ನಿನ್ನಿಂದಲೇ ನಿನ್ನಿಂದಲೇ.......

Thursday, December 13, 2007


ಕಳೆದ ಎರಡು ತಿಂಗಳಲ್ಲಿ ನಡೆದ ಘಟನಾವಳಿಗಳನ್ನು ಒಬ್ಬನೇ ಕೂತು ನೆನೆದರೆ ರೋಮಾಂಚನ, ಪುಳಕ, ಭಯ, ಕಳವಳ ಎಲ್ಲವೂ ಒಟ್ಟೊಟ್ಟಿಗೆ ಆಗುತ್ತದೆ.. ಎಲ್ಲವೂ ಅನಿರೀಕ್ಷಿತ!!!!. ಹೀಗೂ ಆಗಬಹುದು ಎಂಬುದರ ಒಂದು ಸಣ್ಣ ಸುಳುಹು ಸಹ ಇರಲಿಲ್ಲ.....ಉಂಡಾಡಿ ಅಲೆಮಾರಿಯಾಗಿ ಅಲೆಯುತ್ತಿದ್ದ ನಾನು ಮುಂದಿನ ಹಲವು ವರ್ಷಗಳಿಗಾಗುವಷ್ಟು ಕನಸುಗಳನ್ನು ಪೋಣಿಸಿದ್ದೇನೆ..ಅತ್ಯಂತ ಜವಾಬ್ದಾರಿಯುತನಾಗಿ ನನ್ನ ಪಾತ್ರವನ್ನು ನಿರ್ವಹಿಸಬೇಕಿದೆ....

ನ(ಮ್ಮ)ನ್ನ ಕನಸುಗಳಿಗೆ ನಿಮ್ಮ ತುಂಬು ಹೃದಯದ ಆಶೀರ್ವಾದವಿರಲಿ.....

ಉಪ್ಪಿಗಿಂತ ರುಚಿ ಬೇರೆ ಇಲ್ಲ.......

Monday, November 26, 2007


ಈ ಹಾಡನ್ನ ಎಲ್ಲರೂ!!!! ಕೇಳಿರಬಹುದು..ಅದರ ಮುಂದಿನ ಸಾಲುಗಳು ಹೀಗಿವೆ...."ಉಪ್ಪಿಗಿಂತ ರುಚಿ ಬೇರೆ ಇಲ್ಲ...ಒಪ್ಪಿಕೊಂಡೋರು ದಡ್ಡರಲ್ಲ...".....dha dha dha...dha...

ನನ್ನೆಡೆಗೆ ಹಲವಾರು ಟೀಕೆಗಳಿವೆ..ನಾನು ಉಪೇಂದ್ರನ ಅಭಿಮಾನಿ ಎಂದು...."ಥೂ ನಿನ್ನ..ಯಾವನೋ ನೀನು..ಹೋಗಿ ಹೋಗಿ ಉಪೇಂದ್ರನ ಅಭಿಮಾನಿ ಅಂತೀಯಲ್ಲ...ನಾಚಿಕೆ ಆಗಲ್ಲ್ವ..." ಹಲವಾರು ಮಂದಿ ಹಲವಾರು ರೀತಿ ಬೈದಿದ್ದಾರೆ, ಆಡಿಕೊಂಡಿದ್ದಾರೆ..ಆದರೆ ಅಷ್ಟೆಲ್ಲ ಮಾಡಿದರೂ ನನಗೆ ಆತನ ಬಗ್ಗೆ ಕಿಂಚಿತ್ತೂ ಅಭಿಮಾನ ಕಮ್ಮಿ ಆಗಿಲ್ಲ ಎಂದು ಹೇಳಲು ನನ್ನವರಿಗೆ ನನ್ನ ಉಪೇಂದ್ರನ ವಿರೋಧಿಗಳಿಗೆ ಸ್ಪಷ್ಟಪಡಿಸಲು ಇಚ್ಚಿಸುತ್ತೇನೆ..."Uppi simply rocks" :-)

ಉಪೇಂದ್ರನ ಹೆಸರು ಹೇಳಿದರೆ ಹಲವಾರು ಮಂದಿ ಮೂಗು ಮುರಿಯುವವರು ಇದ್ದಾರೆ..ಮುರಿಯಲಿ ಅವರ ಮೂಗುಗಳೇ ತಾನೆ...ನನಗೇನು??... ನನಗೆ ಆತನನ್ನು ಅಭಿಮಾನಿಸಲು ಸ್ಪಷ್ಟವಾಗಿ ಕಾರಣಗಳು ಹೇಳಲಾರೆ...ಉಪೇಂದ್ರನ ಚಿತ್ರಗಳು ಇತರ ಹೀರೋ ಚಿತ್ರಗಳಿಗಿಂತ ಚೆನ್ನಾಗಿ ಓಡಬೇಕೆಂಬ ಹಂಬಲ ನನ್ನಲ್ಲಿ ಸದಾ ಇರತ್ತದೆ...ಹಾಗೆ ಆದರೆ ಬಹಳ ಸಂತೋಷವಾಗುತ್ತದೆ.... ನಿಜಕ್ಕೂ ಆತ ರಿಯಲ್ ಸ್ಟಾರ್... ಉಪೇಂದ್ರನ ಸಾಧನೆಗಳ ಬಗ್ಗೆ ನನಗೆ ತಿಳಿದಿರುವ ಮತ್ತಿಗೆ ಒಂದು ಸಣ್ಣ ಕಿರುಪರಿಚಯ...


ಯಾವುದೇ God Father ಗಳ ನೆರವಿಲ್ಲದೆಯೆ ಮೇಲೆ ಬೆಳೆದು ಬಂದಾತ...ಆರಂಭದ ದಿನಗಳಲ್ಲಿ ಕಾಶಿನಾಥ್ ಸಾಥ್ ನೀಡಿದ್ದರು ಅಷ್ಟೆ...ಆತನ ಪ್ರತಿಭೆಗೆ ಮನ್ನಣೆ ಸಿಕ್ಕಿದ್ದು ಹಲವಾರು ವರ್ಷಗಳು ಕಾಲು ಸವೆಸಿದ ನಂತರ...

ಭಾರತ ಚಿತ್ರರಂಗ ಕಂಡ, ವಿಭಿನ್ನವಾಗಿ ಆಲೋಚಿಸುವ ಅತ್ಯಂತ ಕಿರಿಯ ನಿರ್ದೇಶಕ...ಆತನ ಕಿರಿತನ ಕೇವಲ ವಯಸ್ಸಿಗಷ್ಟೆ ಸೀಮಿತ....ಆದರೂ ಈ ವಿಷಯ ಇಲ್ಲಿ ಉಲ್ಲೇಖಾರ್ಹ...

ಇಂದು ಕನ್ನಡ ಚಿತ್ರರಂಗದಲ್ಲಿ ಬಂದಂತಹ ಅಷ್ಟೂ ರೌಡಿ ಚಿತ್ರಗಳಿಗೆ ನಾಂದಿ ಹಾಡಿದ್ದು ಇದೇ ಉಪೇಂದ್ರನ "ಓಂ" ಚಿತ್ರ...ಅದರ ಬಗ್ಗೆ ಎಷ್ಟೆ controversy ಗಳಿರಬಹುದು ..ಆದರೆ ಅದು trend setting cinema ಅಂತೂ ಹೌದು...
ಉಪೇಂದ್ರ ಒಬ್ಬ trend setter -e ಸರಿ..

ಉಪೇಂದ್ರ ಚಿತ್ರ ನಿರ್ಮಿಸುತ್ತಿದ್ದ ರೀತಿಗಳಲ್ಲಿ ಹಲವಾರು ಪ್ರಯೋಗಗಳನ್ನು ಮಾಡುತ್ತಿದ್ದ..ಅದರಿಂದ ಕನ್ನಡ ಚಿತ್ರಕ್ಕೆ ಮನ್ನಣೆ ಸಿಕ್ಕಿದೆ ಎಂಬುದು ಒಪ್ಪಿಕೊಳ್ಳಬೇಕಾದ ವಿಷಯ..ಚಿತ್ರದ ಹೆಸರಿನಿಂದ ಹಿಡಿದು ಚಿತ್ರದ ಅಂತ್ಯದವರೆಗೂ...ಹಾಗೆ ಚಿತ್ರದ ಪ್ರಚಾರದ ವಿಷಯಗಳಲ್ಲಿ ಕೂಡ...ಅದನ್ನ ತೆರೆಯ ಮೇಲೆ ತೋರಿಸುವ ಯತ್ನದಲ್ಲೂ ಸಹ....

ಇಂದೂ ಎಲ್ಲ ಚಿಳ್ಳೆ ಪಿಳ್ಳೆಗಳು ಬಾಯಿ ತೆರೆದರೆ ತಮ್ಮ ಚಿತ್ರ ವಿಭಿನ್ನವಾಗಿದೆ ಎಂದೇ ಬಡಿದುಕೊಳ್ಳುತ್ತಾರೆ...ಅದೇನೊ ವಿಭಿನ್ನತೆಯೋ ಭಗವಂತನಿಗೇ ಗೊತ್ತು..!!!

ಇಂದು ಕನ್ನಡ ಚಿತ್ರರಂಗದ ಗಮನೀಯ ವ್ಯಕ್ತಿಗಳ ಪಟ್ಟಿಗೆ ಸೇರಿರುವ ಗುರುಕಿರಣ್,ಸಾಧುಕೋಕಿಲ, ವಿ.ಮನೋಹರ್, ಕವಿರಾಜ್, ಎಲ್ಲರೂ ಉಪೇಂದ್ರನ ನೆರಳಿನಲ್ಲಿ ಬೆಳೆದವರು..ಒಟ್ಟೊಟ್ಟಿಗೆ ಮೇಲೆ ಬಂದವರು....


ಉಪೇಂದ್ರನಲ್ಲಿ ಮೆಚ್ಚಬೇಕಾದ ಅಂಶವೆಂದರೆ ಕಲಾವಿದರಲ್ಲಿ, ತಂತ್ರಜ್ಞಾನ ಕಲೆಯನ್ನು ಹುಡುಕಿ ಕೆದಕಿ ಹೊರತರುವ ಗುಣ....ಅವನ ಬಳಿ ಬೆಳೆದ ಮಂದಿ ಸಾಕಷ್ಟಿದ್ದಾರೆ...ಇನ್ನು ಬೆಳೆಯುತ್ತಲೇ ಇದ್ದಾರೆ...ಇಷ್ಟೆಲ್ಲ ಮಾಡಿರುವ ಉಪೇಂದ್ರನ ವಯಸ್ಸು ಕೇವಲ 35ರ ಆಸುಪಾಸು...ಅಚ್ಚರಿಯಾಗುವುದಿಲ್ಲವೇ??... :-)

ನಾನು ಇಷ್ಟನ್ನು ಹೇಳುತ್ತಿರುವುದು ಆತನ ನಿರ್ದೇಶಿಸಿ-ನಟಿಸಿರುವ ಚಿತ್ರಗಳ ಬಗ್ಗೆ..ಆತ ಬರೆದಿರುವ ಕಥೆ, ಸಂಭಾಷಣೆಗಳ ಇರುವ ಚಿತ್ರಗಳ ಬಗ್ಗೆ...ಮಿಕ್ಕ ಚಿತ್ರಗಳ ಬಗ್ಗೆ ನನ್ನ ಕಡೆಯಿಂದ "No Comments......"

ಆತನ ಚಿತ್ರಗಳಿಗೆ ಆರಂಭದ ದಿನಗಳಲ್ಲಿ ಬಂದು ವಿರೋಧ, ತಿರಸ್ಕಾರ ಬೇರಾವ ನಟನಿಗೆ ಬಂದದ್ದೇ ಆಗಿದ್ದಲ್ಲಿ ಆತನ ಸದ್ದಡಗಿ ಹೋಗುತ್ತಿತ್ತು...ಉಪೇಂದ್ರ ಜನರ ಸದ್ದಡಿಗಿಸಿದ!!...ಎಲ್ಲ ನಿರ್ದೇಶಕರ, ನಿರ್ಮಾಪಕರು ಒಪ್ಪಿ ಕೊಳ್ಳುವಂತೆ ಮಾಡಿದ..

ಉಪೇಂದ್ರನ ಚಿತ್ರಗಳ ಬಗ್ಗೆ ಒಂದು ಅಪವಾದವಿದೆ...ಆತನ ಸಂಭಾಷಣೆ vulgar, ಅಸಭ್ಯವಾಗಿರುತ್ತದೆಂದೂ...ಹೇಳುವುದನ್ನು ಮರ್ಮಕ್ಕೆ ತಾಗುವಂತಹ ಸಂಭಾಷಣೆ ಸ್ವಲ್ಪ ಢಾಳಗಿ ಕಾಣುತ್ತದೆ...ನನ್ನಂತಹ ಹುಡುಗರಿಗೆ ಇಷ್ಟವಾಗುತ್ತದೆ :-)...vulgar ನಲ್ಲೂ ವಿಧಗಳಿವೆ....ಅದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿಲ್ಲ......ತೀರ ಅಸಹ್ಯಕರವಂತೂ ಇರುವುದಿಲ್ಲ. ... ಮಡಿವಂತರಿಗೆ ಇಷ್ಟವಾಗದಿರಬಹುದು... ಹಾಗೆಂದ ಮಾತ್ರಕ್ಕೆ "ಸಂಸ್ಕೃತ" ;-) ಪದ ಬಳಕೆ ಮಾಡುವರ ಚಿತ್ರಗಳ ಬಗ್ಗೆ ಅಸಡ್ಡೆಯಿಂದಿರಬೇಕಿಲ್ಲ..ಜನ ಶ್ರೀಸಾಮಾನ್ಯರು ಮಾತಾಡುವ ಭಾಷೆಯ ಬಳಕೆ ಆಗಿರುತ್ತದೆ ಉಪೇಂದ್ರನ ಚಿತ್ರಗಳಲ್ಲಿ...ಅಸಭ್ಯತೆಯಂತೂ ಅಲ್ಲ...ಅದರಿಂದ ಸಮಾಜಕ್ಕೆ ಯಾವ ಹಾನಿಯೂ ಇಲ್ಲ...

ನಾನು ಉಪೇಂದ್ರನ ವಿಪರೀತ ಅಭಿಮಾನಿಯೇನು ಅಲ್ಲ, ಆತನ ಚಿತ್ರ ಬಿಡುಗಡೆಯಾದರೆ ಮೊದಲ show ನಲ್ಲೇ ನೋಡಬೇಕೆಂಬ ಹಂಬಲವೂ ನನ್ನಲ್ಲಿ ಎಂದೂ ಬಂದಿಲ್ಲ, ಅಕಸ್ಮಾತ್ ಎರಡು ಅಕ್ಕ-ಪಕ್ಕ ಇರುವ ಚಿತ್ರಮಂದಿರಗಳ ಎದುರುಗಡೆ ನಿಂತಾಗ, ಒಂದರಲ್ಲಿ ಉಪೇಂದ್ರನ ಚಿತ್ರ ಮತ್ತೊಂದರಲ್ಲಿ ಬೇರೊಬ್ಬ ನಟನ ಚಿತ್ರವಿದ್ದಲ್ಲಿ, ಖಂಡಿತವಾಗಿ ಉಪೇಂದ್ರನ ಚಿತ್ರಕ್ಕೆ ಹೋಗುವೆ... :-) :-)

ಉಪೇಂದ್ರ ಆದಷ್ಟೂ ಬೇಗ ಚಿತ್ರಗಳನ್ನು ನಿರ್ದೇಶಿಸುವಂತಾಗಲಿ...ಮತ್ತಷ್ಟು ಒಳ್ಳೆಯ ಚಿತ್ರಗಳು ಹೊರಹೊಮ್ಮಲಿ...ಇದೇ ನನ್ನ ಅಭಿಲಾಷೆ..

ವಿ.ಸೂ : ಉಪೇಂದ್ರನ ಬಗ್ಗೆ ಉಪೇಂದ್ರನ ಚಿತ್ರಗಳ ಬಗ್ಗೆ ವಿರೋಧವಿದ್ದಲ್ಲಿ ಅದನ್ನ ಈ ಬ್ಲಾಗಿನ comments ನ ಮುಖಾಂತರ ತೀರಿಸಿಕೊಳ್ಳಬೇಡಿ ಎಂದು ಹೇಳಲು ಇಚ್ಚಿಸುತ್ತೇನೆ.. ನನ್ನ ಲೇಖನದ ವೈಖರಿಯ ;-) ಬಗೆಗಿನ comments ಎಂದೆಂದಿಗೂ ಸ್ವಾಗತಾರ್ಹ...


ವೈರುಧ್ಯ - ವೈವಿಧ್ಯ

Sunday, November 18, 2007


ಜೀವನ ಯಾರಿಗೆ ತಾನೆ ವೈವಿಧ್ಯ ಪೂರ್ಣವಾಗಿ ಇರಬೇಕೆಂದು ಅನ್ನಿಸುವುದಿಲ್ಲ..ದಿನವೂ ಮಾಡಿದ್ದನ್ನೇ ಮಾಡುತ್ತಿದ್ದರೆ ಬೋರ್ ಆಗುತ್ತದೆ...ನನಗೆ ವೈವಿಧ್ಯತೆಯು ಬೇಕು ವೈರುಧ್ಯವೂ ಬೇಕು...ನನ್ನ ಒಂದು ಸಣ್ಣ ಪಟ್ಟಿ..ಹಾಗೆ ಒಮ್ಮೆ ಕಣ್ಣಾಡಿಸಿಬಿಡಿ..ವೈವಿಧ್ಯತೆ - ವೈರುಧ್ಯತೆ ಇದ್ದರೆ ಜೀವನ ಮಜವಾಗಿರುತ್ತದೆ ಎಂಬುದು ಖಚಿತ...

1) ಒಂದು ದಿನ ಕಲಾಸಿಪಾಳ್ಯದಲ್ಲಿ ಕೂಲಿ ಕೆಲಸ ಮಾಡಬೇಕು....ತಳ್ಳು ಗಾಡಿಯಲ್ಲಿ ಮೂಟೆಗಳನ್ನು ಹಾಕಿಕೊಂಡು ಆ ಜನಭರಿತ ಗಲ್ಲಿಗಳಲ್ಲಿ ಆ ಗಾಡಿಯನ್ನು ಎಳೆದಾಡುತ್ತಿರಬೇಕು....ದಿನದ ಕೂಲಿ ತೆಗೆದು ಕೊಂಡು ರಾತ್ರಿ ಹೊತ್ತಿಗೆ ಅಲ್ಲೆ ಸಿಕ್ಕಿದ್ದನ್ನು ತಿಂದು ಲೈಟಾಗಿ ಸಾರಾಯಿ ಕುಡಿದು ಅಲ್ಲೆ fly over ಕೆಳಗೆ ಮಲಗಬೇಕು...

ಅದರ ಮರುದಿನವೇ ಲೀಲಾ - ಪ್ಯಾಲೇಸಿನಲ್ಲಿ ಬೆಳಗಿನ ಕಾಫಿ ಕುಡಿದು swimming pool ಪಕ್ಕ ಅಂಗಾತ ಮಲಗಿರಬೇಕು...ನನ್ನ ದಿನವೆಲ್ಲ ಲೀಲಾ - ಪ್ಯಾಲೆಸಿನಲ್ಲಿ ವಿಧ ವಿಧವಾದ just chill ಆಗುವಂತಹ ಕೆಲಸಗಳಲ್ಲಿ ತೊಡಗಿಕೊಂಡಿರಬೇಕು.

2)ಒಂದು ಇಳಿಸಂಜೆಯ ಹೊತ್ತಿನಲ್ಲಿ ಲಾಲ್ ಬಾಗ್ ಕೆರೆದಂಡೆಯಲ್ಲಿ ನನ್ನವಳೊಂದಿಗೆ ;-) "ಚೀ ಕಳ್ಳ...ಎಂದು ಕೆನ್ನೆ ಗಿಲ್ಲಿಸಿಕೊಳ್ಳಬೇಕು..." ಅದರ ಮರುದಿನವೇ ಅದೇ ಕೆರೆದಂಡೆಯಲ್ಲಿ ಅದೇ ನನ್ನವಳೊಂದಿಗೆ "ಚೀ ಕಳ್ ನನ್ ಮಗನೆ...ಎಂದು ಆಕೆಯಿಂದ ಕಪಾಳಮೋಕ್ಷ ಆಗಬೇಕು.."

3) ಒಂದು ದಿನ ಇಪ್ಪತ್ತನಾಲ್ಕು ಗಂಟೆಗಳೂ ಪ್ರಪಂಚದ ಅರಿವಿಲ್ಲದೇ ನನಗಿಷ್ಟವಾದ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು.... ಹಾಗೆ ಇಪ್ಪತ್ತನಾಲ್ಕು ಗಂಟೆಗಳೂ ಮೈಮೇಲೆ ಅರಿವಿಲ್ಲದೆಯೇ ನಿದ್ರಾಲೋಲ ನಾಗಬೇಕು..ಕುಂಬಕರ್ಣನ ಅಪರಾವತಾರ ನಾಗಬೇಕು...

4)ನನ್ನ ಜನರಿಂದ, ಇತರರಿಂದ ಹಾಡಿ ಹೊಗಳಿಸಿಕೊಳ್ಳಬೇಕು.....ಮತ್ತೊಂದು ದಿನ ಅದೇ ಜನಗಳ ಬಳಿ ಮೂರು ಜನ್ಮಕ್ಕಾಗುವಷ್ಟು ಕುಳಿತು ಉಗಿಸಿಕೊಳ್ಳಬೇಕು...ವಾಚಮಗೋಚರವಾಗಿ..

5)ಬೈಕನ್ನೇರಿ ಕರಾವಳಿಯ ಉದ್ದಕ್ಕೂ ಓಡಿಸಿಕೊಂಡು ಹೋಗಬೇಕು...ಗೊತ್ತು ಗುರಿಯಿಲ್ಲದೆಯೇ..ದಿನಗಳ ಪರಿವಿಲ್ಲದೆಯೇ...ಮತ್ತೊಂದು ದಿನ ಬೈಕನ್ನು kick start ಮಾಡಲು ಸಹಾ ಶಕ್ತಿಯಿರಬಾರದು...

6)ಮನೆಯವರಿಂದ..."ಅಹಾ ಹೆತ್ತರೆ ಇಂತಹ ಮಗನನ್ನು ಹೆರಬೇಕು.... ಕುಲತಿಲಕ ಇವನು " ಎಂದು ಒಂದು ದಿನ ಅನ್ನಿಸಿಕೊಂಡರೆ...ಮತ್ತೊಂದು ದಿನ ಅವರಿಂದಲೇ "ಯಾಕಾದರೂ ಹುಟ್ಟಿದನೋ....ಕುಲಕ್ಕೇ ಕಳಂಕ, ಹುಟ್ಟದಿದ್ದರೇ ಚೆನ್ನಾಗಿತ್ತೇನೋ ಇವನು" ಎಂದು ಕೇಳಬೇಕು..

7)ಜೇಬು ತುಂಬ ದುಡ್ಡು ಇಟ್ಟುಕೊಂಡು ಬೇಕಾದ ರೀತಿಯಲ್ಲಿ ಖರ್ಚು ಮಾಡಬೇಕು...ನೀರಿಗಿಂತ ಕೇವಲವಾಗಿ...
ಮತ್ತೊಂದು ದಿನ ಬಿಡಿಗಾಸು ಸಹಾ ನನ್ನ ಬಳಿಯಿರಬಾರದು...ಬೀದಿಗೆ ಬಿದ್ದಿರಬೇಕು...

8) ಇನ್ನೇನು ಪ್ರಾಣವೇ ಹೋಗಿಬಿಡುತ್ತದೇನೊ ಎಂಬಂತೆ ಒಂದು ಹಾಸ್ಪಿಟಲ್ ನಲ್ಲಿ ಮಲಗಿರಬೇಕು..ಅದರ ಮರುದಿನವೇ foot ball ಆಡುತ್ತಿರಬೇಕು..

9)ನನ್ನ ಜೀವನ settle ಆಯಿತೆನ್ನುವ ಭಾವ ನನ್ನನ್ನ ಆವರಿಸಬೇಕು ಒಂದು ದಿನ...ಮತ್ತೊಂದು ದಿನ.. ಮುಂದೆ ಜೀವನ ಹೇಗೆ ನಡೆಯುತ್ತದೆ ಎಂದು ಕಳವಳ ಪಡುತ್ತಿರಬೇಕು...ದಿಕ್ಕುಗಾಣದೆ ಒಬ್ಬನೇ ಒಂದು ಮೂಲೆಯಲ್ಲಿ ಕಾಲು ಕೊಸರಿಕೊಂಡು ಕುಳಿತು ಗಾಢ ಕತ್ತಲಿರುವ ಕೋಣೆಯಲ್ಲಿ ದೀರ್ಘವಾಗಿ ಯೋಚಿಸುತ್ತಿರಬೇಕು..

10) ಒಂದು ದಿನವಿಡೀ ನನ್ನ ಆತ್ಮೀಯ ಗೆಳೆಯರೊಡನೆ ಕಾಲ ಕಳೆಯಬೇಕು.ಇಪ್ಪತ್ತನಾಲ್ಕು ಗಂಟೆಗಳೂ ಎಗ್ಗಿಲ್ಲದೆ ಹೊತ್ತಿಲ್ಲದೆ.. ಗೊತ್ತಿಲ್ಲದೆ...ಮತ್ತೊಂದು ದಿನ ನನ್ನ ಬದ್ದ ವೈರಿಗಳೊಡನೆ ಒಂದು ದಿನವಿಡೀ ಕಳೆಯಬೇಕು...ಆ ರೀತಿಯ ಪರಿಸ್ಥಿತಿ ಬಂದೊದಗಬೇಕು..

11)ಜ್ಯೋತಿಷಿಗಳಿಂದ "ಹೋಗಯ್ಯ ನೀನು 80+ ವರ್ಷ ಬದುಕುತ್ತೀಯ"..ಎಂದು ಅನ್ನಿಸಿಕೊಂಡು ಜ್ಯೋತಿಷಾಲಯದಿಂದ ಹೊರಬರುತ್ತಲೇ..ಹೃದಯಾಘಾತವಾಗಿ ಅಲ್ಲೆ ಕುಸಿದು ಬಿದ್ದು ಕೊನೆಯುಸಿರೆಳೆಯಬೇಕು.. :-)


12)ಸತ್ತಾಗ ನಾಲ್ಕು ಜನರು ಕಣ್ಣೀರಿಟ್ಟರೆ ಇನ್ನೊಂದು ಕಡೆ ನಾಲ್ಕು ಜನ ಖುಶಿಯಿಂದ ಸಂತಸ ಪಡಬೇಕು...

ಸದ್ಯಕ್ಕೆ ನನ್ನ ಪಟ್ಟಿ ಇಷ್ಟೆ...ಇನ್ನು ಬೇಕಾದಷ್ಟಿವೆ..ಬರೆಯುತ್ತಾ ಹೋದರೆ ಮೊದಲಿರುವುದಿಲ್ಲ ಕೊನೆಯಿರುವುದಿಲ್ಲ..
ನಿಮ್ಮ ಜೀವನ ವೈವಿಧ್ಯ ಪೂರ್ಣವಾಗಿರಲಿ....

ಕಿವಿಮಾತು..........

Friday, November 2, 2007

ಏಕೋ ಏನೋ ಈ ಹಾಡು ಬಹಳ ಇಷ್ಟ ಆಯ್ತು .... ನಿಮ್ಮೊಂದಿಗೆ ಹಂಚಿಕೊಳ್ಳುವ ಉಮೇದಿನೊಂದಿಗೆ ಇಲ್ಲಿ ಪ್ರಕಟಿಸುತ್ತಿರುವೆ..ಹಾಡನ್ನು ಓದಿಕೊಂಡು, ಹಾಡನ್ನು ಕೇಳುವ ಗುನುಗುವ , ಹಾಡುಗಾರನ ಜೊತೆ ಹಾಡುವ ಮಜವೇ ಬೇರೆ ... ಸಿಕ್ಕಾಪಟ್ಟೆ ಎಂಜಾಯ್ ಮಾಡಿದೆ .... :-) ಇದನ್ನ ಬರೆದ ಜಯಂತ್ ಕಾಯ್ಕಿಣಿ ರವರಿಗೆ ಮತ್ತು ಮನೋಮುರ್ತಿ ಸಂಗೀತ ಸಂಯೋಜನೆಗೆ ಹೃತ್ಪೂರ್ವಕವಾದ ನಮನಗಳು...ಓದಿಕೊಳ್ಳಿ , ಹಾಡಿಕೊಳ್ಳಿ.......

ಕಿವಿಮಾತೊಂದು ಹೇಳಲೆ ನಾನಿಂದು
ದಾರಿನಿಂತಾಗ ಸಾಗಲೆ ಬೇಕೆಂದು
ನಿನ್ನೆ ಈಗಿಲ್ಲ ನಾಳೆಯು ತಿಳಿದಿಲ್ಲ
ನೀನು ನೀನಾಗೆ ಬಾಳಲೆಬೇಕೆಂದು .....

ಹಸಿರಾಗಿದೆ ದೀಪವು ನಿನಗಾಗಿ...
ನಸು ನಗುತಲೆ ಸಾಗು ನೀ ಗೆಲುವಾಗಿ
ಹೊಸ ತಂಗಾಳಿ ಹೇಳಿದೆ ಮೆಲುವಾಗಿ
ಈ ಬಾಳುಂಟು ಬಾಳುವ ಸಲುವಾಗಿ...............

ಬಾಗಿಲಿನಾಚೆಗೆ ತಾ ಬಂದು
ಗೂವಿಗೆ ಬಾಳು ಬಾ ಎಂದು
ಸಂತಸದಿಂದ ಓ ಎಂದು
ಓಡಲೆ ಬೇಕು ನೀನಿಂದು.........................

ಸಾವಿರ ಕಣ್ಣಿನ ನವಿಲಾಗಿ
ನಿಂತಿದೆ ಸಮಯ ನಿನಗಿಂದು
ಕಣ್ಣನು ತೆರೆದು ಹಗುರಾಗಿ
ನೋಡಲೇಬೇಕು ನೀಬಂದು......................

ಬೆಳ್ಳಿಯ ಅಂಚಿನ ಈ ಮೋಡ
ನಗುವ ಬೀರಿದೆ ಬಾನಲ್ಲಿ
ನಿನ್ನಯ ಬಾಳಿನ ಸಂಗೀತ
ಹಾಡಲೇಬೇಕು ನೀನಿಲ್ಲಿ...........................

ಮಿಂಚುವ ಅಲೆಗಳ ನದಿಯಾಗಿ
ಮುಂದಕೆ ಚಲಿಸು ನೀ ಬೇಗ
ನಿನ್ನಯ ಪಾಲಿನ ಈ ಆಟ
ಆಡಲೇಬೇಕು ನೀನೀಗ........................

ಈ ಹಾಡನ್ನು ನೀವು ಕೇಳಬೇಕೆನಿಸಿದರೆ ಇಲ್ಲಿ ಕ್ಲಿಕ್ಕಿಸಿ ...
http://www.kannadaaudio.com/Songs/Moviewise/M/Milana/Kivi.ram

ನಾನು ಬ್ರಹ್ಮ ಮತ್ತು ಮುಖ್ಯಮಂತ್ರಿ - ಭಾಗ 4

Monday, October 8, 2007

"ಬ್ರಹ್ಮ..... ಕೇಳಿಸಿಕೋ..ನನ್ನ ಪ್ರಣಾಳಿಕೆಯನ್ನು..ಬಹಳ ಸುಧೀರ್ಘವಾಗಿರುತ್ತದೆ ಎಂದನಿಸುತ್ತಿದೆ ನನಗೆ.."

ರಾಮರಾಜ್ಯವನ್ನು ಕಟ್ಟುವ ಕನಸು ನನ್ನದು...ನೀ ಕೊಡುವ ವರವನ್ನು ಜನೋಪಯೋಗಿ ಕಾರ್ಯಗಳಿಗೆ ಉಪಯೋಗಿಸುವ ಹಂಬಲ ನನ್ನದು..ನಿನ್ನ ಆಶೀರ್ವಾದವಿರಲಿ.... ಎಂದಿನಂತೆ ತಪ್ಪಿದರೆ ಎಚ್ಚರಿಸು ಬ್ರಹ್ಮ...Thanks for the Coffee."

ಬ್ರಹ್ಮ ನಸುನಗುತ್ತಾ..." ಶುರುಮಾಡು ನಿನ್ನ ಪ್ರಣಾಳಿಕೆಯನ್ನು....ಕೇಳುವ ಕಾತರ ನನ್ನದು..."

ಬ್ರಹ್ಮ ವ್ಯಕ್ತಿಯೊಬ್ಬ ಸಮಾಜದಲ್ಲಿ ಗುರುತರವಾದ ಬದಲಾವಣೆಗಳನ್ನು ತರಬೇಕಾದರೆ....ಬುದ್ದಿಶಕ್ತಿ, ಹಣ, ಅಧಿಕಾರವಿರಬೇಕು...ವಿಪರ್ಯಾಸವೆಂದರೆ ನಮ್ಮ ರಾಜ್ಯದ ದೊಡ್ಡ ದೊಡ್ಡ ಸ್ಥಾನಗಳ್ಳಿರುವ ಅಂದರೆ ನಮ್ಮ ಮಂತ್ರಿ ಮಹೋದಯರು ಅನಕ್ಷರಸ್ತರು.. ಹಾ! ಹಾಗೆಂದ ಮಾತ್ರಕ್ಕೆ ಅನಕ್ಷರಸ್ತರೆಲ್ಲರು ಬುದ್ದಿ ಇಲ್ಲದಿರುವರಲ್ಲ....ಆದರೆ ನಮ್ಮ ಮಂತ್ರಿಗಳಿಗೆ ಇನ್ನೊಬ್ಬರನ್ನು ಕುರ್ಚಿಯಿಂದ ಕೆಳಗಿಳಿಸುವ ಹುನ್ನಾರದಲ್ಲೆ ತಮ್ಮೆಲ್ಲ ಬುದ್ದಿಶಕ್ತಿಗಳನ್ನು ವಿನಿಯೊಗಿಸುತ್ತಾರೆ,,,,ಭ್ರಷ್ಟಾಚಾರದಲ್ಲಿ ಕೈಗೂಡಿ ಹಣಗಳಿಸುತ್ತಾರೆ..... ಬರಿ ರೌಡಿ ಶೀಟರ್ಗಳು, ದುರಹಂಕಾರಿಗಳೇ, ಬುದ್ದಿ ಮಂಕು ಬಡಿದಿರುವ ತರಲೆಗಳೆ ತುಂಬಿಕೊಂಡಿದೆ ನಮ್ಮ ಇಂದಿನ ರಾಜ ಕಾರಣ...."

ಬ್ರಹ್ಮ ನಾನು ಯುವಜನತೆ ಯಲ್ಲಿ ಭರವಸೆಯನ್ನು ಹೊಂದಿದ್ದೀನೆ....ಯುವಜನತೆ ಏನು ಬೇಕಾದರು ಮಾಡಬಲ್ಲರು...
ಯಾವುದೇ ಕಾಲೇಜಿನ ತಡೆದು ಕೇಳಿದರೆ "ಏನಪ್ಪಾ...ಎನಾಗಬೇಕೆಂದಿರುವೀ ನೀ..." ಎಂದರೆ...

"ಡಾಕ್ಟರ್, ಎಂಜಿನಿಯರ್...ಇತ್ಯಾದಿ ಇತ್ಯಾದಿ...ಯಾವೊಬ್ಬನು ನಾನು ರಾಜಕಾರಣಿಯಾಗುವೆ ಎನ್ನುವುದಿಲ್ಲ...ನಾನು ಮಂತ್ರಿಯಾಗುವೆ..ಎನ್ನುವುದಿಲ್ಲ...ನಾನು ಸೈನ್ಯಕ್ಕೆ ಸೇರುತ್ತೇನೆ ಎನ್ನುವುದಿಲ್ಲ...ಎಲ್ಲರು ಅವರವರ ಅನೂಕೂಲಗಳನ್ನೆ ನೋಡಿಕೊಳ್ಳುವವರೆ..."

"ಬ್ರಹ್ಮ....ನಾನು ಅಧಿಕಾರಕ್ಕೆ ಬಂದಕೂಡಲೇ...ಈ ಕೆಳಕಂಡ ಸೂತ್ರಗಳನ್ನು ಅಳವಡಿಸಲು ಇಷ್ಟ ಪಡುತ್ತೇನೆ.."

1)ಯಾವುದೇ ಮಂತ್ರಿಯಾಗುವವನ ವಯಸ್ಸು 30 ದಾಟಿರಬಾರದು.....ಮುಖ್ಯಮಂತ್ರಿಯಾಗುವವನ ವಯಸ್ಸು 35 ದಾಟಿರಬಾರದು..
2)ಮಂತ್ರಿಯಾಗಬಯಸುವವನು ಕನಿಷ್ಟಪಕ್ಷ double graduate ಆಗಿರಬೇಕು..."
3)ಆತ ಪ್ರತಿಭಾವಂತನಾಗಿರಬೇಕು...
4)ರೌಡಿ ಲಿಸ್ಟ್ನಲ್ಲಿರಬಾರದು, ಅವನ ಚಾರಿತ್ರವಂತನಾಗಿರಬೇಕು...
5)ಆ ಕ್ಷೇತ್ರದ ಜನರು ಆತನ ಬಗ್ಗೆ ಒಳ್ಳೆ ಅಭಿಪ್ರಾಯವನ್ನು ಹೊಂದಿರಬೇಕು....
6)ಅವನಿಗೆ ನಾಯಕತ್ವದ ಗುಣಗಳಿರಬೇಕು...
7)ಎಲ್ಲಕಿಂತ ಹೆಚ್ಚಾಗಿ ಆತನಲ್ಲಿ ಜನರಿಗೆ ಒಳ್ಳೆಯದು ಮಾಡುವ ತುಡಿತ, ಹಂಬಲವಿರಬೇಕು...

ವಯಸ್ಸಾದವರನ್ನು Jury ವಿಭಾಗಕ್ಕೆ ಹಾಕಬೇಕು...50 ದಾಟಿದ ಮಂತ್ರಿಗಳೆಲ್ಲ.. ತಮ್ಮ ಅನುಭವಗಳನ್ನು
ಯುವತೆಗೆ ಮಾರ್ಗದರ್ಶನವೀಯುವುದಲ್ಲಿ ವಿನಿಯೋಗಿಸಬೇಕು.. ಅಂದರೆ ಯಾವೊಬ್ಬನು ಮಂತ್ರಿಯಾಗಳು ಇಚ್ಚಿಸುವವನ ವಯಸ್ಸು 50ಕ್ಕೆ ಮೆಲೆ ದಾಟಿರಬಾರದು... ಮಂತ್ರಿಯಾಗಳು ಅರ್ಹತೆಯುಳ್ಳವವನಿಗೆ ಕೇವಲ ಜನಬಲವೊಂದಿದ್ದರೆ ಸಾಲದು...
IAS,IPS ಮಟ್ಟದ ಪರೀಕ್ಷೆಗಳಿರಬೇಕು... ರಾಜಧರ್ಮ, Political, ಕ್ಲಿಷ್ಟ ಪರಿಸ್ಥಿಗಳನ್ನು ಎದುರಿಸುವ
ತಂತ್ರಗಾರಿಕೆಯನ್ನು, ಸ್ಥೈರ್ಯವನ್ನು ಪರೀಕ್ಷಿಸುವಂತಾಗಿರಬೇಕು.... ಪಾರದರ್ಶಕ ವ್ಯವಸ್ಥೆ ನನ್ನ ಗುರಿ....

