ಹೀಗೊಂದು ನಿದ್ದೆ ಪ್ರಹಸನ

Thursday, June 28, 2007

ನಾನು ಅರುಣ ಮೈಸೂರಿಗೆ ಹೋಗಿ ಶ್ರೀನಿವಾಸನ ಜೊತೆಗೂಡಿ ಮೈಸೂರನ್ನು ಸುತ್ತಿ ಬರೋಣವೆಂದು ನಿರ್ಧರಿಸಿದೆವು. ಅರುಣ್ ಮೈಸೂರಿಗೆ ಟ್ರೈನ್ ನಲ್ಲಿ ಹೋಗೋಣವೆಂದ..ನಾನು ಟ್ರೈನ್ ನಲ್ಲಿ ಪಯಣಿಸಿ ಬಹಳ ಕಾಲವಾಗಿತ್ತು ಸರಿಸುಮಾರು ೬ ವರ್ಷ.. ಸರಿಯೆಂದು ಹೊರಟೆವು.....ಮಾರ್ಗಮಧ್ಯಲ್ಲಿ ಸಾಕಷ್ಟು ಫೋಟೋಗಳನ್ನು ಕ್ಲಿಕ್ಕಿಸಿದೆವು. ನಾವು ಮನೆ ಬಿಟ್ಟಾಗ ಒಂದು ಗಂಟೆ....ಮೈಸೂರನ್ನು ತಲುಪಿದಾಗ 7 ಗಂಟೆ .ಇದೆಲ್ಲ ಒತ್ತಟ್ಟಿಗಿರಲಿ.....ಹೀಗೆ ತೆವಳಿಕೊಂಡು ಮೈಸೂರಿನ ಶ್ರೀನಿವಾಸನ ಮನೆಯನ್ನು ಸೇರಿದೆವು.. ವಿವೇಕನು ಸಹ ನಮ್ಮ ಜೊತೆಗೂಡಿದ, ನನಗೆ ಆಗಲೇ ನಿದ್ದೆ ಹತ್ತುತ್ತಿತ್ತು..

ನಾನು ದಿಂಬಿಗೆ ತಲೆ ಇಟ್ಟೆನೋ ಇಲ್ಲವೊ ಎಲ್ಲಾರೂ ಶುರು ಮಾಡಿದರು.."ಏ ಥೂ!!ನಿನ್ನ ನಾಚಿಕೆ ಆಗಲ್ವ..ಇಷ್ಟ್ ಬೇಗ ನಿದ್ದೆ ಮಾಡ್ತ್ಯ?? ಇಲ್ಲಿಗೆ ಬಂದದ್ದು ನಿದ್ದೆ ಮಾಡಕ್ಕಾ??".....ಹೀಗೆ ಸಾಗುತ್ತಿತ್ತು ಅರುಣನ ಹಾಗೂ ಶ್ರೀನಿವಾಸನ ಪ್ರಶ್ನಾವಳಿ. ಶ್ರೀನಿವಾಸ ನಾನು ನಿದ್ದೆ ಗೆ ಶರಣಾಗಬಾರದೆಂದು.. ನನ್ನ ಕಾಲು ಹಿಡಿದೆಳೆಯುತ್ತಿದ್ದ... ಕೊನೆಗೆ ಹೇಳಿದೆ "ಕಾಫಿ ಮಾಡ್ಕೊಂಡ್ ಬಾ ಮಾರಯ"..ಎದ್ದೇಳ್ತೀನಿ.... ಅದಕ್ಕೆ ಮನೆಯಲ್ಲಿ ಹಾಲಿಲ್ಲವೆಂದೊ ಕಾಫಿ ಸಾಧ್ಯವಿಲ್ಲವೆಂದೊ....ಬೇಕಿದ್ದರೆ black tea ಮಾಡ್ಕೊಡ್ತೀನಿ ಅಂದ...ಎನೋ ಒಂದು ಮಾಡ್ಕೊಂಡ್ ಬಾಪ್ಪ... ಆಂದು ಎದ್ದು ಕೂರಲು ಪ್ರಯತ್ನಿಸಿದೆ.

ಮನಸ್ಸಿನ್ನಲ್ಲೇ ಅರುಣನಿಗೆ ಹಾಗು ಶ್ರೀನಿವಾಸನಿಗೆ ಶಪಿಸುತ್ತಿದ್ದೆ...." ಚೆ ಚೆ ಸರಿಯಾಗಿ ನಿದ್ದೆ ಮಾಡಕ್ಕೂ ಬಿಡ್ತಿಲ್ಲ, ಅದೇನು ನಿದ್ದೆ ಕೆಡ್ತಾರೋ ಪಾ ಜನ". ನನ್ನ ಸ್ತಿತಿಯನ್ನು ಕಂಡು ನಾನೇ ಹಲುಬಿಕೊಳ್ಳುತ್ತಿದ್ದೆ.....
ನನಗೆ ನಿದ್ದೆ ಹೋದ ಕೂಡಲೇ...ಯಾರದರೂ ಕರೆದರೂ ಸಾಕು ಎಚ್ಚರವಾಗಿಬಿಡುತ್ತದೆ.. ಎಲ್ಲರೂ ನನ್ನ ಹಾಗೆಯೇ ಇರುತ್ತಾರೆಂಬ ಭಾವನೆಯಲ್ಲಿದ್ದೆ, ಆದರೆ ಅದರ ಮಾರನೆಯ ದಿನದ ಸಂಜೆಯ ಬೆಳವಣಿಗೆಗಳನ್ನು ನೋಡಿ ಆ ನನ್ನ ಅರಿವಿಕೆಯನ್ನು ಕಿತ್ತೆಸೆದೆ....

