ಯಶ್ವಂತ್.....

Saturday, September 15, 2007

ನಾನಾಗ ಬೆಂಗಳೂರಿಗೆ ಬಂದ ಹೊಸತು...ನಮ್ಮ ತಂದೆಗೆ ಗೌರಿಬಿದನೂರಿನಿಂದ ವರ್ಗವಾಗಿತ್ತು... ಏಳನೆ ಇಯತ್ತೆಗೆ SGPTA ಶಾಲೆಗೆ ಸೇರಿದ್ದೆ...ನಾನು ಬೆಂಗಳೂರು ಬಿಡುವಾಗ ಸಹ ಅದೇ ಶಾಲೆಯಲ್ಲೆ ಓದುತ್ತಿದ್ದೆ..ಆಗ ಎರಡನೆ ಇಯತ್ತೆ... ಮಧ್ಯ ಐದು ವರ್ಷದ ಗ್ಯಾಪ್.. !! ಪ್ರಪಂಚದ ಯಾವುದೇ ಊರಿನಲ್ಲಿ ಇದ್ದರೂ ಸಹ ನಾನು ಗೌರಿಬಿದನೂರನ್ನು ಮರೆಯುವ ಹಾಗಿಲ್ಲ... ಅದಕ್ಕೆಂದೆ ಬೇರೆ ಲೇಖನವನ್ನು ಬರೆಯುತ್ತೇನೆ.... :-) ಮರಳಿ ಶಾಲೆಗೆ ಹೋದಾಗ ನಾನು ಹಳೆ ವಿಧ್ಯಾರ್ಥಿ ಎಂದು ಗುರುತಿಸದರು.. ಒಹ್! ಶ್ರೀಧರ್ ರಾಜು ಎಂದು !! ಎಲ್ಲರು ಮುಖ ನೋಡಿಕೊಳ್ಳುತ್ತಿದ್ದರು..ನಾನು ಎರಡನೆ ತರಗತಿಯನ್ನು ಬಿಡುವ ವೇಳೆಯಲ್ಲಿ ಇದ್ದವರು, ಸಾಕಷ್ಟು ಗೆಳೆಯರು ಅಲ್ಲೇಅ ಎಂದರೆ ಅದೇ ಶಾಲೆಯಲ್ಲಿ ಇದ್ದರು...

ಊರಿಗೆ ಬಂದೊಡನೆಯೆ ನನ್ನನ್ನು ಮನೆಪಾಠಕ್ಕೆ ಹಾಕಿದ್ದರು...ಓದಿ ಉದ್ದಾರವಾಗಲಿ ಎಂದು !!ಸಾಧರಣವಾಗಿ ಮನೆಪಾಠಕ್ಕೆ ಬರುವವರು ಪಾಠದ ಮನೆಯ ಸುತ್ತ ಮುತ್ತಲಿನವರೆ ಆಗಿರುತ್ತಾರೆ... ನನಗೊಬ್ಬ ಗೆಳೆಯ ದೊರೆತಿದ್ದ, ನಮ್ಮನೆಗೆ eggjactly opposite... ಯಶ್ವಂತ್... ಅವನು ಸಹ ಏಳನೆ ತರಗತಿ... NMKRV ಸ್ಕೂಲ್...

ಮನೆಗೆ ಹತ್ತಿರವಿದ್ದುದರ ಕಾರಣವೇನೋ ಬಹಳ ಬೇಗ ಹತ್ತಿರವಾದೆವು... ಶಾಲೆ ಮುಗಿದ ಕೂಡಲೇ ಮನೆಪಾಠಕ್ಕೆ ಓಡುತ್ತಿದ್ದೆ... ಅದು ಮುಗಿದ ಕೂಡಲೇ ಅವನ ಜೊತೆ ತಿರುಗುವುದು... ಒಂದೋ ಅವನು ನಮ್ಮನೇಲಿ ಇರುತ್ತಿದ್ದ ಅಥವಾ ನಾನು ಅವನ ಮನೇಲಿ ಇರುತ್ತಿದ್ದೆ....ಒಟ್ಟಿನಲ್ಲಿ ಯಾವಗಲೂ ಒಟ್ಟಿಗೆ ಇರುತ್ತಿದ್ದೆವು... ಅವನ ಮನೆಗೆ ಹೊಗಿ ಅವನ ಜೊತೆ ಹರಟುತ್ತಾ ಅವರ ಮನೇಲೆ ಟೀವಿ ನೋಡುತ್ತಿದ್ದ ದಿನಗಳಿಗೆ ಲೆಕ್ಕವೇ ಇಲ್ಲ...ಅವರ ಮನೆಯವರು ನನ್ನನ್ನು ಅವನ ಮನೆಯವರೇ ಎಂದು ಭಾವಿಸಿದ್ದರು..

ರಾತ್ರೆ ಸುಮಾರು 8:30 - 9:30 ಹೊತ್ತೆಲ್ಲಾ ಕ್ರಿಕೆಟ್, ಬಾಡ್ಮಿಂಟನ್ ಆಡುತ್ತಿದ್ದೆವು, ನಟ್ಟ ನಡು ಬೀದಿಯಲ್ಲಿ ಇಬ್ಬರೇ... !!!ಸಮಯದ ಅರಿವೇ ಇರುತ್ತಿರಲಿಲ್ಲ...ಶಾಲೇಲಿ ಅಂದು ನಡೆದ ಘಟನಾವಳಿಗಳನ್ನು ನಾನು ವರದಿ ಒಪ್ಪಿಸುತ್ತಿದ್ದೆ..ಅವನೂ ಸಹ..