ಮುಖ್ಯಮಂತ್ರಿಯಾಗುವವನಿಗೆ ಇದೆಲ್ಲಾ ಬದಲಾವಣೆಗಳು ಮಾಡುವ ಅಧಿಕಾರವಿರುತ್ತದೋ ಇಲ್ಲವೋ, ನನಗಂತೂ ಬೇಕು..

ಇನ್ನು ಮಂತ್ರಿಗಳನ್ನು ಆರಿಸುವ ಜನತೆ...ಮತದಾನ ಮಾಡುವ ಮಹಾಜನಗಳು....ಮತದಾನಕ್ಕೊಂದು ಒಂದಷ್ಟು ಕಟ್ಟಳೆಗಳನ್ನು ವಿಧಿಸುತ್ತೇನೆ... ನಾವು ಹಲವಾರು ಬಾರಿ ವೃತ್ತಪತ್ರಿಕೆಗಳಲ್ಲಿ ನೋಡುತ್ತಿರುತ್ತೇವೆ.. ಕೇವಲ ಶೇಕಡ.. 45% 65% ಮತದಾನವೆಂದು..... ಮುಂದೆ ಹೀಗೆ ಆಗಬಾರದು...ಕನಿಷ್ಟ ಪಕ್ಷ 9೦% ಇರಬೇಕು...ವಿಪರ್ಯಾಸವೆಂದರೆ ಹಳ್ಳಿಗಳಲ್ಲಿ ದುಡ್ಡಿಗೆ ಮತವನ್ನು ಮಾರಿಕೊಂಡುಬಿಟ್ಟಿರುತ್ತಾರೆ..ಹಳ್ಳಿ ಮುಗ್ದರಿಗೆ ಅವರ ಮತವು ಎಷ್ಟು ಮೌಲ್ಯವುಳ್ಳದ್ದು ಎಂದು... ಇನ್ನೊಂದು ಅಂಶವೆಂದರೆ ಇದರಲ್ಲಿ ಹೆಚ್ಚಾಗಿ ಯುವಕರು ಯುವತಿಯರು ಪಾಳ್ಗೊಳ್ಳದಿರುವುದು.....ಇದೊಂದು ವಿಪರ್ಯಾಸವೇ ಸರಿ... ಎಲ್ಲ ಯುವಜನತೆ ಪಾಳ್ಗೊಳ್ಳಲೇಬೇಕೆಂಬ ಕಟ್ಟಳೆ ವಿಧಿಸುತ್ತೇನೆ... ಇನ್ನೊಂದು ವಿಚಾರವೆಂದರೆ ಮತದಾನಕ್ಕಿಂತ ಮುಂಚೆ ಆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ತಿಗಳ ಪೂರ್ವಾಪರವನ್ನು ತಿಳಿಕೊಂಡಿರುವಂತಾಗಿರಬೇಕು..ಇದಕ್ಕಾಗಿ ಆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ತಿಗಳು ತಮ್ಮ ಕಲ್ಯಾಣಗುಣಗಳನ್ನು ಮುಂಚೆಯೇ ಜನರ ಮುಂದೆ ವಿವರಿಸಬೇಕಾಗಿರತ್ತದೆ..... ಇದೆಲ್ಲ ಕಡ್ಡಾಯವಾಗಿ ಪಾಲಿಸುವಂತೆ ಆದೇಶವನ್ನು ಹೊರಡಿಸುತ್ತೇನೆ...ಆರಂಭದಲ್ಲಿ ಕಷ್ಟವಾಗಬಹುದು..... ಆದರೆ ಅಸಾಧ್ಯವಂತು ಅಲ್ಲ.... ದೇಶದ ಅಭಿವೃದ್ದಿಯ ಕನಸು ಇದು...ಆಗಲೇಬೇಕು... ಆಬ್ದುಲ್ ಕಲಾಂ ಹೇಳುವಂತೆ ನಾವು 2020 ಹೊತ್ತಿಗೆ ಖಂಡಿತಾ ಅಭಿವೃದ್ದಿಹೊಂದಿದ ದೇಶವಾಗಿರುತ್ತದೆ ಎನ್ನುವ ಭರವಸೆ ನನ್ನದು.....

ಇನ್ನು ಪಕ್ಷಗಳ ವಿಚಾರ....ನಮ್ಮ ದೇಶದಲ್ಲಿ ಕಾಲಿಗೊಂದು ಕೊಸರಿಗೊಂದು ಎನ್ನುವಂತೆ ರಾಜಕೀಯ ಪಕ್ಷಗಳಿವೆ...
ಈ ಪಕ್ಷಗಳ ಸದ್ಯದ ಕೆಲಸವೆಂದರೆ ಅಧಿಕಾರದಲ್ಲಿರುವವರನ್ನು ಕೆಳಗಿಳಿಸುವುದು...ವಿರೋಧಪಕ್ಷವೆಂದರೆ ಅದರ ಕೆಲಸವೆಂದರೆ ಕುರ್ಚಿಯಲ್ಲಿರುವವರನ್ನು ಕೆಳಗಿಳಿಸುವುದು...ಇಲ್ಲಸಲ್ಲದ ಆರೊಪಗಳನ್ನು ಮಾಡಿಕೊಂಡು...

ನಾನು ಅಧಿಕಾರಕ್ಕೆ ಬಂದ ಕೂಡಲೆ ಎರಡು ಪಕ್ಷಗಳ ಹೊರತಾಗಿ ಬೇರೆಲ್ಲ ಪಕ್ಷಗಳನ್ನು ನಿರ್ನಾಮಮಾಡಲು ಆದೇಶ ಹೊರಡಿಸುತ್ತೇನೆ.... ಒಂದು ಆಡಳಿತ ಪಕ್ಷ ಇನ್ನೊಂದು ವಿರೋಧ ಪಕ್ಷ ....ಬೇರಾವ ಪಕ್ಷವು ಅಸ್ಥಿತ್ವದಲ್ಲಿರಬಾರದು...ಮಂತ್ರಿಗಳಾದವರು ಆಡಳಿತಪಕ್ಷದಲ್ಲಿರಬೇಕು ಅಥವಾ ವಿರೋಧಪಕ್ಷದಲ್ಲಿರಬೇಕು...

ನಾನು ಮಧ್ಯ ತಡೆದು..."ಬ್ರಹ್ಮ ಏನು ತುಂಬಾ silent ಆಗಿದ್ದೀಯ... ಎನನ್ನಿಸುತ್ತಿದೆ ನಿನಗೆ"..

"ನಾನು ಹುಚ್ಚನಿಗೆ ವರ ನೀಡುತ್ತಿದ್ದೀನೆ ಎಂದನಿಸುತ್ತಿದೆ ನನಗೆ..ಇಷ್ಟೊಂದು ಬದಲಾವಣೆಗಳು ಸಾಧ್ಯವೆ ಮಗೂ..ನಿನ್ನ ಕನಸು ಬಹಳ ದೊಡ್ಡದಿದೆ...ಆದರೆ ಒಂದಂತೂ ಹೆಳಬಲ್ಲೆ ನಾನು ದಾಸ್ ಗುಪ್ತನ ಮೇಲೆ ವಿಜಯವನ್ನು ಸಾಧಿಸಬಹುದು....ನಿನ್ನ ಪ್ರಣಾಳಿಕೆ ಮುಗಿಯಿತೋ..." ಎಂದ..

"ಇಲ್ಲ ಬ್ರಹ್ಮ..ಕನಸುಗಳು ಬೆಟ್ಟದಷ್ಟಿವೆ....ಇದಕ್ಕೆ ನನಗೆ ನಿನ್ನ ವರ ಬೇಕೇ ಬೇಕು...ಹೇಗಿದ್ದರೂ ನೀನೆ ಹುಡುಕಿಕೊಂಡು ಬಂದಿರುವೆ...ಇದನ್ನು ವೃಥಾ ವ್ಯರ್ಥ ಮಾಡಲು ನನಗಿಷ್ಟವಿಲ್ಲ...ಇದಕ್ಕೆ ನನಗೆ ಅಪಾರ ಹಣ
ಮತ್ತು ಇಷ್ಟು ಬದಲಾವಣೆಗಳನ್ನು ಸಾಧ್ಯವಾಗಿಸುವ ಅಧಿಕಾರ ಬೇಕು..., ಕೊಡುವೆಯಾ??"

ಬ್ರಹ್ಮ...."ಖಂಡಿತವಾಗಿ...ಬೇಗ ಮುಗಿಸು ನಿನ್ನ ಪ್ರಣಾಳಿಕೆಯನ್ನು.....ಬಹಳ ಹೊತ್ತಾಯಿತು ನಾನು ಬಂದು..."

ಬ್ರಹ್ಮ ಎಲ್ಲಿಂದ ಬಂದ...ಮತ್ತೆ ಎಲ್ಲಿಗೆ ಹೋಗುವ...ನಾನು ಎಲ್ಲಿದ್ದೇನೆ....ಎನ್ನುವ ಭಾವ ಮತ್ತೆ ಕಾಡತೊಡಗಿತು...

-----(ಮುಗಿದಿಲ್ಲ)

ನನ್ನ ಶತ್ರು.......

Thursday, October 4, 2007

ದಿವ್ಯಾ : ಹೂ! ಶ್ರೀಧರ್ ನನ್ನ ಪಾಡು ನನ್ನ ಶತ್ರುವಿಗೆ ಮಾತ್ರ ಬರ್ಬೇಕು....

ನಾನು : ಹೋ! ನಿಂಗೆ ಶತ್ರುಗಳು ಇದ್ದಾರ??

ದಿವ್ಯಾ : ನನಗೆ ಗೊತ್ತಿರೋ ಮಟ್ಟಿಗೆ ಯಾರು ಇಲ್ಲ..ಇದ್ರೆ ಅವ್ರಿಗೆ ಬರ್ಬೇಕು ಈ ಪಾಡು...

ನಾನು : ನನಗೊಬ್ಬ ಶತ್ರು ಬೇಕು....

ದಿವ್ಯಾ : ನನಗೂ ಕೂಡ!...



ಒಳ್ಳೇ ಚಾಕೋಲೇಟ್ ಕೇಳಿದ ಹಾಗೆ ಇಬ್ಬರು ಸಮ್ಮತಿಸಿದೆವು..ಶತ್ರುವಿಗಾಗಿ..ಆ ಕ್ಷಣದಲ್ಲಿ ನನಗೊಬ್ಬ ಶತ್ರು ಬೇಕಾಗಿತ್ತು...ನನ್ನ ಶತ್ರುವಿಗೆ ಇರಬೇಕಾದ ಗುಣಲಕ್ಷಣಗಳನ್ನು ಆಕೆಯ ಮುಂದೆ ವಿವರಿಸುತ್ತಾ ಹೋದೆ..ನಿಮಗೂ ನನ್ನ ಶತ್ರುವಾಗುವ ಅರ್ಹತೆಯಿದ್ದಲ್ಲಿ ಅರ್ಜಿ ಗುಜರಾಯಿಸಬಹುದು...ತುಂಬು ಹೃದಯದ ಸ್ವಾಗತವೀಯುತ್ತೇನೆ..ಅದಕ್ಕಾಗಿ ಈ ಲೇಖನ....


"ಶ್ರೀಧರ್, ಅವನಾ ತುಂಬಾ soft -u, silent -u, innocent -u, ;-).ತುಂಬ helpful!! ಕಣಪ್ಪಾ ಅವನು..."(ಯಾರು ಹೇಳಿದ್ದು??)

"ಮಚ್ಚಿ, ನೀನು ನಂಗೆ ಹೆಲ್ಪ್ ಮಾಡ್ತೀಯ ಅಂದುಕೊಂಡಿದ್ದೆ..ನೀನು ಹಿಂಗಂದ್ಬಿಟ್ರೆ ಹೇಗೆ?? "(ಯಾಕ್ ಅನ್ಬಾರ್ದು??)

"ಶ್ರೀಧರ್, ನಿನ್ನ ನೋಡಿದ್ರೆ ನನ್ನ ತಮ್ಮನ ನೆನಪಾಗುತ್ತದೆ, ಅವನೂ ಸಹ ನಿನ್ನ ಹಾಗೆ silent, soft(ಅದಿಕ್ಕೆ??)

ನನಗೆ ಬದಲಾವಣೆ ಬೇಕಾಗಿದೆ....ಸಾಕಾಗಿದೆ..... ಅದಕ್ಕಾಗಿ ನನಗೊಬ್ಬ ಶತ್ರು ಬೇಕು :-) :-).. ಇಲ್ಲಿಂದಲೇ ಬದಲಾವಣೆ ಶುರುವಾಗಲಿ...ನಾನೂ ಸಹ ಜನರನ್ನು ದ್ವೇಷಿಸಬಲ್ಲೆ ಎಂದು ತೋರಿಸಬೇಕು... ;-) ನನ್ನ ಶತ್ರುವಿಗೆ ಬೇಕಾದ ಗುಣಲಕ್ಷಣಗಳನ್ನು ಕೆಳಗೆ ನಮೂದಿಸಿದ್ದೇನೆ..ನೋಡಿ...

1) ಅವನನ್ನು ನಾನು ಪ್ರತಿದಿನವೂ ನೋಡಬೇಕು...

2) ಅವನ ಪ್ರತಿ ಚಲನವಲನಗಳ ಮಾಹಿತಿ ನನಗೆ ಸಿಗುವಂತಾಗಿರಬೇಕು..

3) ಅವನು ನನ್ನೆದುರಿಗೆ ನಡೆದು ಹೋಗುತ್ತಿದ್ದರೆ ಮನಸಾರೆ ಬೈಯ್ಯಬೇಕು..

4) ಅವನೇನಾದರು ಸಣ್ಣದೋ ದೊಡ್ಡದೋ ಸಾಧನೆ ಅಂತೇನಾದರು ಮಾಡಿದರೆ ನಾನು ಇತರರೊಂದಿಗೆ " ಅದೇನು ಮಹಾ! ನಾನೂ ಸಹಾ ಮಾಡಬಲ್ಲೆ...ಎನ್ ಅವನೊಬ್ಬನಿಗೆ ನಾ ಆಗೋದು" ಎಂದು ಕೊಚ್ಚಿಕೊಳ್ಳಬೇಕು...

5) ಅವನ ಏಳು ಬೀಳುಗಳಿಗೆ ನಾನು ಜವಾಬ್ದಾರನಾಗಿರಬಾರದು...

6) ಅವನ ದಾರಿಯಲ್ಲಿ ಬಿದ್ದರೆ ಹುಚ್ಚಾಪಟ್ಟೆ ನಗಬೇಕು.... ಕಚಡ ನನ್ಮಗ ಆಯ್ಕೊಂಡ...ಹಹ್ಹಹ್ಹಾ... ಎಂದು

7) ನನ್ನ ಪ್ರತಿ ಏಳಿಗೆಗು ಅವನು ಹೊಟ್ಟೆ ಉರಿದುಕೊಳ್ಳಬೇಕು....

8) ಅವನು ಬರಗೆಟ್ಟು ಹೋಗಿ ನನ್ನ ಬಳಿ ಸಹಾಯ ಕೇಳಲು ಬಂದರೆ "ನನ್ಮಗನೆ ಎದ್ದ್ ಹೋಗೋಲೋ....ಅನ್ನಬೇಕು"..ಆಗ ಅವನ ಪೆಚ್ಚು ಮುಖವನ್ನು ನಾನು ನೋಡಬೇಕು...

9) ನಾನು ಅವನಿಗಿಂತ ಮುಂಚೆ ಸಾಯಬೇಕು..

10) ಮೇಲ್ಕಂಡ 9 ಸೂತ್ರಗಳಂತೆ ಆತನೂ ಸಹ ನನ್ನ ಬಗ್ಗೆ ಇದೇ ಭಾವವನ್ನು ಹೊಂದಿರಬೇಕು....

ಮೇಲೆಲ್ಲಾ ಬರೀ "ಅವನು ಅವನು" ಅಂತ ಸಂಭೋದಿಸಿದ್ದೇನೆ....ಅವಳೂ ಸಹ ಆಗಬಹುದು..ಮಹಿಳಾಮಣಿಗಳಿಗು ಸಹ ಅವಕಾಶವಿದೆ... :-)

ಇಂತಹ ವಿಶೇಷ ಗುಣಗಳೊಂದಿರುವ ವ್ಯಕ್ತಿ ನನಗೆ ದೊರೆಯುತ್ತಾನೋ ಇಲ್ಲವೋ ಗೊತ್ತಿಲ್ಲ.... ಅಂತಹವರು ಸಿಕ್ಕರೆ ಜೀವನ ಮಜಾವಾಗಿರುತ್ತದೆ..

10ಕ್ಕೆ 10 ಬರಬೇಕೆಂದಿಲ್ಲ....those who will manage to get more than 6 will be eligible to become my enemy.... ಆಗುವಿರಾ??

ನನ್ನವಳೊಂದಿಗೆ ಹಾಡು-ಪಾಡು......

Thursday, September 20, 2007

ನನ್ನವಳೊಂದಿಗೆ ;-) ಒಂದಷ್ಟು ಹಾಡುಗಳ ಜುಗಲ್ ಬಂದಿ..ನನ್ನ ಪ್ರತಿ ಹಾಡಿಗೂ ಅವಳ ಬಳಿ ಅದಕ್ಕೆ ಮತ್ತೊಂದು ಹಾಡನ್ನು ಪೋಣಿಸುತ್ತ ಹೋದಳು ಒಂದು ಸುಂದರ ಸಂಜೆಯಲ್ಲಿ...ನಾನು ಕೇಳುತ್ತ ಹೋದೆ... ನಿಮಗೂ ಕೇಳಿಸುವ ಮನಸಾಯಿತು..... ಅದಕ್ಕಾಗಿ ಬ್ಲಾಗಿಸುತ್ತಿದ್ದೇನೆ....ಅರ್ಥವಾದರೆ ಸಂತೋಷ.. ಇಲ್ಲದಿದ್ದರು ಸಂತೋಷ... ಅವರವರ ಭಾವಕ್ಕೆ ಬಿಟ್ಟದ್ದು..

ನಾನು : ಇದು ನನ್ನ ನಿನ್ನ ಪ್ರೇಮ ಗೀತೆ ಚಿನ್ನ...ಇದು ಎಷ್ಟು ಸಾರಿ ಹಾಡಿದರು ಚೆನ್ನ..ಇದು ನಿಲ್ಲಲಾರದೆಂದು, ಕೊನೆಯಾಗಲಾರದೆಂದು ಈ ಪ್ರೇಮ ಗೀತೆಯೆ ಹೀಗೆಯೊ..
ಅವಳು : ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ ಪಯಣಿಗ ನಾನಪ್ಪಾ...ಪ್ರೀತಿಯ ತೀರವ ಸೇರುವುದೊಂದೆ ಬಾಳಿನ ಗುರಿಯಪ್ಪಾ...(ಸ್ವಲ್ಪ modify ಮಾಡಿಬಿಟ್ಳು...) ನಿಮ್ಗೆ ಗೊತ್ತಾಯ್ತಲ್ಲ್ವ??


ನಾನು : ಯಾವುದೋ ಈ ಬೊಂಬೆ ಯಾವುದೋ...ಊರ್ವಶಿಯ ಕುಲವೋ ಮೇನಕೆಯ ಚೆಲುವೋ...
ಅವಳು : ಕೃಷ್ಣ ನೀ ಬೇಗನೆ ಬಾರೊ...ಶ್ರೀಕೃಷ್ಣ ನೀ ಬೇಗನೆ ಬಾರೊ...ಈ ರಾಧೆಯ ಕೂಗು ನೀ ಕೇಳಿಲ್ಲವೇನು..ವಾಸುದೇವ..ವೇಣುಗೋಪಾಲಾ...


ನಾನು : ತ್ರಿಪುರಾ ಸುಂದರಿ ಬಾರೆ ನೀ ಹಸೆಮಣೆಗೆ ಮದುವೆ ಮುಗಿದರೆ ರಾತ್ರಿಯೇ ಮೆರವಣಿಗೆ..ನಡೆ ನಡೆ ಮೆಲ್ಲಗೆ ದುಂಡು ದುಂಡು ಮಲ್ಲಿಗೆ...ಅಂಜದ ಗಂಡಿಗೆ ಜೋಡಿ ಆಗೆ ಮೆಲ್ಲಗೆ...
ಅವಳು : ಎಲ್ಲಾ ಒಕೆ ಮದುವೆ ಯಾಕೆ...ಎಲ್ಲಾ ಒಕೆ ಮದುವೆ ಯಾಕೆ... ಮದುವೆ ಅಂದ್ರೆ ಸೆಂಟ್ರಲ್ ಜೈಲು ಜೀವಕ್ಕಿಲ್ಲ ರಕ್ಷೆ.. ಏಳು ಹೆಜ್ಜೆ ಇಟ್ಟ ಮೇಲೆ ಏಳು ಜನ್ಮ ಶಿಕ್ಷೆ...


ನಾನು : ಸ್ವಾಭಿಮಾನದ ನಲ್ಲೆ ..tin tin tin tin ಸಾಕು ನಿನ್ನಯ ಬಲ್ಲೆ...tin tin tinಹೊರಗೆ ಸಾಧನೆ ಒಳಗೆ ವೇದನೆ..ಇಳಿದು ಬಾ ಬಾಲೆ.. tin tin tin


ಅವಳು : ಈ ಶತಮಾನದ ಹೆಣ್ಣು, ಸ್ವಾಭಿಮಾನದ ಹೆಣ್ಣು..


ನಾನು : ಯಾರೇ ನೀನು ಚೆಲುವೆ..ಯಾರೇ ನೀನು ಚೆಲುವೆ...ನಿನ್ನಷ್ಟಕ್ಕೆ ನೀನೇ ಏಕೆ ನಗುವೆ...ನಿನ್ನಷ್ಟಕ್ಕೆ ನೀನೇ ಏಕೆ ನಗುವೆ.....
ಅವಳು : ಪುಟಗಳ ನಡುವಿನ ಗರಿಯೇ ನೀನೊಮ್ಮೆ ಹಾರಿ ನೋಡು..ಪುಟಾಣಿ ದೋಣಿಯ ಮರಿಯೇ...ಮಳೆ ನೀರಿನಲ್ಲಿ ಓಡು.. ನಲುಮೆಗಿಲ್ಲಿ ಎಂದು ಬರದೆ ಇರಲಿ ಬಡತನ..ನಮ್ಮ ಗೆಳೆತನ ಇರಲಿ ಕಡೆತನ.... ಕಡೆತನ...


ನಾನು : ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ..ಹೂ ಅಂತೀಯಾ..ಉಹೂ ಅಂತೀಯಾ..
ಅವಳು : ಪ್ರೇಮ ಗೀಮ ಜಾನೆ ದೋ....ನಂಬಬಾರದೋ.... ಪ್ರೇಮಮ್ ಶರಣಮ್ ಗಚ್ಚಾಮಿ ಅನ್ನಬಾರದೋ...


ನಾನು : ನನ್ನವಳು ನನ್ನವಳು ಮುಟ್ಟಿದರೆ ನಲುಗುವಳು..ಮುಟ್ಟದಯೇ ಮುದ್ದಾಡಲೇ... ನೋಡಿದರೆ ಕರಗುವಳು... ಮನದ ಜೊತೆ ಮಾತಾಡಲೇ...ಮುಟ್ಟದಯೇ ಮುದ್ದಾಡಲೇ....
ಅವಳು : one foot distance...very very decent ....ಹೆಣ್ಣು ಗಂಡು ಇರೋವಾಗ..


ನಾನು : excuse me excuse me excuse me excuse me ನಾ ಪ್ರೇಮಿ... u loook me..u catch me...u use me....u love me.....ಬಾರಮ್ಮಿ..
ಅವಳು : ಲೋ ಚಪ್ಪರ್..ಎದ್ದ್ ಹೋಗೋ....


ನಾನು : ಅನಿಸುತಿದೆ ಯಾಕೋ ಇಂದು ನೀನೇನೇ ನನ್ನವಳೆಂದು... ಮಾಯದ ಲೋಕದಿಂದ ನನಗಾಗೇ ಬಂದವಳೆಂದು...ಅಹಾ ಎಂತ ಮಧುರ ಯಾತನೆ...ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೆ..
ಅವಳು : ಅರಳುತಿರು ಜೀವದ ಗೆಳೆಯ ಸ್ನೇಹದ ಸಿಂಚನದಲ್ಲಿ.. ಬಾಡದಿರು ಸ್ನೇಹದ ಹೂವೆ..ಪ್ರೇಮದ ಬಂಧನದಲ್ಲಿ...ಮನಸಲ್ಲೇ ಇರಲಿ ಭಾವನೆ.. ಮಿಡಿಯುತಿರಲಿ ಮೌನ ವೀಣೆ ಹೀಗೆ ಸುಮ್ಮನೆ....

ನಾನು ಸುಮ್ಮನಾದೆ.... ಆದರೆ ಮನವು ಮಾತ್ರ ಕೆ.ಎಸ್.ನರಸಿಂಹಸ್ವಾಮಿಯವರ ಹಾಡು ಗುನುಗುತ್ತಲೆ ಇತ್ತು..

"ನಿನ್ನೊಲುಮೆ ಇಂದಲೆ ಬಾಳು ಬೆಳಕಾಗಿರಲು..ಚಂದ್ರಮುಖಿ ನೀನೆನಲು ತಪ್ಪೇನೆ... ನಿನ್ನ ಸೌಜನ್ಯವೇ ದಾರಿ ನೆರಳಾಗಿರಲು.........."

ನಾನು ಬ್ರಹ್ಮ ಮತ್ತು ಮುಖ್ಯಮಂತ್ರಿ - ಭಾಗ 3

ಹಾಗೆ ತನ್ನ ಉದ್ದಿಶ್ಯ ಹಾಗು ಪೂರ್ವಾಪರವನ್ನು ನನಗೆ ವರದಿ ಒಪ್ಪಿಸಿದ ನಂತರ ಬ್ರಹ್ಮ ನನ್ನ ಪ್ರತ್ಯುತ್ತರಕ್ಕಾಗಿ ಕಾಯುತ್ತಿದ್ದ.. ನಾನು ಮಂಕುಬಡಿದವಂತೆ ಸುಮ್ಮನಿದ್ದೆ ..."ಬ್ರಹ್ಮಲೋಕದಲ್ಲಿ Orkutte...ಶಿವ ಶಿವಾ... ದೇವಾನು ದೇವತೆಗಳು ಸಹ ಈಗ update ಆಗ್ಬಿಟ್ಟಿದಾರೆ... ಕೇಳಬೇಕು... ರಂಭೆ, ಊರ್ವಶಿ, ಮೇನಕೆ ಅವರ profiles Orkut ನಲ್ಲಿ ಇದ್ದೀಯ ಅಂತ..ಇದ್ದರೆ add ಮಾಡಿಕೊಳ್ಳೋಣ... ತ್ರಿಪುರ ಸುಂದರಿಗಳು ಹೇಗೆ ಇದ್ದಾರೆಂಬ ಕುತೂಹಲ ಕೂಡ ಇದೆ ನನಗೆ... Hmmm

ಬ್ರಹ್ಮ ನನ್ನ ಯೋಚನಾ ಲಹರಿಯನ್ನು ತಡೆದು "ಈಗ ವರ ಕೇಳುವ ಸರದಿ ನಿನ್ನದು..ಕೇಳು ನೀನು ಕೇಳುವ ವರ ಇಡೀ ಭೂಲೋಕದ ಮನುಷ್ಯರ ಮನೋಭಾವವನ್ನು ದೇವತೆಗಳಿಗೆ ಸೂಚಿಸುತ್ತದೆ..ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯರಲ್ಲೂ ಒಳ್ಳೆತನ ಇರುತ್ತದೆ ಎಂಬುದು ನಾನು ದಾಸ್ ಗುಪ್ತನಿಗೆ ತೋರಿಸಬೇಕಾಗಿದೆ. so ಎಚ್ಚರವಿರಲಿ.."

ಬ್ರಹ್ಮ ಸ್ವಲ್ಪ ಸಮಯ ನೀಡುವೆಯಾ..ಕಾಫಿ ಕುಡ್ಯೋಣವೆ...ನಾನು ಸ್ವಲ್ಪ ಚೇತರಿಸಿಕೊಳ್ಳಬೇಕು..

ಮುಗುಳ್ನಗುತ್ತ ಬ್ರಹ್ಮ Ice Thunder ಕಾಫಿ ಆಗಬಹುದೋ... ಎಂದ.

ನನಗೆ ಆಶ್ಚರ್ಯ, ಸಂತೋಷ ಒಟ್ಟೊಟ್ಟಿಗೆ ಬಂತು.. ಇದೇನು ಹೊಸತಲ್ಲ..ಬ್ರಹ್ಮನ introduction ಇಂದ ಹಿಡಿದು ಇಲ್ಲಿ ತನಕ ಬರೀ ಆಶ್ಚರ್ಯಗಳೇ.. !!

ಕಣ್ಣು ಪಿಳುಕಿಸುವುದರಲ್ಲಿ Ice Thunder ನ ಬಿಸಿ ಬಿಸಿ ಹಬೆಯಾಡುವ ಕಾಪಿ ನಮ್ಮ ಮುಂದಿತ್ತು...ವ್ಯತ್ಯಾಸವೊಂದೇ ಅರುಣ ನನ್ನ ಜೊತೆ ಇರಲಿಲ್ಲ...

ಕಾಫಿ ಹೀರುವ ಅಷ್ಟೊತ್ತು ಯೋಚಿಸುತ್ತಿದ್ದೆ ಏನು ಕೇಳುವುದು ಎಂದು...

ಕಾಫಿ ಮುಗಿದೊಡನೆಯೆ ಕಪ್ಪನ್ನು ಪಕ್ಕಕ್ಕಿಡುತ್ತಾ.."ಸರಿ ಬ್ರಹ್ಮ ನನ್ನನ್ನು ಹಿಟ್ಲರ್ ಮಾಡಿಬಿಡು... ಅಂದು ಹಿಟ್ಲರ್ ಯಹೂದಿಗಳನ್ನು ಜೀವಂತವಾಗಿ ಸುಡುತ್ತಿದ್ದ...ನಾನು ಅದನ್ನೇ ಮಾಡುತ್ತೇನೆ..ಯಹೂದಿಗಳ ಬದಲಾಗಿ ಮುಸಲ್ಮಾನರನ್ನು ...ಅವರ ಉಪಟಳ ಹೆಚ್ಚಾಗಿ ಹೋಗಿದೆ...ಎಲ್ಲೆಲ್ಲೂ ಭಯೋತ್ಪಾದನೆ.... ಸಾಕು ಮುಗಿಸಿಬಿಡುತ್ತೇನೆ... ನನ್ನನ್ನು ಹಿಟ್ಲರ್ ಮಾಡು.." ಎಂದೆ..

ಅಷ್ಟೊತ್ತು ಶಾಂತ ಮೂರ್ತಿಯ ಅಪರಾವತಾರವಾಗಿದ್ದ ಬ್ರಹ್ಮ ಇದ್ದಕ್ಕಿದಂತೆ ಕುಪಿತನಾಗಿ ಖಾರವಾಗಿ "ನಿನ್ನ ತಿಳಿಗೇಡಿ ತನಕ್ಕೆ ನಾ ಏನೆಂದು ಹೇಳಲಿ... ಎಲ್ಲ ಮುಸಲ್ಮಾನರನ್ನು ಸಾಯಿಸುತ್ತೀಯ.. ನಿನ್ನ ಹೆಸರು ಮಾನವ ಸಂಕುಲ ವಿರುವವರೆಗು ಇರುತ್ತದೆ.."ಮಹಾರಾಕ್ಷಸ" ನೆಂಬ ಬರಹದಡಿಯಲ್ಲಿ.. ನೆನಪಿಟ್ಟುಕೊ.. ನಿನ್ನ ಮಾನವ ಸಹಜ ರಾಗ ದ್ವೇಷಗಳನ್ನ ನನ್ನ ಮುಂದಿಡಬೇಡ... ನಿನ್ನ ಹೆಸರು ಹಾಳದರೆ ಹಾಳಗಲಿ.. ನನಗೆ ಕೆಟ್ಟ ಹೆಸರು ತಗಲಿಕೊಳ್ಳುತ್ತದೆ..ಒಬ್ಬ ಹುಚ್ಚನಿಗೆ ವರ ನೀಡಿದೆ ಎಂದು.. ಉದ್ದಾರ ವಾಗುವಂತಹ ಕೆಲಸಗಳನ್ನು ಮಾಡುವೆಯಾದರೆ ಕೇಳು ಇಲ್ಲವಾದರೆ ನಾ ಹೊರಡುತ್ತೇನೆ...ದಾಸ್ ಗುಪ್ತನೇ ಜಯಶಾಲಿ ಎಂದು ನನ್ನ ಸೋಲೊಪ್ಪಿಕೊಳ್ಳುತ್ತೇನೆ.."

ನಾನು ಕೇಳಿದ್ದು ತಪ್ಪೆನೆಸಿ.."ಸ್ಸಾರಿ..ಬ್ರಹ್ಮ...ಏನೋ ತಿಳಿಯದೆ ಕೇಳಿಬಿಟ್ಟೆ... ಕ್ಷಮಿಸಿಬಿಡು.. "

"ನೋಡು ನಿನಗೆ ಕ್ರೈಸ್ತ, ಮುಸಲ್ಮಾನ, ಹಿಂದೂ ಎಂದು ಜನರನ್ನು ವರ್ಗೀಕರಿಸುತ್ತೀಯ...ನನಗೆ ಹಾಗಿಲ್ಲ.. ಭೂಲೋಕದ ಮಾನವರೆಲ್ಲರೂ ನನಗೊಂದೇ...ತಿಳಿದುಕೋ..."

"ಸರಿ ಹಾಗದರೆ ನನ್ನ ಅಲೆಗ್ಸ್ಯಾಂಡರ್ ಮಾಡು.."

"ಇಡೀ ಭೂಲೋಕ ನಿನ್ನದಾಗುವ ಆಸೆಯನ್ನು ಬಿಟ್ಟುಬಿಡು...ನಿನ್ನ ಸಾಮರ್ಥ್ಯಕ್ಕೆ ಹೊಂದುವಂತಹ ವರ ಕೇಳಿದರೊಳಿತು..."

"ಹಾಗದರೆ ನೆಪೋಲಿಯನ್ ನಂತೆ ಧೈರ್ಯಶಾಲಿ ಮಾಡುವೆಯಾ.." ಎಂದೆ..

"ನಿನಗೆ ನಿನ್ನ ಸ್ವಾರ್ಥಸಾಧನೆಯೆ ಹೆಚ್ಚಾಗಿದೆ, ಮಾನವರೆಲ್ಲಾ ಒಂದೇ...ದಾಸ್ ಗುಪ್ತನೇ ಸರಿ..ನನಗೆಲ್ಲೊ ಭ್ರಾಂತು.., ಒಂದು ನೆನಪಿನಲ್ಲಿಟ್ಟುಕೊ.ನೀನು ಇತರರಂತೆ ಆಗಬಾರದು ನಿನ್ನತನವನ್ನು ನೀನು ಬೆಳೆಸಿಕೋಬೇಕು, ಹಾಗೆ ಅದನ್ನು ಉಳಿಸಿಕೋಬೇಕು.. ಅರ್ಥವಾಯಿತೆ?? "..

"ನಿನಗೆ ಹಿಟ್ಲರ್, ಮುಸ್ಸೊಲೊನಿ, ಅಲೆಗ್ಯಾಸಂಡರ್ ಆದರ್ಶಪ್ರಾಯವಾಗಿದ್ದಾರೆ ಅದೊಂದು ದೊಡ್ಡ ವಿಪರ್ಯಾಸ..ನೀನು ಇತಿಹಾಸದಿಂದ ಪಾಟ ಕಲಿತಿಲ್ಲ"... ಎಂದು ಬ್ರಹ್ಮ ತನ್ನ ಮುಖವನ್ನು ಸಪ್ಪೆ ಮಾಡಿಕೊಂಡ..

ಪಟ್ಟನೆ ನನಗೆ ಏನೋ ಹೊಳೆದಂತಾಗಿ..."ಸರಿ ಬ್ರಹ್ಮ ನಾನು ಜನರಿಗೆ ಒಂದಷ್ಟು ಕಲ್ಯಾಣ ಕೆಲಸಗಳನ್ನು ಮಾಡಬೇಕೆಂದಿದ್ದೆ, ಅದಕ್ಕಾಗಿ ದೊಡ್ಡ ಅಧಿಕಾರವನ್ನು ಬಯಸಿದೆ..ಅಷ್ಟೆ.. ನನ್ನನ್ನು ಈ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡು..." ಎಂದೆ ಒಂದೇ ಉಸಿರಿನಲ್ಲಿ..

ಬ್ರಹ್ಮ ಮತ್ತೆ ಪೇಚಿಗೆ ಸಿಕ್ಕಿ ಹತಾಶ ಮುಖದಿಂದ... "ಏನಪ್ಪಾ ಮಾಡುವೆ ನೀನು ಮುಖ್ಯಮಂತ್ರಿಯಾಗಿ...ನೀನು ಆರಿಸಿಕೊಂಡ ವ್ಯಾಪ್ತಿಯೇನೋ ಚೆನ್ನಾಗಿದೆ...ಆದರೆ ಅಧಿಕಾರಕ್ಕೆ, ಕುರ್ಚಿಗಾಗಿ ಗುದ್ದಾಟ ನಡೆಸುವೆಯಾ.. ಏನು ಮಾಡುವೆ ನೀನು ಮುಖ್ಯಮಂತ್ರಿಯಾಗಿ ??? ಮತ್ತೆ ನಿನ್ನ ಸ್ವಾರ್ಥವೆ ಇಣುಕಾಡುತ್ತಿದೆ ಎಂದನಿಸುತ್ತಿದೆ ನನಗೆ ..ಸರಿಯಾಗಿ ಹೇಳು ಏನು ಮಾಡುವೆ ಮುಖ್ಯಮಂತ್ರಿಯಾಗಿ?? "

"ನಾನು ಏನು ಮಾಡ್ತೀನಿ ಅಂತ ಹೇಳಿದಮೇಲೆ ವರ ಕೊಡುವೆಯೋ...ಇರಲಿ ಇರಲಿ... ಇಗೋ ನನ್ನ ಪ್ರಣಾಳಿಕೆಯನ್ನು ನಿನ್ನ ಮುಂದಿಡುತ್ತೇನೆ... ನನಗೆ ಇಂದಿನ ಯುಗದಲ್ಲಿ ಜಗತ್ತಿಗೆ ಕಲ್ಯಾಣ ;-) ಮಾಡಬೇಕಾದರೆ.. ಒಂದು ಅಧಿಕಾರ ಅಥವ ಹಣ ಇರಬೇಕು..ಇವೆರರೊಡನೆ.. ಹಣವನ್ನು ಅಧಿಕಾರವನ್ನು ಉಪಯೋಗಿಸುವ ವಿವೇಕ.., ಅದು ನನ್ನಲ್ಲಿದೆ ಎಂಭ ಭಾವ ನನ್ನದು
:-) ಅಧಿಕಾರ ಕೊಡುವ ಕೆಲಸ ನಿನ್ನದು..ವರ ಕೊಡ್ತೀನಿ ಅಂತ ನೀನೇ ಹುಡುಕಿಕೊಂಡು ಬಂದಿರುವೆ...ಇನ್ನು ಹಣ
ಅದನ್ನು ನೀನು ಕುಬೇರನಿಂದ ನನಗೆ ಕೊಡಿಸಬೇಕು.. ಆಗುವುದೆ??"