ಅಂದು ರಾತ್ರಿ ಬಹಳಷ್ಟು ಹರಟಿದೆವು....ಎಲ್ಲರೂ ಮಲಗಿದಾಗ ಸುಮಾರು 3:30 ಇರಬಹುದು

ಮತ್ತೆ ಬೆಳಿಗ್ಗೆ ಶ್ರೀನಿವಾಸ ಬೇಗನೆ ಎದ್ದು ತನ್ನ ಸ್ನಾನಾದಿ ಕಾರ್ಯಗಳನ್ನು ಮುಗಿಸಿ ಮತ್ತೆ ನನ್ನ ಎಬ್ಬಿಸುವುದಕ್ಕೆ ಶುರು ಮಾಡಿದ್ದ..ಜಗ್ಗಾಡೋದು, ಎಳೆದಾಡೋದು ಹೀಗೆ........ಸಾಕಪ್ಪಾ ಇವನ ಹಿಂಸೆ ಯೆಂದು ಎದ್ದು ದೇಹವನ್ನು ಶುಚಿ ಮಾಡಿಕೊಂಡು ಬಂದೆ.........

ನಾ ಬರುವ ಹೊತ್ತಿಗೆ..ಶ್ರೀನಿವಾಸ ಕುರ್ಚಿ ಮೇಲೆ ಕುಳಿತಲ್ಲಿಯೇ ನಿದ್ರಿಸಲು ಶುರು ಮಾಡಿದ್ದ....ಪಾಪ ರಾತ್ರಿ ತುಂಬಾ ಹೊತ್ತು ಎದ್ದಿದ್ದ ಬೆಳಿಗ್ಗೇನೆ ಬೇಗ ಎದ್ದಿದ್ದಾನೆ ಅಂದು ಕೊಳ್ಳುತ್ತಿದ್ದೆ..

ಅವನು ನಿದ್ರಿಸುವ ಭಂಗಿ ಬಹಳ ವಿನೋದದಾಯಕವಾಗಿತ್ತು, comedy ;-)

ನಾನು ಮೆಲ್ಲನೆ ಅವನ ಬಳಿ ಹೋಗಿ ನನ್ನ ಮೊಬೈಲ್ ಅನ್ನು silent mode ಗೆ ಹಾಕಿ ಸರಿಯಾಗಿ zoom focus ಮಾಡಿ ಫೊಟೊ ಒಂದನ್ನು ಕ್ಲಿಕ್ಕಿಸಿದೆ ,ಇಷ್ಟೆಲ್ಲ ಜಾಗರೂಕನಾಗಿ ತೆಗೆದುದ್ದರ ಉದ್ದೇಶ..ಅವನಿಗೆ ಎಲ್ಲಿ ಎಚ್ಚರವಾಗಿಬಿಡುತ್ತದೋ ಎಂಬ ನನ್ನ ಅಳುಕು.... :-)

ಅಂದು ಚಾಮುಂಡಿ ಬೆಟ್ಟ, ನಂಜನಗೂಡು ಎಲ್ಲವನ್ನು ಸುತ್ತಿ ಹೈರಾಣಗಿ ದಣಿದು ಮನೆಗೆ ವಾಪಸ್ಸದೆವು. ಶ್ರೇಯಸ್ ಕೂಡ ನಮ್ಮ ಜೊತೆಗೂಡಿದ್ದ , ಸುಮಾರು ಒಂದುಗಂಟೆ ಹರಟಿ ಅವನು ಬೆಂಗಳೂರಿನ ಹಾದಿಯನ್ನು ಹಿಡಿದ ತನ್ನ ಹೊಸ Bajaj Pulsar 200cc ಯನ್ನು ಹತ್ತಿ..............................

ಅವನು ಹೊರಟ ನಂತರ ಒಬ್ಬಬ್ಬರಾಗಿ ನಿದ್ದೆಗೆ ಜಾರಿದರು....ಶ್ರೀನಿವಾಸ ಒಂದು ಕಡೆ, ಅರುಣ ಒಂದು ಕಡೆ... ನಾನು ಅಲ್ಲೇ ಬಿದ್ಕೊಂಡೆ.....ಮುಂದೆ ನಡೆಯುವ ಘಟನಾವಳಿಗಳ ಅರಿವಿಲ್ಲದೆಯೇ!!.. ನಿದ್ದೆಗೆ ಜಾರಿದ್ದೆ. ಅದೇಕೂ ಏನೋ ನಿದಿರಾದೇವಿಯು ನನಗೆ ಒಲಿಯಲಿಲ್ಲ..ಸುಮಾರು ಒಂದು ಗಂಟೆ ಆಗಿರಬಹುದು..ಎಚ್ಚೆತ್ತುಬಿಟ್ಟೆ. ನನಗೆ ಸಾಧಾರಣವಾಗಿ ಮಧ್ಯಾಹ್ನ ಸಂಜೆಗಳಂದು ನಿದ್ರೆ ಬರುವುದಿಲ್ಲ.. ಈವರೀರ್ವರೊ ಲೋಕದ ಪರಿವೆ ಮರೆತು "ಬಸೋ" ಎಂದು ನಿದ್ದೆ ಹೊಡೀತಿದ್ರು.............

