tag:blogger.com,1999:blog-10284838300467443842024-03-13T15:36:59.841+05:30Expect the Unexpected........Unknownnoreply@blogger.comBlogger53125tag:blogger.com,1999:blog-1028483830046744384.post-38362794844220881162009-05-24T04:19:00.002+05:302009-05-24T04:24:59.622+05:30ಒಂದು ಪೇಜಿನ ಕತೆಗಳು....<strong><u>ಪೇಜ್ - 1</u></strong><br /><em>ನನ್ನ ಮೊಟ್ಟ ಮೊದಲ ಸಣ್ಣ ಕತೆ ಇದು, ಅದರಲ್ಲೂ ಒಂದೇ ಪೇಜಿರಬೇಕೆಂದು ನಿರ್ಭಂದ ಹಾಕಿಕೊಂಡಿದ್ದೇನೆ. ಇದು ನನ್ನ ಬಾಳಗೆಳತಿ ದಿವ್ಯಾಳಿಗೆ ಅರ್ಪಿತ.<br /></em><br />ಮುರಳಿ ರಾತ್ರಿ ಬಹಳ ಹೊತ್ತು ಬಿಕ್ಕಿ ಬಿಕ್ಕಿ ಅತ್ತು ಹಾಗೆ ಮಲಗಿದ್ದ. ಅವನ ಕಣ್ಣೀರಿಗೆ ದಿಂಬು ತೋಯ್ದುಹೋಗಿದ್ದವು. ಕಣ್ಣೆಲ್ಲಾ ಕೆಂಪು. ಮುಂಜಾನೆ ಎದ್ದೊಡನೆಯೇ ಅಮ್ಮನಿಗೆ ಸ್ಪೆಶಲ್ ಕ್ಲಾಸ್ ಇದೆ ಎಂದು ೮ಗಂಟೆಗೆ ಹೊತ್ತಿಗೆ ರೆಡಿ ಆಗಿ ಮನೆ ಇಂದ ಹೊರಬಂದ. ಅಪ್ಪನಿಗೆ ಹೇಳಬೇಕೂ ಅನಿಸಲಿಲ್ಲ. ನೆನ್ನೆ ರಾತ್ರಿ ಆದದ್ದಾದರೂ ಏನು ?<br /><br />ಮುಂದಿನ ವಾರವೇ ಅವನ ಹುಟ್ಟುಹಬ್ಬವಿತ್ತು, ಅದಕ್ಕಾಗಿ ಬಟ್ಟೆ ಕೊಳ್ಳಲು ಅಕ್ಕನ ಜೊತೆಗೂಡಿದ್ದ, ಅಮ್ಮ ಅಕ್ಕನ ಕೈಗೆ ದುಡ್ಡು ಕೊಟ್ಟು ಸರಿಯಾಗಿ ಖರ್ಚು ಮಾಡಿ, ಒಂದು ಪ್ಯಾಂಟು, ಶರ್ಟು ಅಷ್ಟೇ ಎಂದು ಹೇಳಿ ಕಳುಹಿಸಿದ್ದರು. ಜಯನಗರದ ಅಂಗಡಿಗಳಲ್ಲಿ ಸಾಕಷ್ಟು ಎಡತಾಕಿದರೂ ಮುರಳಿಗೆ ಒಪ್ಪಿಗೆಯಾಗುವಂತಹ ಬಟ್ಟೆಗಳು ಸಿಗಲೇ ಇಲ್ಲ, ನಡೆದು ನಡೆದು ಸುಸ್ತಾಗಿ ಗಣೇಶ ಫ್ರೂಟ್ ಜೂಸ್ ಸೆಂಟರಿಗೆ ಬಂದಾಗ, ಅದರ ಪಕ್ಕದಲ್ಲಿದ್ದ Wrangler ಮಳಿಗೆ ಮೇಲೆ ಕಣ್ಣು ಬಿತ್ತು. ಅಕ್ಕ ಎಷ್ಟೇ ಬೇಡವೆಂದರೂ ಅಕ್ಕನನ್ನೂ ಪೀಡಿಸಿ ಒಂಡು ಕಡು ನೀಲಿ ಬಣ್ಣದ ಜೀನ್ಸ್ ಒಂದನ್ನು ಕೊಂಡೇ ಬಿಟ್ಟ ಮುರಳಿ ಸಾವಿರದೈನೂರು ತೆತ್ತು. ಕೊಂಡದ್ದೇನೋ ಕೊಂಡಾಯಿತು, ಮನೆಯಲ್ಲಿ ಏನೆನ್ನುವರೋ ಎನ್ನುವ ಭಯದಲ್ಲೇ ಮನೆಗೆ ಬಂದರು ಅಕ್ಕ ತಮ್ಮ. "ಅಮ್ಮ Wrangler ಒಳ್ಳೇ ಬ್ರಾಂಡ್ ಅಮ್ಮ,ಈ ಜೀನ್ಸ್ ಇದ್ಯಲ್ಲ, ಇನ್ನು ಮೂರು ವರ್ಷ ಬಾಳಿಕೆ ಬರುತ್ತೆ, ನೋಡು ನಂದು ಬೇರೆ ಪ್ಯಾಂಟ್ಸ್ ಎಲ್ಲಾ ಆಗ್ಲೆ ಹರ್ದೋಗ್ಬಿಟ್ಟಿದೆ" ಎಂದ. ಆದರೂ ಅಮ್ಮ "ನಿನಗೆ ದುಡ್ಡಿನ ಬೆಲೆ ಗೊತ್ತಿಲ್ಲವೋ, ಏನೋ ಕೊಂಡು ತಂದಿದೀಯ, ನಿಮ್ಮಪ್ಪ ಬೈದರೆ ನಂಗೊತ್ತಿಲ್ಲ, ಬರೀ ಪ್ಯಾಂಟ್ ಮಾತ್ರ ತಂದಿದೀಯ, ಶರ್ಟ್ ಕೂಡ ಇಲ್ಲ" ಎಂದು ಸುಮ್ಮನಾದರು. ಮಗಳನ್ನೂ ಸರಿಯಾಗಿ ಮಾತನಾಡಿಸಲಿಲ್ಲ. ಆಮೇಲೆ ಅಡಿಗೆ ಮನೆಗೆ ಬಂದಾಗ.."ನೀನಾದ್ರು ಹೇಳ್ಬಾರ್ದೇನೆ" ಎಂದರು.<br /><br />ಅಪ್ಪ ಬಂದ ಕೂಡಲೇ ಟೀಪಾಯಿಯ ಮೇಲೆ ಇದ್ದ ಕವರ್ ಕಣ್ಣಿಗೆ ಬಿತ್ತು. ಏನಿದು ಎಂದು ನೋಡಿದಾಗ ಪ್ಯಾಂಟು. ಅಷ್ಟರಲ್ಲಾಗಲೇ ಮುರಳಿಯ ಎದೆ ಹೊಡೆದುಕೊಳ್ಳುತ್ತಿತ್ತು. ರೂಮಿನ ಬಾಗಿಲ ಬಳಿ ಬಂದು ನಿಂತ, ಏಷ್ಟು ಕೊಟ್ಟೆಯೋ ಎಂದರು, ಐನೂರಕ್ಕಿಂತ ಜಾಸ್ತಿ ಕೊಟ್ಟಿಲ್ಲ ತಾನೇ ಎಂದು ಮರುಪ್ರಶ್ನೆ ಎಸೆದರು. "ಇಲ್ಲಪ್ಪ ಇದು ಬ್ರಾಂಡೆಡ್ ಪ್ಯಾಂಟು, ಮೂರು ವರ್ಷ ಬಾಳಿಕೆ ಬರುತ್ತೆ, ಸಾವಿರ ಕೊಟ್ಟೆ" ಎಂದು ಉಗುಳು ನುಂಗುತ್ತಲೇ ಹೇಳಿದ. ಹೊರಗಿಂದ ಆಗ ತಾನೆ ದಣಿದು ಬಂದಿದ್ದ ಅವರಪ್ಪ ಯಾವ ಮುನ್ಸೂಚನೆಯೂ ಇಲ್ಲದೆಯೇ ಬಯ್ಯಲು ಶುರು ಮಾಡಿದರು. "ಜವಾಬ್ದಾರಿ ಅನ್ನೋದು ನಿಂಗೆ ಸ್ವಲ್ಪಾನಾದ್ರು ಇದ್ಯಾ?? ಏನೋ ಗೊತ್ತು ನಿಂಗೆ ದುಡ್ಡಿನ ಬೆಲೆ? ಲಫಂಗ. ಅಷ್ಟೋಂದ್ ದುಡ್ಡು ಕೊಟ್ಟು ಪ್ಯಾಂಟ್ ಹಾಕ್ಕೊಳ್ಳೊ ಶೋಕಿ ಏನೋ ನಿಂಗೆ? ಹೊರಗಡೆ ಹೋಗಿ ನಾಲ್ಕಾಣೆ ಸಂಪಾದಿಸ್ಕೊಂಡು ಬಾ ನೋಡೋಣ, ಆಗ ಗೊತ್ತಾಗುತ್ತೆ ನಿನ್ ಯೋಗ್ಯತೆ......................"<br />ಹಾಗೆ ಸುಮಾರು ಅರ್ಧ ತಾಸಿಗಿಂತಲೂ ಹೆಚ್ಚಿಗೆ ಸಾಗಿತು ಬಯ್ಗುಳ, ಅಕ್ಕನಿಗೂ, ಅಮ್ಮನಿಗೂ ಬಯ್ಗುಳದ ಪಾಲಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕಣ್ಣಲ್ಲಿ ನೀರು ತುಂಬಿಕೊಂಡು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಬಿಟ್ಟ. ರಾತ್ರಿ ಊಟ ಕೂಡ ಮಾಡಲು ಬರಲಿಲ್ಲ ಮುರಳಿ, ಹಸಿವಾಗಿರಲಿಲ್ಲವೆಂದಲ್ಲ, ಕರೆಯಲು, ಒಲೈಸಲು ಮನೆಯಲ್ಲಿ ಯಾರೊಬ್ಬರು ಬರದಿದ್ದು ಅವನಿಗೆ ಮತ್ತಷ್ಟು ನೋವುಂಟು ಮಾಡಿತ್ತು.<br /><br />ಜೇಬಿನಲ್ಲಿದ್ದು ಬರೀ ನೂರು ರುಪಾಯಿ. ಪಾಸ್ ಇದ್ದುದರಿಂದ ಕಾಲೇಜಿನ ಬಸ್ ಬಿಟ್ಟು ಮೆಜೆಸ್ಟಿಕ್ ಬಸ್ ಹತ್ತಿಬಿಟ್ಟ. ಮನೆ ಬಿಟ್ಟು ಹೋಗಬೇಕೆಂದು ರಾತ್ರಿಯೇ ನಿರ್ಧರಿಸಿದ್ದ. ನಾನು ದುಡ್ಡು ದುಡಿದೇ ಮನೆಗೆ ಬರುವೆನೆಂದು ಹೊರಟಿದ್ದ. ಅಂತಹ ನೂರಾರು ಪ್ಯಾಂಟುಗಳು ಕೊಳ್ಳಬೇಕು ನಾನು. ಯಾವನೊಬ್ಬನ ಹಂಗು ನನಗೆ ಬೇಡವೆಂಬ ನಿರ್ಧಾರಕ್ಕೆ ಬಂದಿದ್ದ. ಮಧ್ಯ ಸಿರ್ಸಿ ಸರ್ಕಲಿನಲ್ಲಿ ಇಳಿದು ಅಲ್ಲೆ ಗೂಡಂಗಡಿಯಲ್ಲಿ ಕಾಫಿ-ಬನ್ನು ತಿಂದ. ಮನಸಿಗೇನೋ ಉಲ್ಲಾಸ. ಕೈಕಾಲುಗಳಿಗೆಂತಹುದೋ ಉತ್ಸಾಹ. ನಾನಿನ್ನು ಸ್ವತಂತ್ರನಾಗಿಬಿಟ್ಟೆ ಎಂದು. ಎದೆಯುಬ್ಬಿಸಿ ನಡೆಡಾಡಿದ. ನಡೆದೇ ಮಜೆಸ್ಟಿಕ್ ತಲುಪುತ್ತೇನೆಂದು ಅದರೆಡೆಗೆ ದಾಪುಗಾಲು ಹಾಕತೊಡಗಿದ. ಇನ್ನು ಮುಂದೆ ಕಾಲೇಜಿಲ್ಲ, ಮನೆಯಲ್ಲಿ ಓದು ಓದು ಎನ್ನುವ ಕಿರಿ ಇಲ್ಲ, ಅಪ್ಪನ ಗಲಾಟೆ ಇಲ್ಲ. ಸರಿ ಎಲ್ಲಿಗೆ ಹೋಗುವುದು, ಹೆಚ್ಚು ತಡ ಮಾಡದೆ, ಯೋಚಿಸದೆ ಒಂದೇ ಉತ್ತರ ಕೊಟ್ಟಿತು ಮನಸು "ಮುಂಬಯಿ" ಎಂದು. ಅಲ್ಲಿಗೆ ಹೋಗಿ ಎಂತೆಂತಹವರೋ ಏನೇನೇನೋ ಆಗೋಗಿದ್ದಾರೆ, ಶಾರುಕ್ ಖಾನ್ ದಿಲ್ಲಿಯಿಂದ ಬಂದವ, ಈಗ ಹೇಗಾಗಿದ್ದಾನೆ? ಸಮುದ್ರದ ಮುಂದೆ ನಿಂತು ಇಡೀ ಮುಂಬಯಿಯನ್ನು ಆಳುತ್ತೇನೆಂದು ಹೇಳಿದನಂತೆ, ನಾನು ಹಾಗೆಯೇ ಹೇಳಬೇಕು, ಆದಷ್ಟು ಬೇಗ ಮುಂಬಯಿ ಸೇರಬೇಕು. ಅವನಿಗಾಗಿ ಸಮುದ್ರ ಕಾದಿದೆಯೇನೊ ಎಂದು ಚಡಪಡಿಸತೊಡಗಿದ. ನಾನು ಅಲ್ಲಿಗೇ ಹೋಗುತ್ತೇನೆ, ದೊಡ್ಡ ವ್ಯಕ್ತಿಯಾಗಿ ಮತ್ತೆ ಈ ಊರಿಗೆ ಕಾಲಿಡುತ್ತೇನೆ ಎಂದು ಮತ್ತೊಮ್ಮೆ ಧೃಡವಾಗಿ ನಿರ್ಧರಿಸಿದ.<br /><br />ಮನೆ ಬಿಟ್ಟವರೆಲ್ಲರ ಇತಿಹಾಸ ಜೀಕುತ್ತಾ ನಡೆಯುತ್ತಿದ್ದ. ನಮ್ಮ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಕೂಡ ಮನೆ ಬಿಟ್ಟವರ್ಏ. ಭಾರತ ರತ್ನ ಭೀಮ್ ಸೇನ್ ಜೋಶಿಯವರೂ ಕೂಡ ಸಂಗೀತ ಕಲಿಯಲೆಂದು ಹದಿನಾಲ್ಕನೆಯ ವಯಸ್ಸಿನಲ್ಲಿ ಮನೆ ಬಿಟ್ಟರಂತೆ, ಹಾಗೆ ನೋಡಿದರೆ ನನಗೆ ಆಗಲೇ ಇಪ್ಪತ್ತು ವರ್ಷವಾಗಿದೆ, ಬಹಳ ಲೇಟ್ ಮಾಡಿದೆ ಎಂದು ಅನಿಸಿತು ಮುರಳಿಗೆ. ಅವರೆಲ್ಲರಂತೆ ದೊಡ್ಡ ವ್ಯಕ್ತಿಯಾಗಬೇಕೆಂದು ದಾರಿಯುದ್ದಕ್ಕೊ ಹಗಲುಗನಸು ಕಾಣುತ್ತ ಬಂದ. ಇರುವುದು ನೂರೇ ರುಪಾಯಿ ಹೇಗೆ ತಲುಪುವುದು ಮುಂಬಯಿಯನ್ನು. ರೈಲು ಹತ್ತಿ ಟಿ.ಟಿ. ಬರುವ ವೇಳೆಗೆ ಟಾಯ್ಲೆಟ್ಟಿನಲ್ಲಿ ಕೂತು ಬಿಡುವ ತಂತ್ರ ಹೂಡಿದ. ರಾತ್ರಿ ಸರಿಯಾಗಿ ನಿದ್ದೆ ಇಲ್ಲದುದರ ಕಾರಣ ನಡೆದು ನಡೆದು ಸುಸ್ತಾದ. ಅಷ್ಟರಲ್ಲಿ ಕಾರ್ಪೊರೇಶನ್ ಬಳಿ ಒಂದು ಪಾರ್ಕು ಕಂಡ. ಒಳಗೆ ಹೋಗಿ ಒಂದು ಮರದ ನೆರಳಿನಲ್ಲಿ ಹಾಗೆ ನೆಲಕ್ಕೆ ಒರಗಿಕೊಂಡ. ಸೊಂಪಾದ ನಿದ್ರೆಗೆ ಜಾರಿದ. ಕೆಂಪೇಗೌಡ ರಸ್ತೆಯಲ್ಲಿ ಕೆಟ್ಟದಾಗಿ ಹಾರ್ನ್ ಮಾಡುತ್ತ ಮೆಲ್ಲಗೆ ತೆವಳುತ್ತಿದ್ದ ವಾಹನಗಳು ಮುರಳಿಯ ನಿದ್ರೆಗೆ ಭಂಗ ತರಲಿಲ್ಲ.<br /><br />ಅಮ್ಮ ಭೋರಿಟ್ಟು ಅಳುತ್ತಿದ್ದಳು ,ಮಾತು ಮಾತಿಗೂ ಎದೆಯೊಡೆದುಕೊಳ್ಳುತ್ತಿದ್ದಳು. ಸರಿಯಾಗಿ ಮನೆಯವರೆಲ್ಲ ಊಟ, ನಿದ್ರೆ ಮಾಡಿ ಒಂದು ವಾರದ ಮೇಲಾಗಿತ್ತು. ಮುರಳಿಯ ಪತ್ತೆಯೇ ಆಗಿರಲಿಲ್ಲ. ಎಲ್ಲಿ ಹೋದ ?, ಏನಾದ ? ಯಾರೊಬ್ಬರಿಗೂ ಸುಳಿವಿರಲಿಲ್ಲ. ಅವರ ಸ್ನೇಹಿತರನ್ನು ಸಂಪರ್ಕಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಅದಾಗಲೇ ದಿನಪತ್ರಿಕೆಗಳಲ್ಲಿ , ನ್ಯೂಸ್ ನಲ್ಲಿ ಕಾಣೆಯಾಗಿದ್ದನೆಂದು ಪ್ರಕಟಣೆ ಕೊಟ್ಟಿದ್ದರೂ ಸಹ..ಉಹೂ ಏನೂ ಪ್ರಯೋಜನವಾಗಿರಲಿಲ್ಲ. ಅವರಪ್ಪನಿಗೆ ದಿಕ್ಕೇ ತೋಚದಂತಾಗಿತ್ತು. ಕೊನೆಯ ಪ್ರಯತ್ನವೆಂಬಂತೆ ದೇಶದ ಪ್ರಮುಖ ನಗರಗಳಲ್ಲಿ ಪ್ರಕಟಣೆ ಹೊರಡಿಸಿದ್ದರು, ಅದೂ ದಿನಪತ್ರಿಕೆಯ ಫ್ರಂಟ್ ಪೇಜಿನಲ್ಲಿ. ಮುಂಬೈ ಪೋಲಿಸರು ಒಂದು ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುತ್ತಿದ ಮುರಳಿಯನ್ನು ಹಿಡಿದು ಬೆಂಗಳೂರಿಗೆ ಕರೆತಂದರು. ಮನೆಗೆ ಕಾಲಿರಿಸಿದ ಕೂಡಲೆ ಅಮ್ಮ ಒಡಿಬಂದು ಅವನನ್ನು ತಬ್ಬಿಕೊಂಡು "ಎಲ್ಲಿ ಹೋಗ್ಬಿಟ್ಟಿದ್ದೆ ಕಂದಾ, ಯಾಕ್ ಹಿಂಗ್ ಮಾಡ್ದೆ? ಏನ್ ಕಮ್ಮಿ ಮಾಡಿದ್ವಿ ನಿಂಗಿಲ್ಲಿ, ನಿನ್ ಬಿಟ್ಟು ನಾನ್ ಬದುಕಿರ್ತೀನೇನೊ? ಒಂದಾದಮೇಲೊಂದು ಪ್ರಶ್ನೆ ಕೇಳುತ್ತಲೇ ಅವನನ್ನು ಜಗ್ಗಾಡುತ್ತಿದ್ದರು.<br /><br />ಧಿಗ್ಗನೆ ಎದ್ದು ಕುಳಿತ ಮುರಳಿ. ಕಣ್ಣೆಲ್ಲಾ ಮಂಜು ಮಂಜು. ಸೂರ್ಯ ಅದಾಗಲೇ ತನ್ನ ದಿನಗೆಲಸವನ್ನು ಮುಗಿಸಿ ಮನೆ ಸೇರಿದ್ದ. ಕೆಂಪೇಗೌಡ ರಸ್ತೆಯಲ್ಲಿ ವಾಹನಗಳು ಗಿಜುಗುಡುತ್ತಲೇ ಇದ್ದವು. ಅಲ್ಲೇ ಎದುರಿಗೆ ಇದ್ದ ಹೋಟೆಲಿನಲ್ಲಿ ಇಡ್ಲಿ, ವಡೆ ತಿಂದು ಕಾಫಿ ಕುಡಿಯಲು ಶುರು ಮಾಡಿದ. ಬಿದ್ದ ಕನಸಿನಿಂದ ಇನ್ನೂ ಚೇತರಿಸಿಕೊಂಡಿರಲಿಲ್ಲ, ಸಮಯ ನೋಡಿಕೊಂಡ, ಆಗಲೇ ರಾತ್ರಿ ಎಂಟು ಗಂಟೆಯಾಗಿದೆ. ಅಮ್ಮ ಗಾಭರಿ ಆಗಿರುತ್ತಾಳೆ, ಇಷ್ಟೊತ್ತಿಗೆ ಎಷ್ಟು ಬಾರಿ ಅತ್ತಳೊ? ಅಕ್ಕ ಪಾಪ ಅವಳು ತಾನೆ ಏನು ಮಾಡಿಯಾಳು, ಅಮ್ಮನನ್ನು ಸಂತೈಸುತ್ತಿರಬಹುದು , ಅಪ್ಪ ಆಗಲೇ 'ಸಂಜೆವಾಣಿ' ಪತ್ರಿಕೆಗೆ ಹೊರಟಿರಬಹುದು ನನ್ನದೊಂದು ಫೋಟೊ ತೆಗೆದುಕೊಂಡು. ದೂರದರ್ಶನದಲ್ಲೊಮ್ಮೆ " ಹೆಸರು ಮುರಳಿ ,ಗೋದಿ ಬಣ್ಣ, ಕೋಲು ಮುಖ, ವಯಸ್ಸು ಇಪ್ಪತ್ತು, ಜಯನಗರದ ನಿವಾಸಿಯಾದ ಇವನು ಇಂದು ಸಂಜೆಯಿಂದ ಕಾಣುತ್ತಿಲ್ಲ" ಎಂಬ ಪ್ರಕಟಣೆ ಹೊರಬಿದ್ದಿರಬಹುದು. ಯಾಕೋ ಹೋಟೆಲಿನಲ್ಲಿದ್ದ ಜನರೆಲ್ಲ ತನ್ನನ್ನೇ ನೋಡುತ್ತಿದ್ದಾರೆನಿಸಿತು.<br /><br />ಅಲ್ಲಿಂದ ನೇರವಾಗಿ ಮನೆಗೆ ಹೋಗುವ ಬಸ್ಸನ್ನೇರಿದ. ದಾರಿಯುದ್ದಕ್ಕೊ ತಾನು ಕೆಟ್ಟ ನಿರ್ಧಾರ ಮಾಡಿದೆ. ಇಲ್ಲೇ ಈಸಬೇಕು, ಇಲ್ಲೇ ಜಯಿಸಬೇಕು ಎಂದು ದಾಸರನ್ನು ನೆನೆದ. ಮನೆಗೆ ತಾನೊಬ್ಬನೇ ಗಂಡು ಹುಡುಗ, ನಾನು ಹೀಗ ಬೇಜವಾಬ್ದಾರಿಯಿಂದ ಹೊರಟು ಬಿಟ್ಟರೆ ನಾಳೆ ಅಕ್ಕನಿಗೆ ಮದುವೆ ಮಾಡಿಸುವವರು ಯಾರು? ಜನರೆಲ್ಲ ಅಪ್ಪ ಅಮ್ಮ ನ ಬಗ್ಗೆ ಏನೆಲ್ಲಾ ಮಾತನಾಡುತ್ತಾರೆ? ಅವನ ಮನಸಿಗೆ ಬಂದ ಪ್ರಶ್ನೆಗಳಿಗೆ ಅವನೇ ಉತ್ತರ ಕಂಡುಕೊಳ್ಳಲು ವಿಫಲನಾದ.<br /><br />ಬಸ್ ಇಳಿದು ಮನೆ ಗಲ್ಲಿಗೆ ಕಾಲಿಡುತ್ತಲೇ ಬೆವರಲಾರಂಭಿಸಿದ, ಎಲ್ಲರೂ ಇವನನ್ನೇ ನೋಡುತ್ತಿದ್ದಾರೆನಿಸಿತು. ಯಾರೋ ಇವನೆಡೆಗೆ ಕೈತೋರಿಸಿದ ಹಾಗಾಯಿತು, ತಿರುಗಿ ನೋಡುವ ಧೈರ್ಯ ಆಗಲಿಲ್ಲ. ಮನೆಯ ಮೆಟ್ಟಿಲೇರತೊಡಗಿದ, ಅಮ್ಮ ನನ್ನನ್ನು ನೋಡಿದ ಕೂಡಲೇ ಅಪ್ಪಿಕೊಂಡು ಅಳುತ್ತಾಳೆ, ಅವಳನ್ನು ಸಮಾಧಾನ ಪಡಿಸುವುದು ಹೇಗೆ ?, ಅಪ್ಪ ಇನ್ನು ಮೇಲೆ ನಿನಗೆ ಬಯ್ಯುವುದಿಲ್ಲವೋ ಎಂದು ಹೇಳುತ್ತಾರೆ ಎನ್ನುವ ಹೊತ್ತಿಗೆ ಮನೆ ಬಾಗಿಲ ಬಳಿ ಬಂದ. ಕರೆಗಂಟೆ ಒತ್ತುವ ಒಳಗಾಗಿ ಬಾಗಿಲು ತೆರೆದುಕೊಂಡಿತು, ಅಪ್ಪ ಎದುರಿಗೆ ಬಂದು "ಲಫಂಗ, ಮನೆಗೆ ಎಷ್ಟೊತ್ ಗೆ ಬರೋದು, ಎಲ್ಲಿ ತಿರುಗಾಡೋಕೆ ಹೋಗಿದ್ದೆ ?, ಸ್ವಲ್ಪ ಕೂಡ ಜವಾಬ್ದಾರಿ ಇಲ್ಲ ನಿಂಗೆ, ನಿಂಗ್ಯಾವತ್ತಿಗೆ ಬುದ್ದಿ ಬರತ್ತೋ ನಾ ಬೇರೆ ಕಾಣೆ..." ಎನ್ನುತ್ತಲೇ ಅವರು ಎಂದಿನ ಪ್ರವರ ಮುಂದುವರೆಸಿದರು. ಹಾಲಿನವರೆಗೂ ಬಂದು ಅಮ್ಮನಿಗಾಗಿ ಅಡುಗೆ ಮನೆಯೆಡೆಗೆ ಬಗ್ಗಿ ನೋಡಿದ, ಅಮ್ಮ ಚಪಾತಿ ಲಟ್ಟಿಸುತ್ತಿದ್ದಳು.<br /><br />ದಿಂಬು ತನಗಾಗಿ ಕಾದಿದೆ ಎಂದು ರೂಮಿನೆಡೆಗೆ ನಡೆದ.<br /><br /><em>ಒಂದೇ ಪೇಜೆಂದು ನಿರ್ಭಂದ ಹಾಕಿಕೊಂಡಿದ್ದರೂ ಹೇಗೊ ನನ್ನ ಅಂಕೆ ಮೀರಿ ಕತೆ ಬೆಳೆದು ಬಿಡ್ತು. ಆದ್ರೂ "ಒಂದು ಪೇಜಿನ ಕತೆಗಳು" ಟೈಟಲು ಇಷ್ಟ ಆಗಿರುವುದರಿಂದ ಇದನ್ನ ಹಾಗೆ ಉಳಿಸಿಕೊಳ್ಳುತ್ತೇನೆ, ಮುಂದಿನ ಸಾರಿ ಒಂದೇ ಪೇಜು ಬರೆಯುವುನೆಂಬ ಆಶಯದೊಂದಿಗೆ..<br /></em>Unknownnoreply@blogger.com12tag:blogger.com,1999:blog-1028483830046744384.post-50889512592457657152009-05-20T08:41:00.004+05:302009-05-20T09:00:23.117+05:30ಕುಪ್ಪಳಿ ಪ್ರವಾಸ ...<div><div><div><em>ಸುಮಾರು ಎರಡೂವರೆ ವರ್ಷಗಳ ಹಿಂದಿನ ಒಂದು ಪ್ರವಾಸ ಕಥನವಿದು. 2006ರಲ್ಲಿ "ಕುಪ್ಪಳಿ"ಗೆ RHM ವತಿಯಿಂದ ಹೋಗಿದ್ದೆ. ಅಂದಿನಿಂದ ಇಂದಿನವರೆಗೂ ಅರುಣ ಕೇಳುತ್ತಲೇ ಇದ್ದ. "ಕುಪ್ಪಳಿ ಆರ್ಟಿಕಲ್ ಎಲ್ಲೋ ?" ಎಂದು... ಸರಿ ಸುಮಾರು ಒಂದೂವರೆ ವರ್ಷದಿಂದ ಶ್ರೀಕಾಂತನೂ ಕೂಡ ಅರುಣನ ರಾಗಕ್ಕೆ ತಾಳ ಹಾಕಲನುವಾದ. "ಕುಪ್ಪಳಿ ಆರ್ಟಿಕಲ್ ಬರ್ದಿಲ್ಲಾ ಅಂದ್ರೆ ಕಾಫಿಯಲ್ಲಿ ವಿಷ ಬೆರ್ಸ್ಕೊಟ್ಬಿಡ್ತೀನಿ" ಎಂದು. ಹೆದರಿಸಿ, ಗದರಿಸಿ, ಗಡುವುಗಳನ್ನು ವಿಧಿಸಿ, ಕೊನೆಗೆ ನನ್ನಿಂದಲೇ ಗಡುವುಗಳನ್ನು ಪಡೆದುಕೊಂಡು ಕೊನೆಗೆ ನನ್ನನ್ನು ತದಕುವ ಮಟ್ಟಿಗೆ ಬಂದಿದ್ದರು. ಇವರಿಬ್ಬರ ಗೊಡ್ಡು ಬೆದರಿಕೆಗೆ ಸೆಡ್ಡು ಹೊಡೆದು ನನ್ನ ಪಾಡಿಗೆ ಆರಮಾಗಿ ಇದ್ದುಬಿಟ್ಟೆ, ಅನೇಕ ಬಾರಿ ಪ್ರಯತ್ನ ಪಟ್ಟಿದ್ದೆನಾದರೂ ಏಕೋ ಏನೋ ಕುಪ್ಪಳಿ ಲೇಖನವನ್ನು ಬರೆಯಲು ಸಾಧ್ಯವಾಗಲೇ ಇಲ್ಲ. ಇಂದು ಬರೆಯಲು ಕೂತಿದ್ದೇನೆ, ಬರೆದು ಮುಗಿಸುತ್ತೇನೆಂಬ ಆಶಯದೊಂದಿಗೆ.</em><br /><br /><em>ಹಾಗಾಗಿ ಈ ಲೇಖನವನ್ನು ಅರುಣ ಮತ್ತು ಶ್ರೀಕಾಂತನಿಗೆ ಅರ್ಪಿಸುತ್ತಿದ್ದೇನೆ. ಇಂದಿಗೆ ನಾನು "ಕುಪ್ಪಳಿ ಆರ್ಟಿಕಲ್" ಮುಕ್ತ.<br /></em><br /><strong><em>ಬ್ಯಾಕ್ ಡ್ರಾಪ್</em></strong> : <em>ಇಸವಿ 2006ರ ಅಕ್ಟೋಬರ್ ತಿಂಗಳಲ್ಲಿ ಅರುಣ ನ ಜೊತೆ RHM ವತಿಯಿಂದ "ಕುಪ್ಪಳಿ" ಪ್ರವಾಸ ಕೈಗೊಂಡಿದ್ದೆ. ಅದರ ಪ್ರವಾಸ ಲೇಖನವಿದು.<br /></em><br />ಶುಕ್ರವಾರ ರಾತ್ರಿ 9:30ಹೊತ್ತಿಗೆ ಕೇಯೆಸ್ಸಾರ್ಟೀಸಿ ಬಸ್ ನಿಲ್ದಾಣದಲ್ಲಿರಲು ಅರುಣ ಹೇಳಿದ್ದ. ಸಮಯಕ್ಕೆ ಸರಿಯಾಗಿ ನಿಲ್ದಾಣದಲ್ಲಿದ್ದೆ. ತದನಂತರ ಒಬ್ಬೊಬ್ಬರಾಗಿ ನಿಲ್ದಾಣಕ್ಕೆ ಬಂದರು. ನಾವೆಲ್ಲ ಒಟ್ಟಿಗೆ 10 ಜನರಿದ್ದೆವು.(ಅರುಣ, ನಾನು, ವಿಜಯಾ ಅಕ್ಕ, ಅನ್ನಪೂರ್ಣ, ಡೀನ್, ಗೋವಿಂದರಾಜ್, ಮಿಥುನ್, ಮತ್ತೆ ನಾಲ್ವರು ನಾರ್ತಿಗಳು). ಅರುಣನ ಹೊರತಾಗಿ ಬೇರೆಯವರು ಯಾರೆಂದರೆ ಯಾರ ಪರಿಚಯವೂ ಇರಲಿಲ್ಲ.<br /><br />ಮುಂಜಾವು 6ರ ಹೊತ್ತಿಗೆ ತೀರ್ಥಹಳ್ಳಿಯಲ್ಲಿ ಕಾಫಿ ಗೆ ಇಳಿಸಿದ್ದಿರ ನೆನಪು. ಅಲ್ಲಿ ಕಾಫಿ ಕುಡಿದು ಸುಮಾರು ಏಳರ ಹೊತ್ತಿಗೆ ಕುಪ್ಪಳಿ ತಲುಪಿದೆವು. ಮೊಟ್ಟ ಮೊದಲ ಬಾರಿಗೆ ಅಂತಹ ಸ್ಥಳವೊಂದನ್ನು ನೋಡಿದ್ದೆ. ಸುತ್ತೆಲ್ಲಾ ಬೆಟ್ಟಗಳು, ಅದರ ಮಧ್ಯೆ ಪುಟ್ಟ ಊರು. ಕುಪ್ಪಳಿಗೆ ಬಸ್ ನಿಲ್ದಾಣವೆಂಬುದೇ ಇಲ್ಲ !! ಬಸ್ ಸೀದಾ ನಿಮ್ಮನ್ನು "ಕುವೆಂಪು" ಮನೆವರೆಗೂ ಕರೆದು ಕೊಂಡು ಹೋಗಿ ಬಿಡುತ್ತದೆ. ಇತರೆ ಊರುಗಳಲ್ಲಿರುವಂತೆ ಜನಜಂಗುಳಿ ಇಲ್ಲ, ಆಮೇಲೆ ತಿಳಿಯಿತು, ಹಿಂದೆ ಇಡೀ ಊರಿಗೆ ಕುವೆಂಪು ಅವರದೊಬ್ಬರದೇ ಮನೆ ಇತ್ತು.ಅವರ ಆಸ್ಥಿ, ಜಮೀನು, ವಾಟ್ ಎವೆರ್ ಇಡೀ ಊರಾಗಿತ್ತು. ಇಂದಿಗೆ ಇಡೀ ಹಳ್ಳಿಯ ಒಡೆಯರಾಗಿರುವ ಪರಂಪರೆ ಮುಗಿದಿದೆ ಎನಿಸುತ್ತದೆ. ಬಸ್ ನಿಲ್ಲಿಸಿದ ಜಾಗದಲ್ಲಿ ಒಂದು ಹೋಟೆಲು, ಇಡೀ ಊರಿಗೆ (ಊರು ಅನ್ನುವ ಬದಲು ಹಳ್ಳಿ ಪದವೇ ಸೂಕ್ತವೆನಿಸುತ್ತೆ) ಅಲ್ಲ ಹಳ್ಳಿಗೆ ಅದೊಂದೇ ಹೋಟೆಲು. ಅದರ ಪಕ್ಕಕ್ಕೆ ಹೊರಳಿದರೆ ಕುವೆಂಪು ರವರ ಭವ್ಯ ದಿವ್ಯವಾದ ಮನೆ.<br /><br />ಕುವೆಂಪು ರವ ಮನೆಯ ಬಗ್ಗೆ ಹೇಳಲೇಬೇಕು. ಸುತ್ತಲೂ ಹಸಿರು ತುಂಬಿದ ಪರ್ವತಗಳ ನಡುವೆ ಇರುವ ಈ ಮನೆಗೆ ಅದ್ಭುತವಾಗಿ ಕಾಣುತ್ತದೆ. ಕುಪ್ಪಳಿಯಿಂದ ಮರಳಿ ಬೆಂಗಳೂರಿಗೆ ಬಂದಾಗಲೂ ಅದೇ ಮನೆ ನನ್ನ ನೆನಪಿನಲ್ಲಿ ಬಳ ಕಾಲ ಉಳಿದಿತ್ತು. ಬಹಳ ದಿನಗಳ ಕಾಲ ಅದು ನನ್ನ ಕಂಪ್ಯೂಟರಿನ ಡೆಸ್ಕ್ ಟಾಪ್ ವಾಲ್ ಪೇಪರ್ ಆಗಿತ್ತು. ಅದರ ನಂತರ ಸಾಕಷ್ಟು ವೈಭವೋಪೇತ ಮನೆಗಳನ್ನು ನೋಡಿದ್ದೀನಾದಾರೂ ಕುವೆಂಪು ಮನೆಗೆ ಕುವೆಂಪು ಮನೆಯೇ ಸಾಟಿ. ಇಂದ್ರನ ಅಮರಾವತಿ ನಗರದಲ್ಲೂ ಇಂತಹ ಮನೆ ಸಿಗಲಾರದು ಎಂದರೆ ಉತ್ಪ್ರೇಕ್ಷೆ ಆಗಲಾರದು. ಒಮ್ಮೆ ನೋಡಿ ಬನ್ನಿ.<img id="BLOGGER_PHOTO_ID_5337740686192712578" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 240px; TEXT-ALIGN: center" alt="" src="http://3.bp.blogspot.com/_WoHbqrpm1NE/ShN235-qm4I/AAAAAAAADWM/kiRLXewl5Iw/s320/kuvempu.jpg" border="0" /></div><div>ಕುವೆಂಪು ಮನೆಯಿಂದ ಅನತಿ ದೂರದಲ್ಲಿದ್ದ ನಾವು ತಂಗಿದ್ದೆವು. ಸ್ನಾನಾದಿ ಕಾರ್ಯಾಗಳನ್ನು ಮುಗಿಸಿ ತಿಂಡಿ ತಿಂದು ಅಂದಿಗೆ ನನ್ನ ಎರಡನೇ ಟ್ರೆಕ್ಕಿಗೆ ಹೊರಟೆ. ನಮಗೊಬ್ಬ ಗೈಡ್ ಸಿಕ್ಕಿದ್ದರು. ಅವರ ಹಿಂದೆ ಹೊರಟೆವು. ಮತ್ತೆ ಕುವೆಂಪು ಮನೆ ಮುಂದೆ ಬಂದು ಅಲ್ಲಿಂದ ಹೊರಟೆವು. ಅಲ್ಲಿಂದ ಸುಮಾರು 3-4ಗಂಟೆಗಳ ಕಾಲ ಟ್ರೆಕ್ ಮಾಡಿದುದರ ನೆನಪು. ಅಲ್ಲೇ ಸುತ್ತಲಿದ್ದ ಬೆಟ್ಟವನು ಹತ್ತಿದೆವು. ಮೊಟ್ಟ ಮೊದಲ ಬಾರಿಗೆ 'ಜಿಗಣೆ' ಯಿಂದ ಕಚ್ಚಿಸಿಕೊಂಡಿದ್ದೆ. ಅಲ್ಲಲ್ಲಿ ಮಧ್ಯ ಕೂತು ಅದನ್ನು ತೆಗೆಯುವುದೇ ಕೆಲಸವಾಗಿತ್ತು. ಕಚ್ಚಿದಾಗ ಏನೂ ಅನ್ನಿಸದಿದ್ದು ಅದನ್ನು ಕಿತ್ತೊಗೆದ ಮೇಲೆ ಅದರ ಇಫೆಕ್ಟ್ ಇರುತ್ತಿತ್ತು. ಶೂ ಸಾಕ್ಸ್ ಎಲ್ಲ ರಕ್ತ ಮಯ.<br /><br />ಚಾರಣ ಮುಗಿಸಿ ಬರುವ ವೇಳೆಗೆ ಸಂಜೆಯಾಗಿತ್ತು. ಮುಂದಿನ ಕಾರ್ಯಕ್ರಮವೇ ಕುವೆಂಪು ಮನೆ ದರುಶನ. ಮನೆ ಹೊರಗಡೆಯಿಂದ ನೋಡಿದಮೇಲಂತೂ ಆಗಲೇ ಒಳಗೆ ನೋಡಬೇಕೇಂಬ ಉತ್ಸಾಹ ನೂರ್ಮಡಿಗೊಂಡಿತ್ತು. ಹೆಚ್ಚು ಹೆಚ್ಚು ಪದಗಳು ನನಗೆ ಸಿಗುತ್ತಿಲ್ಲ ಮನೆಯನ್ನು ಬಣ್ಣಿಸಲು, ಇಲ್ಲವಾದರೆ ಆ ಮನೆಗೆ ನನ್ನ ಪದಗಳದ್ದೇ ಅಭಿಷೇಕ. ಕುವೆಂಪು ಉಪಯೋಗಿಸುತ್ತಿದ್ದ ವಸ್ತುಗಳನ್ನು ಎಲ್ಲ ಜೋಪಾನವಾಗಿ ಇಟ್ಟಿದ್ದಾರೆ, ಮನೆಯಾ ತುಂಬಾ ಮರಗೆಲಸ. ಇಂತಹ ಮನೆಗಳಿಗೆ "ಚೌಕಿ" ಮನೆಯೆಂದು ಕರೆಯುತ್ತಾರೇನೋ. ಜೋರಾಗಿ ಮಳೆ ಬರುತ್ತಿದ್ದರೆ ಅಲ್ಲಿ ಕೂತು ಮನೆಯವರೆಲ್ಲ ಅಥವಾ ಗೆಳೆಯರೊಡನೆ ಮಾತನಾಡುವ ಮಜವೇ ಬೇರೆ. ಅಡುಗೆ ಮನೆಯಲ್ಲಿ ಕುವೆಂಪುರವ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯ ಸಾಲುಗಳನ್ನು ಅಂಟಿಸಿದುದ್ದು ಆಕರ್ಶಿಸಿತು. ಮನೆ ಎರಡು ಅಂತಸ್ತಿನಾಗಿದ್ದು ಮೊದಲನೇ ಮಹಡಿಯಲ್ಲಿ ಸ್ಟಡೀ ರೂಮಿತ್ತು. ಎಲ್ಲಕ್ಕಿಂತ ಇದು ನನಗೆ ಹೆಚ್ಚು ಇಷ್ಟವಾಯಿತು. ಕುವೆಂಪು ಅಲ್ಲಿ ಕೂತು ಎಷ್ಟು ಬರೆದರೋ?? ಎಷ್ಟು ಓದಿದರೊ?? ಅವೆಲ್ಲಕ್ಕೊ ಅಲ್ಲಿನ ಗೋಡೆಗಳೇ ಸಾಕ್ಷಿ. ಎರಡನೆ ಮಹಡಿಯಲ್ಲಿ ಕುವೆಂಪುರವರ ಹಸ್ತಪ್ರತಿಗಳನ್ನೊಳಗೊಂಡ ಪುಸ್ತಕಗಳನ್ನು ಇಟ್ಟಿದ್ದಾರೆ, ಮತ್ತೆ ಮನೆಯುದ್ದಕ್ಕೂ ಅನೇಕಾನೇಕ ಫೋಟೋಗಳಿಟ್ಟಿದ್ದರೆ. ಅಂದಿಗೆ ನಾನು ಇನ್ನೂ ತೇಜಸ್ವಿಯವರ ಯಾವುದೇ ಬರಹಗಳನ್ನು ಓದಿರಲಿಲ್ಲ !!<br /><br />ಅದೇ ಗುಂಗಿನಿಂದ ಹೊರಬಂದು ಮನಸೋಯಿಚ್ಚೆ ಅನೇಕ ಫೋಟೋಗಳನ್ನು ಕ್ಲಿಕ್ಕಿಸಿದೆ. ತದನಂತರ ಕವಿಶೈಲದೆಡೆಗೆ ನಡೆದೆವು. ಕುವೆಂಪು ಮನೆಯಿಂದ ಮೇಲೆ ಹೊರಟು ಒಂದು ಕಿ.ಮೀ ಹಾದಿ ಸವೆಸಿದರೆ ಕವಿಶೈಲ ಸಿಗುತ್ತದೆ. ಕುವೆಂಪು ತೀರಿಕೊಂಡ ನಂತರ ತೇಜಸ್ವಿಯವರು ಇಟಾಲಿಯನ್ ವಾಸ್ತುವಿನಲ್ಲಿ ಅಲ್ಲಿ ಕೆಲಸ ಮಾಡಿಸಿದ್ದಂತೆ. ದೊಡ್ಡ ದೊಡ್ಡ ಕಲ್ಲುಗಳನ್ನು ನಿಲ್ಲಿಸಿದ್ದಾರೆ. ಅಲ್ಲೇ ಕುವೆಂಪು ರವರ ಸಮಾಧಿಯಿದೆ. ಅದರ ಸುತ್ತಮುತ್ತಲ್ಲೂ ನಿತ್ಯ ಹರಿದ್ವರ್ಣ ಕಾಡುಗಳು. ಎತ್ತಲಿಂದ ಎತ್ತ ನೋಡಿದರೂ ಹಸಿರೋ ಹಸಿರು.ಕುವೆಂಪೂರವರಿಗೆ ತುಂಬಾ ಇಷ್ಟವಾದ ಜಾಗವಂತೆ ಕವಿಶೈಲ. ಅವರ ಎಷ್ಟು ಬರಗಳಿಗೆ ಸ್ಪೂರ್ತಿಯೋ??<br />ಸೂರ್ಯನಿಗೆ ಬೀಳ್ಕೊಡುವುದಕ್ಕಾಗಿ ಅಲ್ಲೇ ಕವಿಶೈಲದ ಕಲ್ಲು ಬಂಡೆಗಳ ಮೇಲೆ ಮಲಗಿದೆವು. ಕತ್ತಲು ಕವಿಯುವುದರ ಒಳಗೆ ಗೂಡು ಸೇರಿಕೊಂಡೆವು.<br /><img id="BLOGGER_PHOTO_ID_5337742593765526002" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 240px; TEXT-ALIGN: center" alt="" src="http://2.bp.blogspot.com/_WoHbqrpm1NE/ShN4m8PdyfI/AAAAAAAADWc/v57_veVLnL4/s320/with+arun.jpg" border="0" />ಮತ್ತೆ ಬೆಳಿಗ್ಗೆ ಸೂರ್ಯೋದಯಕ್ಕೆ ಹೋಗೋಣವೆಂದು ಅರುಣ ಹೇಳಿದ್ದ. ಅದಕ್ಕಾಗಿ ಬೇಗ ಎದ್ದು ಕವಿಶೈಲದ ಕಡೆಗೆ ಹೊರಟೆವು. ನಾವು ಸ್ವಲ್ಪ ಬೇಗ ಬಂದೆವು ಅನಿಸುತ್ತದೆ. ಸುತ್ತಲಿನ ಪರಿಸರ ನನಗೆ ನಿದ್ದೆಗೆ ಪ್ರ್ಏರೇಪಿಸಿತು. ನಿಸರ್ಗದ ತೆಕ್ಕೆಯಲ್ಲಿ ಸೊಂಪಾದ ನಿದ್ದೆ ತೆಗೆದೆ. ಇದರಿಂದ ಸೂರ್ಯನಿಗೆ ವೆಲ್ ಕಮ್ ಮಾಡಲಾಗಲಿಲ್ಲ. ಮತ್ತೆ ಕೆಳಗಿಳಿದು ಬಂದು ಮುಂದಿನ ಕಾರ್ಯಕ್ರಮಕ್ಕೆ ಅಣಿಯಾದೆ. ಅಂದು ಅರುಣ ನಮ್ಮೆಲ್ಲರನ್ನೂ 'ಹಿರೆಕೊಡುಗೆ' ಗೆ ಕರೆದೊಯ್ದ. ಕುಪ್ಪಳಿಯಿಂದ ಹೊರಬಂದು ಮೈನ್ ರೋಡಿನಲ್ಲಿ ಸ್ವಲ್ಪ ದೂರ ನಡೆದು 'ಹಿರೆಕೊಡುಗೆ' ಎಂದು ಫಲಕ ಹಾಕಿದ ದಿಕ್ಕಿನೆಡೆಗೆ ಸಾಗಿದೆವು. ಹಿಂದಿನ ದಿನ ಮಾಡಿದ್ದ ಚಾರಣಕ್ಕಿಂತ ಈ ಪ್ರದೇಶ ಕಡಿದಾಗಿತ್ತು, ಇಷ್ಟವಾಯಿತು ಕೂಡ. ಮಿತಭಾಷಿಯಾಗಿದ್ದರಿಂದ ಯಾರೊಡನೆಯೂ ಹೆಚ್ಚು ಬೆರೆಯದೆ ಸುತ್ತಲಿನ ನಿಸರ್ಗವನ್ನು ಸವಿಯುತ್ತಾ ನಡೆದೆ. ಊಟವನ್ನು ಒಂದು ಪಾಳು ಬಿದ್ದ ದೇವಸ್ಥಾನದಲ್ಲಿ ಮಾಡಿದ ನೆನಪು. ಊಟ ಮುಗಿಸಿ ಎಲ್ಲರೂ ನಮ್ಮ ನಮ್ಮ ಫೀಡ್ ಬ್ಯಾಕನ್ನು ಕೊಟ್ಟೆವು ಚಾರಣದ ಬಗ್ಗೆ. ಅದೊಂದೇ ಬಾರಿ ಅನಿಸುತ್ತೆ ಎಲ್ಲರೊಡನೆ ನಾನು ಮಾತನಾಡಿದ್ದು.<br /><br />ಮರಳಿ ಬಂದು ಮತ್ತೆ ಕುವೆಂಪು ಮನೆಗೆ ಹೋಗಿ 'ಕಾನೂರು ಸುಬ್ಬಮ್ಮ ಹೆಗ್ಗಡತಿ' ಕಾದಂಬರಿಯನ್ನು ಕೊಂಡೆ. ಕುಪ್ಪಳಿ ನೆನಪಿಗೆ. ಮತ್ತೆ ಕುಪ್ಪಳಿಗೆ ಒಂದೂವರೆವರ್ಷ ಹಿಂದೆ ನಮ್ಮ 'ಹರಟೆ-ಕಟ್ಟೆ' ಗುಂಪಿನೊಡನೆ ಹೋಗಿದ್ದೆ. ವಿಕಾಸದ ಹಾದಿಯಲ್ಲಿದ್ದ ನಾನು ಎರಡನೆ ಬಾರಿ ಹೋದಾಗ ಗೆಳೆಯರೊಡನೆ ಹೆಚ್ಚು ನಲಿದೆ. ಎರಡನೆ ಬಾರಿ ನಾವು ತೀರ್ಥಹಳ್ಳಿಯ ಶ್ರೇಯಸ್ ಮನೆಯಿಂದ ಹೊರಟಿದ್ದಿದ್ದು. ಕವಿಶೈಲವನ್ನೂ, ಕುವೆಂಪು ಮನೆಯನ್ನು ನೋಡಿ ಮರಳಿ ತೀರ್ಥಹಳ್ಳಿಗೆ ಹೋಗುವಾಗ ಬಸ್ ಗೆ ಕಾಯುತ್ತ ರೋಡಿನಲ್ಲಿ ಓಡಾಡುತ್ತಿದ ವಾಹನಗಳನ್ನು ದೂರದಿಂದ ಗುರುತಿಸುವ ಆಟವನ್ನು ನೆನೆಸಿಕೊಂಡರೆ ಖುಶಿ ಆಗುತ್ತದೆ. ಆ ಕತ್ತಲಿನ ರಸ್ತೆಯಲ್ಲಿ ಆಕಾಶ ನೋಡಿದರೆ ನಕ್ಷತ್ರಗಳ ಚಿತ್ತಾರ. ಕಾಣದ ಕೈಗಳಿಂದ ಮಾಡಿದ ಕುಸುರಿ ಕೆಲಸ. ಎಂಥಾ ದಿನಗಳವು?? ಇದನ್ನು ನೋಡಿಯೇ ಶ್ರೀನಿವಾಸ 'ಚಿತ್ರಚಾಪ'ದ ಕವನ ಬರೆದನೆನಿಸುತ್ತದೆ. <img id="BLOGGER_PHOTO_ID_5337742961081028786" style="DISPLAY: block; MARGIN: 0px auto 10px; WIDTH: 228px; CURSOR: hand; HEIGHT: 320px; TEXT-ALIGN: center" alt="" src="http://2.bp.blogspot.com/_WoHbqrpm1NE/ShN48UmTkLI/AAAAAAAADWk/Ee9xbWirPqA/s320/second+time.JPG" border="0" />'ಅಣ್ಣನ ನೆನಪು' ಮತ್ತೊಮ್ಮೆ ಓದಿಕೊಂಡು ತೇಜಸ್ವಿಯವರ ನೆನಪುಗಳನ್ನು ಜೀಕಿಕೊಂಡು ಮತ್ತೊಮ್ಮೆ ಕುಪ್ಪಳಿಗೆ ಹೋಗಬೇಕೆನಿಸುತ್ತದೆ. </div></div></div>Unknownnoreply@blogger.com7tag:blogger.com,1999:blog-1028483830046744384.post-42216721177804068662009-05-19T00:00:00.002+05:302009-05-19T00:04:22.943+05:30ರಿಸೆಷನ್ ಜಾರಿಯಲ್ಲಿದೆ...