"ಒಹ್!..... ಹಣ ಅಧಿಕಾರ ಕೊಡುವ ವಿಷಯ ತಕ್ಶಣಕ್ಕೆ ಪಕ್ಕಕ್ಕಿಡು...ನೀನು ಮುಖ್ಯಮಂತ್ರಿಯೆಂದ ಅಧಿಕಾರವನ್ನು ಹೇಗೆ ಉಪಯೋಗಿಸುತ್ತೀಯ..?? "

"ಬ್ರಹ್ಮ....ಹೇಳುವೆ...ಇನ್ನೊಂದು ಕಾಫಿ ತರ್ಸಿದ್ರೆ ಚೆನ್ನಾಗಿರುತ್ತಿತ್ತು..." ಎಂದೆ ಹಲ್ಲುಕಿರಿಯುತ್ತ..

ಬ್ರಹ್ಮ ಪ್ರಸನ್ನವದನನಾಗಿ ಮತ್ತೆ ಎರಡು ಕಪ್ ಕಾಫಿ ತರಿಸಿದ.. ನನ್ನ ಮುಂದೆ ಕಾಫಿ ಲೋಟದಿಂದ ಭುಗಿಲೇಳುತ್ತಿದ್ದ ಹಬೆಯು ನನ್ನ ಮೂಗಿಗೆ ಬಡಿದು ಕಾಫಿ ಕಂಪನ್ನು ನನ್ನ ಮೂಗಿಗೆ ಸಿಂಪಡಿಸುತ್ತಿದ್ದವು... ಇಳಿಸಂಜೆಯ ಗಾಂಧಿ ಬಜ಼ಾರ್ ನನ್ನ ಮನದಾಳದಲ್ಲಿ ಮೂಡುತ್ತಿತ್ತು... ಕಾಫಿ ಹಬೆಯಂತೆ ನನ್ನ ಮುಖ್ಯಮಂತ್ರಿಯ ಪ್ರಣಾಳಿಕೆಯಲ್ಲಿ ಮೂಡ ಬೇಕಾದ ವಿವರಗಳು ನನ್ನ ಮನ:ಪಟಲದಲ್ಲಿ ಕ್ಷಣ ಕ್ಷಣಕ್ಕೂ ವಿವಿಧ ರೂಪಗಳನ್ನು ಪಡೆಯುತ್ತಿದವು...ಅದನ್ನು ಬ್ರಹ್ಮನಿಗೆ ಒಪ್ಪಿಗೆಯಾಗುವಂತೆ ತಿಳಿಸಬೇಕಾಗಿತ್ತು..ಹೀಗೆ ಯೋಚಿಸುತ್ತ ಕಾಪಿ ಕಪ್ಪನ್ನು ನನ್ನ ತುಟಿಗೆ ಹಿಡಿದು ಹೀರಲನುವಾದೆ.... ಕಾಫಿ ಗುಟುಕುಗಳು ಇಳಿದೊಡನೆಯೆ ನನ್ನ ವಿಚಾರಗಳು, ಅದಕ್ಕೆ ಬೇಕಾದ ರೂಪು ರೇಷೆಗಳು ಅಚ್ಚುಕಟ್ಟಾಗಿ ಮೂಡತೊಡಗಿದವು... ನಿಜಕ್ಕೊ ಕಾಫಿ ಒಂದು ದಿವ್ಯ ಅಮೃತವೇ ಸರಿ ಎಂದು ಮತ್ತೆ ಮತ್ತೆ ಹೀರಿದೆ... :-)




....(ಸಶೇಷ)




ಯಶ್ವಂತ್.....

Saturday, September 15, 2007

ನಾನಾಗ ಬೆಂಗಳೂರಿಗೆ ಬಂದ ಹೊಸತು...ನಮ್ಮ ತಂದೆಗೆ ಗೌರಿಬಿದನೂರಿನಿಂದ ವರ್ಗವಾಗಿತ್ತು... ಏಳನೆ ಇಯತ್ತೆಗೆ SGPTA ಶಾಲೆಗೆ ಸೇರಿದ್ದೆ...ನಾನು ಬೆಂಗಳೂರು ಬಿಡುವಾಗ ಸಹ ಅದೇ ಶಾಲೆಯಲ್ಲೆ ಓದುತ್ತಿದ್ದೆ..ಆಗ ಎರಡನೆ ಇಯತ್ತೆ... ಮಧ್ಯ ಐದು ವರ್ಷದ ಗ್ಯಾಪ್.. !! ಪ್ರಪಂಚದ ಯಾವುದೇ ಊರಿನಲ್ಲಿ ಇದ್ದರೂ ಸಹ ನಾನು ಗೌರಿಬಿದನೂರನ್ನು ಮರೆಯುವ ಹಾಗಿಲ್ಲ... ಅದಕ್ಕೆಂದೆ ಬೇರೆ ಲೇಖನವನ್ನು ಬರೆಯುತ್ತೇನೆ.... :-) ಮರಳಿ ಶಾಲೆಗೆ ಹೋದಾಗ ನಾನು ಹಳೆ ವಿಧ್ಯಾರ್ಥಿ ಎಂದು ಗುರುತಿಸದರು.. ಒಹ್! ಶ್ರೀಧರ್ ರಾಜು ಎಂದು !! ಎಲ್ಲರು ಮುಖ ನೋಡಿಕೊಳ್ಳುತ್ತಿದ್ದರು..ನಾನು ಎರಡನೆ ತರಗತಿಯನ್ನು ಬಿಡುವ ವೇಳೆಯಲ್ಲಿ ಇದ್ದವರು, ಸಾಕಷ್ಟು ಗೆಳೆಯರು ಅಲ್ಲೇಅ ಎಂದರೆ ಅದೇ ಶಾಲೆಯಲ್ಲಿ ಇದ್ದರು...

ಊರಿಗೆ ಬಂದೊಡನೆಯೆ ನನ್ನನ್ನು ಮನೆಪಾಠಕ್ಕೆ ಹಾಕಿದ್ದರು...ಓದಿ ಉದ್ದಾರವಾಗಲಿ ಎಂದು !!ಸಾಧರಣವಾಗಿ ಮನೆಪಾಠಕ್ಕೆ ಬರುವವರು ಪಾಠದ ಮನೆಯ ಸುತ್ತ ಮುತ್ತಲಿನವರೆ ಆಗಿರುತ್ತಾರೆ... ನನಗೊಬ್ಬ ಗೆಳೆಯ ದೊರೆತಿದ್ದ, ನಮ್ಮನೆಗೆ eggjactly opposite... ಯಶ್ವಂತ್... ಅವನು ಸಹ ಏಳನೆ ತರಗತಿ... NMKRV ಸ್ಕೂಲ್...

ಮನೆಗೆ ಹತ್ತಿರವಿದ್ದುದರ ಕಾರಣವೇನೋ ಬಹಳ ಬೇಗ ಹತ್ತಿರವಾದೆವು... ಶಾಲೆ ಮುಗಿದ ಕೂಡಲೇ ಮನೆಪಾಠಕ್ಕೆ ಓಡುತ್ತಿದ್ದೆ... ಅದು ಮುಗಿದ ಕೂಡಲೇ ಅವನ ಜೊತೆ ತಿರುಗುವುದು... ಒಂದೋ ಅವನು ನಮ್ಮನೇಲಿ ಇರುತ್ತಿದ್ದ ಅಥವಾ ನಾನು ಅವನ ಮನೇಲಿ ಇರುತ್ತಿದ್ದೆ....ಒಟ್ಟಿನಲ್ಲಿ ಯಾವಗಲೂ ಒಟ್ಟಿಗೆ ಇರುತ್ತಿದ್ದೆವು... ಅವನ ಮನೆಗೆ ಹೊಗಿ ಅವನ ಜೊತೆ ಹರಟುತ್ತಾ ಅವರ ಮನೇಲೆ ಟೀವಿ ನೋಡುತ್ತಿದ್ದ ದಿನಗಳಿಗೆ ಲೆಕ್ಕವೇ ಇಲ್ಲ...ಅವರ ಮನೆಯವರು ನನ್ನನ್ನು ಅವನ ಮನೆಯವರೇ ಎಂದು ಭಾವಿಸಿದ್ದರು..

ರಾತ್ರೆ ಸುಮಾರು 8:30 - 9:30 ಹೊತ್ತೆಲ್ಲಾ ಕ್ರಿಕೆಟ್, ಬಾಡ್ಮಿಂಟನ್ ಆಡುತ್ತಿದ್ದೆವು, ನಟ್ಟ ನಡು ಬೀದಿಯಲ್ಲಿ ಇಬ್ಬರೇ... !!!ಸಮಯದ ಅರಿವೇ ಇರುತ್ತಿರಲಿಲ್ಲ...ಶಾಲೇಲಿ ಅಂದು ನಡೆದ ಘಟನಾವಳಿಗಳನ್ನು ನಾನು ವರದಿ ಒಪ್ಪಿಸುತ್ತಿದ್ದೆ..ಅವನೂ ಸಹ..

ಏಳನೆ ತರಗತಿಯ ಪರೀಕ್ಶೆಗಳು ಶುರುವಾದವು.... ಮುಗಿಯಿತೂ ಕೂಡ.. ರಜದಲ್ಲಿ ಸಿಕ್ಕಪಟ್ಟೆ ಮಜಾ ಮಾಡಿದ್ದೆವು.. ಪ್ರತಿದಿನವೂ ಕೃಷ್ಣ ರಾವ್ ಪಾರ್ಕಿನಲ್ಲಿ ಆಡುತ್ತಿದೆವು ಬೇರೆ ಗೆಳೆಯರೊಡಗೂಡಿ....

ರಿಸಲ್ಟು ಬಂತು..ಅವನಿಗೆ ಎಷ್ಟು ಬಂದಿದೆಯೆಂದು ವಿಚಾರಿಸಲು ಅವನ ಮನೆಗೆ ರಿಸಲ್ಟ್ ಬಂದ ಸಂಜೆ ಅವರ ಮನೆಗೆ ಹೋದೆ.
ಅವರ ತಾಯಿ ಸಿಕ್ಕರು... ಕೇಳಿದೆ.. "ಆಂಟಿ ಎಷ್ಟ್ ಬಂತು ಅವನಿಗೆ ಮಾರ್ಕ್ಸು" ಎಂದೆ...

ಅವರ ತಾಯಿ ಎನನಿಸಿತ್ತೋ ಏನೋ.. "ಹೋಗಪ್ಪಾ ಹೋಗು.. ನೀನ್ ಪಾಸ್ ಆಗ್ಬಿಟ್ಟೆ..ಅವನು fail ಆಗಿದ್ದಾನೆ...ನಿನಗೆ ಸಂತೋಷ ತಾನೆ..ಹೋಗು !!..ಜೊತೇಲೆ ಇದ್ದೆ..ನಿಂಗೆ ಏನು ಮಾಡಕ್ಕೇ ಆಗ್ಲಿಲ್ಲ... ಇವಾಗ್ ಬಂದಿದ್ಯ ರಿಸಲ್ಟ್ ಕೇಳ್ಕೊಂಡು.." ಎಂದುಬಿಟ್ಟರು...

ಸರಿಯಾಗಿ ಮೇಲಿನ ಮಾತುಗಳನ್ನು ಹೇಳಿದರೋ ಇಲ್ಲವೊ ಮರೆತು ಹೋಗಿದೆ.. ಆದರೆ ನನ್ನಿಂದಲೆ ಅವನು ನಪಾಸಗಿದ್ದನೆ ಎನ್ನುವಾ ದಾಟಿಯಲ್ಲೇ ಮಾತನಾಡಿದ್ದರು ಅಂದು... ನಾನು ದಂಗಾಗಿಬಿಟ್ಟೆ... ನಾನೇನು ಮಾಡಿದೆ ಎಂದು ನನಗೆ ತೋಚಲಿಲ್ಲ..
ಸುಮ್ಮನಾಗಿಬಿಟ್ಟೆ..ಅದಾದ ನಂತರ ಅವರು ಅಲ್ಲಿಂದ shift ಆದರು... ಮತ್ತೆ ಅವನೆಂದು ನನ್ನನ್ನು ಮಾತನಾಡಿಸಲಿಲ್ಲ..ನಾನೂ ಸಹ.... ಸುಮ್ಮನಾಗಿಬಿಟ್ಟೆ.. ಅಷ್ಟು ಒಟ್ಟಿಗೆ ಇದ್ದವರು ಮುಖ ನೋಡಿದರೂ ಸಹ ಮಾತನಾಡದೆ ಇರುವ ಸ್ಥಿತಿಗೆ ಬಂದಿದ್ದೆವು.. ಇದಾಗಿ ಹತ್ತು ವರ್ಷಗಳೇ ಆಗಿದೆ ಇಂದಿಗೆ..

ಅವರ ನೆಂಟರ ನಮ್ಮನೆ ಎದುರುಗಡೆಯೇ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ...ಅವನು ಸಹ ಆಗಾಗ ಬರುತ್ತಿರುತ್ತಾನೆ... ನೋಡಿದರೂ ಸಹ ನೋಡಿಲ್ಲವಂತೆ ನನ್ನ ಮುಂದೆಯೇ ನಡೆದು ಹೋಗುತ್ತಾನೆ..ನಾನೂ ಅಷ್ಟೆ... ಸೇರಿಗೆ ಸವ್ವಾಸೇರು.. :-
ಈಗ ಅವನು ಏನು ಮಾಡುತ್ತಿದ್ದಾನೆ ಎಂದೂ ಸಹ ಗೊತ್ತಿಲ್ಲ...ಒಂದು ಪ್ರಿಂಟಿಂಗ್ ಪ್ರೆಸ್ ಮಾಲೀಕ ಎಂದು ಕೇಳ್ಪಟ್ಟೆ...

ಏಕೋ ಏನೋ ಅವನ ಬಗ್ಗೆ ಬರೀಬೇಕು ಎಂದೆನಿಸಿತು...ಬರೆದೆ...ಇದು ಅವನಿಗೆ ಅರ್ಪಿತ.....

ನಾನು ಬ್ರಹ್ಮ ಮತ್ತು ಮುಖ್ಯಮಂತ್ರಿ -- ಭಾಗ - 2

Monday, September 10, 2007

ಹಾಗೆ ಮುಂದಕ್ಕೆ ಬಾಗಿದ ಬ್ರಹ್ಮ ನನ್ನ ತಲೆ ನೇವರಿಸುತ್ತಾ "ಮಗೂ.. ನಿನಗೆ ನಾನು ಹೇಳಲು ಆಗುವುದಿಲ್ಲ, ಹೇಳಿದರೂ ನಿನಗೆ ಅರ್ಥವಾಗುವಿದಿಲ್ಲ, ಅದೆಲ್ಲ ನಿನ್ನ ವಯಸ್ಸಿಗೆ ಮತ್ತು ನಿನ್ನ ಬುದ್ದಿ ವ್ಯಾಪ್ತಿಗೆ ಮೀರಿದ ಉತ್ತರಗಳು, ವೃಥಾ ಕಾಲಹಾರಣ ಅಷ್ಟೇ.... ನಿನಗೆ ವರ ಕೊಡಲು ಬಂದಿದ್ದೇನೆ... ಕೇಳು..." ಎಂದನು..

"ಹಾ!! ನನ್ನ ಬುದ್ದಿವ್ಯಾಪ್ತಿಗೆ ಮೀರಿದ್ದೇ..?? ಸರಿ ನನಗೇ ಏಕೆ ವರ ನೀಡಲು ಬಂದಿರುವೆ...ನನಗೆ ಸಮಂಜಸವಾದ ಉತ್ತರನನ್ನು ನೀಡಿದರೆ ಮಾತ್ರ ವರವೋ ಶಾಪವೋ ಅದರ ಬಗ್ಗೆ ಮಾತಾಡುವ... "...

"hmmm....ನಿನಗೆ ಏಕೆ ವರವೆಂದರೆ..ಅದೆಲ್ಲ ನಮ್ಮ ಚಿತ್ರಗುಪ್ತರ ಮಗನಾದ ದಾಸ್ ಗುಪ್ತನ ಕೈಚಳಕ..."

"ಏನೆಂದಿರಿ...ದಾಸ್ ಗುಪ್ತನೇ..ಚಿತ್ರಗುಪ್ತನ ಮಗ...??? "..

"ಹೌದು..ದಾಸ್ ಗುಪ್ತ.. ನಮ್ಮ ದೇವಲೋಕದ ಮಂದಿಗೆ ಕಂಪ್ಯೂಟರ್ ಪರಿಕರಗಳನ್ನು ಪರಿಚಯಿಸಿದಾತ.. ದಾಸ್ ಗುಪ್ತ..
ಈ ದಾಸ್ ಗುಪ್ತಾ ಭೂಲೋಕದ ಅದರಲ್ಲೋ ಬೆಂಗಳೂರಿನ ಮಾಹಿತಿ ತಂತ್ರಗ್ನಾನದ ಒಟವನ್ನು ಕಂಡು ತನ್ನ ಸ್ವಪರಿಶ್ರಮದಿಂದಲೇ ಕಲಿತ..... ಅಪ್ಪ ಚಿತ್ರಗುಪ್ತನ ಪಡಿಪಾಟಲು ನೋಡಲಾಗದೆ ಅಪ್ಪನ ಕೆಲಸದಲ್ಲಿ ಸಹಭಾಗಿಯಾದ..... ಚಿತ್ರಗುಪ್ತರ ಕೆಲಸ ನಿನಗೆ ತಿಳಿದೇ ಇದೆಯಲ್ಲವೆ... ಯಮಲೋಕಕ್ಕೆ ಬರುವರೆಲ್ಲರ ಪೂರ್ವಾಪರವನ್ನು ಓದಿ ಅವನ ಪಾಪ ಪುಣ್ಯಗಳ ವರದಿ ಯನ್ನು ಯಮಧರ್ಮರಾಯನಿಗೆ ಒಪ್ಪಿಸುವುದು..ಇಷ್ಟು ಕಾಲವು ಇದೆಲ್ಲ ತನ್ನ ಸ್ವಹಸ್ತದಿಂದ ಚಿತ್ರಗುಪ್ತರು ಮಾಡುತ್ತಿದ್ದರು.... ಆ ಮಾಹಿತಿಯೆಲ್ಲವನ್ನು ಈಗ database ರೂಪದಲ್ಲಿ ಕಂಪ್ಯೂಟರ್ ನಲ್ಲಿ ವ್ಯವಸ್ಥೆ ಮಾಡಿದ್ದಾನೆ ನಮ್ಮ ದಾಸ್ ಗುಪ್ತ... ಚಿತ್ರಗುಪ್ತರ ಕೆಲಸ ಈಗ ಸಲೀಸಾಗಿದೆ... ಕೇಸುಗಳ ವಿಲೇವಾರಿ ತುಂಬ ತ್ವರಿತಗತಿಯಲ್ಲಿ ಸಾಗುತ್ತಿದೆ.."

ಮಧ್ಯಕ್ಕೆ ನಿಲ್ಲಿಸಿ ನಾನು.. "ಅಯ್ಯಾ ಬ್ರಹ್ಮದೇವ...ನಾನು ಕೇಳಿದ್ದಕ್ಕೂ ನೀನು ಹೇಳುತ್ತಿರುವುದಕ್ಕೂ ಎತ್ತಣದಿಂತ್ತೆಣ ಸಂಭಂದವಯ್ಯ... ನನಗೊಂದೂ ತಿಳಿಯದಾಗಿದೆ..."

"ಹಹ್ಹಹ್ಹ..ಮಗೂ ನಾನು ಸಂಪೂರ್ಣ ವಿಷಯ ಹೇಳುವವರೆಗಿನ ತಾಳ್ಮೆ ನಿನ್ನದಾಗಬೇಕು... ತಾಳ್ಮೆ...ತಾಳ್ಮೆ..ಜಗತ್ತಿನ ಸಾಕಷ್ತು ಮಹೋನ್ನತ ಕಾರ್ಯಗಳು ತಾಳ್ಮೆಯಿಂದಲೇ ಆದುದ್ದಾಗಿದೆ... ತಾಳ್ಮೆ ಬೆಳೆಸಿಕೋ..."

ಬ್ರಹ್ಮನ ತಾಳ್ಮೆಯ ವಿಷಯ ಮನಮುಟ್ಟಿತು...ಸ್ತಬ್ದನಾಗಿಬಿಟ್ಟೆ... full lecture ಕೊಡಕ್ಕೆ ready ಆಗಿ ಬಂದಿದ್ದಾನೆ ಬ್ರಹ್ಮ..." ಸರಿ ಸ್ವಾಮಿ ನೀವು continue ಮಾಡಿ...ನಿಮ್ಮ ಲಹರಿಗೆ ಅಡ್ಡಿ ಪಡಿಸುವುದಿಲ್ಲ... ಮುಂದುವರೆಸಿ.." ಎಂದೆ


ಹೀಗೆ ದಾಸ್ ಗುಪ್ತನು ಕಂಪ್ಯೂಟರಿನಿಂದ ದೇವಲೋಕದಲ್ಲಿ, ಯಮಲೋಕದಲ್ಲಿ ಕ್ರಾಂತಿಯನ್ನು ಉಂಟು ಮಾಡಿದ..ಹೀಗೆ ಸಾಗುತ್ತಿರಲು ಒಂದು ದಿನ ನನಗೂ ಹಾಗೂ ದಾಸ್ ಗುಪ್ತನಿಗೆ ವಾಗ್ವಾದ ಉಂಟಾಯಿತು....

ಆತನ ವಾದ ಇಷ್ಟೆ..."ಬ್ರಹ್ಮ ದೇವ ಭೂಲೋಕ ಬಹಳ ಹದೆಗೆಟ್ಟು ಹೋಗಿದೆ...ಎಲ್ಲೆಲ್ಲೂ ಆರಾಜಕತೆ, ಭ್ರಷ್ಟಾಚಾರ, ಅನೀತಿ, ಸುಲಿಗೆ, ಮೋಸ, ಧಗಾ, ವಂಚನೆಗಳು ಸರ್ವೇಸಾಮನ್ಯವಾಗಿಬಿಟ್ಟಿದೆ... ಇದನ್ನು ತಹಬಹದಿ ತರುವ ಮಾತಂತೂ ದುಸ್ಸಾಧ್ಯ, ಸತ್ಯವೆಂಬುದು ಭೂಲೋಕದಲ್ಲಿ ಅಸ್ತಿತ್ವದಲ್ಲೇ ಇಲ್ಲ, ಧರ್ಮ ತನ್ನ ಕಾಲುಗಳನ್ನು ಕಳೆದು ಕೊಂಡು ಬೀದಿ ಬದಿಯಲ್ಲಿ ಬಿದ್ದಿದೆ ಎನ್ನುವುದು ನನ್ನ ವಾದ.."

"ದಾಸ್ ಗುಪ್ತನೇ ..ನೀನು ಭೂಲೋಕದ ಕೇವಲ ಒಂದು ಮುಖವನ್ನು ಮಾತ್ರವೇ ನೋಡಿದ್ದೀಯ, ಬಹುಶ: ನಿನಗೆ ಬರಿ ದುಷ್ಟರೇ ಕಾಣಿಸಿರಬಹುದು, ಸತ್ಯವೆಂಬುವುದು ಎಲ್ಲ ಕಾಲಗಳಲ್ಲಿಯು ನಿತ್ಯ ಸೂರ್ಯನಂತೆ ಹೊಳೆಯುತ್ತಿರುತ್ತದೆ... ಸೂರ್ಯನನ್ನು ಮೋಡ ಮರೆಮಾಚಿದುದಕ್ಕೆ ಸೂರ್ಯನೇ ಇಲ್ಲವೆಂಬುದು ನಿಮ್ಮ ತಪ್ಪು ಗ್ರಹಿಕೆ.... ಸತ್ಯವೆಂಬುದು ದಟ್ಟ ಕಾನನದಲ್ಲಿ ಬೇಸಿಗೆಯ ಮಾಸದಲ್ಲಿ ಹರಿಯುವ ನಿರ್ಮಲವಾದ ಪುಟ್ಟ ಝರಿಯಂತೆ...ಹುಡುಕುವ ತಾಳ್ಮೆಯಿರಬೇಕು...ಅದರೆಡೆಗೆ ಹೋಗುವ ಪ್ರಯತ್ನ ನಮ್ಮದಾಗಬೇಕು..."


ಇದರಿಂದ ಸ್ವಲ್ಪ ಮುಂಗೋಪಿಯಾದ ದಾಸ್ ಗುಪ್ತನು ಕ್ರುದ್ದನಾದ... "ಸರಿ ಹಾಗಿದ್ದರೆ ನಿಮ್ಮ ಈ ಭೂಲೋಕದಲ್ಲಿ ಆ ಥರದ ವ್ಯಕ್ತಿಯನ್ನು ತೋರಿಸಿಬಿಡಿ.... ನನ್ನ ಸೋಲನ್ನು ನಾನು ಒಪ್ಪುವೆ..."

"ನೋಡು ದಾಸ್ ಗುಪ್ತ.. ನೀನು ಒಡ್ಡಿರುವ ಸವಾಲನ್ನು ನಾನು ಸ್ವೀಕರಿಸಿದ್ದೇನೆ... ಹಾಗೆಂದ ಮಾತ್ರಕ್ಕೆ ಇಡೀ ಭೂಮಂಡಲದಲ್ಲಿ ಒಬ್ಬ ಆ ರತ್ನವನ್ನು ಹುಡುಕುವುದು ದುಸ್ಸಾಧ್ಯವೇ ಸರಿ... ನನ್ನ ಪ್ರಕಾರ ಪ್ರತಿಯೊಬ್ಬ ಮನುಜನಲ್ಲೂ
ಆ ವಸ್ತುನಿಷ್ಟ ಗುಣ, ಸತ್ಯಪರತೆ, ಎಲ್ಲವೂ ಇರುತ್ತದೆ, ಕೆದಕಿ ತೆಗಯಬೇಕು, ಅವನ ಪ್ರಕೃತಿದತ್ತವಾದ ಪರಿಸರದಲ್ಲಿ ಬೆಳೆದುದರ ಕಾರಣದಿಂದ ಆತ ಕೆಟ್ಟವನೆನಿಸಬಹುದು..."

ಹಾಗೆಂದ ಕೂಡಲೇ ದಾಸ್ ಗುಪ್ತನು ಗುಡುಗತೊಡಗಿದ...

"ಎಲೈ ಬ್ರಹ್ಮನೇ, ನಿಮ್ಮ ಉತ್ಪ್ರೇಕ್ಷೆಯು ತನ್ನ ಪರಮಾವಧಿಯನ್ನು ತಲುಪಿದೆ...., ನಾನು ನನ್ನ ಕಂಪ್ಯೂಟರಿನ ಸಹಾಯದಿಂದ ನಿಮಗೆ ಒಬ್ಬನನ್ನು ಹುಡುಕಿಕೊಡುತ್ತೇನೆ, ಅವನ ಬಳಿ ನೀವು ತೆರಳಿ ಅವನಿಗೆ ವರ ನೀಡಿ, ಅವನು ತನ್ನ ಕೊಟ್ಟ ವರವನ್ನು ಹೇಗೆ ಉಪಯೋಗಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಮಾನವನ ಗುಣ ನಿಮ್ಮ ಅರಿವಿಗೆ ಬರುತ್ತದೆ..."


ಹೀಗೆಂದು ಹೇಳಿದ ದಾಸ್ ಗುಪ್ತನು ಒಂದಷ್ಟು algorithms run ಮಾಡಿ, ಒಬ್ಬ ವ್ಯಕ್ತಿಯನ್ನು ಕೇವಲ ಕೆಲ ಕ್ಷಣಗಳಲ್ಲಿ ನನಗೆ ಒಬ್ಬ ಮುಖವನ್ನು ತೋರಿಸಿದ.....


ನಾನು ಮಧ್ಯ ತಡೆದು.... "ಆ ದುರಾದೃಷ್ಟಶಾಲಿ ನಾನೇ????????" ಎಂದು ಅವಾಕ್ಕಾದೆ...
ಬ್ರಹ್ಮನು ಮುಗುಳ್ನಗುತ್ತಾ.. "ಹೌದು.." ಎಂದ..
ಅಲ್ಲೆ ಕುಸಿದು ಬೀಳುವ ಭಾವ ನನ್ನಲುಂಟಾಯಿತು.....

ಈ processನಲ್ಲಿ bejaan fitting ಇದೆ ಎಂದು ಭಾವಿಸಿ..."ಅಲ್ಲ ಬ್ರಹ್ಮ..ನಿನಗೆ ನಮ್ಮ ಭೂಮಂಡಲ ಮನುಷ್ಯರ ಮಾಹಿತಿ ನಿಮಗೆ ಹೇಗೆ ದೊರೆಯಿತು ಎನ್ನುವುದೇ ನನ್ನ ಯಕ್ಷಪ್ರಶ್ನೆಯಾಗಿದೆ.... ಹೇಗೆ ಸಿಕ್ಕಿತು ನಮ್ಮೆಲ್ಲರ ವಿವರಗಳು??"

ಬ್ರಹ್ಮ ನಸು ನಗುತ್ತ, ನನ್ನ ತಲೆ ನೇವರಿಸುತ್ತಾ ನಾವು Orkut ನಿಂದ ನಿಮ್ಮೆಲ್ಲರ ಮಾಹಿತಿಯನ್ನು ಪಡೆದೆವು...

ನಾನು ಮತ್ತೆ ಗಿಲ್ಲಿಕೊಂಡೆ....ನೋವಾಗಲಿಲ್ಲ...ನನ್ನ ಸ್ಪರ್ಶೇಂದ್ರಿಯಗಳು ತಮ್ಮ ಕಾರ್ಯವನ್ನು ನಿಲ್ಲಿಸಿದವೆಂದು ತೋರುತ್ತದೆ...

(ಸಶೇಷ).......

ನಾನು ಬ್ರಹ್ಮ ಮತ್ತು ಮುಖ್ಯಮಂತ್ರಿ ....ಭಾಗ - 1

Thursday, September 6, 2007

phoooooooooooooooooooosssssssssssshhhhhhhhhhhhhh...........flash...flash...flash....flash...


ಒಮ್ಮೆಲೆ ಬೆಚ್ಚಿಬಿದ್ದೆ....ಕಣ್ಣುಜ್ಜಿ ನೋಡಿಕೊಂಡೆ.....ಉಹೂ..ಸಾಧ್ಯವೇ.... ಕಲಿಯುಗದಲ್ಲಿ ಸಾಧ್ಯವೇ.... ಮೆಲ್ಲಗೆ ನನ್ನ ಎಡಕೈ ಗಿಲ್ಲಿಕೊಂಡೆ...ನೋವಾಗದಂತೆ ನೋವಾಯಿತು...ಇಲ್ಲ..ಇದು ವಾಸ್ತವ........................

ಎದುರಿಗೆ ನಿಂತಿದ್ದ ಮಂದಸ್ಮಿತ ಪ್ರಕಾಶಮಾನವಾದ ವ್ಯಕ್ತಿಯನ್ನು ನೋಡಿ ನನಗೆ ಹೀಗೆನ್ನಿಸಿತು..... ನಾಲ್ಕು ತಲೆಗಳು ಇದ್ದವು... ನಾಲ್ಕು ಕೈಗಳು... ಎರಡು ಕಾಲುಗಳು.. ಇಲ್ಲ ಕಾಲುಗಳು ನೆಟ್ಟಗೆ ಇದ್ದವು..ಉಲ್ಟಾ ಪಲ್ಟಾ ಇರಲಿಲ್ಲ..ಇದ್ದುದ್ದೆ ಆಗಿದ್ದರೆ ಎದ್ದೆನೋ ಬಿದ್ದೆನೋ ಕೆಟ್ಟೆನೋ ಎಂದು ಹಿಂದೆ ತಿರುಗದೆ ಉಟ್ಟ ಬಟ್ಟೆಯಲ್ಲಿ ನಿಂತ ಕಾಲಲ್ಲಿ ಒಡುತ್ತಿದ್ದೆ.... ಎದುರಿದ್ದ "ಅದ"ನ್ನೆ ದಿಟ್ಟಿಸುತ್ತಿದ್ದೆ... ಅಲ್ಲಿಂದ ದೃಷ್ಟಿ ತೆಗೆಯಲು ಮನಸಾಗುತ್ತಿರಲಿಲ್ಲ..

ನನ್ನ ಸುತ್ತಲು ಗಾಢವಾದ ಕತ್ತಲು....ಎಲ್ಲೋ ನಭೋಮಂಡಲದಲ್ಲಿದ್ದ ಭಾವನೆ.... ತಾರೆಗಳು ಸಹ ಇರಲಿಲ್ಲ..ವಿಶ್ವವು ಮುಗಿದೇಹೋಯಿತೇ??
ನನ್ನ ತಾಯಿ ಎಲ್ಲಿ??
ನನ್ನ ತಂಗಿ??
ನನ್ನ ಗೆಳೆಯರೆಲ್ಲ ಏನಾದರು??
ಕಾಫಿ...??
ಒಮ್ಮೆಲೆ ದುಖ ಮಡುಗಟ್ಟತೊಡಗಿತು...
ಮತ್ತೆ ನಾನಿಲ್ಲಿ ಏನು ಮಾಡುತ್ತಿದ್ದೇನೆ??... ಉತ್ತರ ಸಿಗದ ಸಾಕಷ್ಟು ಪ್ರಶ್ನೆಗಳು ಮನಸ್ಸಿನಲ್ಲಿ ಸುಳಿದಾಡುತ್ತಲೇ ಇದ್ದವು... ಒಮ್ಮೆ ತಲೆ ಕೊಡವಿಕೊಂಡೆ..

ಕೊಂಚ ಧೈರ್ಯ ಮಾಡಿ ಕೇಳಿದೆ ಆ ಆಕೃತಿಗೆ... "ನೀನಾರು" ??

ಕನ್ನಡ ಬರುತ್ತದೋ ಇಲ್ಲವೋ ಇದಕ್ಕೆ.. ಅಂತಹ ಸ್ಥಿತಿಯಲ್ಲಿ ಎದೆ ಬಗಿದರೂ ಕನ್ನಡ ಬಿಟ್ಟು ಬೆರೆ ಭಾಷೆ ಹೊರಬರುತ್ತಿರಲ್ಲಿಲ್ಲ...

ಮತ್ತದೇ ಮಂದಸ್ಮಿತ ವದನ.. ಏನೋ ಒಂದು ಆಕರ್ಷಣೆ ಆ ಮುಖದಲ್ಲಿ ಎದ್ದು ಕಾಣುತ್ತಿತ್ತು...

ಮೆಲ್ಲಗೆ ಉತ್ತರಿಸಿತು..

"ನಾನು ಸೃಷ್ಟಿಕರ್ತ ಬ್ರಹ್ಮ...." ಎಂದು ಹೇಳಿ ಸುಮ್ಮನಾಯಿತು.

ಬ್ರಹ್ಮನೇ...ಇಲ್ಲೇನು ಕೆಲಸ.... ಇಲ್ಲೇಕೆ ಬಂದಿದ್ದಾನೆ... ಇನ್ನು ನಾನು ಕಥೆ,ಕಾದಂಬರಿಗಳನ್ನು ಹೆಚ್ಚಾಗಿ ಓದುವುದನ್ನು ನಿಲ್ಲಿಸಬೇಕು.. ಇಲ್ಲವಾದರೆ ಹೀಗೆ ಆಗುವುದು.. ಮತ್ತೊಮ್ಮೆ ಗಿಲ್ಲಿಕೊಂಡೆ..ಅಷ್ಟರಲ್ಲಿ...

"ಇಲ್ಲ ಮಗೂ...ಇದು ಕನಸಲ್ಲ ವಾಸ್ತವ...ನಾನು ಬ್ರಹ್ಮ.. ನಿನಗೆ ಬೇರಾವ ಸಂದೇಹವೂ ಬೇಡ.."

ಈ ಬ್ರಹ್ಮ ನ ಬಗ್ಗೆ ನನಗೆ ಗೊತ್ತಿರೋ ಶ್ಲೋಕಗಳೇ ಇರಲಿಲ್ಲ..ಇದ್ದುದ್ದೆ ಆಗಿದ್ದರೆ... ಅಣ್ಣಾವ್ರು "ಕವಿರತ್ನ ಕಾಳಿದಾಸ" ಚಿತ್ರದಲ್ಲಿ ಕಾಳಿಯನ್ನು ನೋಡಿ ಶ್ಲೋಕ ಹೇಳುತ್ತಾರಲ್ಲ..ಆ scene create ಮಾಡುತ್ತಲಿದ್ದೆ..ಚೆ ಚೆ....


ಮನಸ್ಸಿಗೆ ಸ್ವಲ್ಪ ಧೈರ್ಯ ಬಂದಿತ್ತು.... ಸ್ವಲ್ಪ comfortable ಆಗಿ ಬ್ರಹ್ಮನೊಡನೆ ಮಾತಾಡೋಣವೆಂದೆನಿಸಿತು...


"ಬ್ರಹ್ಮದೇವ ನಿನಗೆ ನಮೋ ನಮಹ.. ಇಲ್ಲಿಗೆ ತಾವು ದಯಪಾಲಿಸಿದ್ದುದ್ದರ ಕಾರಣ.."??

"ನಿನಗೆ ವರ ಕೊಡಲು ಬಂದಿದ್ದೇನೆ...ಏನು ಬೇಕೋ ಕೇಳು ಮಗೂ.."....

ನನಗೆ ಸಿಡಿಲು ಹೊಡೆದಂತಾಯಿತು...ವರವೆ ನನಗೆ....ಮಾಡಿರೋದೆಲ್ಲ ಹಲ್ಕಾ ಕೆಲಸಗಳೇ...ನನಗೆ ವರ... ಏನು ಬ್ರಹ್ಮ ವರ ಕೆಟ್ಟೋದನೇ ಎಂದುಕೊಳ್ಳುತ್ತಿದ್ದೆ..

"ನನಗೇಕೆ ವರ.. ನಾನೇನು... ತಪಗೈದೆನೆ.. ನಿನ್ನ ನೆನೆಸಿಕೊಳ್ಳುವುದೇ ಅಪರೂಪ... ನಿನ್ನ ಹೆಸರಿನಲ್ಲಿ ಒಂದು ದೇವಸ್ಥಾನವೂ ಸಹ ಇಲ್ಲ ಬೆಂಗಳೂರಿನಲ್ಲಿ... ಇದ್ದರೂ ಹೋಗುವ ಮಾತು ದೂರ..ನಿನಗ್ಯಾರು ಇಲ್ಲಿ ಪೂಜೆ ಮಾಡುವವರೇ ಇಲ್ಲವಲ್ಲ... ನೆನೆವುದಂತೂ ದೂರದ ಮಾತು... ಜನ-ಜೀವ-ಸಂಕುಲದ concept ಮಾತನಾಡುವಾಗ ನಿನ್ನ ಹೆಸರು ಸುಳಿದಾಡುತ್ತದೆ..ಅಷ್ಟೆ....ನನಗೇಕೆ ವರ..."??