ಎದ್ದು ಕುಳಿತು ಟೀವಿ ನೋಡಲು ಆರಂಭಿಸಿದೆ.. ಒಂದಷ್ಟು ಹಾಡುಗಳು ನೋಡುತ್ತ timepass ಮಾಡುತ್ತಲಿದ್ದೆ, Bore ಆಗಕ್ಕೆ ಶುರು ಆಯಿತು, ಒಂದುಸಲ ಕೂಗಿದೆ....ಶ್ರೀನಿವಾಸ 5:30 ಆಯ್ತು ಎದ್ದೇಳೊ...ಅಂತ..ಉಹುಂ!! sound -e ಇಲ್ಲಾ.. ಅರುಣನಿಗೆ ಹೇಳಿದೆ , ಅವನು 10ನಿಮಿಷ ರಾಜ..ಎದ್ಬಿಡ್ತೀನಿ..ಸರಿ ಸರಿ..ಅಂದುಕೊಂಡು ಸುಮ್ಮನಾದೆ...

System ON ಮಾಡಿದೆ....ಪಾಪಿಷ್ಟ ಶ್ರೀನಿವಾಸ System ಗೆ password ಇಟ್ಟಿದ್ದ, ಒಂದಷ್ಟು try ಮಾಡಿದೆ, work ಆಗ್ಲಿಲ್ಲ.... ಎಬ್ಬಿಸಲು ಮನಸಾಗಲಿಲ್ಲ!!!....ನನಗೆ ಮನಸಿದ್ದರೂ ಅವನು ಎಳುತ್ತಿರಲಿಲ್ಲ..!!!. ಅಂದು ನನ್ನ ಗ್ರಹಗತಿ ಸಂಪೂರ್ಣವಾಗಿ ಕೆಟ್ಟಿತ್ತೆಂದು ತೋರಿ ಬರುತ್ತದೆ, current ಹೋಯಿತು.. ಪೇಚಿಗೆ ಬಿದ್ದು ಮತ್ತೆ ಎಬ್ಬಿಸಲು ಅನುವಾದೆ. ಅರುಣ್ ೧೦ ನಿಮಿಷ ೧೦ ನಿಮಿಷ ಅನ್ನುತ್ತಲೇ ಇದ್ದ....ಶ್ರೀನಿವಾಸನ ಕಡೆ ಇಂದ ಮಾತ್ರ sound ಇಲ್ಲ, ಅಯ್ಯೊ ಕರ್ಮವೇ ಎಂದು ನನ್ನನ್ನು ನಾನೆ ಹಳಿದುಕೊಳ್ಳುತ್ತ.. ಗೆಳೆಯರಿಗೆ SMS ಮಾಡಲು ಶುರುಮಾಡಿದೆ. ಸೋಮ ನನ್ನು ಬಿಟ್ಟು ಬೆರೆ ಯಾರೂ reply ಅತ್ತಲಿಂದ ಇತ್ಲಾಗೆ ಇತ್ತಲಿಂದ ಅತ್ಲಾಗೆ ಒಡಾಡುತ್ತಿದ್ದೆ. ನನಗೆ ಅನ್ನಿಸುತಿತ್ತು ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದು..ಏನಾದರೊಂದು ಮಾಡಲೇಬೇಕು ಎಂದು , ಹಸಿವಾಗುತಿತ್ತು..ಕಾಫಿ ಮಾಡೋಣವೆಂದರೆ ಹಾಲಿಲ್ಲ ಪಕ್ಕನೆ ಒಂದು idea ಹೊಳೀತು ನನ್ನ ಮೊಬೈಲ್ ನಲ್ಲಿ alarm set ಮಾಡಿ ಹೊರಟೆ....ಇಬ್ಬರಿಗೂ ಎಚ್ಚರ ಆಗುತ್ತೆ ಅಂತ ಭಾವಿಸಿ set ಮಾಡಿ ನಾನು ಮಹಡಿ ಮೇಲೆ ಹೋಗಿಬಿಟ್ಟೆ. ಮೇಲೆ ಹೋಗಿ ನನಗೆ ನಾನೆ "ಶಬ್ಬಾಸ್ ಗಿರಿ " ಕೊಟ್ಟುಕೊಳ್ಳುತ್ತಲಿದ್ದೆ .ಈ ಪ್ಲಾನ್ 100% successful ಅಂತ.............

5 ನಿಮಿಷದ ತರುವಾಯ ಇಳಿದು ಬಂದೆ ನೋಡಿದರೆ ಎನೊಂದು ಆಗಿಲ್ಲವೆಂಬಂತೆ ಇಬ್ಬರು ಇನ್ನು ಮಲಗಿದ್ದಾರೆ. ನನಗೆ ಆಶ್ಚರ್ಯ.. ಅರುಣ್ ಅಂದ ಕೂಗಿದರೆ..ಆತ "ನೀನು alarm ಇಟ್ಟಿದ್ದು, ಅದಾಗದೆ ನಿಂತು ಹೋಯಿತು ಅನ್ಸುತ್ತೆ" ಅಂದ..

