ನಾನು ಬ್ರಹ್ಮ ಮತ್ತು ಮುಖ್ಯಮಂತ್ರಿ -- ಭಾಗ - 2

Monday, September 10, 2007

ಹಾಗೆ ಮುಂದಕ್ಕೆ ಬಾಗಿದ ಬ್ರಹ್ಮ ನನ್ನ ತಲೆ ನೇವರಿಸುತ್ತಾ "ಮಗೂ.. ನಿನಗೆ ನಾನು ಹೇಳಲು ಆಗುವುದಿಲ್ಲ, ಹೇಳಿದರೂ ನಿನಗೆ ಅರ್ಥವಾಗುವಿದಿಲ್ಲ, ಅದೆಲ್ಲ ನಿನ್ನ ವಯಸ್ಸಿಗೆ ಮತ್ತು ನಿನ್ನ ಬುದ್ದಿ ವ್ಯಾಪ್ತಿಗೆ ಮೀರಿದ ಉತ್ತರಗಳು, ವೃಥಾ ಕಾಲಹಾರಣ ಅಷ್ಟೇ.... ನಿನಗೆ ವರ ಕೊಡಲು ಬಂದಿದ್ದೇನೆ... ಕೇಳು..." ಎಂದನು..

"ಹಾ!! ನನ್ನ ಬುದ್ದಿವ್ಯಾಪ್ತಿಗೆ ಮೀರಿದ್ದೇ..?? ಸರಿ ನನಗೇ ಏಕೆ ವರ ನೀಡಲು ಬಂದಿರುವೆ...ನನಗೆ ಸಮಂಜಸವಾದ ಉತ್ತರನನ್ನು ನೀಡಿದರೆ ಮಾತ್ರ ವರವೋ ಶಾಪವೋ ಅದರ ಬಗ್ಗೆ ಮಾತಾಡುವ... "...

"hmmm....ನಿನಗೆ ಏಕೆ ವರವೆಂದರೆ..ಅದೆಲ್ಲ ನಮ್ಮ ಚಿತ್ರಗುಪ್ತರ ಮಗನಾದ ದಾಸ್ ಗುಪ್ತನ ಕೈಚಳಕ..."

"ಏನೆಂದಿರಿ...ದಾಸ್ ಗುಪ್ತನೇ..ಚಿತ್ರಗುಪ್ತನ ಮಗ...??? "..

"ಹೌದು..ದಾಸ್ ಗುಪ್ತ.. ನಮ್ಮ ದೇವಲೋಕದ ಮಂದಿಗೆ ಕಂಪ್ಯೂಟರ್ ಪರಿಕರಗಳನ್ನು ಪರಿಚಯಿಸಿದಾತ.. ದಾಸ್ ಗುಪ್ತ..
ಈ ದಾಸ್ ಗುಪ್ತಾ ಭೂಲೋಕದ ಅದರಲ್ಲೋ ಬೆಂಗಳೂರಿನ ಮಾಹಿತಿ ತಂತ್ರಗ್ನಾನದ ಒಟವನ್ನು ಕಂಡು ತನ್ನ ಸ್ವಪರಿಶ್ರಮದಿಂದಲೇ ಕಲಿತ..... ಅಪ್ಪ ಚಿತ್ರಗುಪ್ತನ ಪಡಿಪಾಟಲು ನೋಡಲಾಗದೆ ಅಪ್ಪನ ಕೆಲಸದಲ್ಲಿ ಸಹಭಾಗಿಯಾದ..... ಚಿತ್ರಗುಪ್ತರ ಕೆಲಸ ನಿನಗೆ ತಿಳಿದೇ ಇದೆಯಲ್ಲವೆ... ಯಮಲೋಕಕ್ಕೆ ಬರುವರೆಲ್ಲರ ಪೂರ್ವಾಪರವನ್ನು ಓದಿ ಅವನ ಪಾಪ ಪುಣ್ಯಗಳ ವರದಿ ಯನ್ನು ಯಮಧರ್ಮರಾಯನಿಗೆ ಒಪ್ಪಿಸುವುದು..ಇಷ್ಟು ಕಾಲವು ಇದೆಲ್ಲ ತನ್ನ ಸ್ವಹಸ್ತದಿಂದ ಚಿತ್ರಗುಪ್ತರು ಮಾಡುತ್ತಿದ್ದರು.... ಆ ಮಾಹಿತಿಯೆಲ್ಲವನ್ನು ಈಗ database ರೂಪದಲ್ಲಿ ಕಂಪ್ಯೂಟರ್ ನಲ್ಲಿ ವ್ಯವಸ್ಥೆ ಮಾಡಿದ್ದಾನೆ ನಮ್ಮ ದಾಸ್ ಗುಪ್ತ... ಚಿತ್ರಗುಪ್ತರ ಕೆಲಸ ಈಗ ಸಲೀಸಾಗಿದೆ... ಕೇಸುಗಳ ವಿಲೇವಾರಿ ತುಂಬ ತ್ವರಿತಗತಿಯಲ್ಲಿ ಸಾಗುತ್ತಿದೆ.."