<a href="http://1.bp.blogspot.com/_WoHbqrpm1NE/ShGqFGb9RhI/AAAAAAAADWE/vcH6iAM2I3M/s1600-h/recession.jpg"><img id="BLOGGER_PHOTO_ID_5337234038014690834" style="DISPLAY: block; MARGIN: 0px auto 10px; WIDTH: 254px; CURSOR: hand; HEIGHT: 320px; TEXT-ALIGN: center" alt="" src="http://1.bp.blogspot.com/_WoHbqrpm1NE/ShGqFGb9RhI/AAAAAAAADWE/vcH6iAM2I3M/s320/recession.jpg" border="0" /></a><br /><div>ಹೌದು ಸದ್ಯಕ್ಕೆ ರಿಸೆಷನ್ ಜಾರಿಯಲ್ಲಿದೆ, ಅಮೇರಿಕಾದ 'ಅಣ್ಣ' ಸೀನಿದರೆ ಇಲ್ಲಿನವರಿಗೆಲ್ಲಾ ಚಳಿ ಜ್ವರ. ಇಡೀ ವಿಶ್ವವೇ ಆರ್ಥಿಕ ಹಿಂಜರಿತದ 'ಜರ್ಕ್' ನಲ್ಲಿರುವಾಗ ನಮ್ಮ ನಿಮ್ಮಂತಹ ಶ್ರೀಸಾಮನ್ಯರು ಏನು ತಾನೆ ಮಾಡಿಯಾರು? ಒಂದಾನೊಂದು ಕಾಲದಲ್ಲಿ software ಉದ್ಯೋಗಿಗಳು ಯಾವಾಗೆಂದರೆ ಆಗ ವಿಮಾನ ಹತ್ತಿ ಪರದೇಶಕ್ಕೆ ಹೋಗಿ ಬರುತ್ತಿದ್ದರು, ಈಗ ಯಾವಾಗ ಬೇಕಾದರೂ 'ಪಿಂಕ್ ಸ್ಲಿಪ್' ಪಡೆದು ಮನೆಗೆ ಬರುವಂತಾಗಿದೆ. 'ಬಯಸದೇ ಬರುವ ಭಾಗ್ಯ' ವನ್ನು ತಪ್ಪಿಸಿಕೊಳ್ಳಲು ಆದಷ್ಟು ಹೆಣಗುತ್ತಾರೆ. ಇನ್ನು ಹೆಚ್ಚಾಗಿ ರಿಸೆಷನ್ ಬಗ್ಗೆ ಮಾತನಾಡಿ ನಿಮ್ಮ ಬ್ಲಡ್ ಪ್ರೆಶರ್ ಏರಿಸುವುದಿಲ್ಲ, ನನಗೆ ಗೊತ್ತು ದಿನಾ ಆಫೀಸಿನಲ್ಲಿ ಇದರ ಬಗ್ಗೆ ಚರ್ಚೆ ಅಲ್ಲಲ್ಲಿ ಸಮಯ ಸಿಕ್ಕಾಗ ನಡೆಸುತ್ತಿರುತ್ತೀರಿ, ಮಿನಿ ಮೀಲ್ಸ್ ತಿನ್ನುವಾಗ, ಕೆಪಚ್ಚಿನೋ ಹೀರುವಾಗ, ಪಕ್ಕದ ಕ್ಯೂಬಿಕಲ್ ನಲ್ಲಿ ಗುಂಪು ಸೇರಿದಾಗ ಇವೇ ಮಾತುಗಳು ಎಂದು ನನಗೆ ಗೊತ್ತು, ಎಷ್ಟೇ ಆದರೂ ನಾವು 'ಮಧ್ಯಮ' ವರ್ಗದವರು, ಇದೆಲ್ಲವನ್ನು ಎದುರಿಸುವ ಛಾತಿಯನ್ನು ಆ ಬ್ರಹ್ಮ ಹುಟ್ಟುವಾಗಲೇ ನಮ್ಮ ರಕ್ತದಲ್ಲಿ ಮಿಕ್ಸ್ ಮಾಡಿ ಕಳುಹಿಸಿದ್ದಾನೆ ಎಂದು. ಆದರೂ ಇಂತಹ ಕಾಲದಲ್ಲಿ ನನ್ನದೊಂದಿಷ್ಟು ರಿಸೆಷನ್ ಟಿಪ್ಸ್. ನೋಡಿ ನಿಮ್ಮ ಅನುಕೂಲ ಹೇಗಿದೆಯೋ??<br /><br /><br />1)ನೀವು ಅತಿಯಾಗಿ ಫೋನಿನಲ್ಲಿ ಮಾತನಾಡುವುದಾದರೆ ಅದಕ್ಕಾಗಿ ನಾಲ್ಕಂಕಿಯ ಮೊತ್ತವನ್ನು ಪಾವತಿಸುವವರಾದರೆ ಮೊದಲು ಆ ಹುಚ್ಚಾಟವನ್ನು ಬಿಡಿ, ಗೂಗಲ್ ಟಾಕ್ ಎಂದು ಪುಟಾಣಿ ಅದ್ಭುತವಾದ software ವೇರ್ ಇದೆ, ಅದನ್ನು ಯಥೇಚ್ಚವಾಗಿ ಬಳಸಿ ನಿಮ್ಮ ಗೆಳೆಯರೊಡನೆ ಹರಟೆ ಹೊಡೆಯಲು, ಅದು ಬೋರಾದರೆ ಯಾಹೂ ಮೆಸ್ಸೆಂಜರ್ ಗೆ ಲಾಗಿನ್ ಆಗಿ ಸ್ಮೈಲೀ ಗಳನ್ನು ಹಾಕಿಕೊಂಡು ನಲಿಯಿರಿ.<br /><br />2)ಫೋನ್ ಮಾಡಲೇ ಬೇಕೆನಿಸಿದರೆ ಆಫೀಸಿನ ನಂಬರಿನಿಂದ ಕರೆ ಮಾಡಿ.<br /><br />3)ಟ್ರೆಕ್ಕು , ಟ್ರಿಪ್ಪು ಗಳನ್ನು ಪ್ರತೀ ವಾರಂತ್ಯ ಮಾಡುವವರಂತಾಗಿದ್ದರೆ ಮೊದಲು ಇರುವ ರಕ್ ಸ್ಯಾಕನ್ನು ಅಟ್ಟದ ಮೇಲಿಡಿ. 4೦೦ ಮರಗಳನ್ನು ಕಡಿಯಲು ಹೊರಟ್ಟಿದ್ದಾರೆ ಲಾಲ್ ಬಾಗಿನಲ್ಲಿ , ಹೋಗಿ ಮೊದಲು ನೋಡಿ, ಎಷ್ಟು ಬೇಗ ಆದರೆ ಅಷ್ಟು ಬೇಗ. ಯಾವತ್ತು ಧರಾಶಾಯಿಯಾಗುವವೊ?? ಅಂದಹಾಗೆ ಹಲಸೂರು ಕೆರೆಯನ್ನು ನೋಡಿದ್ದೀರ?? ವಾಟ್ ಅಬೌಟ್ ಬೆಳ್ಳಂದೂರ್ ಲೇಕ್? ಯಾವುದೋ ಊರಿನ ಯಾವುದೋ ಕಾಡನ್ನು ದುಡ್ಡು ತೆತ್ತು ದಡ್ಡರಾಗುವ ಮೊದಲು ಇವನ್ನು ನೋಡಿ.<br /><br />4)'ಪ್ರೀತಿ' ಯಲ್ಲಿ ಬಿದ್ದಿದ್ದರೆ ಇಂದಿನಿಂದ 'ಏಳುವ' ಪ್ರಯತ್ನ ಮಾಡಿ. ಗರ್ಲ್ ಫ್ರೆಂಡ್ ಬಾಯ್ ಫ್ರೆಂಡ್ ಗಳಿಗೆ ದುಬಾರಿ ಗಿಫ್ಟ್ ಕೊಟ್ಟು ಕಂಡ ಕಂಡ ಕಡೆ ಸುತ್ತಿ ದುಡ್ಡು ಪೋಲು ಮಾಡಬೇಡಿ, ಗಿಫ್ಟಾಗಿ ಕತೆ, ಕವನಗಳನ್ನು ಬರೆದು ಕೊಡಿ, ಇಷ್ಟ ಪಟ್ಟಾರು. "ಯಾಕೆ ಜುಗ್ಗ ಆಗಿದ್ಯಾ" ಎಂದರೆ ಮುಂದೆ ನಮ್ಮ ಭವಿಷ್ಯಕ್ಕಾಗಿ ಹಣ ಕೂಡಿಡುತ್ತಿದ್ದೇನೆಂದು ಹೇಳಿ. 'ಕಾರ್ನರ್ ಹೌಸ್' ನಲ್ಲಿ ಐಸ್ ಕ್ರೀಮ್ ನೆಕ್ಕುವ ಬದಲು 'ಅರುಣ್' ಕಪ್ ಐಸ್ ಕ್ರೀಮ್ ತಿನ್ನುವುದು ಉತ್ತಮ. ವಿದ್ಯಾಬಾಲನ್ ಮತ್ತು ಮಾಧವನ್ ನಟಿಸಿರುವ 'ಏರ್ ಟೆಲ್' ನ ಹೊಸ ಜಾಹೀರಾತಿಗೆ ಮಾರುಹೋಗಿದ್ದರೆ ಈ ಪಾಯಿಂಟನ್ನು ಬಿಟ್ಟುಬಿಡಿ.<br /><br />5)ವಾರಕ್ಕೊಮ್ಮೆ 'ಮದ್ಯ' ಪಾನ ಮಾಡಿ ತೂರಾಡುವವರು ತಿಂಗಳಿಗೊಮ್ಮೆ ತೂರಾಡಿದರೆ ಅವರಿಗೇ ಉತ್ತಮ. ಸೀಸೈಡ್, ಲೇಕ್ ಸೈಡ್ ಹೋಟೆಲುಗಳನ್ನು ಬಿಟ್ಟು ರೂಮುಗಳಲ್ಲಿ ಕುಡಿದು,ಉಪ್ಪಿನಕಾಯಿ ನೆಕ್ಕುವುದು ಲೇಸು.<br /><br />6)ಆಫೀಸಿನಲ್ಲಿ ನೀವು ಮಾಡುವ ಪ್ರತಿಯೊಂದು ಕೆಲಸವೂ ನಿಮ್ಮ ಮ್ಯಾನೇಜರರ ದೃಷ್ಟಿಗೆ ಬೀಳಲಿ. ಪರ್ವಾಗಿಲ್ಲ ಹುಡುಗ ಕೆಲಸ ಮಾಡುತ್ತಿದ್ದಾನೆ ಎಂದು ಅನಿಸಿಕೊಂಡರೆ ನೀವು ಸೇಫ್ , ಅಪ್ಪಿ ತಪ್ಪಿಯೂ ಕೂಡ ಅವರ ಬಳಿ 'ಪಂಗಾ' ತೆಗೆದುಕೊಳ್ಳಬೇಡಿ.<br /><br />7)ಮಲ್ಟೀಪ್ಲೆಕ್ಸ್ ಗಳಲ್ಲಿ ಸಿನೆಮಾ ನೋಡುವ ಅಭ್ಯಾಸವನ್ನು ಬಿಡಿ, ಬೆಂಗಳೂರಿನಲ್ಲಿ ಇನ್ನೂ ನಲವತ್ತು ರೂಪಾಯಿಗೆ(!!) ಸಿನೆಮಾ ತೋರಿಸುತ್ತಾರೆ, ಅಂತಹ ಥಿಯೇಟರ್ ಗಳನ್ನ ಹುಡುಕಿ. ಒಟ್ಟಿಗೆ ಮುಂದಿನ ವಾರವೇ ಹೋಗೋಣ.<br /><br />8)ದುಡ್ಡು ಕೊಟ್ಟು ಪುಸ್ತಕ ಕೊಳ್ಳುವ ಅಭ್ಯಾಸವಿದ್ದರೆ , ಸದ್ಯಕ್ಕೆ ಮುಂದೂಡಿ. ಇದನ್ನು ನೀವು 'ಕನ್ನಡ' ಪುಸ್ತಕಗಳಿಗೆ ಅನ್ವಯಿಸದಿದ್ದರೆ ನಿಮಗೊಂದು ಸಲಾಂ. ನಮ್ಮ ಹಿಂದಿನವರ ಸಾಹಿತ್ಯ ನಿಮಗೇನು ಗೊತ್ತು ?, Old is gold -ಉ ತತ್ವಕ್ಕೆ ಬೆಲೆ ಕೊಟ್ಟು ಅವೆನ್ಯೂ ರಸ್ತೆಗೆ ಕಾಲಿಡಿ. ಅಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕಗಳು ದೊರೆಯುತ್ತವೆ, ಅವನ್ನೆಲ್ಲಾ ಓದಿ ಮುಗಿಸಿ. ಇಲ್ಲವಾದರೆ ನಗರ ಫುಟ್ ಪಾತ್ ನಲ್ಲೂ ನಡೆದಾಡಿದರೆ ನಿಮಗೆ ಸಾಕಷ್ಟು ಪುಸ್ತಕಗಳು ದೊರಕೀತು.<br /><br />9)ಸಾಲ ಮಾಡಬೇಡಿ ಎಂದು ಹೇಳಬೇಕಾಗಿಲ್ಲ ಎಂದು ಭಾವಿಸುತ್ತೇನೆ.<br /><br />10)ಕಾರು ಕೊಳ್ಳಲೇಬೇಕೆಂದು ಹಟ ಹಿಡಿದಿದ್ದರೆ 'ನ್ಯಾನೊ' ಕಡೆಗೆ ಗಮನ ನೀಡಿ.<br /><br />ನನಗೆ ತೋಚಿದ್ದು ಇಷ್ಟು. ಇಷ್ಟನ್ನೂ ನೀವು ಯಥಾಪ್ರಕಾರವಾಗಿ ಪಾಲಿಸ ಹೊರಟರೆ ಅದು ನಿಮ್ಮ ಕರ್ಮ. </div>Unknownnoreply@blogger.com12tag:blogger.com,1999:blog-1028483830046744384.post-40754427417389070312009-05-17T16:47:00.004+05:302009-05-17T17:23:44.441+05:30ಎಲ್ಲಾ ಟೈಮೂ...ಈ ಲೇಖನವನ್ನ ಪೂರಾ ಓದಿದ ಮೇಲೆ ಬಹಳಷ್ಟು ಜನರಿಗೆ ಅನ್ನಿಸುವುದಿಷ್ಟೆ "ಎಲ್ಲಾ ಟೈಮು....." , ಅದಕ್ಕೆಂದೇ ಇದೇ ಹೆಸರನ್ನು ಟೈಟಲಾಗಿಟ್ಟುಬಿಟ್ಟೆ. ಬಹಳ ಸಲ ನಾವೊಂದು ಅಂದುಕೊಂಡರೆ ಅದಿನ್ನೊಂದಾಗಿರುತ್ತದೆ, ಇಂತಹವುದೆಲ್ಲವನ್ನು ನೋಡಿದರೆ "ಎಲ್ಲಾ ಟೈಮೂ...." ಎಂದು ಸುಮ್ಮನಾಗಬೇಕಷ್ಟೆ<br /><br /><br />ಅರುಣನ ಮದುವೆ ಏಪ್ರಿಲ್ 16ರಂದು "ಹೊಳೆನರಸೀಪುರ"ದಲ್ಲಿದ್ದುದರಿಂದ ಶ್ರೀಕಾಂತ ಅದಕ್ಕೆ ಸರಿಯಾಗಿ ಒಂದು ತಿಂಗಳ ಮುಂಚೆಯೇ ಸಿದ್ಧತೆ ನಡೆಸಿದ್ದ !! "ನಾವೆಲ್ಲರೂ" ಅಲ್ಲಿಗೆ ಹೇಗೆ ತಲುಪುವುದು ಮತ್ತದರ ಟೈಮಿಂಗ್ಸ್ ವಿಷಯವಾಗಿ. "ಹಚ್ ಅಲಿಯಾಸ್ Vodafone ಪ್ರಕಾಶಿಸುತ್ತಲೇ ಇರುತ್ತದೆ" :-)<br /><br /><br />ಎಲ್ಲಾ ಜನರ ಲಿಸ್ಟ್ ರೆಡಿಯಾದಮೇಲೆ ಮೊದಲಿಗೆ "ಟಾಟಾ ಇಂಡಿಕಾ" ಬುಕ್ ಮಾಡಿದ್ದೆವು. ಲಿಸ್ಟ್ ಹಿಗ್ಗಿದುದರ ಪರಿಣಾಮವಾಗಿ "ಟವೇರಾ"ದಲ್ಲಿ "ಸವಾರಿ" ಮಾಡಬೇಕಾಯಿತು. ಶುಭಾಳನ್ನು ಬಸವೇಶ್ವರ ನಗರದಿಂದ ಹತ್ತಿಸಿಕೊಂಡು ಬೆಂಗಳೂರು ಮಹಾನಗರದಿಂದ ಹೊರಬರುವ ಹೊತ್ತಿಗೆ ಸಂಜೆ ಏಳಾಗಿತ್ತು. ಶ್ರೀಕಾಂತನ ಲೆಕ್ಕಾಚಾರ ಅದಾಗಲೇ ಲೆಕ್ಕ ತಪ್ಪಿತ್ತು. "ಟವೇರಾ" ದಲ್ಲಿದ್ದಿದ್ದು ನಾವು ಒಟ್ಟು ಏಳು ಜನ. ನಾನು, ಶ್ರೀಕಾಂತ, ಶುಭಾ, ಶ್ರುತಿ ಶರ್ಮಾ, ಅರ್ಜುನ್, ಹರೀಶ್ ಮತ್ತೆ ಗೋವಿಂದರಾಜ್. ಡ್ರೈವರ್ ಸೇರಿಸಿ ಒಟ್ಟು ಎಂಟು. ಎಲ್ಲರ ಪರಿಚಯ ಮಾಡಿಕೊಂಡು ಹೋಗುತ್ತಾ ಶ್ರುತಿ "ಮೂಕಾಭಿನಯ" ಆಡುವುದೋ ಅಥವಾ "ಅಂತ್ಯಾಕ್ಷರಿ" ಆಡುವುದೋ ಎಂಬುದರ ಸಲುವಾಗಿ ಎಲ್ಲರನ್ನು ಕೇಳುತ್ತಿದ್ದಳು. ಡ್ರೈವರ್ ಮಹಾಶಯ ತನ್ನ ಕಿರಿಕಿರಿಯನ್ನು ಆರಂಭಿಸಿದ್ದ. ಗಾಡಿಯ ಸೌಂಡ್ ಸಿಸ್ಟಮ್ ಸರಿ ಇರಲಿಲ್ಲವೆಂದು ತೊರುತ್ತದೆ, ಮುಂದೆ ಕೂತವರಿಗೆ ಯಾವ ಹಾಡು ಬರುತ್ತಿದೆ ಎನ್ನುವುದು ಕೂಡ ಗೊತ್ತಾಗುತ್ತಿರಲಿಲ್ಲ. ಈ ಮಹಾಶಯ ಇದ್ದಕ್ಕಿದ್ದ ಹಾಗೆ ಸೌಂಡ್ ಜಾಸ್ತಿ ಮಾಡಿಬಿಡುತ್ತಿದ್ದ, ಹಿಂದಿನಿಂದ ಶರ್ಮಾ ನನ್ನನ್ನು ತಿವಿಯುತ್ತಿದ್ದಳು, "ಸೌಂಡ್" ಸಲ್ಪ ಕಮ್ಮಿ ಮಾಡು ಎಂದು. ಇಲ್ಲಿ ಸೌಂಡ್ ಜಾಸ್ತಿ ಮಾಡಿದರೆ ಹಿಂದೆ ಕೂತವರಿಗೆ "ಧೋಮ್ ಧೋಮ್" ಸದ್ದು. ಸೌಂಡ್ ಕಮ್ಮಿ ಮಾಡಿದ ಸಲ್ಪ ಹೊತ್ತಿನಲ್ಲೇ ಮತ್ತೆ ಏರಿಸಿಬಿಡುತ್ತಿದ್ದ. "ನೈಸ್" ರೋಡಿನಲ್ಲಿ ನೈಸಾಗಿ ಜಾರಿ, ನೆಲಮಂಗಲದ ಟ್ರಾಫಿಕ್ ಕಿರಿಕಿರಿ ಅನುಭವಿಸಿ ಊರು ಬಿಡುವ ಹೊತ್ತಿಗೆ ಕತ್ತಲಾಗಿತ್ತು. "ಮೂಕಾಭಿನಯ" ದ ಆಟ ಸಾಗುತ್ತಲೇ ಇತ್ತು. ಆದರೆ ತೊಂದರೆಗಿಟ್ಟುಕೊಂಡ ವಿಷಯವೆಂದರೆ ಡ್ರೈವರನೂ ಕೂಡ ನಮ್ಮ ಆಟದಲ್ಲಿ ಭಾಗವಹಿಸಿದ್ದು!!. ನಾನು ಡ್ರೈವರ್ ಪಕ್ಕದಲ್ಲಿ ಕೂತಿದ್ದೆ, ನಾನು ಮಾಡುವ "ಮೂಕಾಭಿನಯ" ವನ್ನು ನೋಡುತ್ತ ಆತನೂ ಕೂಡ ಅದರಲ್ಲಿ ಭಾಗವಹಿಸುತ್ತಿದ್ದ!!. ಇದು ಒಳ್ಳೆ ಡ್ರೈವರನ ಲಕ್ಷಣವಂತೂ ಖಂಡಿತಾ ಅಲ್ಲ.<br /><br /><br /><br />ಹೀಗೆ ಸಾಗುತ್ತಲೇ ಸುಮಾರು ಏಳೂ ಮುಕ್ಕಾಲಿರಬಹುದು, ಇದ್ದಕ್ಕಿಂದಂತೆ ಗಾಡಿಯ ವೇಗವನ್ನು ಕಮ್ಮಿ ಮಾಡಿ ಪಕ್ಕದಲ್ಲಿ ನಿಲ್ಲಿಸಿದ, ಮತ್ತೆ ಮತ್ತೆ ಶುರು ಮಾಡಲು ಯತ್ನಿಸಿದನಾದರೂ ಆಗಲಿಲ್ಲ. ಎಲ್ಲರ ಮುಖದಲ್ಲೂ ಆತಂಕದ ಗೆರೆಗಳು ಹೆದ್ದಾರಿಯಲ್ಲಿ ಒಡಾಡುತ್ತಿದ್ದ ಗಾಡಿಗಳ ಬೆಳಕಿನಿಂದ ಕಾಣುತ್ತಿತ್ತು. ಪ್ರಾಮಾಣಿಕವಾಗಿ ನನಗನ್ನಿಸಿದ್ದು ಯಾವುದೋ ಇದು ಡಬ್ಬಾ ಗಾಡಿ ಮತ್ತು ಬೇಜವಾಬ್ದಾರಿ ಡ್ರೈವರ್ ಎಂದು. ಯಾರ್ಯಾರಿಗೋ ಫೋನ್ ಮಾಡಿ ಆಯಿಲ್ ಲೀಕ್ ಆಗಿದೆ, ನೋಡಿಲ್ಲವಾ? ಚೆಕ್ ಮಾಡಿಲ್ಲವಾ? ಎಂದು ಜೋರಾಗಿ ಕೇಳುತ್ತಿದ್ದ . ಫೋನಿನ ಆಬದಿಯವರು ಎಲ್ಲಾ ಸರಿಯಾಗಿದೆ ಎಂದು ಹೇಳಲಿ ಎನ್ನುವದೇ ನನ್ನ ಆಶಯವಾಗಿತ್ತು, ಆದರೆ ಹಾಗಾಗಲಿಲ್ಲ. ಕಡೆಗೆ ನಮ್ಮೆಡೆಗೆ ತಿರುಗಿ "ಏನು ಆಗಿಲ್ಲ ಸಾರ್, ಟೆನ್ಷನ್ ಆಗ್ಬೇಡಿ" ಎಂದು ಹೇಳಿ ಕಿಸಕ್ಕನೆ ನಕ್ಕಿದ.<br /><br /><br /><br />ಹಾಗೂ ಹೀಗೂ ಸ್ಟಾರ್ಟ್ ಮಾಡಿ ಗಾಡಿ ಮುಂದಕ್ಕೆ ಚಲಿಸತೊಡಗಿತು, ಅನತಿ ದೂರದಲ್ಲಿದ್ದ ಪೆಟ್ರೋಲ್ ಬಂಕಿನಲ್ಲಿ ಸಲ್ಪ ಆಯಿಲ್ ಕೊಂಡು ಮುಂದೆ ಹೊರಟೆವು. ಮತ್ತೆ ಎಲ್ಲೂ ಗಾಡಿ ನಿಲ್ಲದಿರಲಿ ಎಂದು ಎಲ್ಲರೂ ಒಕ್ಕೊರಲಿನಿಂದ ಪ್ರಾರ್ಥಿಸಿದ್ದರೋ ಏನೋ?? ಮತ್ತೆ ಗಾಡಿ ಕೆಡಲಿಲ್ಲ.. ಹೊಳೆನರಸೀಪುರದ ದಾರಿಯಲ್ಲಿ "ಮಂಗಳೂರು ಟೀಸ್ಟಾಲ್" ನಲ್ಲಿ ಟೀ ಕುಡಿದು ಸುಮಾರು 9 ರ ಹೊತ್ತಿಗೆ ಊಟಕ್ಕೆ ಗಾಡಿ ನಿಲ್ಲಿಸಿದೆವು(ಸ್ಥಳ ಮರೆತುಹೋಗಿರುವೆ). ಗಾಡಿ ಕೆಟ್ಟು ನಿಂತಾಗಲೇ ಶ್ರುತಿ ಶರ್ಮಾ ನನ್ನ ಬಳಿ ಬಂದು "ಈ ಡ್ರೈವರ್ ಸರಿ ಇಲ್ಲ, ಎಲ್ಲಾ ಮುಂಚೆಯೇ ಚೆಕ್ ಮಾಡ್ಕೋಬೇಕಿತ್ತು, ಈಗ ನೋಡಿದ್ರೆ ಹೀಗಾಗಿದೆ" ಎಂದು ಪೇಚಾಡುತ್ತಿದ್ದಳು, ಹಾಗೆ ಅದನ್ನು ಮುಂದುವರೆಸಿ "ನೀನು ಆಡುವುದನ್ನೇ ಈ ಡ್ರೈವರ್ ನೋಡ್ತಾನೆ ಇರ್ತಾನೆ, ಮುಂದೆ ನೋಡ್ಕೊಂಡ್ ಗಾಡಿ ಒಡ್ಸಲ್ಲ ಸರ್ಯಾಗಿ, ಆದ್ರಿಂದ ನೀನು ಆಟಗಳಿಂದ "ಔಟ್" ಎಂದಳು. ನನಗೂ ಸರಿಯೆನ್ನಿಸಿತು, ತೆಪ್ಪಗೆ ತಲೆಯಾಡಿಸಿದೆ.<br /><br />ಕತ್ತಲು ಕವಿದುದ್ದರಿಂದ "ಮೂಕಾಭಿನಯ" ದಿಂದ "ಅಂತ್ಯಾಕ್ಶರಿ"ಗೆ ಶಿಫ್ಟ್ ಆಗಿದ್ದರು. ಹೆದ್ದಾರಿಯಲ್ಲಿ ಹರಿದಾಡುತ್ತಿದ್ದ ವಾಹನಗಳ ಬೆಳಕಿನಿಂದ ಇಕ್ಕೆಲಗಳಲ್ಲಿ ಕಾಣುತ್ತಿದುದ್ದನ್ನು ನನ್ನ ಕಣ್ಣು ಸುಮ್ಮನೆ ನೋಡುತ್ತಲಿತ್ತು. ಎಲ್ಲಾ ದೃಶ್ಯಗಳು ಒಂದೇ ತರವೇ ಆಗಿದ್ದರೂ ಕೂಡ ಮನಸ್ಸು ಹುಚ್ಚು ಕುದುರೆಯಂತೆ ಸಾವಿರ ದಿಕ್ಕಿನಲ್ಲಿ ಯೋಚಿಸುತ್ತಿತ್ತು. ಕೆಲವು ಕಡೆ ಹೆದ್ದಾರಿ ಬಹಳ ಅಚ್ಚುಕಟ್ಟಾಗಿತ್ತು, ಮತ್ತೆ ಕೆಲವು ಕಡೆ ವಿವರಿಸಲು ಆಗದಷ್ಟು ಹದೆಗೆಟ್ಟಿತ್ತು. ಅದ್ಯಾಕೆ ಹೀಗೆ ಮಾಡಿದಾರೋ ಎಂದು ಅರಿಯದಾದೆ.<br /><br /><br /><br />ಹೊಳೆನರಸೀಪುರ ತಲುಪುವ ಹೊತ್ತಿಗೆ ರಾತ್ರಿ <span class="">11 ಗಂಟೆ </span>ಆಗಿತ್ತು. ಅರುಣ ಮತ್ತೆ ಶ್ರೀನಿವಾಸ ಪಂಚೆಧಾರಿಗಳಾಗಿ ನಮ್ಮೆಲ್ಲರನ್ನು ಎದುರುಗೊಂಡರು . ಅರುಣ ಅಲಿಯಾಸ್ "ಮದುವೆ ಗಂಡು" ಕ್ಲೀನಾಗಿ ಕ್ರಾಪ್ ಕಟ್ ಮಾಡಿಸಿಕೊಂಡು ಮಂದಸ್ಮಿತನಾಗಿ ಚೈನು, ಉಂಗುರ ಧರಿಸಿ ಕೊಂಚ "ಭಿನ್ನ"ವಾಗಿ ನನಗೆ ತೋರಿದ. ರೇಖಾ ಮತ್ತೆ ಅರುಣ ಇಬ್ಬರು ಬಂದು ನಾವು ಉಳಿದುಕೊಳ್ಳಬೇಕಾದ ಜಾಗವನ್ನು ತೋರಿಸಿದರು. ಬರೀ ಸಿನೆಮಾಗಳಲ್ಲಿ ಈ ರೀತಿಯ ಮನೆಗಳನ್ನು ನೋಡಿದ ನಾನು ಅಲ್ಲಿ ಮಲಗುವುದಕ್ಕೆ ನಿಜಕ್ಕೂ ಉತ್ಸುಕನಾಗಿದ್ದೆ. ಹೆಚ್ಚಾಗಿ ನನ್ನನ್ನು ಆಕರ್ಷಿಸಿದ್ದು ಮನೆ ಜಗುಲಿ. ಶೌಚಕಾರ್ಯಗಳನ್ನು ಮುಗಿಸಿ ಬರುವ ಹೊತ್ತಿಗೆ ನಮಗೆ ಮಲಗಲು ನೀಡಿದ್ದ ಜಾಗ ಸಾಕಗುವುದಿಲ್ಲವೆನಿಸಿತು. ಗೋವಿಂದರಾಜ್, ಹರೀಶ್, ಅರ್ಜುನ್ ಒಂದು ಕಡೆ ಮತ್ತೆ ಶ್ರುತಿ, ಶುಭಾ ಇನ್ನೊಂದೆಡೆ ಮಲಗಲು ಅಣಿಯಾಗುತ್ತಿದ್ದರು. ಶರ್ಮಾ ತಂದಿದ್ದ ಒಂದು ಎಕ್ಸ್ಟ್ರಾ ಹೊದಿಕೆಯನ್ನು ಇಸಿದುಕೊಂಡು ನಾನು, ಶ್ರೀನಿವಾಸ ಮತ್ತೆ ಶ್ರೀಕಾಂತ ಅಲ್ಲಿಂದ ಕಾಲ್ತೆಗೆದವು. ಸಮಯ 11:30 ಆಗಿತ್ತೇನೋ. ಅಲ್ಲೇ ಮೂವರು ಮಲಗಿದೆವು, ಒಂದು ಹೊದಿಕೆ ಮೂವರಿಗೆ ಹೇಗೆ ತಾನೇ ಸಾಕಾದೀತು?<br />ನಾನೊಬ್ಬನೇ ಹೊದ್ದುಕೊಂಡು ಅಲ್ಲೇ ಮಲಗಿದೆ, ಪಾಪ ಶ್ರೀನಿವಾಸ ಕೇಳಲಿಲ್ಲ, ಅವನಿಗೆ ನಿದ್ದೆ ಬಂದರೆ ಅದು ಬೇಕಾಗುವುದಿಲ್ಲವೆಂದು ನನಗಿಂತ ಅವನಿಗೇ ಚೆನ್ನಾಗಿ ಗೊತ್ತಿತ್ತು. ಶ್ರೀಕಾಂತ ಕೇಳಿದನಾದರೂ "ತ್ಯಾಗ" ಮನೋಭಾವ ಅವನನ್ನು ಸುಮ್ಮನಿರಿಸಿತು ಎಂದು ನಾನೆಂದುಕೊಂಡೆ ;-) ನನ್ನ ಎತ್ತರದ ಬಗ್ಗೆ ನನಗೆ ಬಹಳಷ್ಟು ಬಾರಿ ಕಿರಿ ಕಿರಿ ಆಗಿದೆ, ಈ ದಿನವೂ ಅದೇ ಆಯಿತು. ಆ ಹೊದಿಕೆಯಿಂದ ಕಾಲು ಮುಚ್ಚಿದರೆ ಮುಖ ಮುಚ್ಚುತ್ತಿರಲಿಲ್ಲ, ಮುಖ ಮುಚ್ಚಿದರೆ ಕಾಲು ಮುಚ್ಚುತ್ತಿರಲಿಲ್ಲ. ಆ ಮನೆಯವರೆಲ್ಲರೂ ಸೊಳ್ಳೆ ಪರದೆಯಲ್ಲಿ ಮಲಗಿದುದ್ದನ್ನು ನೋಡಿದಾಗಲೇ ತಿಳಿದು ಹೋಯಿತು, ಸೊಳ್ಳೆ ಕಾಟವಿದೆಯೆಂದು. ಹೊರಗಡೆ ಮಲಗಿದ ಕೂಡಲೆ ಸೊಳ್ಳೆಗಳ ತಮ್ಮ ನಿತ್ಯ ವ್ಯವಹಾರ ಶುರು ಮಾಡಿದ್ದವು. ತಣ್ಣಗೇನೋ ಗಾಳಿಯಿತ್ತು, ಆದರೆ ಕಾಲಿಗೆ, ಕೈಗೆ, ಮುಖಕ್ಕೆ ಎಲ್ಲೆಂದರಲ್ಲಿ ಕಚ್ಚುತ್ತಿದ್ದ ಸೊಳ್ಳೆಗಳಿಂದ ನಿದ್ದೆ ಬರುವುದಾದರೂ ಹೇಗೆ ಸಾಧ್ಯ??<br /><br /><br /><br />ಸುಮ್ಮನೆ ಹೊದಿಕೆಯನ್ನು ಸರಿ ಮಾಡಿಕೊಂಡು ಹೊರಳಾಡುತ್ತಿದ್ದೆ. ಇತ್ತ ಶ್ರೀಕಾಂತ, ಶ್ರೀನಿವಾಸನ ಸ್ಥಿತಿಯೂ ಅದೇ ಆಗಿತ್ತು. ಅದಾಗ್ಯೂ ನಾನು ಏನೋ ಒಂದು ಹೇಳಿದ್ದಕ್ಕೆ ಇಬ್ಬರೂ ಮಲಗಿದ್ದಲ್ಲೇ ಹೊರಳಾಡಿಕೊಂಡು ನಗಲು ಶುರು ಮಾಡಿದರು. ಸೊಳ್ಳೆಗಳ ಕಾಟ ಶ್ರುತಿ ಶರ್ಮಾ ಮತ್ತೆ ಅರ್ಜುನ್ ಗೂ ತಟ್ಟಿತ್ತು. ಅವರೂ ಸಹ ನಿದ್ದೆ ಬಾರದೆ ಹೊರಗಡೆ ಬಂದು ಜಗುಲಿಯಲ್ಲಿ ಕುಳಿತರು. ಹೊದಿಕೆಯನ್ನು ಮೈಯೆಲ್ಲ ಹೊದ್ದುಕೊಂಡು ಕೂತಿದ್ದೆ, ಆದರೂ ಅಲ್ಲಿ ಇಲ್ಲಿ ಕಚ್ಚುತ್ತಿದ್ದವು. ಐವರೂ ಅದೂ ಇದೂ ಅಂತ ಮಾತನಾಡುತ್ತಿದ್ದೆವು. ನಾವು ಕುಳಿತಿದ್ದ ಜಗುಲಿಯ ಎದುರುಗಡೆಯೇ ನಮ್ಮೊಡನೆ ಬಂದಿದ್ದ ಡ್ರೈವರ್ ತನ್ನ "ಟವೇರಾ" ದಲ್ಲಿ ಸುಖವಾಗಿ ನಿದ್ದೆ ಮಾಡುತ್ತಿದ್ದ. ಬಹಳ ಅಸೂಯೆಯಾಯಿತು. ಎದುರು ಮನೆಯವರೆಲ್ಲಾ "ಬೆಡ್ ಲೈಟ್" ಹೊತ್ತಿಸಿಕೊಂಡು ಮಲಗಿದ್ದು ಕಣ್ಣಿಗೆ ಬಿದ್ದು ಮತ್ತಷ್ಟು ಸಂಕಟವಾಗುತ್ತಿತ್ತು. ಮತ್ತೆ ಸುಮಾರು ಒಂದು ಗಂಟೆಗೆ ಎಲ್ಲರೂ ಮಲಗಲು ನಿರ್ಧರಿಸಿದೆವು. ಎಲ್ಲಿಯ ನಿದ್ದೆ?? ಹಾಗೂ ಹೀಗೂ ಆ ಹೊದಿಕೆಯಲ್ಲೇ ತೂರಿಕೊಂಡು ಒಂದು ಗುಬ್ಬಿ ನಿದ್ದೆ ತೆಗೆಯುವಲ್ಲಿ ಯಶಸ್ವಿಯಾಗಿದ್ದೆ. ಮಧ್ಯ ಇವರೀರ್ವರಿಗೂ ನಿದ್ದೆ ಬರದೆ "ಹೊಳೆನರಸೀಪುರ"ದ ರಸ್ತೆಗಳಲ್ಲಿ ಬೀಟ್ ಹಾಕಿಕೊಂಡು ಬಂದರಂತೆ. ನನಗೆ ಗೊತ್ತಾಗಲಿಲ್ಲ. ಮತ್ತೆ ಬಂದು ನಿದ್ದೆ ಮಾಡಲು ಯತ್ನಿಸಿದರಾದರೂ ಆಗಲಿಲ್ಲ.<br /><br /><br /><br />ಬೀಟ್ ಮುಗಿಸಿಕೊಂಡು ಬಂದ ಶ್ರೀಕಾಂತನಿಗೆ "ತ್ಯಾಗ" ಭಾವ ಕಳಚಿ ಹೋಗಿತ್ತೆಂದೆನಿಸುತ್ತದೆ. ನನ್ನ ಹೊದಿಕೆಯನ್ನು ಕಿತ್ತುಕೊಂಡ. ಮತ್ತೆಲ್ಲಿಯ ನಿದ್ದೆ?? ಅವನಿಗೂ ನಿದ್ದೆ ಬರಲಿಲ್ಲ. ಸಮಯ ೪ಗಂಟೆ ಎಂದು ತೋರಿಸುತಿತ್ತು. ಒಳಗೆ ಮಲಗಿರುವವರೆಲ್ಲರೂ "ದಿವ್ಯ ಭವ್ಯ" ನಿದ್ದೆಯಲ್ಲಿರುವವರೆಂದು ನಾವೆಂದುಕೊಳ್ಳುವ ಹೊತ್ತಿಗೆ ಅರ್ಜುನ "ದರಿದ್ರ ಸೊಳ್ಳೆಗಳು" ಎನ್ನುತ್ತಾ ಹೊರಬಂದ. ರಾತ್ರಿ ಪೂರ ನಿದ್ದೆ ಆಗಲಿಲ್ಲವೆಂದು ತನ್ನ ಅಳಲು ತೋಡಿಕೊಂಡ. ಮತ್ತೆ ಎಲ್ಲರೂ ಬೀಟ್ ಹಾಕಲು ನಿರ್ಧರಿಸಿದೆವು. ಅಷ್ಟರಲ್ಲಿ ಕಾಫಿಗಾಗಿ ನನ್ನ ನಾಲಗೆ ಚಡಪಡಿಸುತಿತ್ತು. ಅರುಣನಿಗೆ ಮೆಸೆಜ್ ಕಳಿಸಿದೆ. ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. "ಸಿಗುತ್ತೆ" ಅಂದಿದ್ದ. ದೇವೇಗೌಡರ ಪ್ರಭಾವೋ ಏನೋ ಅರುಣನ ಮೇಲೆ, ಅದು ಹುಸಿ ಆಶ್ವಾಸನೆ ಎಂದು ತಿಳಿಯಲು ಬಹಳ ಸಮಯ ಹಿಡಿಯಲಿಲ್ಲ.<br /><br /><br /><br />ಮತ್ತೊಂದು ಸುತ್ತು ಮುಗಿಸಿ ಮತ್ತೆ ನಾವು ಉಳಿದು ಕೊಂಡಿದ್ದ ಜಾಗಕ್ಕೆ ಬಂದಾಗ ಐದು ಗಂಟೆ. ಸ್ನಾನಕ್ಕೆ ಹೊಳೆಗೆ ಹೋಗಲನುವಾದೆವು. ದಾರಿ ಕೇಳಿಕೊಂಡು ಹೋಗುವಾಗ ಅಲ್ಲೇ ಒಂದು ಸರ್ಕಲ್ಲಿನಲ್ಲಿ "ಮದುವೆ ಆಗ್ಬೇಡಿ ಸಾರ್" ಎಂದು ಆಣಿಮುತ್ತನ್ನುದುರಿಸುತ್ತಿದ್ದ. ಕುಡಿದಿದ್ದ ಎಂದು ಅವನ ಹಾವ-ಭಾವದಲ್ಲೇ ತಿಳಿಯಿತು. ಸ್ನಾನಕ್ಕೆಂದು ಹೊಳೆ ಬಳಿ ಬಂದಾಗ ಭಯಂಕರವಾದ ಸಹಿಸಲಸಾಧ್ಯವಾದ ಘಾಟು ಆ ಘಾಟಿನಲ್ಲಿ ಆವರಿಸಿಕೊಂಡಿತು. ಗಾಳಿ ಬೀಸಿದರೆ ದುರ್ನಾತ. ಅಲ್ಲೆ ಪಕ್ಕದಲ್ಲಿ 'ದಾನಿ'ಗಳು ಅಪಾರಪ್ರಮಾಣದಲ್ಲಿ ದಾನ ಮಾಡಿದ್ದುದರ ಪರಿಣಾಮ ಇದು(ಈ 'ದಾನಿ' ಪದಪ್ರಯೋಗ ಅರ್ಜುನನ ಅನ್ವೇಷಣೆ). ಆಗಸದಲ್ಲಿ ಇನ್ನು ಸೂರ್ಯ ಮೂಡಿರಲಿಲ್ಲ. 'ಹೇಮಾವತಿ' ಯಲ್ಲಿ ಮಿಂದಲು ಹೆದರಿಕೆಯಾಯಿತು. ಗೋವಿಂದರಾಜ್ ಮತ್ತು ಹರೀಶ್ ಸ್ನಾನ ಮಾಡುವ ನಿರ್ಧಾರವನ್ನು ಕೈಬಿಟ್ಟರು, ಹೊಳೆಯಲ್ಲಿ. ನಾನು ಮತ್ತೆ ಅರ್ಜುನ್ ಸೂರ್ಯನ ಆಗಮನಕ್ಕಾಗಿ ಎದುರು ನೋಡುತ್ತಿದೆವು. ಶ್ರೀನಿವಾಸ ಮತ್ತು ಶ್ರೀಕಾಂತ ಕತ್ತಲೆಯಲ್ಲಿ ದಾರಿ ಮಾಡಿಕೊಂಡು ನೀರಿಗಿಳಿದು 'ಸಾಹಸಿ'ಗಳಾದರು. ಬೆಳಕು ಮೂಡಿ ನೀರಿಗಿಳಿಯುವ ಹೊತ್ತಿಗೆ 'ದಾನಿ'ಗಳ ಆಗಮನ ಶುರುವಾಯಿತು. ಅವರ 'ದಾನ' ಯಾವ ಕಡೆಗೆ ಸಾಗುತ್ತಿದೆ ಎಂದು ನೋಡಿಕೊಂಡು ನೀರಿಗೆ ಇಳಿದೆವು. 'ದಾನಿ'ಗಳ ಬಗೆಗಿನ ಎಚ್ಚರಿಕೆಯಿಂದ ಬೇಗ ಸ್ನಾನ ಮುಗಿಸಿ ಹೊರಬಂದೆವು, ಶ್ರೀನಿವಾಸ ಮತ್ತು ಶ್ರೀಕಾಂತ ಸಂಧ್ಯಾವಂದನೆ ಮುಗಿಸಿ ಹೊರಬಂದರು. ಹರೀಶ್ ಮತ್ತು ಗೋವಿಂದರಾಜ್ ಅವರು ಸ್ನಾನಕ್ಕೆ ಬೇರೆ ಕಡೆ ಹೋಗಿದ್ದರು.<br /><br /><br /><br />ಎಲ್ಲಾ ಮುಗಿಸಿ ಚತ್ರಕ್ಕೆ ಮತ್ತೆ ಬಂದಾಗ ಸಮಯ ಎಂಟಾಗಿತ್ತು. ಅರುಣನನ್ನು 'ಮದುವೆ ಗಂಡಿನ' ಅವತಾರದಲ್ಲಿ ನೋಡುವ ತವಕ ನನ್ನಲ್ಲಿ ಹೆಚ್ಚಿತ್ತು. ರಾತ್ರಿಯೆಲ್ಲ ನಿದ್ದೆಯಿಲ್ಲವಾದ್ದರಿಂದ ಶ್ರೀನಿವಾಸ, ಶ್ರೀಕಾಂತ ಕೂತಲ್ಲಿಯೇ ನಿದ್ರಿಸಲು ಶುರು ಮಾಡಿದರು. ಅಷ್ಟರಲ್ಲಿ 'ಮೈಸೂರು ಪೇಟ' ಧರಿಸಿ ಹಸೆಮಣೆಗೆ ಬಂದೇ ಬಿಟ್ಟ ಅರುಣ. ಕಿವಿಯಲ್ಲಿ ಅರಿಶಿಣದಿಂದ ಮಾಡಿದ ಕೋಡುಬಳೆಯನ್ನು ಸಿಕ್ಕಿಸಿಕೊಂಡಿದ್ದ. ಬಹಳ ವಿನೋದಮಯವಾಗಿತ್ತು. ಒಂದಷ್ಟು ಫೋಟೋಗಳು ಶ್ರೀನಿವಾಸ ಮತ್ತು ಶ್ರೀಕಾಂತನ ಕ್ಯಾಮೆರಾಗಳಿಂದ ಕ್ಲಿಕ್ಕಿಸಲ್ಪಟ್ಟವು.<br /><br />'ಕಾಶೀಯಾತ್ರೆ' ಯ ನಾಟಕದ ತೆರೆ ಸರಿದು ಮಾಂಗಲ್ಯಧಾರಣೆ ವಿಧ್ಯುಕ್ತವಾಗಿ ನಡೆಯಿತು. ಅರುಣ್ ಮತ್ತು ರೇಖಾ ದಂಪತಿಗಳಾದರು :-) ಅರುಣನ ಲಕ ಲಕ ಹಲ್ಲಿನ ಹೊಳಪು ಹೈಲೈಟು. ಅವನ ನಗು ಕ್ಯಾಮೆರಾ ಫ್ಲಾಶ್ ಗಳಿಗೇ ಸ್ಪರ್ಧೆಯೊಡ್ಡುವಂತಿದ್ದವು. ಅರುಣ್ ಮತ್ತು ರೇಖಾ ನೂರ್ಕಾಲ ಚೆನ್ನಾಗಿ ಬಾಳಿ ಬದುಕಲಿ :-) ನಮ್ಮೊಂದಿಗೆ ಒಡಾಡಿಕೊಂಡಿದ್ದ ಗೆಳೆಯ, ಕಾಫಿ ಗೆಳೆಯ ಸಂಸಾರಸ್ಥನಾಗಿದ್ದ. ಅದರ ಭಾವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಾಗುತ್ತಿಲ್ಲ ನನಗೆ. ತುಂಬಾ ಖುಶಿಯಾಯಿತು.<br /><br /><img id="BLOGGER_PHOTO_ID_5336757057493484098" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 241px; TEXT-ALIGN: center" alt="" src="http://3.bp.blogspot.com/_WoHbqrpm1NE/Sg_4RLh1QkI/AAAAAAAADV0/qPSxc9ckPiU/s320/group.JPG" border="0" /> ಮದುವೆ ಕಲಾಪಗಳೆಲ್ಲ ಮುಗಿದು ನಾವು ತಂದಿದ್ದ "<span class="">ಗಿಫ್ಟ್"</span> ಕೊಟ್ಟು ಊಟಕ್ಕೆ ಹೊರಟೆವು. ಊಟ ಮುಗಿಸಿ ಬಂದಾಗ ಡ್ರೈವರ್ ಶಾಕ್ ನೀಡಿದ್ದ, "ಗಾಡಿ ಸ್ವಲ್ಪ ಪ್ರಾಬ್ಲಮ್ ಇದೆ ಸಾರ್, ಇಲ್ಲೆ ಪಕ್ಕದ ಊರಿಗೆ ಹೋಗಿ ರಿಪೇರಿ ಮಾಡಿಸಿಕೊಂಡು ಬರ್ತೀನಿ" ಅಂದ. ಮೈಉರಿದುಹೋಯಿತು ,ಆದರೂ ಉಗುಳು ನುಂಗಿಕೊಂಡು "ಎಷ್ಟೊತ್ತಾಗುತ್ತೆ" ಎಂದೆ .<br />"ಒನ್ ಅವರ್ ಸಾರ್, ಬೇಗ ಸರಿ ಮಾಡ್ಸ್ಕೊಂಡ್ ಬರ್ತೀನಿ" ಎಂದು ಹಲ್ಕಿರಿದ .<br />ನಾವೆಲ್ಲ ಊಟ ಮುಗಿಸಿ ಹೊರಡಬೇಕೆಂದಿದ್ದರೆ ಈ ಡಬ್ಬಾ ಗಾಡಿ ರಿಪೇರಿ ಅನ್ನುತ್ತಿದ್ದಾನಲ್ಲ ಎಂದು. ಶುಭಾ ಒಂದಷ್ಟು ಆಂಗ್ಲಭಾಷೆಯಲ್ಲಿ ಬೈದಳು. ಬೆಂಗಳೂರಿಗೆ ಎಷ್ಟೊತ್ತಿಗೆ ತಲುಪುವೆವೋ ಎನ್ನುವ ಆತಂಕದಿಂದ ಊಟ ಮುಗಿಸಿದೆವು.<br /><br />ಗಾಡಿ ಹೊರಡುವುದು ತಡವಾಗುತ್ತದೆಂದು ತಿಳಿದ ಅರ್ಜುನ್ ಮತ್ತು ಹರೀಶ್ ಹೊರಡಲು ಸಿದ್ದವಾದರು. ಅವರಾಗಲೇ ಊಟ ಮುಗಿಸಿದ್ದುದರ ಕಾರಣ ಮತ್ತು ಅವರಿಗೆ ಬೆಂಗಳೂರಿನಲ್ಲಿ ಮುಖ್ಯವಾದ ಕೆಲಸವಿದ್ದುದ್ದರಿಂದ ಅವರು ಹೊರಟರು.<br /><br />ನಾನು, ಶ್ರೀಕಾಂತ ಊಟ ಮುಗಿಸಿ ಬರುವ ಹೊತ್ತಿಗೆ ಅದೇನಾಯಿತೋ ಏನೋ ಡ್ರೈವರ್ "ಗಾಡಿ ಓಕೆ ಸಾರ್, ಬೆಂಗಳೂರಿಗೆ ಹೋಗಿ ರಿಪೇರಿ ಮಾಡಿಸ್ಕೋಬೋದು, ಏನು ತೊಂದ್ರೆ ಇಲ್ಲ" ಎಂದ. ಎಲ್ಲರೂ ನಿರಾಳರಾದೆವು, ಬೇಗ ರೆಡಿ ಆಗಿ ಹೊರಡಲು ನಿರ್ಧರಿಸಿದೆವು. ಅರ್ಜುನ್ ಮತ್ತು ಹರೀಶರ ಜಾಗವನ್ನು 'ಮದುವೆ ಗಂಡಿನ' ಎರಡು ಭಾರವಾದ ಸೂಟುಕೇಸುಗಳು ತುಂಬಿದವು, ಫಿಸಿಕಲಿ. ಅರುಣ ಮತ್ತು ರೇಖಾಗೆ ವಿದಾಯ ಹೇಳಿ ಹೊರಡುವ ಹೊತ್ತಿಗೆ ಸಮಯ ಮಧ್ಯಾಹ್ನ ಮೂರು ಗಂಟೆ. ಶ್ರೀನಿವಾಸ ಕೂಡ ನಾವು ಹೊರಡುವ ಹೊತ್ತಿಗೆ ಹೊರಟು ನಿಂತಿದ್ದ. ಅವನು ಮೈಸೂರಿನಿಂದ ಹೊಳೆನರಸೀಪುರಕ್ಕೆ ಬೈಕಿನಲ್ಲಿ ಬಂದಿದ್ದ. ಶ್ರೀಕಾಂತ ಡ್ರೈವರನ ಹತ್ತಿರ ಮಾತನಾಡಿ ಮೈಸೂರಿನ ಮಾರ್ಗವಾಗಿ ಬೆಂಗಳೂರನ್ನು ಸೇರುವ ಬಗ್ಗೆ ಅವನನ್ನು ಒಪ್ಪಿಸಿದ್ದ. 