ನನಗೆ ಕಣ್ಣಾಲಿಗಳು ತುಂಬಿ ಬರುವುದೊಂದು ಬಾಕಿ ಇತ್ತು..... ನನ್ನ ತಾಳ್ಮೆ ಹಾರಿ ಹೋಗಿತ್ತು..

"ಲೋ ಏದ್ದೇಳೊ ಹೋಗೋಣ..ನನಗೆ ಹಸಿವಾಗುತ್ತಿದೆ.." ಸರಿ ಸರಿ ಹೋಗೋಣವಂತೆ....ಶ್ರೀನಿವಾಸನನ್ನು ಎಬ್ಬಿಸು ಅಂದ,
ಮೈಮೇಲೆ ಜಿರಲೆ ಬಿದ್ದವನಂತಾಗಿ....ಲೋ ಆಗಲ್ಲಪ್ಪಾ ನೀನೇ ನೋಡ್ಕೋ ಅವ್ನನ್ನ ಅಂದುಬಿಟ್ಟೆ, ನೋಡು ನೀನು ಹೂ! ಅಂದರೆ ಒಂದು ಚೆಂಬಿನಲ್ಲಿ ನೀರು ತಂದು ಸುರಿತೀನಿ....ಆಗ ಅವನು ಏಳಬಹುದು ಎನನ್ನುತ್ತೀಯ???" ಎಂದೆ..
ಅದಕ್ಕೆ ಅರುಣ ಹಾಗೆಲ್ಲಾ ಮಾಡಬೇಡ..ಇರು ನಾನು try ಮಾಡ್ತೀನಿ ಅಂದ
"ಶ್ರೀನಿವಾಸ..ಏಳಪ್ಪಾ ರಾಜ....ಹೋಗೋಣ time ಆಯ್ತು" ಇಷ್ಟು ಅಂದದ್ದೇ ತಡ ಶ್ರೀನಿವಾಸ ಎದ್ಬಿಟ್ಟ.. ನನಗೆ ಆ ಕ್ಷಣದಲ್ಲಿ ಉಂಟಾದ ಭಾವವನ್ನು ವಿವರಿಸಲು ಸಾಧ್ಯವಿಲ್ಲ ಬಿಡಿ...

ಅರುಣ ಹಲ್ಲು ಕಿರಿಯುತಿದ್ದ.."ನೋಡೋ ನಿನಗೆ ಎಬ್ಬಿಸುವುದಕ್ಕೆ ಬರಲ್ಲ" ಅಂತ

"ಲೋ ನಾನು ಅವಾಗಲಿಂದ time time ಗೆ ಅವ್ನನ್ನ ಎಬ್ಬಿಸಿ ಎಬ್ಬಿಸಿ set ಮಾಡಿದ್ದೀನಿ ಅದು ನಿನಗೆ work ಆಯ್ತು ಅಷ್ಟೆ"..ಸುಮ್ನಿರಪ್ಪಾ ಅಂದೆ...

ಅವನು ಸಹ ready ಆಗಿ ಊಟ ಮಾಡಲು ಮನೆಯಿಂದ ಮೂವರೂ ಹೊರಬಿದ್ದೆವು .

ಆಗ ಹೇಳಿದೆ......"ಲೋ ಶ್ರೀನಿವಾಸ ನೀನು ಹೀಗೆ ಅಂತ ನನಗೆ ಮುಂಚೇನೆ ಗೊತ್ತಿದ್ದಿದ್ದರೆ...ಬೆಳಿಗ್ಗೆ ನೀನು ನಿದ್ದೆ ಮಾಡ್ತಿರೋ pose ನ ನಾನು ರಾಜಾರೋಷವಾಗಿ ತೆಗೆಯುತ್ತಿದ್ದನಲ್ಲೋ.. ಥೂ ನಿನ್ನ!!!
ಹಾಗಾ ಮಲಗೋದು ಕುಂಭಕರ್ಣನ ಅಪರಾವತಾರ ನೀನು" ಮನಸ್ಸಿನಲ್ಲಿ ಮಡುಗಟ್ಟಿದ್ದ ದುಖವನ್ನೆಲ್ಲ ಹೊರಹಾಕುತ್ತಿದ್ದೆ ಅರುಣ ಮತ್ತು ಶ್ರೀನಿವಾಸ ಮನಸಾರೆ ನಗುತ್ತಿದ್ದರು.



ಹೀಗೆ ನಮ್ಮ ಪ್ರವಾಸವನ್ನು ಮುಗಿಸಿ..ಮೈಸೂರಿನಿಂದ ಹೊರಡಲುನುವಾದೆವು....ಶ್ರೀನಿವಾಸನು ನಮ್ಮನ್ನು ಬಸ್ ನಿಲ್ದಾಣಕ್ಕೆ ಬಂದು ಬೀಳ್ಕೊಟ್ಟ...

ಹೀಗೊಂದು ಮರೆಯಲಾರದ ಅನುಭವ ಮಂಟಪ ನೀಡಿದ್ದಕೆ ನಿನಗೆ ಶರಣು....ಮತ್ತೆ ನಿನ್ನ ನಾನು ಎಬ್ಬಿಸುವ ದುಸ್ಸಾಹಸಕ್ಕೆ ಕೈಹಾಕುವುದಿಲ್ಲ...

ಆ ಮಹಿಷಾಸುರನ ಮೇಲಾಣೆ!!!!!!!!