ನನಗೆ ನಿಜಕ್ಕೊ ದಿಗಿಲಾಗತೊಡಗಿತು...ಏನೋ ಅನಾಹುತ ಆಗಬಹುದೆಂಬ ಭಾವನೆ...ವರ ಗಿರ ಅಂತೆಲ್ಲ ಮಾತಾಡ್ತಿದಾನಲ್ಲಪ್ಪ ಬ್ರಹ್ಮ... ಕೆಟ್ಟು ಕೆರ ಹಿಡಿದಿರೋ ಕಲಿಯುಗದಲ್ಲಿ ಇದೆಲ್ಲಾ ಸಾಧ್ಯವೇ???...

"ಮಗೂ.." ಅಮ್ಮ ಪ್ರೀತಿಯಿಂದ ಕರೆಯುವ ಹಾಗೆ ಕರೆದ ಬ್ರಹ್ಮ..

"ನಿನ್ನ ಮನಸ್ಸಿನಿಂದ ಯುಗಗಳ ಪರಿಕಲ್ಪನೆ ತೆಗೆದುಹಾಕು.. ಸೃಷ್ಟಿಕರ್ತನು ಎಲ್ಲ ಕಾಲಗಳಲ್ಲಿಯು ಇರುವ..ಇರುವವ..
ತ್ರೇತಾಯುಗದಲ್ಲಿ, ದ್ವಾಪರಯುಗದಲ್ಲಿ ನಾವು ಸಹ ಇಲ್ಲೇ ಒಡಾಡಿಕೊಂಡಿರುತ್ತಿದ್ದೆವು... frequent visits -u...


ಮೊಘಲರ, ಬ್ರಿಟೀಷರ ದಬ್ಬಾಳಿಕೆ ಶುರುವಾದನಂತರ ಪಾಪಿಗಳು ಪಾಪಕಾರ್ಯಗಳು ಹೆಚ್ಚಾಗತೊಡಗಿದವು..ನಮಗೆ ಇಲ್ಲಿರುವುದು ಅಸಹನೀಯವಾಗತೊಡಗಿತು... ಗುಳೆ ಹೋಗಿಬಿಟ್ಟೆವು...


ಇಷ್ಟೇನಾ ನಿಮ್ಮ ಬಲ, ಶಕ್ತಿ..ಬರೀ ಕಮಲದ ಹೂವಿನ ಮೇಲೆ ಕೂತು ಸರಸ್ವತಿ ಮೇಡಮ್ ವೀಣೆ ನುಡಿಸೋದು time time ಗೆ ಕೇಳಕ್ಕೆ ಲಾಯಕ್ಕು ನೀನು... ಎಂದು ಫಕ್ಕನೆ ಮನಸ್ಸಿನಲ್ಲಿ ಸುಳಿದುಹೋಯಿತು...
ಸರಸ್ವತಿ ಮೇಡಮ್

ಬ್ರಹ್ಮ ನಗತೊಡಗಿದ್ದ...

"ಏಕೆ ಈ ನಗು" ?? ಎಂದೆ.

ನನ್ನ ಪ್ರಶ್ನೆಗೆ ಉತ್ತರ ನೀಡಲು ಮುಂದೆ ಬಾಗತೊಡಗಿದ....

ನಾನು ಸ್ವಲ್ಪ ಹಿಂದಕ್ಕೆ ಸರಿದೆ... ಕಪಾಳಮೋಕ್ಷ ಆಗಿಬಿಟ್ಟರೆ???


ಬೆವರುಹನಿಗಳು ಒಂದುಗೂಡಿ ಕಿವಿಯ ಸನಿಹದಲ್ಲಿ ಇಳಿಯಲನುವಾಗಿದ್ದವು......



(ಸಶೇಷ)...

ಆಣಿಮುತ್ತುಗಳು

Thursday, August 9, 2007

ನನ್ನ ಸ್ನೇಹಿತರ ಆಣಿಮುತ್ತುಗಳು...ನನ್ನ ಮೇಲೆ ಒಂದಷ್ಟು ಪ್ರಭಾವ!! ಬೀರಿದಂತವು...

"ತಿಂಗಳ ಕೊನೆಯ ಸಂಬಳ ಪಡೆಯುವುದೇ ನಮ್ಮ ಕೆಲಸಗಳ ಗುರಿಯಾಗಬಾರದು..ಅದಕ್ಕಿಂತ ಹೆಚ್ಚಿನಾದುದನ್ನು ಏನಾದರೂ ಸಾಧನೆ ಮಾಡಬೇಕು.." --ಪರಿಸರಪ್ರೇಮಿ



"ಯುದ್ಧಂ ತ್ಯಜತ , ಸ್ಪರ್ಧಾಂ ತ್ಯಜತ, ಮೈತ್ರೀಂ ಭಜತ ಮೈತ್ರೀಂ ಭಜತ...." --ಗಂಡಭೇರುಂಡ


"ನಮ್ಮನ್ನು ಯಾರು ಬೇಡ ಎನ್ನುವವರೋ ಅವರೂ ಸಹ ನಮಗೆ ಬೇಡ.." --ರಂಜನ್

"ನನ್ನ ಪ್ರಕಾರ ಜೀವನದ ಅಂದ್ರೆ ಅಸಾಧ್ಯವಾದುದನ್ನ ಪ್ರಾಮಾಣಿಕತೆಯಿಂದ ಸಾಧ್ಯವಾಗಿಸುವುದು.."
--- ನಿಮ್ಮ ಪ್ರೀತಿಯ ಸೋಮು

"ಜೀವನದಲ್ಲಿ ಏನೇನು ತಪ್ಪು ಮಾಡಬಾರದು ಅನ್ನೋದಕ್ಕೆ ನೀನೇ perfect example.." --ಸಂದೀಪ್

"Life is just a matter of our convenience..." -- ಸಿಂಧು

"ಕಾರಣಗಳಿಲ್ಲದೆ ಒಬ್ಬರನ್ನು ಇಷ್ಟಪಡಲು ಸಾಧ್ಯ, ಅದೇ.. ಕಾರಣಗಳಿಲ್ಲದೆ ಯಾರೊಬ್ಬರನ್ನು ದ್ವೇಷಿಸಲು ಆಗುವುದಿಲ್ಲ.."
-- ರಾಧಾ

"Do whatever you want,
be however you like,
lead the life in your own way...." --ಶೃತಿ ಶರ್ಮಾ

ಕೊನೆಯದಾಗಿ ಉಪೇಂದ್ರ ಚಿತ್ರದ ನನ್ನ ಅಚ್ಚು ಮೆಚ್ಚಿನ ಆಣಿಮುತ್ತು... :-)

"ಸತ್ಯ ಯಾವತ್ತೂ ಕಹಿ.. ಸುಳ್ಳೇ ಮಜಾ ಜಾಸ್ತಿ, ಜನರು ಮಜಾ ಮಾಡಲಿಕ್ಕೆ ಇಷ್ಟ ಪಡ್ತಾರೆ..." -- ಉಪೇಂದ್ರ

ಒಲವೇ...

Friday, August 3, 2007

ಒಲವೇ ಒಲವೇ ನನ್ನ ಪ್ರೀತಿಯ ಒಲವೇ
ಸೋತು ಬಂದೆ ನಿನ್ನ ಚೆಲುವಿಗೆ
ಮೆಚ್ಚಿ ಬಂದೆ ನಿನ್ನ ಒಲವಿಗೆ
ನಿನ್ನ ಕಂಗಳೇ ನನ್ನ ಬಾಳಿನ ದೀಪ
ನಿನ್ನ ಪ್ರೀತಿಯೇ ನನ್ನ ಜೀವನದ ರೂಪ

ಪ್ರೀತಿಸು ಪ್ರೀತಿಸು ಎಂದು ಗೋಗರೆಯಲಾರೆ
ನೀನೇ ಪ್ರೀತಿಸು ನನ್ನ ಪ್ರೀತಿಯ ಆಳ ಅರಿತಾಗಲೇ
ನೀನಿಲ್ಲದೆ ನಾ ಬದುಕಲಾರೆ ಎಂದು ಹೇಳಲಾರೆ
ನೀ ಜೊತೆಗಿದ್ದರೆ ಬಾಳು ಸುಂದರ ಎಂದು ಹೇಳಬಲ್ಲೆ
ಕನಸಲೂ ನೀನೇ ಮನಸಲೂ ನೀನೇ ಎಂದು ಬಣ್ಣಿಸಲಾರೆ
ನನ್ನದೇ ಆದರ್ಶಗಳ ಮಧ್ಯ ನಿನ್ನ ಪ್ರೀತಿಯನ್ನ ಹುಡುಕುತ್ತಾ ಬಂದೆ
ಸಾಧ್ಯವಿದ್ದಷ್ಟು ನಿನಗಾಗಿಯೇ ಕಾಯುವೆ ಓ ಕನಸಿನಬಾಲೆ
ಇದು ಪ್ರೇಮಕವಿತೆಯಲ್ಲ ಚೆಲುವೆ ನನ್ನ ನಿಜ ಜೀವನದ ವಾಸ್ತವ.....
--ರಶ್ಮಿ.ಆರ್

ಕೃಪೆ : http://samarasa.blogspot.com/2007/08/blog-post.html

ಒಂದಷ್ಟು ಸಾಲುಗಳು......

Sunday, July 29, 2007

ನನಗೊಂದಷ್ಟು ಬಹಳ ಬಹಳ :-) ಇಷ್ಟವಾದ ಸಾಲುಗಳನ್ನು ಇಲ್ಲಿ ಬರೆದಿದ್ದೇನೆ..

1)ಟಿ.ಎನ್.ಸೀತಾರಾಮರ "ಮನ್ವಂತರ" ಧಾರವಾಹಿಯ title track ಈ ಸಾಲುಗಳು..

"ಮನಸಿನ ಪುಟಗಳ ನಡುವೆ ನೆನಪಿನ ನವಿಲುಗರಿ
ಕಾರ್ಮುಗಿಲ ಅಂಚಿನಲ್ಲಿ ಭರವಸೆಯ ಹೊನ್ನಝರಿ
ಕಣ್ಣೀರೇ ಕಡಲಾಗಿ ಭಾವಗಳೋ ಬರಡಾಗಿ
ಮನದ ಮಡಿಲ ತುಂಬಾ ನೋವಿನಲೆಯ ಬಿಂಬ.."


ನೆನಪನ್ನು ನವಿಲುಗರಿಗೆ ಹೋಲಿಸಿರುವುದು ನನಗೆ ಬಹಳ ಇಷ್ಟವಾಯಿತು..

2)ಟಿ.ಎನ್.ಸೀತಾರಾಮರ ನಿರ್ದೇಶನ ಚಿತ್ರ "ಮತದಾನ" ದ ಒಂದು ಹಾಡು.

"ನಾಯಿ ತಲಿ ಮ್ಯಾಲಿನ ಬುತ್ತಿ ಸಂಸಾರ
ಇದನರಿತು ಅರಿತೂ ಮಂದಿ ಬಿದ್ದಾರ ಹಿಂದ ಬಿದ್ದಾರ.."

3)"ಪ್ರೇಮದ ಕಾಣಿಕೆ" ಚಿತ್ರದ ಅಣ್ಣಾವ್ರ ಈ ಸೂಪರ್ ಹಾಡು..

"ಬಾನಿಗೊಂದು ಎಲ್ಲೆ ಎಲ್ಲಿದೆ..
ನಿನ್ನಾಸೆಗೆಲ್ಲಿ ಕೊನೆಯಿದೆ.
ಏಕೆ ಕನಸು ಕಾಣುವೆ..
ನಿಧಾನಿಸು ನಿಧಾನಿಸು..

ಆಸೆಯೆಂಬ ಬಿಸಿಲುಕುದುರೆ ಏಕೆ ಎರುವೆ
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಎನು ಸಾಗದು
ನಾವು ಎಣಿಸಿದಂತೆ ಎನು ನಡೆಯದು
ವಿಷಾದವಾಗಲಿ ವಿನೋದವಾಗಲಿ ಅದೇನೆ ಆಗಲಿ ಅವನೆ ಕಾರಣ..

ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ ಕಾಣದಿರಿವ ಎರಡು ಮುಖಗಳು
ಹರುಷವೊಂದೆ ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ
ದುರಾಸೆಯೇತಕೆ ನಿರಾಸೆಯೆತಕೆ ಅದೇನೆ ಬಂದರೂ ಅವನ ಕಾಣಿಕೆ.. "


ಒಹ್!! ಎಂತಹ ಅದ್ಬುತ ಸಾಲುಗಳು.... simple yet so meaningful....

4)"ಹೊಂಬಿಸಿಲು" ಚಿತ್ರದ ಈ ಹಾಡು..

"ನೀರ ಬಿಟ್ಟು ನೆಲದ ಮೇಲೆ ದೊಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಸಾಗದು.
ನಿನ್ನ ಬಿಟ್ಟು ನನ್ನ ನನ್ನ ಬಿಟ್ಟು ನಿನ್ನ ಜೀವನಾ ಸಾಗದು

ಲೋಕದಲ್ಲಿ ಗಂಡು ಹೆಣ್ಣಿಗಾಸರೆ
ಆದರಿಲ್ಲಿ ನಾನು ನಿನ್ನ ಕೈಸೆರೆ
ಕೂಡಿ ನಲಿವ ಆಸೆ ಮನದಿ ಕಾಡಿದೆ
ಹಿತವು ಎಲ್ಲಿ ನಾವು ಬೇರೆ ಆದರೆ.."



5) "ಬಂಧನ" ಚಿತ್ರದ ಈ ಸಾಲುಗಳು.

"ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ
ಸಿಂಧೂರ ಬಿಂದು ನಗಲಮ್ಮ ಎಂದು
ಎಂದೆಂದು ಇರಲಮ್ಮ ಈ ದಿವ್ಯ ಬಂಧ

ತುಟಿ ಮೇಲೆ ಬಂದಂತ ಮಾತೊಂದೆ ಒಂದು
ಎದೆಯಲ್ಲಿ ಉಳಿದದ್ದು ಮುನ್ನೂರ ಒಂದು.."

ವಿಷ್ಣುವರ್ಧನ್ ರವರ ಅಭಿನಯ ಈ ಹಾಡಿನಲ್ಲಿ ಅಮೋಘ..

6)"ಮುಂಗಾರು ಮಳೆ" ಚಿತ್ರದ ಈ ಸಾಲುಗಳು..

"ಅನಿಸುತಿದೆ ಯಾಕೊ ಇಂದು
ನೀನೇನೆ ನನ್ನವಳೆಂದು
ಮಾಯದ ಲೋಕದಿಂದ
ನನಗಾಗಿ ಬಂದವಳೆಂದು
ಅಹಾ ಎಂತ ಮಧುರ ಯಾತನೆ
ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೆ..

ತುಟಿಗಳ ಹೂವಲಿ ಆದದ ಮಾತಿನ ಸಿಹಿ ಇದೆ
ಮನಸಿನ ಪುಟದಲಿ ಕೇವಲ ನಿನ್ನದೆ ಸಹಿ ಇದೆ
ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೆ ಕೊರೆದಿರುವೆ
ನಿನಗುಂಟೆ ಇದರ ಕಲ್ಪನೆ.

ನನ್ನ ಹೆಸರ ಕೂಗೆ ಒಮ್ಮೆ ಹಾಗೆ ಸುಮ್ಮನೇ..."

7)"ಅಮೃತಧಾರೆ" ಚಿತ್ರದ ಈ ಮೂರು ಸಾಲುಗಳು

" ನೀ ಅಮೃತಧಾರೆ ಕೋಟಿ ಜನುಮ ಜೊತೆಗಾತಿ
ನೀ ಅಮೃತಧಾರೆ ಇಹಕು ಪರಕು ಸಂಗಾತಿ
ನೀ ಇಲ್ಲವಾದರೆ ನಾ ಹೇಗೆ ಬಾಳಲಿ.."

8)"ನವತಾರೆ" ಚಿತ್ರದ ಹಂಸಲೇಖರ ಸಂಗೀತ-ಸಾಹಿತ್ಯ ವಿರುವ ಸೊಗಸಾದ ಸಾಲುಗಳು

"ನೀರಿನಂತೆ ನಿರ್ಮಲ
ಹೂವಿನಂತೆ ಕೋಮಲ
ಮಂಜಿನಂತೆ ಶೀತಲ
ಹಾಡಿನಂತ ಹಂಬಲ
ಬಾನಿನಂತೆ ನಿಶ್ಚಲ

ಎಳೆಯ ಬಿಸಿಲಲಿ ಮಳೆಯ ಹನಿಯಲಿ ಪ್ರೇಮ
ಎದೆಯ ಗೂಡಲಿ ಮದುರ ನೆನಪಲಿ ಪ್ರೇಮ
ಪ್ರೇಮ ಅಳಿಯದು ಪ್ರೇಮ ಮರೆಯದು ಎಂದು ಭೂಮಿಯಲಿ
ಭೂಮಿ ತಿರುಗಲು ಜೀವ ಉಳಿಯಲು ಪ್ರೇಮ ನೆಲೆಸಿರಲಿ.."

9) ಸಿ.ಅಶ್ವತ್ ರವರ ಕಂಠಸಿರಿಯ ಈ ಸಾಲುಗಳು

"ನನ್ನವಳು ಈ ನನ್ನಾಕೆ
ಹರಿಯುವ ನದಿಯಲ್ಲ ಸರಿವ ಸರಿತೆಯಲ್ಲ
ಇವಳೊಂದು ಪುಟ್ಟ ಕೊಳ
ನನ್ನ ಬಾಳಿನ ಜೀವ ಜಲ..."

10)"ಯುಗಪುರುಷ" ಚಿತ್ರದ ಸಾಲುಗಳು...

"ಯಾವುದೋ ಈ ಬೊಂಬೆ ಯಾವುದೋ
ಊರ್ವಶಿಯ ಕುಲವೊ ಮೇನಕೆಯ ಚೆಲುವೊ
ಯಾವುದೋ ಈ ಅಂದ ಯಾವುದೋ
ಬೇಲೂರಿನ ಶಿಲೆಯೊ ಶಾಂತಲೆಯ ಕಲೆಯೊ
ಕಾಳಿದಾಸನ ಪ್ರೇಮಗೀತೆಯೊ ಕಾಳಿದಾಸನ ಪ್ರೇಮಗೀತೆಯೊ

ನೀನ್ಯಾರೊ ತಿಳಿಯದಿದ್ದರೂ ನನಗೇನೇ ರಾಧೆ..
ಕಲ್ಲಾಗಿ ನಾನು ನಿಂತರೂ ಕರಗಿ ನೀರಾಧೆ.. ಏಕಾದೆ..
ಈ ಹಾಡು ನಿನ್ನದಾದರೂ ರಾಗ ನಾನಾದೆ
ಯಾರೇನೇ ಹೇಳದಿದ್ದರು ನನಗೆ ಜೊತೆಯಾದೆ..ಹೇಗಾದೆ "


ತಕ್ಷಣಕ್ಕೆ ಹೊಳೆದಿದ್ದು ಇಲ್ಲಿ ದಾಖಲಿಸಿರುವೆ.... ಇನ್ನು ಸಾಕಷ್ಟಿವೆ..ಮುಂದೆ ಬರೆಯುತ್ತೇನೆ... ನನಗೆ ಇಷ್ಟವಾದದ್ದು ನಿಮಗೂ ಇಷ್ಟವಾದಲ್ಲಿ ಒಂಡೆರಡು ಸಾಲು ಬರೆಯಿರಿ.... :-) ನಮಸ್ಕಾರ.. ಶುಭ ದಿನ ನಿಮ್ಮದಾಗಲಿ..

ಗೋವಿಂದಾ ಗೋವಿಂದಾ...

Saturday, July 28, 2007




ಅಂದು ಅಂದರೆ ಶುಕ್ರವಾರದ(20/07/2007) ಸಂಜೆ 8ರ ಸಮಯದಲ್ಲಿ ತಂದೆಯೊಂದಿಗೆ ಊಟ ಮಾಡುತ್ತಲಿದ್ದೆ...


"hmm...ಎಷ್ಟೊತ್ತಿಗೆ ಬಸ್ ಇರೋದು ತಿರುಪತಿಗೆ .... ಬುಕ್ ಮಾಡ್ಸಿದ್ದೀರಲ್ವ..." ? ಎಂದು ನನ್ನ ತಂದೆ ನನ್ನೆಡೆಗೆ ಪ್ರಶ್ನೆಯೆಸೆದರು.



"ಇಲ್ಲಪ್ಪ ಇವಾಗ ಹೋಗಿ ನೋಡಬೇಕು... ನಾವೆಲ್ಲ ಬಸ್ ಸ್ಟಾಂಡ್ ನಲ್ಲಿ ಮೀಟ್ ಆಗೋದು ಅಂತ ಪ್ಲಾನ್ ಮಾಡಿದ್ದೀವಿ." ಅಂದೆ...
"ಲೋ ನಿನಗೆ ಸ್ವಲ್ಪನಾದ್ರು ತಲೆ ಇದ್ಯಾ?? ..ತಿರುಪತಿಗೆ ಅಂತ ಹೋಗ್ತಿದ್ಯ, ಬುಕ್ ಮಾಡ್ಸಿಲ್ಲ, ಟೈಮ್ ಗೊತ್ತಿಲ್ಲ , ವೀಕೆಂಡ್ ಬೇರೆ, ರಶ್ ಇರತ್ತೋ, ಬಸ್ ಸಿಗಲ್ಲಾ, ಪ್ಲಾನ್ ಮಾಡೋದ್ ಬೇಡ್ವಾ , ಸುಮ್ನೆ ಪಕ್ಕದೂರಿಗೆ ಹೋಗಿ ಬರೋ ತರ ಮಾತಡ್ತಾ ಇದ್ಯಲ್ಲ, ಅವಸ್ಥೆ ಪಟ್ಟೆಲ್ಲಾ ಹೋಗ್ಬೇಡ, ಬಸ್ ಸಿಗ್ಲಿಲ್ಲಾ ಅಂದ್ರೆ ತೆಪ್ಪಗೆ ವಾಪಸ್ ಮನೆಗೆ ಬಂದುಬಿಡು.." ಹೀಗೆ ಸಾಗುತ್ತಿತ್ತು ಅವರ ಬುದ್ದಿಮಾತುಗಳು....



ಇಷ್ಟೆಲ್ಲಾ ರಂಪಾಟಕ್ಕೆ ವೇದಿಕೆ ಆಗಿದ್ದು ನಾನು ಅಂದು ತಿರುಪತಿಗೆ ನನ್ನ ಕಂಪೆನಿಯ ಗೆಳೆಯರೊಡನೆ ತಿರುಪತಿಗೆ ಹೊರಟು ನಿಂತಿದ್ದೆ... ಪೂರ್ವಾಭಾವಿಯಾಗಿ ನಾವು ಮೊದಲು ಧರ್ಮಸ್ಥಳಕ್ಕೆ ಹೋಗುವುದು ಎಂದು ತೀರ್ಮಾನಿಸಿದ್ದೆವು... ಆದರೆ ಅಲ್ಲಿ ಪ್ರತಿಕೂಲ ವಾತವರಣ ಇಲ್ಲದೆ ಇರುವುದರ ಕಾರಣ ಮತ್ತು ನಾನು ಮತ್ತೆ ಮಂಜು ಧರ್ಮಸ್ಥಳವನ್ನು ಕಳೆದ ತಿಂಗಳಷ್ಟೆ ಹೋಗಿಬಂದ್ದೆವಾದ್ದರಿಂದ ಮತ್ತೊಮ್ಮೆ ಧರ್ಮಸ್ಥಳಕ್ಕೆ ಹೋಗುವುದಕ್ಕೆ ಹಿಂಜರಿಯುತ್ತಿದ್ದೆವು.. ಕೊನೆಗೆ "ತಿರುಪತಿ" ನಮ್ಮ ಗಮ್ಯಸ್ಥಾನ ಎಂದು ಒಕ್ಕೊರಲಿನಿಂದ ನಿರ್ಧರಿಸಿದ್ದೆವು..

ಹಾ! ಮರೆತಿದ್ದೆ ನಮ್ಮೀ ತಿರುಪತಿಯ ಕರ್ಮಕಾಂಡದ ಸಹವರ್ತಿಗಳನ್ನು ಹೆಸರನ್ನು ಹೇಳಲು ಇಚ್ಚಿಸುತ್ತೇನೆ..
ಕೆಂಪರಾಜ್, ನಾನು,ವಿಕಾಸ್,ರಾಜೇಶ್, ಮಂಜುನಾಥ

ಆದಷ್ಟು ಲಗುಬಗೆಯಿಂದ ಊಟ ಮುಗಿಸಿ KSRTC ಬಸ್ ಸ್ಟಾಂಡ್ ತಲುಪಿದೆ... ನಾ ಹೋಗುವ ವೇಳೆಗೆ ಕೆಂಪ ಮತ್ತು ಮಂಜು ಅದಾಗಲೆ ಕಾಯುತ್ತಿದ್ದರು.... ಮತ್ತೆ ನಮ್ಮನ್ನು ವಿಕಾಸ್ ಮತ್ತೆ ರಾಜೇಶ್ ಜೊತೆಗೂಡಿದರು...

ಮಂಜುವಿನ ಚುರುಕುತನದಿಂದಾಗಿ ನಮಗೆ ತಿರುಪತಿಗೆ ಅಷ್ಟಾಗಿ ತೊಂದರೆಯಿಲ್ಲದೆ ಬಸ್ ದೊರಕಿತು. ಎಲ್ಲರೂ ಕುಳಿತು ಹರಟಲನುವಾದೆವು, ನಮ್ಮ ಮುಂದುಗಡೆಯಿದ್ದ ಸೀಟಿನಲ್ಲಿ ಒಂದಷ್ಟು ಪಡ್ಡೆ ಐಕಳುಗಳಿದ್ದವು..ವಿಚಿತ್ರವಾಗಿ ಕೇಕೆ ಹಾಕುತ್ತಾ ಕಿರುಚಾಡುತ್ತಿದ್ದರು... ತಟ್ಟನೆ ನಾನು,ಕೆಂಪ,ರಾಜೇಶ ಕುಳಿತಿದ್ದ ಕಡೆ ಏನೋ ಬಿದ್ದಹಾಗೆ ಆಯಿತು..ಕೆಳಗೆ ಬಿದ್ದ ವಸ್ತುವನ್ನೆತ್ತಿ ನೋಡಿದರೆ ಕಿಟಕಿಯ ಗಾಜಿನ ಸಂದುಗಳಿಂದ ಬರುತ್ತಿದ್ದ ಕಿರುಬೆಳಕಿನಲ್ಲಿ Kingfisher ಬೀರ್ ಬಾಟಲಿ ಪ್ರತಿಫಲಿಸುತ್ತಿತ್ತು... ನಾವು ಮೂವರು ಒಬ್ಬರೊಬ್ಬರನ್ನು ಬೆಕ್ಕಸಬೆರಗಾಗಿ ನೋಡಿಕೊಂಡು ಆ ಪಡ್ಡೆ ಐಕಳಿಗೆ ಅದನ್ನು ಹಸ್ತಾಂತರಿಸಿದೆವು!!!

ಶನಿವಾರ ಮುಂಜಾವು ಸುಮಾರು ನಾಲ್ಕೂವರೆ ಹೊತ್ತಿಗೆ ತಿರುಪತಿಯನ್ನು ತಲುಪಿದೆವು... ಅಲ್ಲಿಂದಲೇ ನಮಗೆ ಶನಿ ಕಾಟ ಶುರುವಾಗಿತ್ತೆಂದು ತೋರುತ್ತದೆ.. ಇಳಿದು ನೋಡಿದರೆ ಹನುಮಂತನ ಬಾಲವನ್ನು ಮೀರಿಸಿದ queue ಬಸ್ ನಿಲ್ದಾಣದಲ್ಲಿ "ಸುದರ್ಶನ" ticket ಗಾಗಿ ನಿಂತಿತ್ತು.. ಅ queue ನಲ್ಲಿ ನಿಂತು ನಮ್ಮ ಸರತಿಗಾಗಿ ಕಾದು ticket ದೊರಕುವ ಆಸೆ ನಮಗಾರಿಗೂ ಇರಲಿಲ್ಲ..ಮತ್ತೆ ಮಂಜು ತನ್ನ plan execute ;-) ಮಾಡಲನುವಾದ...



"ಲೋ ಕೇಳ್ರೊ...ನೋಡಿ..ಬಸ್ ಸ್ಟಾಂಡ್ ನಲ್ಲಿ ಮಾತ್ರ ಇಷ್ಟೊಂದು ಜನ ಇರೋದು...ರೈಲ್ವೆ ಸ್ಟೇಷನ್ ನಲ್ಲಿ ಇಷ್ಟೊಂದು ಇರೋಲ್ಲಾ..ನಡೀರಿ ಹೋಗೊಣ" ಎಂದು ಒಂದಿಬ್ಬರನ್ನು ಬಸ್ ಸ್ಟಾಂಡ್ ನಲ್ಲಿ ನಿಲ್ಲಿಸಿ ಕೆಂಪನ ಜೊತೆ ರೈಲ್ವೆ ನಿಲ್ದಾಣದೆಡೆಗೆ ಧಾವಿಸಿದ...

ಐದು ನಿಮಿಷ ಬಿಟ್ಟು ಫೋನ್ ಮಾಡಿದ.."ಲೋ ಬೇಗ ಬನ್ರೋ ticket ಸಿಗ್ತಾ ಇದೆ..."ಎಂದು
ನಾವೆಲ್ಲ ಇಬ್ಬಿಬ್ಬರಾಗಿ ಗುಂಪಿನಿಂದ ಆಚೆಯಾಗಿದ್ದೆವು..ಎಲ್ಲಾರೂ ಜೊತೆಯಾಗಿ ಸೇರಿ ರೈಲ್ವೆ ನಿಲ್ದಾಣದ ticket counterನ ಬಳಿ ಬರುವುದೊರಳಗೆ 5:05am "tickets for sudarshana will be issued only between 2am-5am " ಎಂದು ಯಾರೋ ಹೇಳಿದರು... ಅಲ್ಲಿ ಸರಿಯಾದ ವ್ಯವಸ್ಥೆಯೆಂಬುದೇ ಇಲ್ಲ..ಯಾರೊಬ್ಬರಿಗೂ ಸರಿಯಾದ ಮಾಹಿತಿಯೇ ದೊರೆಯುತ್ತಿರಲಿಲ್ಲ..ಮುಂಚೆ ticket 6ರ ವರೆಗು ಕೊಡುತ್ತಿದ್ದರಂತೆ..ನಮ್ಮ ದುರಾದೃಷ್ಟ, ಅಂದು 5ಗೆ ಮುಗಿಸ್ಬಿಟ್ಟಿದ್ದರು...ಇದರ ಅರಿವೆ ನಮಗಿರಲಿಲ್ಲ... ಯಾರ ಶಾಪವೊ ಏನೋ... ಅಂದು ನಮ್ಮ ಗ್ರಹಗತಿಗಳು ಚೆನ್ನಾಗಿದ್ದು ticket ದೊರೆತಿದ್ದೇ ಆಗಿದ್ದಲ್ಲಿ...ಅಂದೇ ಬೆಳಿಗ್ಗೆ ಸುಮಾರು 11ಗಂಟೆಗೆಲ್ಲಾ ತಿಮ್ಮಪ್ಪನ ದರುಶನ ಆಗಿಬಿಡುತಿತ್ತು..we just missed it. :-( ಆ ಐದು ನಿಮಿಷದ ತಡಕ್ಕಾಗಿ ನಾವು ತೆತ್ತ ಬೆಲೆ ಅಷ್ಟಿಷ್ಟಲ್ಲ...


ನಾವು ಮುಂದೆ ಪಡಬೇಕಾದ ಬವಣೆಗಳಿಗೆ ಕಷ್ಟಕೋಟಲೆಗಳಿಗೆ ಆ ಐದು ನಿಮಿಷದ ತಡ ಭದ್ರ ಬುನಾದಿಯನ್ನು ಹಾಕಿ ನಿಂತಿತ್ತು...

ಅಲ್ಲಿ ನಾವು ಕೇಳಿದವರೆಲ್ಲ ತಲೆಗೊಂದಂತೆ ಮಾತನಾಡುತ್ತಿದ್ದರು... ಮತ್ತದೇ ಗೋಳು ನಮಗೆಲ್ಲೂ ನಂಬಲರ್ಹ ಮಾಹಿತಿ ಕೊನೆವರೆಗೂ ದೊರೆಯಲೇಇಲ್ಲ ....

ಆದಕಾರಣ ಅಂದು ರಾತ್ರಿ ಅಂದರೆ ಶನಿವಾರ ರಾತ್ರಿ ತಿರುಮಲ ಬೆಟ್ಟವನ್ನು ಹತ್ತಿ ಬೆಟ್ಟದಲ್ಲೇ ದರುಶನ ticket ಪಡೆದು ಮುಂದುವರೆಯುವ ಎಂದು ಸಮಾಲೋಚಿಸಿ ಶನಿವಾರದಂದು ಅಲ್ಲೆ ತಿರುಪತಿಯ ಬಳಿಯಿರುವ "ಕಾಳಹಸ್ತಿ" ಮತ್ತು "ಅಲಮೇಲು ಮಂಗಾಪುರಮ್" ದೇವಸ್ಥಾನಗಳನ್ನು ದರ್ಶಿಸುವ ಎಂದು ನಿರ್ಧರಿಸಿದೆವು..

ಅಲ್ಲೇ ಬಸ್ ಸ್ಟಾಂಡ್ ಸಮೀಪದಲ್ಲಿದ್ದ ಹೊಟೆಲೊಂದರಲ್ಲಿ ಉಳಿದು ಸ್ನಾನಾದಿಕಾರ್ಯಗಳನ್ನು ಮುಗಿಸಿ ತಿಂಡಿ ತಿಂದು "ಕಾಳಹಸ್ತಿ" ಕಡೆಗೆ ಬಸ್ಸನ್ನೇರಿ ಹೊರಟೆವು..

ಸಮಯ ಸುಮಾರು ಹತ್ತೂವರೆ ಇರಬಹುದು..ನಾವು ಕಾಳಹಸ್ತಿ ತಲುಪಿದಾಗ ಬಿರುಬಿಸಿಲು... ಯಮಯಾತನೆ ಆಗುತ್ತಿತ್ತು..



"ತಿರುಪತಿ ಬಾಳ ಸೆಖೆ ಕಣೊ..ಬೆಂಗ್ಳೂರೇ ವಾಸಿ " ಎಂದು ನಮ್ಮಲ್ಲೆ ಮಾತಾಡಿಕೊಳ್ಳುತ್ತಿದ್ದೆವು..

"ಕಾಳಹಸ್ತಿ" ದೇವಾಲಯ ಸೊಗಸಾಗಿದೆ.... ಯಾವ ರಾಜ ಕಟ್ಟಿಸಿದನೋ ಅದರ ವಾಸ್ತು ಯಾವ ಶೈಲಿಯೊ ನನಗೊಂದೂ ತಿಳಿಯದು.... ಎಲ್ಲೆಲ್ಲೂ ಸುಂದರ ಶಿಲ್ಪಗಳ ಕೆತ್ತನೆ ಎದ್ದು ಕಾಣುತ್ತಿತ್ತು.. ಬಹಳ ಅಚ್ಚುಕಟ್ಟಿನಿಂದ ಕುಶಲಕರ್ಮಿಗಳು ತಮ್ಮ ಕೆಲಸವನ್ನು ಮಾಡಿದ್ದರು.. ದೇವಾಲಯದ ವಿಸ್ತೀರ್ಣ ಕೂಡ ಬಹಳ ದೊಡ್ಡದಿತ್ತು..ಅದು ಶಿವನ ದೇವಾಲಯ... ಪಾತಳ ಗಣೇಶನನ್ನು ದರ್ಶಿಸಿ ಶಿವನ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತೆವು queue ಬಹಳ ಉದ್ದವಾಗಿತ್ತು... ವೀಕೆಂಡ್ ಪ್ರಭಾವವೋ ಎನೋ ಬಹಳ ಜನ ಜಮಾಯಿಸಿದ್ದರು... ನಾನು ಕಳೆದ ಸಲ ಹೋಗಿದ್ದಾಗ ಅಂದರೆ ಮೂರು ವರ್ಷದ ಕೆಳಗೆ ಕೆವಲ 10-15ನಿಮಿಶ ದಲ್ಲಿ ದರುಶನ ವಾಗಿತ್ತು.. ಆ ದೇವಸ್ಥಾನದಲ್ಲೂ!! ಸಹ ದರುಶನಕ್ಕಾಗಿ ನಾವು ಸುಮಾರು 2ಗಂಟೆಗಳು queue ನಲ್ಲಿ ಕಳೆದವು... ಇಲ್ಲೇ ಇಷ್ಟೊತ್ತು ಆಗಬೇಕಾದರೆ ಇನ್ನು ತಿಮ್ಮಪ್ಪನ ಗತಿಯೇನು ಎಂಬ ಕಳವಳ ನನ್ನ ಮನಸ್ಸಿನಲ್ಲಿ ಇನ್ನಿಲ್ಲದಂತೆ ಸುಳಿದಾಡುತಿತ್ತು..


2ಗಂಟೆಗಳ ಕಾಲ queue ನಲ್ಲಿ ನಿಂತು ಇನ್ನಿಲ್ಲದಂತೆ ಹೈರಾಣಾಗಿ ಹೊರಬಂದೊಡನೆಯೆ ವರುಣದೇವ ತನ್ನ ಆರ್ಭಟವನ್ನು ಪ್ರಾರಂಭಿಸಿಬಿಟ್ಟಿದ್ದ... ಧೋ ಎಂದು ಮಳೆ ಸುರಿಯುತಿತ್ತು.. ನಮಗೋ ಆಶ್ಚರ್ಯ, ಬರುವಾಗ ಸುಡುಬಿಸಿಲು... ಹೊರಡುವ ವೇಳೆಯಲ್ಲಿ ಜೋರು ಮಳೆ.. ಅಲ್ಲೆ ನಿಂತು ಸ್ವಲ್ಪ ಸಮಯ ಕಾದೆವಾದರೂ ಹೊಟ್ಟೆ ಚುರುಗುಡುತಿತ್ತು queue ನಲ್ಲಿ ನಿಂತು ಬಹಳಷ್ಟು ಬಳಲಿದ್ದೆವು... ಮಳೆ ನಿಲ್ಲುವ ಯಾವುದೇ ಮುನ್ಸೂಚನೆಯೇ ಕಾಣುತ್ತಿರಲಿಲ್ಲ... ಸಮಯ ಮೂರೂವರೆ ದಾಟಿತ್ತು... ಇಲ್ಲಿ ತಡ ಮಾಡಿದರೆ ಸಂಜೆ ಬೆಟ್ಟ ಹತ್ತುವುದಕ್ಕೆ ತಡ ಆಗುತ್ತೆಂದು ಆ ಮಳೆಯಲ್ಲೇ ಹೊರಟುಬಿಟ್ಟೆವು..