ಏಳನೆ ತರಗತಿಯ ಪರೀಕ್ಶೆಗಳು ಶುರುವಾದವು.... ಮುಗಿಯಿತೂ ಕೂಡ.. ರಜದಲ್ಲಿ ಸಿಕ್ಕಪಟ್ಟೆ ಮಜಾ ಮಾಡಿದ್ದೆವು.. ಪ್ರತಿದಿನವೂ ಕೃಷ್ಣ ರಾವ್ ಪಾರ್ಕಿನಲ್ಲಿ ಆಡುತ್ತಿದೆವು ಬೇರೆ ಗೆಳೆಯರೊಡಗೂಡಿ....

ರಿಸಲ್ಟು ಬಂತು..ಅವನಿಗೆ ಎಷ್ಟು ಬಂದಿದೆಯೆಂದು ವಿಚಾರಿಸಲು ಅವನ ಮನೆಗೆ ರಿಸಲ್ಟ್ ಬಂದ ಸಂಜೆ ಅವರ ಮನೆಗೆ ಹೋದೆ.
ಅವರ ತಾಯಿ ಸಿಕ್ಕರು... ಕೇಳಿದೆ.. "ಆಂಟಿ ಎಷ್ಟ್ ಬಂತು ಅವನಿಗೆ ಮಾರ್ಕ್ಸು" ಎಂದೆ...

ಅವರ ತಾಯಿ ಎನನಿಸಿತ್ತೋ ಏನೋ.. "ಹೋಗಪ್ಪಾ ಹೋಗು.. ನೀನ್ ಪಾಸ್ ಆಗ್ಬಿಟ್ಟೆ..ಅವನು fail ಆಗಿದ್ದಾನೆ...ನಿನಗೆ ಸಂತೋಷ ತಾನೆ..ಹೋಗು !!..ಜೊತೇಲೆ ಇದ್ದೆ..ನಿಂಗೆ ಏನು ಮಾಡಕ್ಕೇ ಆಗ್ಲಿಲ್ಲ... ಇವಾಗ್ ಬಂದಿದ್ಯ ರಿಸಲ್ಟ್ ಕೇಳ್ಕೊಂಡು.." ಎಂದುಬಿಟ್ಟರು...

ಸರಿಯಾಗಿ ಮೇಲಿನ ಮಾತುಗಳನ್ನು ಹೇಳಿದರೋ ಇಲ್ಲವೊ ಮರೆತು ಹೋಗಿದೆ.. ಆದರೆ ನನ್ನಿಂದಲೆ ಅವನು ನಪಾಸಗಿದ್ದನೆ ಎನ್ನುವಾ ದಾಟಿಯಲ್ಲೇ ಮಾತನಾಡಿದ್ದರು ಅಂದು... ನಾನು ದಂಗಾಗಿಬಿಟ್ಟೆ... ನಾನೇನು ಮಾಡಿದೆ ಎಂದು ನನಗೆ ತೋಚಲಿಲ್ಲ..
ಸುಮ್ಮನಾಗಿಬಿಟ್ಟೆ..ಅದಾದ ನಂತರ ಅವರು ಅಲ್ಲಿಂದ shift ಆದರು... ಮತ್ತೆ ಅವನೆಂದು ನನ್ನನ್ನು ಮಾತನಾಡಿಸಲಿಲ್ಲ..ನಾನೂ ಸಹ.... ಸುಮ್ಮನಾಗಿಬಿಟ್ಟೆ.. ಅಷ್ಟು ಒಟ್ಟಿಗೆ ಇದ್ದವರು ಮುಖ ನೋಡಿದರೂ ಸಹ ಮಾತನಾಡದೆ ಇರುವ ಸ್ಥಿತಿಗೆ ಬಂದಿದ್ದೆವು.. ಇದಾಗಿ ಹತ್ತು ವರ್ಷಗಳೇ ಆಗಿದೆ ಇಂದಿಗೆ..

ಅವರ ನೆಂಟರ ನಮ್ಮನೆ ಎದುರುಗಡೆಯೇ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ...ಅವನು ಸಹ ಆಗಾಗ ಬರುತ್ತಿರುತ್ತಾನೆ... ನೋಡಿದರೂ ಸಹ ನೋಡಿಲ್ಲವಂತೆ ನನ್ನ ಮುಂದೆಯೇ ನಡೆದು ಹೋಗುತ್ತಾನೆ..ನಾನೂ ಅಷ್ಟೆ... ಸೇರಿಗೆ ಸವ್ವಾಸೇರು.. :-
ಈಗ ಅವನು ಏನು ಮಾಡುತ್ತಿದ್ದಾನೆ ಎಂದೂ ಸಹ ಗೊತ್ತಿಲ್ಲ...ಒಂದು ಪ್ರಿಂಟಿಂಗ್ ಪ್ರೆಸ್ ಮಾಲೀಕ ಎಂದು ಕೇಳ್ಪಟ್ಟೆ...

ಏಕೋ ಏನೋ ಅವನ ಬಗ್ಗೆ ಬರೀಬೇಕು ಎಂದೆನಿಸಿತು...ಬರೆದೆ...ಇದು ಅವನಿಗೆ ಅರ್ಪಿತ.....

1 comments:

Parisarapremi said...

ಬಹುಶಃ ಎಲ್ಲರ ಬದುಕಿನಲ್ಲಿಯೂ ಒಬ್ಬ 'ಯಶವಂತ' ಇರುತ್ತಾನೆ ಅನ್ನಿಸುತ್ತೆ...

ನಿನ್ನ ಲೇಖನವನ್ನು ನನ್ನ 'ಯಶವಂತ'ನಿಗೆ ನಾನು ಅರ್ಪಿಸುತ್ತೇನೆ.