ಶಿವಾಜಿ - The Boss

Sunday, June 24, 2007




ಬಹುನಿರೀಕ್ಷಿತ ರಜನಿಕಾಂತ್ ಅಭಿನಯದ "ಶಿವಾಜಿ" ಬಿಡುಗಡೆಯಾಗಿದೆ, ಅದೇಕೊ ಏನೋ ಗೊತ್ತಿಲ್ಲ, ಬಹುನಿರೀಕ್ಷಿತ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿಬಿಡುವ ಚಿತ್ರಗಳು ಜನರನ್ನು ಮುಟ್ಟುವುದೆಇಲ್ಲ, ಬಿಡುಗಡೆಗೆ ಮುನ್ನವೆ ಸಾಕಷ್ಟು ಕುತೂಹಲ ಕೆರಳಿಸಿದ್ದ, ತಮಿಳು ಚಿತ್ರರಂಗದ ಘಟಾನುಘಟಿಗಳನ್ನೊಳಗೊಂಡ, 70 ಕೋಟಿ project ನ ಚಿತ್ರ "ಶಿವಾಜಿ", ಇಡೀ ಭಾರತೀಯ ಚಿತ್ರರಂಗ ತಮಿಳುನಾಡಿನೆಡೆಗೆ ಬೆರಗುಗಣ್ಣಿನಿಂದ ನೋಡುತ್ತಲಿತ್ತು... ರಜನೀಕಾಂತ್ ಇಡೀ ಏಷಿಯ ಖಂಡದಲ್ಲೆ ಎರಡನೆಯ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ, ಆತನ ಅಭಿಮಾನಿಗಳು ಪ್ರಪಂಚದ ಉದ್ದಗಲಕ್ಕೂ ಇದ್ದಾರೆ.. ಒಟ್ಟಾರೆ "ರಜನೀಕಾಂತ್" ತಮಿಳು ಚಿತ್ರರಂಗದ ಚುಂಬಕ ಶಕ್ತಿ ಎನ್ನಲಡ್ಡಿಯಿಲ್ಲ...

ಒಟ್ಟಾರೆ ಸಾಕಷ್ಟು ಅಂತೆ ಕಂತೆ ಗಳನ್ನೊಳಗೊಂಡು, ಸಾಕಷ್ಟು ನಿರೀಕ್ಷೆಗಳನ್ನು ಹೊತ್ತು ಪೋಲಿಸ್ ಬಿಗಿ ಬಂದೋಬಸ್ತಿನಲ್ಲಿ ಚಿತ್ರ ಸಾಕಷ್ಟು ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.. ಬಿಡುಗಡೆಗೆ ಮುನ್ನ ಕೆಲವು ದಿನಗಳು ಮುಂಚಿತವಾಗಿ ಪ್ರಮುಖ ಟೀವಿ ವಾಹಿನಿಗಳಲ್ಲಿ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಲಿತ್ತು.. "ಬಿಗ್ ಬಿ" ಎಂದೇ ಖ್ಯಾತಿವೆತ್ತ ಅಮಿತಾಭ್ "ಶಿವಾಜಿ" ಚಿತ್ರದಲ್ಲಿ guest appearance ಅಂತೆ... ತೆಲುಗಿನ "ಮೆಗಾಸ್ಟಾರ್" ಎಂದು ಕರೆಯಲ್ಪಡುವ "ಚಿರಂಜೀವಿ" ಕೂಡ ಇದ್ದಾರಂತೆ... ಹೀಗೆ ಸಾಕಷ್ಟು ಪ್ರಚಾರಪಡೆದಿತ್ತು.. ಪಡೆಯುತ್ತಲಿತ್ತು..