ಹೊರಬಂದು ಅಲ್ಲೆ ಇದ್ದ ಹೊಟೆಲೊಂದರಲ್ಲಿ ಹೊಕ್ಕು ಊಟ ಮಾಡಿದೆವು.... ರುಚಿ-ಶುಚಿಯ ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಾನಂತೂ ಚೆನ್ನಾಗಿ ತಿಂದೆ....ಅದಕ್ಕಾಗಿ ಈಗ ಪರಿತಪಿಸುತ್ತಿದ್ದೇನೆ :-(, ರಾಜೇಶ ಸಾಂಬಾರಿನಿಂದ ಪೇಪರಿನ ಚೂರನ್ನು ಹೊರತೆಗೆದ...!! ನಾನಾಗಿದ್ದರೆ ಅಂದು ಇದ್ದ ಹಸಿವಿನಲ್ಲಿ ಅದನ್ನು ಕೂಡ ಗಮನಿಸದೆ ತಿಂದುಬಿಡುತ್ತಿದ್ದೆನೇನೊ..!!!

ಅಲ್ಲಿಂದ ಹೊರಬಿದ್ದು ಮತ್ತೆ ತಿರುಪತಿಯೆಡೆಗೆ ಸಾಗಿದೆವು... ಬಸ್ನಲ್ಲಿ ಎಲ್ಲಾರಿಗೂ ಒಳ್ಳೆ ನಿದ್ದೆ.. ಹೊಟೆಲ್ ತಲುಪಿ ಮತ್ತೆ ಎಲ್ಲರೂ ಮತ್ತೊಂದು ಸುತ್ತು ನಿದ್ದೆ ಮಾಡಿದೆವು... ಸುಮ್ಮರು 5:45ರ ವೇಳೆಗೆ ರೂಮ್ ಚೆಕ್ ಔಟ್ ಮಾಡಿ ಅಲಿಪಿರಿಗೆ ಬಂದಿಳಿದೆವು...ತಿರುಮಲ ಬೆಟ್ಟಕ್ಕೆ ನಾವು ಹತ್ತಿ ಹೋಗುವೆದೆಂದು ನಿರ್ಧರಿಸಿದ್ದೆವು.. ಅಲಿಪಿರಿಯಿಂದ ಪಯಣ ಶುರುವಾಗುತ್ತದೆ... ಸರಿಯಾಗಿ ಮೂರುಸಾವಿರದಾಐವತ್ತು(3500) ಮೆಟ್ಟಿಲುಗಳು ಹತ್ತಿದರೆ ವೆಂಕಟಾದ್ರಿ ಬೆಟ್ಟ ತಲುಪುತ್ತೇವೆ.. ತಿರುಮಲ ದೇವಸ್ಥಾನ ಇರುವುದು "ವೆಂಕಟಾದ್ರಿ" ಬೆಟ್ಟದಲ್ಲಿ...ಒತ್ತು ಏಳು ಬೆಟ್ಟಗಳೊನ್ನೊಳಗೊಂಡಿದೆ ತಿರುಪತಿ.. ಈ ಏಳು ಬೆಟ್ಟಗಳನ್ನು ಸವೆಸಿ ನಡೆದರೆ ಕೊನೆಯ ಅಂದರೆ ಏಳನೆಯ ಬೆಟ್ಟವಾದ "ವೆಂಕಾಟದ್ರಿ" ಅಲ್ಲಿ ತಿಮ್ಮಪ್ಪನ್ನ ದರುಶನ ಸಾಧ್ಯ... :-)

ಯಾತ್ರಾರ್ಥಿಗಳಿಗೆ ಎಲ್ಲೂ ತೊಂದರೆಯಾಗದಂತೆ ದಾರಿ ಮಧ್ಯೆ ಸಾಕಷ್ಟು ತಂಗುದಾಣಗಳು ಇವೆ ಮೆಟ್ಟಿಲು ಹತ್ತುವಾಗ..ಮಧ್ಯೆ ಮಧ್ಯೆ ನಾವು ವಿರಮಿಸಿಕೊಳ್ಳುತ್ತಿದ್ದವು.. ಸಮಚಿತ್ತ,ಸಮವಯಸ್ಕರೊಡನೆ ಇದ್ದುದ್ದೆನಾದ್ದರಿಂದ ಹತ್ತುವ ಪ್ರಯಾಸ ನನಗಾಗಲಿಲ್ಲ... ದಾರಿಉದ್ದಕ್ಕು ಹಾಸ್ಯಚಟಾಕಿಗಳು ಹಾರಡುತ್ತಿದ್ದವು, ಮಧ್ಯೆ ಮಧ್ಯೆ " ಲೊ ತಿರುಪತಿಗೆ ಬಂದಿದ್ದೀವೆ ಇಲ್ಲಾದರೂ double meanings ಬಿಟ್ಟು ಮಾತಾಡ್ರೊ ಎಂದು ಕೆಂಪ ಬೊಬ್ಬೆಯಿಡುತ್ತಿದ್ದ.. ಕಣ್ಮುಚ್ಚಿ ನಡೆದರೂ ಸಹ ನಾವು ಬೆಟ್ಟವನ್ನು ಹತ್ತಬಹುದು..ಅಷ್ಟು ಅಚ್ಚುಕಟ್ಟಾಗಿ ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ..ಎಲ್ಲೂ ಸಹ ಅಂಕು ಡೊಂಕುಗಳಿಲ್ಲ.. ಬೆಟ್ಟ ಹಟ್ಟುತ್ತಿದ್ದೇವೆ ಎಂಬ ಅರಿವು ಸಹ ಆಗುವುದಿಲ್ಲ ನಮಗೆ... ಹೆಚ್ಚಾಗಿ ದಣಿವು ಸಹ ಆಗಲಿಲ್ಲ ನನಗೆ..ಪ್ರಾಯಶ: ಒಂದಷ್ಟು ಚಾರಣಗಳನ್ನು ಮಾಡಿದ್ದೆನಾದ್ದರಿಂದ ನನಗೆ ಹೀಗೆಂದೆನಿಸಿರಬಹುದು.. "ತಡಿಯಂಡಮೋಳ್" ಬೆಟ್ಟದ ಚಾರಣ ಮುಂದೆ ಇದೇನೂ ಲೆಕ್ಕಕಿಲ್ಲ ಬಿಡಿ...ಎಂದು ಸಾಕಷ್ಟು ಬಾರಿ ಎಲ್ಲಾರಿಗೂ ಹೇಳುತ್ತಲಿದ್ದೆ.. ಸುಮಾರು 3500 ಮೆಟ್ಟಿಲುಗಳನ್ನು 3ಗಂಟೆಗಳ ಅವಧಿಯಲ್ಲಿ ಮುಗಿಸಿ ತಿರುಮಲ ಬೆಟ್ಟವನ್ನು 11ಕ್ಕೆ ತಲುಪಿದೆವು.. ನಮಗಾಗಿ ಕಾದಿತ್ತು ಅಲ್ಲೊಂದು ಶಾಕ್!!
3550 milestone



ತಲುಪಿದ ಕೂಡಲೆ "ಸುದರ್ಶನ" ticket ಗಾಗಿ ವಿಚಾರಿಸಿದೆವು... ಅಲ್ಲಿದ್ದವರನ್ನು ವಿಚಾರಿಸಿದಾಗ ತಿಳಿಯಿತು "ತಿರುಮಲೆ" ಬೆಟ್ಟದಲ್ಲಿ "ಸುದರ್ಶನ" ticket ಕೊಡುವುದಿಲ್ಲವೆಂದು, ನೀವು ದರುಶನಕ್ಕೆ ಹೋಗಬೇಕಾದರೆ "ಧರ್ಮದರ್ಶನ" ದಲ್ಲಿ ಹೋಗಬೇಕೆಂದು ಹೇಳಿದರು... ಸಾಕಷ್ಟು ಮಂದಿಯನ್ನು ಕೇಳಿದೆವು..ಎಲ್ಲಾರದೂ ಒಂದೇ ಉತ್ತರ..ಇಲ್ಲಿ ನಿಮಗೆ ಆ 50ರೂಪಾಯ್ ticket ಸಿಗಲ್ಲ ಕಣ್ರಯ್ಯ...ಕೆಳಗಡೆ ಹೋಗಿ.. ನಮಗೆ ನಮ್ಮ ಪರಿಸ್ಥಿತಿಯನ್ನು ಕಂಡು ಅಳಬೇಕೊ ನಗಬೇಕೊ ತಿಳಿಯುತ್ತಿರಲಿಲ್ಲ... ಅಲ್ಲೇ ಒಂದು ಕಲ್ಲು ಬೆಂಚಿನ ಮೇಲೆ ಕುಳ್ಳರಿಸಿದೆವು... ಇಡೀ ತಿರುಮಲ ದೇವಸ್ಥಾನ ಹಾಗು ಬೆಟ್ಟದ ನಿರ್ವಹಣೆ "ತಿರುಮಲ ತಿರುಪತಿ ದೇವಸ್ಥಾನಮ್ಸ್" ಎಂಬ ಸಂಘದ ಉಸ್ತುವಾರಿ ಹಾಗು ಸುಪರ್ದಿಯಲ್ಲಿದೆ.. ಇದರ ಮೇಲೆ ಆಂಧ್ರ ಸರಕಾರದ ಯಾವ ಹಕ್ಕೂ ಸಹ ಇಲ್ಲ !! ..ಅಲ್ಲೊಂದು ಸರಿಯಾದ ಮಾಹಿತಿ ಕೇಂದ್ರವೆಂಬುದೇ ಇರಲಿಲ್ಲ... Information Centre ಎಂಬ ನಾಮಫಲಕ ಹೊತ್ತ ಒಂದು ಚಿಕ್ಕ ಗೂಡು ನಮ್ಮ ಕಣ್ಣಿಗೆ ಬಿತ್ತಾದರೂ ಅದೂ ಸಹ ಮುಚ್ಚಿತ್ತು..ಇಲ್ಲೂ ಸಹ ಕೇಳಿದವರೆಲ್ಲ ತಲೆಗೊಂದಂತೆ ಮಾತನಾಡುತ್ತಿದ್ದರು... ನಮಗೆ ನಿಜವಾದ ಗೊಂದಲವುಂಟಾಯಿತು.. we had got wrong information that we will get tickets for sudarshana in tirumala hills..........ಆ ಮಾಹಿತಿ ತಪ್ಪಾಗಿತ್ತು.. ಸಮಯ ಮೀರುತ್ತಿತ್ತು ..ಸುಮಾರು ರಾತ್ರಿ ಹನ್ನೊಂದೂವರೆಯಿರಬಹುದು...

ನಮಗೆ ಇದ್ದದ್ದು ಮೂರು ಆಯ್ಕೆಗಳು :


1) ಬೆಟ್ಟದಿಂದ ಕೆಳಗೆ ಬಸ್ನಲ್ಲಿ ಇಳಿದು ರಾತ್ರಿ 2am-5am ರ ನಡುವೆ ticket ಗಾಗಿ ಕಾದು ಪಡೆಯುವುದು...



2)ಹುಚ್ಚುಧೈರ್ಯದಿಂದ "ಧರ್ಮದರ್ಶನ" ದ ಸಾಲಿನಲ್ಲಿ ಹೋಗಿ ನಿಂತುಬಿಡುವುದು.. ಇದರಲ್ಲಿ ನಿಂತರೆ ಎಂದು ನಮಗೆ ದರುಶನ ಸಾಧ್ಯ ಎಂಬುದು ತಿಳಿಯುವುದಿಲ್ಲ..ದಿನಗಟ್ಟಲೆ ಹಿಡಿಯಬಹುದು..ಅಥವಾ ಬೇಗನೆ ಸಹ ಆಗಲೂಬಹುದು.. depends



3)ತಿಮ್ಮಪ್ಪನ ದರುಶನದ ಆಸೆಯನ್ನು ತೊರೆದು ಮರಳಿ ಬೆಂಗಳೂರಿಗೆ ವಾಪಸಾಗುವುದು..(ಇದರ ಬಗ್ಗೆ ನಾನು ಮತ್ತೆ ಕೆಂಪನನ್ನು ಉಳಿದು ಮತ್ಯಾರು ಸಹ ಯೋಚಿಸಿರಲಿಲ್ಲವೆಂದೆನಿಸುತ್ತೆ...he he he)



ಮಂಜು ಮಾತ್ರ "ಲೊ ಬೇಡ್ರೊ ಕೆಳಗಡೆ ಮಾತ್ರ ಹೋಗೋದು ಬೇಡ, ಅಲ್ಲಿ queue ಇರತ್ತೆ..ticket ತಗೊಂಡ್ರೆ ನಾಳೇನೆ ದರುಶನ ಆಗುತ್ತೆ ಅಂತ ಏನುಗ್ಯಾರಂಟಿ??, ಧರ್ಮದರ್ಶನಕ್ಕೆ ಹೋಗಿಬಿಡೋಣ, ಬೆಳಿಗ್ಗೆ 10ಕ್ಕೆಲ್ಲ ಹೊರಗಡೆ ಇರಬಹುದು ನಾವು" ಎನ್ನುತ್ತಿದ್ದ.. ವಿಕಾಸನು ಕೆಳಗಡೆ ಹೋಗಿ ticket ಪಡೆಯುವ ಹಂಬಲದಲ್ಲಿದ್ದ..ನಾನೂ ಸಹ ಗೊಂದಲದಲ್ಲಿದ್ದೆ.. ಕೆಂಪ ಮಾತ್ರ ಮೌನಿಯಾಗಿ ಒಂದೆಡೆ ಮುಗುಮ್ಮಾಗಿ ಕುಳಿತಿದ್ದ..ಏನಾದ್ರು ಮಾತಾಡೊ ಅಂದರೆ "ನಾವಿಲ್ಲಿಗೆ ಪ್ಲಾನ್ ಮಾಡದೆ ಬಂದದ್ದು ಮೊದಲು ದೊಡ್ಡ ತಪ್ಪು" ಎಂದು ಸುಮ್ಮನಾದ... ನಮ್ಮೀ ಪರಿಸ್ಥಿತಿ ಯಾವ ಶತ್ರುವಿಗೂ ಬೇಡ... ಒಂದಷ್ಟೊತ್ತು ಅಲ್ಲೆ ಸುಮ್ಮನೆ ಕುಳಿತಿದ್ದೆವು...ಕೊನೆಗೆ ಮಂಜು "ಲೊ ನಂಗೂ ಬೇಡ ನಿಂಗೂ ಬೆಡ..ಟಾಸ್ ಹಾಕಣ...ದೇವ್ರಿಟ್ಟಂಗೆ..." ಎಂದ.. !!

"ಲೊ ಥೂ ನಿನ್ನ..ಟಾಸ್ ಹಾಕ್ಬೇಕಾ??..ಅದೆಲ್ಲಾ ಬೇಡ....ನಡಿ ನಡಿ.. ಧರ್ಮದರ್ಶನಕ್ಕೆ ಹೊರಟುಬಿಡೋಣ..ಏನಾಗುತ್ತೊ ಆಗಲಿ" ಎಂದು ಯಾರೋ ಹೇಳಿದರು.... ಇದು ನಮ್ಮೆಲ್ಲರ ಒಕ್ಕೊರಲಿನ ನಿರ್ಧಾರವಾಗಿರಲಿಲ್ಲ..ಪರಿಸ್ಥಿತಿ ಹೊಡೆತಕ್ಕೆ ಸಿಲುಕಿ ಬೇರೆ ದಾರಿ ಕಾಣದೆ ಹೋದದ್ದು.. ಮತ್ತೆ ಎಲ್ಲರೂ ಲಗುಬಗೆಯಿಂದ ಬೆಟ್ಟದ ಮೇಲಿನ ವರೆಗೂ ಹೊತ್ತು ತಂದಿದ್ದ ಸಾಮಗ್ರಿಗಳನ್ನು ಒಂದು ಲಾಕರಿನಲ್ಲಿ ಹಾಕಿ ಕುಳಿತೆವು..ರಾಜೇಶ ಮತ್ತು ಮಂಜು ಕೂದಲು ಮುಡಿ ಕೊಟ್ಟು ನಮ್ಮೊಡನೆ ಸೇರಿದರು...... ಅತ್ತ ವಿಕಾಸ್ ಅದನ್ನೇ ಬಡಬಡಿಸುತ್ತಿದ್ದ.. "ಲೋ ಕೆಳಗಡೆ ಹೋಗಿದ್ದರೆ ticket ಸಿಕ್ತಿತ್ತು ಕಣ್ರೋ... ನೋಡ್ತಾಇರಿ ಸೋಮವಾರ ಆಗುತ್ತೆ ನಾವು ದರುಶನ ಮಾಡೋದು.. ತುಂಬ ಸುಸ್ತಾಗುತ್ತೆ " ಎಂದು..

ಅತ್ತ ಮಂಜು ಮತ್ತೆ ರಾಜೇಶ ಮುಡಿಕೊಡಲು ಹೋಗಿದ್ದಾಗ ನಾವು ಮೂವರು ಅಂದರೆ ನಾನು,ಕೆಂಪ,ವಿಕಾಸ ಒಂದು ದೊಡ್ಡ ಹಜಾರದಲ್ಲಿ ಕುಳಿತಿದ್ದೆವು..ಅಲ್ಲಿ ಸಾಕಷ್ಟು ಲಾಕರ್ಸ್ ಗಳಿದ್ದವು.... ಅಲ್ಲೆ ನೆಲದ ಮೇಲೆ ಸಾಕಷ್ಟು ಮಂದಿ ಮಲಗಿದ್ದರು... ಅವರು ಏತಕ್ಕಾಗಿ ಕಾಯುತ್ತಿದ್ದರು, ಏಕೆ ಇಲ್ಲಿ ಮಲಗಿದ್ದರು ಎಂದು ನಮಗೆ ಅರ್ಥವೆ ಆಗಲಿಲ್ಲ..ಒಂದು ನಿರಾಶ್ರಿತರ ಶಿಬಿರದಲ್ಲಿದ್ದೇವೊ ಎಂಬ ಭಾವ ನನ್ನನ್ನು ಸದಾ ಕಾಡುತಿತ್ತು.. ಕೆಂಪ ಇನ್ನೂ ಮೌನವಾಗೆ ಕುಳಿತಿದ್ದ....ಆ ಸರಿ ಹೊತ್ತಿನಲ್ಲಿ ನಡೆಯುತ್ತಿದ್ದ ಘಟನಾವಳಿಗಳನ್ನು ಕಂಡು ರೇಗಿ ಹೋಗಿದ್ದಿರಬೇಕು..ಮೈದಡವಿ ಕೇಳಿದೆ.."ಏನಾಯಿತೊ ಅವಾಗಲಿಂದ silent ಆಗೆ ಇದ್ದಿಯಾ" ಅಂತ..ಅದಕ್ಕೆ ಆತ ."ನಾನು ಹೋದ ಕಡೆಯಲೆಲ್ಲ ಹೀಗೆ ಆಗುತ್ತದೆ...ಸರಿಯಾದ ವ್ಯವಸ್ಥೆ ಇರುವುದಿಲ್ಲ, ಎಲ್ಲೆಲ್ಲೊ ಅರಾಜಕತೆ, ಸಮಯಕ್ಕೆ ಸರಿಯಾದ ಮಾಹಿತಿ ದೊರೆಯುವುದಿಲ್ಲ, ಎಲ್ಲಾ ಕಡೆಯು ಹೀಗೆಯೆ, ನಾವೆಂದಿಗು ಬದಲಾಗುವುದೇ ಇಲ್ಲವೆ..?? ಇದನ್ನ ಸರಿ ಮಾಡುವುದಕ್ಕೆ ಯಾರು ಸಹ initiative ಸಹ ತೆಗುದುಕೊಳ್ಳುವುದಿಲ್ಲ... ಏಕೆ ಹೀಗೆ??" ಎಂದು... ಒಹೋ ಈತ ಬಹಳ serious ಆಗಿ ಯೋಚಿಸುತ್ತಿದ್ದಾನೆ ಎಂದು ಅರಿತು... "ಎಲ್ಲರೂ ಸಹ ತಮ್ಮ ಕೆಲಸ ಕಾರ್ಯ ಮುಗಿದ ಮೆಲೆ ಆ ಕಡೆ ತಿರುಗಿ ಸಹ ನೋಡುವುದಿಲ್ಲ ಕಣೊ.. ನಿನಗಿಲ್ಲಿ ಇಂದು ಸರಿಯಾಗಿ ನಡೆಯುತ್ತಿಲ್ಲವೆಂದು ಪರಿತಪಿಸುತ್ತಿದ್ದೆಯ.. ಅದೆ timeಗೆ correct ಆಗಿ ಎಲ್ಲಾ ಸುಸೂತ್ರವಾಗಿ ನಡೆದಿದ್ದರೆ ಇದರ ಬಗ್ಗೆ ಯೋಚನೆ ಸಹ ನಿನಗೆ ಬರುತ್ತಿರಲಿಲ್ಲ.. ಎಲ್ಲ ನಮ್ಮ bad luck " ಎಂದು ಹೇಳಿ ಸುಮ್ಮನಾದೆ...



ಲಾಕರ್ಸ್ ಗಳಲ್ಲಿ ನಮ್ಮ ಸಾಮಾಗ್ರಿಗಳೊಡಣೆ ಮೊಬೈಲನ್ನು ಸಹ ಇಟ್ಟು ಹೊರಟು ನಿಂತೆವು.. ಆಗ ಸಮಯ ರಾತ್ರಿ 1ಗಂಟೆಯಿರಬಹುದು ದರುಶನ ನಮಗೆ ಯಾವ ವೇಳೆಗೆ ಆಗುತ್ತದೆ ಎಂಬ ಪರಿವೆಯೆ ಇಲ್ಲದೆ ಬೇರಾವ ದಾರಿವು ತೋಚದೆ ಆ ಸಾಲಿನಲ್ಲಿ ಕಾಯಲು ಸಿದ್ದವಾಗಿ ಹೊರಟು ನಿಂತಿದ್ದೆವು... ನಮದಿನ್ನೂ ಊಟಸಹಾ ಆಗಿರಲಿಲ್ಲ..ಅಷ್ಟೊತ್ತಿನಲ್ಲಿ ಊಟ ಮುಗಿಸಿ general queue ನಲ್ಲಿ ಕಾಯಬೇಕಾದ ಭೀಕರತೆಯನ್ನು ಅರಿತು ಸಾಕಷ್ಟು ತಿಂಡಿಯನ್ನು ಕೊಂಡು ತಿಂದ ದೋಸೆ ಪ್ಲೇಟನ್ನು ಬದಿಗಿಟ್ಟು ಕೈತೊಳೆದುಕೊಂಡು ಹೊರಡುವ ವೆಳೆಗೆ ಧೋ ಎಂದು ಮಳೆ ಶುರುವಾಯಿತು.... ಮೊದಲೇ ರೋಸಿ ಹೋಗಿದ್ದೆವು.. "ಎನಪ್ಪಾ ನಿನ್ನ ದರುಶನಕ್ಕೆ ಇಷ್ಟೊಂದು ಅದ್ದಿ ಆತಂಕಗಳೇ" ಎಂದು ಹಲಬುತ್ತಿದ್ದೆವು... ರಾಜೇಶ ಹೇಳುತ್ತಿದ್ದ "ಯಾವನೊ ನನ್ಮಗ ನಮಗೆ ಮಾಟ ಮಾಡಿಸಿರಬಹುದು ಕಣ್ರೋ...ಇಲ್ಲಾಂದ್ರೆ ಇಷ್ಟೊಂದು ತೊಂದ್ರೆ ಆಗುತ್ತಾ??, ನಮ್ಮಲ್ಲಿ ಯಾವನೊ ಒಬ್ಬನಿಗೆ ನಿಜವಾಗ್ಲು ಗ್ರಹಗತಿ ಚೆನ್ನಾಗಿಲ್ಲ ಅನ್ಸುತ್ತೆ.. ಅವ್ನ ಜಾತಕದಲ್ಲಿ ಈ ದಿನ ಮನೆ ಸಹ ಬಿಟ್ಟು ಹೊರಗೆ ಬರಬಾರದು ಅಂತ ಇದೆ ಅನ್ಸತ್ತೆ.. ನೋಡಿದ್ರೆ ತಿರುಪತಿವರೆಗು ಬಂದಿದ್ದಾನೆ..ಲೋ ವಾಪಸ್ ಬೆಂಗ್ಳೂರ್ ಗೆ ಹೊದ್ಮೇಲೆ ನಿಮ್ ನಿಮ್ ಜಾತಕ ಚೆಚ್ಕ್ ಮಾಡಿಸ್ಕೊಳ್ರೊ" ಯಾವನದು culprit ಎಂದು ಕಂಡುಹಿಡಿಯೋಣ... ಆ ಮಳೆಯಲ್ಲು ಎಲ್ಲರೂ ಮನಸಾರೆ ನಕ್ಕೆವು... ಇನ್ನು ತಡ ಮಾಡಿದರೆ ಸರಿ ಬರುವುದಿಲ್ಲವೆಂದು ಆ ಮಳೆಯಲ್ಲೆ ಹೊರಟೆವು.... ಎಲ್ಲರೂ ಒಡುತ್ತಿದ್ದೆವು..ಮಳೆ ಇನ್ನು ಜೋರಾಯಿತು... ಎಲ್ಲರೂ ನೆನೆದು ತೊಯ್ದು ತೊಪ್ಪೆಯಾಗಿ ಅಲ್ಲೆ ನಿಂತೆವು... ಮತ್ತದೇ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಸುಳಿದಾಡುತಿತ್ತು .ನಮಗೆ ಏಕೆ ಹೀಗಾಗುತ್ತಿದೆ ಎಂದು...ಸ್ವಲ್ಪ ಕಮ್ಮಿ ಆದ ಕೂಡಲೆ ಮತ್ತೆ ಒಡಿ ಧರ್ಮದರ್ಶನದ ಸಾಲಿಗೆ ನುಗ್ಗಿಬಿಟ್ಟೆವು...

ಧರ್ಮದರ್ಶನಕ್ಕೆಂದೇ ದೊಡ್ಡ ಸೆಲ್ ಗಳನ್ನು ಕಟ್ಟಿರುತ್ತಾರೆ...ಮುಖ್ಯ ದೇವಸ್ಥಾನದಿಂದ ಬಹಳ ದೂರವೆ ಈ ಸಾಲು ಶುರುವಾಗುತ್ತದೆ... ಇಲ್ಲಿ ಕಾಯಲು ಕುಳಿತರೆ ದರ್ಶನದ ವೇಳೆ ಅನಿಶ್ಚಿತ.. ಅದಕ್ಕಾಗಿಯೆ ಅಲ್ಲಿ ಯಾತ್ರಾರ್ಥಿಗಳಿಗೆ ದಣಿವಾಗಬಾರದೆಂದು!! ಬಹಳಷ್ಟು ದೊಡ್ಡ ದೊಡ್ಡ ಸೆಲ್ ಗಳನ್ನು ನಿರ್ಮಿಸಿದ್ದಾರೆ....ಅಲ್ಲಿ ಒಮ್ಮೆ ಹೋದರೆ ಹೊರಗಡೆ ಬರುವಂತಿಲ್ಲ... ಒಂದಾದರೊಂದಂತೆ ಒಂದು ಸೆಲ್ ಗಳಿಂದ ನಮ್ಮನ್ನು ಹೊರಗಡೆ ಬಿಡುತ್ತಾರೆ... ಅಂತಹ ಒಂದು ಸೆಲ್ ಗೆ ನಾವು ಐವರು ಹೋಗಿ ಕುಳಿತೆವು...ಆಗ ಸಮಯ ಭಾನುವಾರ ಮಧ್ಯರಾತ್ರಿ 2ಗಂಟೆ... ಅಲ್ಲಿಂದ ಎಂದು ಹೊರಬೀಳುವೆವು ಎಂಬುದು ಅಲ್ಲಿರುವವರ್ಯಾರಿಗು ತಿಳಿದಿರಲಿಲ್ಲ..ನಾವಿದ್ದ ಸೆಲ್ ನಲ್ಲಿ ಸುಮಾರು 600 ಜನರು ಇದ್ದರೆಂದೆನಿಸುತ್ತೆ.. ನಮಗೆ ಅಲ್ಲಿ ಕುಳಿತು ಏನು ಮಾಡುವೆದೆಂದು ತಿಳಿಯಲಿಲ್ಲ..ಒಬ್ಬೊಬ್ಬರಾಗಿ ನಿದ್ದೆಗೆ ಜಾರುತ್ತಿದ್ದರು..ಸುತ್ತಮುತ್ತಲಿನ ಜನರನ್ನು ನಾನು ಸುಮ್ಮನೆ ವೀಕ್ಷಿಸುತ್ತಿದ್ದೆ....ನಮಗೆ ಅಲ್ಲಿ ಸರಿಯಾಗಿ ಕೂತುಕೊಳ್ಳಲು ಸಹ ಜಾಗವಿರಲಿಲ್ಲ...ಸುತ್ತಲೂ ಜನ...ಸರಿಯಾಗಿ ಕಾಲು ಸಡಿಲಿಸಿ ಕೊಸರಾಡಲು ಸಹ ಜಾಗವಿಲ್ಲದಷ್ಟು ಜನ ತುಂಬಿಕೊಂಡಿದ್ದರು..ಅಲ್ಲಿದ್ದವರು ಯಾರೊ ಬೆಳಿಗ್ಗೆ 5ಗಂಟೆಗೆ ಈ ಸೆಲ್ ನಿಂದ ಹೊರಗಡೆ ಬಿಡುತ್ತಾರೆ ಎಂಬುವ ವದಂತಿ ಹಬ್ಬಿತ್ತು... ಸ್ವಲ್ಪ ಕತ್ತೆತ್ತಿ ನೋಡಿದರೆ ಸಾಕಷ್ಟು ಬೋಳು ಮಂಡೆಗಳು ಕಾಣಿಸುತಿತ್ತು..ಇದ್ಯಾವ ಪರಿಯ ಹುಚ್ಚು..ದೇವರ ದರ್ಶನಕ್ಕಾಗಿ ಇಷ್ಟೆಲ್ಲಾ ಪಡಿಪಾಟಲು ಪಟ್ಟು ದರ್ಶಿಸುವ ಅಗತ್ಯವಾದರೂ ಏನು...ಎಂದೆನ್ನುಕೊಳ್ಳುತ್ತಿದ್ದೆ..ಹಾಗೆ ಇದೇ ಪ್ರಶ್ನೆಯನ್ನು ನನ್ನ ಗೆಳೆಯರಿಗೆ ಕೇಳಿದೆ..ಅದಾಗಲೆ ವಿಕಾಸ್ ಇದ್ದ ಸ್ವಲ್ಪ ಜಾಗದಲ್ಲೆ ನಿದ್ದೆಗೆ ಜಾರಿದ್ದ...ರಾಜೇಶನು ಸಹ ಮಲಗಿದ್ದ...ನಾನು ಕೆಂಪ ಮತ್ತೆ ಮಂಜು ಕಾಲು ಚಾಚಲು ಸಹ ಜಾಗವಿಲ್ಲದೆ ಕುಳಿತಿದ್ದೆವು..ವಿಪರೀತ ನೋವಾಗುತಿತ್ತು... ಕಾಲು ಗಂಟೆಗೊಮ್ಮೆ ನಮ್ಮ ಕುಳಿತಿರುವ ಭಂಗಿಯನ್ನು ಬದಲಾಯಿಸಿಕೊಳ್ಳುತ್ತಿದ್ದೆವು.... ನಮ್ಮನ್ನು ನಾವೇ ನೋಡಿ , ನಮ್ಮ ಪರಿಸ್ಥಿತಿಗೆ ನಾವೇ ನಗಾಡಿಕೊಳ್ಳುತ್ತಿದ್ದೆವು...
ಮಂಜು ಕೇಳಿದವೆಂದೆನಿಸುತ್ತೆ.."ಎನೋ ಮಾಡೊದು ಬೆಳಿಗ್ಗೆ ವರೆಗೂ .." ಅದಕ್ಕೆ ನಾನು "ನೀನು ನನ್ನ ನೋಡಿ ನಗು, ನಾನು ನಿನ್ನ ನೋಡಿ ನಗ್ತೀನಿ.., ಅಷ್ಟ್ ಬಿಟ್ ಬೇರೆ ಎನು ಇಲ್ಲಿ ಮಾಡಕ್ ಆಗಲ್ಲ..." ಎಂದೆ... ಇನ್ನೇನು ತಾನೆ ಹೇಳಲು ಸಾಧ್ಯ..

ಹೀಗೆ ಅಲ್ಲಿ ಕುಳಿತಿದ್ದ ನನ್ನ ಗೆಳೆಯರಿಗೆ ಕೇಳಿದೆ.."ಯಾಕ್ ಮಗಾ..ಇಷ್ಟೊಂದ್ ಜನ ಇಷ್ಟೊಂದ್ ಕಷ್ಟ ಪಟ್ಟೆಲ್ಲಾ ಇಷ್ಟೊಂದು ಒದ್ದಾಡಿಕೊಂಡೆಲ್ಲ ದರ್ಶನ ಮಾಡಕ್ ಬರ್ತಾರೆ..??" ಅದಕ್ಕೆ ಮಂಜು "ಅದನ್ನೆ ಕಣೊ ಭಕ್ತಿ ಎನ್ನೋದು" ಎಂದ..
ನನಗೆ ಉರಿದು ಹೋಯಿತು... "ಲೋ ಪಿಂಡಾ ಭಕ್ತಿ... ಇಷ್ಟೆಲ್ಲ ಕಷ್ಟ ಪಟ್ಟು , ಸರಿಯಾಗಿ ಸ್ನಾನ ಊಟ ಇಲ್ಲದೆ, ಇಷ್ಟೆಲ್ಲ ದಣಿವಾಗಿ ದೇವರ ಮುಂದೆ ನಿಂತರೆ ಭಕ್ತಿ ಎಲ್ಲಿಂದ ಬರತ್ತೋ, ಎಲ್ಲ ಗುಂಪಲ್ಲಿ ಗೋವಿಂದ ಮಗಾ...ಜನರಿಗೆ ಹುಚ್ಚು..ತಾವು ಹರಕೆ ಹೊತ್ತು ಬಂದಿದ್ದನ್ನು ಈ ದೇವರಲ್ಲಿ ಬಿನ್ನವಿಸಿದರೆ...ಅದು ಜರುಗುತ್ತದೆಂದು..ಅಷ್ಟೆ... ಇನ್ನೇನಿಲ್ಲ".. ಎಂದು..

ಅದಕ್ಕೆ ಆತ "ಹೌದು...ನಾವೆಲ್ಲ ಆರ್ಥಿಕವಾಗಿ ಸಬಲರಾಗಿದ್ದರೂ ಮಾನಸಿಕವಾಗಿ ಜರ್ಜರಿತವಾಗಿಬಿಟ್ಟಿದೇವೆ." ಎಂದು ಏನೊ ಹೇಳಿದ..ಸುಮ್ಮನೆ ಗೋಣಲ್ಲಾಡಿಸಿದೆ...ರಾಜೇಶ ನಿದ್ದೆಗೆ ಜಾರಿದ್ದ... ಮಂಜು ಕುಳಿತಲ್ಲಿಯೆ ನಿದ್ದೆ ಮಾಡುತ್ತಿದ್ದ..ಕೆಂಪ ನಾನು ಮುಖ ಮುಖ ನೋಡಿಕೊಳ್ಳುತ್ತಿದೆವು... ಏನೇ ಆದರೊ ನಾನು ನಿದ್ದೆ ಮಾಡಬಾರದೆಂದು ನಿರ್ಧರಿಸಿದ್ದೆ... ನಿದ್ದೆ ಮಾಡಬೇಕಿದ್ದರೂ ಅಲ್ಲಿ ಸ್ಥಳವೇ ಇರಲಿಲ್ಲ..!!! ಸುಮ್ಮನೆ ಸುತ್ತಲೂ ಕತ್ತಾಡಿಸುತ್ತಿದ್ದೆ...
ಕಾಳಹಸ್ತಿಯಲ್ಲಿ queue ನಲ್ಲಿ ನಿಂತಿದ್ದು, ಬೆಟ್ಟ ಹತ್ತಿದುದರ ಪರಿಣಾಮ ಬಹಳವಾಗಿ ದಣಿವಾಗಿತ್ತು... ಕಣ್ಣೆಳೆಯುತಿತ್ತು.. ಒಂದಷ್ಟು ಮಧ್ಯ ವಯಸ್ಕ ಮಂದಿ ಅಲ್ಲಿ ಕೂತು ಹರಟುತ್ತಿದ್ದರು... ಜನರು ಶೌಚಕ್ಕೆ ಹೋಗಬೇಕಾದರೆ ಮಲಗಿರುವ ಮಂದಿಯನ್ನು ಸರಿಸಿ ಮಧ್ಯ ಮಧ್ಯ ಕಾಲಿಟ್ಟು ಸಾಗುತ್ತಿದ್ದರು... ನನಗೆ ಎಲ್ಲೋ ಒಂದು ಬಂದೀಖಾನೆಯಲ್ಲಿದ್ದೆವೆಂದೊ ಅನಿಸುತಿತ್ತು... ಒಮ್ಮೊಮ್ಮೆ ನಿರಾಶ್ರಿತರ ಶಿಬಿರದಲ್ಲಿದ್ದ ಭಾವ.. we were not at all comfortable ..



ಮನುಷ್ಯ ಒಂಟಿಯಾಗಿದ್ದಾಗ ಸಾಕಷ್ಟು ಭಾವಗಳು ಕಾಡುತ್ತವೆ...ಮೊಬೈಲಾದರು ಇದ್ದಿದ್ದರೆ message ಆದರೊ ಮಾಡುತ್ತಿದ್ದೆ.. ನಾವು ಒಂಟಿಯಾಗಿದ್ದಾಗ , ಏನೊಂದು ಮಾಡಲು ಸಾಧ್ಯವಿಲ್ಲದಿರುವಾಗ ನಮಗೆ ಹತ್ತಿರವಾದವರನ್ನು ನೆನೆದು ಪರಿತಪಿಸುತ್ತೇವೆ.. ಬಹಳ ಹೊತ್ತು ಒಂದೇ ಭಂಗಿ ಯಲ್ಲಿ ಕುಳಿತಿದ್ದ ಕಾರಣ ಕಾಲಿಗೆ ಬಹಳ ನೋವಾಗುತಿತ್ತು... ಅಷ್ಟರಲ್ಲಿ ಅಲ್ಲೊಂದು 3-4ವರ್ಷದ ಹುಡುಗಿ ಜೋರಾಗಿ ಅಳಲು ಶುರು ಮಾಡಿತು..ಅದೇಕೆ ಅಳಲು ಶುರು ಮಾಡಿತೊ ನನಗೆ ಅರಿಯದು...ಅದರ ಅಪ್ಪ ಅದನ್ನು ಸಂತೈಸುವ ಬದಲು ರಪರಪನೆ ನಾಲ್ಕು ಬಿಟ್ಟ..ನನಗೆ ಕಣ್ಣಲ್ಲಿ ನೀರು ತುಂಬಿ ಬಂದು ತಲೆ ತಿರುಗಿಸಿಬಿಟ್ಟೆ...ಏನೇನೊ ಭಾವಗಳು ಮನಸ್ಸಿನಲ್ಲಿ ಸುಳಿದಾಡುತಿತ್ತು... ಮಗವನ್ನು ಅಲ್ಲಿಂದ ಕರೆದುಕೊಂಡು ಬೇರೆಡೆಗೆ ಹೋದರು...