'ಟವೇರಾ' ವೇಗಕ್ಕೆ ಬೈಕಿನ ಸ್ಪೀಡು ಹೊಂದುವುದೇ?? ಶ್ರೀನಿವಾಸ ನಮ್ಮನ್ನು ಹಿಂದಿಕ್ಕಿ ಮೈಸೂರಿನೆಡೆಗೆ ಶರವೇಗದಲ್ಲಿ ಧಾವಿಸಿದ್ದ.<br /><br />ಹಿಂದಿನ ರಾತ್ರಿ ಯಾರೊಬ್ಬರಿಗೂ ಸರಿಯಾದ ನಿದ್ದೆ ಆಗಿರಲಿಲ್ಲ. ಗಾಡಿ ಹೊರಟ ಹದಿನೈದು ಇಪ್ಪತ್ತು ನಿಮಿಷದೊಳಗೆ ಎಲ್ಲರಿಗೂ ನಿದ್ದೆ ಹತ್ತಿಬಿಟ್ಟಿತ್ತು ಶ್ರೀಕಾಂತನ ಹೊರತಾಗಿ. ಡ್ರೈವರ ಪಕ್ಕ ಕೂತಿದ್ದ ಅವನು ರಸ್ತೆಯ ಇಕ್ಕೆಲಗಳನ್ನು ನೋಡುತ್ತಿದ್ದ, ಅವನನ್ನೇ ನೋಡುತ್ತಾ ನಾನು ನಿದ್ದೆಗೆ ಜಾರಿದ್ದೆ. ಸುಮಾರು ಅರ್ಧ ಗಂಟೆ ಆಗಿರಬಹುದು.<br /><br />ಇದ್ದಕ್ಕಿದ್ದ ಹಾಗೆ ಶ್ರೀಕಾಂತ "ಗಾಡಿ ನಿಲ್ಸಿ ಗಾಡಿ ನಿಲ್ಸಿ " ಎಂದು ಕೂಗಿದ.<br /><span class=""></span><br />ಏನಾಯಿತು ಎಂದು ಕೇಳಿದಾಗ "ಅಲ್ಲಿ ಹಿಂದಗಡೆ ಶ್ರೀನಿವಾಸ ನಿಂತಿದ್ದಾನೆ, ಅವನ ಗಾಡಿ ಇದೆ" ಎಂದ.<br /><span class=""></span><br />ನಿದ್ದೆಯಿಂದ ಎದ್ದ ನಾನು ಕಣ್ಣುಜ್ಜಿಕೊಳ್ಳುತ್ತ ಗಾಡಿ ಇಳಿದು ಹಿಂದಕ್ಕೆ ಓಡಿದೆ, ಒಂದಷ್ಟು ಜನ ನಿಂತಿದ್ದರು, ಅವರನ್ನು ಸರಿಸಿ ನೊಡಿದರೆ ಶ್ರೀನಿವಾಸ ನಿಂತಿದ್ದಾನೆ, ಬಲ ಮೊಣಕೈಯೆಲ್ಲವೂ ರಕ್ತ ಸಿಕ್ತ. ಮುಖದ ಬಲಭಾಗದಲ್ಲಿ ತರಚಿದ ಗಾಯಗಳು, ಮುಖ ಸ್ವಲ್ಪ ಊದಿಕೊಂಡಿತ್ತು. ಹಾಕಿಕೊಂಡಿದ್ದ ಶರ್ಟ್ ಹರಿದಿತ್ತು. ಕತ್ತು ತಿರುಗಿಸಲಾಗದೆ ನರಳುತ್ತಿದ್ದ. ನನಗೆ ಬಹಳ ಗಾಬರಿಯಾಯಿತು, ನೀರು ಬೇಕಾ ಎಂದು ಕೇಳಿದ್ದಕ್ಕೆ ಸರಿಯಾಗಿ ನಮ್ಮೊಡನೆ ಮಾತನಾಡುತ್ತಿರಲಿಲ್ಲ, ಮಾತನಾಡಲು ಆಗುತ್ತಿರಲಿಲ್ಲ. ಅಪಘಾತದ 'ಶಾಕ್' ನಲ್ಲಿದ್ದ. ಅವನು ಉತ್ತರಿಸದೇ ಇರುವುದನ್ನು ನೋಡಿ ಇನ್ನಷ್ಟು ಭಯವಾಯಿತು.<br /><br />ಅಲ್ಲೇ ಅಕ್ಕಪಕ್ಕದ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಜನಗಳು ಹೇಳಿದ್ದಿಷ್ಟು. "ನಾವು ನೋಡ ನೋಡುತ್ತಿದ್ದಂತೆ ಗಾಡಿ ಸ್ಕಿಡ್ ಆಗಿ ಗಾಡಿ ಸಮೇತ ಮೂರು ಪಲ್ಟಿ ಹೊಡೆದು ಇಲ್ಲಿ ಕಾಣುತ್ತಿದೆಯಲ್ಲ ಈ ಪೊದೆ ಇಲ್ಲಿ ಬಂದು ಬಿದ್ಬಿಟ್ರು, ಸಾರ್ ಹೆಲ್ಮೆಟ್ ಇಲ್ದಿದ್ರೆ ಇವ್ರು ಇಲ್ಲೇ ಔಟ್ ಆಗ್ಬಿಡ್ತಿದ್ರು" ಎಂದರು.<br /><br />ಎಲ್ಲರಿಗೂ ವಂದಿಸಿ ಅವನನ್ನು ಅಲ್ಲಿಂದ 'ಟವೇರ' ಬಳಿ ಕರೆತಂದೆವು. ಕುಡಿಯಲು ನೀರು ಕೊಟ್ಟು, ಏನಾಯಿತೋ ಎಂದು ಕೇಳಿದಾಗ, "ದಾರಿ ಮಧ್ಯ ಒಂದು ಕಲ್ಲು ಸಿಕ್ಕಿ, ಮುಂದಿನ ಟಯರ್ ಪಂಚರ್ ಆಗಿ ಪಲ್ಟಿ ಹೊಡೆದು ಬಿದ್ದುಬಿಟ್ಟೆ, ಅಲ್ಲೊಂದು ಕಲ್ಲಿತ್ತು ಅದಕ್ಕೆ ಸರಿಯಾಗಿ ಕುತ್ತಿಗೆಗೆ ಬಿತ್ತು" ಎಂದು ಕತ್ತು ಅಲುಗಿಸಲಾಗದೆ ಚೀರಿದ.<br /><br />ಸ್ಥಳಕ್ಕೆ ಹೋಗಿ ನೋಡಿದಾಗ ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಬೈಕಿನ ರುಂಡವೇ ಕಳಚಿ ಬಿದ್ದಿತ್ತು!! ಕ್ರಾಶ್ ಗಾರ್ಡ್ ಬೆಂಡಾಗಿತ್ತು, ಹ್ಯಾಂಡಲ್ ಬೇರೆ ದಿಕ್ಕಿನೆಡೆಗೆ ತಿರುಗಿತ್ತು, ಎಲ್ಲಕ್ಕಿಂತ ಹೆಚ್ಚಾಗಿ ಶ್ರೀನಿವಾಸ ನ ಹೆಲ್ಮೆಟ್ ದವಡೆಯ ಬಳಿ ಬಿರುಕು ಬಿಟ್ಟಿತ್ತು. ನಮಗೂ ಪ್ರಾಮಾಣಿಕವಾಗಿ ಅನ್ನಿಸಿತ್ತು ಹೆಲ್ಮೆಟ್ ಇಲ್ಲದಿದ್ದರೆ ತಲೆಗೆ ಬಲವಾದ ಪೆಟ್ಟು ಬೀಳುತ್ತಿತ್ತು ಎಂದು, ಜೀವ ಹೋಗುವ ಸಾಧ್ಯತೆಯಂತೂ ಇತ್ತು ಹೆಲ್ಮೆಟ್ ಇಲ್ಲದಿದ್ದರೆ.<br /><br />ಅಲ್ಲಿದ್ದ ಹಳ್ಳಿಗರು ಹೇಳಿದರು ಮುಂದೆ ಸಲ್ಪ ದೂರದಲ್ಲಿ ಆಸ್ಪತ್ರೆಯಿದೆ ಕರೆದುಕೊಂಡು ಹೋಗಿ ಎಂದು, ಅಲ್ಲಿಗೆ ಕರೆದುಕೊಂಡು ಹೋಗಿ ಪ್ರಥಮಚಿತ್ಸೆಯನ್ನು ಕೊಡಿಸಿದೆವು. ಅಲ್ಲಿದ್ದ ಡಾಕ್ಟರ್ ಸಲಹೆಯ ಮೇರೆಗೆ ಮೈಸೂರಿಗೆ ಕರೆದುಕೊಂಡು ಹೋಗಿ X-ray ತೆಗೆಸಿ ಎಂದು. ನಮಗಿದ್ದಿದ್ದ ಮುಖ್ಯ ಆತಂಕವೇ ಅದಾಗಿತ್ತು, ಕತ್ತಿನ ಮೂಳೆಯೇನಾದರೂ ಮುರಿದಿದ್ದರೆ ಎಂದು. ಆದಷ್ಟು ಮೈಸೂರಿಗೆ ಹೊರಡಬೇಕೆಂದು ನಿರ್ಧರಿಸಿದೆವು.<br /><br />ಸಂಜೆ ಏಳರ ಹೊತ್ತಿಗೆ ಬೆಂಗಳೂರನ್ನು ತಲುಪುವ ಎಲ್ಲರ ಆನಿಕೆ ದಿಕ್ಕು ತಪ್ಪಿತ್ತು. ಮುಂದೆ ಹೇಗೆ ನಡೆಸುವುದು ?, ಏನು ಮಾಡುವುದು ? ನೂರು ಪ್ರಶ್ನೆಗಳನ್ನು ಪರಿಸ್ಥಿತಿ ನಮ್ಮೆದುರು ಇರಿಸಿ "ಈಗೇನ್ಮಾಡ್ತೀ" ಎಂಬಂತಿತ್ತು. ಸ್ವಲ್ಪ ಚೇತರಿಸಿಕೊಂಡು ಶ್ರೀನಿವಾಸನೇ ಅವರ ತಂದೆ ತಾಯಿಗೆ ವಿಷಯ ತಿಳಿಸಿದ, ಆದಷ್ಟು ಬೇಗ ಊರಿಗೆ ಬರುತ್ತೇನೆಂದ. ಇಲ್ಲಿ ಇದೆಲ್ಲ ನಡೆಯುತ್ತಿದ್ದರೆ ಅಲ್ಲಿ ಗೋವಿಂದರಾಜ್ ಮತ್ತು ಡ್ರೈವರ್ ಬೈಕನ್ನು ರಿಪೇರಿ ಮಾಡಿಸುತ್ತಿದ್ದರು. ಹೀಗೆಲ್ಲಾ ಆದರೂ ಶ್ರೀನಿವಾಸ "ನೀವೆಲ್ಲಾ ಹೊರ್ಡಿ, ನಾನು ಮೈಸೂರಿಗೆ ಹೋಗ್ತೀನಿ" ಎಂದಿದ್ದು ನನಗೆ ಬಹಳ ವಿಚಿತ್ರವಾಗಿ ತೋರಿತು.<br /><br />ಅಮೇಲೆ ಶ್ರೀಕಾಂತ ಬಂದು "ಸರಿ ಈಗ ನೀನು ಮತ್ತು ಗೋವಿಂದರಾಜ್ ಗಾಡಿಯನ್ನು ಮೈಸೂರಿಗೆ ಲಗ್ಗೇಜ್ ಆಟೋ ದಲ್ಲಿ ಹಾಕ್ಕೊಂಡ್ ಬನ್ನಿ, ನಾನು ಇವನನ್ನ ಉಳಿದವರೊಡನೆ ಮೈಸೂರಿನ ಅಪೊಲೊ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ, ಅಲ್ಲಿ ಚೆಕ್ ಮಾಡಿಸಿ ಅವನ ಗಾಡಿಯನ್ನ ಬಜಾಜ್ ಸರ್ವೀಸ್ ಸೆಂಟರಿಗೆ ಕೊಟ್ಟು ಶ್ರೀನಿವಾಸನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗೋಣ" ಎಂದ. ಯಾಕೋ ಗಾಡಿಯನ್ನು ಸರ್ವೀಸ್ ಸೆಂಟರಿಗೆ ಕೊಟ್ಟು ಬರುವುದು ಯಾರಿಗೂ ಸರಿ ಬರಲಿಲ್ಲ. ಅದೊಂದು ಮಾತನ್ನು ಧಿಕ್ಕರಿಸಿ ಉಳಿದಕ್ಕೆ ಅನುಮೋದಿಸಿ ಮೈಸೂರಿಗೆ ಹೊರಡಲು ನಿರ್ಧರಿಸಿದೆವು.<br /><br />ಶ್ರೀಕಾಂತ, ಶ್ರೀನಿವಾಸ, ಶ್ರುತಿ, ಶುಭಾ ಇಷ್ಟು ಜನ ಗಾಡಿಯಲ್ಲಿ ಮೈಸೂರಿಗೆ ಹೊರಟರು. ನಾನು ಮತ್ತೆ ಗೋವಿಂದರಾಜ್ ಬೈಕನ್ನು ಬೈಕನ್ನು ಮೈಸೂರಿನ ಅಪೋಲೊ ಆಸ್ಪತ್ರೆ ಬಳಿ ತಂದೆವು. ಸಮಯ ಸುಮಾರು 7 ಗಂಟೆ ಆಗಿತ್ತೆನಿಸುತ್ತದೆ. ನಾನು ಮತ್ತೆ ಗೋವಿಂದರಾಜ್ ಬರುವ ಹೊತ್ತಿಗೆ ಚೆಕಪ್ ಮುಗಿದಿತ್ತು. ಕತ್ತಿಗೇನೂ ಆಗಿಲ್ಲವೆಂದು ಕೇಳಿ ಸಮಾಧಾನವಾಯಿತು. ಉಳಿದ ಫಾರ್ಮಾಲಿಟಿಗಳನ್ನ ಮುಗಿಸಿ ಬರುವುದಕ್ಕಾಗಿ ಅಪೊಲೊ ಆಸ್ಪತ್ರೆ ಹೊರಾಂಗಣದಲ್ಲಿ ಕಾಯುತ್ತಿದ್ದೆವು, ಎಲ್ಲರೂ ಅದೇ ಮಾತು, ಏನೋ ಅನ್ಕೋತಿದ್ವಿ, ಏನೋ ಆಗ್ಬಿಡ್ತು, ನಾವು ಆ ಹಾದಿಯಲ್ಲಿ ಹೋಗದಿದ್ದರೆ ? ಶ್ರೀಕಾಂತ ನಡೆದ ಅಪಘಾತವನ್ನು ಗಮನಿಸದಿದ್ದರೆ? ಅವನೂ ಕೂಡ ನಿದ್ರಿಸಿದ್ದರೆ?? ಹೀಗೆ ನಮಗೆ ಕೇಳಿಕೊಂಡ ಪ್ರಶ್ನೆಗಳಿಗೆ ಯಾರೊಬ್ಬರಲ್ಲೂ ಉತ್ತರವಿರಲಿಲ್ಲ, ಶ್ರೀನಿವಾಸ ಹೊರಗಡೆ ಬರುವುದಕ್ಕೇ ಕಾಯುತ್ತಿದ್ದೆವು. ಅಷ್ಟೊತ್ತಿಗೆ ಶುಭಾ ಅವರ ದೊಡ್ಡಪ್ಪನ ಮನೆ ಇಲ್ಲೇ ಹತ್ತಿರವಿದೆಯೆಂದೂ ಬೈಕನ್ನು ಇಲ್ಲೇ ಬಿಡೋಣ ಎಂದು ಹೇಳುತ್ತಿದ್ದಳು. ಶ್ರೀನಿವಾಸ ಹೊರಗಡೆ ಬಂದಾಗ ಮುಖ ಸಲ್ಪ ಮಟ್ಟಿಗೆ ಗೆಲುವಾಗಿತ್ತು. ಮತ್ತೆ ಅವನ್ನು ವಿಚಾರಿಸಿಕೊಂದು ಗಾಡಿಯಲ್ಲಿ ಕೂತು ಶುಭಾಳ ದೊಡ್ಡಪ್ಪನ ಮನೆ ಕಡೆಗೆ ಹೊರಟೆವು. ಮನೆ ಬಹಳ ಸೊಗಸಾಗಿತ್ತು, ಮನೆಯ ಮುಂದೆ ಒಂದಷ್ಟು ಗಿಡಗಳನ್ನು ಬೆಳೆಸಿದ್ದರು, ಬಾಗಿಲ ಎದುರಿಗೆ ತುಳಸೀಕಟ್ಟೆ, ತಂಪಿನ ಹವೆ ಬಹಳ ಹಿತವನ್ನು ನೀಡಿತು. ಮನೆಯಲ್ಲಿದ್ದ ಶುಭಾಳ ದೊಡ್ಡಪ್ಪ ಶ್ರೀನಿವಾಸನ್ನು ವಿಚಾರಿಸಿ ಎಲ್ಲಾ ಸರಿ ಹೋದ ಮೇಲೆ ಬಂದು ಗಾಡಿ ತೆಗೆದುಕೊಂಡು ಹೋಗು, ಏನೂ ಯೋಚನೆ ಮಾಡಬೇಡ ಎಂದು ಹೇಳಿ ನಮ್ಮೆಲ್ಲರನ್ನು ಬೀಳ್ಕೊಟ್ಟರು.<br /><br />ಸಮಯ ಎಂಟಾಗಿದ್ದಿರಬಹುದು. ಆಗ ಬೆಂಗಳೂರಿನೆಡೆಗೆ ಹೊರಟೆವು. ದೇಹಕ್ಕೆ ಅಷ್ಟಾಗಿ ದಣಿವಾಗಿಲ್ಲದಿದ್ದರೂ ಮನಸಿಗೆ ಏನೇನೇನೋ ನಡೆದು ಹೋಯಿತೆಂಬ ಭಾವನೆ. ಯಾರ ಪ್ರಶ್ನೆಗಳಿಗೂ ಯಾರ ಬಳಿಯೂ ಉತ್ತರವಿರಲಿಲ್ಲ. ಮತ್ತೆ ಎಲ್ಲರೂ ನಿದ್ದೆಗೆ ಜಾರಿದೆವು, ಮಾರ್ಗ ಮಧ್ಯ ಊಟ ಮುಗಿಸಿ ಕೆಂಗೇರಿಯ ಬಳಿ ಬಂದಾಗ ಗೋವಿಂದರಾಜ್ ನಾನು ಇಲ್ಲೇ ಇಳಿದುಕೊಳ್ಳುತ್ತೇನೆಂದರು. ಅವರ ವಯಸ್ಸಿನವರು ಬೇರೆಯಾರಾಗಿದ್ದರೂ "ಮನೆವರೆಗೂ ಬಿಟ್ಬಿಡೀ ಪಾ" ಎನ್ನುತ್ತಿದ್ದರೇನೋ ?? ಎಲ್ಲರಿಗೂ ಬೈ ಬೈ ಹೇಳಿ ಅಲ್ಲೆ ಕಣ್ಮರೆಯಾಗಿಬಿಟ್ಟರು.ಶ್ರೀನಿವಾಸನನ್ನು ಜಾಲಹಳ್ಳಿಯ ಅವರ ಮನೆ ಬಳಿ ಬಂದೆವು. ಶ್ರೀಕಾಂತ ಅವನನ್ನ ಕರೆದು ಕೊಂಡು ಅವರ ಮನೆ ಬಾಗಿಲ ವರೆಗೂ ಬಿಟ್ಟು ಬಂದ, ನಂತರ ಶುಭಾಳ ಮನೆಗೆ ಹೋಗಿ ಅಲ್ಲಿಂದ ಶರ್ಮಾಳನ್ನು ಚಾಮರಾಜಪೇಟೆ ಬಳಿ ಇಳಿಸಿ ನಾನು ಮತ್ತೆ ಶ್ರೀಕಾಂತ ನ.ರಾ. ಕಾಲೋನಿ ಬಳಿ ಬರುವ ಹೊತ್ತಿಗೆ ರಾತ್ರಿ ಹನ್ನೊಂದೂವರೆಯಾಗಿತ್ತು. ಡ್ರೈವರನ ದುಡ್ಡು ಸೆಟಲ್ ಮಾಡಿ ನಾನು ಮನೆ ದಾರಿ ಹಿಡಿದೆನು. ಹೋಗಿದ್ದು ಎರಡೇ ದಿನವಾದರೂ ಏನೆಲ್ಲ ನಡೆದು ಹೋಯಿತೆಂಬ ಅಚ್ಚರಿ, ಒಂದು ತೆರನಾದ ಭಾರ ಮನಸಿಗೆ.<br /><br />ನಾಗಸಂದ್ರ ಸರ್ಕಲ್ಲಿನ ಇಳಿರೋಡಿನಲ್ಲಿ ನಡೆದು ಬರುತ್ತಿದ್ದ ನನ್ನನ್ನು ನೋಡಿ ಬೀದಿ ನಾಯಿಯೊಂದು ನನ್ನ ನೋಡುತ್ತಲೇ ತಾನಿದ್ದ ಜಾಗದಿಂದ ವಿಕಾರವಾಗಿ ಬೊಗಳುತ್ತಾ ನನ್ನೆಡೆಗೆ ಓಡಿ ಬಂತು. "ಭಗವಂತಾ" ಎಂದು ಉದ್ಗರಿಸಿದ್ದಷ್ಟೆ ನೆನಪು.Unknownnoreply@blogger.com8tag:blogger.com,1999:blog-1028483830046744384.post-53292494842829837042008-11-01T01:13:00.017+05:302008-11-01T02:20:40.302+05:30ಜೈ ಕನ್ನಡ...<span style=";font-family:verdana;font-size:100%;" ><a onblur="try {parent.deselectBloggerImageGracefully();} catch(e) {}" href="http://4.bp.blogspot.com/_WoHbqrpm1NE/SQthREiKRbI/AAAAAAAAB14/i0l0ES1gaZs/s1600-h/second.JPG"><img style="margin: 0px auto 10px; display: block; text-align: center; cursor: pointer; width: 320px; height: 306px;" src="http://4.bp.blogspot.com/_WoHbqrpm1NE/SQthREiKRbI/AAAAAAAAB14/i0l0ES1gaZs/s320/second.JPG" alt="" id="BLOGGER_PHOTO_ID_5263407535415248306" border="0" /></a><br /></span><p style="margin: 0pt; text-align: left;font-family:trebuchet ms;"><span style="color: rgb(0, 0, 0);font-size:100%;" >ಎಲ್ಲರಿಗೂ 53ನೆಯ <span style="color: rgb(255, 0, 0);font-size:180%;" >ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು</span>. ಹೆಚ್ಚು ಹೆಚ್ಚು ಕನ್ನಡಲ್ಲೇ ಮಾತನಾಡಿ, ಕನ್ನಡ ಉಳಿಸಿ, ಬೆಳೆಸಿ, ಜೊತೆಗೆ ನೀವು ಬೆಳೆಯಿರಿ(ಇದು ನಾನು 53 ನೆಯ ರಾಜ್ಯೋತ್ಸವದ ಸಂಧರ್ಭದಲ್ಲಿ ನಾಡಿಗೆ ಕೊಡುತ್ತಿರುವ ಕರೆ ;-) )</span></p><p style="margin: 0pt; text-align: left;font-family:trebuchet ms;"><span style="color: rgb(0, 0, 0);font-size:100%;" ><br /></span></p> <p style="margin: 0pt; text-align: left;font-family:trebuchet ms;"> </p> <p style="margin: 0pt; text-align: left;font-family:trebuchet ms;"><span style="color: rgb(0, 0, 0);font-size:100%;" >ಇದೇ ಸಂಧರ್ಭದಲ್ಲಿ ಕನ್ನಡವನ್ನು ಶಾಸ್ತ್ರೀಯ ಭಾಷೆಯೆಂದು ಕೇಂದ್ರ ಸರಕಾರ ಘೋಷಿಸಿದೆ,ಮತ್ತೊಮ್ಮೆ ಎಲ್ಲರಿಗೂ ಶುಭಾಶಯಗಳು, ನೆರೆಯ ತೆಲುಗಿಗೂ ಈ ಭಾಗ್ಯ ಲಭಿಸಿದೆ.Cheers...</span></p><p style="margin: 0pt; text-align: left;font-family:trebuchet ms;"><span style="color: rgb(0, 0, 0);font-size:100%;" ><br /></span></p> <p style="margin: 0pt; text-align: left;font-family:trebuchet ms;"> </p> <p style="margin: 0pt; text-align: left;font-family:trebuchet ms;"><span style="color: rgb(0, 0, 0);font-size:100%;" >ಶಾಸ್ತ್ರೀಯ ಭಾಷೆ ಎಂದರೆ ಒಂದು ಭಾಷೆ ತನ್ನ ಅಸ್ತಿತ್ವದಲ್ಲಿ, ದಶಕಗಳಿಂದ ತನ್ನ ಪ್ರಭಾವನ್ನು ಬೀರಿದ್ದೇ ಆದರೆ ಹಾಗೂ ತನ್ನ ಮೂಲ ರೂಪದಿಂದ ಬೇರೆ ರೂಪಗಳನ್ನು ಪಡೆದಿದ್ದಾಗ್ಯೂ ಅದರ ಪ್ರಭಾವ ಹಾಗೆ ಉಳಿಸಿಕೊಂಡಿರುವ ಭಾಷೆಯನ್ನು "Classical" ಅಥವಾ ಶಾಸ್ತ್ರೀಯ ಭಾಷೆಯೆನ್ನುತ್ತಾರೆ.<br /></span></p><p style="margin: 0pt; text-align: left;font-family:trebuchet ms;"><span style="color: rgb(0, 0, 0);font-size:100%;" ><br /></span></p> <p style="margin: 0pt; text-align: left;font-family:trebuchet ms;"> </p> <p style="margin: 0pt; text-align: left; font-family: trebuchet ms;"><span style="color: rgb(0, 0, 0);font-size:100%;" >ಶಾಸ್ತ್ರೀಯ ಭಾಷೆಯ ಬಗ್ಗೆ ಒಂದಷ್ಟು ತುಣುಕುಗಳು : </span></p> <p style="margin: 0pt; text-align: left; font-family: trebuchet ms;"> </p><span style=";font-family:verdana;font-size:100%;" > 1</span><span style="color: rgb(0, 0, 0);font-family:Tunga;font-size:100%;" >)ಶಾಸ್ತ್ರೀಯ ಭಾಷೆಯೆಂದು ಪರಿಗಣಿಸಲಿಕ್ಕೆ ಇವಿಷ್ಟೂ ಅಂಶಗಳು ಮಾನದಂಡ</span> <p style="margin: 0pt; text-align: left; font-family: trebuchet ms;"><span style="color: rgb(0, 0, 0);font-size:100%;" >-ಭಾಷೆಯು ಕನಿಷ್ಟವೆಂದರೂ ಸಾವಿರ ವರ್ಷ ಪುರತನದ್ದಾಗಿರಬೇಕು(ಕನ್ನಡ ಎರಡು ಸಾವಿರ ವರ್ಷಕ್ಕಿಂತಲೂ ಪುರಾತನವಾದದ್ದು) </span></p> <p style="margin: 0pt; text-align: left; font-family: trebuchet ms;"><span style="color: rgb(0, 0, 0);font-size:100%;" >-ಭಾಷೆಗೆ ಅಷ್ಟು ವರ್ಷಗಳ ಐತಿಹ್ಯವಿರಬೇಕು, ಅದರ ಸಲುವಾಗಿ ಶಾಸನಗಳು, ಸೂಕ್ತ ದಾಖಲೆಗಳು ಹೊಂದಿರಬೇಕು. </span></p> <p face="trebuchet ms" style="margin: 0pt; text-align: left;"><span style="color: rgb(0, 0, 0);font-size:100%;" >-ಭಾಷೆಯು ಸ್ವಂತದ್ದಾಗಿರಬೇಕು, ಬೇರೆ ಭಾಷೆಯಿಂದ ಟಿಸಿಲೊಡೆದಿರಬಾರದು.<br /></span></p><p face="trebuchet ms" style="margin: 0pt; text-align: left;"><span style="color: rgb(0, 0, 0);font-size:100%;" ><br /></span></p> <p face="trebuchet ms" style="margin: 0pt; text-align: left;"> </p><span style=";font-family:verdana;font-size:100%;" > 2</span><span style="color: rgb(0, 0, 0);font-family:Tunga;font-size:100%;" >)ಶಾಸ್ತ್ರೀಯ ಭಾಷೆಯನ್ನು ಮೃತ(!!) ಭಾಷೆಯೆಂದೂ ಕರೆಯುತ್ತಾರೆ, ಕಾರಣ ಅದರ ಮೂಲರೂಪದಿಂದ ಕವೊಲೊಡೆದು ಈಗ ಬೆರೆಯೆ ತೆರೆನಾದ ರೂಪವನ್ನು ಹೊಂದಿರುತ್ತದೆ.</span><span style=";font-family:verdana;font-size:100%;" ><br /><br /><br /></span><p style="margin: 0pt; text-align: left; font-family: trebuchet ms;"> </p> <p face="trebuchet ms" style="margin: 0pt; text-align: left;"><span style="color: rgb(0, 0, 0);font-size:100%;" >3)ಸಂಸ್ಕೃತ ಭಾಷೆಯು ಪ್ರಪಂಚದ ಶಾಸ್ತ್ರೀಯ ಭಾಷೆಗಳ ಪಟ್ಟಿಯಲ್ಲಿದೆ, ಅದರ ಜೊತೆಗೆ ಗ್ರೀಕ್, ಲ್ಯಾಟಿನ್ ಮುಂತಾದ ಭಾಷೆಗಳು ಕೂಡ ಇವೆ.<br /></span></p><p style="margin: 0pt; text-align: left;font-family:verdana;"><span style="color: rgb(0, 0, 0);font-size:100%;" ><br /></span></p> <p style="margin: 0pt; text-align: left;font-family:verdana;"> </p><span style=";font-family:verdana;font-size:100%;" > 4</span><span style="color: rgb(0, 0, 0);font-family:Tunga;font-size:100%;" >)ತಮಿಳು ಭಾಷೆಯನ್ನು 2004 ರಲ್ಲಿ ಶಾಸ್ತ್ರೀಯ ಭಾಷೆಯೆಂದು ಪರಿಗಣಿಸಲಾಯಿತು. ಅದರ ಹಿಂದೆ ನಲವತ್ತು ವರ್ಷಗಳ ಹೋರಾಟವಿತ್ತು.</span><span style=";font-family:verdana;font-size:100%;" ><br /><br /></span><p style="margin: 0pt; text-align: left; font-family: verdana;"> </p> <p style="margin: 0pt; text-align: left; font-family: verdana;"> </p> <p style="margin: 0pt; text-align: left; font-family: verdana;"><span style="color: rgb(0, 0, 0);font-size:100%;" >ಶಾಸ್ತ್ರೀಯ ಭಾಷೆಯ ಗರಿಯನ್ನು ಸಿಕ್ಕಿಸಿಕೊಂಡದ್ದಾಯಿತು. ಇನ್ನಷ್ಟು ಕನ್ನಡ ಸಾಹಿತ್ಯದಲ್ಲಿ ಕೃಷಿಯಾಗಲಿ, ಕನ್ನಡ ಇನ್ನಷ್ಟು ಮತ್ತಷ್ಟು ಮುಗಿಲಿಗೇರಲಿ ಎನ್ನುವ ಆಶಯದೊಂದಿಗೆ ಮತ್ತೊಮ್ಮೆ ತಮಗೆಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು.</span></p><p style="margin: 0pt; text-align: left;font-family:verdana;"><span style="font-size:100%;"><a onblur="try {parent.deselectBloggerImageGracefully();} catch(e) {}" href="http://4.bp.blogspot.com/_WoHbqrpm1NE/SQthtf4pMfI/AAAAAAAAB2A/7gfHTeyLg_c/s1600-h/first.JPG"><img style="margin: 0px auto 10px; display: block; text-align: center; cursor: pointer; width: 221px; height: 320px;" src="http://4.bp.blogspot.com/_WoHbqrpm1NE/SQthtf4pMfI/AAAAAAAAB2A/7gfHTeyLg_c/s320/first.JPG" alt="" id="BLOGGER_PHOTO_ID_5263408023793644018" border="0" /></a></span></p><p face="verdana" style="margin: 0pt; text-align: left;"><span style="font-weight: bold;">(</span><span style="font-weight: bold;">ಫೋಟೋ</span><span style="font-weight: bold;"> </span><span style="font-weight: bold;">ಕಾಣಿಕೆ</span><span style="font-weight: bold;"> : ಡೈನಮಿಕ್ </span><span style="font-weight: bold;">ದಿವ್ಯಾ</span><span style="font-weight: bold;">)</span><br /></p> <p face="verdana" style="margin: 0pt; text-align: left;"> </p> <p face="verdana" style="margin: 0pt; text-align: left;"> </p><span style="color: rgb(0, 0, 0);font-size:100%;" ></span><p style="margin: 0pt; text-align: left; font-weight: bold;"><span style="color: rgb(0, 0, 0);font-family:Tunga;font-size:0;" ><br /></span></p>Unknownnoreply@blogger.com32tag:blogger.com,1999:blog-1028483830046744384.post-87636819467706089202008-10-29T18:32:00.010+05:302008-10-30T23:48:47.497+05:30ITC Infotech ಗೆ ವಿದಾಯ<em>ಈ ಲೇಖನವನ್ನ 24-<span>ಶುಕ್ರವಾರ-</span>2008 ರಂದೇ ಬರೆಯಬೇಕಿತ್ತು, ಕಾರಣಾಂತರಗಳಿಂದ ಆಗಲಿಲ್ಲ. ಅಂದಿನ ದಿನಾಂಕಕ್ಕೆ ಸಮೀಕರಿಸಿಕೊಳ್ಳಿ ;-)</em><br /><div><div><img id="BLOGGER_PHOTO_ID_5262567358955318082" style="margin: 0px auto 10px; display: block; width: 320px; height: 240px; text-align: center;" alt="" src="http://4.bp.blogspot.com/_WoHbqrpm1NE/SQhlIXUY60I/AAAAAAAABvw/8MpVf0fPGb8/s320/241020081390.jpg" border="0" /><br /><br /><p><span>ನನ್ನ</span> <span>ಜೀವನದ</span> 22<span>ವರುಷಗಳದ್ದು</span> <span>ಒಂದು</span> <span>ಪರ್ವವಾದರೆ</span> <span>ಇನ್ನೆರಡು</span> <span>ವರ್ಷ</span> <span>ಮತ್ತೊಂದು</span> <span>ಪರ್ವ</span>. <span>ಆ</span> <span>ಪರ್ವದಲ್ಲಿ</span> <span>ನನ್ನ</span> <span>ಮೊದಲ</span> <span>ಕಂಪೆನಿಯಾದ</span> ITC Infotech <span>ಗೆ</span> <span>ತನ್ನದೇ</span> <span>ಆದ</span> <span>ಸ್ಥಾನವಿದೆ</span>. <span>ಹಲವಾರು</span> <span>ಮೊದಲುಗಳಿಗೆ</span> <span>ಕಾರಣವಾಗಿದೆ</span>. <span>ಒಂದು</span> <span>ಕಂಪೆನಿಯಲ್ಲಿ</span> <span>ಹೇಗಿರಬೇಕು</span> <span>ಎಂಬುದರಿಂದ</span> <span>ಹಿಡಿದು</span> <span>ಜನರ</span> <span>ಜೊತೆ</span> <span>ಹೇಗಿರಬಾರದು</span> <span>ಎಂಬುದರವರೆಗೂ</span> <span>ಕಂಪೆನಿ</span> <span>ಕಲಿಸಿಕೊಟ್ಟಿದೆ</span>. <span>ಅನೇಕ</span> <span>ಕಟು</span> <span>ಸತ್ಯಗಳನ್ನು</span> <span>ಕಲಿಸಿದೆ</span>, <span>ಸಿಹಿ</span> <span>ಸಿಂಚನಗಳಿಗೇನೂ</span> <span>ಕಮ್ಮಿಯಿಲ್ಲ</span>. <span>ಹೌದು</span> <span>ಇಂದು</span> <span>ಈ</span> <span>ಕಂಪೆನಿಯಿಂದ</span> <span>ಬೇರ್ಪಡುತ್ತಿದ್ದೇನೆ</span> <a href="http://www.accenture.com/home/default.htm">ಇನ್ನೊಂದು</a> <span>ಕಡೆಗೆ</span>...Change is the only constant thing in Life...Hmmm<br /><br />ಎಂಜಿನಿಯರಿಂಗ್ ವಿದ್ಯಾರ್ಥಿ ಜೀವನದ ಮುಂದುವರಿದ ಭಾಗದಂತೇ ಇತ್ತು ITC Infotech ನಲ್ಲಿ ನನ್ನ ದಿನಗಳು. ನನ್ನ ಜೊತೆ ಸೇರಿದವರೆಲ್ಲರನ್ನು ನಾನು ಗೆಳೆಯರೆಂದೇ ಹೇಳಲಿಚ್ಚಿಸುತ್ತೇನೆ, ಯಾರೊಬ್ಬರನ್ನು ಕಲೀಗ್ಸ್ ಎಂದು ಸಂಭೋದಿಸಲು ಇಂದಿಗೂ ಮುಜುಗರವಾಗುತ್ತದೆ. ಎರಡು ವರ್ಷಗಳು ಆಟ ಆಡಿಕೊಂಡೇ ಕಳೆದುಬಿಟ್ಟೆ. ಕೆಲಸ ಮಾಡುತ್ತಿದ್ದೇನೆ ಎಂದೆನಿಸುತ್ತಿರಲಿಲ್ಲ, ಕಾಲೇಜಿಗೇ ಹೋಗಿ ಬರುವಂತಿತ್ತು ದಿನವೂ. ಇಂದಿಗೆ ನನ್ನ ಎಲ್ಲ ಆಟಗಳಿಗೆ, ಆರಾಮದಾಯಕ Professional ಜೀವನಕ್ಕೆ ತೆರೆ ಬಿದ್ದಿದೆ. ನಾನು ಈಗ ಹೋಗುತ್ತಿರುವ ಕಡೆ ಹೇಗಿರುತ್ತದೋ ಏನೋ??