ನನ್ನ ಸ್ನೇಹಿತ ನೊಬ್ಬ ಶತಾಯಗತಾಯ ಮೊದಲವಾರದಲ್ಲೆ ಚಿತ್ರ ನೋಡಬೇಕೆಂದು ತುದಿಗಾಲಲ್ಲಿ ನಿಂತಿದ್ದ.. ನಾನು ಪರಿಪರಿಯಾಗಿ ಹೇಳಿದರೂ ಕೇಳದೆ "ಊರ್ವಶಿ" ಚಿತ್ರಮಂದಿರದ ಬಳಿ ಕರೆತಂದಿದ್ದ... ಅಲ್ಲಿ ಮುಂದಿನ 3 ದಿನಗಳಗೆ ಚಿತ್ರ ಮಂದಿರ housefull ಎಂಬ ಬೋರ್ಡ್ ರಾರಜಿಸುತ್ತಿತ್ತು..ಅದನ್ನು ಲೆಕ್ಕಿಸದೆ ಆತ ಒಳನುಗ್ಗಿದ.. ಅಲ್ಲಿ ಇಲ್ಲಿ ಅಲ್ಲಿ ನಡೆದಾಡುವವರನ್ನು ವಿಚಾರಿಸುತ್ತಿದ್ದ... ಇದ್ಯಾವ ಪರಿಯ ಹುಚ್ಚು ಎಂದು ನಾನು ಒಂದು ಕಡೆ ನಿಂತು ಸುಮ್ಮನೆ ನೋಡುತ್ತಿದ್ದೆ.... ಅಲ್ಲೆ ಸನಿಹದಲ್ಲಿ ಚಿತ್ರದ poster ಅನ್ನು ಕಂಡು.... ನಮ್ಮ ಕನ್ನಡ ಚಿತ್ರರಂಗದ ಯಾವೊಬ್ಬ star ಕೂಡ ಈ ರೀತಿಯ ಜನರಿಗೆ craze ಹುಟ್ಟಿಸಲಿಲ್ಲವಲ್ಲ ಎಂದು ಹಲಬುತ್ತಿದ್ದೆ..ನಮ್ಮದು ಸೀಮಿತ ಮಾರುಕಟ್ಟೆ ಎಂದು ಸುಮ್ಮನಾದೆ..ಅಷ್ಟರಲ್ಲಿ ನನ್ನ ಗೆಳೆಯ ಬಂದು ನನಗೆ ಒಂದು ನಂ. ಸಿಕ್ತು...ನಡಿ ಹೊರಡುವ "try" ಮಾಡ್ತೀನಿ.. ಎಂದು ಮುಖವರಳಿಸಿಕೊಂಡು ಹೇಳಿದ.... ಅಂದು ರಾತ್ರಿ ನನಗೆ ಕರೆ ಮಾಡಿ... "ನನಗೆ ೧೦ ಟಿಕೆಟ್ ಸಿಕ್ಕಿತು..ನೀನು ಬರ್ತಿದ್ಯ ಸುಮ್ನೆ kui kui ಅನ್ನಬೇಡ...ಈ ಭಾನುವಾರ first show ಉರ್ವಶಿ.. ಒಕೆ" ಎಂದು ಪೋನಿಟ್ಟ... ನಾನು ಆತನಿಗೆ ಮುಂಚೆಯೆ ಹೇಳಿದ್ದೆ.. ನನಗೆ ತಮಿಳು ಅಷ್ಟಾಗಿ ಬರುವುದಿಲ್ಲವೆಂದು... ನನಗೆ ಮೊದಲ ವಾರದಲ್ಲೆ ನೋಡಬೇಕೆನ್ನುವ craze ಇಲ್ಲವೆಂದು...ಆದರೂ... ಸಮಯಕ್ಕೆ ಸರಿಯಾಗಿ ಚಿತ್ರಮಂದಿರ ತಲುಪಿ ನನ್ನ ಆಸನದಲ್ಲಿ ಸ್ಥಿತನಾದೆ.. ನನ್ನ ಪಕ್ಕ ಕುಳಿತ ಗೆಳೆಯನಿಗೆ ಹೇಳಿದೆ..." ಲೊ ನನಗೆ ಅಷ್ಟಾಗಿ ತಮಿಳು ಅರ್ಥವಾಗುದಿಲ್ಲ.. ನೀನೇ ಹೇಳಬೇಕು..ಒಕೆ " ಎಂದೆ..ಆತ ತನ್ನ ಗೋಣನಲ್ಲಾಡಿಸಿದ...

ಚಿತ್ರ ಶುರುವಾಯಿತು...ಬೆಳ್ಳಿತೆರೆಯ ಮೇಲೆ "ಸೂಪರ್ ಸ್ಟಾರ್" ರಜನಿ ಎಂದು ಬಂದ ಕೂಡಲೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು... ನನ್ನ ರೋಮಗಳು ಸೆಟೆದು ನಿಂತವು.... ಮೈಯಲೆಲ್ಲ ಮಿಂಚಿನ ಸಂಚಾರ.. ಅಬ್ಬಬ್ಬಾ..ಎಂದು ಸುಮ್ಮನಾದೆ.... ಚಿತ್ರದ ಒಟ್ಟೂ ಕತೆ ಇಷ್ಟು.. ಅಮೆರಿಕೆಯಲ್ಲಿ software architect ಆಗಿರುವ ಶಿವಾಜಿ ಭಾರತಕ್ಕೆ ಬಂದು ತನ್ನ ಹೆಸರಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವ ಆಸೆಯನ್ನು ವ್ಯಕ್ತಪಡಿಸುತ್ತಾನೆ..ಅದನ್ನು ಆರಂಭಿಸಲು ಹೊರಡಿ ಸಾಕಷ್ಟು ರಾಜಕೀಯ ಕುಯುಕ್ತಿಗಳಿಗೆ ಒಳಗಾಗಿ ಲಂಚದ ವಿಶ್ವರೂಪ ಕಂಡು ಕಂಗೆಟ್ಟು ಒಂದು ಹಂತದಲ್ಲಿ ಬರಿಗೈ ಭಿಕಾರಿಯಾಗುತ್ತಾನೆ.. ತದನಂತರ ಕೇವಲ ಒಂದು ರೂಪಾಯಿನಿಂದ ಮತ್ತೆ ಕಳೆದುಕೊಂಡ ಹಣವನ್ನೆಲ್ಲ ಪಡೆದು ಸಮಾಜದ ದುರುಳರಿಂದ "black money" ಯನ್ನು ವಿನಿಯೋಗಿಸಿ ತನ್ನ ಶಿಕ್ಷಣ ಸಂಸ್ಥೆಗಳನ್ನು ಪೂರ್ಣಗೊಳಿಸುತ್ತಾನೆ.. ಈ ಚಿತ್ರದ ನಿರ್ದೇಶಕ "ಅನ್ನಿಯನ್" ಖ್ಯಾತಿಯ ಶಂಕರ್... ಅದು ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಹಣವನ್ನು ದೋಚಿದ ಯಶಸ್ವಿ ಚಿತ್ರ... ಹಾಗಾಗಿ ಸಾಕಷ್ಟು ಭರವಸೆಗಳಿತ್ತು.. ನನಗೆ ಕಂಡ ಹಾಗೆ ಚಿತ್ರದುದ್ದಕ್ಕು ಸರಿಯಾದ ಕಥಾ ಚೌಕಾಟ್ಟೇ ಇಲ್ಲ... "ಲಂಚ" ದಂತಹ ಘನ ಗಂಭೀರ ವಿಷಯವನ್ನು ಹೇಗೆ ಬಗ್ಗುಬಡಿಯುವುದೆಂದು ರಜನಿನ ಮೂಲಕ ಸರಿಯಾಗಿ ಕಟ್ಟುವುದೇ ಇಲ್ಲ... ಪ್ರತಿ frame ನಲ್ಲು ರಜನಿ ಮೆರೆಯುತ್ತಾರೆ..