ಬೆಳಗಿನ ಜಾವ ಸರಿಯಾಗಿ ಐದಕ್ಕೆ ಧುತ್ತೆಂದು ಅಲ್ಲಿದ್ದ ಎರಡು TV ON ಆಯಿತು..ಅಲ್ಲಿದ್ದೆವರೆಲ್ಲ ಮೈದಡವಿಕೊಂದು ಎಳಲು ಶುರು ಮಾಡಿದರು...ಮಂಜು ಅತ್ಯಂತ ಸಂತಸದಿಂದ "TV ON ಮಾಡಿದ ಅರ್ಧ ಗಂಟೆಯಲ್ಲಿ ನಮ್ಮನ್ನು ಇಲ್ಲಿಂದ ಬಿಡುತ್ತಾರೋ..." ಎಂದ... ನಿಜವಿರಬಹುದೆಂದು ಕಾದೆವು.. ಉಹೂ ಗಂಟೆ ಏಳಾದರು cell open ಯಾವುದೆ ಸೂಚನೆಯೆ ಇರಲಿಲ್ಲ..ಎಲ್ಲರು ಮಂಜುವಿಗೆ ಬಯ್ಯುತ್ತಿದ್ದೆವು.... ಅಷ್ಟರಲ್ಲಿ.. ಎಲ್ಲರಿಗೂ ಹಾಲು ಕೊಡಲು ಶುರು ಮಾಡಿದರು..ಆಗ ಮತ್ತೆ ಮಂಜು..." ಒಹ್..ಹಾಲು ಕೊಡೋಕೆ ಶುರು ಮಾಡಿದ್ದಾರೆ..ಇನ್ನು ಕೇವಲ ಅರ್ಧ ಗಂಟೆ ಅಷ್ಟೆ ಬಿಟ್ಬಿಡ್ತಾರೆ.. sure ಮಗಾ.." ಎಂದ....

"ಲೈ...ಮಗನೆ ನೀನು ತೆಪ್ಪಗೆ ಸುಮ್ಮನಿದ್ಬಿದು.. ಅವಾಗ್ಲಿಂದ ಹೇಳಿದ್ದೆ ಹೇಳ್ತಾಇದ್ಯಾ.. ಧರ್ಮದರ್ಶನಕ್ಕೆ ಅಂತ ಬಂದಿದ್ದೀವಿ..ನಿನಗೆ ಇವಾಗ ನಮ್ಮಿಂದ ನಿಂಗೆ ಧರ್ಮದೇಟು ಬೀಳತ್ತೆ..ಸುಮ್ನಿದ್ಬಿದು.." ಎಂದು ಎಲ್ಲರೂ ಹೇಳಿದರು.. manju was over optimistic..ಯಾವಾಗ ಕೇಳಿದರೂ..ಸಹ ಇನ್ನು ಕೇವಲ ರ್ಧ ಗಂಟೆ ಯಷ್ಟೆ ಇಲ್ಲಿಂದ ಆಚೆ ಬಿಟ್ಟು ಬಿಡ್ತಾರೆ ಎಂದೆ ಹೇಳುತ್ತಿದ್ದ..ಅದಾವ ಧೈರ್ಯದ ಮೇಲೆ ಹೇಳುತ್ತಿದ್ದನೊ ನಮಗೆ ತಿಳಿಯುತ್ತಿರಲಿಲ್ಲ... ಸರಿಯಾಗಿ 12ಗಂಟೆಗೆ ನಮ್ಮನ್ನು ಅ ಸೆಲ್ ನಿಂದ ಹೊರಬಿಟ್ಟರು..ಸರಿಯಾಗಿ 10ಗಂಟೆಗಳ ಕಾಲ ಆ ಕೂಪದಲ್ಲಿ ಕಾಲಕಳೆದಿದ್ದೆವು.. ಅಲ್ಲಿಂದ ಬಿಟ್ಟೊಡನೆಯೆ ಜನರು ಮತ್ತೊಂದು queue ಸೇರಲು. ಹೋ ಎಂದು ಒಡುತ್ತಾರೆ... ವಿಪರೀತ ನೂಕುನುಗ್ಗಲಿತ್ತು... "ಏಡುಕೊಂಡಲವಾಡ ವೆಂಕಟರಮಣ ಗೋವಿಂದಾ ಗೋವಿಂದಾ" ಎಂಬ ಉದ್ಗಾರ ಭಕ್ತವರ್ಗದಿಂದ ಆಗಿಂದಾಗ್ಗೆ ಹೊರಹೊಮ್ಮುತಿತ್ತು.. ಅಲ್ಲಿಂದ ಮತ್ತೆ ಎರಡು ಗಂಟೆಗಳು queue ನಲ್ಲಿ ಸವೆಸಿ ಮುಖ್ಯದೇವಸ್ಥಾನದ ಅಂಗಳಕ್ಕೆ ಬಂದೆವು..ಅಲ್ಲಿಂದ ಎಲ್ಲರನ್ನೂ ಒಂದು ಮಾಡಿಬಿಡುತ್ತಾರೆ.. ಅಂದರೆ special entrance, VIP entrance ಎಲ್ಲರು ಒಂದೆ queue ನಲ್ಲಿ ಲೀನವಾಗಿಬಿಡುತ್ತರೆ..ಎಂದಿನಂತೆ ನೂಕುನುಗ್ಗಲು ಇತ್ತು..ಪೋಲೀಸರ ತಪಾಸಣೆ ಮುಗಿದು ಒಳಗೆ ಕಾಲಿಟ್ಟಾಗ ದೇವಸ್ಥಾನ ದ ಒಳಗೆಲ್ಲ ಚಿನ್ನದ ಕುಸುರಿಕೆಲಸ ಕಾಣಸಿತ್ತದೆ..ಎಲ್ಲೆಲ್ಲೂ ನ್ನದ plating,ಎಷ್ಟಾದರೂ ಭಾರತದ ಶ್ರೀಮಂತದೇವರಲ್ಲವೆ ತಿರುಪತಿ ತಿಮ್ಮಪ್ಪ...ಇಷ್ಟೆಲ್ಲ ಕಷ್ಟಪಟ್ಟು ಹೋದರೂ ಆ ತಿಮ್ಮಪ್ಪನ ದರುಶನವಾದ ಕೂಡಲೆ ಎಲ್ಲ ಉಪಶಮನವಾಗುತ್ತದೆ...ಎಂತದೋ ಒಂದು ಶಕ್ತಿ ಆ ಮೂರ್ತಿಯಲ್ಲಿದೆ ಎಂದು ನನಗನ್ನಿಸುತ್ತದೆ..ಬಹಳ ಸುಂದರವಾದ ಮೂರ್ತಿಯದು...ನೋಡಿದರೂ ಮತ್ತಷ್ಟು ನೋಡಬೇಕೆಂದಿನಿಸುತ್ತದೆ... ಆ ಮೂರ್ತಿಯ ದರುಶನ ಸಿಕ್ಕಿದ್ದು ಕೇವಲ 40seconds ಅಷ್ಟೆ.. ಅದೊಂದು ರೀತಿಯ ಚುಂಬಕ ಶಕ್ತಿ ಕೆಲಸ ಮಾಡುತ್ತದೆ ಎಂದು ನನ್ನ ಅಭಿಪ್ರಾಯ. ಅಷ್ಟಲ್ಲದೆ ಪ್ರಪಂಚದ ಮೂಲೆ ಮೂಲೆಯಿಂದ ಭಕ್ತರನ್ನು ಆಕರ್ಷಿಸುವುದಾದರೂ ಹೇಗೆ??? ಅಲ್ಲಿ ಸೆಲ್ ನಲ್ಲಿ ಕುಳಿತು ನಾವೆಲ್ಲ ಅಷ್ಟೆಲ್ಲ ಎಗರಾಡುತ್ತಿದ್ದರೂ ಮೂರ್ತಿಯ ದರುಶನವಾದ ಕೂಡಲೆ ಅದಾವ ಭಾವ ತುಂಬಿತೊ ಎನೋ..ದಿಗ್ಮೂಢರಾಗಿ "ದರುಶನ ಬಹಳ ಚೆನ್ನಾಗಾಯಿತು" ಎಂದು ನಮ್ಮಲ್ಲೆ ನಾವೆಂದು ಕೊಳ್ಳುತ್ತ ಹೊರ ಬಂದುಬಿಟ್ಟೆವು.. ಅಷ್ಟೆಲ್ಲ ತೊಂದರೆ ಪಡಿಪಾಟಲು ಪಟ್ಟಿದಕ್ಕೂ ಸಾರ್ಥಕವಾಯಿತೆನ್ನುವ ಭಾವ....!!!!

ದರುಶನ ಮುಗಿಸಿ.. ಪ್ರಪಂಚಲ್ಲೆ ಖ್ಯಾತಿವೆತ್ತ ತಿಮ್ಮಪ್ಪನ ಹುಂಡಿಯೆಡೆಗೆ ಹೋದೆವು..ಸಾಕಷ್ಟು ನೂಕು ನುಗ್ಗಲು ಇತ್ತು.. ಒಂದು ಪ್ರದಕ್ಷಿಣೆ ಹಾಕಿ ಒಂದಷ್ಟು ಹಣವನ್ನು ಹುಂಡಿಯಲ್ಲಿ ಹಾಕಿ..ಹೊರಬಂದೆವು...ಈ ಹುಂಡಿಗೆ ಕೆಲವರು ಲಕ್ಷಗಟ್ಟಲೆ ಹಾಕುತ್ತಾರೆ.ಕೆಲವರು ತಮ್ಮ ಚಿನ್ನಭರಣಗಳನ್ನೇ ಹಾಗೆ ಕಳಚಿ ಅದರೊಳಗೆ ಹಾಕಿಬಿಡುತ್ತಾರೆ...!!
ಇಲ್ಲಿ ಜನ ಏಕೆ ಇಷ್ಟೊಂದು ಹಣ ಹಾಕುತ್ತರೆ ಎನ್ನುವುದರ ಬಗ್ಗೆ ಒಂದು ಪ್ರತೀತಿ ಇದೆ..."ಶ್ರೀನಿವಾಸನು ಪದ್ಮಾವತಿ ಜೊತೆ ಪರಿಣಯಕ್ಕೆ ಕುಬೇರನ ಬಳಿ ಸಾಲ ಮಾಡಿದ್ದನಂತೆ.. ಆ ಮದುವೆಗೆ ಆದ ಖರ್ಚನ್ನು ತೀರಿಸಲು ಜನರು ಹುಂಡಿಗೆ ದುಡ್ಡು ಹಾಕುತ್ತಾರಂತೆ..ಅಂದು ಯಾವುದೂ ಕಾಲದಲ್ಲಿ ಮಾಡಿದ ಸಾಲ ಇಂದು ಸಹ ಇನ್ನೂ ತೀರಿಲ್ಲವಂತೆ". !!

ದರುಶನ ಮುಗಿಸಿ..ಲಾಡು ಪ್ರಸಾದವನ್ನು ಪಡೆದು.. ದೇವಸ್ಥಾನದ ಪ್ರಾಂಗಣದಿಂದ ಹೊರಬಂದೆವು... ಎಲ್ಲರಿಗೂ ಸಾಕಷ್ಟು ದಣಿವಾಗಿತ್ತು...ಹೊಟ್ಟೆ ಚುರಗುಡುತಿತ್ತು..ಸಮಯ ಆಗ ಭಾನುವಾರ ಮಧ್ಯಾಹ್ನ ಎರಡೂವರೆ ಇರಬಹುದು.. ಆದಷ್ಟು ಬೇಗ ಬಸ್ ಹಿಡಿದು ಬೆಂಗಳೂರು ತಲುಪುವ ಬಯಕೆ ಎಲ್ಲರನ್ನು ಆವರಿಸಿತ್ತು.. ಲಗುಬಗೆಯಿಂದ ಊಟ ಮುಗಿಸಿ.. ಅಲ್ಲೆ ಪುಣ್ಯಕ್ಕೆ ನಮಗೆ ತಿರುಮಲೆಯಲ್ಲಿ ಬೆಂಗಳೂರಿಗೆ ಬಸ್ ದೊರೆತುದ್ದರಿಂದ ಹತ್ತಿ ಕುಳಿತೆವು... ಸರಿಯಾಗಿ 5:30pm ಗೆ ಬಸ್ ತಿರುಮಲೆಯಿಂದ ಹೊರಟು ತಿರುಪತಿಗೆ ಬಂದಿಳಿಯಿತು. ಅಲ್ಲಿಂದ 7ಕ್ಕೆ ಹೊರಟು ಮಧ್ಯ ರಾತ್ರಿ 1ಕ್ಕೆ ಬೆಂಗಳೂರು ತಲುಪಿದೆವು...ಕ್ಷೇಮವಾಗಿ....
ಅಲಿಪಿರಿ

ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಅಷ್ಟೊತ್ತಿನಲ್ಲಿ ಮನೆ ಸೇರುವುದಕ್ಕೆ ವ್ಯವಸ್ಥೆಮಾಡಿಕೊಂಡಿದ್ದರು... ರಾಜೇಶನನ್ನು ಅವನ ಮನೆಗೆ ಬಿಟ್ಟು ನಾನು ಮನೆ ಸೇರಿದಾಗ ಸಮಯ ಮಧ್ಯರಾತ್ರಿ 2ಗಂಟೆ..ಸರಿಯಾಗಿ ಕನ್ನಡಿಯಲ್ಲಿ ಮುಖ ನೋಡಿಕೊಂಡು 10ಗಂಟೆಗಳ ಮೇಲಾಗಿತ್ತು... ತಲೆಯೆಲ್ಲಾ ಇನ್ನು ಅದೇ ಗುಂಗಿನಲ್ಲಿತ್ತು... ನಾವು ತಿರುಪತಿಗೆ ಹೋದದ್ದು ಕೇವಲ 2 ದಿವಸ..ಒಂದು 5 ದಿನಗಳಿಗೆ ಆಗುವಷ್ಟು ಅನುಭವಾಗಿತ್ತು.



ದಿಂಬಿಗೆ ತಲೆ ಇಟ್ಟವನು ಮತ್ತೆ ಎದ್ದದ್ದು ನನ್ನ ಮೊಬೈಲ್ ಸೋಮವಾರ ಮಧ್ಯಾಹ್ನ 1:10ಕ್ಕೆ ರಿಂಗುಣಿಸಿದಾಗ..ಅದು ಆಫೀಸಿನಿಂದ ಬಂದ ಕರೆಯಾಗಿತ್ತು..




ತಿರುಪತಿಗೆ ಹೋಗುವ ಮುನ್ನ ಸರಿಯಾಗಿ ಪ್ಲಾನ್ ಮಾಡಿ ಹೋಗಿ, ಬೆಂಗಳೂರಿನ ವಯಾಲಿಕಾವಲ್ ನಲ್ಲಿ "ಸುದರ್ಶನ" ಕ್ಕೆ ticket ದೊರೆಯುತ್ತದೆಯಂತೆ..ವಿಚಾರಿಸಿ ನೋಡಿ... ಪ್ಲಾನ್ ಮಾಡದೆ ಹೋದರೂ ಅದೃಷ್ಟ ನಿಮ್ಮೊಡನೆ ಇದ್ದರೆ ಎಲ್ಲವೂ ಸೂಸೂತ್ರವಾಗಿ ನಡೆದೀತು..ಇಲ್ಲವಾದರೆ ಗೋವಿಂದಾ ಗೋವಿಂದಾ...



Coffee,Ice Thunder, Gandhi Bazaar

Friday, July 6, 2007



"ಕಾಫಿ" ಹೀಗೊಂದು SMS ಕಿರ್ರ್ ಎಂಬ ಸದ್ದೊಂದಿಗೆ ನನ್ನ ಮೊಬೈಲಿನ Inbox ಸೇರುತ್ತದೆ.
"ರಯ್ಯಾ!..7:30 " ಪ್ರತಿಯಾಗಿ ನನ್ನ ಮೊಬೈಲಿನಿಂದ ಆತನೆಡೆಗೆ ಸಾಗುತ್ತದೆ....

ಯಾರದರೂ ನೋಡಿದರೆ ಇದ್ಯಾವ ಪರಿಯ ಸಂಭಾಷನೆ ಯೆಂದು ಯೋಚಿಸುವರೇನೊ..
ಏನೋ dealಗಳು ನಡೆಸುವಹಾಗೆ....

ಇದರ ಸಾರಂಶ ಇಷ್ಟು ನಾನು ಮತ್ತೆ ಅರುಣ ನಾಳೆ ಬೆಳಿಗ್ಗೆ 7:30 ಕ್ಕೆ ಕಾಫಿ ಹೀರಲು Gandhi bazaarನಲ್ಲಿರುವ Ice Thunder ನಲ್ಲಿ ಭೇಟಿ ಆಗುವುದೆಂದು.. ಹೆ ಹೆ ಹೆ

ಹೀಗೆ ನಮ್ಮ ಕಾಫಿ ಭೇಟಿ ಶುರುವಾಗಿ ಸರಿಸುಮಾರು 5-6 ತಿಂಗಳು ಕಳೆದಿವೆ.. ಮುಂಚೆ ಆದರೆ "ಏನಪ್ಪಾ free ಇದ್ಯ?? ಏಷ್ಟೊತ್ತಿಗೆ ಸಿಗ್ತ್ಯ..?? " ಎಲ್ಲಿ ಭೇಟಿ ಆಗೋದು ಹೀಗೆಲ್ಲ ಸಾಗುತ್ತಿತ್ತು , ಈಗ just "ಕಾಫಿ" ಎಂದರೆ ಭೇಟಿ ನಿಶ್ಚಿತ..... ಸ್ಥಳ ಖಚಿತ
Ice Thunder ಬಿಟ್ಟರೆ ಮಹಾಲಕ್ಷ್ಮಿtiffin ರೂಮ್....ಅಲ್ಲಾದರೆ ಕಾಫಿ ಜೊತೆಗೆ ಒಂದು ಪ್ಲೇಟ್ ಖಾಲಿ ದೊಸೆ ಹೊಡೆಯುವುದು..

ತಿಂದು ತೇಗಿ ಬಿಲ್ ಪಾವಸಿದ ನಂತರ ಅಲ್ಲೇ Gandhi bazaarರನ್ನು ಸುತ್ತುವುದು.... ಅಂದು ನಡೆದ ಘಟನಾವಳಿಗಳು, ಚಲನಚಿತ್ರ ವಿಶ್ಲೇಷಣೆಗಳು , ಅಗಾಗ್ಗೆ ಅಲ್ಲಲೇ ಕಾಣಿಸುವ ವಿನೋದಯಮಯ ಪ್ರಸಂಗಗಳು.. ಎಲ್ಲ ಅಂಗಡಿಗಳ ನಾಮಫಲಕಗಳನ್ನು ಓದಿ ಅದರ ಬಗ್ಗೆ commentisiಸುವುದು. ಅರುಣನಂತು ಎಲ್ಲಾದರೂ ತಪ್ಪು ತಪ್ಪಾಗಿ ಬರೆದಿದ್ದರೆ.."ನೋಡು ಅದು ಹೀಗೆ ಬರೀಬೇಕಿತ್ತು...ನೆಟ್ಟಗೆ ಬರೆಯಕ್ಕೆ ಬರಲ್ಲ ಇವ್ರಿಗೆಲ್ಲ" ಅನ್ನುವುದು. ಹೀಗೆ ಹರಟೆಗೆ ಒಂದೇ ಎರಡೇ ವಿಷಯಗಳು..........

Ice Thunderಗೆ ಹೋಗಿ ಹಬೆಯಾಡುತ್ತಿರುವ ಕಾಫಿ ಲೋಟ ಹಿಡಿದು, ಅಲ್ಲೇ ಮೆಟ್ಟಿಲ ಮೇಲೆ ಕುಳಿತು ಹರಟುವುದು. ಅರುಣನಂತು ಒಮ್ಮೊಮ್ಮೆ "ತುಂಬ ಕಾಫಿ ಕುಡೀಬಾರದು ಕಣೋ ಆರೋಗ್ಯಕ್ಕೆ ಒಳ್ಳೇದಲ್ಲ ಹಾಗೆ ಹೇಳುವವನ ಕೈಯಲ್ಲೆ ಹಬೆಯಾಡುತ್ತಿರುವ ಕಾಫಿ ಲೋಟ" ಹೆ ಹೆ ಹೆ.

ಆತನಿನ್ನೂ ಮಾತಾಡುತ್ತಲೇ ಒಂದೊ ಎರಡೊ ಸಿಪ್ ಮಾಡಿರುತ್ತಾನೆ ಅಷ್ಟರಲ್ಲಿ ನನ್ನ ಕಾಫಿ ಪಿನಿಶ್" ಲೋ ಏನೋ ಅಷ್ಟು ಬೇಗ ಕುಡೀತೀಯ..ಆಸ್ವಾದಿಸಿ ಕುಡೀಬೇಕಪ್ಪ ಕಾಫಿನ" ಅಂತ ಸಂದೇಶ...ಹೆ ಹೆ ಹೆ

ಎಷ್ಟೋ ಸಾರಿ ಕಾಫಿ ಕುಡಿದು ಮುಗಿಸಿ ಸಾಕಷ್ಟು ಬೀದಿ ಸುತ್ತಿ ಬಂದ ಮೇಲೂ ಮತ್ತೊಮ್ಮೆ ಕಾಫಿ ಕುಡಿದದ್ದು ಉಂಟು ಕಾಫಿಗೆ ಲೆಕ್ಕ ಇಡುವವರ್ಯಾರು.....ಅಲ್ಲವೆ??

ಹೀಗೆ ಸಮಯ ಸಿಕ್ಕಗಲೆಲ್ಲಾ Ice Thunder ಗೆ ಹೋಗಿ ಕಾಫಿ ಕುಡಿಯುವ ಅಭ್ಯಾಸ ಮಾಡಿಸಿದ್ದು ಮಾತ್ರ ಅರುಣ. ಹೀಗೆ ಒಂದು ದಿನ online ಇದ್ದಾಗ..ಆತ ಕೇಳಿದ್ದ.. light ಆಗಿ ಕಾಫಿ ಹೊಡ್ಯೋಣ ಬರ್ತೀರಾ"?? ಎಂದು ನನಗೆ scrap ಹಾಕಿದ್ದ.. ಇದೇನಪ್ಪಾ ಇದು ಎಂದು..ಕಾಫಿ ತಾನೆ ಹೋಗಿ ಬಂದರಾಯಿತು ಅಂತ ಹೋಗಿದ್ದೆ. ನಮ್ಮ ಗೆಳೆತನದ ಆರಂಭದ ದಿನಗಳಲ್ಲಿ "ನೀವು","ನಿಮ್ಮ"," ಏನು ಮಾಡುತ್ತೀರಾ"..ಹೀಗೆ ಮಾತಾಡಿಸುತಿದ್ದೆ ಅರುಣ ಕೂಡ ಹಾಗೆ ಮಾತಾಡಿಸುತ್ತಿದ್ದ, ಕಾಲಕ್ರಮೇಣ "ಲೋ" "ಎದ್ದುಹೋಗೋಲೋ", "ಬಾರೋ" ಆಗಿದೆ.....



ಹೀಗೆ ಅದು ಕ್ರಮೇಣ ಅಭ್ಯಾಸವಾಗಿ ಹೋಯಿತು.

ನಮ್ಮ ಈ ಕಾಫಿಯಿಂದ ಬೆಳೆದ ಸ್ನೇಹ ಸದಾಕಾಲ ಹೀಗೆ ಇರಲಿ ಎಂದು ಆಶಿಸುತ್ತೇನೆ. :-)
ನಾವಿಬ್ಬರು ಅಲ್ಲಿ ಅಂದರೆ Gandhi Bazaarನಲ್ಲಿ ನಡೆದಾಡುತ್ತಿದ್ದಾಗ ನಡೆದ ಒಂದಷ್ಟು ಮೋಜಿನ ಪ್ರಸಂಗಗಳು..

ಒಮ್ಮೆ ಹೀಗೆ ಸಂಜೆ ಎಂಟರ ಸಮಯವಿರಬಹುದು ಒಬ್ಬ ಸೇಲ್ಸ್ ಮನ್ ನಮ್ಮ ಬಳಿ ಬಂದು "ಸಾರ್..bed lamp ಇದು ತಗೊಳಿ ಸಾರ್.. rate ....."ಎಂದ.

ಅರುಣನು ಅದಕ್ಕೆ ಪ್ರತ್ಯುತ್ತರವಾಗಿ

"ಹೆ ಹೆ ಹೆ ಬೆಡ್ ನಲ್ಲಿ ಇರೋವಾಗ ಬೆಡ್ ಲ್ಯಾಂಪ್ ಯಾಕ್ರೀ"..ಎಂದ

ನನಗೆ ನಗು ತಡೆಯಲಾಗಲಿಲ್ಲ ,ಇಬ್ಬರೂ ನಗಲಾರಂಭಿಸಿದೆವು, ಅದೆನ್ನೆನಿಸಿತೋ ಏನೋ ಮುಂದಿನ ಪ್ರಶ್ನೆ ಹಾಕದೆ ಸೇಲ್ಸ್ ಮನ್ ಅಲ್ಲಿಂದ ಕಾಲ್ಕಿತ್ತ..ಈ ರೀತಿಯ ತರಲೆ ಪ್ರಶ್ನೆಯನ್ನು ಖಂಡಿತ ಆತ ನಿರೀಕ್ಷಿಸಿರಲಾರ, ಮುಂದೆ ಆತ ಯಾವ ಗಿರಾಕಿಯ ಬಳಿಯೂ bed lamp ಶಬ್ಧಪ್ರಯೋಗ ಮಾಡುವುದಿಲ್ಲವೆಂದು ನಂಬಿದ್ದೇವೆ.. ಹೆ ಹೆ ಹೆ..

ಇನ್ನೊಮ್ಮೆ ಹಾಗೆ ನಡೆದು ಹೋಗುತ್ತಿರುವಾಗ..ಒಂದು ಚಿಕ್ಕ ಹುಡುಗಿ ದೇವರ ಪಟವನ್ನು ಕೈಲಿ ಹಿಡಿದು..ಭಿಕ್ಷೆಗೆ ನಮ್ಮ ಮುಂದೆ ಕೈಚಾಚಿತು . ಅರುಣ "ನಾನು ದೇವರನ್ನ ನಂಬಲ್ಲ.. ನಿಂಗೆ ಹಣ ಕೊಡುವುದಿಲ್ಲವೆಂದು ಕೈಆಡಿಸಿಬಿಟ್ಟ"..
ಆ ಹುಡುಗಿ ಇವನನ್ನು ಬೆರಗುಗಣ್ಣಿನಿಂದ ದುರುಗುಟ್ಟಿ ಬಂದ ದಾರಿಗೆ ಸುಂಕವಿಲ್ಲವೆಂದು ಮುಂದೆ ಹೊರಟು ಹೋಯಿತು..ನನಗಂತೂ ಆ ಪ್ರಸಂಗ ವಿನೋದಮಯವಾಗಿ ಕಂಡಿತು..

ಮತ್ತೊಮ್ಮೆ ನಾವು ಇನ್ನೇನು ಮನೆಗೆ ಹೊರಡಲನುವಾಗಿದ್ದೆವು ಆಗ ಯಾರೊ ಪುಣ್ಯಾತ್ಮರು!! Honda Activaದ seatನ ಮೇಲೆಯೆ ಗಾಡಿಯ ಕೀಲಿಕೈ ಇಟ್ಟಿದ್ದರು!!!, ಅಲ್ಲಾ ಈಗಿನ ಕಾಲದಲ್ಲೂ ಅಷ್ಟು ಉದಾರಿಗಳೇ..ಎಲ್ಲಾರಿಗೂ ಕಾಣಿಸುವಂತೆ ಇಡುವುದು..ಕಳ್ಳಪ್ರಜೆ ಸುಲಭವಾಗಿ ಗಾಡಿಯನ್ನು ಕದಿಯಬಹುದಿತ್ತು... ನಾವು ಅದರ ಕೀಲಿಕೈಯನ್ನು foot rest ಮೇಲೆ ಇಟ್ಟು ಗಾಡಿ ತನ್ನ ಯಜಮಾನನಿಗೆ ಸೇರಲಿ ಎಂದು ಆಶಿಸಿ ಹೊರಟೆವು...

ಪ್ರಪಂಚದಲ್ಲಿ "ಕಾಫಿ" ಎಂಬ ಪೇಯ ಅಸ್ತಿತ್ವದಲ್ಲಿರುವವರೆಗು ನಮ್ಮ Ice Thunder ಭೇಟಿ ಹೀಗೆ ಸಾಗುತ್ತಿರಲಿ ಎಂದು ಆಶಿಸುತ್ತ ಈ ಲೇಖನದ ಮೂಲಕ ಅರುಣನಿಗೆ ನನ್ನದೊಂದು ಹೃತ್ಪೂರ್ವಕವಾದ ಧನ್ಯವಾದಗಳನ್ನ ಅರ್ಪಿಸುತ್ತೇನೆ.. :-)

ವಿಶೇಷ ಸೂಚನೆ: "ಮೇಲೆ ಎಲ್ಲೆಲ್ಲಿ Ice Thunder ಅಂತ ಇದೆಯೊ ಅಲ್ಲೆಲ್ಲಾ "ಬಾಲಾಜೀಸ್ ಉಪಹಾರ್" ಎಂದು ಬದಲಾಯಿಸಿಕೊಳ್ಳಿ. ವಾಸ್ತವದಲ್ಲಿ ನಾವು ಭೇಟಿ ಆಗುತ್ತಿದ್ದು ಬಾಲಾಜೀಸ್ ಉಪಹಾರ್ ನ ಎದುರುಗಡೆಯೆ ,ಕಾಫಿ ಹೀರುತ್ತಿದದ್ದು ಕೂಡ ಅಲ್ಲೇ, ಪಕ್ಕದಲ್ಲೇ ಸ್ವಲ್ಪ ಮಟ್ಟಿಗೆ ಖ್ಯಾತಿ ಪಡೆದ Ice Thunder ಇರುವುದರಿಂದ ನಾವುಗಳು Ice Thunder ಎಂದೇ ಸಂಭೋದಿಸುತ್ತಿದೆವು. ಮೊನ್ನೆ ಮೊನ್ನೆ ಗಮನಿಸಿದಾಗ ತಿಳಿಯಿತು ನಮ್ಮ ಶ್ಲಾಘನೆಗೆ ಒಳಗಾಗಿರುವುದು "ಬಾಲಜೀಸ್ ಉಪಹಾರ್" ನ ಕಾಫಿ ಎಂದು.. ರೂಡಿಯಿಂದ Ice Thunder ಎಂದೇ ಕರೆಯುವುಧು ಅಭ್ಯಾಸವಾಗಿಬಿಟ್ಟಿದೆ.. ನೀವು ಸರಿ ಮಾಡಿಕೊಳ್ಳಿ.. ಮಾಡ್ಕೊಳ್ತೀರ ಅಲ್ವೇ????

ಹೀಗೊಂದು ನಿದ್ದೆ ಪ್ರಹಸನ

Thursday, June 28, 2007

ನಾನು ಅರುಣ ಮೈಸೂರಿಗೆ ಹೋಗಿ ಶ್ರೀನಿವಾಸನ ಜೊತೆಗೂಡಿ ಮೈಸೂರನ್ನು ಸುತ್ತಿ ಬರೋಣವೆಂದು ನಿರ್ಧರಿಸಿದೆವು. ಅರುಣ್ ಮೈಸೂರಿಗೆ ಟ್ರೈನ್ ನಲ್ಲಿ ಹೋಗೋಣವೆಂದ..ನಾನು ಟ್ರೈನ್ ನಲ್ಲಿ ಪಯಣಿಸಿ ಬಹಳ ಕಾಲವಾಗಿತ್ತು ಸರಿಸುಮಾರು ೬ ವರ್ಷ.. ಸರಿಯೆಂದು ಹೊರಟೆವು.....ಮಾರ್ಗಮಧ್ಯಲ್ಲಿ ಸಾಕಷ್ಟು ಫೋಟೋಗಳನ್ನು ಕ್ಲಿಕ್ಕಿಸಿದೆವು. ನಾವು ಮನೆ ಬಿಟ್ಟಾಗ ಒಂದು ಗಂಟೆ....ಮೈಸೂರನ್ನು ತಲುಪಿದಾಗ 7 ಗಂಟೆ .ಇದೆಲ್ಲ ಒತ್ತಟ್ಟಿಗಿರಲಿ.....ಹೀಗೆ ತೆವಳಿಕೊಂಡು ಮೈಸೂರಿನ ಶ್ರೀನಿವಾಸನ ಮನೆಯನ್ನು ಸೇರಿದೆವು.. ವಿವೇಕನು ಸಹ ನಮ್ಮ ಜೊತೆಗೂಡಿದ, ನನಗೆ ಆಗಲೇ ನಿದ್ದೆ ಹತ್ತುತ್ತಿತ್ತು..

ನಾನು ದಿಂಬಿಗೆ ತಲೆ ಇಟ್ಟೆನೋ ಇಲ್ಲವೊ ಎಲ್ಲಾರೂ ಶುರು ಮಾಡಿದರು.."ಏ ಥೂ!!ನಿನ್ನ ನಾಚಿಕೆ ಆಗಲ್ವ..ಇಷ್ಟ್ ಬೇಗ ನಿದ್ದೆ ಮಾಡ್ತ್ಯ?? ಇಲ್ಲಿಗೆ ಬಂದದ್ದು ನಿದ್ದೆ ಮಾಡಕ್ಕಾ??".....ಹೀಗೆ ಸಾಗುತ್ತಿತ್ತು ಅರುಣನ ಹಾಗೂ ಶ್ರೀನಿವಾಸನ ಪ್ರಶ್ನಾವಳಿ. ಶ್ರೀನಿವಾಸ ನಾನು ನಿದ್ದೆ ಗೆ ಶರಣಾಗಬಾರದೆಂದು.. ನನ್ನ ಕಾಲು ಹಿಡಿದೆಳೆಯುತ್ತಿದ್ದ... ಕೊನೆಗೆ ಹೇಳಿದೆ "ಕಾಫಿ ಮಾಡ್ಕೊಂಡ್ ಬಾ ಮಾರಯ"..ಎದ್ದೇಳ್ತೀನಿ.... ಅದಕ್ಕೆ ಮನೆಯಲ್ಲಿ ಹಾಲಿಲ್ಲವೆಂದೊ ಕಾಫಿ ಸಾಧ್ಯವಿಲ್ಲವೆಂದೊ....ಬೇಕಿದ್ದರೆ black tea ಮಾಡ್ಕೊಡ್ತೀನಿ ಅಂದ...ಎನೋ ಒಂದು ಮಾಡ್ಕೊಂಡ್ ಬಾಪ್ಪ... ಆಂದು ಎದ್ದು ಕೂರಲು ಪ್ರಯತ್ನಿಸಿದೆ.

ಮನಸ್ಸಿನ್ನಲ್ಲೇ ಅರುಣನಿಗೆ ಹಾಗು ಶ್ರೀನಿವಾಸನಿಗೆ ಶಪಿಸುತ್ತಿದ್ದೆ...." ಚೆ ಚೆ ಸರಿಯಾಗಿ ನಿದ್ದೆ ಮಾಡಕ್ಕೂ ಬಿಡ್ತಿಲ್ಲ, ಅದೇನು ನಿದ್ದೆ ಕೆಡ್ತಾರೋ ಪಾ ಜನ". ನನ್ನ ಸ್ತಿತಿಯನ್ನು ಕಂಡು ನಾನೇ ಹಲುಬಿಕೊಳ್ಳುತ್ತಿದ್ದೆ.....
ನನಗೆ ನಿದ್ದೆ ಹೋದ ಕೂಡಲೇ...ಯಾರದರೂ ಕರೆದರೂ ಸಾಕು ಎಚ್ಚರವಾಗಿಬಿಡುತ್ತದೆ.. ಎಲ್ಲರೂ ನನ್ನ ಹಾಗೆಯೇ ಇರುತ್ತಾರೆಂಬ ಭಾವನೆಯಲ್ಲಿದ್ದೆ, ಆದರೆ ಅದರ ಮಾರನೆಯ ದಿನದ ಸಂಜೆಯ ಬೆಳವಣಿಗೆಗಳನ್ನು ನೋಡಿ ಆ ನನ್ನ ಅರಿವಿಕೆಯನ್ನು ಕಿತ್ತೆಸೆದೆ....

ಅಂದು ರಾತ್ರಿ ಬಹಳಷ್ಟು ಹರಟಿದೆವು....ಎಲ್ಲರೂ ಮಲಗಿದಾಗ ಸುಮಾರು 3:30 ಇರಬಹುದು

ಮತ್ತೆ ಬೆಳಿಗ್ಗೆ ಶ್ರೀನಿವಾಸ ಬೇಗನೆ ಎದ್ದು ತನ್ನ ಸ್ನಾನಾದಿ ಕಾರ್ಯಗಳನ್ನು ಮುಗಿಸಿ ಮತ್ತೆ ನನ್ನ ಎಬ್ಬಿಸುವುದಕ್ಕೆ ಶುರು ಮಾಡಿದ್ದ..ಜಗ್ಗಾಡೋದು, ಎಳೆದಾಡೋದು ಹೀಗೆ........ಸಾಕಪ್ಪಾ ಇವನ ಹಿಂಸೆ ಯೆಂದು ಎದ್ದು ದೇಹವನ್ನು ಶುಚಿ ಮಾಡಿಕೊಂಡು ಬಂದೆ.........

ನಾ ಬರುವ ಹೊತ್ತಿಗೆ..ಶ್ರೀನಿವಾಸ ಕುರ್ಚಿ ಮೇಲೆ ಕುಳಿತಲ್ಲಿಯೇ ನಿದ್ರಿಸಲು ಶುರು ಮಾಡಿದ್ದ....ಪಾಪ ರಾತ್ರಿ ತುಂಬಾ ಹೊತ್ತು ಎದ್ದಿದ್ದ ಬೆಳಿಗ್ಗೇನೆ ಬೇಗ ಎದ್ದಿದ್ದಾನೆ ಅಂದು ಕೊಳ್ಳುತ್ತಿದ್ದೆ..

ಅವನು ನಿದ್ರಿಸುವ ಭಂಗಿ ಬಹಳ ವಿನೋದದಾಯಕವಾಗಿತ್ತು, comedy ;-)

ನಾನು ಮೆಲ್ಲನೆ ಅವನ ಬಳಿ ಹೋಗಿ ನನ್ನ ಮೊಬೈಲ್ ಅನ್ನು silent mode ಗೆ ಹಾಕಿ ಸರಿಯಾಗಿ zoom focus ಮಾಡಿ ಫೊಟೊ ಒಂದನ್ನು ಕ್ಲಿಕ್ಕಿಸಿದೆ ,ಇಷ್ಟೆಲ್ಲ ಜಾಗರೂಕನಾಗಿ ತೆಗೆದುದ್ದರ ಉದ್ದೇಶ..ಅವನಿಗೆ ಎಲ್ಲಿ ಎಚ್ಚರವಾಗಿಬಿಡುತ್ತದೋ ಎಂಬ ನನ್ನ ಅಳುಕು.... :-)

ಅಂದು ಚಾಮುಂಡಿ ಬೆಟ್ಟ, ನಂಜನಗೂಡು ಎಲ್ಲವನ್ನು ಸುತ್ತಿ ಹೈರಾಣಗಿ ದಣಿದು ಮನೆಗೆ ವಾಪಸ್ಸದೆವು. ಶ್ರೇಯಸ್ ಕೂಡ ನಮ್ಮ ಜೊತೆಗೂಡಿದ್ದ , ಸುಮಾರು ಒಂದುಗಂಟೆ ಹರಟಿ ಅವನು ಬೆಂಗಳೂರಿನ ಹಾದಿಯನ್ನು ಹಿಡಿದ ತನ್ನ ಹೊಸ Bajaj Pulsar 200cc ಯನ್ನು ಹತ್ತಿ..............................