<br /><br />ಕಳೆದ ವಾರವೇ ನನ್ನ ಕಟ್ಟ ಕಡೆಯ ರಾತ್ರಿ ಪಾಳಿಯನ್ನು ಇಡೀ ರಾತ್ರಿ ತೂಕಡಿಸದೆ ವಿಜೃಂಭಣೆಯಿಂದ ನಾನೊಬ್ಬನೇ ಆಚರಿಸಿದ್ದೆ. ಅಲ್ಲೆಲ್ಲಾ ನಾನೊಬ್ಬನೇ ತಿರುಗಾಡುತ್ತಾ ಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದೆ. ಮತ್ತೆ ಹೀಗೆ ರಾತ್ರಿಯೆಲ್ಲಾ ಕೆಲಸ ಮಾಡುವ ಕರ್ಮವಿರುವುದಿಲ್ಲವೆಂಬ ಸಂತೋಷ ಒಂದು ಕಡೆಯಾಗಿದ್ದರೆ ಇಂದಿಗೆ ಮತ್ತೆ ಇವೆಲ್ಲವನ್ನು ಮಿಸ್ ಮಾಡಿಕೊಳ್ಳುತ್ತೇನೆಂಬ ದುಗುಡ ಇನ್ನೊಂದು ಕಡೆ. ರಾತ್ರಿ ಪಾಳಿಯಲ್ಲಿ ಇಡೀ ರಾತ್ರಿ ಇರುತ್ತಿದ್ದದ್ದೆ ಹಾಗೆ, ಕೆಲಸವಿದ್ದರೆ ಯಾವುದೇ ತಾಪತ್ರಯವಿರುತ್ತಿರಲಿಲ್ಲ, ಹೇಗೋ ಎಚ್ಚರವಾಗಿದ್ದು ಕೆಲಸ ಮಾಡುವುದರಲ್ಲಿ ಮಗ್ನರಾಗಿ ಸಮಯ ಕಳೆಯುತ್ತಿದ್ದೆವು, ಕೆಲಸ ಇರದಿದ್ದರೆ 2 ಗಂಟೆಯೊಳಗಾಗಿ ನಿದಿರಾದೇವಿ ಆವರಿಸಿಕೊಳ್ಳುತ್ತಿದ್ದಳು, ತನ್ನ ಕಬಂದ ಬಾಹುಗಳನ್ನು ಚಾಚಿ ಬರಸೆಳೆದು ನಿದಿರೆಗೆ ಜಾರಲು ಪ್ರೇರೇಪಿಸುತ್ತಿದ್ದಳು, ಅದರ ಪರಿಣಾಮ ಅಲ್ಲೇ ತೂಕಡಿಸಿ ಹಾಗೆ ಒರಗಿಕೊಂಡು ನಿದಿರೆಗೆ ಜಾರಿಬಿಡುತ್ತಿದ್ದೆ. ರಾತ್ರಿ ಪಾಳಿಯ ಇನ್ನೊಂದು ಸೊಗಸೆಂದರೆ ಕೆಲಸ ಮಾಡುತ್ತ ಹಾಡುಗಳು ಕೇಳುತ್ತಾ, ಕಾಪಿ ಹೀರುತ್ತ ಆರಮಾಗಿ ಇರಬಹುದಾಗಿತ್ತು , ಯಾರೊಬ್ಬರು ಕೇಳಲು ಇರುತ್ತಿರಲಿಲ್ಲ. ನಮ್ಮ ಕೆಲಸಗಳು ಸಾವಧಾನವಾಗಿ ಮಾಡಿಕೊಳ್ಳಬಹುದಾಗಿತ್ತು, ಹೊಸ ವಿಷಯಗಳ ಕಲಿಕೆಗೂ ಬಹಳ ಪೂರಕವಾಗಿತ್ತು. ಆದರೆ ಅದರಿಂದ ಆರೋಗ್ಯ ಹದಗೆಡುತ್ತಿತ್ತು. ನಾಲ್ಕು ತಿಂಗಳ ಹಿಂದೆ ಇನ್ನು ಮುಂದೆ ರಾತ್ರಿ ಪಾಳಿಗೆ ಬರಲಾಗುವುದಿಲ್ಲವೆಂದು ನನ್ನ ಮ್ಯಾನೇಜರಿಗೆ ಖಡಾಖಂಡಿತವಾಗಿ ಹೇಳಿಬಿಟ್ಟೆ. ಅವೆಲ್ಲಾ ಮುಗಿದ ಮೇಲೆ ಬೇರೆ ಕಂಪೆನಿಯಲ್ಲಿ ಕೆಲಸ ದೊರೆತು ನನ್ನ ರಾಜೀನಾಮೆಯನ್ನು ನೀಡಿದ ಬಳಿಕ ಮ್ಯಾನೇಜರಿನ ಕೋರಿಕೆಯ <span> ಮೇರೆಗೆ</span> ಮತ್ತೆ ಒಂದು ವಾರ ರಾತ್ರಿ ಪಾಳಿಗೆ ಒಪ್ಪಿಕೊಂಡೆ. ಅದನ್ನು ಕಳೆದ ಶುಕ್ರವಾರ(17-Friday-2008) ಮುಗಿಸಿದೆ.<br /></p><p><a onblur="try {parent.deselectBloggerImageGracefully();} catch(e) {}" href="http://1.bp.blogspot.com/_WoHbqrpm1NE/SQnubXF09vI/AAAAAAAABxw/YrkMV4aapK8/s1600-h/181020081354.jpg"><img style="margin: 0px auto 10px; display: block; text-align: center; cursor: pointer; width: 320px; height: 240px;" src="http://1.bp.blogspot.com/_WoHbqrpm1NE/SQnubXF09vI/AAAAAAAABxw/YrkMV4aapK8/s320/181020081354.jpg" alt="" id="BLOGGER_PHOTO_ID_5262999793381471986" border="0" /></a></p> ಕಡೆಯ ವಾರ ಕಂಪೆನಿಯಿಂದ ಹೊರನಡೆಯಲು ಇದ್ದ ಬದ್ದ ಎಲ್ಲ ನಿಯಮಾವಳಿಗಳನ್ನು ಮುಗಿಸುವುದರಲ್ಲಿ ಒಡಾಡುತ್ತಿದ್ದೆ. ಪ್ರತಿಯೊಂದು ವಿಭಾಗದಲ್ಲೂ ಅವರ ಸಹಿ ಹಾಕಿ, ಕ್ಲಿಯರೆನ್ಸ್ ಪತ್ರ ಕೊಡುತ್ತಿದ್ದ ಹಾಗೆ ಇಂಚಿಂಚಾಗಿ ಕಂಪೆನಿಯಿಂದ ಬೇರ್ಪಡುತ್ತಿದ್ದ ಭಾವ ಸುಳಿಯುತ್ತಿತ್ತು. ಮತ್ತೆ ವಾಪಸು ಸೇರಿಬಿಡೋಣವೇ ಎಂದಂತಲೂ ಅನಿಸುತ್ತಿತ್ತು, ನಿರ್ಧಾರ ಬಿಗಿ ಮಾಡಿ ಮುಂದಿನ ವಿಭಾಗದೆಡೆಗೆ ನಡೆದೆ.<br /><p><br />ಎಲ್ಲಾ ವಿಭಾಗಗಳಿಂದಲೂ ಕ್ಲಿಯರೆನ್ಸ್ ಪತ್ರ ಪಡೆದು ಕಂಪೆನಿಗೆ ಪಾವತಿಸಬೇಕಾದ ಹಣ ಪಾವತಿಸಿ ಸಂಜೆ ಐದರ ಹೊತ್ತಿಗೆ ಕಂಪೆನಿಯ ರಿಲೀವಿಂಗ್(ಕನ್ನಡ ಪದ ತಿಳಿಯಲಿಲ್ಲ) ಪತ್ರ ಇಸಿದುಕೊಂಡೆ. ನನ್ನ ಕಂಪೆನಿ ಗೆಳೆಯರು ಏರ್ಪಡಿಸಿದ್ದ ವಿದಾಯ ಸಮಾರಂಭದಲ್ಲಿ ಎರಡು ಮಾತನಾಡಿ ಎಲ್ಲರ ಕೈಕುಲುಕಿ ಎಲ್ಲಾ ಮುಗಿದ ಮೇಲೆ ಅಲ್ಲೇ ಮೂಲೆಯಲ್ಲಿ ಒಂದೆಡೆ ಕುಳಿತೆ. ಸಂಜೆ ಗೆಳೆಯರಿಗೆ Farewell ಪಾರ್ಟಿ ಕೊಡಿಸಿ ಮತ್ತೆ ಆಫೀಸಿಗೆ ಹಿಂದಿರುಗಿದಾಗ ಗಂಟೆ ಹತ್ತಾಗಿತ್ತು. ಲೀಟರುಗಟ್ಟಲೆ ಕಾಫಿ ಎರಕ ಹೊಯ್ದಿದ್ದ ಕಾಫಿ ಮೆಶೀನಿನ ಎರಡು ಫೋಟೋ ಕ್ಲಿಕ್ಕಿಸಿ ಮತ್ತೊಂದು ಕಪ್ ಕಾಫಿ ಕುಡಿದು ಜಡಿ ಮಳೆಯಲ್ಲೇ ಮನೆಗೆ ಹಿಂದಿರುಗಿ ಬಂದೆ.</p><p><a onblur="try {parent.deselectBloggerImageGracefully();} catch(e) {}" href="http://3.bp.blogspot.com/_WoHbqrpm1NE/SQnvGyrAT0I/AAAAAAAABx4/lyW7okouD-8/s1600-h/241020081400.jpg"><img style="margin: 0px auto 10px; display: block; text-align: center; cursor: pointer; width: 320px; height: 240px;" src="http://3.bp.blogspot.com/_WoHbqrpm1NE/SQnvGyrAT0I/AAAAAAAABx4/lyW7okouD-8/s320/241020081400.jpg" alt="" id="BLOGGER_PHOTO_ID_5263000539519536962" border="0" /></a></p><span>ಪದಗಳಿಗೆ</span> <span>ನಿಲುಕದ</span> <span>ಅನೇಕ</span> <span>ಭಾವಗಳಿಗೆ</span> <span>ನನ್ನ</span> <span>ಮೊದಲ</span> <span>ಕಂಪೆನಿ</span> <span>ಸಾಕ್ಷಿಯಾಗಿದೆ</span>, <span>ಎರಡು</span> <span>ವರ್ಷಗಳು</span> <span>ಕಳೆದದ್ದೇ</span> <span>ಗೊತ್ತಾಗಲಿಲ್ಲ</span>. <span>ಅನೇಕ</span> <span>ಗೆಳೆಯರನ್ನು</span> <span>ಮಿಸ್</span> <span>ಮಾಡಿಕೊಳ್ಳಲಿದ್ದೇನೆ</span>. <span>ಹೊಸ</span> <span>ಪ್ರಪಂಚಕ್ಕೆ</span> <span>ಕಾಲಿಡಲಿದ್ದೇನೆ</span> <span>ಸೋಮವಾರದಿಂದ</span>. <span>Wish</span> <span>me</span> <span>all</span> <span>the</span> <span>best</span>.<br /><br />ಕಡೆಯ ದಿನಗಳಲ್ಲಿ ಕಂಪೆನಿಯಲ್ಲಿ ತೆಗೆದ <span><a href="http://picasaweb.google.com/rajursr/ITCInfotech#">ಫೋಟೋ</a>ಗಳನ್ನು</span> ಬಿಡುವು ಮಾಡಿಕೊಂಡು ನೋಡಿಬಿಡಿ.<br /></div></div>Unknownnoreply@blogger.com8tag:blogger.com,1999:blog-1028483830046744384.post-77151116718293719192008-09-29T10:24:00.003+05:302008-09-29T10:28:48.015+05:30ಕಥೆಗಾರ....<a href="http://1.bp.blogspot.com/_WoHbqrpm1NE/SOBflMdWNGI/AAAAAAAABtU/w0fka3_0v2A/s1600-h/writer.jpg"><img style="TEXT-ALIGN: center; MARGIN: 0px auto 10px; DISPLAY: block; CURSOR: hand" id="BLOGGER_PHOTO_ID_5251302258118112354" border="0" alt="" src="http://1.bp.blogspot.com/_WoHbqrpm1NE/SOBflMdWNGI/AAAAAAAABtU/w0fka3_0v2A/s320/writer.jpg" /></a><span class="Apple-style-span" style="font-family: 'trebuchet ms';"><span class="Apple-style-span" style="font-size: small;"><br /></span></span><div><span class="Apple-style-span" style="font-family: 'trebuchet ms';"><span class="Apple-style-span" style="font-size: small;">ಇದು ನನ್ನ ತಂಗಿಯ ಅಬ್ಸರ್ವೇಶನ್. ಜೊತೆಗೆ ನನ್ನಗನ್ನಿಸಿದ್ದು ಸೇರಿಸಿ ನಿಮ್ಮ ಮುಂದಿಡುತ್ತಿದ್ದೇನೆ. ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಕಮೆಂಟಿಸಿ..</span></span></div><div><span class="Apple-style-span" style="font-family: 'trebuchet ms';"><span class="Apple-style-span" style="font-size: small;"><br />ಒಂದು ಮಧ್ಯಾನ್ಹ ಹೀಗೆ ಅವಳೊಡನೆ ಚರ್ಚಿಸುತ್ತಿದ್ದೆ, ಕನ್ನಡ ಬರಹಗಾರರ ಬಗ್ಗೆ, ತೇಜಸ್ವಿ ಬಹಳ ಚೆನ್ನಾಗಿ ಬರೀತಾರೆ, ಎಷ್ಟು ಸರಳವಾಗಿ ವಿಷಯ ಮುಟ್ಟಿಸುತ್ತಾರೆ, ಭೈರಪ್ಪನೋರು ಒಂಥರಾ ಸ್ತ್ಯಾಂಡರ್ಡ್, ಸಿಕ್ಕಾಪಟ್ಟೆ ಫಿಲಾಸಪಿ ಓದಿಕೊಂಡಿದ್ದಾರೆ, ಅವರ ಕಾದಂಬರಿಗಳು ಓದಿ ಮುಗಿಸಿದರೆ ಅದೇ ಗುಂಗಿನಲ್ಲಿ ಇರಬೇಕಾಗುತ್ತದೆ ಹಾಗೆ ಹೀಗೆ ಅಂತೆಲ್ಲ.<br /><br />ತಟ್ಟನೆ ಹೇಳಿದಳು "ನೋಡಣ್ಣ ಈ ಕತೆಗಳು ಕಾದಂಬರಿಗಳು ಬರೆಯುವ ಮಂದಿಯನ್ನು ನೋಡಿದ್ದೇನೆ, ಅವರ್ಯಾರು ಮೂಲತ: ಬೆಂಗಳೂರಿನವರಲ್ಲ, ಅವರಿಗೊಂದು ಮೂಲವೆಂಬುದು ಇರುತ್ತದೆ ಅದು ಹಳ್ಳಿಗಳು. ಬೆಂಗಳೂರಿನ ಮೂಲದವರಿಗೆ ಒಳ್ಳೆ ಕತೆ ಹೆಣೆಯಲು ಆಗುವುದಿಲ್ಲವೆನಿಸುತ್ತದೆ" ಎಂದಳು.ನಾನು ಆದಾದ ಬಳಿಕ ಯೋಚಿಸತೊಡಗಿದೆ, ಬೆಳಗೆರೆ ಬಳ್ಳಾರಿಯವರು, ಭೈರಪ್ಪ ಚನ್ನಪಟ್ಟಣದ ಕಡೆಯವರು, ತೇಜಸ್ವಿ ಮೂಡಿಗೆರೆಯವರು, ಕಾಯ್ಕಿಣಿ ಗೋಕರ್ಣದವರು. ಅರೆರೆ ನನಗೆ ತಿಳಿದವರು ಬೆಂಗಳೂರಿನವರು ಯಾರು ಇಲ್ಲ!! ತಕ್ಷಣ soft soft software ಕತೆಗಳನ್ನು ಬರೆಯುವ ವಸುಧೇಂದ್ರರಿದ್ದಾರಲ್ಲ ಎಂದು ನಿರಾಳವಾಯಿತು. ನಾನು ಅದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಾರಣ ಅವರ ಕತೆಗಳು ಹೆಚ್ಚು ಇಷ್ಟವಾಗುತ್ತದೆ, ಕಾರಣ ಅದು ನಮಗೆ ಹತ್ತಿರವಾಗಿರುತ್ತದೆ. ಅವರ "ಎಲ್ಲರ ಮನೆ ಕಾರಿಗೂ ನೆಗ್ಗು" ಎಂಬ ಲೇಖನವನ್ನ ಪತ್ರಿಕೆಯಲ್ಲಿ ಓದಿದ್ದೆ. ಇಡೀ ಪತ್ರಿಕೆಯನ್ನ ಜತನವಾಗಿ ಇಂದಿಗೂ ಕಾಪಿಟ್ಟುಕೊಂಡಿದ್ದೇನೆ, ಅಷ್ಟು ನಕ್ಕಿದ್ದೇನೆ. ಒಬ್ಬರಾದರೂ ಸಿಕ್ಕರಲ್ಲ ಎಂದು ಅವರ ಪುಸ್ತಕ ತೆರೆದು ನೋಡಿದರೆ "ಬಳ್ಳಾರಿಯ ಸಂಡೂರಿನಲ್ಲಿ ಜನನ" ನೋಡಿ ನಿರಾಶನಾದೆ. ಉಹೂ ಬೆಂಗಳೂರಿನವರು ಸಿಗಲೇ ಇಲ್ಲ.<br />ಮತ್ತೆ ಹುಡುಕಿ ಹುಡುಕಿ ಸಾಕಾಯಿತು. ನಿಮಗಾರಾದರು ಗೊತ್ತಿದ್ದರೆ ತಿಳಿಸಿ.</span></span></div><div><span class="Apple-style-span" style="font-family: 'trebuchet ms';"><span class="Apple-style-span" style="font-size: small;"><br />ಪಟ್ಟಣಗಳಲ್ಲಿ ದೊಡ್ಡ ದೊಡ್ಡ ಶಹರಗಳಲ್ಲಿ ಹುಟ್ಟಿ ಬೆಳೆದವರಿಗೆ ಕತೆಗಳು ಏಕೆ ಹುಟ್ಟುವುದಿಲ್ಲವೋ ನಾ ಕಾಣೆ. ನಾನು ಹಲವಾರು ಪ್ರಯತ್ನಿಸಿದ್ದೇನೆ, ಸಣ್ಣ ಕತೆಗಳು ಬರೆಯಲು. ರಭಸವಾಗಿ ಬೈಕ್ ಓಡಿಸುವಾಗ ಯಾವುದೋ ತಿರುವಿನಲ್ಲೋ ಸಿಗ್ನಲಿನಲ್ಲೋ ಕತೆ ಹುಟ್ಟಿಕೊಂಡಿರುತ್ತದೆ. ಲೋಕದ ಚಿಂತೆ ಮರೆತು ಕತೆಗೆ ರೆಕ್ಕೆ ಪುಕ್ಕ ಕಟ್ಟಲು ಕೂತಿದ್ದೇನೆ. ಬೈಕ್ ಪಾಡಿಗೆ ರಭಸವಾಗಿ ಹೋಗುತ್ತಿರುತ್ತದೆ ಕತೆಯ ಓಘ ಕೂಡ ಅದೇ ರಭಸದಲ್ಲಿ ಬೆಳೆಯುತ್ತಿರುತ್ತದೆ. "ಒಂದು ಮುಂಜಾವಿನಲ್ಲಿ ಆತ ಹಳ್ಳಿಯಿಂದ ಹೊರಟ, ಮನೆಯಲ್ಲಿ ಇನ್ನು ಇರಲಾಗುವುದಿಲ್ಲವೆಂದು ನಿರ್ಧರಿಸಿದ, ಮನೆಯ ಕಿರುಕುಳ ಸಾಕೆಂದು .........." ಹೀಗೆ ಹಲವು ಸಾಲುಗಳು. ಮತ್ತೆ ಕತೆ ಆರಂಭಿಸಲು ಯಾವುದೋ ಹಳ್ಳಿ ಹೆಸರನ್ನು ತಡಕಾಡುತ್ತಿರುತ್ತೇನೆ. ಜೀವಮಾನದಲ್ಲೇ ಒಂದು ಹಳ್ಳಿಯನ್ನೂ ಸರಿಯಾಗಿ ನೋಡದ, ಅಲ್ಲಿನ ಪರಿಸರ ತಿಳಿಯದ ನಾನು ಕತೆ ಹೇಗೆ ಬರೆಯಲು ಸಾಧ್ಯ?M G road ಶುರುವಾಗುವ ಹೊತ್ತಿಗೆ ಶುರುವಾಗುವ ಕತೆ Corporation ಬಳಿ ಬರುವುದರೊಳಗಾಗಿ ರೆಕ್ಕೆ ಪುಕ್ಕ ಸರಿಯಾಗಿ ಅಂಟಿಕೊಳ್ಳದೆ ಕತೆ ಸತ್ತಿರುತ್ತದೆ, ಬೈಕ್ ನ ವೇಗವೂ ಕಮ್ಮಿಯಾಗಿರುತ್ತದೆ. ಕತೆ ಬರೆಯಲು ಮನಸಿನ್ನೂ ಮಾಗಿಲ್ಲವೆಂದು ಸುಮ್ಮನಾಗುತ್ತೇನೆ. ತೇಜಸ್ವಿಯವರ "ಚಿದಂಬರ ರಹಸ್ಯ" ಓದಿ ಅದರಲ್ಲಿ ಬರುವ ಲಂಟಾನದ ಜಿಗ್ಗು ತಿಳಿಯಲು ನಾನು ಪಟ್ಟ ಹರಸಾಹಸ ಅರುಣನಿಗೆ ಮಾತ್ರ ಗೊತ್ತು. ರಂಗಶಂಕರದಲ್ಲಿ ನಾಟಕವನ್ನು ಏರ್ಪಡಿಸಿದಾಗ ನಾನು ಕಾಯುತ್ತಲಿದ್ದು ಲಂಟಾನದ ಜಿಗ್ಗು ನೋಡಲೆಂದೆ. ಮುಳ್ಳಯ್ಯನಗಿರಿ ಚಾರಣದಲ್ಲಿ ಅರುಣ ತೋರಿಸಿದ್ದ "ಇದೇ ಕಣೊ ಲಂಟಾನದ ಜಿಗ್ಗು" ಎಂದು..ಇನ್ನು ಸಮಾಧಾನವಾಗಿಲ್ಲ. ತೇಜಸ್ವಿಯರ ಕತೆಗಳ ಪಾತ್ರಗಳೇ ತಿಳಿಯಲು ಇಷ್ಟು ಒದ್ದಾಡಿದರೆ ನಾನು ಹೇಗೆ ತಾನೆ ಕತೆ ಬರೆಯಬಲ್ಲೆನು?</span></span></div><div><span class="Apple-style-span" style="font-family: 'trebuchet ms';"><span class="Apple-style-span" style="font-size: small;"><br />ಕನ್ನಡದಲ್ಲಿ ಆರುನೂರಕ್ಕೂ ಹೆಚ್ಚು ಬ್ಲಾಗುಗಳಿದೆ. ಅದರಲ್ಲಿ ಬೆಂಗಳೂರಿನವರೆಂದರೆ ಎಂದರೆ ಒಂದಂಕಿಯಲ್ಲಿ ಎಣಿಸಿಬಿಡಬಹುದು. ಎಲ್ಲರಿಗೂ ಬೇರೆಯ ಮೂಲವೊಂದಿರುತ್ತದೆ. ಅದಕ್ಕಾಗಿ ಕತೆಗಳು ಹುಟ್ಟುತ್ತವೆ ಎನಿಸುತ್ತಿದೆ ನನಗೆ. ಒಂದಷ್ಟು ಹಳ್ಳಿಗಳು, ಬೆಟ್ಟಗಳು, ಊರು ಕೇರಿ ಸುತ್ತಿ ಬಂದರೆ ಕತೆಗಳನ್ನ ಬರೆಯಬಹುದೇನೊ? ಬರೆದರೆ ಖಂಡಿತಾ ನಿಮ್ಮ ಮುಂದಿಡುತ್ತೇನೆ.<br /><br /></span></span><span class="Apple-style-span" style="font-weight: bold;"><span class="Apple-style-span" style="font-family: 'trebuchet ms';"><span class="Apple-style-span" style="font-size: small;">ವಿ.ಸೂ :</span></span></span><span class="Apple-style-span" style="font-family: 'trebuchet ms';"><span class="Apple-style-span" style="font-size: small;"> ಇಲ್ಲಿ ಬೆಂಗಳೂರಿನವರು ಏಕೆ ಕತೆ ಬರೆಯಲಾಗುತ್ತಿಲ್ಲ ಎಂಬುದನ್ನ ತಿಳಿಯಲು ಯತ್ನಿಸಿರುವದರ ಬಗ್ಗೆ ಬರೆದಿದ್ದೇನಷ್ಟೆ, ಬೇರೆ ಊರಿನವರ ಬಗ್ಗೆ ಜೆಲಸಿ ಇದೆಯೆಂದು ಅಪ್ಪಿ ತಪ್ಪಿಯೂ ಕೂಡ ಭಾವಿಸಬೇಡಿ. ಜೈ ಕರ್ನಾಟಕ. </span></span></div>Unknownnoreply@blogger.com19tag:blogger.com,1999:blog-1028483830046744384.post-45418332327284030812008-09-24T22:41:00.007+05:302008-09-24T23:29:47.662+05:30ನಾನೇಕೆ ಬರೆಯುತ್ತಿಲ್ಲ!!??...<a onblur="try {parent.deselectBloggerImageGracefully();} catch(e) {}" href="http://4.bp.blogspot.com/_WoHbqrpm1NE/SNp-oAYDKzI/AAAAAAAABr8/71sTMccUZW0/s1600-h/writing.jpeg"><img style="display:block; margin:0px auto 10px; text-align:center;cursor:pointer; cursor:hand;" src="http://4.bp.blogspot.com/_WoHbqrpm1NE/SNp-oAYDKzI/AAAAAAAABr8/71sTMccUZW0/s320/writing.jpeg" border="0" alt="" id="BLOGGER_PHOTO_ID_5249647541414472498" /></a><span class="Apple-style-span" style="font-family:'trebuchet ms';"><span class="Apple-style-span" style="font-size:small;"><br /></span></span><p style="TEXT-ALIGN: left; MARGIN: 0pt"><span style="color:#000000;"><span class="Apple-style-span" style="font-family:'trebuchet ms';"><span class="Apple-style-span" style="font-size:small;">ಎಸ್. ಎಲ್. ಭೈರಪ್ಪನವರ "ನಾನೇಕೆ ಬರೆಯುತ್ತೇನೆ" ಎಂಬ ಪುಸ್ತಕವನ್ನು ಓದಿ ಮುಗಿಸುವ ಹೊತ್ತಿಗೆ ಇಂತಹುದೊಂದು ಲೇಖನ ಕುಟ್ಟುತ್ತಿದ್ದೇನೆ. ಹೌದು "ನಾನೇಕೆ ಬರೆಯುತ್ತಿಲ್ಲ" ??</span></span></span></p><p style="TEXT-ALIGN: left; MARGIN: 0pt"><span class="Apple-style-span" style="font-family:'trebuchet ms';"><span class="Apple-style-span" style="font-size:small;"><br /></span></span></p> <p style="TEXT-ALIGN: left; MARGIN: 0pt"><span style="color:#000000;"><span class="Apple-style-span" style="font-family:'trebuchet ms';"><span class="Apple-style-span" style="font-size:small;">ಇದು ನನಗನ್ನಿಸಿದ್ದು ಬ್ಲಾಗ್ ಬರೆಯುವುದು ಬಿಟ್ಟು ಸುಮಾರು ಎರಡು ತಿಂಗಳಾಗುವ ಹೊತ್ತಿಗೆ. ಅರುಣ ಚಾಟ್ ನಲ್ಲಿ ಸಿಕ್ಕಾಗಲೆಲ್ಲ ಪಿಂಗಿ ಪಿಂಗಿ ಪಿಂಗಿ "ಬರ್ಯೋ ಇವತ್ತಾದ್ರು" ಎನ್ನುತ್ತಿದ್ದ, ಶ್ರೀಕಾಂತ್ ನನ್ನ ಹಳೆಯ ಬ್ಲಾಗ್ ಲೇಖನದ ಕೊಂಡಿಗಳನ್ನು ಗೆಳೆಯರಿಗೆ ಕಳಿಸಿ ಬ್ಲಾಗ್ update ಆಗಿದೆ ಎಂದು ಸಾರುತ್ತಿದ್ದ!!. ಲಕ್ಷ್ಮಿ "ಕರ್ಮಕಾಂಡ ಪ್ರಭುಗಳೇ , ಕಂಗ್ಲೀಷ್ ನಲ್ಲಿ ಲೇಖನ ಬರೆದು ಕೊಡಿ ಕನ್ನಡಕ್ಕೆ ತರುವ ಜವಾಬ್ದಾರಿ ನನ್ನದು" ಎನ್ನುತ್ತಿದ್ದರು.. ಎಲ್ಲರ ಮಾತಿಗೂ, ಅಪ್ಪಣೆಗೂ, ಬೆದರಿಕೆಗೂ, ಛೀಮಾರಿಗಳಿಗೂ "ದಿವ್ಯ"ಮೌನ ವಹಿಸಿದ್ದೆ. </span></span></span></p> <p style="TEXT-ALIGN: left; MARGIN: 0pt"><span class="Apple-style-span" style="font-family:'trebuchet ms';"><span class="Apple-style-span" style="font-size:small;"><span style="color:#000000;"></span> </span></span></p> <p style="TEXT-ALIGN: left; MARGIN: 0pt"><span style="color:#000000;"><span class="Apple-style-span" style="font-family:'trebuchet ms';"><span class="Apple-style-span" style="font-size:small;">ಹೊಸ ಕೆಲಸ ಹುಡುಕುವ ಗೋಜಿನಲ್ಲೇ ಇವರುಗಳೆಲ್ಲರ ಬ್ಲಾಗುಗಳನ್ನು ಓದುತ್ತಿದ್ದೆ. ಓದುವುದು ಕಮೆಂಟಿಸುವುದು ಇಷ್ಟಕ್ಕೆ ಸೀಮಿತವಾಗಿತ್ತು ನನ್ನ ಬರವಣಿಗೆ. ಇತ್ತ ಅರುಣ consistent ಆಗಿ </span></span><a href="http://parisarapremi.blogspot.com/"><span class="Apple-style-span" style="font-family:'trebuchet ms';"><span class="Apple-style-span" style="font-size:small;">ಪರಿಸರಪ್ರೇಮಿ</span></span></a><span class="Apple-style-span" style="font-family:'trebuchet ms';"><span class="Apple-style-span" style="font-size:small;"> ಮತ್ತು <a href="http://speaktonature.blogspot.com/">S</a></span></span><span class="Apple-style-span" style="font-family:'trebuchet ms';"><span class="Apple-style-span" style="font-size:small;"><a href="http://speaktonature.blogspot.com/">peaktonatur</a></span></span><span class="Apple-style-span" style="font-family:'trebuchet ms';"><span class="Apple-style-span" style="font-size:small;"><a href="http://speaktonature.blogspot.com/">e</a> ನಲ್ಲಿ ಯಾವುದೇ ಅಡೆ ತಡೆಯಿಲ್ಲದೆ ಅಂಕಣಗಳು ಹೊರಹೊಮ್ಮುತ್ತಿತ್ತು, ಲಕ್ಷ್ಮಿಯಂತೂ </span></span><a href="http://www.blogger.com/profile/14869830562465883656"><span class="Apple-style-span" style="font-family:'trebuchet ms';"><span class="Apple-style-span" style="font-size:small;">5-6 ಬ್ಲಾಗುಗಳನ್ನು</span></span></a><span class="Apple-style-span" style="font-family:'trebuchet ms';"><span class="Apple-style-span" style="font-size:small;"> ನಿಭಾಯಿಸುತ್ತಿದ್ದರು, ವಾರಕ್ಕೆ ಎರಡರಂತೆ ಲೇಖನಗಳು ಬರುತ್ತಿದ್ದವು, ಚಾಟ್ ಗೆ ಸಿಕ್ಕಾಗಲೆಲ್ಲ ಪಿಂಗಿ ಪಿಂಗಿ update ಸರಮಾಲೆ ಹೇಳುತ್ತಿದ್ದರು. ಶ್ರೀಕಾಂತ ಆಗಾಗ್ಗೆ </span></span></span></p> <p style="TEXT-ALIGN: left; MARGIN: 0pt"><span style="color:#000000;"><span class="Apple-style-span" style="font-family:'trebuchet ms';"><span class="Apple-style-span" style="font-size:small;"><a href="http://manasinaputagalanaduve.blogspot.com/">ವೈಚಾರಿಕ</a> ಲೇಖನಗಳನ್ನು ಹರಿಯಬಿಡುತ್ತಿದ್ದ ಮತ್ತು ಶ್ರೀನಿವಾಸ </span></span><a href="http://gandabherunda.wordpress.com/"><span class="Apple-style-span" style="font-family:'trebuchet ms';"><span class="Apple-style-span" style="font-size:small;">ಆಂಗ್ಲಭಾಷೆಯಲ್ಲಿ</span></span></a><span class="Apple-style-span" style="font-family:'trebuchet ms';"><span class="Apple-style-span" style="font-size:small;"> ಬರೆಯಲು ಶುರುಮಾಡಿದ್ದ. ಅರೆರೆ ನನ್ನ ಗೆಳೆಯರೆಲ್ಲಾ ಬರೆಯುತ್ತಿದ್ದಾರೆ, ಒಂದರ ಮೇಲೊಂದಂತೆ ಒಂದರ ಮೇಲೊಂದಂತೆ. ಏನಾದರಾಗಲಿ ಕುಪ್ಪಳ್ಳಿ ಪ್ರವಾಸ ಕಥನವನ್ನು ಮುಗಿಸಿಯೇ ಬಿಡುವ ಎಂದು ಕೂತು 10ಸಾಲುಗಳಿಂದ 20ಸಾಲಿಗೆ ಏರಿಸಿಬಿಟ್ಟೆ, ಆ ಜೋಷ್ ನಲ್ಲಿ, ಅಷ್ಟೇ ಅದು ಅಲ್ಲಿಗೆ ನಿಂತುಬಿಟ್ಟಿತು, ಅರುಣನಿಗೆ ಹೇಳಿದೆ "ಕುಪ್ಪಳ್ಳಿ ಲೇಖನ ಬರೀತಿದೀನಿ ಕಣೊ" ಎಂದು ಹಲ್ಲುಕಿರಿಯುತ್ತ. ಯಥಾಪ್ರಕಾರ ಬೈದು ಹೂಂಕರಿಸಿ ಸುಮ್ಮನಾದ. ಈ "ಕುಪ್ಪಳ್ಳಿ" ಪ್ರವಾಸ ಕಥನಕ್ಕೆ ಅರುಣನಿಂದ ಕಾಫಿಯಲ್ಲಿ ವಿಷಬೆರಕೆ ಶ್ರೀಕಾಂತನಿಂದ ಕೊಲೆಬೆದರಿಕೆ ಎಲ್ಲವನ್ನು ಎದುರಿಸಿದ್ದೇನೆ, ಏಕೋ ಏನೋ ಅದು <span class="Apple-style-span" style=" ;font-family:Tunga;">ಅದು ಮುಂದೆ ಹೋಗುತ್ತಿಲ್ಲ <span class="Apple-style-span" style=" ;font-family:'trebuchet ms';">ಕರ್ಮಕಾಂಡ ಬ್ಲಾಗಿಗೆ ಅಲಂಕರಿಸುವ ಯೋಗ ಎಂದಿದೆಯೋ??