ಮಧ್ಯಕ್ಕೆ ನಿಲ್ಲಿಸಿ ನಾನು.. "ಅಯ್ಯಾ ಬ್ರಹ್ಮದೇವ...ನಾನು ಕೇಳಿದ್ದಕ್ಕೂ ನೀನು ಹೇಳುತ್ತಿರುವುದಕ್ಕೂ ಎತ್ತಣದಿಂತ್ತೆಣ ಸಂಭಂದವಯ್ಯ... ನನಗೊಂದೂ ತಿಳಿಯದಾಗಿದೆ..."

"ಹಹ್ಹಹ್ಹ..ಮಗೂ ನಾನು ಸಂಪೂರ್ಣ ವಿಷಯ ಹೇಳುವವರೆಗಿನ ತಾಳ್ಮೆ ನಿನ್ನದಾಗಬೇಕು... ತಾಳ್ಮೆ...ತಾಳ್ಮೆ..ಜಗತ್ತಿನ ಸಾಕಷ್ತು ಮಹೋನ್ನತ ಕಾರ್ಯಗಳು ತಾಳ್ಮೆಯಿಂದಲೇ ಆದುದ್ದಾಗಿದೆ... ತಾಳ್ಮೆ ಬೆಳೆಸಿಕೋ..."

ಬ್ರಹ್ಮನ ತಾಳ್ಮೆಯ ವಿಷಯ ಮನಮುಟ್ಟಿತು...ಸ್ತಬ್ದನಾಗಿಬಿಟ್ಟೆ... full lecture ಕೊಡಕ್ಕೆ ready ಆಗಿ ಬಂದಿದ್ದಾನೆ ಬ್ರಹ್ಮ..." ಸರಿ ಸ್ವಾಮಿ ನೀವು continue ಮಾಡಿ...ನಿಮ್ಮ ಲಹರಿಗೆ ಅಡ್ಡಿ ಪಡಿಸುವುದಿಲ್ಲ... ಮುಂದುವರೆಸಿ.." ಎಂದೆ


ಹೀಗೆ ದಾಸ್ ಗುಪ್ತನು ಕಂಪ್ಯೂಟರಿನಿಂದ ದೇವಲೋಕದಲ್ಲಿ, ಯಮಲೋಕದಲ್ಲಿ ಕ್ರಾಂತಿಯನ್ನು ಉಂಟು ಮಾಡಿದ..ಹೀಗೆ ಸಾಗುತ್ತಿರಲು ಒಂದು ದಿನ ನನಗೂ ಹಾಗೂ ದಾಸ್ ಗುಪ್ತನಿಗೆ ವಾಗ್ವಾದ ಉಂಟಾಯಿತು....

ಆತನ ವಾದ ಇಷ್ಟೆ..."ಬ್ರಹ್ಮ ದೇವ ಭೂಲೋಕ ಬಹಳ ಹದೆಗೆಟ್ಟು ಹೋಗಿದೆ...ಎಲ್ಲೆಲ್ಲೂ ಆರಾಜಕತೆ, ಭ್ರಷ್ಟಾಚಾರ, ಅನೀತಿ, ಸುಲಿಗೆ, ಮೋಸ, ಧಗಾ, ವಂಚನೆಗಳು ಸರ್ವೇಸಾಮನ್ಯವಾಗಿಬಿಟ್ಟಿದೆ... ಇದನ್ನು ತಹಬಹದಿ ತರುವ ಮಾತಂತೂ ದುಸ್ಸಾಧ್ಯ, ಸತ್ಯವೆಂಬುದು ಭೂಲೋಕದಲ್ಲಿ ಅಸ್ತಿತ್ವದಲ್ಲೇ ಇಲ್ಲ, ಧರ್ಮ ತನ್ನ ಕಾಲುಗಳನ್ನು ಕಳೆದು ಕೊಂಡು ಬೀದಿ ಬದಿಯಲ್ಲಿ ಬಿದ್ದಿದೆ ಎನ್ನುವುದು ನನ್ನ ವಾದ.."