ಅವನು ಹೊರಟ ನಂತರ ಒಬ್ಬಬ್ಬರಾಗಿ ನಿದ್ದೆಗೆ ಜಾರಿದರು....ಶ್ರೀನಿವಾಸ ಒಂದು ಕಡೆ, ಅರುಣ ಒಂದು ಕಡೆ... ನಾನು ಅಲ್ಲೇ ಬಿದ್ಕೊಂಡೆ.....ಮುಂದೆ ನಡೆಯುವ ಘಟನಾವಳಿಗಳ ಅರಿವಿಲ್ಲದೆಯೇ!!.. ನಿದ್ದೆಗೆ ಜಾರಿದ್ದೆ. ಅದೇಕೂ ಏನೋ ನಿದಿರಾದೇವಿಯು ನನಗೆ ಒಲಿಯಲಿಲ್ಲ..ಸುಮಾರು ಒಂದು ಗಂಟೆ ಆಗಿರಬಹುದು..ಎಚ್ಚೆತ್ತುಬಿಟ್ಟೆ. ನನಗೆ ಸಾಧಾರಣವಾಗಿ ಮಧ್ಯಾಹ್ನ ಸಂಜೆಗಳಂದು ನಿದ್ರೆ ಬರುವುದಿಲ್ಲ.. ಈವರೀರ್ವರೊ ಲೋಕದ ಪರಿವೆ ಮರೆತು "ಬಸೋ" ಎಂದು ನಿದ್ದೆ ಹೊಡೀತಿದ್ರು.............

ಎದ್ದು ಕುಳಿತು ಟೀವಿ ನೋಡಲು ಆರಂಭಿಸಿದೆ.. ಒಂದಷ್ಟು ಹಾಡುಗಳು ನೋಡುತ್ತ timepass ಮಾಡುತ್ತಲಿದ್ದೆ, Bore ಆಗಕ್ಕೆ ಶುರು ಆಯಿತು, ಒಂದುಸಲ ಕೂಗಿದೆ....ಶ್ರೀನಿವಾಸ 5:30 ಆಯ್ತು ಎದ್ದೇಳೊ...ಅಂತ..ಉಹುಂ!! sound -e ಇಲ್ಲಾ.. ಅರುಣನಿಗೆ ಹೇಳಿದೆ , ಅವನು 10ನಿಮಿಷ ರಾಜ..ಎದ್ಬಿಡ್ತೀನಿ..ಸರಿ ಸರಿ..ಅಂದುಕೊಂಡು ಸುಮ್ಮನಾದೆ...

System ON ಮಾಡಿದೆ....ಪಾಪಿಷ್ಟ ಶ್ರೀನಿವಾಸ System ಗೆ password ಇಟ್ಟಿದ್ದ, ಒಂದಷ್ಟು try ಮಾಡಿದೆ, work ಆಗ್ಲಿಲ್ಲ.... ಎಬ್ಬಿಸಲು ಮನಸಾಗಲಿಲ್ಲ!!!....ನನಗೆ ಮನಸಿದ್ದರೂ ಅವನು ಎಳುತ್ತಿರಲಿಲ್ಲ..!!!. ಅಂದು ನನ್ನ ಗ್ರಹಗತಿ ಸಂಪೂರ್ಣವಾಗಿ ಕೆಟ್ಟಿತ್ತೆಂದು ತೋರಿ ಬರುತ್ತದೆ, current ಹೋಯಿತು.. ಪೇಚಿಗೆ ಬಿದ್ದು ಮತ್ತೆ ಎಬ್ಬಿಸಲು ಅನುವಾದೆ. ಅರುಣ್ ೧೦ ನಿಮಿಷ ೧೦ ನಿಮಿಷ ಅನ್ನುತ್ತಲೇ ಇದ್ದ....ಶ್ರೀನಿವಾಸನ ಕಡೆ ಇಂದ ಮಾತ್ರ sound ಇಲ್ಲ, ಅಯ್ಯೊ ಕರ್ಮವೇ ಎಂದು ನನ್ನನ್ನು ನಾನೆ ಹಳಿದುಕೊಳ್ಳುತ್ತ.. ಗೆಳೆಯರಿಗೆ SMS ಮಾಡಲು ಶುರುಮಾಡಿದೆ. ಸೋಮ ನನ್ನು ಬಿಟ್ಟು ಬೆರೆ ಯಾರೂ reply ಅತ್ತಲಿಂದ ಇತ್ಲಾಗೆ ಇತ್ತಲಿಂದ ಅತ್ಲಾಗೆ ಒಡಾಡುತ್ತಿದ್ದೆ. ನನಗೆ ಅನ್ನಿಸುತಿತ್ತು ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದು..ಏನಾದರೊಂದು ಮಾಡಲೇಬೇಕು ಎಂದು , ಹಸಿವಾಗುತಿತ್ತು..ಕಾಫಿ ಮಾಡೋಣವೆಂದರೆ ಹಾಲಿಲ್ಲ ಪಕ್ಕನೆ ಒಂದು idea ಹೊಳೀತು ನನ್ನ ಮೊಬೈಲ್ ನಲ್ಲಿ alarm set ಮಾಡಿ ಹೊರಟೆ....ಇಬ್ಬರಿಗೂ ಎಚ್ಚರ ಆಗುತ್ತೆ ಅಂತ ಭಾವಿಸಿ set ಮಾಡಿ ನಾನು ಮಹಡಿ ಮೇಲೆ ಹೋಗಿಬಿಟ್ಟೆ. ಮೇಲೆ ಹೋಗಿ ನನಗೆ ನಾನೆ "ಶಬ್ಬಾಸ್ ಗಿರಿ " ಕೊಟ್ಟುಕೊಳ್ಳುತ್ತಲಿದ್ದೆ .ಈ ಪ್ಲಾನ್ 100% successful ಅಂತ.............

5 ನಿಮಿಷದ ತರುವಾಯ ಇಳಿದು ಬಂದೆ ನೋಡಿದರೆ ಎನೊಂದು ಆಗಿಲ್ಲವೆಂಬಂತೆ ಇಬ್ಬರು ಇನ್ನು ಮಲಗಿದ್ದಾರೆ. ನನಗೆ ಆಶ್ಚರ್ಯ.. ಅರುಣ್ ಅಂದ ಕೂಗಿದರೆ..ಆತ "ನೀನು alarm ಇಟ್ಟಿದ್ದು, ಅದಾಗದೆ ನಿಂತು ಹೋಯಿತು ಅನ್ಸುತ್ತೆ" ಅಂದ..

ನನಗೆ ಕಣ್ಣಾಲಿಗಳು ತುಂಬಿ ಬರುವುದೊಂದು ಬಾಕಿ ಇತ್ತು..... ನನ್ನ ತಾಳ್ಮೆ ಹಾರಿ ಹೋಗಿತ್ತು..

"ಲೋ ಏದ್ದೇಳೊ ಹೋಗೋಣ..ನನಗೆ ಹಸಿವಾಗುತ್ತಿದೆ.." ಸರಿ ಸರಿ ಹೋಗೋಣವಂತೆ....ಶ್ರೀನಿವಾಸನನ್ನು ಎಬ್ಬಿಸು ಅಂದ,
ಮೈಮೇಲೆ ಜಿರಲೆ ಬಿದ್ದವನಂತಾಗಿ....ಲೋ ಆಗಲ್ಲಪ್ಪಾ ನೀನೇ ನೋಡ್ಕೋ ಅವ್ನನ್ನ ಅಂದುಬಿಟ್ಟೆ, ನೋಡು ನೀನು ಹೂ! ಅಂದರೆ ಒಂದು ಚೆಂಬಿನಲ್ಲಿ ನೀರು ತಂದು ಸುರಿತೀನಿ....ಆಗ ಅವನು ಏಳಬಹುದು ಎನನ್ನುತ್ತೀಯ???" ಎಂದೆ..
ಅದಕ್ಕೆ ಅರುಣ ಹಾಗೆಲ್ಲಾ ಮಾಡಬೇಡ..ಇರು ನಾನು try ಮಾಡ್ತೀನಿ ಅಂದ
"ಶ್ರೀನಿವಾಸ..ಏಳಪ್ಪಾ ರಾಜ....ಹೋಗೋಣ time ಆಯ್ತು" ಇಷ್ಟು ಅಂದದ್ದೇ ತಡ ಶ್ರೀನಿವಾಸ ಎದ್ಬಿಟ್ಟ.. ನನಗೆ ಆ ಕ್ಷಣದಲ್ಲಿ ಉಂಟಾದ ಭಾವವನ್ನು ವಿವರಿಸಲು ಸಾಧ್ಯವಿಲ್ಲ ಬಿಡಿ...

ಅರುಣ ಹಲ್ಲು ಕಿರಿಯುತಿದ್ದ.."ನೋಡೋ ನಿನಗೆ ಎಬ್ಬಿಸುವುದಕ್ಕೆ ಬರಲ್ಲ" ಅಂತ

"ಲೋ ನಾನು ಅವಾಗಲಿಂದ time time ಗೆ ಅವ್ನನ್ನ ಎಬ್ಬಿಸಿ ಎಬ್ಬಿಸಿ set ಮಾಡಿದ್ದೀನಿ ಅದು ನಿನಗೆ work ಆಯ್ತು ಅಷ್ಟೆ"..ಸುಮ್ನಿರಪ್ಪಾ ಅಂದೆ...

ಅವನು ಸಹ ready ಆಗಿ ಊಟ ಮಾಡಲು ಮನೆಯಿಂದ ಮೂವರೂ ಹೊರಬಿದ್ದೆವು .

ಆಗ ಹೇಳಿದೆ......"ಲೋ ಶ್ರೀನಿವಾಸ ನೀನು ಹೀಗೆ ಅಂತ ನನಗೆ ಮುಂಚೇನೆ ಗೊತ್ತಿದ್ದಿದ್ದರೆ...ಬೆಳಿಗ್ಗೆ ನೀನು ನಿದ್ದೆ ಮಾಡ್ತಿರೋ pose ನ ನಾನು ರಾಜಾರೋಷವಾಗಿ ತೆಗೆಯುತ್ತಿದ್ದನಲ್ಲೋ.. ಥೂ ನಿನ್ನ!!!
ಹಾಗಾ ಮಲಗೋದು ಕುಂಭಕರ್ಣನ ಅಪರಾವತಾರ ನೀನು" ಮನಸ್ಸಿನಲ್ಲಿ ಮಡುಗಟ್ಟಿದ್ದ ದುಖವನ್ನೆಲ್ಲ ಹೊರಹಾಕುತ್ತಿದ್ದೆ ಅರುಣ ಮತ್ತು ಶ್ರೀನಿವಾಸ ಮನಸಾರೆ ನಗುತ್ತಿದ್ದರು.



ಹೀಗೆ ನಮ್ಮ ಪ್ರವಾಸವನ್ನು ಮುಗಿಸಿ..ಮೈಸೂರಿನಿಂದ ಹೊರಡಲುನುವಾದೆವು....ಶ್ರೀನಿವಾಸನು ನಮ್ಮನ್ನು ಬಸ್ ನಿಲ್ದಾಣಕ್ಕೆ ಬಂದು ಬೀಳ್ಕೊಟ್ಟ...

ಹೀಗೊಂದು ಮರೆಯಲಾರದ ಅನುಭವ ಮಂಟಪ ನೀಡಿದ್ದಕೆ ನಿನಗೆ ಶರಣು....ಮತ್ತೆ ನಿನ್ನ ನಾನು ಎಬ್ಬಿಸುವ ದುಸ್ಸಾಹಸಕ್ಕೆ ಕೈಹಾಕುವುದಿಲ್ಲ...

ಆ ಮಹಿಷಾಸುರನ ಮೇಲಾಣೆ!!!!!!!!

ಶಿವಾಜಿ - The Boss

Sunday, June 24, 2007




ಬಹುನಿರೀಕ್ಷಿತ ರಜನಿಕಾಂತ್ ಅಭಿನಯದ "ಶಿವಾಜಿ" ಬಿಡುಗಡೆಯಾಗಿದೆ, ಅದೇಕೊ ಏನೋ ಗೊತ್ತಿಲ್ಲ, ಬಹುನಿರೀಕ್ಷಿತ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿಬಿಡುವ ಚಿತ್ರಗಳು ಜನರನ್ನು ಮುಟ್ಟುವುದೆಇಲ್ಲ, ಬಿಡುಗಡೆಗೆ ಮುನ್ನವೆ ಸಾಕಷ್ಟು ಕುತೂಹಲ ಕೆರಳಿಸಿದ್ದ, ತಮಿಳು ಚಿತ್ರರಂಗದ ಘಟಾನುಘಟಿಗಳನ್ನೊಳಗೊಂಡ, 70 ಕೋಟಿ project ನ ಚಿತ್ರ "ಶಿವಾಜಿ", ಇಡೀ ಭಾರತೀಯ ಚಿತ್ರರಂಗ ತಮಿಳುನಾಡಿನೆಡೆಗೆ ಬೆರಗುಗಣ್ಣಿನಿಂದ ನೋಡುತ್ತಲಿತ್ತು... ರಜನೀಕಾಂತ್ ಇಡೀ ಏಷಿಯ ಖಂಡದಲ್ಲೆ ಎರಡನೆಯ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ, ಆತನ ಅಭಿಮಾನಿಗಳು ಪ್ರಪಂಚದ ಉದ್ದಗಲಕ್ಕೂ ಇದ್ದಾರೆ.. ಒಟ್ಟಾರೆ "ರಜನೀಕಾಂತ್" ತಮಿಳು ಚಿತ್ರರಂಗದ ಚುಂಬಕ ಶಕ್ತಿ ಎನ್ನಲಡ್ಡಿಯಿಲ್ಲ...

ಒಟ್ಟಾರೆ ಸಾಕಷ್ಟು ಅಂತೆ ಕಂತೆ ಗಳನ್ನೊಳಗೊಂಡು, ಸಾಕಷ್ಟು ನಿರೀಕ್ಷೆಗಳನ್ನು ಹೊತ್ತು ಪೋಲಿಸ್ ಬಿಗಿ ಬಂದೋಬಸ್ತಿನಲ್ಲಿ ಚಿತ್ರ ಸಾಕಷ್ಟು ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.. ಬಿಡುಗಡೆಗೆ ಮುನ್ನ ಕೆಲವು ದಿನಗಳು ಮುಂಚಿತವಾಗಿ ಪ್ರಮುಖ ಟೀವಿ ವಾಹಿನಿಗಳಲ್ಲಿ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಲಿತ್ತು.. "ಬಿಗ್ ಬಿ" ಎಂದೇ ಖ್ಯಾತಿವೆತ್ತ ಅಮಿತಾಭ್ "ಶಿವಾಜಿ" ಚಿತ್ರದಲ್ಲಿ guest appearance ಅಂತೆ... ತೆಲುಗಿನ "ಮೆಗಾಸ್ಟಾರ್" ಎಂದು ಕರೆಯಲ್ಪಡುವ "ಚಿರಂಜೀವಿ" ಕೂಡ ಇದ್ದಾರಂತೆ... ಹೀಗೆ ಸಾಕಷ್ಟು ಪ್ರಚಾರಪಡೆದಿತ್ತು.. ಪಡೆಯುತ್ತಲಿತ್ತು..

ನನ್ನ ಸ್ನೇಹಿತ ನೊಬ್ಬ ಶತಾಯಗತಾಯ ಮೊದಲವಾರದಲ್ಲೆ ಚಿತ್ರ ನೋಡಬೇಕೆಂದು ತುದಿಗಾಲಲ್ಲಿ ನಿಂತಿದ್ದ.. ನಾನು ಪರಿಪರಿಯಾಗಿ ಹೇಳಿದರೂ ಕೇಳದೆ "ಊರ್ವಶಿ" ಚಿತ್ರಮಂದಿರದ ಬಳಿ ಕರೆತಂದಿದ್ದ... ಅಲ್ಲಿ ಮುಂದಿನ 3 ದಿನಗಳಗೆ ಚಿತ್ರ ಮಂದಿರ housefull ಎಂಬ ಬೋರ್ಡ್ ರಾರಜಿಸುತ್ತಿತ್ತು..ಅದನ್ನು ಲೆಕ್ಕಿಸದೆ ಆತ ಒಳನುಗ್ಗಿದ.. ಅಲ್ಲಿ ಇಲ್ಲಿ ಅಲ್ಲಿ ನಡೆದಾಡುವವರನ್ನು ವಿಚಾರಿಸುತ್ತಿದ್ದ... ಇದ್ಯಾವ ಪರಿಯ ಹುಚ್ಚು ಎಂದು ನಾನು ಒಂದು ಕಡೆ ನಿಂತು ಸುಮ್ಮನೆ ನೋಡುತ್ತಿದ್ದೆ.... ಅಲ್ಲೆ ಸನಿಹದಲ್ಲಿ ಚಿತ್ರದ poster ಅನ್ನು ಕಂಡು.... ನಮ್ಮ ಕನ್ನಡ ಚಿತ್ರರಂಗದ ಯಾವೊಬ್ಬ star ಕೂಡ ಈ ರೀತಿಯ ಜನರಿಗೆ craze ಹುಟ್ಟಿಸಲಿಲ್ಲವಲ್ಲ ಎಂದು ಹಲಬುತ್ತಿದ್ದೆ..ನಮ್ಮದು ಸೀಮಿತ ಮಾರುಕಟ್ಟೆ ಎಂದು ಸುಮ್ಮನಾದೆ..ಅಷ್ಟರಲ್ಲಿ ನನ್ನ ಗೆಳೆಯ ಬಂದು ನನಗೆ ಒಂದು ನಂ. ಸಿಕ್ತು...ನಡಿ ಹೊರಡುವ "try" ಮಾಡ್ತೀನಿ.. ಎಂದು ಮುಖವರಳಿಸಿಕೊಂಡು ಹೇಳಿದ.... ಅಂದು ರಾತ್ರಿ ನನಗೆ ಕರೆ ಮಾಡಿ... "ನನಗೆ ೧೦ ಟಿಕೆಟ್ ಸಿಕ್ಕಿತು..ನೀನು ಬರ್ತಿದ್ಯ ಸುಮ್ನೆ kui kui ಅನ್ನಬೇಡ...ಈ ಭಾನುವಾರ first show ಉರ್ವಶಿ.. ಒಕೆ" ಎಂದು ಪೋನಿಟ್ಟ... ನಾನು ಆತನಿಗೆ ಮುಂಚೆಯೆ ಹೇಳಿದ್ದೆ.. ನನಗೆ ತಮಿಳು ಅಷ್ಟಾಗಿ ಬರುವುದಿಲ್ಲವೆಂದು... ನನಗೆ ಮೊದಲ ವಾರದಲ್ಲೆ ನೋಡಬೇಕೆನ್ನುವ craze ಇಲ್ಲವೆಂದು...ಆದರೂ... ಸಮಯಕ್ಕೆ ಸರಿಯಾಗಿ ಚಿತ್ರಮಂದಿರ ತಲುಪಿ ನನ್ನ ಆಸನದಲ್ಲಿ ಸ್ಥಿತನಾದೆ.. ನನ್ನ ಪಕ್ಕ ಕುಳಿತ ಗೆಳೆಯನಿಗೆ ಹೇಳಿದೆ..." ಲೊ ನನಗೆ ಅಷ್ಟಾಗಿ ತಮಿಳು ಅರ್ಥವಾಗುದಿಲ್ಲ.. ನೀನೇ ಹೇಳಬೇಕು..ಒಕೆ " ಎಂದೆ..ಆತ ತನ್ನ ಗೋಣನಲ್ಲಾಡಿಸಿದ...

ಚಿತ್ರ ಶುರುವಾಯಿತು...ಬೆಳ್ಳಿತೆರೆಯ ಮೇಲೆ "ಸೂಪರ್ ಸ್ಟಾರ್" ರಜನಿ ಎಂದು ಬಂದ ಕೂಡಲೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು... ನನ್ನ ರೋಮಗಳು ಸೆಟೆದು ನಿಂತವು.... ಮೈಯಲೆಲ್ಲ ಮಿಂಚಿನ ಸಂಚಾರ.. ಅಬ್ಬಬ್ಬಾ..ಎಂದು ಸುಮ್ಮನಾದೆ.... ಚಿತ್ರದ ಒಟ್ಟೂ ಕತೆ ಇಷ್ಟು.. ಅಮೆರಿಕೆಯಲ್ಲಿ software architect ಆಗಿರುವ ಶಿವಾಜಿ ಭಾರತಕ್ಕೆ ಬಂದು ತನ್ನ ಹೆಸರಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವ ಆಸೆಯನ್ನು ವ್ಯಕ್ತಪಡಿಸುತ್ತಾನೆ..ಅದನ್ನು ಆರಂಭಿಸಲು ಹೊರಡಿ ಸಾಕಷ್ಟು ರಾಜಕೀಯ ಕುಯುಕ್ತಿಗಳಿಗೆ ಒಳಗಾಗಿ ಲಂಚದ ವಿಶ್ವರೂಪ ಕಂಡು ಕಂಗೆಟ್ಟು ಒಂದು ಹಂತದಲ್ಲಿ ಬರಿಗೈ ಭಿಕಾರಿಯಾಗುತ್ತಾನೆ.. ತದನಂತರ ಕೇವಲ ಒಂದು ರೂಪಾಯಿನಿಂದ ಮತ್ತೆ ಕಳೆದುಕೊಂಡ ಹಣವನ್ನೆಲ್ಲ ಪಡೆದು ಸಮಾಜದ ದುರುಳರಿಂದ "black money" ಯನ್ನು ವಿನಿಯೋಗಿಸಿ ತನ್ನ ಶಿಕ್ಷಣ ಸಂಸ್ಥೆಗಳನ್ನು ಪೂರ್ಣಗೊಳಿಸುತ್ತಾನೆ.. ಈ ಚಿತ್ರದ ನಿರ್ದೇಶಕ "ಅನ್ನಿಯನ್" ಖ್ಯಾತಿಯ ಶಂಕರ್... ಅದು ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಹಣವನ್ನು ದೋಚಿದ ಯಶಸ್ವಿ ಚಿತ್ರ... ಹಾಗಾಗಿ ಸಾಕಷ್ಟು ಭರವಸೆಗಳಿತ್ತು.. ನನಗೆ ಕಂಡ ಹಾಗೆ ಚಿತ್ರದುದ್ದಕ್ಕು ಸರಿಯಾದ ಕಥಾ ಚೌಕಾಟ್ಟೇ ಇಲ್ಲ... "ಲಂಚ" ದಂತಹ ಘನ ಗಂಭೀರ ವಿಷಯವನ್ನು ಹೇಗೆ ಬಗ್ಗುಬಡಿಯುವುದೆಂದು ರಜನಿನ ಮೂಲಕ ಸರಿಯಾಗಿ ಕಟ್ಟುವುದೇ ಇಲ್ಲ... ಪ್ರತಿ frame ನಲ್ಲು ರಜನಿ ಮೆರೆಯುತ್ತಾರೆ..

ರಜನಿಯ image ಗೆ ಕಟ್ಟುಬಿದ್ದು ಸಾಕಷ್ಟು ಅನಾವಶ್ಯಕ ಎಳೆಗಳನ್ನು ಮಧ್ಯ ಬೆಸೆಯಲಾಗಿದೆ... ಹಾಗೆ ನೋಡಿದರೆ ಪ್ರತಿ ರಜನಿ ಚಿತ್ರದಲ್ಲಿ ರಜನಿಯ ಸಾಕಷ್ಟು punch ಡೈಲಾಗ್ಸ್ ಇರುತ್ತದೆ... ಈ ಚಿತ್ರದಲ್ಲಿ ಒಂದು ಡೈಲಾಗ್ ಬಿಟ್ಟರೆ ಹಾಸ್ಯನಟ ವಿವೇಕ್ ಹೆಚ್ಚು ಮಿಂಚುತ್ತಾರೆ...ತನ್ನ ಡೈಲಾಗ್ಸ್ ಇಂದ ಹಾಗು timings ಇಂದ...ಒಂದುಕಾಲದಲ್ಲಿ ತೆಲುಗಿನ ನಾಯಕನಟನಾಗಿದ್ದ "ಸುಮನ್" ಇದರಲ್ಲಿ ಖಳನಾಯಕ... ಅದ್ಭುತವಾಗಿ ನಟಿಸಿದ್ದಾರೆ... ರಜನಿ ಅಭಿನಯದ ವಿಷಯದಲ್ಲಿ ಎರಡು ಮಾತಿಲ್ಲ... ನೋಡಿದರೆ ಆತನಿಗೆ 57 ವಯಸ್ಸಾಗಿದೆಯೆಂದು ಅನಿಸುವುದೆ ಇಲ್ಲ.. ಪ್ರತಿ frame ನಲ್ಲಿ ಮಿಂಚುತ್ತಾರೆ.. ಹಾಗು ಜನರನ್ನು ರಂಜಿಸಲು ಸಾಕಷ್ಟು ಪ್ರಯತ್ನ ಪಡುತ್ತಾರೆ...!!!!

ನಾಯಕಿ ಶ್ರೇಯ ಗೆ ನಟನೆಗೆ ಹೆಚ್ಚು ಅವಕಾಶವಿಲ್ಲ... ಆಕೆಯ ಸ್ನಿಗ್ಧ ಸೌಂದರ್ಯವನ್ನು ಬರುವ ಪ್ರತಿ ಹಾಡಿನಲ್ಲು ಬಿಚ್ಚಿ ತೋರಿಸುತ್ತಾರೆ!!!!....ಕಲಾತ್ಮಕತೆ ಮೆರೆದಿದ್ದಾರೆ!!! ... ಚಿತ್ರದ ಪ್ರತಿ ಹಾಡಿನ ಸೆಟ್ ಗಳಂತು ಅದ್ಬುತ..ಸಾಕಷ್ಟು ಹಣ ವ್ಯಯಿಸಿದ್ದಾರೆ..ಹಾಡುಗಳ ಚಿತ್ರೀಕರಣಕ್ಕೆ... ಹಾಗೆ ರಜನಿ ತನ್ನ ವಿಭಿನ್ನ getup ಗಳಲ್ಲಿ ಮಿಂಚುತ್ತಾರೆ... ತೆರೆಯ ಮೆಲೆ ನಾಯಕರು ಸಿಗರೆಟ್ ಹಚ್ಚಿ ವಿರಾಜಿಸಬಾರದೆಂಬ ಕಟ್ಟಳೆಯಿದೆ... ಅದಕ್ಕಾಗಿ ರಜನಿ bubble gum ವಿಭಿನ್ನವಾಗಿ ಬಾಯಿಗೆ ಹಾಕಿಕೊಳ್ಳುತ್ತಾರೆ...ಹಾಗು ಒಂದು ರೂಪಾಯಿ coin ನ soooooper ಆಗಿ ತಿರುಗಿಸಿ ಜೇಬಿಗಿಳಿಸುತ್ತಾರೆ.... ಹಲವು serious ಆದ scene ದ್ರುಶ್ಯಗಳಿಗೆ ವಿನೋದದ ಲೇಪ ನೀಡಿ ಹಾಸ್ಯಾಸ್ಪದ ವಾಗಿ ಮಾಡಿಬಿಡುತ್ತಾರೆ ನಿರ್ದೇಶಕ ಮಹಾಪ್ರಭುಗಳು.. ಮೊದಲೆ ಗುಲ್ಲೆಬ್ಬಿಸಿದಂತೆ ಚಿತ್ರದಲ್ಲಿ ಅಮಿತಾಭ್ ಕೂಡ ಬರುವುದಿಲ್ಲ..ಚಿರಂಜೀವಿ ಯು ಸಹ..ನಾನು ಕಡೆಯತನಕ ಕಾದೆ..ಎಲ್ಲಿ ಬರುವರೊ ಎಂದು.... ಒಟ್ಟಾರೆಯಾಗಿ ಹೇಳಿದರೆ ಈ ಚಿತ್ರ ಹಿಂದಿನ ರಜನಿಯ ಚಿತ್ರಗಳಂತೆ ರಂಜಿಸಲು ವಿಫಲವಾಗುತ್ತೆ.... ನಾನು ರಜನಿಯ ಪಕ್ಕಾ ಅಭಿಮಾನಿಯು ಅಲ್ಲ ಹಾಗು ಆತನ ದ್ವೇಷಿಯು ಅಲ್ಲ... ಒಬ್ಬ ಶ್ರೀಸಾಮನ್ಯ ಪ್ರೇಕ್ಷಕನಾಗಿ ಕುಳಿತು ಚಿತ್ರವನ್ನು ಪರಾಂಬರಿಸಿದ್ದೇನೆ.. ಹಾಗೆ ನೋಡಿದರೆ ರಜನಿ ಅಭಿನಯದ "ಪಡೆಯಪ್ಪ" ಚಿತ್ರದ ಅಭಿಮಾನಿ ನಾನು...ಆ ಚಿತ್ರವನ್ನು ಅದೆಷ್ಟು ಸಲ ನೋಡಿದ್ದೀನೊ.. ಲೆಕ್ಕವಿಟ್ಟವರ್ಯಾರು... ಹಾಗೆ "ಬಾಷ" ಚಿತ್ರ.... ನಾನು ಕೇಳುವ ಪ್ರಶ್ನೆಯೆಂದರೆ ರಜನಿಯಂತಹ ನಟನಿಗೆ ಒಂದು ಸರಿಯಾದ ಕಥಾಚೌಕಟ್ಟಿರುವ ಚಿತ್ರಕತೆ ಬರೆಯಲು ಆಗಲಿಲ್ಲವೆ???... ರೆಹಮಾನ್ ಸಂಗೀತ ದೇವರಿಗೆ ಪ್ರೀತಿ...ಆತನ ಸರಕು ಮುಗಿದಂತೆ ತೋರಿಬರುತ್ತದೆ... ಒಂದೆ ಒಂದು ಹಾಡು ಕೂಡ ಮನದಲ್ಲಿ ಚಿತ್ರಮಂದಿರದ ಹೊರಗಡೆ ಬಂದ ಮೇಲೆ ಉಳಿಯುವುದಿಲ್ಲ... ಏಕೆ ಹೀಗೆ?? ನನಗೆನ್ನಿಸುವ ಪ್ರಕಾರ ಒಬ್ಬ ಪ್ರಖ್ಯಾತ ನಟನ image ಗೆ ಸರಿಯಾದ ಚಿತ್ರಕತೆ ಕಟ್ಟಿಕೊಡುವುದರಲ್ಲಿ ಶಂಕರ್ ಸೋತಿದ್ದಾರೆ.. ಚಿತ್ರದ ಸಂಗೀತವು ಪ್ರತಿಒಂದು ಚಿತ್ರವನ್ನು promote ಮಾಡಲು ಒಂದು ಪ್ರಬಲವಾದ ಅಂಶ.... ಆ ವಲಯದಲ್ಲೂ ಕೂಡ ಸೋತಿದೆ ಎಂದೆ ಅನ್ನಬಹುದು...

ಚಿತ್ರ ಸಾಕಷ್ಟು ಹಣ ಗಳಿಸಬಹುದು..ಹಾಕಿದ ದುಡ್ಡೆಲ್ಲ ಇದಾಗಲೆ ಮರಳಿ ಬಂದಿರಬಹುದು...ಆದರೆ ಒಟ್ಟಾರೆಯಾಗಿ ರಜನಿ ಮತ್ತೊಮ್ಮೆ ತಮ್ಮ ಅಭಿಮಾನಿಗಳನ್ನು ನಿರಾಶೆಗೊಳಿಸಿದ್ದಾರೆ... ರಜನಿಯ ಅಭಿಮಾನಿಗಳಗಿದ್ದಲ್ಲಿ ಅಥವಾ ಚಿತ್ರದಲ್ಲಿ ಏನಿರಬಹುದೆಂಬ ಕೂತೂಹಲವಿರುವವರು ಒಮ್ಮೆ ನೋಡಬಹುದು..

ಒಮ್ಮೆ ನೋಡಿ ಚಿತ್ರಮಂದಿರದ ಹೊರಗಡೆ ಬಂದು ಸುಲಭವಾಗಿ ಮರೆಯಬಹುದಂತಾದ ಚಿತ್ರ "ಶಿವಾಜಿ"...

ಅದೇ ವೆಂಕ - ಸೀನ - ನೊಣ

Saturday, May 26, 2007

ಸಮಯ ರಾತ್ರಿ ೧೦:೩೦ ಅಥವಾ ೧೦:೪೫... ಎಲ್ಲೇ ಇದ್ದರೂ ಬಂದು ಸಿಸ್ಟೆಮ್ ಶುರುವಿಕ್ಕಿ ಯಾಹೂ! ಧೂತವಾಹಕದಲ್ಲಿ ಲಾಗಿನ್ ಆಗುತ್ತೇನೆ.. ಅದು ನಮ್ಮ ಅಂದರೆ ವೆಂಕ,ಸೀನ,ನೊಣರ ಅಲಿಖಿತ ಒಪ್ಪಂದ... ಯಾರೊಬ್ಬರು ಇಲ್ಲದಿದ್ದರೂ ಮೆಸೆಜ್ ಮಾಡಿ ಬರಮಾಡುತ್ತೇವೆ....

ಅಲ್ಲಿ conference ಶುರು ಮಾಡಿ ಮಾತಾಡಲು ಶುರುಮಾಡಿದರೆ ಲೋಕದ ಪರಿವೆಯೆ ಇರುವುದಿಲ್ಲ... ದಿನವೂ ಮಾತಡಲು ವಿಷಯಗಳು ಅದೆಲ್ಲಿಂದ ಬರುವುದೋ ಆ ಭಗವಂತನಿಗೇ ಗೊತ್ತು..!!

ನಾವು ಶುರು ಮಾಡಿದ conference ನಲ್ಲಿ ಜನರು ಬರುತ್ತಿರುತ್ತಾರೆ..ಹೋಗುತ್ತಿರುತ್ತಾರೆ..but ನಾವ್ಗಳು ಮಾತ್ರ ಬರುವವರಿಗೆ "ಹಾಯ್!" ಹೇಳುತ್ತ ಹೋಗುವವರಿಗೆ "ಬ್ಯೆ ಬ್ಯೆ" ಹೇಳುತ್ತ ಅಲ್ಲೇ ಇರುತ್ತೇವೆ.. ಸುಮಾರು ಪ್ರತಿನಿತ್ಯ ೧ ಗಂಟೆವರೆಗೂ...
ದಿನಂಪ್ರತಿ ನಡೆಯುವ ವಿಷಯಗಳು, ವಿನೋದಮಯ ಪ್ರಸಂಗಗಳು, ಆ ದಿನದ ಅನುಭವಗಳು.. ಒಂದೇ ಎರಡೇ..ನಾವು ಹರಟೆಮಲ್ಲರೇ ಸರಿ...

ಹಾ! ಮರೆತಿದ್ದೆ..ಇಲ್ಲಿ ಪಾತ್ರ ಪರಿಚಯ ಮಾಡುವುದನ್ನೇ ಮರೆತಿದ್ದೆ..

ಮೊದಲಿಗೆ ವೆಂಕ ಅಂದರೆ - ಶ್ರೀಧರ

ಸೀನ ಅಂದರೆ - ಶ್ರೀನಿವಾಸ (ಪ್ರೇಮ ಕವಿ) (ಬಹುಮುಖ ಪ್ರತಿಭೆ).. the list goes on..

ನೊಣ ಅಂದರೆ - ಅರುಣ(ಪರಿಸರಪ್ರೇಮಿ) (ಸಹಜ ಕವಿ)...the list goes on...

ಒಂದಷ್ಟು ದಿನ ಸೀನ ಮತ್ತೆ ನೊಣ voice conference ಮಾಡಲು ಶುರುವಿಕ್ಕಿದರು..... ನನ್ನ headphone ಸರಿ ಇಲ್ಲದುದರ ಕಾರಣ ಇವರಿಗೆ ಪಟಾಕಿ ರೀತಿಯ ಕೇಳಿಸುತ್ತಿತಂತೆ.....ಹೆ ಹೆ ಹೆ... ನಿಲ್ಲಿಸಿಬಿಟ್ಟರು... ನನಗೊಂತರಾ ಖುಷಿಯಾಯಿತು.... ನನಗೆ ಮಾತಡುವುದಕ್ಕಿಂತ type ಮಾಡಿ ನನ್ನ ಭಾವ!! ಗಳನ್ನ ವ್ಯಕ್ತಪಡಿಸುವುದು ಸುಲಭವೆಂದು..

ಎಲ್ಲರನ್ನು ನಗಿಸುತ್ತ..ಕೆಲವೊಮ್ಮೆ ಛೇಡಿಸುತ್ತಾ, ಅರುಣನ/ಶ್ರೀನಿವಾಸನ lecture/ಹಾಡು ಗಳನ್ನ ಕೇಳುತ್ತ...
ವಿಚಾರ ವಿನಿಮಯಮಾಡಿಕೊಳ್ಳುತ್ತ ನಡೆಸುವ ಹರಟೆಯ ಮಜವೆ ಬೇರೆ ಬಿಡಿ..!!

ಹೀಗೆ ನಮ್ಮ conference ಸಾಧ್ಯವಾದಷ್ಟು ದಿನಗಳ ಕಾಲ ನಡೆಯಲಿ ಎಂದು ಆಶಿಸುತ್ತ ನನ್ನೀ ಲೇಖನವನ್ನ ಮುಗಿಸುತ್ತೇನೆ... ಈ ಸ್ನೇಹ ಸದಾ ಕಾಲ ಹೀಗೆ ಇರಲಿ...

ಹೀಗೆ ಕೆಳಕೊಟ್ಟ ಕೊಂಡಿಗಳನ್ನ ಹಾಗೆ ಓದಿಬಿಡಿ...ಚೆನ್ನಾಗಿವೆ
http://gandabherunda.blogspot.com/2007/05/blog-post_26.html

http://speaktonature.blogspot.com/2007/05/blog-post_25.html

ಅಂದ ಹಾಗೆ ನಿಮಗಾರಿಗಾದರು ನಮ್ಮ ಹರಟೆಯಲ್ಲಿ ಪಾಲ್ಗೊಳ್ಳುವ ಆಸಕ್ತಿಯಿದ್ದಲ್ಲಿ ೧೦:೩೦ ಗೆ ಧೂತವಾಹಕದಲ್ಲಿ ಲಾಗಿನ್ ಆಗ್ಬಿಡಿ..ಸಿಗೋಣ ಅಲ್ಲಿ... ಬರ್ತೀರಾ ತಾನೆ??????