</span></span></span></span></span></p> <p style="TEXT-ALIGN: left; MARGIN: 0pt"><span class="Apple-style-span" style="font-family:'trebuchet ms';"><span class="Apple-style-span" style="font-size:small;"><span style="color:#000000;"></span> </span></span></p> <p style="TEXT-ALIGN: left; MARGIN: 0pt"><span style="color:#000000;"><span class="Apple-style-span" style="font-family:'trebuchet ms';"><span class="Apple-style-span" style="font-size:small;">ಮತ್ತೆ ಅದೇ ಪ್ರಶ್ನೆಗೆ ಬರೋಣ, ನಾನೇಕೆ ಬರೆಯುತ್ತಿಲ್ಲ?? ಕಾರಣಗಳು ಹಲವಾರು. ಹೊಸಕೆಲಸ ಹುಡುಕುವುದೇ ಮುಖ್ಯವಾಗಿತ್ತು, ಈಗ ಮಾಡುತ್ತಿದ್ದ ಕೆಲಸ ಅನುಕೂಲಕರವಾಗಿರದುದ್ದರ ಪರಿಣಾಮ ಹೊಸತನ್ನು ಹುಡುಕಲೇ ಬೇಕಾದ ಅನಿವಾರ್ಯತೆ ಇತ್ತು. ಅದಕ್ಕಾಗಿ ಸಂದರ್ಶನಗಳಿಗೆ ಅಣಿಯಾಗುತ್ತಲಿದ್ದೆ ಇಷ್ಟು ದಿನವೂ, ಅದಕ್ಕಾಗಿ ಬರವಣಿಯೆಡೆಗೆ ಬರಲಾಗಲಿಲ್ಲ. ಮುಂದಿನ ತಿಂಗಳಿಂದ ಬೇರೆ ಕಂಪೆನಿಗೆ ಹೋಗಲಿದ್ದೇನೆ. ಏಲ್ಲೋ ನಡೆದು ಹೋಗುತ್ತಿರುವಾಗ, ಬೈಕ್ ಓಡಿಸುತ್ತಿರುವಾಗ, ಇನ್ನೇನು ನಿದ್ದೆ ಹತ್ತುತ್ತಿದೆ ಅನ್ನುವಾಗ ಪುಂಖಾನುಪುಂಖವಾಗಿ ಲೇಖನಗಳು ಬಂದಿವೆ, ಎಷ್ಟು ಕೊರೆತ ಎಂದರೆ ಬರೆದುಬಿಡಲೇ ಬೇಕು ಎಂದು ತಡಬಡಿಸಿ ಸಿಸ್ಟಮ್ ಮುಂದೆ ಕೂತ ಕೂಡಲೇ ಎಲ್ಲವೂ ಖಾಲಿ ಖಾಲಿ. ಹೀಗೆಷ್ಟು ಬಾರಿ ಆಗಿದೆಯೋ ಲೆಕ್ಕವಿಟ್ಟಿಲ್ಲ. ಬರೆಯಬೇಕು ಅನಿಸಿದಾಗಲೆಲ್ಲ ಬರೆದುಬಿಟ್ಟಿದ್ದರೆ ಅದರ ಕತೆಯೇ ಬೆರೆಯದಾಗಿರುತ್ತಿತ್ತು, ಸುಮ್ಮನೇ ಶೀರ್ಷಿಕೆಗಳನ್ನು ಹೇಳಿಕೊಂಡು ತಿರುಗಾಡುತ್ತಿದ್ದೆ. ನನ್ನ ಕನ್ನಡ ಕೈಬರಹ ಯಾವುದೇ ಗುಪ್ತಭಾಷೆಗೂ ಕಮ್ಮಿಯಿಲ್ಲದುದ್ದರ ಕಾರಣ ಪೆನ್ನು ಹಿಡಿದು ಪೇಪರಿನ ಮೇಲೆ ಬರೆಯುವ ದುಸ್ಸಾಹಸ ಮಾಡಲಿಲ್ಲ. ಈಗಲೂ ಸಾಕಷ್ಟು ಶೀರ್ಷಿಕೆಗಳು ಹರಿದಾಡುತ್ತಿವೆ. "ನಾನೇಕೆ ಬರೆಯುತ್ತಿಲ್ಲ" ಎಂದು ಮತ್ತೆ ಬರವಣಿಗೆ ಶುರು ಮಾಡಿದ್ದೇನೆ. </span></span></span></p> <p style="TEXT-ALIGN: left; MARGIN: 0pt"><span class="Apple-style-span" style="font-family:'trebuchet ms';"><span class="Apple-style-span" style="font-size:small;"><span style="color:#000000;"></span> </span></span></p> <p style="TEXT-ALIGN: left; MARGIN: 0pt"><span style="color:#000000;"><span class="Apple-style-span" style="font-family:'trebuchet ms';"><span class="Apple-style-span" style="font-size:small;">ನಿಮ್ಮ ಹಾರೈಕೆಯಿರಲಿ. </span></span></span></p>Unknownnoreply@blogger.com13tag:blogger.com,1999:blog-1028483830046744384.post-39816632186622178312008-09-14T10:34:00.002+05:302008-09-14T10:37:15.540+05:30ಸೈಕೊ....<p style="MARGIN: 0pt; TEXT-ALIGN: left"><span style="color:#000000;"><span class="Apple-style-span" style="font-family:'trebuchet ms';"><span class="Apple-style-span" style="font-size: small;">ಚಿತ್ರ ಬಿಡುಗಡೆಯಾಗಬೇಕಿದೆ, ಅಪಾರ ನಿರೀಕ್ಷೆ ಹೊತ್ತಿದ್ದೇನೆ ಚಿತ್ರದ ಬಗ್ಗೆ, ಜಯಂತ್ ಕಾಯ್ಕಿಣಿ ಯುಗಳಗೀತೆಗಳ ರಚನಾಕಾರರಾಗಿ ಹೊರಹುಮ್ಮುತ್ತಿದ್ದಾರೆ. </span></span></span></p> <p style="MARGIN: 0pt; TEXT-ALIGN: left"><span style="color:#000000;"><span class="Apple-style-span" style="font-family:'trebuchet ms';"><span class="Apple-style-span" style="font-size: small;">ನನಗೆ ಬಹಳ ಇಷ್ಟವಾದ ಹಾಡೊಂದನ್ನು ನಿಮ್ಮ ಮುಂದಿರಿಸಿದ್ದೇನೆ. ಗುನುಗಿಕೊಳ್ಳಿ.... </span></span></span></p> <p style="MARGIN: 0pt; TEXT-ALIGN: left"><span class="Apple-style-span" style="font-family:'trebuchet ms';"><span class="Apple-style-span" style="font-size: small;"><span style="color:#000000;"></span> </span></span></p> <p style="MARGIN: 0pt; TEXT-ALIGN: left"><span style="color:#000000;"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;">ಬೆಳದಿಂಗಳಂತೆ ಮಿನು ಮಿನುಗುತ ಬೆಳಕಾಗಿ ಬಂದಿರಲು ನೀನು</span></span></span></span></p> <p style="MARGIN: 0pt; TEXT-ALIGN: left"><span style="color:#000000;"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;">ಅನುರಾಗದಲ್ಲಿ ಹೊಳೆ ಹೊಳೆಯುತ ನಸು ನಾಚಿ ನಿಂದಿರಲು ನೀನು</span></span></span></span></p> <p style="MARGIN: 0pt; TEXT-ALIGN: left"><span style="color:#000000;"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;">ಮರುಳಾದೆ ದಿವ್ಯಸಖಿ ನಿನಗೆ ಪ್ರಣಾಮ, ಅಪರೂಪ ರೂಪಸಿಯೇ ನಿನಗೆ ಪ್ರಣಾಮ </span></span></span></span></p> <p style="MARGIN: 0pt; TEXT-ALIGN: left"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;"><span style="color:#000000;"></span> </span></span></span></p> <p style="MARGIN: 0pt; TEXT-ALIGN: left"><span style="color:#000000;"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;">ತಂಗಾಳಿಯಂತೆ ಸುಳಿ ಸುಳಿಯುತ ಆವರಿಸಿಕೊಂಡಿರಲು ನೀನು</span></span></span></span></p> <p style="MARGIN: 0pt; TEXT-ALIGN: left"><span style="color:#000000;"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;">ಕುಡಿನೋಟದಲ್ಲೆ ನುಲಿ ನುಲಿಯುತ ನೀವರಿಸಿನಿಂದಿರಲು ನೀನು</span></span></span></span></p> <p style="MARGIN: 0pt; TEXT-ALIGN: left"><span style="color:#000000;"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;">ಮನಸೋತೆ ಮೋಹಿತನೆ ನಿನಗೆ ಪ್ರಣಾಮ, ಹಿತವಾದ ಸ್ನೇಹಿತನೆ ನಿನಗೆ ಪ್ರಣಾಮ </span></span></span></span></p> <p style="MARGIN: 0pt; TEXT-ALIGN: left"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;"><span style="color:#000000;"></span> </span></span></span></p> <p style="MARGIN: 0pt; TEXT-ALIGN: left"><span style="color:#000000;"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;">ಕನಸಲ್ಲು ಹುಚ್ಚನಂತೆ ನಿನಗಾಗಿ ಓಡುವೆ, ಮೈಮರೆತು ಸಂತೆಯಲ್ಲೂ ನಿನ್ನನ್ನೆ ಕೂಗುವೆ </span></span></span></span></p> <p style="MARGIN: 0pt; TEXT-ALIGN: left"><span style="color:#000000;"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;">ಒರಗಿರಲು ನಿನ್ನ ಮಡಿಲಲಿ </span></span></span></span></p> <p style="MARGIN: 0pt; TEXT-ALIGN: left"><span style="color:#000000;"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;">ಕಾಗದದ ದೋಣಿಯಲ್ಲಿ ಕಡಲನ್ನು ದಾಟುವೆ, ಗಂಧರ್ವ ಸೀಮೆಯಲ್ಲಿ ಉಯ್ಯಾಲೆ ಜೀಕುವೆ </span></span></span></span></p> <p style="MARGIN: 0pt; TEXT-ALIGN: left"><span style="color:#000000;"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;">ನೀನಿರಲು ನನ್ನಾ ಕತೆಯಲಿ</span></span></span></span></p> <p style="MARGIN: 0pt; TEXT-ALIGN: left"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;"><span style="color:#000000;"></span> </span></span></span></p> <p style="MARGIN: 0pt; TEXT-ALIGN: left"><span style="color:#000000;"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;">ನಾನಿರುವೆ ನಿನ್ನಾ ಜೊತೆಯಲಿ</span></span></span></span></p> <p style="MARGIN: 0pt; TEXT-ALIGN: left"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;"><span style="color:#000000;"></span> </span></span></span></p> <p style="MARGIN: 0pt; TEXT-ALIGN: left"><span style="color:#000000;"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;">ಬೆಳದಿಂಗಳಂತೆ ಮಿನು ಮಿನುಗುತ ||</span></span></span></span></p> <p style="MARGIN: 0pt; TEXT-ALIGN: left"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;"><span style="color:#000000;"></span> </span></span></span></p> <p style="MARGIN: 0pt; TEXT-ALIGN: left"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;"><span style="color:#000000;"></span> </span></span></span></p> <p style="MARGIN: 0pt; TEXT-ALIGN: left"><span style="color:#000000;"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;">ಕಣ್ತುಂಬ ನಿನ್ನ ಅಂದ ಸವಿಯುತ್ತಾ ಕೂಡಲೇ, ಕಂಡಿದ್ದು ನಿಜವೇ ಅಂತ ಮುತ್ತಿಟ್ಟು ನೋಡಲೇ</span></span></span></span></p> <p style="MARGIN: 0pt; TEXT-ALIGN: left"><span style="color:#000000;"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;">ನೀನಿರಲು ನನ್ನಾ ತೊಳಲಿ</span></span></span></span></p> <p style="MARGIN: 0pt; TEXT-ALIGN: left"><span style="color:#000000;"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;">ನಾನೆಂದು ನೋಡದಂತ ಬೆಳಕೊಂದು ಮೂಡಿದೆ ನಿನಗಷ್ಟೆ ಕೇಳುವಂತೆ ಮನಸಿಂದು ಹಾಡಿದೆ </span></span></span></span></p> <p style="MARGIN: 0pt; TEXT-ALIGN: left"><span style="color:#000000;"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;">ಕೈಯಿರಲು ನಿನ್ನಾ ಕೈಯಲಿ </span></span></span></span></p> <p style="MARGIN: 0pt; TEXT-ALIGN: left"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;"><span style="color:#000000;"></span> </span></span></span></p> <p style="MARGIN: 0pt; TEXT-ALIGN: left"><span style="color:#000000;"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;">ನಾನಿರುವೆ ನಿನ್ನಾ ಬಾಳಲಿ</span></span></span></span></p> <p style="MARGIN: 0pt; TEXT-ALIGN: left"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;"><span style="color:#000000;"></span> </span></span></span></p> <p style="MARGIN: 0pt; TEXT-ALIGN: left"><span style="color:#000000;"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;">ಬೆಳದಿಂಗಳಂತೆ ಮಿನು ಮಿನುಗುತ ||</span></span></span></span></p> <p style="MARGIN: 0pt; TEXT-ALIGN: left"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;"><span style="color:#000000;"></span> </span></span></span></p> <p style="MARGIN: 0pt; TEXT-ALIGN: left"><span class="Apple-style-span" style="font-family:'trebuchet ms';"><span class="Apple-style-span" style="font-style: italic;"><span class="Apple-style-span" style="font-size: small;"><span style="color:#000000;"></span> </span></span></span></p>Unknownnoreply@blogger.com6tag:blogger.com,1999:blog-1028483830046744384.post-66889511598814772382008-06-10T17:10:00.005+05:302008-06-10T17:15:14.793+05:30ಶೋ.....ಗಳು<span style="font-family:trebuchet ms;">ಟೀವಿ ವಾಹಿನಿಗಳಲ್ಲಿ ಒಂದು ಕಾರ್ಯಕ್ರಮ ಸ್ವಲ್ಪ ಯಶಸ್ಸು ಗಳಿಸಿದರೆ ಅದನ್ನೇ ಅನುಸರಿಸಿ ಬೇರೆ ವಾಹಿನಿಗಳಲ್ಲಿ ಶುರುವಿಕ್ಕುತ್ತಾರೆ. ಅದಕ್ಕೆ ಉತ್ತಮ ನಿದರ್ಶನ ಈ ಟೀವಿಯಲ್ಲಿ ಪ್ರಸಾರವಾಗುವ "ಎದೆ ತುಂಬಿ ಹಾಡುವೆನು" ಕಾರ್ಯಕ್ರಮ. ಎಂದು ಈ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳಿಂದ ಹಾಡಿಸಲು ಶುರು ಮಾಡಿದರೋ ಬೇರೆ ವಾಹಿನಿಗಳಲ್ಲೂ ಸಹ ಇದೇ ರೀತಿಯ ಕಾರ್ಯಕ್ರಮಗಳನ್ನು ಶುರು ಮಾಡಿದರು. ಈಗ ಯಾವ ಚಾನೆಲ್ ನೋಡಿದರೂ ಇದೇ ಕಾರ್ಯಕ್ರಮಗಳು. ತೀರ್ಪುಗಾರ ವೈವಿಧ್ಯಮಯ ತೀರ್ಪು, ಮಕ್ಕಳ ಕಾಂಪಿಟೇಶನ್, ಹೆತ್ತವರ ಉದ್ವೇಗ, ಚಪ್ಪಾಳೆ. ಎಲ್ಲವೂ ವಾರಕ್ಕೆ ಒಮ್ಮೆ ಬಂದರೆ ಚೆನ್ನ, ದಿನಾ ಅದೇ ಆಗಿಹೋದರೆ ಬೋರ್ ಹೊಡೆಸುತ್ತದೆ.<br /><br />ಕಾರ್ಯಕ್ರಮದ ಉದ್ದೇಶ ಒಳ್ಳೆಯದೇ ಇರಬಹುದು, ಬಾಲ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವುದು ನಿಜಕ್ಕೊ ಶ್ಲಾಘನೀಯ. ಎಲ್ಲವೂ ಹಾಡು ಹಾಡುವುದಕ್ಕೆ ಏಕೆ ಕೇಂದ್ರೀಕೃತವಾಗಿದೆ? ಏಕೆ ಇದೇ ವಾಹಿನಿಗಳು ಚಿತ್ರ ಬರೆಯುವುದಕ್ಕೆ, ಕತೆ, ಕವನ ಹೇಳುವುದಕ್ಕೆ, ವೀಣೆ, ತಬಲ, ಕೊಳಲು ಇನ್ನು ಅನೇಕ ಸಂಗೀತ ಸಾಧನಗಳನ್ನು ನುಡಿಸುವುದಕ್ಕೆ, ಏಕಪಾತ್ರಾಭಿನಯ ಮಾಡುವುದಕ್ಕೆ ದೊಡ್ಡ ಮಟ್ಟದಲ್ಲಿ ವೇದಿಕೆ ಏಕೆ ಎರ್ಪಡಿಸಬಾರದು? ಟೀವಿ ವಾಹಿನಿಗಳನ್ನ ನಡೆಸುವವರಿಗೆ ಇದೂ ಕೂಡ ಹೊಳೆಯುವುದಿಲ್ಲವೆ?<br /><br />ಎಲ್ಲರೂ ಒಂದಕ್ಕೆ ಏಕೆ ಗಂಟು ಬೀಳುತ್ತಾರೆ?<br /><br />ಇವರುಗಳು ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶ ಜನರನ್ನು ತಮ್ಮ ವಾಹಿನಿಯೆಡೆಗೆ ಸೆಳೆಯುವುದೇ ಆಗಿದೆ. ಅದಕ್ಕೆ ಯಶಸ್ಸಿನ ಜಾಡನ್ನೇ ಹಿಡಿಯುತ್ತಾರೆ. ಇನ್ನೂ ಪ್ರವರ್ಧಮಾನಕ್ಕೆ ಬರದ ಹಾಡುಗಾರರೆಲ್ಲರೂ ಆಗಲೇ ಈ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿಬಿಟ್ಟಿದ್ದಾರೆ, ಅವರಿಗೆ ಸಂಗೀತವಾದರೂ ಎಷ್ಟರ ಮಟ್ಟಿಗಿದೆ? ಹಾಡುವ ಮಕ್ಕಳನ್ನು ಅಳೆಯಲು ನಿಜವಾಗಲು ಅವರಿಗೆ ಅರ್ಹತೆ ಇದೆಯೆ? ಸುಮ್ಮನೆ ಸ್ಟಾರ್ ಗಳನ್ನು ತಂದು ಕೂರಿಸಿರುತ್ತಾರೆ. ಈ ಕಾರ್ಯಕ್ರಮಗಳಿಗೆ ಬರುವವರೆಲ್ಲರೂ Celebrityಗಳೇ ಆಗಿರುತ್ತಾರೆ. ಇನ್ನು ತೀರ್ಪು ನೀಡುವ ಸಂಧರ್ಭಗಳಲ್ಲಿ ಎಲ್ಲ ವಾಹಿನಿಗಳಲ್ಲೂ ಒಂದೇ ರೀತಿಯ ಸಂಭಾಷಣೆಗಳು. "ಇಲ್ಲಿ ಯಾರೂ ಸೋತಿಲ್ಲ, ಯಾರೂ ಗೆದ್ದಿಲ್ಲ, ಎಲ್ಲರೂ ಚೆನ್ನಾಗಿಯೇ ಹಾಡಿದ್ದಾರೆ, ನನಗೆ ತೀರ್ಪು ನೀಡುವುದಕ್ಕೆ ನಿಜವಾಗಲೂ ಕಷ್ಟವಾಗುತ್ತಿದೆ" ಎಂದು ಹೇಳುತ್ತಲೆ ಒಬ್ಬರಿಗೆ ಪ್ರಶಸ್ತಿ ನೀಡುತ್ತಾರೆ.<br /><br />ಇನ್ನು ಕೊನೆ ಸುತ್ತಿನಲ್ಲಿ ಪ್ರಶಸ್ತಿ ಕಳಕೊಂಡ ಮಕ್ಕಳು ಅಳುವುದು ಸಹಜ. ಆದರ ಅವರ ಪೋಷಕರೂ ಸಹ ಅಳುತ್ತಿರುತ್ತಾರೆ. feelings ಅರ್ಥ ವಾಗುತ್ತದೆ ನನಗೆ ಆದರೂ ಹೀಗೆ ಅಳುವ ಮಕ್ಕಳ ಜೊತೆ ಅಳುವುದು ಉಚಿತವೆ? ಬಂದು ಮಕ್ಕಳ ಮೈದಡವಿ ಸಮಾಧಾನ ಮಾಡುವುದು ಬಿಟ್ಟು. ಒಮ್ಮೊಮ್ಮೆ ರೇಗಿ ಹೋಗುತ್ತದೆ ಇವೆಲ್ಲವನ್ನು ನೋಡಿದರೆ. ಚಾನೆಲ್ ಬದಲಾಯಿಸಿಬಿಡುತ್ತೇನೆ.<br /><br />ಬರೀ ಇಂತಹ ಕಾರ್ಯಕ್ರಮಗಳನ್ನೇ ಮಾಡುವ ಬದಲು Discovery, National Geographic, Animal Planet, History ಚಾನೆಲ್ ನಲ್ಲಿ ಬರುವ ಕೆಲವು ಒಳ್ಳೆಯ ಕಾರ್ಯಕ್ರಮಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಪ್ರಸಾರ ಮಾಡಬಾರದೇಕೆ?? ಇನ್ನಾದರೂ ಪ್ರಮುಖ ವಾಹಿನಿಗಳು ಒಂದೇ ತೆರನಾದ ಕಾರ್ಯಕ್ರಮಗಳಿಗೆ ಜೋತು ಬೀಳದೆ ಬೇರೆಡೆಗೆ ಗಮನ ನೀಡಿದರೆ ಒಳಿತು.<br /><br />"ಪಾಡವಾ ತೀಯಗಾ ಕಮ್ಮನಿ ಒಕ ಪಾಟ..."</span>Unknownnoreply@blogger.com9tag:blogger.com,1999:blog-1028483830046744384.post-46705643784078896512008-06-10T15:42:00.012+05:302008-06-10T17:21:00.014+05:30ಮುಳ್ಳಯ್ಯನಗಿರಿ<span style="font-family:trebuchet ms;"></span><a href="http://1.bp.blogspot.com/_WoHbqrpm1NE/SE5UDS_rDYI/AAAAAAAABIg/cNdelWv2BZQ/s1600-h/240520081194.jpg"><span style="font-family:trebuchet ms;"><img id="BLOGGER_PHOTO_ID_5210194234529484162" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://1.bp.blogspot.com/_WoHbqrpm1NE/SE5UDS_rDYI/AAAAAAAABIg/cNdelWv2BZQ/s320/240520081194.jpg" border="0" /></span></a><span style="font-family:trebuchet ms;"> ಕಡೇ ಘಳಿಗೆಯ ನನ್ನ ನಿರ್ಧಾರ ಒಂದು ಸುಂದರ ಚಾರಣ ಮಾಡಲು ಅನುವುಮಾಡಿಕೊಟ್ಟಿತು. ಹೋಗದೆ ಬರೀ ಚಿತ್ರಗಳನ್ನು ನೋಡಿದ್ದರೆ ಖಂಡಿತವಾಗಿ ಪರಿತಪಿಸುತ್ತಿದ್ದೆ, ಹೋಗಲಾಗಲಿಲ್ಲವೆಂದು. ಇಂತಹ ಒಂದು ಸುಂದರವಾದ ಸ್ಥಳಕ್ಕೆ ಕರೆದುಕೊಂಡು ಹೋದ ಅರುಣನಿಗೆ Thanks -u... ಇದುವರೆಗೂ ನಾನು ಮಾಡಿದ best trek ಇದು.<br /></span><div><div><div><div><span style="font-family:trebuchet ms;"></span></div><br /><div><span style="font-family:trebuchet ms;">ಈ ಬಾರಿ ನಾವು ಹೋಗುತ್ತಿದ್ದ ಸ್ಥಳ "ಮುಳ್ಳಯ್ಯನಗಿರಿ", ಒಟ್ಟೂ ಐದು ಜನ, ನಾನು, ಅರುಣ್, ಶ್ರೀನಿವಾಸ್, ವಿವೇಕ್ ಮತ್ತು ನಾರಾಯಣ್. ನಾನು, ಅರುಣ್,ವಿವೇಕ್ ಬೆಂಗಳೂರಿನಿಂದ ಹೊರಟೆವು, ಶ್ರೀನಿವಾಸ್ ಮಂಗಳೂರಿನಿಂದ ಹೊರಟಿದ್ದ, ನಾರಯಣ್ ಮೈಸೂರಿನಿಂದ. ಎಲ್ಲರೂ "ಚಿಕ್ಕಮಗಳೂರು" ನಲ್ಲಿ ಭೇಟಿಯಾಗುವುದೆಂದು ನಿರ್ಧರಿಸಿದ್ದೆವು. ಶ್ರೀನಿವಾಸನು ಬೆಳಗಿನ ಜಾವ ಒಂದೂವರೆಗೆಲ್ಲ ಚಿಕ್ಕಮಗಳೂರು ಬಸ್ ನಿಲ್ದಾಣ ತಲುಪಿದ್ದುದ್ದರ ಕಾರಣ ಬಸ್ ನಿಲ್ದಾಣದ ವಲಯನ್ನು ಚೆನ್ನಾಗಿ "ಬೀಟ್" ಹಾಕಿದ್ದ, ಒಂದಷ್ಟು ಫೋಟೋಗಳೂ ಸಹ ಕ್ಲಿಕ್ಕಿಸಿದ್ದ. ಬೆಂಗಳೂರಿನಿಂದ ಹೊರಟ ನಾವು ಮೂವರೂ ಅವನನ್ನು ಮತ್ತು ನಾರಯಣನನ್ನು ಬೆಳಿಗ್ಗೆ 5:30ಗೆ ಅಲ್ಲೇ ಇದ್ದ ಹೋಟೆಲಿನಲ್ಲಿ ಉಪ್ಪಿಟ್ಟು ಸಮೇತರಾಗಿ ಎದುರುಗೊಂಡೆವು. ಶ್ರೀನಿವಾಸ ಬಂದ ಕೂಡಲೇ "ನಮ್ಮಗೆ ಕಾಯದೆ ತಿನ್ನಕ್ಕೆ ಕೂತಿದ್ದೀರೇನೋ" ಎಂದು ಹುಸಿ ಕೋಪವನ್ನು ಹೊರಸೂಸಿದ. </span></div><div><span style="font-family:trebuchet ms;"></span></div><div><span style="font-family:trebuchet ms;"></span></div><div><span style="font-family:trebuchet ms;"></span></div><div><span style="font-family:trebuchet ms;">ಅಲ್ಲಿಂದ ಹೊರಬಂದು "ಬಾಬಾಬುಡನ್ ಗಿರಿ" ಬಸ್ ಗಾಗಿ ಬಂದು ನಿಂತೆವು. ಅಲ್ಲೇ ಒಂದು ಬಸ್ ಇನ್ನು 15-20ನಿಮಿಷದೊಳಗೆ ಹೊರಡಲು ಸಜ್ಜಾಗಿ ನಿಂತಿತ್ತು. ನಾವು ನಮ್ಮ ಟ್ರೆಕ್ ಬ್ಯಾಗುಗಳ ಸಮೇತ ಒಳ ಹೊಕ್ಕೆವು. ಕಂಡಕ್ಟರ್ ಮಹಾಶಯ ಬಂದು ನಿಮ್ಮ ಬ್ಯಾಗುಗಳನ್ನು ಟಾಪ್ ನಲ್ಲಿ ಹಾಕಿ ಎಂದ. ಒಬ್ಬರನ್ನೊಬ್ಬರು ಮುಖ ನೋಡಿ, ಬ್ಯಾಗ್ ಬಿದ್ದು ಗಿದ್ದು ಹೋದರೆ ಏನು ಗತಿ ಮತ್ತೆ ಮೇಲೆ ಬಹಳ ಒದ್ದೆ ಇದ್ದುದರ ಕಾರಣ ಈ ಬಸ್ ಮಿಸ್ ಮಾಡಲು ನಿರ್ಧರಿಸಿದೆವು. ಆದರೂ ಮನಸು ಒಪ್ಪದೆ ಅವರನ್ನು ಮುಂದಿನ ಬಸ್ ಬಗ್ಗೆ ವಿಚಾರಿಸಿದಾಗ 8:30ಗೆ ಎಂದ. ಲೇಟ್ ಆಗುತ್ತದೆಂದು ಮತ್ತೊಮ್ಮೆ ಬಸ್ ಬಳಿ ಬಂದು ನಿಂತೆವು, ಮತ್ತೊಮ್ಮೆ ಕಂಡಕ್ಟರ್ ಮಹಾಶಯ ಬಂದು ಬಸ್ ಟಾಪ್ ನಲ್ಲಿ ಕುಳಿತುಕೊಳ್ಳಿ ಎಂದ. ಬಸ್ ಟಾಪ್ ನಲ್ಲಿ ಪಯಣ ಎಂದು ತಿಳಿದ ಕೂಡಲೇ ಮಜವಾಗಿರುತ್ತದೆಂದು ಎಲ್ಲರೂ ಈ ಬಸ್ ಅನ್ನು ಮಿಸ್ ಮಾಡದಿರಲು ನಿರ್ಧರಿಸಿ ಮೇಲೆ ಹತ್ತಿ ಕುಳಿತೆವು. ಬಸ್ ಟಾಪ್ ಮೇಲೆ ಇದೇ ನನ್ನ ಮೊದಲ ಪಯಣ. ಬೆಳಗಿನ ಜಾವ ಆರುಗಂಟೆ ಹೊತ್ತಿನಲ್ಲಿ ಘಾಟ್ section ನಲ್ಲಿ ಒಂದೂವರೆಗಂಟೆ ಪಯಣ, ಯಾರಿಗುಂಟು ಯಾರಿಗಿಲ್ಲ. ಶ್ರೀನಿವಾಸನು ಬಸ್ ದಿಕ್ಕಿಗೆ ಮುಖ ಮಾಡಿದ್ದರೆ ನಾವೆಲ್ಲ ವಿರುದ್ದ ದಿಕ್ಕಿಗೆ ಮುಖ ಮಾಡಿ ಕುಳಿತಿದ್ದೆವು!!..ಅರುಣ ಬಿದ್ದುಕೊಂಡಿದ್ದ. ಶ್ರೀನಿವಾಸ ಬಸ್ ಹೋಗುತ್ತಿದುರ ದಿಕ್ಕಿಗೆ ಮುಖ ಮಾಡಿದ್ದಿದುರರಿಂದ ಯಾವುದಾದರು ಮರದ ಟೊಂಗೆಗಳು ನಮ್ಮ ತಲೆಗಳಿಗೆ ತಾಗುವಂತಿದ್ದರೆ ಎಚ್ಚರಿಸುತ್ತಿದ್ದ. ಆತ ಹೇಳಿದ ಕೂಡಲೇ ಶಿರಬಾಗಿಸಿಬಿಡುತ್ತಿದ್ದೆವು. ಹಿತವಾದ ಚಳಿಯಿತ್ತು. ಸುತ್ತಲೂ ಪರ್ವತ ತಪ್ಪಲು, ಪಯಣ ಅತ್ಯದ್ಭುತವಾಗಿತ್ತು, ಅನೇಕ ಫೋಟೊಗಳನ್ನು ಶ್ರೀನಿವಾಸನ ಮೊಬೈಲು ಮತ್ತು ವಿವೇಕನ ಕ್ಯಾಮೆರಾ ಸೆರೆ ಹಿಡಿದವು. ಮುಂಜಾವಿನ ಆಹ್ಲಾದಕರ ಪಯಣ ಮುಗಿಸಿ "ಬಾಬಾಬುಡನ್ ಗಿರಿ" ತಲುಪಿದೆವು. ಅಲ್ಲೇ "ದತ್ತ ಪೀಠ" ಇರುವುದೆಂದು ತಿಳಿಯಿತು, ಹೋಗಲಿಲ್ಲ. ಈ ದತ್ತ ಪೀಠದ ವಿಶೇಷತೆ ಎಂದರೆ ಹಿಂದೂಗಳು ಮತ್ತೆ ಮುಸ್ಲಿಮರು ಒಟ್ಟಿಗೆ ಭೇಟಿಕೊಡುವ ಸ್ಥಳ ಎಂದು ಅರುಣ ವಿವರಿಸಿದ. <img id="BLOGGER_PHOTO_ID_5210196391079213698" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://4.bp.blogspot.com/_WoHbqrpm1NE/SE5WA0xMeoI/AAAAAAAABIo/l-srwExrqzQ/s320/24052008900.jpg" border="0" /></span></div><div><span style="font-family:trebuchet ms;"></span></div><div><span style="font-family:trebuchet ms;">ಅಲ್ಲಿಂದ "ಮಾಣಿಕ್ಯಧಾರ" ವನ್ನು ನೋಡಲು ಹೊರಟೆವು. ಸುಮಾರು 20ನಿಮಿಷಗಳ ನಡಿಗೆ. ಅಲ್ಲಿ ನೀರು ಬೀಳುವುದು ನೋಡಲು ಚೆನ್ನಾಗಿಯೇನೊ ಇದೆ, ಸಣ್ಣದಾಗಿ ಝರಿಯಂತೆ ಒಂದು ಬಂಡೆ ಮೇಲಿನಿಂದ ಬೀಳುತ್ತಿರುತ್ತದೆ. ಆದರೆ ಅದಕ್ಕೆ ಭೇಟಿ ನೀಡುವ ಜನಗಳು ಮಾತ್ರ ಆ ಜಾಗವನ್ನು ಗಬ್ಬೆಬ್ಬಿಸಿಬಿಟ್ಟಿದ್ದಾರೆ. ಸ್ನಾನ ಮಾಡಿದ ಮೇಲೆ ಅಲ್ಲೆ ಬಟ್ಟೆ ಬಿಸಾಕಬೇಕಂತೆ, ಒಳ್ಳೆ ತಿಪ್ಪೆಯಂತಿತ್ತು, ಒಂದಷ್ಟು ದುರ್ನಾತ ಬೆರೆ ಸೂಸುತ್ತಿತ್ತು, ಬೇಗ ಅದನ್ನು ವೀಕ್ಷಿಸಿ ಅಲ್ಲಿಂದ ಆದಷ್ಟು ಬೇಗ ಹೊರಡಲನುವಾದೆವು. ನಮ್ಮ ಪ್ಲಾನ್ ಇದ್ದದ್ದು ಮಾಣಿಕ್ಯಧಾರದಿಂದ ಬಾಬಾಬುಡನ್ ಗಿರಿ ಗೆ ವಾಪಸ್ ಬಂದು ಅಲ್ಲಿಂದ ಬಸ್ ಹಿಡಿದು ಸ್ವಲ್ಪ ದೂರ ಕ್ರಮಿಸಿ ಅಲ್ಲಿಂದ ಮುಳ್ಳಯ್ಯನಗಿರಿಗೆ ಚಾರಣ ಮಾಡುವೆದೆಂದಿದ್ದೆವು. ಮಾಣಿಕ್ಯಧಾರಾದ ಹೋಟೆಲೊಂದರಲ್ಲಿ ವೆಜಿಟಬಲ್ ಪಲಾವ್ ತಿಂದ ಮೇಲೆ ಮುಂಚೆ ಮಾಡಿದ್ದ ಪ್ಲಾನ್ ಅನ್ನು ಅಲ್ಲಿಗೆ ಡ್ರಾಪ್ ಮಾಡಲು ನಿರ್ಧರಿಸಿದೆವು. ಹೋಟೆಲಿನಲ್ಲಿ ಮನಸೋಇಚ್ಚೆ ತಿಂದ ಮೇಲೆ ಮಾಣಿಕ್ಯಧಾರದಿಂದಲೇ ಮುಳ್ಳಯ್ಯನಗಿರಿ ಗೆ ಚಾರಣಗೈಯ್ಯಲ್ಲು ನಿರ್ಧರಿಸಿದೆವು. ವೆಜಿಟಬಲ್ ಪಲಾವ್ ಬುತ್ತಿ ಕಟ್ಟಿಸಿಕೊಂಡು ಮುಳ್ಳಯ್ಯನಗಿರಿ ಕಡೆಗೆ ಹೊರಟೆವು.