"ದಾಸ್ ಗುಪ್ತನೇ ..ನೀನು ಭೂಲೋಕದ ಕೇವಲ ಒಂದು ಮುಖವನ್ನು ಮಾತ್ರವೇ ನೋಡಿದ್ದೀಯ, ಬಹುಶ: ನಿನಗೆ ಬರಿ ದುಷ್ಟರೇ ಕಾಣಿಸಿರಬಹುದು, ಸತ್ಯವೆಂಬುವುದು ಎಲ್ಲ ಕಾಲಗಳಲ್ಲಿಯು ನಿತ್ಯ ಸೂರ್ಯನಂತೆ ಹೊಳೆಯುತ್ತಿರುತ್ತದೆ... ಸೂರ್ಯನನ್ನು ಮೋಡ ಮರೆಮಾಚಿದುದಕ್ಕೆ ಸೂರ್ಯನೇ ಇಲ್ಲವೆಂಬುದು ನಿಮ್ಮ ತಪ್ಪು ಗ್ರಹಿಕೆ.... ಸತ್ಯವೆಂಬುದು ದಟ್ಟ ಕಾನನದಲ್ಲಿ ಬೇಸಿಗೆಯ ಮಾಸದಲ್ಲಿ ಹರಿಯುವ ನಿರ್ಮಲವಾದ ಪುಟ್ಟ ಝರಿಯಂತೆ...ಹುಡುಕುವ ತಾಳ್ಮೆಯಿರಬೇಕು...ಅದರೆಡೆಗೆ ಹೋಗುವ ಪ್ರಯತ್ನ ನಮ್ಮದಾಗಬೇಕು..."


ಇದರಿಂದ ಸ್ವಲ್ಪ ಮುಂಗೋಪಿಯಾದ ದಾಸ್ ಗುಪ್ತನು ಕ್ರುದ್ದನಾದ... "ಸರಿ ಹಾಗಿದ್ದರೆ ನಿಮ್ಮ ಈ ಭೂಲೋಕದಲ್ಲಿ ಆ ಥರದ ವ್ಯಕ್ತಿಯನ್ನು ತೋರಿಸಿಬಿಡಿ.... ನನ್ನ ಸೋಲನ್ನು ನಾನು ಒಪ್ಪುವೆ..."

"ನೋಡು ದಾಸ್ ಗುಪ್ತ.. ನೀನು ಒಡ್ಡಿರುವ ಸವಾಲನ್ನು ನಾನು ಸ್ವೀಕರಿಸಿದ್ದೇನೆ... ಹಾಗೆಂದ ಮಾತ್ರಕ್ಕೆ ಇಡೀ ಭೂಮಂಡಲದಲ್ಲಿ ಒಬ್ಬ ಆ ರತ್ನವನ್ನು ಹುಡುಕುವುದು ದುಸ್ಸಾಧ್ಯವೇ ಸರಿ... ನನ್ನ ಪ್ರಕಾರ ಪ್ರತಿಯೊಬ್ಬ ಮನುಜನಲ್ಲೂ
ಆ ವಸ್ತುನಿಷ್ಟ ಗುಣ, ಸತ್ಯಪರತೆ, ಎಲ್ಲವೂ ಇರುತ್ತದೆ, ಕೆದಕಿ ತೆಗಯಬೇಕು, ಅವನ ಪ್ರಕೃತಿದತ್ತವಾದ ಪರಿಸರದಲ್ಲಿ ಬೆಳೆದುದರ ಕಾರಣದಿಂದ ಆತ ಕೆಟ್ಟವನೆನಿಸಬಹುದು..."

ಹಾಗೆಂದ ಕೂಡಲೇ ದಾಸ್ ಗುಪ್ತನು ಗುಡುಗತೊಡಗಿದ...

"ಎಲೈ ಬ್ರಹ್ಮನೇ, ನಿಮ್ಮ ಉತ್ಪ್ರೇಕ್ಷೆಯು ತನ್ನ ಪರಮಾವಧಿಯನ್ನು ತಲುಪಿದೆ...., ನಾನು ನನ್ನ ಕಂಪ್ಯೂಟರಿನ ಸಹಾಯದಿಂದ ನಿಮಗೆ ಒಬ್ಬನನ್ನು ಹುಡುಕಿಕೊಡುತ್ತೇನೆ, ಅವನ ಬಳಿ ನೀವು ತೆರಳಿ ಅವನಿಗೆ ವರ ನೀಡಿ, ಅವನು ತನ್ನ ಕೊಟ್ಟ ವರವನ್ನು ಹೇಗೆ ಉಪಯೋಗಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಮಾನವನ ಗುಣ ನಿಮ್ಮ ಅರಿವಿಗೆ ಬರುತ್ತದೆ..."


