನ ಬಳಿಯಿರಬಾರದು...ಬೀದಿಗೆ ಬಿದ್ದಿರಬೇಕು...
8) ಇನ್ನೇನು ಪ್ರಾಣವೇ ಹೋಗಿಬಿಡುತ್ತದೇನೊ ಎಂಬಂತೆ ಒಂದು ಹಾಸ್ಪಿಟಲ್ ನಲ್ಲಿ ಮಲಗಿರಬೇಕು..ಅದರ ಮರುದಿನವೇ foot ball ಆಡುತ್ತಿರಬೇಕು..
9)ನನ್ನ ಜೀವನ settle ಆಯಿತೆನ್ನುವ ಭಾವ ನನ್ನನ್ನ ಆವರಿಸಬೇಕು ಒಂದು ದಿನ...ಮತ್ತೊಂದು ದಿನ.. ಮುಂದೆ ಜೀವನ ಹೇಗೆ ನಡೆಯುತ್ತದೆ ಎಂದು ಕಳವಳ ಪಡುತ್ತಿರಬೇಕು...ದಿಕ್ಕುಗಾಣದೆ ಒಬ್ಬನೇ ಒಂದು ಮೂಲೆಯಲ್ಲಿ ಕಾಲು ಕೊಸರಿಕೊಂಡು ಕುಳಿತು ಗಾಢ ಕತ್ತಲಿರುವ ಕೋಣೆಯಲ್ಲಿ ದೀರ್ಘವಾಗಿ ಯೋಚಿಸುತ್ತಿರಬೇಕು..
10) ಒಂದು ದಿನವಿಡೀ ನನ್ನ ಆತ್ಮೀಯ ಗೆಳೆಯರೊಡನೆ ಕಾಲ ಕಳೆಯಬೇಕು.ಇಪ್ಪತ್ತನಾಲ್ಕು ಗಂಟೆಗಳೂ ಎಗ್ಗಿಲ್ಲದೆ ಹೊತ್ತಿಲ್ಲದೆ.. ಗೊತ್ತಿಲ್ಲದೆ...ಮತ್ತೊಂದು ದಿನ ನನ್ನ ಬದ್ದ ವೈರಿಗಳೊಡನೆ ಒಂದು ದಿನವಿಡೀ ಕಳೆಯಬೇಕು...ಆ ರೀತಿಯ ಪರಿಸ್ಥಿತಿ ಬಂದೊದಗಬೇಕು..
11)ಜ್ಯೋತಿಷಿಗಳಿಂದ "ಹೋಗಯ್ಯ ನೀನು 80+ ವರ್ಷ ಬದುಕುತ್ತೀಯ"..ಎಂದು ಅನ್ನಿಸಿಕೊಂಡು ಜ್ಯೋತಿಷಾಲಯದಿಂದ ಹೊರಬರುತ್ತಲೇ..ಹೃದಯಾಘಾತವಾಗಿ ಅಲ್ಲೆ ಕುಸಿದು ಬಿದ್ದು ಕೊನೆಯುಸಿರೆಳೆಯಬೇಕು.. :-)
12)ಸತ್ತಾಗ ನಾಲ್ಕು ಜನರು ಕಣ್ಣೀರಿಟ್ಟರೆ ಇನ್ನೊಂದು ಕಡೆ ನಾಲ್ಕು ಜನ ಖುಶಿಯಿಂದ ಸಂತಸ ಪಡಬೇಕು...
ಸದ್ಯಕ್ಕೆ ನನ್ನ ಪಟ್ಟಿ ಇಷ್ಟೆ...ಇನ್ನು ಬೇಕಾದಷ್ಟಿವೆ..ಬರೆಯುತ್ತಾ ಹೋದರೆ ಮೊದಲಿರುವುದಿಲ್ಲ ಕೊನೆಯಿರುವುದಿಲ್ಲ..
ನಿಮ್ಮ ಜೀವನ ವೈವಿಧ್ಯ ಪೂರ್ಣವಾಗಿರಲಿ....
Posted by Sridhar Raju at 10:53 AM 15 comments
ಕಿವಿಮಾತು..........