ರಜನಿಯ image ಗೆ ಕಟ್ಟುಬಿದ್ದು ಸಾಕಷ್ಟು ಅನಾವಶ್ಯಕ ಎಳೆಗಳನ್ನು ಮಧ್ಯ ಬೆಸೆಯಲಾಗಿದೆ... ಹಾಗೆ ನೋಡಿದರೆ ಪ್ರತಿ ರಜನಿ ಚಿತ್ರದಲ್ಲಿ ರಜನಿಯ ಸಾಕಷ್ಟು punch ಡೈಲಾಗ್ಸ್ ಇರುತ್ತದೆ... ಈ ಚಿತ್ರದಲ್ಲಿ ಒಂದು ಡೈಲಾಗ್ ಬಿಟ್ಟರೆ ಹಾಸ್ಯನಟ ವಿವೇಕ್ ಹೆಚ್ಚು ಮಿಂಚುತ್ತಾರೆ...ತನ್ನ ಡೈಲಾಗ್ಸ್ ಇಂದ ಹಾಗು timings ಇಂದ...ಒಂದುಕಾಲದಲ್ಲಿ ತೆಲುಗಿನ ನಾಯಕನಟನಾಗಿದ್ದ "ಸುಮನ್" ಇದರಲ್ಲಿ ಖಳನಾಯಕ... ಅದ್ಭುತವಾಗಿ ನಟಿಸಿದ್ದಾರೆ... ರಜನಿ ಅಭಿನಯದ ವಿಷಯದಲ್ಲಿ ಎರಡು ಮಾತಿಲ್ಲ... ನೋಡಿದರೆ ಆತನಿಗೆ 57 ವಯಸ್ಸಾಗಿದೆಯೆಂದು ಅನಿಸುವುದೆ ಇಲ್ಲ.. ಪ್ರತಿ frame ನಲ್ಲಿ ಮಿಂಚುತ್ತಾರೆ.. ಹಾಗು ಜನರನ್ನು ರಂಜಿಸಲು ಸಾಕಷ್ಟು ಪ್ರಯತ್ನ ಪಡುತ್ತಾರೆ...!!!!