<br /></span></div><span style="font-family:trebuchet ms;"><img id="BLOGGER_PHOTO_ID_5210200964423776626" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://1.bp.blogspot.com/_WoHbqrpm1NE/SE5aLBzgeXI/AAAAAAAABJA/RMs4FdU1cbs/s320/24052008231.jpg" border="0" /></span> <div><span style="font-family:trebuchet ms;">ಅಲ್ಲಿಂದ ಸುಮಾರು 5-6 ಗಂಟೆಗಳ ಚಾರಣ ಮಾಡಿದೆವು, ಅದರ ವಿವರಣೆ ಕೊಡಲು ಪದಗಳಿಗೆ ತಡಕಾಡುತ್ತಿದ್ದೇನೆ, ಅಷ್ಟು ಸೊಗಸು, ಅಷ್ಟು ಸುಂದರ, ಅಷ್ಟು ರಮಣೀಯ, ಅಷ್ಟು ರುದ್ರ. ಸುತ್ತಮುತ್ತಲೆಲ್ಲವೂ ಹಸಿರುಮಯ. ನಮ್ಮ ಸದ್ದು ಬಿಟ್ಟು ಮಿಕ್ಕೆಲ್ಲವೂ ಶಾಂತ. ಬಹಳ ಆಹ್ಲಾದಕರವಾಗಿತ್ತು, ಬಿಸಿಲೂ ಕೂಡ ಅಷ್ಟಾಗಿರಲಿಲ್ಲ, ಮೋಡಗಳ ಮೇಲಿದ್ದೆವು. ಅಲ್ಲೆ ಪಕ್ಕದ ಬೆಟ್ಟದಲ್ಲಿ ಮಳೆಯಾಗುತ್ತಿತ್ತು, ಅತ್ತ ಕಡೆಯಿಂದ ಬೀಸುವ ಗಾಳಿ ಆ ಮಳೆಯ ಹನಿಗಳನ್ನು ನಮ್ಮ ಮೇಲೆ ಸಿಂಪಡಿಸುತ್ತಿದ್ದವು. ಸ್ವರ್ಗಸದೃಶವೇ ಸರಿ. ಒಂದಾದ ಮೇಲೊಂದು ಬೆಟ್ಟಗಳನ್ನು ಹತ್ತುತ್ತಿದ್ದೆವು, ಹಾಗೆ ಇಳಿಯುತ್ತಿದ್ದೆವು. ದೂರದಲ್ಲಿ ನಮ್ಮ ಗಮ್ಯ ಮುಳ್ಳಯ್ಯನಗಿರಿ ಕಾಣುತ್ತಲಿತ್ತು. ಹಿತವಾದ ತಂಗಾಳಿಯಲ್ಲಿ ನಿಧಾನವಾಗಿ ಸಾಗುತ್ತಿದ್ದೆವು. ಮಧ್ಯ ಒಂದು ಬೆಟ್ಟ ಬಹಳ ಕಡಿದಾಗಿತ್ತು, ಸ್ವಲ್ಪ ಆಯ ತಪ್ಪಿದರೂ ಪ್ರಪಾತಕ್ಕೆ ಬೀಳುವ ಸಂಭವ. ಹಿಂದೆಂದೂ ಈ ರೀತಿಯ ಸಾಹಸಗಳನ್ನು ಮಾಡಿರಲಿಲ್ಲ, ನಾವೆಲ್ಲರೂ ಆ ಕಡಿದಾದ ಜಾಗಗಳಲ್ಲಿ ಹತ್ತಿ ಇಳಿಯುತ್ತಿದ್ದು ನಮ್ಮ ಮನೆಯವರು ನೋಡಿದ್ದರೆ ನನ್ನ ಮುಖಸ್ತುತಿ ಮಾಡುತ್ತಿದ್ದರು. ಬಹಳ ರೋಮಾಂಚಕಾರಿಯಾಗಿತ್ತು, ಸಿಕ್ಕಾಪಟ್ಟೆ "ಎಂಜಾಯ್" ಮಾಡಿದೆ. ಎಲ್ಲ ಚಾರಣಗಳಲ್ಲೂ ಈ ರೀತಿಯ ಕಡಿದಾದ ಪ್ರದೇಶಗಳಿರಬೇಕು, ಮೈಯೆಲ್ಲ ಕಣ್ಣಾಗಿ ಬಹಳ ಎಚ್ಚರ ವಹಿಸಿ ಹತ್ತಿ ಇಳಿಯುವುದರಲ್ಲಿ ಬಹಳ ಥ್ರಿಲ್ಲ್ ಇರುತ್ತದೆ. ಶ್ರೀನಿವಾಸನ ಮೊಬೈಲು ಮತ್ತೆ ವಿವೇಕನ ಕ್ಯಾಮೆರ ಎಡೆಬಿಡದೆ ಅಲ್ಲಿ ಇದ್ದುದುವೆಲ್ಲದನ್ನು ದಾಖಲಿಸುವ ಯತ್ನದಲ್ಲಿದ್ದವು. ಅರುಣ ಮತ್ತೆ ಶ್ರೀನಿವಾಸ ಕನ್ನಡ ಹಾಡುಗಳನ್ನು ಆಂಗ್ಲೀಕರಿಸುವ ಯತ್ನದಲ್ಲಿದ್ದರು, ವಿವೇಕ್ ಹೇಳುವಂತೆ ಈ ಹಾಡುಗಳನ್ನೆಲ್ಲ ಬರೆದ ಸಾಹಿತಿಗಳು ಇವರೀರ್ವರ ಆಂಗ್ಲೀಕರಣ ಕೇಳಿದ್ದರೆ ಅಲ್ಲಿದ್ದ ಪರ್ವತವೊಂದರಿಂದ ಸಾಲು ಸಾಲಾಗಿ ಧುಮುಕುತ್ತಿದ್ದರು. ದಾರಿ ಉದ್ದಕ್ಕೂ ಎಡೆಬಿಡದೆ ಇವರೀರ್ವರ ಆಂಗ್ಲೀಕರಣ ಸಾಗುತ್ತಲೇ ಇತ್ತು. ಇನ್ನೇನು ಮುಳ್ಳಯ್ಯನಗಿರಿ ತಲುಪುವುದಕ್ಕೆ 10-15ನಿಮಿಷಗಳು ಇರುವಾಗ ಮಳೆ ಶುರುವಾಯಿತು. ಹಿಂದೆಂದೂ ಮಳೆಯಲ್ಲಿ ಚಾರಣ ಮಾಡಿರಲಿಲ್ಲ, ದಣಿದ ದೇಹಕ್ಕೆ ಮಳೆ ನೀರು ಬಿದ್ದಾಗ ಆಗುವ ಆನಂದ ವರ್ಣನಾತೀತ. ಬಾಟಲಿಗಳಲ್ಲಿ ತಂದ ಕುಡಿಯುವ ನೀರು ಖಾಲಿಯಾಗಿತ್ತು, ಮಳೆ ನೀರಿಗೆ ಬಾಯ್ತೆರೆದು ದಾಹ ನೀಗಿಸಿಕೊಳ್ಳುವ ಯತ್ನ ಮಾಡಿದೆ. ನಾನು , ವಿವೇಕ್ ಮತ್ತು ನಾರಯಣ್ ಮುಳ್ಳಯ್ಯನಗಿರಿ ತುದಿಯನ್ನು ಮೊದಲು ಮುಟ್ಟಿದೆವು, ಅಲ್ಲಿ ಯಾರೋ ನಿಂತಿದ್ದವರು ನಾವು ಬೆಟ್ಟ ಹತ್ತಿ ಬಂದಿದ್ದು ನೋಡಿ "ಎಲ್ಲಿಂದ ಬರುತ್ತಿದ್ದೀರಿ" ಎಂದರು.. </span></div><div><span style="font-family:trebuchet ms;"></span></div><div><span style="font-family:trebuchet ms;">ನಾನು "ಬಾಬಾ ಬುಡನ್ ಗಿರಿಯಿಂದ" ಎಂದೆ..<br /></span></div><div><span style="font-family:trebuchet ms;">"ಹೇಗೆ" ಎಂದರು.. </span></div><div><span style="font-family:trebuchet ms;"></span></div><div><span style="font-family:trebuchet ms;">"ನಡಕೊಂಡು" ಎಂದೆ..<br /><br />ಇಬ್ಬರೂ ಕಣ್ಣಗಲಿಸುತ್ತ ನಿಂತಿದ್ದರು.....ಅಷ್ಟರಲ್ಲಿ ಅರುಣ ಮತ್ತೆ ಶ್ರೀನಿವಾಸ ಒಡಗೂಡಿದರು...ಮುಂದೆ ಸಾಗಿದೆವು.. </span></div><span style="font-family:trebuchet ms;"><img id="BLOGGER_PHOTO_ID_5210199242852452098" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://2.bp.blogspot.com/_WoHbqrpm1NE/SE5Ym0c6xwI/AAAAAAAABIw/VmV5wYVGbA0/s320/240520081196.jpg" border="0" /> ಬೆಟ್ಟದ ಮೇಲೆ ಸಣ್ಣ ದೇವಸ್ಥಾನ ವಿದೆ, ಅದರ ಅರ್ಚಕರು ಅರುಣನಿಗೆ ಪರಿಚಯ, ಅವರ ಮನೆಯಲ್ಲೇ ಉಳಿದುಕೊಳ್ಳಲು ಅವಕಾಶವಿತ್ತರು. ಸಮಯ ಸುಮಾರು ಐದಿರಬಹುದು, ಮುಖ ತೊಳೆದು ಅವರು ಮಾಡಿಕೊಟ್ಟ ಅತ್ಯದ್ಭುತವಾದ ಕಾಫಿ ಕುಡಿದೆವು.. ಅಹಾ ಸೂಪರ್ ಕಾಪಿ...<br /><br />ಸೂರ್ಯಾಸ್ತವನ್ನು ವೀಕ್ಷಿಸಿ ಮತ್ತೆ ಒಳಗೆ ಬಂದು ಕುಳಿತಿದ್ದೆವು, ಏನು ಮಾಡಬೇಕೆಂದು ತೋಚಲಿಲ್ಲ, ಮತ್ತೊಂದು ಸುತ್ತು ಕಾಪಿ ಕೇಳಲಾ ಎಂದು ಅರುಣನಿಗೆ ಕೇಳಿದೆ..<br /><br /></span><div><span style="font-family:trebuchet ms;">"ಹೋಗೊ ನಾಚಿಕೆ ಎಲ್ಲಾ ಬಿಟ್ಟು ಕೇಳು, ಏನು ಅನ್ಕೊಳಲ್ಲ ಮಾಡ್ಕೊಡ್ತಾರೆ" ಅಂದ...<br /><br />ಹಾಗೆ ಅಳುಕುತ್ತಲೇ ಕೇಳಿದೆ.."ಆಂಟೀ ಇನ್ನು ಸ್ವಲ್ಪ ಕಾಫಿ ಬೇಕಿತ್ತು" ಎಂದು..<br /><br />ಪಾಪ ಮಾಡಿಕೊಟ್ಟರು ಬೇಸರ ಪಟ್ಟಿಕೊಳ್ಳದೆ...ಮತ್ತೊಂದು ಸುತ್ತು ಕಾಫಿ ಸಮಾರಾಧನೆ ಸಾಗಿತು.<br /><br />ಎಂಟೂವರೆಗೆಲ್ಲ ಊಟ ಮಾಡಿ ಮತ್ತೊಂದು ಸುತ್ತು ಹಾಕಲು ಹೊರ ಬಂದೆವು.<br /><br />ಹೊರಗಡೆ ತುಂಬಾ ಚಳಿಯಿತ್ತು. ಆ ದೇವಸ್ಥಾನದ ದ್ವಾರದಲ್ಲಿ ಸ್ವಲ್ಪ ಜಾಗವಿತ್ತು, ಅಲ್ಲೆ ಟೆಂಟ್ ಹಾಕೋಣವೆಂದುಕೊಂಡೆವು, ಆದರೆ ರಾತ್ರಿ ಮಳೆ ಶುರುವಾದರೆ ತೊಂದರೆಯಾಗುವುದೆಂದು ಯೋಚಿಸಿ ಒಳಗಡೆಯೆ ಮಲಗಲು ಹೊರಟೆವು.<br />ರಾತ್ರಿ ಹೊತ್ತು ಆಕಾಶದ ತುಂಬಾ ಚುಕ್ಕಿಗಳ ಚಿತ್ತಾರ, ಎಲ್ಲೆಲ್ಲೂ ನಕ್ಷತ್ರಗಳು, ಹಿತವಾದ ಗಾಳಿ, ಆಗಾಗ್ಗೆ ಮಂಜು ಮುಸುಕುತ್ತಿತ್ತು, ನಗರ ಜೀವನ ಜಂಜಡಗಳಿಂದ ತಪ್ಪಿಸಿಕೊಂಡು ತಿಂಗಳಿಗೆ ಒಮ್ಮೆಯಾದರೂ ಇಲ್ಲಿಗೆ ಬರಬೇಕೇನಿಸುತ್ತಿತ್ತು. ಬೆಟ್ಟದ ಮೇಳಿಂದ ನೋಡಿದರೆ ಚಿಕ್ಕಮಗಳೂರು ಕಾಣಿಸುತ್ತಿತ್ತು, ಝಗಮಗಿಸುವ ದೀಪಗಳು, ಇಡೀ ಊರಿಗೆ ಕರೆಂಟ್ ಹೋದರೆ ನೋಡಲು ಹೇಗಿರುತ್ತದೆ ಎಂದು ಆಲೋಚಿಸುತ್ತ ಬಂದು ಮಲಗಿದೆ.<br /><br />ಬೆಳಿಗ್ಗೆ ಅರುಣ ಎಬ್ಬಿಸಿದ್ದು ನೆನಪಿದೆ, "ಎಳೊ ಟೈಮ್ ಆಯ್ತು" ಎಂದು..ಆತನ ಮಾತಿಗೆ ಕಿವಿಗೊಡದೆ ಮತ್ತೆ ತಿರುಗಿ ಮಲಗಿಬಿಟ್ಟೆ.<br />ಆಮೇಲೆ ತಿಳಿಯಿತು ಸೂರ್ಯೋದಯಕ್ಕೆ ಎಬ್ಬಿಸಿದರು ಎಂದು..ಎಬ್ಬಿಸುವಾಗ ಒಬ್ಬರೂ ಹೇಳಲಿಲ್ಲ ಸೂರ್ಯೋದಯಕ್ಕೆ ಹೋಗುತ್ತಿದ್ದೆವೆಂದು, Hopeless fellows..</span></div><div><span style="font-family:trebuchet ms;"></span></div><div><span style="font-family:trebuchet ms;"></span></div><div><span style="font-family:trebuchet ms;">ನಾನು ಮತ್ತೆ ನಾರಾಯಣ್ ಸೂರ್ಯೋದಯವನ್ನು ಮಿಸ್ ಮಾಡಿದೆವು..<br /><br />ಮುಂಜಾವಿನ ಕಾರ್ಯಗಳನ್ನು ಮುಗಿಸಿ ತಿಂದು ತಿಂದು ಮತ್ತೆ ಚಿಕ್ಕಮಗಳೂರಿಗೆ ಹೊರಟೆವು, downhill trek. ಯಾಕೋ ಕಾಲು ಹಿಡಿದುಕೊಂಡಿತ್ತು, ಇಳಿಯಲು ತುಸು ಕಷ್ಟವಾಗುತ್ತಿತ್ತು. ಬಹಳ ಸುಸ್ತಾಗುತ್ತಿತ್ತು ಕೂಡ.. ಕಾಫಿ ಏಸ್ಟೇಟ್ ನಡುವೆಯೆಲ್ಲ ಹಾದು ಹೋದೆವು. ಮಧ್ಯ ಮಧ್ಯ ಸಿಕ್ಕ ಸಣ್ಣ ಝರಿಗಳಿಂದ ನೀರು ಕುಡಿಯುತ್ತಾ, ದಾರಿ ಹುಡುಕುತ್ತ ಸಾಗುತ್ತಿದ್ದೆವು. ಮತ್ತೆ ಶ್ರೀನಿವಾಸ ಮತ್ತೆ ಅರುಣ ಆಂಗ್ಲೀಕರಣ ಶುರು ಹಚ್ಚಿಕೊಂಡಿದ್ದರು. ಸ್ವಲ್ಪ ದೂರ ನಡೆದು ಮುಖ್ಯರಸ್ತೆಗೆ ಬಂದು ಒಬ್ಬೊಬ್ಬರು ರಸ್ತೆಯ ಇಕ್ಕೆಲಗಳಲ್ಲಿ ಕುಳಿತುಬಿಟ್ಟೆವು, ಯಾವುದಾದರೂ ಗಾಡಿ ಬಂದರೆ ಹೋಗೋಣವೆಂದು. ಐದು ನಿಮಿಷ ಕಳೆಯುವುದರೊಳಗೆ ಲಗ್ಗೇಜ್ ಆಟೋ ನಮ್ಮನ್ನು ಹತ್ತಿಸಿಕೊಂಡಿತು, ಅದರಲ್ಲೆ ಮತ್ತೊಂದು ಫೋಟೋ ಸೆಷನ್ ಮುಗಿಸಿ ಚಿಕ್ಕಮಗಳೂರಿಗೆ ಬಂದೆವು...ಸಮಯ 12ಗಂಟೆ.<br /></span></div><span style="font-family:trebuchet ms;"><img id="BLOGGER_PHOTO_ID_5210200062305463010" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://2.bp.blogspot.com/_WoHbqrpm1NE/SE5ZWhJvauI/AAAAAAAABI4/RKPT8djbw_g/s320/250520081208.jpg" border="0" /><br />ಮಧ್ಯಾನ್ಹದ ಊಟ ಮುಗಿಸಿ ಎಲ್ಲರೂ ಬೀಳ್ಕೊಂಡೆವು. ಶ್ರೀನಿವಾಸ ಮಂಗಳೂರಿನ ಬಸ್, ನಾರಯಣ್ ಮೈಸೂರಿನ ಬಸ್ ಹತ್ತಿದರು. ನಾವು ಬೆಂಗಳೂರಿನ ಬಸ್ ಹತ್ತಿ ಕುಳಿತೆವು. ಸಂಜೆ 7ಕ್ಕೆ ಬೃಹತ್ ಬೆಂಗಳೂರಿಗೆ ಯಾವುದೇ ತೊಂದರೆಯಿಲ್ಲದೆ ತಂದು ಹಾಕಿತು ರಾಜಹಂಸ.<br /><br />ನಮ್ಮ ನಮ್ಮ ಮನೆಗಳಿಗೆ ಬಂದು ಬೀಳಲು BMTC ಸಹಾಯ ಮಾಡಿತು. ಹೀಗೆ ಮುಗಿದಿತ್ತು "ಮುಳ್ಳಯ್ಯನಗಿರಿ" ಚಾರಣ.<br /><br />ಸರಿಯಾಗಿ ಒಂದು ವರ್ಷವಾಗಿತ್ತು ನಾನು ಎರಡು ದಿನದ ಚಾರಣ ಮಾಡಿ, ಅದು ಮುಳ್ಳಯ್ಯನಗಿರಿ ಚಾರಣದೊಂದಿಗೆ ಮುಗಿಯಿತು. ಅದೇ ಬೆಂಗಳೂರು, ಅದೇ ಕಟ್ಟಡಗಳು, ಅದೇ traffic ಕಿರಿಕಿರಿ ಅದೇ ಆಫೀಸಿನ ಕೆಲಸದಿಂದ ಬೇಸೆತ್ತುಹೋಗಿದ್ದ ನನಗೆ ಸಿಕ್ಕಾಪಟ್ಟೆ relief ;-) ಕೊಟ್ಟ ಟ್ರೆಕ್ ಇದು. ಇದುವರೆಗೂ ಮಾಡಿದ best trek. ನನ್ನ ಜೊತೆಗೂಡಿದ ಎಲ್ಲರಿಗೂ ವಂದನೆಗಳು. ಈ ಚಾರಣದ ಹೆಚ್ಚಿನ ಫೋಟೊಗಳಿಗಾಗಿ ಕೆಳಕೊಟ್ಟಿರುವ ಮೈಲ್ ಗೆ ಮೈಲ್ ರವಾನಿಸುವುದು. </span></div><div><a href="mailto:vivek.vijaykumar@gmail.com"><span style="font-family:trebuchet ms;">vivek.vijaykumar@gmail.com</span></a></div></div></div>Unknownnoreply@blogger.com15tag:blogger.com,1999:blog-1028483830046744384.post-13256553542449710032008-05-21T08:26:00.006+05:302008-05-21T11:07:40.764+05:30ಪುಟ್ಟ ಪುಟ್ಟ ಆಸೆಗಳೂ....<span style="font-family:trebuchet ms;">ಬೆಂಗಳೂರು ಈಗ ಬೃಹತ್ ಆಗಿ ಬೆಳೆದಿದೆ..ಬೆಳೆಯುತ್ತಲೇ ಇದೆ, "ಬೃಹತ್ ಬೆಂಗಳೂರು" ಎಂದು ಕರೆದು ಏನೇನೋ ಅಭಿವೃದ್ದಿ!! ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ,ಮಾಡಲಿ, ಅವರಿಗೆ ಜಯವಾಗಲಿ... ಈ ಬೃಹತ್ ಬೆಂಗಳೂರಿನಲ್ಲಿ ನನ್ನದೊಂದಷ್ಟು ಪುಟ್ಟ ಆಸೆಗಳಿವೆ, ನನ್ನ ಜೊತೆಗೂಡುತ್ತೀರಾ ?? ಪಟ್ಟಿ ಹೀಗಿದೆ...<br /><br />1) ಸದಾ ಜನಭರಿತವಾಗಿರುವ J C ರೋಡಿನಲ್ಲಿ Townhall ಕಡೆ ಇಂದ Lalbagh ಕಡೆಗೆ ಬೈಕಿನಲ್ಲಿ ವೇಗವಾಗಿ ಸಾಗಬೇಕು ರಾತ್ರಿ 10ರ ಸಮಯದಲ್ಲಿ, ಅಲ್ಲಿ ಏಕಮುಖ ಸಂಚಾರ ಇದೆ ಎಂದು ನಿಮಗೆ ಗೊತ್ತಲ್ಲವೆ? ಹಾಗೆ ಒಮ್ಮೆ ವಿರುದ್ದ ದಿಕ್ಕಿನಲ್ಲಿ ಓಡಿಸಿಕೊಂಡು ಹೋಗಬೇಕು..<br /><br />2) 501,201, ಈ ಸರಣಿಯ ಬಸ್ಸುಗಳನ್ನು ನೋಡಿದರೆ ಏನೋ ಪುಳಕ, ಕಾರಣ ಅದು ring ರೋಡಿನಲ್ಲಿ ಪ್ರದಕ್ಷಿಣೆಹಾಕುತ್ತದೆ, ಒಂದು ಟ್ರಿಪ್ಪಿಗೆ ಏನಿಲ್ಲವೆಂದರೂ 4-5ಗಂಟೆ ಸಮಯ ಹಿಡಿಯುತ್ತದೆ, ಆ ಬಸ್ಸುಗಳಲ್ಲಿ ಕಿಟಕಿಯ ಪಕ್ಕ ಕೂತು ನಗರವನ್ನು ನೋಡಬೇಕು, ಆದರೆ ಹಾಗೆ ಕೂತರೆ ಕಂಡಕ್ಟರ್ ಮಹಾಶಯನ ಬಯ್ಗುಳಕ್ಕೆ ಬಲಿಯಾಗಬೇಕಾಗುತ್ತದೆ ಎಂದು ಅರುಣ ಹೇಳಿದ, ಆದಷ್ಟು ಬೇಗ ಸಮಯ ಮಾಡಿಕೊಂದು ಬನಶಂಕರಿ ಬಸ್ ನಿಲ್ದಾಣಕ್ಕೆ ಪೋಗುವೇನ್!!.. ನನ್ನೀ ಪ್ರಯಾಣದ ಬಗ್ಗೆ ಒಂದು ಲೇಖನವನ್ನು ಬರೆಯಬೇಕು...<br /><br />3) ರವಿ ಬೆಳಗೆರೆಯವರ "ಪಾಪಿಗಳ ಲೋಕದಲ್ಲಿ" ಒದಿದಾಗಲಿಂದಲೂ ಶ್ರೀರಾಂಪುರದ ಬಗ್ಗೆ ವಿಶೇಷ ಒಲವು, ರೌಡಿಗಳ ತವರು ಎಂದು, ಆ ಏರಿಯಾಕ್ಕೆ ಹೋಗಿ ಒಬ್ಬ ರೌಡಿ ಇನ್ನೊಬ್ಬ ರೌಡಿಯನ್ನು ಅಟ್ಟಾಡಿಸಿಕೊಂಡು ಹೋಗುವುದೋ, ಕತ್ತರಿಸಿ ಹಾಕುವುದೋ, ಅಥವಾ "ಡೀಲ್" ಗಳನ್ನು ರೌಡಿಗಳು ಕುದುರಿಸುವುದನ್ನು ಕಣ್ತುಂಬಿಕೊಳ್ಳಬೇಕು. </span><br /><span style="font-family:trebuchet ms;"><br /><br />4) ಮೈಸೂರು ರಸ್ತೆಯಲ್ಲಿ 24hrs ತೆರೆದಿರುವ ಕಾಫಿ ಡೆ ಇದೆಯಂತೆ, ಅಲ್ಲಿ ಮಧ್ಯರಾತ್ರಿ 3ರ ಹೊತ್ತಿಗೆ ಹೋಗಿ ಕಾಫಿ ಕುಡಿಯಬೇಕು....<br /><br />5) N R ಕಾಲೊನಿಯಲ್ಲಿ "ಕಟ್ಟೆ ಬಳಗ" ಎಂಬ ಒಂದು ಜಾಗವಿದೆ, ಮಧ್ಯ ಸಣ್ಣ ಜಾಗ, ಅದರ ಇಕ್ಕೆಲಗಳಲ್ಲಿ ರಸ್ತೆ, ದಟ್ಟ ಮರಗಳ ಆಶ್ರಯವಿದೆ, ಅಲ್ಲಿ ಕೂತು ಆಪ್ತ ಗೆಳೆಯರೊಡನೆ ಹರಟೆ ಹೊಡೆಯಬೇಕು....<br /><br />ಪುಟ್ಟ ಪುಟ್ಟ ಆಸೆಗಳನ್ನು ಈಡೇರಿಸಿಕೊಳ್ಳುವಲ್ಲಿ ದೊಡ್ಡ ಮಟ್ಟದ ಸಂತೋಷವಿರುತ್ತದೆ, ಪುಟ್ಟ ಪುಟ್ಟ ಆಸೆಗಳೂ...... ಚಿಕ್ಕ ಚಿಕ್ಕ ಆಸೆಗಳೂ.....<br /><br />ಸದ್ಯಕ್ಕಿಷ್ಟೆ!!! ...</span>Unknownnoreply@blogger.com18tag:blogger.com,1999:blog-1028483830046744384.post-39735685436987037322008-04-27T19:12:00.002+05:302008-05-04T17:06:49.919+05:30ಅರಮನೆ...<a href="http://1.bp.blogspot.com/_WoHbqrpm1NE/SBSD-I3O4tI/AAAAAAAABHM/dmWjyf5yz20/s1600-h/aramane02.jpg"><span style="font-family:trebuchet ms;"><img id="BLOGGER_PHOTO_ID_5193921373819298514" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://1.bp.blogspot.com/_WoHbqrpm1NE/SBSD-I3O4tI/AAAAAAAABHM/dmWjyf5yz20/s320/aramane02.jpg" border="0" /></span></a><span style="font-family:trebuchet ms;"><br /></span><div><span style="font-family:trebuchet ms;">’ನಕ್ಕ ಆ ಕ್ಷಣ ನಿರಾಳ ಮೈಮನ.......’<br /><br />’ನಗು ನಗು ನಗು’ ಹಾಡಿನ ಬಹಳ ಅಚ್ಚು ಮೆಚ್ಚಿನ ಸಾಲು ಇದು ನನಗೆ....<br /><br />ಜಯಂತ್ ಕಾಯ್ಕಿಣಿ ಒಂದೇ ರೀತಿಯ ಹಾಡುಗಳಿಗೆ ಬ್ರಾಂಡ್ ಆಗುತ್ತಿದ್ದಾರೆ ಎಂಬ ಕಳವಳವಿದೆ......<br /><br />’ನನಗು ನಿನಗೂ ಕಣ್ಣಲ್ಲೇ ಪರಿಚಯ..ಸನಿಹ ಸುಳಿವ ಮನದಾಸೆ ಅತಿಶಯ....’ ಅದ್ಭುತವಾದ ಹಾಡು..<br /><br />ಕವಿರಾಜರಿಗೆ ಕವಿರಾಜರೇ ಸಾಟಿ.. ’ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ, ಹೇಗೆ ಹೇಳಲಿ ನನ್ನ ಮನದ ಹಂಬಲಾ.....’<br /><br />ಬಹಳ ಬಹಳ ಸಿಂಪಲ್ ಕತೆ...ನಿರೂಪಣೆಯಲ್ಲಿ ನಿರ್ದೇಶಕರ ಕುಸುರಿ ಕೆಲಸ ಕಾಣುತ್ತದೆ, ಅತಿರೇಕದ ಸಂಭಾಷಣೆಗಳಿಲ್ಲ, ಗಣೇಶ್ ಎಷ್ಟು ಬೇಕೋ ಅಷ್ಟು ಮಾತನಾಡುತ್ತಾರೆ, ಅನಂತನಾಗ್ ರವರದ್ದು ಮಾಗಿದ ಅಭಿನಯ.. ಚಿತ್ರ ನಿಂತಿರಿರುವುದು ಇವರಿಬ್ಬರ ಮೇಲೆಯೇ. ನಮ್ಮ ಅಕ್ಕ ಪಕ್ಕದಲ್ಲೇ ಇರುವ ಹುಡುಗನಂತಿದೆ ಗಣೇಶ್ ಅಭಿನಯ, ಅದಕ್ಕೆ ಇಷ್ಟವಾಗುತ್ತಾರೆ.<br /><br />ಒಟ್ಟಾರೆಯಾಗಿ ನಾಗಶೇಖರ್ ಒಂದು ಒಳ್ಳೆಯ ಚಿತ್ರ ಮಾಡಿದ್ದಾರೆ. ಗಣೇಶ್ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ಹೊಸ ಪ್ರಯೋಗಗಳು ಹೀಗೆ ಸಾಗಲಿ. ಗಣೇಶ್, ಅನಂತ್ ನಾಗ್ ಮತ್ತು ನಾಗಶೇಖರ್ ರವರಿಗೆ Congratulations......<br /><br />ವಯಸ್ಸಿನ ಅಂತರವಿಲ್ಲದೆ ಎಲ್ಲರೂ ನೋಡಬಹುದಂತಹದಾದ ಚಿತ್ರ... "ಅರಮನೆ"<br /><br />ಒಮ್ಮೆ ನೋಡಿಬನ್ನಿ....<br /></span></div>Unknownnoreply@blogger.com8tag:blogger.com,1999:blog-1028483830046744384.post-65807963803807568232008-04-18T16:20:00.008+05:302008-04-18T17:38:57.365+05:30ದೇವ್ರು ದೇವ್ರು ಅಂತ ಹೇಳ್ತಾರೆಲ್ಲ ಜನ್ರು....<a href="http://2.bp.blogspot.com/_WoHbqrpm1NE/SAiCFeNafMI/AAAAAAAABG0/U3Q2EceNcNw/s1600-h/white_dwarf_browse.jpg"><img id="BLOGGER_PHOTO_ID_5190541601064778946" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://2.bp.blogspot.com/_WoHbqrpm1NE/SAiCFeNafMI/AAAAAAAABG0/U3Q2EceNcNw/s320/white_dwarf_browse.jpg" border="0" /></a><br /><div>’ದೇವರಿದ್ದಾನೊ ಇಲ್ಲವೋ’..ಈ ವಿಷಯದ ಮೇಲೆ ಚರ್ಚೆ-ವಾದಗಳು ದೇವರು ಹುಟ್ಟಿದಾಗಿನಿಂದ(!!) ನಡೆಯುತ್ತಲೇ ಇದೆ. ಇದಕ್ಕೆ ಆದಿ-ಅಂತ್ಯವೆಂಬುದು ಇರುವುದಿಲ್ಲ. ಇದಮಿತ್ತಂ ಎಂದು ಹೇಳಲು ಆಗುವುದಿಲ್ಲ, ಹಾಗೆ ಹೇಳಲು ಜನರು ಸಹ ಬಿಡುವುದಿಲ್ಲ!!.. ಎಳೆದಾಡುತ್ತಲೇ ಇರುತ್ತಾರೆ.. ಚರ್ಚೆಗೂ ವಾದಕ್ಕೊ ಬಹಳ ವ್ಯತ್ಯಾಸವಿದೆ, ವಾದಗಳಲ್ಲಿ ನನಗೆ ಆಸಕ್ತಿಯಿಲ್ಲ.. </div><div></div><div></div><br /><div>ಮನುಷ್ಯನಿಗೆ ಕಾಣದುದರ ಬಗ್ಗೆ ಯಾವಾಗಲೂ ಹೆಚ್ಚಿನ ಆಸಕ್ತಿ, ಕುತೂಹಲ ಇದ್ದೇ ಇರುತ್ತದೆ, ಅದು ಮಾನವ ಸ್ವಭಾವ, ಹೊಸದನ್ನು ಅನ್ವೇಷಿಸಲು, ಹುಡುಕಲು, ಪಡೆಯಲು ಅನವರತ ಕಾಲ ಶ್ರಮಿಸುತ್ತಲೇ ಇರುತ್ತಾನೆ, ಹಾಗಿರದಿದ್ದರೆ ಇಷ್ಟೆಲ್ಲ ಸಂಶೋಧನೆಗಳು, ಆವಿಷ್ಕಾರಗಳು ಆಗುತ್ತಿರಲಿಲ್ಲ, ಹಾಗಾಗಿ ಈ ವಿಷಯದ ಬಗ್ಗೆ ಚರ್ಚೆ-ವಾದಗಳು ನಡೆಯುತ್ತಲೇ ಇರುತ್ತದೆ.... </div><div><em></em></div><div><em></em></div><div><em></em></div><div><em></em></div><div><em></em></div><div><em></em></div><div><em></em></div><div><em>’ಮರಳಿ ಬಂದವರಿಲ್ಲ, ವರದಿ ತಂದವರಿಲ್ಲ...’</em> </div><div>ನೆನ್ನೆ ಶ್ರೀಕಾಂತ ಕೇಳಿದ, ನೀನು ಹುಟ್ಟುವುದಕ್ಕೆ ಮುಂಚೆ ಎಲ್ಲಿದ್ದೆ, ಸತ್ತ ನಂತರ ಎಲ್ಲಿಗೆ ಹೋಗುತ್ತೀಯ...ಎರಡಕ್ಕೂ ನನ್ನ ಉತ್ತರ "ಗೊತ್ತಿಲ್ಲ". ನನಗೆ ತಿಳಿದುಕೊಳ್ಳುವ ಅವಶ್ಯಕತೆಯೂ ಕಾಣಲಿಲ್ಲ.. ಇರುವಷ್ಟು ದಿನ ಹೇಗೆ ಜೀವಿಸಿದೆ ಅನ್ನುವುದಕ್ಕೆ ಮಾತ್ರ ನನ್ನ ಬದುಕು ಸೀಮಿತ, ಆತ್ಮ, ಪ್ರೇತಾತ್ಮ, ಭೂತಾತ್ಮ ಇದಾವುದು ನನಗೆ ಗೊತ್ತಿಲ್ಲ. ಇರುವಷ್ಟು ದಿನ ಹೇಗಿದ್ದೆ, ನನ್ನಿಂದ ಯಾರಿಗೂ ಸಹಾಯ ಆಗದಿದ್ದರೆ ಪರವಾಯಿಲ್ಲ ತೊಂದರೆ ಆಗದಿದ್ದರೆ ಸಾಕು. ಬದುಕು ಬಹಳ ಚಿಕ್ಕದು ಇಂತಹ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಲು, Live the Life to the fullest... ಅದರ ಪ್ರಯತ್ನದಲ್ಲಿರುವೆ, ಕಾಯ-ವಾಚಾ-ಮನಸಾ.... </div><br /><br /><div>ಹಾಗೆಂದ ಮಾತ್ರಕ್ಕೆ "ದೇವರ" ಬಗ್ಗೆ ತಿರಸ್ಕಾರ ಭಾವ ಇದೆ ಎಂಬುದಲ್ಲ. ನನ್ನ ಗ್ರಹಿಕೆಗೆ, ಬುದ್ದಿಮತ್ತೆಗೆ, ಅನುಭವಕ್ಕೆ ಬಂದುದಷ್ಟು ತಿಳಿದುಕೊಂಡಿದ್ದೇನೆ. ಆ ವಿಷಯದ ಬಗ್ಗೆ ಸದ್ಯಕ್ಕೆ ಅಷ್ಟು ಸಾಕು ಎಂದು full stop(.) ಹಾಕಿ ಸುಮ್ಮನಾಗಿದ್ದೇನೆ, ಅದಕ್ಕೆ ನನಗೆ ಬೇಕೆನಿಸಿದಾಗ comma(,) ಹಾಕಿ ಮುಂದುವರೆಸಿಕೊಳ್ಳುವೆ.<br /><br />"ದೇವರು" ಎನ್ನುವುದು ಬಹಳ ಸುಂದರವಾದ concept, ಆ concept ನಿಂದ ಮನುಷ್ಯದ ತನ್ನ ದಿನನಿತ್ಯದ ಜಂಜಡಗಳಿಂದ,ಕಷ್ಟಗಳಿಂದ, ತನ್ನ ಗೋಳು ಪರದಾಟಗಳಿಂದ ಸ್ವಲ್ಪ ಮಟ್ಟಿಗಾದರೂ ನೆಮ್ಮದಿಯನ್ನು ಪಡೆಯುತ್ತಾನೆ, ನನ್ನ ಮಟ್ಟಿಗೆ ಅದರ ಸಲುವಾಗೆ "ದೇವರು" ಇರುವುದು. ಕೆಲವು ಸಮಯಗಳಲ್ಲಿ ಮನುಷ್ಯ ತನ್ನ ಕೈಲಾದ ಕೆಲಸವನ್ನು ಮಾಡಿ ಬಸವಳಿದಾಗ ಮುಂದೆ ದಾರಿ ಕಾಣದಾದಾಗ, ತೋಚದಾದಾಗ ಕೈಚೆಲ್ಲಿ ಕೂರುವಾಗ ದೇವರು ನೆರವಿಗೆ ಬರುತ್ತಾನೆ, "ಭಗವಂತಾ ನನ್ನ ರಕ್ಷಿಸಪ್ಪಾ" ಎಂದು ಉದ್ಗರಿಸಿ ಸುಮ್ಮನಾಗುತ್ತಾರೆ, ಹಾಗೆ ದೇವರ ಮೇಲೆ ಭಾರ ಹಾಕಿ ತಮ್ಮ ಕೆಲಸವನ್ನ ಮುಂದುವರೆಸುತ್ತಾರೆ. ಆ ಕ್ಷಣಕ್ಕೆ "ದೇವರು" ಎನ್ನುವ concept ಆತನಿಗೆ releif ಕೊಡುತ್ತದೆ, ಆತನ ಮನಸ್ಸು ಎಷ್ಟೋ ನಿರಾಳವಾಗುತ್ತದೆ. ಕಾರಿನಲ್ಲಿ ಕುಳಿತ ಚಾಲಕ ಬ್ರೇಕ್ brake fail ಆಗಿ control ತಪ್ಪಿದಾಗ ತನ್ನ ಕೈಲಾದುದನ್ನು ಮಾಡಿ "ಭಗವಂತಾ ಕಾಪಾಡಪ್ಪಾ" ಎಂದು ಉದ್ಗರಿಸುತ್ತಾನೆ, ಬದುಕುಳಿದರೆ "ದೇವರು" ರಕ್ಷಿಸಿದ ಎಂದು ಸಂತಸ ಪಡುವನು, ಇಲ್ಲದಿದ್ದರೆ "ಗೊತ್ತಿಲ್ಲ". ಅವನ ಆಯುಷ್ಯ ಮುಗಿದಿತ್ತು ಎಂದಲೋ ಅಥವಾ ಆತನ time ಸರಿಯಾಗಿರಲಿಲ್ಲ ಎಂದಲೋ ಸುಮ್ಮನಾಗುವರು, ಈ ರೀತಿಯ ಮಾತುಗಳೆಲ್ಲ ಅವರವರ ಮನಗಳಿಗೆ ಗೊತ್ತಗದೆ ಇರುವ ಪ್ರಶ್ನೆಗಳಿಗೆ ಕೊಟ್ಟುಕೊಳ್ಳುವ releif ಗಳು, ಸಮಾಧಾನಕರ ಮಾತುಗಳು..ನನ್ನ ಮಟ್ಟಿಗೆ ದೇವರು ಅಷ್ಟೆ, ನನಗೆ ದೇವರು "ಸಕಲ"ನೂ ಅಲ್ಲ "ಕೇವಲ"ನೂ ಅಲ್ಲ...</div><div></div><div></div><div>ಕೆಲವರಿಗೆ "ದೇವರು" ಎಂಬುದು ತಮ್ಮನ್ನು ನಿಯಂತ್ರಿಸಿಕೊಳ್ಳುವುದಕ್ಕೆ ಉಪಯೋಗಿಸಿಕೊಳ್ಳುತ್ತಾರೆ, ಆ ಕೆಟ್ಟ ಕೆಲಸವನ್ನು ಮಾಡಿದರೆ ದೇವರು ನನಗೆ ಶಿಕ್ಷೆ ನೀಡುತ್ತಾನೆಂದು ನೆನೆದು ಸುಮ್ಮನಾಗುತ್ತರೆ, ಅಥವಾ ತಾವು ಮಾಡಿದ ಕೆಲಸಗಳಿಗೆ ಕಷ್ಟ ಅನುಭವಿಸುತ್ತಿದ್ದರೆ "ನಾನು ಮಾಡಿದ ಪಾಪ ಕಾರ್ಯಗಳಿಗೆ ಹೀಗೆ ಆಗಿದೆ" ಎಂದು ಪಶ್ಚಾತಾಪ ಅನುಭವಿಸಿ ಮುಂದೆ ಆ ರೀತಿಯ ಕೆಲಸಗಳಿಗೆ ಕೈಹಾಕದೆ ಸುಮ್ಮನಾಗುತ್ತಾರೆ ...ದೇವಸ್ಥಾನಗಳಿಗೆ ಅಲೆದು ನೆಮ್ಮದಿ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾರೆ.<br /><br />ದೇವಸ್ಥಾನಗಳಿಗೆ ಕಾಲಿಟ್ಟರೆ ಮನಸ್ಸು ಪ್ರಫುಲ್ಲವಾಗುವುದು, ವೇದಘೋಷಗಳು, ಹಿತವಾಗಿ ಬೀಸುವ ಗಾಳಿ, ಧೂಪದಾರತಿಗಳು, ಘಂಟಾನಾದಗಳು ಇವೆಲ್ಲ ಒಂದು ರೀತಿಯ ನೆಮ್ಮದಿ ಕೊಡುತ್ತದೆ, relax ಆಗುತ್ತಾರೆ. ಎಲ್ಲಾ ದೇವಸ್ಥಾನಗಳು ಈ ರೀತಿಯಿರುವುದಿಲ್ಲ ಬಿಡಿ..ಅದು ಬೇರೆಯ ಸಂಗತಿ..ಅದಕ್ಕೆ ಜನ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಗಳಿಗೆ ಹೋಗುತ್ತಾರೆ..<br /><br />ನಮಗೆ ಕಾಣದ ಶಕ್ತಿಯೊಂದು ನಮ್ಮ ಮೇಲೆ ಸದಾ ಇದೆ, ನಮ್ಮನ್ನು ನಿಯಂತ್ರಿಸುತ್ತದೆ, ಆ ಶಕ್ತಿಗೆ ನಾನು "ದೇವರು" ಎನ್ನುತ್ತೇನೆ, ಅದಕ್ಕೆ ಜನರು ಅವರಿಗೆ ಬೇಕಾದ ರೀತಿಯಲ್ಲಿ ಆ ಶಕ್ತಿಯನ್ನು ಆರಾಧಿಸುತ್ತಾರೆ, ಅದಕ್ಕೆಂದೇ ಹಲವು ಮತಗಳು, ಕುಲಗಳು, ಹಲವು ವೇಷಗಳು, ಇದಕ್ಕೆ ಪುಷ್ಟಿ ಕೊಡುವ ಉಕ್ತಿ<strong>.."ದೇವನೊಬ್ಬ ನಾಮ ಹಲವು..."</strong> </div><div></div><br /><div>ಮನುಷ್ಯ ಸಮಾಜದಲ್ಲಿ ಬಾಳಿ-ಬದುಕಲು ಹಲವು ರೀತಿಯ protocol ಗಳನ್ನು ಅಳವಡಿಸಿಕೊಂಡಿದ್ದಾನೆ... ನಗರಗಳಲ್ಲಿ ಒಡಾಡಲು ಗಾಡಿಗಳು ಹೇಗೆ ಎಡಬದಿಯಲ್ಲಿ ಮಾತ್ರ ಚಲಿಸಬೇಕು, ಸಿಗ್ನಲ್ ಪಾಲನೆ ಮಾಡಬೇಕು ಅಂತಿದೆಯೋ , ಇವೆಲ್ಲದುದರ ಉದ್ದೇಶ ಇಷ್ಟೆ, ಆರಮಾದಾಯಕ ಸಂಚಾರ. ಹಾಗೆ "ದೇವರು" ಸಹ ಹೀಗೆ ಒಂದು ರೀತಿಯ protocol.. ನಮಗೆ ತೊಂದರೆಯಾದಾಗ, ಸಂಕಟಗಳ ಸುಳಿಯಲ್ಲಿ ಸಿಲುಕಿದಾಗ, ಹತಾಶರಾದಾಗ "ದೇವರು" ಎಂದು ಬೊಬ್ಬೆ ಹೊಡೆಯುತ್ತೇವೆ, ಸಂತಸದ ಸಮಯದಲ್ಲಿ ದೇವರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ.. ಸಾಮನ್ಯ ಮನುಷ್ಯರು ಮಾಡುವುದು ಇಷ್ಟೆ..."ಸಂಕಟ ಬಂದಾಗ ವೆಂಕಟರಮಣ...". ದಿನ ನಿತ್ಯ ಜೀವನದಲ್ಲಿ ಹಲವಾರು ಆಚರಣೆಗಳನ್ನು ಅಳವಡಿಸಿಕೊಂಡಿರುತ್ತಾರೆ ಜನರು, ಅವೆಲ್ಲಾ ಕೇವಲ ಅವರವರ ನೆಮ್ಮದಿಗೆ ಅಷ್ಟೆ. ದಿನ ನಿತ್ಯ ಪ್ರಾರ್ಥನೆ ಮಾಡುವುದು, ದೇವರಿಗೆ ಕೈಮುಗಿಯುವುದು, ದಂಡ ಬೀಳುವುದು ಹೀಗೆ. ಕೆಲವರು ಚಿಕ್ಕಂದಿನಿಂದ ರೂಡಿಸಿಕೊಂಡು ಬಂದಿರುತ್ತಾರೆ ಹಾಗೆ ಮುಂದುವರೆಸಿಕೊಂಡು ಹೋಗುತ್ತಾರೆ. ಆರಾಮದಾಯಕ ಜೀವನ.</div><br /><div></div><br /><img id="BLOGGER_PHOTO_ID_5190541875942685906" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://2.bp.blogspot.com/_WoHbqrpm1NE/SAiCVeNafNI/AAAAAAAABG8/By333uujASI/s320/Meenakshi-Temple.jpg" border="0" /><br /><div>ಹಾಗೆ ಇದರಂತೆಯೇ ಜ್ಯೋತಿಷ್ಯದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ನಾನು ಹುಟ್ಟಿದಾಗಲೇ ನಾನು ಎಂದು ಸಾಯುವುದು, ನಾನು ಹೇಗೆ ಇರುವುದು, ಯಾವಾಗ ತೊಂದರೆಯಾಗುವುದು ಎಂದೆಲ್ಲ ಗೊತ್ತಾಗಿಬಿಟ್ಟರೆ, ನನ್ನ ಹಣೆಬರಹವನ್ನು ಬರೆದು ಕಳಿಸಿದರೆ "ನನ್ನದು" ಅಂತ ಏನಿರುತ್ತದೆ ಈ ಪ್ರಪಂಚದಲ್ಲಿ. ನನ್ನ ಅಸ್ಥಿತ್ವಕ್ಕೆ ಬೆಲೆಯೇ ಇರುವುದಿಲ್ಲ...ಯಾರೋ ಬರೆದಂತೆ ನಡೆವುದಾದರೆ ನಾ ಮಾಡುವುದೇನಿದೆ ಇಲ್ಲಿ??? ಹಾಗೆ ನಾ ಅಂದುಕೊಳ್ಳುವಂತೆ ಎಲ್ಲವೂ ಎಲ್ಲ ಕಾಲದಲ್ಲಿಯೂ ಆಗುವುದಿಲ್ಲ, ಆಗ ಇದ್ದೆ ಇದ್ದಾನಲ್ಲ ನನ್ನ ನೆಮ್ಮದಿಯ ದೇವರು... ನನ್ನ ಕೈಲಾದುದನ್ನು ಮಾಡಿದ್ದೇನೆ, ಇನ್ನು ನಿನಗೆ ಬಿಟ್ಟದ್ದು ಎಂದು ನಿರಾಳನಾಗುತ್ತೇನೆ.<br /><img id="BLOGGER_PHOTO_ID_5190552901123734754" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://1.bp.blogspot.com/_WoHbqrpm1NE/SAiMXONafOI/AAAAAAAABHE/vyVzo6mElsc/s320/meenakshi-temple-06.jpg" border="0" /><br />ಎಲ್ಲವನ್ನು ನಾನೇ ಮಾಡುತ್ತೇನೆ, ಎಲ್ಲವೂ ನನ್ನ ಮೇಲೆ ನಿಂತಿದೆ, ನಾನು ನಡೆದಂತೆ ಆಗುತ್ತದೆ ಎಂದರೆ ಜೀವನವನ್ನು ನಿಭಾಯಿಸುವುದು ಕಷ್ಟ, ಬಹಳ ಹೊರೆ ಬೀಳುತ್ತದೆ. ಎಲ್ಲದಕ್ಕೂ ನನ್ನಲ್ಲೇ ಉತ್ತರ ಕಂಡುಕೊಳ್ಳಬೇಕಾಗುತ್ತದೆ..ಒಳ್ಳೆಯವನಾಗಿ ಇರುವುದು ಮತ್ತು ಒಳ್ಳೆಯದನ್ನು ಮಾಡುವುದು ಇಷ್ಟೆ ನನ್ನ ಕೆಲಸ..ಅದಕ್ಕಾಗಿ ನನ್ನ ದೇವರು...<br /><br />ನನಗೆ ತಿಳಿದಿರುವಷ್ಟು ದೇವರನ್ನು ಅರ್ಥೈಸಿಕೊಂಡಿದ್ದೇನೆ, ನನಗಿಷ್ಟು ಸಾಕು. ಸದ್ಯಕ್ಕೆ ಇಷ್ಟು ಸಾಕು....<br /><br />ನಿಮಗೆ ದೇವರು ಒಳ್ಳೇದು ಮಾಡಲಿ.... :-)<br /><br />(ವಿ.ಸೂ : ಈ ನನ್ನ ದೇವರ ನಿಲುವಿನ ಬಗ್ಗೆ ವಾದಗಳು-ಚರ್ಚೆಗಳು ಅನಾವಶ್ಯಕ...not interested) </div>Unknownnoreply@blogger.com13tag:blogger.com,1999:blog-1028483830046744384.post-84329519484245862762008-04-10T13:35:00.001+05:302008-04-10T13:37:27.508+05:30ಎರಡು ಮುಖಗಳು..<a href="http://4.bp.blogspot.com/_WoHbqrpm1NE/R_3KnTWTezI/AAAAAAAABGs/G7nMLpV7rpk/s1600-h/illusion_Faces2.jpg"><img id="BLOGGER_PHOTO_ID_5187525122358213426" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://4.bp.blogspot.com/_WoHbqrpm1NE/R_3KnTWTezI/AAAAAAAABGs/G7nMLpV7rpk/s320/illusion_Faces2.jpg" border="0" /></a><br /><div><span style="font-family:trebuchet ms;"><strong>ಸನ್ನಿವೇಶ 1</strong> : ಆಗ ತಾನೆ ಜೀತದಾಳು ತನ್ನ hectic ಕೆಲಸವನ್ನ ಮುಗಿಸಿ, ಕೈಕಾಲು ಮುಖ ತೊಳೆದು ಯಜಮಾನಿಯ ಊಟಕ್ಕಾಗಿ ಅಂಗಳದಲ್ಲಿ ಕಾದು ಕುಳಿತಿದ್ದ, ಯಜಮಾನಿ ತಂದ ಊಟವನ್ನು ಕಣ್ಣಿಗೊತ್ತಿಗೊಂದು ತಿನ್ನಲನುವಾದ, ಆಗ ತಾನೆ ಮನೆಗೆ ಪ್ರವೇಶಿಸಿದ ಯಜಮಾನ ಹಸುಗಳಿಗೆ ಹುಲ್ಲು ಹಾಕಿಲ್ಲವೆಂದು ಕೆಂಡಾಮಂಡಲನಾಗಿ ಆಳು ತಿನ್ನಲನುವಾಗಿದ್ದ ತಟ್ಟೆಯನ್ನು ಝಾಡಿಸಿ ವೊದ್ದುಬಿಟ್ಟ, ಅನ್ನ ಅಂಗಳದಲ್ಲಿ ಚೆಲ್ಲಾಪಿಲ್ಲಿಯಾಗಿಬಿಟ್ಟಿತು, ಆಳಿಗೆ ಹೊಟ್ಟೆ ಹಸಿವಿನೊಂದಿಗೆ ನಾಲ್ಕು ಬಿಗಿತಗಳು,ಬಯ್ಗುಳಗಳು ಬಿದ್ದವು...ಆಳಿನ ಕಂಗಳಲ್ಲಿ ನೀರು ಬತ್ತಿಹೋಗಿತ್ತು, ಚುರುಗುಡುತ್ತಿದ್ದ ಹೊಟ್ಟೆಯೊಂದಿಗೆ ಸುಡುಬಿಸಿಲಿನಲ್ಲಿ........ ಆ ಯಜಮಾನ ಏನಾಗಿರಬಹುದು??<br /><br /><strong>ಸನ್ನಿವೇಶ 2</strong>: ಕಷ್ಟದಲ್ಲಿರುವ ವೃದ್ಧರು, ಹಸಿದಿರುವ ಮುಖಗಳು ಕಂಡರೆ ಕೈಲಿದ್ದ ಹಣವನ್ನು ಎಷ್ಟಿದೆಯೆಂದೂ ಸಹ ನೋಡದೆ ಅವರಿಗೆ ಕೊಟ್ಟುಬಿಡುತ್ತಿದ್ದ, ತನಗೆ ತಿನ್ನಲಿಕ್ಕೆ ಇಲ್ಲದಿದ್ದರೂ ಹಸಿದಿರುವವರಿಗೆ ತಿನ್ನಲು ಕೊಟ್ಟು ಅವರನ್ನೇ ದಿಟ್ಟಿಸುತ್ತಾ ಕಣ್ಣುತುಂಬಿಕೊಳ್ಳುತ್ತಿದ್ದ, ಅವರ ಕೈಮುಗಿತದಲ್ಲಿ ಕೊನೆಗಾಣುತ್ತಿತ್ತು..ಎಷ್ಟು ಜನರಿಗೆ ಅನ್ನ ನೀಡಿದನೋ ಗೊತ್ತಿಲ್ಲ .... ಈ ಯಜಮಾನ ಏನಾಗಿರಬಹುದು??<br /><br />ಎರಡೂ ಸಹ ಸತ್ಯ, ಎರಡೂ ಸಹ ಶುದ್ಧ ಸುಳ್ಳು... ಯಾವುದನ್ನು ನಂಬುವುದು, ಯಾವುದನ್ನು ಬಿಡುವುದು....<br />ಬಹಳಷ್ಟು ಪ್ರಶ್ನೆಗಳು ಉಳಿದಿವೆ....!!!! </span></div>Unknownnoreply@blogger.com11tag:blogger.com,1999:blog-1028483830046744384.post-87280480227124935812008-04-09T10:56:00.003+05:302008-04-09T11:11:59.436+05:30Race....<a href="http://1.bp.blogspot.com/_WoHbqrpm1NE/R_xWk-pvTUI/AAAAAAAABGk/aKGzarInzi0/s1600-h/race.jpg"><img id="BLOGGER_PHOTO_ID_5187116064117312834" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://1.bp.blogspot.com/_WoHbqrpm1NE/R_xWk-pvTUI/AAAAAAAABGk/aKGzarInzi0/s320/race.jpg" border="0" /></a><br /><div>"Pehli nazar main kaisa jaadu kar diyaaaaaaaaa........."ಈ ಹಾಡಿಗೆ ಮನಸೋತು, ತಲೆದೂಗಿ(ಬಾಗಿ)!!, ಗುನುಗಿ ಗುನುಗಿ ಸಾಕಾಗಿ, FMನಲ್ಲಿ ಕೇಳಿ ಕೇಳಿ life -ಉ ನನ್ನದಾಗಿಸಿ ಕೊಂಡು ಭಾರಿ ನಿರೀಕ್ಷೆ ಹೊತ್ತು ಚಿತ್ರವನ್ನ ನೋಡಲು ಕುಳಿತೆ... Atif Aslam ಹಾಡುಗಾರಿಕೆ ಬಹಳವಾಗಿ ಮೆಚ್ಚಿದ್ದೆ.. ಚಿತ್ರನೋಡಿದ ಮೆಲೆ ನನಗನ್ನಿಸಿದ್ದು ಇಷ್ಟು...ನಿಮಗೆ ಬೇರೆ ಅನ್ನಿಸಬಹುದು, after all "ಅವರವರ ಭಾವಕ್ಕೆ ತಕ್ಕಂತೆ".....</div><br /><div></div><br /><div>Saif Ali Khan : ಹೊಸ ಗೆಟಪ್, ತುಂಬಾ ಖದರ್ ಇದೆ, ಒಳ್ಳೆ ಅಭಿನಯ..ChappaaLe...chappaaLe..<br />Askhaye Khanna : OK!!<br />Anil Kapoor : Timepass<br />Bipasha Basu : Censored!!!<br />Katrina Kaif : Cute..<br />Sameera Reddy : ಯಾಕಿದ್ದಳೊ ಕೊನೆವರೆಗೂ ಗೊತ್ತಾಗಲೇ ಇಲ್ಲ..</div><br /><div></div><br /><div>Locations : South Africa ಎಂದು ಚಿತ್ರದಲ್ಲಿ ತೋರಲ್ಪಡಿಸುತ್ತಾರೆ... ಕಣ್ಮನ ಸೆಳೆಯುತ್ತದೆ..<br />Cars -u : ಉನ್ನತ ದರ್ಜೆಯ ಮಸ್ತ್ ಮಸ್ತ್ ಕಾರುಗಳು...ಒಂದಕ್ಕಿಂತ ಒಂದು ಚೆನ್ನಾಗಿದೆ.<br />ಕತೆ : Full confuse -u...ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಬಿಡುವ ಯತ್ನದಲ್ಲಿ super ಆಗಿ ಎಡವಿದ್ದಾರೆ..ಆದರೆ ಒಂದಂತು ಖರೆ, ಒಂದು ದೃಶ್ಯವನ್ನು ನೀವು miss ಮಾಡಿದರೆ ತಲೆ ಕುಲಗೆಡುತ್ತದೆ...ಮೋಸ, ಧಗಾ, ವಂಚನೆ ಚಿತ್ರದ ಜೀವಾಳ....</div><br /><div></div><br /><div>ಎಲ್ಲದಕ್ಕಿಂತ ಹೆಚ್ಚಾಗಿ ನಾನು ಕಾಯುತ್ತಿದ್ದ "Pehli Nazar " ಹಾಡಿನ ಚಿತ್ರೀಕರಣ ನನ್ನ ನಿರೀಕ್ಷೆ ಹುಸಿ ಮಾಡಿತು...ಇನ್ನೂ ಚೆನ್ನಾಗಿ ಮಾಡಬಹುದಿತ್ತು..<br />ದುಡ್ಡು ಜಾಸ್ತಿ ಇದ್ದರೆ ಒಮ್ಮೆ ಚಿತ್ರವನ್ನ ವೀಕ್ಷಿಸಿ............</div>Unknownnoreply@blogger.com5tag:blogger.com,1999:blog-1028483830046744384.post-90162801494368241342008-03-25T08:22:00.002+05:302008-03-25T08:26:08.305+05:30ಅರಮನೆ ...<a href="http://1.bp.blogspot.com/_WoHbqrpm1NE/R-hpu-pvTTI/AAAAAAAABGc/ee45tF9tmnk/s1600-h/love%20letter.jpg"><img id="BLOGGER_PHOTO_ID_5181507627102719282" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://1.bp.blogspot.com/_WoHbqrpm1NE/R-hpu-pvTTI/AAAAAAAABGc/ee45tF9tmnk/s320/love%2520letter.jpg" border="0" /></a><br /><div>ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ<br />ಹೇಗೆ ಹೇಳಲಿ ನನ್ನ ಮನದ ಹಂಬಲ......<br /><br />ಮಾತನಾಡಲಾ ಇಲ್ಲ ಹಾಡು ಹಾಡಲಾ<br />ಹೇಗೆ ತಿಳಿಸಲಿ ನನ್ನ ಎದೆಯ ತಳಮಳ..... </div><br /><div></div><br /><div>ಇದು "ಅರಮನೆ" ಚಿತ್ರದ ಒಂದು ಹಾಡಿನ ನಾಲ್ಕು ಸಾಲುಗಳು...ಬಹಳ ಬಹಳ ಬಹಳ ಹಿಡಿಸಿತು ಅದಕ್ಕಾಗಿ ಬ್ಲಾಗಿಸಿದೆ...ಬರೆದವರು "ಕವಿರಾಜ್" ....</div><br /><div></div><br /><div>ಚೆನ್ನಾಗಿದೆ ಅಲ್ಲ್ವಾ??</div>Unknownnoreply@blogger.com13tag:blogger.com,1999:blog-1028483830046744384.post-867731234906324022008-03-07T15:51:00.006+05:302008-03-07T16:56:24.233+05:30ನಾನು ಬ್ರಹ್ಮ ಮತ್ತು ಮುಖ್ಯಮಂತ್ರಿ - ಭಾಗ 5<em><span style="font-family:trebuchet ms;">Brahma is back... 5 ತಿಂಗಳ ಹಿಂದೆ ಬಂದಿದ್ದ ಬ್ರಹ್ಮನನ್ನು ದಸರೆಯ ರಜೆಗೆಂದು ಕಳಿಸಿದ್ದೆ, ಆಗಲೇ ಸಾಕಷ್ಟು ವರಗಳ ಪಟ್ಟಿ ಇಟ್ಟಿದ್ದೆ, ಇನ್ನಷ್ಟು ಹೇಳುವ ಹಂಬಲದಲ್ಲಿದ್ದೆ, ಸಮಯಾವಕಾಶ ಅಭಾವದಲ್ಲಿದ್ದ ಬ್ರಹ್ಮನನ್ನು ದಸರೆಯ ರಜೆಗಾಗಿ ಕಳುಹಿಸಿಕೊಟ್ಟಿದ್ದೆ, ಇದೀಗ ಮರಳಿ ಬಂದು ನಿನ್ನ ವರಪಟ್ಟಿಯನ್ನು ಮುಗಿಸು ಎಂದು ಕಾಡುತ್ತಿದ್ದಾನೆ, ಇನ್ನಿಲ್ಲದಂತೆ, ನಿನ್ನ ವರಪಟ್ಟಿಯನ್ನು ಮುಗಿಸಿದರೆ ನನಗೆ ವರಮುಕ್ತಿಯಾಗುವುದಯ್ಯ ಎಂದು ಹೇಳಿದುದಕ್ಕಾಗಿ ಮತ್ತೆ ಬ್ರಹ್ಮನ ಸರಣಿಯ ಕೊನೆಯ ಭಾಗವನ್ನು ನಿಮ್ಮ ಮುಂದಿಡುತ್ತಿದೇನೆ, ಓದಿಕೊಳ್ಳಿ... </span></em><br /><br /><span style="font-family:trebuchet ms;"><em>ಈ <strong>’ನಾನು, ಬ್ರಹ್ಮ ಮತ್ತು ಮುಖ್ಯಮಂತ್ರಿ’</strong> ಸರಣಿಯನ್ನು ನಾಲ್ಕು ಭಾಗಗಳಲ್ಲಿ ಕುಯ್ದಿದ್ದೆ ;-), ಮಾನವರ ನೆನಪಿನ, ಮೆದುಳಿನ ಕಾರ್ಯಕ್ಷಮತೆಯ ಅರಿವು ನನಗಿರುವುದರಿಂದ, ಒಮ್ಮೆ ಆ ನಾಲ್ಕು ಭಾಗಗಳ ಮೇಲೆ ಒಂದು ಸಿಂಹಾವಲೋಕನ ಮಾಡಿಬಿಡಿ...ಪ್ಲೀಸ್, ಇಲ್ಲವೆಂದರೆ ನಿಮ್ಮ ಲಹರಿಗೆ ತೊಡಕುಂಟಾಗುತ್ತದೆ, ಅದರ ಕೊಂಡಿಗಳು ಹೀಗಿವೆ, ಒಂದು ಧೀರ್ಘವಾದ ನಿಟ್ಟಿಸಿರು ಬಿಟ್ಟು ಓದಲನುವಾಗಿ, ನಿಮಗೆ ಶುಭವಾಗಲಿ.....</em> </span><br /><a href="http://karmakaanda.blogspot.com/2007/09/blog-post.html"><strong>ಭಾಗ 1</strong> </a><br /><a href="http://karmakaanda.blogspot.com/2007/09/2.html"><strong>ಭಾಗ 2</strong></a><br /><a href="http://karmakaanda.blogspot.com/2007/09/3.html"><strong>ಭಾಗ 3</strong> </a><br /><strong><a href="http://karmakaanda.blogspot.com/2007/10/4.html">ಭಾಗ 4</a></strong><br /><span style="font-family:trebuchet ms;">----------------</span><br /><br /><img id="BLOGGER_PHOTO_ID_5174950418770195954" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://2.bp.blogspot.com/_WoHbqrpm1NE/R9Ed_OEOdfI/AAAAAAAABFY/Wggt6ruz0IQ/s320/brahma.jpg" border="0" /> <span style="font-family:trebuchet ms;"></span><br /><br /><span style="font-family:trebuchet ms;">ಬ್ರಹ್ಮನ ಮುಂದೆ ನಾನು ಮುಖ್ಯಮಂತ್ರಿಯಾಗುವ ಹಾಗೂ ಆ ಸ್ಥಾನದ ಅಧಿಕಾರದ ವ್ಯಾಪ್ತಿ ವಿಸ್ತರಿಸುವ ಬಗ್ಗೆ ನನಗಿದ್ದ ಕನಸುಗಳನ್ನ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದೆ..<br /><br />ಬ್ರಹ್ಮ ಬಂದ ಕೂಡಲೆ ಕೈಕುಲುಕಿ "ಎಲ್ಲಾ ಕ್ಷೇಮವೋ?"<br /><br />"Everything is fine Mr.Brahma"..ಎಂದು ಹೇಳಿ ಮುಗಿಸಿ ಮತ್ತೆ..<br /><br />"I missed you a lotttttttt..." ಎಂದು ಭಾವಭರಿತವಾಗಿ ಉದ್ಗರಿಸಿದೆ..<br /><br />ಅದಕ್ಕೆ ಆತ "OK" ಎಂದು "ಮುಂದುವರೆಸು ಇನ್ನ ಪ್ರಣಾಳಿಕೆಯನ್ನು" ಎಂದುಬಿಟ್ಟ..<br /><br />Hmmm.. "OK" ಪದಬಳಕೆ ತಟ್ಟಬೇಕಾದ ಸ್ಥಳಗಳನ್ನೆಲ್ಲ ತಟ್ಟಿದೆ ಎಂದು ನನ್ನ ಆಶಯಗಳನ್ನ ಮುಂದುವರೆಸಲು ಸನ್ನದ್ಧನಾದೆ..<br /><br />ಬ್ರಹ್ಮ ನನ್ನ ರಾಜಕೀಯ ಆಶಯಗಳನ್ನೆಲ್ಲ ಅದಾಗಲೇ ನಿನ್ನ ಮುಂದಿಟ್ಟಿಯಾಗಿದೆ, ಮತ್ತೊಮ್ಮೆ clear picture ಬೇಕಾದರೆ ಮತ್ತೊಮ್ಮೆ ಓದಿಕೊಂಡು ಬಿಡು..<br /></span><br /><br /><span style="font-family:trebuchet ms;">"ಹಾಗದರೆ ನಿನ್ನ ವರಪಟ್ಟಿ ಮುಗಿಯಿತೋ" ಎಂದು ಕೇಳಿದ.<br /><br />"ಇಲ್ಲ ಬ್ರಹ್ಮ ಇನ್ನೂ ಮುಗಿದಿಲ್ಲ, ನಾನು ಬೆಂಗಳೂರಿಗ ನಾದುದರಿಂದ "ನಮ್ಮ ಬೆಂಗಳೂರು" ಬಗ್ಗೆ ಒಂದಷ್ಟು ಬೇಡಿಕೆಗಳು, ಸುಧಾರಣೆಯ ಹಾದಿಯಲ್ಲಿ...<br /></span><br /><br /><span style="font-family:trebuchet ms;">"ಸರಿ..."</span><br /><br /><span style="font-family:trebuchet ms;"></span><br /><br /><span style="font-family:trebuchet ms;">"ಬೆಂಗಳೂರು ಎಗ್ಗಿಲ್ಲದೆ ಬೆಳೆದಿದೆ, ಬೆಳೆಯುತ್ತಲಿದೆ, ಇದಕ್ಕೆ ಕಡಿವಾಣ ಅಗತ್ಯ, ದೇಶದ ಮೂಲೆ ಮೂಲೆಗಳಿಂದ ಜನರು ಈ ಊರಿಗೆ ಧಾವಿಸಿ ಬರುತ್ತಿದ್ದಾರೆ, ಇದಕ್ಕೆಲ್ಲ ಕಾರಣ ಇಲ್ಲಿರುವ ಮಾನವ ಸಂಪನ್ಮೂಲ, ಇಷ್ಟೊಂದು ಸಂಪನ್ಮೂಲ ಇರುವುದಕ್ಕೆ ಕಾರಣ ನಗರದಲ್ಲಿ ಹೆಚ್ಚಿದ ಇಂಜಿನಿಯರಿಂಗ್ ಕಾಲೇಜುಗಳು, ರಾಜಕಾರಣಿಗಳು ತಮ್ಮ ಕಪ್ಪು ಹಣ ಹುದುಗಿಸಿಡಲು ಇಂಜಿನಿಯರಿಂಗ್ ಕಾಲೇಜುಗಳನ್ನು ನಾಯಿಕೊಡೆಗಳಂತೆ ತೆರೆಯುತ್ತ ಹೋದರು, ಇಂದು ನಾವು ಏನೆಲ್ಲಾ traffic ಕಿರಿಕಿರಿ, ಹೆಚ್ಚಿದ ಜನಸಂದಣಿ , ಗಗನ ಮುಟ್ಟಿರುವ ಸೈಟುಗಳ ರೇಟು ಇವೆಲ್ಲದಕ್ಕೂ ಹೊರ ರಾಜ್ಯಗಳಿಂದ ವಲಸೆ ಬಂದಿರುವುದರಿಂದಲೇ ಉಂಟಾಗಿರುವುದು, ಬಂದವರು ಬಂದು ವಿದ್ಯೆ ಕಲಿತು ಹೋಗಿದ್ದರೆ ಚೆನ್ನಾಗಿತ್ತೇನೋ, ಇಲ್ಲೆ ತಳವೂರಿದರು, ಆಸ್ತಿ ಮನೆ ಮಠ ಮಾಡಿಕೊಂಡರು, ಇಷ್ಟೆಲ್ಲ ಸಾಲದೆಂಬಂತೆ ಇಲ್ಲಿನ ಭಾಷೆ, ಜನರನ್ನ ಜರಿದರು, ಜರಿಯುತ್ತಲೇ ಇದ್ದಾರೆ( ಹಾ! ಬಂದವರೆಲ್ಲರೂ ಹೀಗೆ ಅಲ್ಲ, ಆದರ ಬಹಳ ಮಂದಿ ಇದೇ ನಿಲುವನ್ನು ಹೊಂದಿರುವವರು..hmmm) ಇರಬರುವ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳಿಂದ ವಿಧ್ಯಾರ್ಥಿಗಳನ್ನು ಕೋಳಿ ಎಗರಿಸಿಕೊಂಡು ಹೋಗುವಂತೆ ಎಗರಿಸಿಕೊಂಡು ಕೆಲಸ ಕೊಟ್ಟವರು IT ಕಂಪೆನಿಗಳು, ಇದರಿಂದ ಆರ್ಥಿಕವಾಗಿ ಬೆಂಗಳೂರು ಸುಧಾರಿಸಿರಬಹುದು, ಅದರಿಂದ ಲಾಭವೂ ಇದೆ, ಆದರೆ ಅದಕ್ಕೆ ತೆರುತ್ತಿರುವ ಕಂದಾಯ ಬಹಳವೇ ಆಗಿದೆ. ಎಲ್ಲಾ ಈಟ್ ಕಂಪೆನಿಗಳು ಬೆಂಗಳೂರಿನಲ್ಲಿ ಟಿಕಾಣಿ ಹೂಡಿ, ಎಲ್ಲರಿಗೂ ಇಲ್ಲೇ ಕೆಲಸ ಕೊಟ್ಟರೆ ಜನರು ಹೆಚ್ಚಗುವುದಿಲ್ಲವೇ ?, ಕೆಲಸದ ನೆಪದಲ್ಲಿ ದೂರ ದೂರ ಊರುಗಳಿಂದ ಜನರು ಬಂದರು, ಬೆಂಗಳೂರು ಬೆಳೆಯಿತು, ಜೊತೆ ಜೊತೆಗೆ ಸಮಸ್ಯೆಗಳು ಕೂಡ.. IT ಕಂಪೆನಿಗಳಿಂದ ಲಾಭವಾಗಿರಬಹುದು, ಅದರ ಬಗ್ಗೆ ನಾನು ಚರ್ಚಿಸುವುದಿಲ್ಲ, ಅದರ ಬಗ್ಗೆ ಪುಂಖಾನುಪುಂಖವಾದ ವ್ಯಾಖ್ಯಾನಗಳು, ಊಹಪೋಹಗಳು ಚಾಲ್ತಿಯಲ್ಲಿ ಇದ್ದೇ ಇರುತ್ತವೆ...ಇರಲಿ ಜನರು ಭ್ರಮೆಯಲ್ಲೇ ಇರಲಿ..."<br /></span><br /><br /><span style="font-family:trebuchet ms;">ಬ್ರಹ್ಮ ಕಣ್ಣರಳಿಸಿಕೊಂಡು ನನ್ನನ್ನೇ ನೋಡುತ್ತಲಿದ್ದ....<br /><br />ನಾನು ಇನ್ನೂ ಮುಂದುವರೆದು..."ಬ್ರಹ್ಮ ಇದಕ್ಕೆಲ್ಲ ನನಗೆ ತೋಚಿದ ಪರಿಹಾರ ನೀಡುತ್ತೇನೆ, ಇದಕ್ಕೆ ಕೂದ ಅಧಿಕಾರ ಬೇಕು, ನಿನ್ನ ಆಶೀರ್ವಾದವೂ ಕೂಡ..."<br /><br />"ಅದು ಯಾವಗಲೂ ಇರುತ್ತದೆ ಮಗೂ... ಮುಂದುವರೆಸು.."<br /><br />ನನ್ನ ಪಟ್ಟಿ ಹೀಗಿದೆ...<br />1) ನಗರದಲ್ಲಿ ಇರುವ 120+ ಕಾಲೇಜುಗಳಲ್ಲಿ ಒಂದಷ್ಟಕ್ಕೆ ಬಾಗಿಲು ಜಡಿಯಬೇಕು, 40 ಕಾಲೇಜುಗಳಿಗೆ ಮಾತ್ರ ಅವಕಾಶ ನೀಡುತ್ತೇನೆ.<br />2) ಮಿಕ್ಕ ಕಾಲೇಜುಗಳನ್ನು ರಾಜ್ಯಾದ್ಯಂತ ಸರಿಯಾಗಿ ವಿಂಗಡನೆಯಾಗುವಂತೆ ನಾನು ನೋಡಿಕೊಳ್ಳುತ್ತೇನೆ.<br />3) ಇಂಜಿನಿಯರಿಂಗ್ ಒಂದೇ ಅಲ್ಲದೇ ಇತರೆ ಎಲ್ಲಾ ವಿಭಾಗಗಳಿಗೂ ಸಮಾನ ಪ್ರಾಮುಖ್ಯತೆ ಸಿಗುವಂತೆ ಮಾಡುತ್ತೇನೆ, ಅದಕ್ಕೆ ರೂಪುರೇಶೆಯನ್ನು ಸಿದ್ದಪಡಿಸುವೆ.<br />4) ನಗರದ ಒಳಗೆ ಇರುವ ಹಲವಾರು IT ಕಂಪೆನಿಗಳನ್ನು ನಗರದ ಆಚೆಗೆ ಉಚ್ಚಾಟಿಸುತ್ತೇನೆ, ಊರ ಸುತ್ತಲೂ IT park ಗಳನ್ನು ನಿರ್ಮಿಸಲನುವಾಗುವಂತೆ ನೋಡಿಕೊಳ್ಳುತ್ತೇನೆ.. ಇದರಿಂದ ನಗರದ ಒಳಗೆ traffic ಒತ್ತಡ ಸ್ವಲ್ಪ ಮಟ್ಟಿಗಾದರೂ ಕಮ್ಮಿಯಾಗುತ್ತದೆ<br />5) ಹೊರ ರಾಜ್ಯ ವಿದ್ಯಾರ್ಥಿಗಳಿಗೆ ಇನ್ನು ನಮ್ಮ ರಾಜ್ಯದಲ್ಲಿ ಇಂಜಿನಿಯರಿಂಗ್ ಸೀಟುಗಳು ದೊರೆಯದಂತೆ ಮಾಡುತ್ತೇನೆ..!!<br />6) "ಕನ್ನಡ" ಭಾಷೆಯನ್ನು ಹೆಚ್ಚು ವ್ಯಾಪಕವಾಗಿ ಉಪಯೋಗಿಸುವಂತೆ ಆದೇಶ ಹೊರಡಿಸುತ್ತೇನೆ, ಉಲ್ಲಂಘಿಸಿದರು ದಂಡನೆಗೆ ಅರ್ಹರು...!!<br /></span><br /><br /><span style="font-family:trebuchet ms;">ಹೀಗೆ ಪಟ್ಟಿ ಸಾಗುತ್ತಲೇ ಇರುತ್ತದೆ ಬ್ರಹ್ಮ, ನನ್ನ ಕಳಕಳಿ ನಿನಗೆ ಅರ್ಥವಾಯಿತಲ್ಲವೆ?, ನನಗೆ ಇದನ್ನೆಲ್ಲವ ಮಾಡುವ ಅಧಿಕಾರ ಬೇಕು, ಹಣ ಬೇಕು, ನಾನು ಇದನೆಲ್ಲವನ್ನು ಹಣ, ಅಧಿಕಾರ, ಒಂದಷ್ಟು ಸಮಚಿತ್ತರೊಡನೊಡಗೂಡಿ ಸಾಧಿಸುವೆ..ಏನೆನ್ನುವಿ ಬ್ರಹ್ಮ??<br /><br />ಬ್ರಹ್ಮ ನನ್ನನ್ನೇ ದಿಟ್ಟಿಸುತ್ತಿದ್ದ, ನನಗೂ ಒಂದೇ ಸಮನೇ ಭಾಷಣ ಬಿಗಿದು ದಣಿವಾಗಿತ್ತು.<br /><br />ಮೌನ ಮುರಿದು ಬ್ರಹ್ಮ.."ನಿನ್ನ ಜನಪರ ಕಾಳಜಿ ನನಗೆ ಹಿಡಿಸಿತು, ಆದರೆ ಇದೆಲ್ಲವನ್ನು ನಿನ್ನೊಬ್ಬನಿಂದಲೆ ಸಾಧಿಸಲು ಸಾಧ್ಯವೇ??"<br /><br />"ನನ್ನಿಂದಲಾದರೂ ಶುರುವಾಗಲಿ ಬ್ರಹ್ಮ, ಒಳ್ಳೇ ಕೆಲಸ ಎಂದಿಗೂ ಮುಂದುವರೆಯುತ್ತದೆ..."<br /><br />"ಹಿಂದೆ ಯಾರೂ ಸಹ ಈ ಪರಿಯ ವರವನ್ನು ಕೇಳಿರಲಿಲ್ಲ, ಮುಂದೆಯು ಕೇಳುವುದಿಲ್ಲವೆಂದೆನಿಸುತ್ತೆ, ನ ಭೂತೋ ನ ಭವಿಷ್ಯತಿ, ಇದೋ ನಿನಗೆ ವರವೀಯುತ್ತಿದ್ದೇನೆ, ನೀನೆಂದುಕೊಂಡಿರುವ ಈ ಏಲ್ಲಾ ಕನಸುಗಳು ಕೈಗೂಡಲಿ, ಅದಕ್ಕೆ ಬೇಕಾದ ಹಣ, ಅಧಿಕಾರವನ್ನು ನಾನು ನಿನಗೆ ನೀಡುತ್ತಿದ್ದೇನೆ, ಇಂದಿನಿಂದ ನೀನು ಈ ರಾಜ್ಯದ ಮುಖ್ಯಮಂತ್ರಿ....ಮುಖ್ಯಮಂತ್ರಿ..." ಎಂದು ನನ್ನ ತಲೆ ಮೇಲೆ ತನ್ನ ಹಸ್ತವನ್ನಿಟ್ಟು ಉದ್ಗರಿಸಿದ...<br /><br />ಮೈರೋಮಗಳೆಲ್ಲ ಸೆಟೆದು ನಿಂತು, ನರನಾಡಿಗಳಲ್ಲಿ ಮಿಂಚಿನ ಸಂಚಾರವುಂಟಾಗಿತ್ತು, ಒಂದು ತೆರನಾದ ಭಾವ ನನ್ನಲ್ಲಿ ಉಂಟಾಗಿತ್ತು, ಶಬ್ಧಾತೀತ ಭಾವ!! ಮಾಡಿಕೊಂಡ ರೂಪುರೇಷೆಗಳೆಲ್ಲ ಸಾಧಿಸುವಷ್ಟು ಶಕ್ತಿ ನನ್ನಲ್ಲಿ ಉಂಟಾಗಿತ್ತು ಬ್ರಹ್ಮನ ಸ್ಪರ್ಶಮಾತ್ರದಿಂದ...ಅದೇ ಭಾವದಲ್ಲಿ ಒಂದತ್ತು ನಿಮಿಷಗಳು ಕಳೆದೆ ಎಂದೆನಿಸುತ್ತೆ... </span><br /><br /><span style="font-family:trebuchet ms;"></span><br /><br /><span style="font-family:trebuchet ms;">ನನಗೆ ನಾನು ಅಂದುಕೊಳ್ಳುತ್ತಲ್ಲಿದ್ದೆ..."ನಾನೀಗ ಮುಖ್ಯಮಂತ್ರಿ..ರಾಜ್ಯವನ್ನಾಳುವ ಮುಖ್ಯಮಂತ್ರಿ..."<br /><br />ತಲೆ ನೇವರಿಸುತ್ತ ಬ್ರಹ್ಮ ಕೇಳಿದ.."ಮಗೂ ಇದುವರೆಗೂ ನಿನಗೆ ಅಂತ ಏನು ಕೇಳಿಕೊಳ್ಳಲಿಲ್ಲವಲ್ಲ, ಏನಾದರೂ ಕೇಳು"<br /><br />"ನನಗೆ ಕೇಳಬೇಕೆಂದೆನಿಸಲ್ಲಿಲ್ಲ ಬ್ರಹ್ಮ..." ಹಾಕಿರುವ ಯೋಜನಾಪಟ್ಟಿಗಳನ್ನು ಪೂರೈಸುವ ಶಕ್ತಿ ಕೊಡು ಸಾಕು ನನಗೆ".<br /><br />"ಶಕ್ತಿಯೆಲ್ಲವನ್ನು ಕೊಟ್ಟಾಯಿತು, ವಯುಕ್ತಿಕವಾಗಿ ನೀನು ಏನೊಂದನ್ನೂ ಕೇಳಲಿಲ್ಲವಲ್ಲ, ಏನಾದರೂ ಇದ್ದರೆ ಕೇಳು, ಇದು ನನ್ನ ಆದೇಶ.." ಎಂದು ನನ್ನ ಮೇಲೆ ಹುಸಿಕೋಪವನ್ನು ಹೊರಸೂಸಿದ..<br /><br />"ಸರಿ ಹಾಗಿದ್ದಲ್ಲಿ, ನನ್ನವರನ್ನೆಲ್ಲಾ ಚೆನ್ನಾಗಿಡು..." ಎಂದೆ..