Friday, November 2, 2007ಏಕೋ ಏನೋ ಈ ಹಾಡು ಬಹಳ ಇಷ್ಟ ಆಯ್ತು .... ನಿಮ್ಮೊಂದಿಗೆ ಹಂಚಿಕೊಳ್ಳುವ ಉಮೇದಿನೊಂದಿಗೆ ಇಲ್ಲಿ ಪ್ರಕಟಿಸುತ್ತಿರುವೆ..ಹಾಡನ್ನು ಓದಿಕೊಂಡು, ಹಾಡನ್ನು ಕೇಳುವ ಗುನುಗುವ , ಹಾಡುಗಾರನ ಜೊತೆ ಹಾಡುವ ಮಜವೇ ಬೇರೆ ... ಸಿಕ್ಕಾಪಟ್ಟೆ ಎಂಜಾಯ್ ಮಾಡಿದೆ .... :-) ಇದನ್ನ ಬರೆದ ಜಯಂತ್ ಕಾಯ್ಕಿಣಿ ರವರಿಗೆ ಮತ್ತು ಮನೋಮುರ್ತಿ ಸಂಗೀತ ಸಂಯೋಜನೆಗೆ ಹೃತ್ಪೂರ್ವಕವಾದ ನಮನಗಳು...ಓದಿಕೊಳ್ಳಿ , ಹಾಡಿಕೊಳ್ಳಿ.......
ಕಿವಿಮಾತೊಂದು ಹೇಳಲೆ ನಾನಿಂದು
ದಾರಿನಿಂತಾಗ ಸಾಗಲೆ ಬೇಕೆಂದು
ನಿನ್ನೆ ಈಗಿಲ್ಲ ನಾಳೆಯು ತಿಳಿದಿಲ್ಲ
ನೀನು ನೀನಾಗೆ ಬಾಳಲೆಬೇಕೆಂದು .....
ಹಸಿರಾಗಿದೆ ದೀಪವು ನಿನಗಾಗಿ...
ನಸು ನಗುತಲೆ ಸಾಗು ನೀ ಗೆಲುವಾಗಿ
ಹೊಸ ತಂಗಾಳಿ ಹೇಳಿದೆ ಮೆಲುವಾಗಿ
ಈ ಬಾಳುಂಟು ಬಾಳುವ ಸಲುವಾಗಿ...............
ಬಾಗಿಲಿನಾಚೆಗೆ ತಾ ಬಂದು
ಗೂವಿಗೆ ಬಾಳು ಬಾ ಎಂದು
ಸಂತಸದಿಂದ ಓ ಎಂದು
ಓಡಲೆ ಬೇಕು ನೀನಿಂದು.........................
ಸಾವಿರ ಕಣ್ಣಿನ ನವಿಲಾಗಿ
ನಿಂತಿದೆ ಸಮಯ ನಿನಗಿಂದು
ಕಣ್ಣನು ತೆರೆದು ಹಗುರಾಗಿ
ನೋಡಲೇಬೇಕು ನೀಬಂದು......................
ಬೆಳ್ಳಿಯ ಅಂಚಿನ ಈ ಮೋಡ
ನಗುವ ಬೀರಿದೆ ಬಾನಲ್ಲಿ
ನಿನ್ನಯ ಬಾಳಿನ ಸಂಗೀತ
ಹಾಡಲೇಬೇಕು ನೀನಿಲ್ಲಿ...........................
ಮಿಂಚುವ ಅಲೆಗಳ ನದಿಯಾಗಿ
ಮುಂದಕೆ ಚಲಿಸು ನೀ ಬೇಗ
ನಿನ್ನಯ ಪಾಲಿನ ಈ ಆಟ
ಆಡಲೇಬೇಕು ನೀನೀಗ........................
ಈ ಹಾಡನ್ನು ನೀವು ಕೇಳಬೇಕೆನಿಸಿದರೆ ಇಲ್ಲಿ ಕ್ಲಿಕ್ಕಿಸಿ ...
http://www.kannadaaudio.com/Songs/Moviewise/M/Milana/Kivi.ram
Posted by Sridhar Raju at 7:42 PM 10 comments