ನಾಯಕಿ ಶ್ರೇಯ ಗೆ ನಟನೆಗೆ ಹೆಚ್ಚು ಅವಕಾಶವಿಲ್ಲ... ಆಕೆಯ ಸ್ನಿಗ್ಧ ಸೌಂದರ್ಯವನ್ನು ಬರುವ ಪ್ರತಿ ಹಾಡಿನಲ್ಲು ಬಿಚ್ಚಿ ತೋರಿಸುತ್ತಾರೆ!!!!....ಕಲಾತ್ಮಕತೆ ಮೆರೆದಿದ್ದಾರೆ!!! ... ಚಿತ್ರದ ಪ್ರತಿ ಹಾಡಿನ ಸೆಟ್ ಗಳಂತು ಅದ್ಬುತ..ಸಾಕಷ್ಟು ಹಣ ವ್ಯಯಿಸಿದ್ದಾರೆ..ಹಾಡುಗಳ ಚಿತ್ರೀಕರಣಕ್ಕೆ... ಹಾಗೆ ರಜನಿ ತನ್ನ ವಿಭಿನ್ನ getup ಗಳಲ್ಲಿ ಮಿಂಚುತ್ತಾರೆ... ತೆರೆಯ ಮೆಲೆ ನಾಯಕರು ಸಿಗರೆಟ್ ಹಚ್ಚಿ ವಿರಾಜಿಸಬಾರದೆಂಬ ಕಟ್ಟಳೆಯಿದೆ... ಅದಕ್ಕಾಗಿ ರಜನಿ bubble gum ವಿಭಿನ್ನವಾಗಿ ಬಾಯಿಗೆ ಹಾಕಿಕೊಳ್ಳುತ್ತಾರೆ...ಹಾಗು ಒಂದು ರೂಪಾಯಿ coin ನ soooooper ಆಗಿ ತಿರುಗಿಸಿ ಜೇಬಿಗಿಳಿಸುತ್ತಾರೆ.... ಹಲವು serious ಆದ scene ದ್ರುಶ್ಯಗಳಿಗೆ ವಿನೋದದ ಲೇಪ ನೀಡಿ ಹಾಸ್ಯಾಸ್ಪದ ವಾಗಿ ಮಾಡಿಬಿಡುತ್ತಾರೆ ನಿರ್ದೇಶಕ ಮಹಾಪ್ರಭುಗಳು.. ಮೊದಲೆ ಗುಲ್ಲೆಬ್ಬಿಸಿದಂತೆ ಚಿತ್ರದಲ್ಲಿ ಅಮಿತಾಭ್ ಕೂಡ ಬರುವುದಿಲ್ಲ..ಚಿರಂಜೀವಿ ಯು ಸಹ..ನಾನು ಕಡೆಯತನಕ ಕಾದೆ..ಎಲ್ಲಿ ಬರುವರೊ ಎಂದು.... ಒಟ್ಟಾರೆಯಾಗಿ ಹೇಳಿದರೆ ಈ ಚಿತ್ರ ಹಿಂದಿನ ರಜನಿಯ ಚಿತ್ರಗಳಂತೆ ರಂಜಿಸಲು ವಿಫಲವಾಗುತ್ತೆ.... ನಾನು ರಜನಿಯ ಪಕ್ಕಾ ಅಭಿಮಾನಿಯು ಅಲ್ಲ ಹಾಗು ಆತನ ದ್ವೇಷಿಯು ಅಲ್ಲ... ಒಬ್ಬ ಶ್ರೀಸಾಮನ್ಯ ಪ್ರೇಕ್ಷಕನಾಗಿ ಕುಳಿತು ಚಿತ್ರವನ್ನು ಪರಾಂಬರಿಸಿದ್ದೇನೆ.. ಹಾಗೆ ನೋಡಿದರೆ ರಜನಿ ಅಭಿನಯದ "ಪಡೆಯಪ್ಪ" ಚಿತ್ರದ ಅಭಿಮಾನಿ ನಾನು...ಆ ಚಿತ್ರವನ್ನು ಅದೆಷ್ಟು ಸಲ ನೋಡಿದ್ದೀನೊ.. ಲೆಕ್ಕವಿಟ್ಟವರ್ಯಾರು... ಹಾಗೆ "ಬಾಷ" ಚಿತ್ರ.... ನಾನು ಕೇಳುವ ಪ್ರಶ್ನೆಯೆಂದರೆ ರಜನಿಯಂತಹ ನಟನಿಗೆ ಒಂದು ಸರಿಯಾದ ಕಥಾಚೌಕಟ್ಟಿರುವ ಚಿತ್ರಕತೆ ಬರೆಯಲು ಆಗಲಿಲ್ಲವೆ???... ರೆಹಮಾನ್ ಸಂಗೀತ ದೇವರಿಗೆ ಪ್ರೀತಿ...ಆತನ ಸರಕು ಮುಗಿದಂತೆ ತೋರಿಬರುತ್ತದೆ... ಒಂದೆ ಒಂದು ಹಾಡು ಕೂಡ ಮನದಲ್ಲಿ ಚಿತ್ರಮಂದಿರದ ಹೊರಗಡೆ ಬಂದ ಮೇಲೆ ಉಳಿಯುವುದಿಲ್ಲ... ಏಕೆ ಹೀಗೆ?? ನನಗೆನ್ನಿಸುವ ಪ್ರಕಾರ ಒಬ್ಬ ಪ್ರಖ್ಯಾತ ನಟನ image ಗೆ ಸರಿಯಾದ ಚಿತ್ರಕತೆ ಕಟ್ಟಿಕೊಡುವುದರಲ್ಲಿ ಶಂಕರ್ ಸೋತಿದ್ದಾರೆ.. ಚಿತ್ರದ ಸಂಗೀತವು ಪ್ರತಿಒಂದು ಚಿತ್ರವನ್ನು promote ಮಾಡಲು ಒಂದು ಪ್ರಬಲವಾದ ಅಂಶ.... ಆ ವಲಯದಲ್ಲೂ ಕೂಡ ಸೋತಿದೆ ಎಂದೆ ಅನ್ನಬಹುದು...

ಚಿತ್ರ ಸಾಕಷ್ಟು ಹಣ ಗಳಿಸಬಹುದು..ಹಾಕಿದ ದುಡ್ಡೆಲ್ಲ ಇದಾಗಲೆ ಮರಳಿ ಬಂದಿರಬಹುದು...ಆದರೆ ಒಟ್ಟಾರೆಯಾಗಿ ರಜನಿ ಮತ್ತೊಮ್ಮೆ ತಮ್ಮ ಅಭಿಮಾನಿಗಳನ್ನು ನಿರಾಶೆಗೊಳಿಸಿದ್ದಾರೆ... ರಜನಿಯ ಅಭಿಮಾನಿಗಳಗಿದ್ದಲ್ಲಿ ಅಥವಾ ಚಿತ್ರದಲ್ಲಿ ಏನಿರಬಹುದೆಂಬ ಕೂತೂಹಲವಿರುವವರು ಒಮ್ಮೆ ನೋಡಬಹುದು..

ಒಮ್ಮೆ ನೋಡಿ ಚಿತ್ರಮಂದಿರದ ಹೊರಗಡೆ ಬಂದು ಸುಲಭವಾಗಿ ಮರೆಯಬಹುದಂತಾದ ಚಿತ್ರ "ಶಿವಾಜಿ"...