<br /><br />"ಮುಂದೆ" ಎಂದ ಬ್ರಹ್ಮ..<br /><br />ಮತ್ತೆ ಮತ್ತೆ ಯೋಚಿಸಿದೆ, ಮನದಾಳದಲ್ಲಿ ಒಂದು ಆಸೆ ಕೂತಿತ್ತು, ನನ್ನ ವಯುಕ್ತಿಕ ಕನಸಾಗಿತ್ತು ಅದು, ಅದಕ್ಕೆ ನೀರೆರೆದು ಪಾಲಿಸಿ ಪೋಷಿಸಿ ಜತನವಾಗಿ ಕಾಪಿಟ್ಟುಕೊಂಡು ಬಂದಿದ್ದೆ, ಈ ಗಡಿಬಿಡಿಯಲ್ಲಿ ಮರೆತಿದ್ದೆ, ಕೇಳೋಣವೆಂದೆನಿಸಿತು, ಒಂದು ರೀತಿಯ ಅಳುಕಿತ್ತು,ರಾಜನ ಮುಂದೆ ಬದನೆಕಾಯಿ ಕೇಳಿದ ಹಾಗಿರುತ್ತದೆ ಎಂದು.<br /><br />ಗಂಟಲು ಸರಿ ಮಾಡಿಕೊಂಡು "ಬ್ರಹ್ಮಾ.................." ಎಂದೆ..<br /><br />"ಏನು ಮಗೂ, ಏನದು ನಿಸ್ಸಂಕೋಚವಾಗಿ ಕೇಳುವವನಂತಾಗು...."<br /><br />"ಅ...ಅದು...ನನಗೆ.." ಎಂದು ತಡವರಿಸುತ್ತಿದ್ದೆ...<br /><br />ಅಷ್ಟರಲ್ಲಿ.....<br /><br />ನನ್ನ ಮೊಬೈಲು ರಿಂಗುಣಿಸುತ್ತಿತ್ತು, ಮುಸುಕು ಹಾಕಿ ಮಲಗಿದ್ದ ನಾನು ಧಡಾರನೆ ಎದ್ದು ನೋಡಿದೆ, ಸಮಯ ಅದಾಗಲೇ ಬೆಳಿಗ್ಗೆ 5:45 ಆಗಿತ್ತು, ನನ್ನನ್ನು ಆಫೀಸಿಗೆ ಹೊತ್ತುಕೊಂಡು ಹೋಗಲು ಬಂದಿದ್ದ ನನಗಾಗಿ ಕಾದು ಕುಳಿತಿದ್ದ ಕ್ಯಾಬ್ ಡ್ರೈವರ್ ನ ಕರೆಯಾಗಿತ್ತು ಅದು...<br /><br />ಎದ್ದೆನೋ ಬಿದ್ದೆನೋ ಎಂದು ಕೆಳಗೋಡಿದೆ, ಮಧ್ಯ ಮಧ್ಯ ಕಣ್ಣುಜ್ಜಿ ನೋಡಿಕೊಳ್ಳುತ್ತಿದ್ದೆ, ಬ್ರಹ್ಮ ನಿದ್ದಾನೋ ಇಲ್ಲವೋ ಎಂದು, ಬ್ರಹ್ಮನೂ ಇಲ್ಲ ಯಾವನೂ ಇಲ್ಲ..ಅದಾಗಲೆ 5 ಬಾರಿ missed calls ಕೊಟ್ಟಿದ ಡ್ರೈವರನಿಗೆ 10ನಿಮಿಷದಲ್ಲಿ ಬರುವುದಾಗಿ ತಿಳಿಸಿ ಸ್ನಾನಾದಿಕಾರ್ಯಗಳಿಗೋಸ್ಕರ ಕರ್ಮಭೂಮಿಯೆಡೆಗೆ ನುಗ್ಗಿದೆ.... </span><br /><span style="font-family:Trebuchet MS;"></span><br /><strong>-(ಮುಗಿಯಿತು)</strong>Unknownnoreply@blogger.com11tag:blogger.com,1999:blog-1028483830046744384.post-65425132849871065112008-02-14T10:08:00.006+05:302008-02-14T10:20:52.844+05:30ನಾನು ಕವಿಯಲ್ಲ...<em>ಅದೇ ಲಹರಿಯಲ್ಲಿ ಬಂದ ಎರಡನೆಯ ಕವನ.. :-) :-)</em><br /><a href="http://4.bp.blogspot.com/_WoHbqrpm1NE/R7PGjVblgUI/AAAAAAAABDU/hWulwYjnYxw/s1600-h/cropped.JPG"><span style="font-family:trebuchet ms;"><img id="BLOGGER_PHOTO_ID_5166691507874660674" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://4.bp.blogspot.com/_WoHbqrpm1NE/R7PGjVblgUI/AAAAAAAABDU/hWulwYjnYxw/s320/cropped.JPG" border="0" /></span></a><span style="font-family:trebuchet ms;"> ನಾನು ಕವಿಯಲ್ಲ... </span><br /><br /><div><div><span style="font-family:trebuchet ms;"></span></div><div><span style="font-family:trebuchet ms;">ಮನದಾಳದ ಭಾವಗಳನು ಕವನಗಳಲಿ ಚಿತ್ರಿಸಲು ಬಾರದಲ್ಲ,<br />ಆದರೂ ನನ್ನೀ ಪ್ರಯತ್ನಕ್ಕೆ ನಿನ್ನ ಮೆಚ್ಚುಗೆ ಇರುತ್ತದಲ್ಲ?<br />ನಾನು ಕವಿಯಲ್ಲ...<br /><br />ಇಂದ್ರ ಚಂದ್ರರ ಉಪಮೆಗಳನ್ನೊಡಗೂಡಿಸಿ ಬಣ್ಣಿಸಲೆನಗೆ ಬಾರದು,<br />ನಿನಗೆ ಜೋಗುಳ ಹಾಡಿ ಮಲಗಿಸದೆ ಎನಗೆ ನಿದಿರೆಯು ಸನಿಹ ಸುಳಿಯದು,<br />ನಾನು ಕವಿಯಲ್ಲ...<br /><br />ಹಸುಗೂಸಿನ ನಗುವು, ಕಲ್ಮಷವನರಿಯದ ಕಂಗಳು,<br />ನಿನ್ನಿಂದಲೇ ನನ್ನೀ ಮನದ ಮುಗಿಲೆಲ್ಲಾ ತುಂಬಿದೆ ಬೆಳದಿಂಗಳು,<br />ನಾನು ಕವಿಯಲ್ಲ...<br /><br />ನಂದಿ ಹೋಗಿದ್ದ ಒಲವಿಗೆ ಹಚ್ಚಿದೆ ನೀನು ಹಣತೆ,<br />ನೆಲೆಸಿಹುದಿಂದು ಹೃದಯಾಳದಲ್ಲಿ ನಿನ್ನಿಂದಲೇ ದಿವ್ಯತೆ,<br />ನಾನು ಕವಿಯಲ್ಲ... </span></div><div><span style="font-family:Trebuchet MS;"></span></div><div><em>-ಶ್ರೀಧರ</em> </div></div>Unknownnoreply@blogger.com108tag:blogger.com,1999:blog-1028483830046744384.post-25039263528218687692008-02-14T10:04:00.004+05:302008-02-14T10:18:29.176+05:30ಮೊದಲು ...<em>ನನ್ನವಳಿಗಾಗಿ ನನ್ನ ಮೊದಲ ಕವನ</em> .. :-)<br /><br /><a href="http://1.bp.blogspot.com/_WoHbqrpm1NE/R7PFTlblgSI/AAAAAAAABDE/CmUv7q-axq0/s1600-h/Roses+-+True+Love+Forever.jpg"><span style="font-family:trebuchet ms;"><img id="BLOGGER_PHOTO_ID_5166690137780093218" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://1.bp.blogspot.com/_WoHbqrpm1NE/R7PFTlblgSI/AAAAAAAABDE/CmUv7q-axq0/s320/Roses%2B-%2BTrue%2BLove%2BForever.jpg" border="0" /></span></a><span style="font-family:trebuchet ms;"><br /></span><div><span style="font-family:trebuchet ms;">ನಾ ಬರೆಯ ಹೊರಟೆ ಒಲವಿನ ಓಲೆ ನನ್ನ ನಲ್ಲೆಗೆ,<br />ಇದು ನನ್ನ ಮೊದಲ ಕವನ ಅರ್ಪಿಸುವೆನೆಮ್ಮೆಯ ಪ್ರೀತಿಗೆ,<br /><br />ಕವಿವರೇಣ್ಯರಂತೆ ನಿನ್ನ ತಿಂಗಳ ಬೆಳಕಿಗೆ, ಕಾಮನಬಿಲ್ಲಿಗೆ ಹೋಲಿಸುವುದಿಲ್ಲ,<br />ನೀ ನನ್ನ ಬಾಳಿಗಾಸರೆಯೆಂದು ಹೇಳುವುದಾ ನಾ ಮರೆಯುವುದಿಲ್ಲ,<br /><br />ಗುರಿಯಿಲ್ಲದ ಹುಡುಕಾಟದಲ್ಲಿದ್ದೆ ನಾನು, ಆಕಸ್ಮಿಕವಾಗಿ ಬಂದೆ ನೀನು,<br />ಎಣೆಯಿಲ್ಲದಾ ಕನಸುಗಳಿಗೆ ಸ್ಪೂರ್ತಿಯಾಗಿರುವೆಯಿಂದು ನೀನು,<br /><br />ನಿನ್ನ ಬಿಗಿದಪ್ಪಿ ಮುದ್ದಾಡುವ ಕಾತುರ,<br />ಇದ ತಿಳಿದೂ ತಿಳಿದೂ ನೀನಿರುವಿಯೇಕೆ ಅಷ್ಟು ದೂರ?<br /><br />ನಮ್ಮೀ ಪ್ರೀತಿ ಎಂದೆಂದಿಗೂ ಅಜರಾಮರ...ಅಜರಾಮರ ........ </span></div><div><span style="font-family:Trebuchet MS;"></span></div><div><span style="font-family:Trebuchet MS;"></span></div><div><span style="font-family:Trebuchet MS;"><em>-ಶ್ರೀಧರ</em> </span></div>Unknownnoreply@blogger.com11tag:blogger.com,1999:blog-1028483830046744384.post-68201151795450596182008-02-12T14:47:00.000+05:302008-02-12T18:50:59.639+05:30ಚಿತ್ರಚಾಪ - ನನಗನ್ನಿಸಿದ್ದು....<a href="http://2.bp.blogspot.com/_WoHbqrpm1NE/R7FllVblgRI/AAAAAAAABC8/1DimI_XtjQA/s1600-h/chitra_1_new1_29_jan.jpg"><img id="BLOGGER_PHOTO_ID_5166021939653083410" style="FLOAT: left; MARGIN: 0px 10px 10px 0px; CURSOR: hand" alt="" src="http://2.bp.blogspot.com/_WoHbqrpm1NE/R7FllVblgRI/AAAAAAAABC8/1DimI_XtjQA/s320/chitra_1_new1_29_jan.jpg" border="0" /></a><br /><div>’ಚಿತ್ರಚಾಪ’ದ ಬಿಡುಗಡೆ ಸಮಾರಂಭಕ್ಕೆ ನೀವೆಲ್ಲರೂ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಿದುದಕ್ಕೆ ನಿಮಗೆಲ್ಲರಿಗೂ ನನ್ನ ಹೃತ್ಪೂರ್ವಕವಾದ ನಮನಗಳು. ನಾನು ತೆಗೆದಿರಿಸಿದ ಪ್ರತಿಯನ್ನು ಮನೆಗೆ ಕೊಂಡು ಹೋಗಿ ಇದಾಗಲೇ ಓದಲು ಶುರುವಿಕ್ಕಿರುತ್ತೀರಿ ಎಂಬುದು ಸಹ ತಿಳಿದ ವಿಷಯವೇ. </div><br /><div><br />Proffessor ಜಿ.ವೆಂಕಟಸುಬ್ಬಯ್ಯನವರು ’ನಾನು ಕಳೆದ 20ವರ್ಷಗಳಲ್ಲಿ ಈ ರೀತಿಯ ಸಮಾರಂಭವನ್ನು ನೋಡಿರಲಿಲ್ಲ’ ಎಂದಾಗ ಪುಸ್ತಕದ ಬಗ್ಗೆ ಅಪಾರ ಮೆಚ್ಚುಗೆಯನ್ನು ಸಭಿಕರ ಮುಂದೆ ವ್ಯಕ್ತಪಡಿಸಿದಾಗ ಉಂಟಾದ ಕರಾಡತನದ ಶಬ್ಧ ಇನ್ನೂ ಕಿವಿಯಲ್ಲಿ ಗುಯ್ ಗುಡುತ್ತಿರುವಾಗಲೇ ಪುಸ್ತಕವನ್ನು ಓದಿ ಮುಗಿಸಿದೆ.<br /><br />ಪುಸ್ತಕ ಬಿಡುಗಡೆಯ ಹಿಂದಿನ ದಿವಸ ರಾತ್ರಿ 1ಗಂಟೆಯಲ್ಲಿ ಅರುಣ ಕೇಳಿದ ’ಮುನ್ನುಡಿ’ ಓದುವೆಯಾ ಎಂದು, ಅದು ಪುಸ್ತಕದ ಮೊದಲ ಪ್ರತಿ. ಇಲ್ಲ ನಾಳೆ ಬಿಡುಗಡೆಯಾದಮೇಲೆ ಕೊಂಡೇ ಓದುವೆ ಎಂದು ಸುಮ್ಮನಾದೆ.<br /><br />’ಚಿತ್ರಚಾಪ’ದ ಉದ್ದಿಶ್ಯ ಒಂದೇ ವಾಕ್ಯದಲ್ಲಿ ಸವಿಸ್ತಾರವಾಗಿ ವರ್ಣಿಸಿದ್ದಾರೆ.."ಮೊದಲ ಪ್ರಯತ್ನವಿದು ಚಿತ್ರಚಾಪ. ಪ್ರಕೃತಿಗಾಗಿ, ಕನ್ನಡಕ್ಕಾಗಿ, ನಮಗಾಗಿ, ನಿಮಗಾಗಿ, ಎಲ್ಲರಿಗಾಗಿ". ವಸುಧೇಂದ್ರರ ಮುನ್ನುಡಿಯು ಪುಸ್ತಕಕ್ಕೆ ಕಳಶವಿಟ್ಟಂತಿದೆ.<br /><br />ಒಟ್ಟಾರೆಯಾಗಿ ಪುಸ್ತಕದಲ್ಲಿ 3 ಕವನಗಳು 5 ಪ್ರಭಂದಗಳು ಇವೆ, ಯಾವುದೇ ಕವನಗಳು ನನಗೆ ಏಕೆ ಅರ್ಥವಾಗುವುದಿಲ್ಲ ಎಂದು ನನಗೇ ಅರ್ಥವಾಗಿಲ್ಲ!!, ಅದರ ಬಗ್ಗೆ No Comments!!!<br /><br />ಶ್ರೀನಿಧಿಯವರ ಪರಿಸರದ ನಾಲ್ಕು ಚಿತ್ರಗಳಾದ ಕೆರೆ,ಕೃಷಿ,ನೆಲೆ, ಅಲೆ ಇವುಗಳ ಬಗ್ಗೆ ಸವಿಸ್ತಾರವಾಗಿಯೇ ಬರೆದಿದ್ದಾರೆ. ಇವುಗಳ ಮೇಲೆ ಮಾನವರ ಅವಲಂಬಿತನದ ಚಿತ್ರಣ ಸಿಗುತ್ತದೆ, ಇದರಲ್ಲಿ ಯಾವುದಕ್ಕೊ ಅಂತ್ಯವಿಲ್ಲ, ಓದುಗರನ್ನು ಅದರ ಬಗ್ಗೆ ಚಿಂತಿಸುವಂತೆಯೇ ಮಾಡಿ ಅದರ ಬಗ್ಗೆ ಯೋಚಿಸುತ್ತಿರುವಾಗಲೇ ಮುಂದಿನ ಚಿತ್ರದ ಬಗ್ಗೆ ಚಿತ್ರಣ ಶುರುವಾಗಿರುತ್ತದೆ. ಅರೆರೆ ಮುಗಿದೇ ಹೋಯಿತೇ ಎಂದೆನಿಸುತ್ತದೆ ಮತ್ತೊಮ್ಮೆ ಮಗದೊಮ್ಮೆ ಓದುವಂತೆ ಪ್ರೇಪಿಸುತ್ತದೆ. ಪಾತ್ರಗಳ ಕಟ್ಟುವಿಕೆ ಅದ್ಭುತವಾಗಿದೆ, ಅರ್ಥವಾದರೂ ಅರ್ಥವಾಗದ ಒಂದು ಗುಂಗಿನಲ್ಲಿ ಇದ್ದೇ ’ಪರಿಸರದ ನಾಲ್ಕು ಚಿತ್ರಗಳು’ ಓದಿದ ಮೇಲೆ, ಮತ್ತೊಮ್ಮೆ ಓದುತ್ತೇನೆ...ರಾಹೆಯವರ ರೇಖಾಚಿತ್ರಗಳು ಇಲ್ಲದಿದ್ದರೆ ಮತ್ತಷ್ಟು ತಿಣುಕಾಡುತ್ತಿದ್ದನೇನೋ...<br /><br />ಶ್ರೀನಿವಾಸನ ’ಇದು ಎಂಥಾ ಲೋಕವಯ್ಯ!’ ಆತ ಮಾಡಿದ ಬೆಳಗಾವಿಯ ಪ್ರವಾಸಕಥನ. ಸಂಪೂರ್ಣ ಪ್ರವಾಸ ಕಥನ ಕಣ್ಣಿಗೆ ಕಟ್ಟಿದಂತಿದೆ, ಅಲ್ಲಲ್ಲಿ ಕಂಡು ಬರುವ ಉಪಮೆಗಳು, ಕಂಡ ದೃಶ್ಯಗಳನ್ನು ವರ್ಣಿಸುವ ರೀತಿ, ಪದಬಳಕೆ ನಿರ್ಜೀವ ವಸ್ತುಗಳಲ್ಲಿ ಜೀವಂತಿಕೆ ತುಂಬಿ ಓದುಗರ ಮುಂದೆ ಸಾದ್ಯಂತ ಪಡಿಸುವ ರೀತಿ ಬಹಳ ಸೊಗಸಾಗಿದೆ.<br /><br /><br />ಸುಶ್ರುತರ ’ಹಳ್ಳಿ ಪರಿಸರದಲ್ಲೊಂದು ಸುತ್ತು’ ತೇಜಸ್ವಿಯವರ 'ಪರಿಸರದ ಕತೆ' ನೆನಪಿಸಿತು ನನಗೆ, ಹಳ್ಳಿ ವಾತವರಣದಲ್ಲಿ ನಡೆಯುವ ಘಟನಾವಳಿಗಳು, ಅಲ್ಲಿನ ಜನಜೀವನವನ್ನ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ’ಅಡಿಕೆ’ ಬೆಳೆಯ ಸಂಪೂರ್ಣ ಮಾಹಿತಿ ದೊರೆಯುತ್ತದೆ, ಆರಂಭದಿಂದ ಹಿಡಿದು ಕೊನೆಯವರೆಗೆ ನಾವೇ ಆ ಸಕಲ ಕಾರ್ಯಗಳು ನಮ್ಮ ಕಣ್ಣ ಮುಂದೇನೇ ನಡೆಯುತ್ತಿದ್ದೇನೋ ಎಂಬಂತೆ ಭಾಸವಾಗುತ್ತಿತ್ತು.<br /><br />ಅರುಣನ ’ಅರಿವೆಷ್ಟಿದೆ ನಮಗೆ’ ಲೇಖನವನ್ನು ಒಂದು ಪಠ್ಯಪುಸ್ತಕದ ಪಾಠವನ್ನಗಿಸುವ ಸಕಲ ಲಕ್ಷಣಗಳೂ ಇವೆ. Trekking ಏಕೆ ಮಾಡುತ್ತೇವೆ? ಪರಿಸರದ ಸಂರಕ್ಷಣೆಯಲ್ಲಿ ನಮ್ಮ ಪಾತ್ರವೆಷ್ಟು, ಪ್ರಾಣಿ ಪಕ್ಷಿ ಸಂಕುಲಗಳ ಜಾಗವನ್ನು ನಾವೆಷ್ಟು ಆಕ್ರಮಿಸಿದ್ದೇವೆ, ಎಷ್ಟೋ ಮಂದಿಗೆ ಇದಾವುದರ ಅರಿವಿಲ್ಲದೆಯೇ ಪರಿಸರವನ್ನು ಹಾಳುಗೆಡವುತ್ತಿರುತ್ತಾರೆ ತಿಳಿದೆಯೋ ತಿಳಿಯದೆಯೋ... ವಯೋಮಾನದ ಮಿತಿಯಿಲ್ಲದೆ ಎಲ್ಲರೂ ಓದಲೇಬೇಕಾದ ಲೇಖನ ’ಅರಿವೆಷ್ಟಿದೆ ನಮಗೆ’? ಓದಿದ ಮೇಲೆ ಪರಿಸರದ ಬಗ್ಗೆ ನಿಮ್ಮ ದೃಷ್ಟಿಕೋನ ಸ್ವಲ್ಪ ಮಟ್ಟಿಗಾದರೂ ಬದಲಾಗುತ್ತದೆ ಎಂಬುದರ ಅರಿವು ನನಗಿದೆ..!!<br /><br />ಕೊನೆಯದಾಗಿ ಅನ್ನಪೂರ್ಣರ ’ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ, ಸಾಯೊದ್ರೊಳಗೆ ಒಮ್ಮೆ ನೋಡು ಕೆಮ್ಮಣ್ ಗುಂಡಿ ’ ಓದಿದ ಮೇಲೆ ಕೆಮ್ಮಣ್ಣುಗುಂಡಿಗೇ ಹೋಗಿ ಬಂದಂತಾಯಿತು. ನಾನೂ ಒಮ್ಮೆ ಇವರೊಡನೆ ಹೋಗಬೇಕು. ’ರಾಣಿ’ ಮತ್ತೆ ’ವಾಣಿ’ ಯನ್ನು ನೋಡಬೇಕು. !!<br /><br />ಪುಸ್ತಕ ರೂಪದ ಮೊದಲ ಪ್ರಯತ್ನದಲ್ಲೇ ಎಲ್ಲರಿಗೂ full ಮಾರ್ಕ್ಸ್ ಬಂದಿದೆ, ಸಂಪೂರ್ಣ ಪುಸ್ತಕ ಓದಿದ ಮೇಲೆ ಪುಸ್ತಕ ಮುಗಿದೇ ಹೋಯಿತೇ ಎಂಬ ಭಾವ ನಿಮ್ಮನ್ನು ಕಾಡೇ ಕಾಡುತ್ತದೆ. ಹೀಗೆ ಮುಂಬರುವ ಎಲ್ಲಾ ಪ್ರಯತ್ನಗಳಿಗೂ ನಿಮಗೆ ಯಶ ಸಿಗಲಿ. ’ಪ್ರಣತಿ’ ಸಂಸ್ಥೆಯಿಂದ ಸಾಕಷ್ಟು ಪುಸ್ತಕಗಳು ಹೊರಬರಲಿ... </div>Unknownnoreply@blogger.com4tag:blogger.com,1999:blog-1028483830046744384.post-65183878231606803072008-02-09T11:48:00.000+05:302008-02-09T11:54:06.178+05:30ಪುಟ್ಟ - ಪುಟ್ಟಿ ....<a href="http://4.bp.blogspot.com/_WoHbqrpm1NE/R61G11blgQI/AAAAAAAABCE/FFVpeq-R44o/s1600-h/putti.JPG"><img id="BLOGGER_PHOTO_ID_5164862238353621250" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://4.bp.blogspot.com/_WoHbqrpm1NE/R61G11blgQI/AAAAAAAABCE/FFVpeq-R44o/s320/putti.JPG" border="0" /></a> <div><div><div>ನನ್ನನ್ನು ಯಾರಾದರೂ ತಡೆದು ಜಗತ್ತಿನ ಅತ್ಯಂತ ಶ್ರೇಷ್ಠ ಸಂಭಂದ ಯಾವುದೆಂದು ಕೇಳಿದರೆ ಪಟ್ ಎಂದು ಹೇಳುತ್ತೇನೆ...ಅದು ನನ್ನವರಾದ <strong>ಪುಟ್ಟ - ಪುಟ್ಟಿ</strong> ಸಂಭಂದ ಎಂದು.</div><div><br />ಬಾಹ್ಯ ಪ್ರಪಂಚಕ್ಕೆ ಅಕ್ಕ-ತಮ್ಮ ಇವರು. ಪುಟ್ಟ ಎಲ್ಲೆಲ್ಲಿಯೂ ಪುಟ್ಟಿಯನ್ನು ಕಾಣುತ್ತಾನೆ, ಪುಟ್ಟಿ ಮಗುವಿನಂತೆ ಎತ್ತಿ ಮುದ್ದಾಡಿಸುತ್ತಾಳೆ, ಉಹೂ ನನಗೆ ಈ ಸಂಭಂದವನ್ನು ವಿವರಿಸಲು ಬಣ್ಣಿಸಲು ಪದಗಳಿಗೆ ತಡಕಾಡುತ್ತಿದ್ದೇನೆ, ಪದಗಳಿಗೆ ನಿಲುಕದ ಭಾವವಿದು. ಸಂಭಂದದಲ್ಲಿ ನಿಷ್ಠೆ ಎಂದರೆ ಹೇಗಿರಬೇಕು ಎಂಬುದನ್ನು ಇವರುಗಳನ್ನು ನೋಡಿ ಕಲಿಯಬೇಕು, ಆ ನಿಷ್ಠೆಯನ್ನು ಪ್ರಯತ್ನಪೂರ್ವಕವಾಗಿ ಹೇರಿಕೊಂಡಿದುದಲ್ಲ, ಹೃದಯಾಂತರಾಳದ ಭಾವ.<br /><br />ಎಂತೆಂತಹ ಕ್ಷುಲ್ಲಕ ವಿಷಯಗಳಿಗೆ ಸಂಭಂದಗಳನ್ನು ಕಳೆದುಕೊಳ್ಳುವ ಮಂದಿಯನ್ನು ನೋಡಿದ್ದೇನೆ, ಯಾರೋ ಒಬ್ಬರು ಮೋಸ ಮಾಡಿದರು ಎಂದು ಇಡೀ ಸಂಕುಲವನ್ನು ಜೀವನ ಪರ್ಯಂತ ಶಪಿಸುವರನ್ನು ನೋಡಿದ್ದೇನೆ, ಸಂಭಂದಗಳಲ್ಲಿನ ಅವಕಾಶವಾದವನ್ನು ನೋಡಿದ್ದೇನೆ. ಅಂತಹವರಿಗೆ ಇವರೀರ್ವರನ್ನು ತೋರಿಸಬೇಕು, ಅವರು ಜೀವನವನ್ನು ನೋಡುವ ದೃಷ್ಟಿಕೋನ ಸ್ವಲ್ಪ ಮಟ್ಟಿಗಾದರೂ ಬದಲಾಗುತ್ತದೆ. <img id="BLOGGER_PHOTO_ID_5164861890461270258" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://3.bp.blogspot.com/_WoHbqrpm1NE/R61GhlblgPI/AAAAAAAABB8/sD7vhTw_0r4/s320/puttaputti.JPG" border="0" /><br />"ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ, ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ..." ಎಂದು ಹೇಳಿದ್ದಾರಲ್ಲವೆ? </div><br /><div>ಬಿಟ್ಟಾಕಿ, ಜೋಗವನ್ನು ನೋಡದಿದ್ದರೂ ಪರವಾಯಿಲ್ಲ, ಇರೋದ್ರೊಳಗೆ ಇವರಿಬ್ಬರನ್ನು ನೋಡಿ.<br />ಅಂತಹ ಜೋಗದಲ್ಲೇ ನೀರು ಕಮ್ಮಿ ಆಗುತ್ತದಂತೆ, ಆದರೆ ಇಲ್ಲಿ...............................<br /><br />ಅತಿ ಶೀಘ್ರದಲ್ಲಿ ನಿಮಗೆ ಪರಿಚಯಿಸುತ್ತೇನೆ................. </div></div></div>Unknownnoreply@blogger.com5tag:blogger.com,1999:blog-1028483830046744384.post-6630969097273611662008-02-07T23:14:00.000+05:302008-02-07T23:34:23.658+05:30ಚಿತ್ರಚಾಪ....<a href="http://2.bp.blogspot.com/_WoHbqrpm1NE/R6tFAkCeFAI/AAAAAAAABBs/1OUgVSGWX6M/s1600-h/chitrachapa.JPG"><img id="BLOGGER_PHOTO_ID_5164297273686758402" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://2.bp.blogspot.com/_WoHbqrpm1NE/R6tFAkCeFAI/AAAAAAAABBs/1OUgVSGWX6M/s320/chitrachapa.JPG" border="0" /></a><br /><div>ಈ ಭಾನುವಾರ ಅಂದರೆ Feb 10ರಂದು ಸರಿಯಾಗಿ ಬೆಳಿಗ್ಗೆ ಹತ್ತೂವರೆಗೆ Indian Institute of World Culture ನ ಅಂಗಳದಲ್ಲಿ ನಿಮ್ಮನ್ನು ಎದುರುಗೊಳ್ಳುವ ಅಭಿಲಾಷೆ ನನ್ನದು.. ಏನು ವಿಶೇಷ ಎಂದು ಕೇಳಿದಿರಾ??<br /><br />ನಮ್ಮ ಉತ್ಸಾಹಿ ಯುವಕರ ತಂಡ <strong>"ಚಿತ್ರಚಾಪ"</strong> ಎಂದು ಶೀರ್ಷಿಕೆಯನ್ನೊತ್ತ ಪುಸ್ತಕದ ಅನಾವರಣದ ಸಮಾರಂಭವನ್ನು ಇಟ್ಟುಕೊಂಡಿದ್ದೇವೆ. ಇದರ ಕರ್ತೃಗಳು ನಮ್ಮವರೇ ಆದ ಅರುಣ್, ಶ್ರೀನಿವಾಸ, ಸುಶೃತ, ಶ್ರೀನಿಧಿ ಮತ್ತು ಅನ್ನಪೂರ್ಣ . ಅತಿಥಿಗಳಾಗಿ Professor ಜಿ.ವೆಂಕಟಸುಬ್ಬಯ್ಯ ಹಾಗು ಶ್ರೀ ಹೆಚ್ ಕೆ ಶ್ರೀನಿವಾಸ ಮೂರ್ತಿಗಳು ಆಗಮಿಸಲಿದ್ದಾರೆ.<br /><br />ಕನ್ನಡ ಸಾಹಿತ್ಯ ಲೋಕಕ್ಕೆ ಪಾದರ್ಪಣೆ ಮಾಡುತ್ತಿರುವ ಹೊಸ ಪ್ರತಿಭೆಗಳ ಹೊಸ ಪ್ರಯತ್ನಗಳನ್ನು ಪ್ರೋತ್ಸಾಹಿಸುವ ಜವಾಬ್ದಾರಿ ಓದುಗರಾದ ನಮ್ಮೆಲ್ಲರದು. ಬರುವಿರಿ ತಾನೆ? ನಿಮಗಾಗಿ ಒಂದು ಪ್ರತಿಯನ್ನು ತೆಗೆದಿರಿಸಿರುತ್ತೇನೆ.. Feb 10 ರಂದು ಸಿಗುವ.. </div>Unknownnoreply@blogger.com0tag:blogger.com,1999:blog-1028483830046744384.post-28718070825710209782008-01-29T12:03:00.000+05:302008-01-29T12:10:01.546+05:30ಅಭಿಮಾನಿ...<div><div><a href="http://2.bp.blogspot.com/_WoHbqrpm1NE/R57Jn0CeE9I/AAAAAAAABBU/e1FpyDIIIOU/s1600-h/bhairappa.jpg"><img id="BLOGGER_PHOTO_ID_5160783908834251730" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://2.bp.blogspot.com/_WoHbqrpm1NE/R57Jn0CeE9I/AAAAAAAABBU/e1FpyDIIIOU/s320/bhairappa.jpg" border="0" /></a><br /><br /><div>ನಾನು ಭೈರಪ್ಪನವರ ಎರಡು ಕಾದಂಬರಿಗಳನ್ನು ಮಾತ್ರ ಓದಿದ್ದೇನೆ...<strong>’ಆವರಣ’</strong> ಮತ್ತು <strong>’ಸಾಕ್ಷಿ’</strong>, ಎರಡೂ ಸಹ ಅನನ್ಯ ಕೃತಿಗಳು. ಅವರು ಇದುವರೆಗೂ ಬರೆದ ಅಷ್ಟೂ ಕಾದಂಬರಿಗಳನ್ನು ಕೊಂಡು ಯಾವುದಾದರೂ ಬೆಟ್ಟದ(ಕೊಡಚಾದ್ರಿ) ತುದಿಯಲ್ಲಿ ಒಂದು ಸಣ್ಣ ಗೂಡು ಮಾಡಿಕೊಂಡು ಓದಬೇಕೆಂದೆನಿಸುತ್ತಿದೆ, ಒಬ್ಬನೇ.<br /><br />ಅವರ ಕಾದಂಬರಿಗಳ ವಿಮರ್ಶೆಮಾಡಲು ನಾನು ಯೋಗ್ಯನಲ್ಲ, ಅದರ ಯೋಚನೆ ಸಹ ಮಾಡುವುದಿಲ್ಲ(ಶಾಂತಂ ಪಾಪಂ), ಅವರೇ ಹೇಳುವಂತೆ ಅವರ ಪ್ರತಿ ಕಾದಂಬರಿಯಲ್ಲೂ ಯಾವುದಾದರೊಂದರ(ಸತ್ಯದ!!)(ಸತ್ಯದ ವಿವಿಧ ಮಜಲುಗಳು) ಅನ್ವೇಷಣೆ ಇದ್ದೇ ಇದೆ. ಅವರಂತೆಯೇ ನಾನು ಆಗಬೇಕು(ದಯಮಾಡಿ ನಗಬೇಡಿ...please... ನಂಗೊತ್ತು ನೀವು ನಗ್ತಾಇದ್ದೀರ ಅಂತ..hmmmm) ಅನ್ವೇಷಣೆ ನಡೆಸಬೇಕು, ಆ ಅನ್ವೇಷಣೆಯಲ್ಲಿ ಹಲವಾರು ವರ್ಷಗಳನ್ನು ಕಳೆದು, ನಿಂತಲ್ಲಿ ಕುಂತಲ್ಲಿ ಚಿಂತನ ಮಂಥನ ನಡೆಸಿ ಕೂತು ಬರೆಯಬೇಕು, ನಿಂತು ಬರೆಯಬೇಕು. ನನೂ ಸಹ ಸತ್ಯವನ್ನು ತಿಳಿಯಬೇಕು, ಅರಿಯಬೇಕು. ಭೈರಪ್ಪನವರ ಕಾದಂಬರಿಗಳನ್ನು ಅಭ್ಯಸಿಸಬೇಕು. ಅವರನ್ನೊಮ್ಮೆ ನೇರವಾಗಿ ಕಾಣಬೇಕು. ಏನೇನೋ ಆಸೆಗಳು. hmmm</div><a href="http://1.bp.blogspot.com/_WoHbqrpm1NE/R57J4kCeE_I/AAAAAAAABBk/wLqxfdcI1oc/s1600-h/gnamaskara.jpg"><img id="BLOGGER_PHOTO_ID_5160784196597060594" style="FLOAT: left; MARGIN: 0px 10px 10px 0px; CURSOR: hand" alt="" src="http://1.bp.blogspot.com/_WoHbqrpm1NE/R57J4kCeE_I/AAAAAAAABBk/wLqxfdcI1oc/s320/gnamaskara.jpg" border="0" /></a> <div> </div><div>ಅವರ ಅಷ್ಟೂ ಕಾದಂಬರಿಗಳನ್ನು ಕೊಳ್ಳುತ್ತೇನೆ, ಆದಷ್ಟು ಬೇಗ. ಆದರೆ ಬೆಟ್ಟದ ತುದಿಯಲ್ಲಿ ಕುಳಿತು ಅವರ ಕಾದಂಬರಿಗಳನ್ನು ಅಭ್ಯಸಿಸುವ ಪುಣ್ಯ ನನ್ನದಾಗುತ್ತದೋ ಇಲ್ಲವೊ ತಿಳಿದಿಲ್ಲ, ನನ್ನೀ ಆಸೆಗೆ(ಹುಚ್ಚಿಗೆ!!) ನಿಮ್ಮ ಹಾರೈಕೆಯಿರಲಿ. </div><br /><br /><div></div><div><br /><br /><strong>@ಭೈರಪ್ಪ :</strong> ಭೈರಪ್ಪನವರೇ ನಿಮಗೆ ನೀವೇ ಸಾಟಿ, ನಿಮ್ಮ ಸಾಹಿತ್ಯ ಕೃಷಿ ಹೀಗೆ ಸಾಗುತ್ತಿರಲಿ, ನಿರಂತರವಾಗಿ....... ಎಂದೆಂದಿಗೂ ನಂದದ ದೀಪವಾಗಿರಲಿ. ನಿಮಗೆ ನನ್ನ ಭಾವಪೂರ್ಣವಾದ ನಮಸ್ಕಾರ.</div></div></div>Unknownnoreply@blogger.com7tag:blogger.com,1999:blog-1028483830046744384.post-41727270497561967992008-01-02T16:19:00.000+05:302008-01-02T18:58:28.569+05:30ನಿನದೇ ನೆನಪು...<span style="font-family:trebuchet ms;"><em>ಕವಿರಾಜ್ ರ ಒಳ್ಳೆ ಸಾಹಿತ್ಯ..ಇಷ್ಟ ವಾಯಿತು..ಇದು ನನ್ನವಳಿಗೆ ;-) ಅರ್ಪಿತ.... </em></span><img id="BLOGGER_PHOTO_ID_5150830006721051170" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://2.bp.blogspot.com/_WoHbqrpm1NE/R3tsmdEH-iI/AAAAAAAABAU/tF2UIKKTbCY/s320/duncans-land.jpg" border="0" /><br /><p><span style="font-family:trebuchet ms;"><em></em></span></p><p><span style="font-family:trebuchet ms;"></p></span><span style="font-family:trebuchet ms;"><div>ಹೀಗೀಕೆ ನಂಗೆ ನೆನಪಾಗುವೆ<br />ಈಗ ಎಲ್ಲೆಲ್ಲೂ ನಂಗೆ ನೀ ಕಾಣುವೆ...<br />ಸುಡುಸುಡುತಿದೆ ಎದೆಯೊಳಗೆ ನಿನದೇ ನೆನಪು<br />ಕಾಡಿಸುತಿದೆ ಪ್ರತಿಘಳಿಗೆ ನಿನದೇ ನೆನಪು ನನ್ನಾಣೆ..<br /><br /><br />ಅರೆಘಳಿಗೆಯು ಮರೆತಿರಲು ನಾನೂ ನಿನ್ನಾ<br />ಮರುಘಳಿಗೆಯೇ ಮರಣ ಕಣೇ ನಂಗೆ ಚಿನ್ನಾ<br />ಇನ್ನು ದೂರಾಗದೆ ಎಂದು ಕೈಜಾರದೆ ನನ್ನ ಸಂಗಾತಿ ನೀನಾಗು ಬಾ...<br /><br />ನೀನಿಲ್ಲದ ಕನಸುಗಳೂ ನನಗೆ ಬೇಡ<br />ನಿನ್ನ ಕಾಣದೆ ನರಳುವುದು ನೆರಳೂ ಕೂಡ<br />ಮರೆತೂ ನಿನ್ನನೂ ಮರೆತೂ ಹೋಗೆನು, ಇನ್ನು ಎಂದೆಂದು ನಿನ್ನೋನು ನಾ...<br /><br />ಹೀಗೀಕೆ ನಂಗೆ ನೆನಪಾಗುವೆ<br />ಈಗ ಎಲ್ಲೆಲ್ಲೂ ನಂಗೆ ನೀ ಕಾಣುವೆ...<br />ಸುಡುಸುಡುತಿದೆ ಎದೆಯೊಳಗೆ ನಿನದೇ ನೆನಪು<br />ಕಾಡಿಸುತಿದೆ ಪ್ರತಿಘಳಿಗೆ ನಿನದೇ ನೆನಪು ನನ್ನಾಣೆ..<br /></span></div>Unknownnoreply@blogger.com10