ಉಪಹಾರ ಕೇಂದ್ರದ ಮಸಾಲೆ ದೋಸೆ

Saturday, May 19, 2007

ನಾನು ನ್ಯಾಷನಲ್ ಹೈಸ್ಕೂಲಿನ ವಿದ್ಯಾರ್ಥಿ, ಶನಿವಾರ ಬಂತೆಂದರೆ ನನಗೊಂತರ ಖುಷಿ.. ಅಂದು ಉಪಹಾರ ಕೇಂದ್ರದ ಮಸಾಲೆ ದೋಸೆ ಯನ್ನು ಮೆಲ್ಲಬಹುದು ಎಂದು.. ಶನಿವಾರದಂದು ನಮಗೆ ತರಗತಿಗಳು 7:30 ಗೆಲ್ಲ ಶುರುವಾಗಿಬಿಡುತಿತ್ತು..
ಬೆಳ್ಳಂಬೆಳಗ್ಗೇನೆ ಎದ್ದು ಅಮ್ಮನ ಬಳಿ 10ರೂಪಾಯಿಇಸಿದುಕೊಳ್ಳುತ್ತಿದ್ದೆ... ಶನಿವಾರದಂದು 5 periodಗಳು ಇರುತ್ತಿದ್ದವು.. ಮೊದಲು 3 periods ಅಮೆಲೆ ಮಿಕ್ಕವು.. 10ಗಂಟೆಗೆ ತಿಂಡಿಗೆಂದು ಬಿಡುತ್ತಿದ್ದರು.. ಆಗ ನಮ್ಮದೊಂದು ಗುಂಪು ಇತ್ತು.. ಬಿಟ್ಟೊಡನೆಯೆ ನಾನು,ರಂಜನ್,ಪವನ್,ಸುಧನ್ವ,ಶ್ರೀರಾಮ್,ಸಂದೀಪ್,ನಿರಂಜನ್,ಜಯಂತ್.. ಉಪಹಾರ ಕೇಂದ್ರದೆಡೆಗೆ ಧಾವಿಸುತ್ತಿದ್ದೆವು.. ಬೇಗ ಹೋದರೆ ಬೇಗ ತಿಂದು ವಾಪಸು ಬರಬಹುದು ಎಂದು.... ಬಹಳ ಸಾರಿ ನಾವು ಹೋಗುವ ಹೊತ್ತಿಗೆ rush ಆಗಿಬಿಡುತಿತ್ತು..ಅಲ್ಲೆ ಜೈನ್ ಕಾಲೇಜ್ ಸಹ ಇದೆ... ಅವರೊಂದಷ್ಟು ಜನ ಸೇರಿಬಿಡುತ್ತಿದ್ದರು..

ಆ ಕಾಲೇಜಿನ ಮಂದಿಯನ್ನು ಕಂಡರೆ ನಮಗೊಂದು ರೀತಿಯ ದಿಗಿಲು ಹಾಗೆ ಅಸಡ್ಡೆಯು ಸಹ ಇತ್ತು.ಕಾರಣ ಅವರ ಥಳುಕು ಬಳುಕು ವೇಷಗಳು... ಹಾಗು ಅವರಾಡುತ್ತಿದ್ದ ಮಾತುಗಳು.. ಅವರ tussa pussa ಆಂಗ್ಲ ಭಾಷೆಯನ್ನು ಕೇಳಿ ನನಗಂತು ಒಮ್ಮೊಮ್ಮೆ ದಿಗಿಲಾಗುತ್ತಿತ್ತು...

ಎಲ್ಲರು 10ರೂಪಾಯಿಗಳನ್ನು ತಂದಿರುತ್ತಿದ್ದರು... ಅದನ್ನು ಒಬ್ಬನ ಕೈಗೆ ಕೊಟ್ಟು... "ಹೋಗು.. token ತಗೊ" ಎಂದುಬಿಡುತ್ತಿದ್ದೆವು... ಆ rush ನಲ್ಲಿ ನುಗ್ಗಿ ಟೋಕನ್ ಸಂಪಾದಿಸುವುದೆ ಒಂದು ಸಾಹಸ.. ಮಗದೊಬ್ಬನನ್ನು ಕಳಿಸಿ "ಹೋಗು order ಕೊಡು" ಎನ್ನುವುದು... ಆ ದೋಸೆ ಮಾಡುವವನನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದೆವು.. ಅಹಾ ಆತ ದೋಸೆಯನ್ನು ಹುಯ್ಯುವುದೇನು....ತುಪ್ಪ! ಸುರಿಯುವುದೇನು.... ಕೆಂಪು ಚಟ್ನಿಯನ್ನು ಅದಕ್ಕೆ ಸವರಿ... ಆಲೂಗಡ್ಡೆ ಪಲ್ಯವನ್ನು ಎತ್ತಿ ದೋಸೆಯ ಮದ್ಯಕ್ಕೆ ಒಗೆದು..ದೋಸೆ ಯನ್ನು ಸುತ್ತಿಕೊಡುತ್ತಿದ್ದ ರೀತಿ.. ಚಮತ್ಕಾರವೆ ಸರಿ..
ಗರಿಗರಿ ಮಸಾಲೆ ದೋಸೆ ready...

ನಮ್ಮ ಮನೆಗಳಲ್ಲಿ ಹೀಗೇಕೆ ಮಾಡುವುದಿಲ್ಲವೆಂದು..ಹಾಗು ಇಲ್ಲಿನ ಬರುವಷ್ಟು ವಾಸನೆ ಏಕೆ ಬರುವುದಿಲ್ಲವೆಂದು ಹಲವಾರು ಬಾರಿ ಯೋಚಿಸುತ್ತಿದ್ದೆ..


ಅಷ್ಟರೊಳಗೆ ಮಿಕ್ಕವರು ಸ್ಥಳ ಹಿಡಿದು ಕೊಳ್ಳುತ್ತಿದ್ದರು... ಹೋಗಿ ನಿಂತು ಎಲ್ಲರೊಡನೆ ಹರಟುತ್ತ ತಿನ್ನುವ ಮಜವೆ ಬೇರೆ..

ಎಲ್ಲರನ್ನು ರೇಗಿಸುತ್ತ.."ಲೊ ಎಷ್ಟೊತ್ ಮಾಡ್ತ್ಯ ತಿನ್ನಕ್ಕೆ..ತಿನ್ನೋ ಬೇಗ....ಸಾಕು ಅವ್ಳನ್ನ ನೋಡಿದ್ದು...ತಿನ್ನು"..

ಹೀಗೆ ತಿಂದು ಮುಗಿಸಿ....ಕೈತೊಳೆದು ಬರುತ್ತಿದ್ದೆವು..ನಾನಂತು ಸರಿಯಾಗಿ ಕೈತೊಳೆಯಿತ್ತಿರಲಿಲ್ಲ..ಕಾರಣ ದೋಸೆಯ ವಾಸನೆ ಮತ್ತೆ ಮತ್ತೆ ಮೂಸಿ ಮೂಸಿ ಆನಂದಿಸಿವುದಾಗಿತ್ತು..ಹೆ ಹೆ ಹೆ....

ಅದರ ವಾಸನೆ ಇರುವವರೆಗು ಮೂಸುವುದು.... ಆಗ ಉಪಹಾರ ಕೇಂದ್ರದಲ್ಲಿ ದೋಸೆಗೆ 9/- ರೂ ಇತ್ತು..ಮಿಕ್ಕ ಒಂದು ರೂಪಾಯ್ನಲ್ಲಿ "bambaiya" ತಿನ್ನುವುದು... ಮತ್ತೆ ಎಲ್ಲರು 1 ರೂಪಾಯಿ ಕೂಡಿಸಿ ಕೊಳ್ಳುವುದು.. ಕೆಲವರು ಅದು ಕೆಟ್ಟದು ಎಂದು.. "ಗುಟ್ಕ" ತರದ್ದು...ಅದಕ್ಕೆಲ್ಲ ದಾಸರಾಅಗಬಾರದು ಎಂದು..ತಿನ್ನುತ್ತಿರಲಿಲ್ಲ... ನಾವುಗಳು 2 packet ಕೊಂಡು ತಿಂದು....ಅಲ್ಲಿಂದ ಕಾಲ್ತೆಗೆಯುತ್ತಿದ್ದೆವು....ತರಗತಿಗೆ... ಮುಂದಿನ ಶನಿವಾರ ಮತ್ತದೇ ಕಾರ್ಯಕ್ರಮ...

ನಾನಂತು ಕಾಯುತ್ತಿದ್ದೆ...ಎಂದು ಶನಿವಾರ ಬರುವುದೊ..ಎಂದು ಮಸಾಲೆ ದೋಸೆ ತಿನ್ನುವುದೊ..ಎಂದು... ನನಗೆ ಆಗ ಹೆಚ್ಚಾಗಿ ಹಣ ಸಿಗುತ್ತಿರಲಿಲ್ಲ...
ಪ್ರತಿ ದಿನವು ಹೀಗೆ ಹೊರಗಡೆ ತಿನ್ನುವುದಾಗಿದ್ದರೆ ಎಷ್ಟು ಚೆನ್ನಾಗಿರುವುದೆಂದು ಭಾವಿಸಿಕೊಳ್ಳುತ್ತಿದ್ದೆ.. ಹೀಗೆ ಬೇಕಾದಾಗಲೆಲ್ಲ ಹೊರಗಡೆ ಹೋಗಿ ತಿನ್ನಲು... 10 ರೂಪಯಿಗಳನ್ನು ಖರ್ಚು ಮಾಡಲು ಹಿಂದು ಮುಂದೆ ನೋಡುತ್ತಲಿದ್ದೆ... ಶನಿವಾರ ನನಗೆ ಆ 10ರೂಪಾಯಿ ಸಿಗುತ್ತಿದ್ದುರ ಕಾರಣ ತರಗತಿಗಳು ಬೇಗ ಶುರುವಾಗುವುದರಿಂದ.. ನಮ್ಮ ತಾಯಿಗೆ ತಿಂಡಿ ತಯಾರಿಸಲು ಸಾಧ್ಯವಿರುತ್ತಿರಲಿಲ್ಲ..ಹಾಗಾಗಿ ಹೊರಗಡೆ ತಿಂದುಕೊ ಎಂದು..10 ರೂಪಾಯಿ ಕೊಡುತ್ತಿದ್ದರು...

ಇಂದು ಖರ್ಚು ಮಾಡುವ ಚೈತೈನ್ಯ ಇದೆ..10 ರೂಪಯಿಗಳಿಗೆಲ್ಲ ಲೆಕ್ಕ ಇಡುವುದಿಲ್ಲ... ಹೊರಗಡೆ ಹೋದರೆ ಹಣ ಖರ್ಚು ಮಾಡಲು ಹಿಂದು ಮುಂದು ನೋಡುವುದಿಲ್ಲ.. ತಿಂಗಳ ಕೊನೆಗೆ ಒಂದಷ್ಟು ಐದಂಕೆಯ ಸಂಬಳ ನನ್ನ ಖಾತೆಗೆ ಜಮೆ ಆಗುತ್ತದೆ... ಆದರೆ ೧೦ ರೂಪಯಿಗಳನ್ನು ಜತನವಾಗಿ ಕಾಪಿಟ್ಟುಕೊಂಡು ಬಂದು ತಿನ್ನುತ್ತಿದ್ದ ರೀತಿಗೂ. ಅದರಲ್ಲಿ ನನಗೆ ಸಿಗುತ್ತಿದ್ದ ಸುಖಕ್ಕೂ.. ಇಂದು ಕೆಲ ನೂರುಗಳು..ಜೇಬಿನಲ್ಲಿ ಇದ್ದರೂ ಅದನ್ನು ಯಥೇಚ್ಚವಾಗಿ ಖರ್ಚು ಮಾಡಿದರೂ
ಅಂದಿನ ೧೦ರೂಪಯಿಗಳನ್ನ ಖರ್ಚು ಮಾಡಿ ಉಂಟಾಗುತ್ತಿದ್ದ ಸಂತೋಷ ಇಂದು ನನ್ನಲಾಗುವುದಿಲ್ಲ..

ಇಂದು ಪ್ರತಿದಿನ ಹೋಗಿ ತಿನ್ನುವ ಸಾಮರ್ಥ್ಯವಿದ್ದರೂ.. ಅಂದಿನಷ್ಟು ಕಾತರತೆ,ಉತ್ಸುಕತೆ, ಇಂದು ನನ್ನಲ್ಲಿಲ್ಲ..
ಕಾರಣ ಗೊತ್ತಿಲ್ಲ ಎಂದಷ್ಟೆ ಹೇಳಬಹುದು...

ಗೊಂದಲಮಯ "ಉಭಯಕುಶಲೋಪರಿ"...

Monday, May 7, 2007

ಇದೊಂದು ಗೊಂದಲ...ಬಹಳ ವರ್ಷಗಳಿಂದ ಕಾಡುತ್ತಿರುವ ಗೊಂದಲವಿದು... ನಿಮ್ಮ ಬಳಿ ಹಂಚಿಕೊಳ್ಳುವ ಉದ್ದೇಶದಿಂದ ನನ್ನೀ ಲೇಖನ..... ಯಾರದರು ಪರಿಚಯಸ್ಥರು ಎದುರು ಸಿಕ್ಕಾಗ ಅಥವ ಯಾವುದಾದರು ಕಾರ್ಯಕ್ರಮಗಳಿಗೆ ಹೋದಾಗ ಸಂಭಾಷಣೆಯನ್ನು ಹೇಗೆ ಶುರುಮಾಡುವೆದೆಂದು??... ಅದಕ್ಕೆ "ಉಭಯಕುಶಲೋಪರಿ" ಎಂದು ಹೆಸರು...

ಸಾಮನ್ಯವಾಗಿ ನಾನು ಹೆಚ್ಚು ಮದುವೆ-ಮುಂಜಿ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ..... ಹೋದರೂ ಯಾವುದಾದರು ಮೂಲೆಯೊಂದರಲ್ಲಿ ಕುಳಿತಿರುತ್ತೇನೆ.... ಕರ್ಮಕ್ಕೆ ನಮ್ಮ ಸಮುದಾಯದಲ್ಲಿ ನನ್ನ ವಯೋಮಾನದವರು ಕಮ್ಮಿ... ಎಲ್ಲಾ ಕಾರ್ಯಕ್ರಮಗಳಲ್ಲೂ ಅವರು ಸಿಗುವುದಿಲ್ಲ... ಸಿಕ್ಕರೆ ಅವರೊಂದಿಗೆ ಅಂಡಲೆಯಬಹುದು...ಇಲ್ಲವಾದರೆ ಯಾವುದಾದರೊಂದು ಮೂಲೆಯಲ್ಲಿ ಒಂಟಿ ಪಿಶಾಚಿಯ ಹಾಗೆ ಬಿದ್ದಿರುತ್ತೇನೆ.... :-( ಎಷ್ಟೊ ಸಲ ತೀರ ಹತ್ತಿರದ ಸಂಬಂಧಿಗಳ "ನಾಮಕರಣಕ್ಕೆ" ಹೋಗಿರುತ್ತೇನೆ.. ಮತ್ತೆ ಯಾವಗಲಾದರೊಮ್ಮೆ ಮತ್ತೆ ಅದೇ ಮನೆಗೆ ಹೋದಾಗ..ಆ ಮಗು ಬೆಳೆದು ದೊಡ್ಡದಾಗಿರುತ್ತದೆ,ಅಲ್ಲೇ ಆಟವಾಡುತ್ತಿರುತ್ತದೆ,ಯಾರ ಮಗುವೆಂದೆ ತಿಳಿಯುವುದಿಲ್ಲ... ಹೆಸರು ಕೂಡ ನೆನಪಿರುವುದಿಲ್ಲ..ಅದೊಂದು ಫಜೀತಿ...

ಮದುವೆಗಳಿಗೆ ಹೋದಾಗ...ಯಾರಾದರು ಹಿರಿಯರು ಎದುರು ಸಿಕ್ಕಾಗ.."ಚೆನ್ನಾಗಿದ್ದೀರ??"...ಹೀಗೆ ಕೇಳುವುದು ವಾಡಿಕೆ..ಅಲ್ಲವೆ..?? ನನಗೇಕೊ ಹಾಗೆ ಕೇಳಲು ಮನಸೇ ಬರುವುದಿಲ್ಲ.. ಕೇಳಿದರೂ...ಅದೊಂದು ಸಿದ್ದ ಉತ್ತರವಿರುತ್ತದೆ..
"ಚೆನ್ನಾಗಿದ್ದೀನಿ..ನೀನು"??..ಅದಕ್ಕೆ ನಾನು ಕೂಡ."ಚೆನ್ನಾಗಿದ್ದೀನಿ" ಎನ್ನುತ್ತೇನೆ... ಇದ್ಯಾವ ಪರಿಯ ಸಂಭಾಷಣೆ...??? ನನಗಂತೂ ಅರ್ಥವಾಗುವುದಿಲ್ಲ....

ಅಲ್ಲ ಅವರು ಚೆನ್ನಾಗಿದ್ದರೆಷ್ಟು ಬಿಟ್ಟರೆಷ್ಟು??..... ಅವರು ಚೆನ್ನಾಗಿದ್ದರೆ ನಾವೇನೊ ಸಂತೋಷ ಪಡುವಹಾಗೆ...ಇಲ್ಲವಾದರೆ ನಾವೇನು ಮರುಗುತ್ತೆವೆಯೆ?? ಇಲ್ಲ... ಸುಮ್ಮನೆ ಬೂಟಾಟಿಕೆ ಮಾತುಗಳವು ಎಂದು ನನ್ನ ಅಭಿಪ್ರಾಯ... ತೀರ ಹತ್ತಿರವಾದವರ ಬಳಿ ಈ ರೀತಿಯ ಪ್ರಶ್ನೆಗಳು ಕೇಳುವುದರಲ್ಲಿ ಅರ್ಥವಿದೆ...

ನಮ್ಮ ತಾಯಿ ನನಗೆ ಆಗಾಗ ಬಯ್ಯುತಿರುತ್ತಾರೆ....ಮನೆಗೆ ಬಂದ ಅತಿಥಿಗಳನ್ನು ಸರಿಯಾಗಿ ವಿಚಾರಿಸುವುದಿಲ್ಲವೆಂದು..
ಯಾರೊ ಮದುವೆಗೊ ಮತ್ಯಾವುದಕ್ಕೊ ಕರೆಯಲು ಬಂದಿರುತ್ತಾರೆ...ಅವರನ್ನು ಹೋಗಿ ಕೇಳಳೆ..."ನೀವು ಚೆನ್ನಾಗಿದ್ದೀರ" ಎಂದು..

ನಮ್ಮ ದೊಡ್ಡಮ್ಮ ಒಮ್ಮೆ ನನ್ನ ತಾಯಿಯ ಬಳಿ ಹೇಳಿದ್ದರಂತೆ..." ನಿನ್ನ ಮಗ... ನಾನು ಮನೆಗೆ ಬಂದರೆ.... ಹೇಗಿದ್ದೀರ?? ಅಂತ ಕೂಡ ವಿಚಾರಿಸುವುದಿಲ್ಲ ಎಂದು..... ಅದೇನು ಅಂತ ಬೆಳೆಸಿದ್ದೀರೊ ನಿಮ್ಮ ಮಕ್ಕಳನ್ನ"!!!

ಅಲ್ಲ ನಮ್ಮ ದೊಡ್ಡಮ್ಮನ ಪರಿಸ್ಥಿತಿ ನನಗೆ ಗೊತ್ತು..ಅವರಿಗೆ ಮಧುಮೇಹ ಇದೆ..ಮೇಲಾಗಿ ಮಂಡಿಚಿಪ್ಪಿನ ಶಸ್ತ್ರಚಿಕಿತ್ಸೆ ಬೇರೆ ಮಾಡಬೇಕಿದೆ... ಎಲ್ಲದಕ್ಕಿಂತ ಹೆಚ್ಚಾಗಿ ಅವರಿಗೆ ವಯಸ್ಸಾಗಿದೆ... ಅವರ ಬಳಿ ಹೋಗಿ ಕೇಳಲೆ
"ದೊಡ್ಡಮ್ಮ ನೀವು ಚೆನ್ನಾಗಿದ್ದೀರ??" ಎಂದು....

ನನ್ನ ಬುದ್ದಿ ತಿಳಿದೆ ನನ್ನ ತಂಗಿ ನನ್ನನ್ನು ಛೇಡಿಸುತ್ತಿರುತ್ತಾಳೆ..ಯಾವುದಾದರು ಕಾರ್ಯಗಳಿಗೆ ಹೋದರೆ..
"ಆ ಮಗುವಿನ ಹೆಸರೇನು?? ಹೇಳು ನೋಡುವ??..."

"ಅಲ್ಲಿ ಒಡಾಡುತ್ತಿದ್ದಾರಲ್ಲ ಅವರು ಯಾರು?" ಹೀಗೆ....

ಅವಳಿಗೆ ತಮಾಷೆ... ನನಗೆ ಸಂಕಟ...

ಅದಕ್ಕೆ ಈನಡುವೆ.. ಬೇರೆ ರೀತಿಯ ಪ್ರಶ್ನೆಗಳನ್ನ ಕೇಳುತ್ತೇನೆ...

"ಎನಪ್ಪಾ ಏನು ಸಮಾಚಾರ?"

"ನಿಮ್ಮ ಕೆಲಸ ಹೇಗೆ ನಡೆಯುತ್ತಿದೆ?"...

"ದೊಡ್ಡಮ್ಮ ನಿಮ್ಮ ಆರೋಗ್ಯ ಹೇಗಿದೆ"? ;-) ಹೀಗೆ....

ಎನಾದರೊಂದು ಮಾತಾಡಲೆಬೇಕಲ್ಲವೆ..ಅದಕ್ಕೆ ಹೀಗೆ...

ಈ ಪ್ರಶ್ನೆಗಳ ಸಾಲಿಗೆ ನಿಮ್ಮ ಸಲಹೆಗಳೇನಾದರು ಇವೆಯೆ??..ಇದ್ದರೆ ಹೇಳಿ.. ಖಂಡಿತ ಸೇರಿಸಿಕೊಳ್ಳುವೆ...

'ಕುಡುಕ-DRUNKARD' ಎನ್ನುವ ಮುಂಚೆ ಒಮ್ಮೆ ಯೋಚಿಸಿ...!!!

Tuesday, May 1, 2007

ಕೆಲ ವರ್ಷಗಳ ಹಿಂದೆ ಮಾ ಹಿರಣ್ಣಯ್ಯನವರು ನಡೆಸಿಕೊಡುತ್ತಿದ್ದ "ಮಾಸ್ಟರ್" ಎಂಬ ಕಾರ್ಯಕ್ರಮ ಈಟೀವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು....ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರವಿರುತ್ತಿತ್ತು....ಅದರಲ್ಲಿ ಒಬ್ಬಾತ ಹೀಗೆ ಪ್ರಶ್ನೆಯನ್ನು ಕೇಳಿದ್ದ....
"ಪ್ರತಿದಿನ ಕುಡಿದು ತೂರಾಡಿ..ಗಲಾಟೆ ಮಾಡಿಕೊಂಡು..ಹೆಂಡತಿಯನ್ನು ಹೊಡೆಯುವವನನ್ನು ’ಕುಡುಕ’ ಎನ್ನುತ್ತಾರೆ..
ಯಾರಿಗು ತೊಂದರೆ ಕೊಡದೆ,ಗಲಾಟೆ ಮಾಡದೆ ತಮ್ಮ ಮನೆಯಲ್ಲಿ ಕುಡಿದು silent ಆಗಿ ಮಲಗುವವರನ್ನು ಕೂಡ ’ಕುಡುಕ’ ಎನ್ನುತ್ತದೆ ಸಮಾಜ... ಯಾಕೆ ಹೀಗೆ??"... ಹೀಗೆ ಸಾಗಿತ್ತು ಪ್ರಶ್ನೆ.... ಪ್ರತ್ಯುತ್ತರವಾಗಿ ಮಾ ಹಿರಣ್ಣಯ್ಯನವರು ಏನು ಉತ್ತರಿಸಿದರೆಂದು ನನಗೆ ಮರೆತುಹೋಗಿದೆ...but that question was selected as 'the' best question of that episode...

ಈ ವಿಷಯವಾಗಿ ನನ್ನ ಅಭಿಪ್ರಾಯವನ್ನು ನಿಮ್ಮ ಮುಂದೆ ನಮೂದಿಸಿದ್ದೇನೆ...

ಕುಡಿಯುವವರೆಲ್ಲರನ್ನು ’ಕುಡುಕ’ ಎನ್ನುವುದಾದರೆ.... ಕೆಲಸ ಮಾಡುವವರೆಲ್ಲರು ’ಕಾರ್ಮಿಕ’ರು... ಕೆಟ್ಟ ಮಾತುಗಳನ್ನಾಡುವವರೆಲ್ಲರು ’ಪೋಲಿಗಳು’.... ಹೀಗೆ ಸಾಗುತ್ತದೆ ಪಟ್ಟಿ....

ಕಳ್ಳತನವು ಕೆಲಸವೆ...ಹಾಗೆ ನೋಡಿದರೆ ಬಹಳ ಶ್ರಮವಹಿಸಿ ಮಾಡಬೇಕಾದ ಕೆಲಸವದು...ಅವನನ್ನು ’ಶ್ರಮಿಕ’,’ಕಾರ್ಮಿಕ’..ಎನ್ನಲಾಗುವುದೆ??....ಯೋಚಿಸಿ ನೋಡಿ... ನಾ ಹೇಳಬಯಸುವುದು ಇಷ್ಟೆ... "ಕುಡಿಯುವವರೆಲ್ಲ ಕುಡುಕರಲ್ಲ".....

ಆದರೆ ಕುಡಿತ ಚಟವಾಗಬಾರದಷ್ಟೆ... ಅದು ನನ್ನ ಕಳಕಳಿಯ ಪ್ರಾರ್ಥನೆ... :-)

ನಮ್ಮ ಸಮಾಜವೆ ವಿಚಿತ್ರ.... ಮದುವೆಗೆ ಗಂಡು ಗೊತ್ತು ಮಾಡುವಾಗ.. ಹುಡುಗ ಕುಡಿಯುತ್ತಾನೆಯೆ..ಸಿಗರೆಟ್ ಸೇದುತ್ತಾನೆಯೆ.. ಎಂದೆಲ್ಲ ಕೇಳಿ ತಿಳಿದುಕೊಳ್ಳುತ್ತಾರೆ.... ಅವನು ಕುಡಿತ..ಇತ್ಯಾದಿ ಇತ್ಯಾದಿ ಗಳೆಲ್ಲವನ್ನು ಮಾಡದಿದ್ದರೆ..ಅವನು ಸಕಲ ಸದ್ಗುಣ ಸಂಪನ್ನ... ಇಲ್ಲವಾದರೆ ನೀಚ..ದೂರ್ತ... ಹೀಗೆ...

ಕುಡಿತವನ್ನು ಮಾನದಂಡವನ್ನಾಗಿ ಇಟ್ಟು ನೋಡುತ್ತದೆ ಸಮಾಜ..... ಅದು ತಪ್ಪೆಂದು ನನ್ನ ಭಾವನೆ...

ಯಾವುದೆ ಚಟವಿಲ್ಲದೆ...ಜೀವನದ ಅಧೋಗತಿಗೆ ಇಳಿದಿರುವವರನ್ನು ನಾ ಕಂಡಿದ್ದೇನೆ...

ನನ್ನ ಪ್ರಕಾರ ಕುಡಿಯುವವರು ಮೂರು ವಿಧ.
೧)ತಮ್ಮ ತೆವಲಿಗಾಗಿ ಕುಡಿಯುವವರು... ಕೂತೂಹಲಿಗಳು.. ;-)
೨)ಜೀವನದ ಕಷ್ಟ ಕೋಟಲೆಗಳನ್ನು ಕ್ಷಣವಾದರೂ ಮರೆಯಲೋಸುಗ ಕುಡಿಯುವವರು...
೩)ಕೊನೆಯವವರು ಅದನ್ನೆ ಚಟವಾಗಿಸಿಕೊಂಡವರು..ಇವರಿಗೆ ಕುಡೀಲಿಕ್ಕೆ ಕಾರಣವೇನು ಬೇಕಾಗಿರುವುದಿಲ್ಲ....

ನಾ ಹೇಳಬಯಸುವುದೆನೆಂದರೆ.. ’ಕುಡಿಯುವವರೆಲ್ಲ ಕುಡುಕರಲ್ಲ’... ಹಾಗೆಂದು ಅವರನ್ನು ’ಕುಡುಕರೆಂದು’ ಕರೆಯುವುದು ಸಲ್ಲ.. :-)

ಕುಡಿತವನ್ನೆ ಚಟವಾಗಿಸಿಕೊಂಡು... ತನಗೂ ತನ್ನನ್ನು ನಂಬಿಕೊಂದವರನ್ನು ತೊಂದರೆಗೀಡು ಮಾಡುವವರನ್ನು ’ಕುಡುಕರೆಂದು’ ಕರೆಯಿರಿ...ಸಾಧ್ಯವಾದರೆ ನಾಲ್ಕು ಬುದ್ದಿ ಮಾತು ಹೇಳಿ.. ಕೇಳಲಿಲ್ಲವೆಂದರೆ ನಾಲ್ಕು ವದೆಗಳು ಕೊಟ್ಟರೂ ಸರಿಯೆ...ತಪ್ಪಿಲ್ಲ....

"ಜಾಣನಿಗೆ ಮಾತಿನ ಪೆಟ್ಟು..ದಡ್ಡನಿಗೆ ದೊಣ್ಣೆ ಪೆಟ್ಟು" ಎಂದು ಕೇಳಿಲ್ಲವೆ..???
ನೀವು ಕೇಳದಿದ್ದರೇನು..ನಾನಂತೂ ಕೇಳಿದ್ದೇನೆ.. ;-)

ಯಾರಿಗೂ ತೊಂದರೆ ಕೊಡದೆ.. ಹಿರಿಯರಿಗೆ ತಿಳಿಸದೆ ;-)... ಅದನ್ನು ಚಟವಾಗಿಸಿಕೊಳ್ಳದೆ ಕುಡಿಯಲು ಮನಸಿದ್ದರೆ ಕುಡಿಯಿರಿ... ಎಷ್ಟೆ ಮಾಡಿದರೂ..ಏನೇ ಆಟವಾಡಿದರೂ..ನಿಮ್ಮ ಪರಿಧಿಯನ್ನು ಅರಿಯುವುದು ಉತ್ತಮ..

ಮೇಲೆ ಹೇಳಿದ ವಿಷಯಗಳು ನಿಮಗೆ ಒಪ್ಪಿಗೆಯಾಗದಿದ್ದಲ್ಲಿ...ನನ್ನ ನಿಲುವು ತಪ್ಪಾಗಿದ್ದಲ್ಲಿ... ಮುಕ್ತ ಚರ್ಚೆಗೆ ಆಹ್ವಾನವೀಯುತ್ತೇನೆ... with or without drinks ;-)

ವಿಶಾಲಮನೋಭಾವದವರಾಗಿ ಚರ್ಚೆಯಲ್ಲಿ ಪಾಳ್ಗೊಳ್ಳುತ್ತೀರೊ...ಅಥವಾ.."ಥೂ..!! ಕಚಡ ನನ್ಮಗ ಎನೇನೊ ಗೀಚಿದ್ದಾನೆ"..ಎಂದು ಮೂಗು ಮುಚ್ಚಿ.. ನನ್ನ ನಿಲುವಿಗೆ ವಿರುದ್ದವಾಗಿ ಮಕಾಡೆ ಮಲಗುತ್ತೀರೊ??

ನಿರ್ಣಯ ನಿಮಗೆ ಬಿಟ್ಟದ್ದು... :-)

EXCUSE ME

Saturday, April 28, 2007

ಸನ್ನಿವೇಶ ೧: ಬಸ್ಸಿನಲ್ಲಿ ವಿಪರೀತ ನೂಕುನುಗ್ಗಲು ಇವನಿಗೆ ತನ್ನ ನಿಲ್ದಾಣ ಹತ್ತಿರವಾಗುತಿತ್ತು..ಆತ ಬಸ್ಸಿನ ಮಧ್ಯದಲ್ಲಿದ್ದ........
ಹಾಗಾಗಿ ಎಲ್ಲರನ್ನು ದೂಡಿ ದೂಡಿ ಬಸ್ಸಿನ ಹಿಂಬದಿಗೆ ತೆವಳುತ್ತ ಸಾಗುತ್ತಿದ್ದ....ಜನರನ್ನು ಸರಿಸಲು ಆತ ಉಪಯೋಗಿಸುತ್ತಿದ್ದ ಶಬ್ದ.. "excuse me "..."excuse me"...

ಸನ್ನಿವೇಶ ೨: ಅಡ್ಡಲಾಗಿ ೪ ಜನ ಹರಟುತ್ತಿರುತ್ತಾರೆ...ಒಬ್ಬ ಅವರು ನಿಂತಿರುವ ಜಾಗದ ಮೂಲಕ ಹಾದು ಹೋಗಬೇಕು...ಹತ್ತಿರ ಹೋಗಿ ಆತ ಉಸುರುತ್ತಾನೆ.."excuse me".. ಅವರು ದಾರಿ ಬಿಡುತ್ತಾರೆ...

ಸನ್ನಿವೇಶ ೩: class ಗೆ ೫ ನಿಮಿಷ ಮುಂಚೆ ಅಧ್ಯಾಪಕರು ತರಗತಿಲಿರುತ್ತಾರೆ. (ಹಾ!...ನಿಗದಿತ ವೇಳೆಗಿಂತ ಮುಂಚೆ ತರಗತಿ ತೆಗೆದುಕೊಳ್ಳುವುವರನ್ನು ನಾನು ನೋಡಿದ್ದೇನೆ..ಅನುಭವಿಸಿದ್ದೇನೆ).. :-)
ಓಬ್ಬ ಹುಡುಗ/ಹುಡುಗಿ ಒಡೋಡಿ ಬಾಗಿಲ ಬಳಿ ಬಂದು ಹೇಳುತ್ತಾನೆ........."excuse me".........


ಈ ಮೇಲ್ಕಂಡ ೩ ಸನ್ನಿವೇಶಗಳಲ್ಲಿ "excuse me" ಅಂದರೆ "ನನ್ನನು ಕ್ಷಮಿಸಿ" ಪದಬಳಕೆ ಸಾಮನ್ಯವಾಗಿ ಮಾಡುತ್ತಾರೆ... ಅದರ ಅವಶ್ಯಕತೆ ಇಲ್ಲವೆಂದು ನನ್ನ ಅಭಿಪ್ರಾಯ.. ಹಾ!..ಎಲ್ಲರೂ "excuse me" ಯೆಂದೆ ಸಂಬೋಧಿಸುವುದಿಲ್ಲ.... ಬಳಸುವ ಕೆಲ ಮಂದಿ ಗೆ ಮಾತ್ರ ನಾನು ಹೇಳಬಯಸುವುದು..


ಬಸ್ಸಿನಲ್ಲಿ footboard ಕಡೆಗೆ ಬರಲು .."ನನ್ನನ್ನು ಕ್ಷಮಿಸಿ".. ಎಕೆ ಉಪಯೋಗಿಸಬೇಕು..ಅಂಥ ಅಪರಾಧಾವಾದರೂಆತ ಎನು ಮಾಡಿರುತ್ತಾನೆ!!
ತನ್ನ ನಿಲ್ದಾಣದಲ್ಲಿ ಇಳಿಯುವುದು ಆತನ ತಪ್ಪೆ..?? "ಸ್ವಲ್ಪ ದಾರಿ ಬಿಡಿ ಸಾರ್" ಎಂದು ಸಂಬೋಧಿಸಬಹುದಲ್ಲವೆ??

ಈಲ್ಲಿ ಸುಮ್ಮ ಸುಮ್ಮನೆ "ನನ್ನನ್ನು ಕ್ಷಮಿಸಿ ಕ್ಷಮಿಸಿ" ಅಂತ ಎಕೆ ಹೊಡ್ಕೋಬೇಕು ಅಂತ.....??

ಇನ್ನು ಕೆಲವರು ಸೀನಿದ ನಂತರ "excuse me" ಅಂತ ಮೆಲ್ಲಗೆ ಉಸುರುತ್ತಾರೆ.. ಎನು ಸೀನೋದು ತಪ್ಪೆ??.... ಸೀನ್ಲಿ...ಅದಕ್ಕೆ "excuse me" ಅಂತ ಬೇರೆ..!!! ಅವರು ಹೇಳುವುದು ಯಾವನೊಬ್ಬನಿಗೂ ಕೇಳಿಸಿವುದಿಲ್ಲ...ಹತ್ತಿರದಲ್ಲಿ ಕುಳಿತಿರುವವನೊಬ್ಬನಿಗೆ ಬಿಟ್ಟು.....

ಹಲವು ಸಮಯದಲ್ಲಿ ನಾವು ಕೆಲ ಅಂಗ್ಲ ಪದಗಳ ಭಾವ(!!) ತಿಳಿಯದೆ ಉಪಯೋಗಿಸುತ್ತಿರುತ್ತೇವೆ....ಉದಾಹರಣೆಗೆ.. "sorry".."thanks" ಹೀಗೆ....

ಮಾಡಿದ್ದು ಎಂತಹ ದೊಡ್ಡ ತಪ್ಪಾದರೂ..ಅಥವಾ ಯಾವನೂಬ್ಬನಿಗು hurt ಮಾಡಿದರೂ ಸರ್ವೇಸಾಮನ್ಯವಾದ ಪದ "sorry" ..ಅಥವಾ ಸಣ್ಣಪುಟ್ಟ ಸಹಾಯಗಳಿಗೆ "thanks"

ಈಚೆಗೆ ಇದರ ಸಾಲಿಗೆ ಸೇರುತ್ತಿರುವ ಮತ್ತೊಂದು..ಪದವೆ "excuse me"..

ಸನ್ನಿವೇಶಕ್ಕೆ ತಕ್ಕಂತೆ ಪದಬಳಕೆ ಮಾಡುವುದು ಸೂಕ್ತವಲ್ಲವೆ... :-)

ಎನಂತೀರಿ?????????

ಕರ್ಮಕಾಂಡದ ಕರ್ಮಪುರಾಣ

ಕರ್ಮಕಾಂಡದ ಹೆಸರಿನ ಹಿಂದೆ.. ಸ್ವಲ್ಪ ಭಿನ್ನವಾಗಿರಲಿ.... ಕೇಳಿದಾಕ್ಷಣ..."ಎನಪ್ಪಾ.. ಎಂಥ ಹೆಸರು"... ಅಂತಿರಲಿ ಎಂದು ನಾನು ಈ ಹೆಸರಿಡಲಿಲ್ಲ...

ಅದೊಂದು ರಾತ್ರಿ ಹೀಗೆ ಅರುಣನ ಜೊತೆ ಹರಟುತ್ತಿದ್ದಾಗ....ಅವನ ಬ್ಲಾಗ್ ಒದುತ್ತಿದ್ದೆ... ಓದಿದನಂತರ comment ಹಾಕೋಣವೆಂದು...ಹೋದೆ.... ನನ್ನದೇ ಆದ ಬ್ಲಾಗ್ ಒಂದಿತ್ತು.... ಕರ್ಮಕ್ಕೆ ಅದರ password ಮರೆತಿದ್ದೆ...

ಹೊಸದೊಂದು ಬ್ಲಾಗ್ create ಮಾಡೋಣವೆಂದು ಹೊರಟೆ.. ಸಾಕಷ್ಟು...usernames ಕೊಟ್ಟರೂ...ಹಾಳಾದ್ದು.."username already exists" ಎಂದು ಬರುತ್ತಿತ್ತು.... ಕೊನೆಗೆ..ಬೇಸೆತ್ತು....ಹಾಳಾಗಿಹೋಗಲಿ ಎಂದು..."ಕರ್ಮಕಾಂಡ" ಎಂದು type ಮಾಡಿದೆ...... ನನ್ನ ಆಶ್ಚರ್ಯಕ್ಕೆ ಆ ಹೆಸರನ್ನು ಸ್ವೀಕರಿಸಿತು...

ಅದರ ಫಲಶ್ರುತಿಯೆ...... http://karmakaanda.blogspot.com/