ಹೀಗೆಂದು ಹೇಳಿದ ದಾಸ್ ಗುಪ್ತನು ಒಂದಷ್ಟು algorithms run ಮಾಡಿ, ಒಬ್ಬ ವ್ಯಕ್ತಿಯನ್ನು ಕೇವಲ ಕೆಲ ಕ್ಷಣಗಳಲ್ಲಿ ನನಗೆ ಒಬ್ಬ ಮುಖವನ್ನು ತೋರಿಸಿದ.....


ನಾನು ಮಧ್ಯ ತಡೆದು.... "ಆ ದುರಾದೃಷ್ಟಶಾಲಿ ನಾನೇ????????" ಎಂದು ಅವಾಕ್ಕಾದೆ...
ಬ್ರಹ್ಮನು ಮುಗುಳ್ನಗುತ್ತಾ.. "ಹೌದು.." ಎಂದ..
ಅಲ್ಲೆ ಕುಸಿದು ಬೀಳುವ ಭಾವ ನನ್ನಲುಂಟಾಯಿತು.....

ಈ processನಲ್ಲಿ bejaan fitting ಇದೆ ಎಂದು ಭಾವಿಸಿ..."ಅಲ್ಲ ಬ್ರಹ್ಮ..ನಿನಗೆ ನಮ್ಮ ಭೂಮಂಡಲ ಮನುಷ್ಯರ ಮಾಹಿತಿ ನಿಮಗೆ ಹೇಗೆ ದೊರೆಯಿತು ಎನ್ನುವುದೇ ನನ್ನ ಯಕ್ಷಪ್ರಶ್ನೆಯಾಗಿದೆ.... ಹೇಗೆ ಸಿಕ್ಕಿತು ನಮ್ಮೆಲ್ಲರ ವಿವರಗಳು??"

ಬ್ರಹ್ಮ ನಸು ನಗುತ್ತ, ನನ್ನ ತಲೆ ನೇವರಿಸುತ್ತಾ ನಾವು Orkut ನಿಂದ ನಿಮ್ಮೆಲ್ಲರ ಮಾಹಿತಿಯನ್ನು ಪಡೆದೆವು...

ನಾನು ಮತ್ತೆ ಗಿಲ್ಲಿಕೊಂಡೆ....ನೋವಾಗಲಿಲ್ಲ...ನನ್ನ ಸ್ಪರ್ಶೇಂದ್ರಿಯಗಳು ತಮ್ಮ ಕಾರ್ಯವನ್ನು ನಿಲ್ಲಿಸಿದವೆಂದು ತೋರುತ್ತದೆ...

(ಸಶೇಷ).......

6 comments:

Srinivasa Rajan (Aniruddha Bhattaraka) said...

ha ha ha ha :)) super super.. continue...

Srikanth - ಶ್ರೀಕಾಂತ said...

ಏನಿದು? ಬಿಟ್ರೆ ಬ್ರಹ್ಮನ profile ಸಹ orkut ಅಲ್ಲಿ ಹಾಕ್ತೀಯ! ಒಳ್ಳೆ ಮಜ ಬರ್ತಿದೆ. continue...

Sridhar Raju said...

[Gandabherunda]: thank you thank you... sure aagi continue maaduve..

[Srikanth]: nimma prothsaahave namage shree rakshe.. sure aagi continue maaduve..... :-)

Anonymous said...

hmmmmmm otnalli bagha ondu bandu iga bagha 2 kuda bandbidthu
adu sakth majja kodthide odakke
continue maadi enappa volumes madbidonva nimma ella baghagalu mugidamele?

Sridhar Raju said...

[Samnvayana] : ayyo volumes maado ashtella scene illaree.... :-)

Parisarapremi said...

ದಾಸ್ ಗುಪ್ತನಿಗೂ ಯಾಣಾ ಗುಪ್ತಳಿಗೂ ಏನಾದರೂ ಸಂಬಂಧ ಇದೆಯಾ? ನೈತಿಕ ಸಂಬಂಧ ಆಫ್ ಕೋರ್ಸ್..

ಬ್ರಹ್ಮಲೋಕದಲ್ಲಿ ಆರ್ಕುಟ್ಟಾ? ಮುಂದೇನೇನು ಬರುತ್ತೋ.. ಮುಖ್ಯಮಂತ್ರಿ ಬೇರೆ ಬರಬೇಕಲ್ಲಾ ಇನ್ನೂ...